tag:blogger.com,1999:blog-3011800053728614461.post2491960578012465786..comments2024-02-22T22:05:54.275+05:30Comments on ವೇದಸುಧೆ: ವೈದಿಕವೆಂದು ಮಾಡುವ ಅಷ್ಟೂ 100% ಅವೈದಿಕ!!Unknownnoreply@blogger.comBlogger5125tag:blogger.com,1999:blog-3011800053728614461.post-62929347863466220022011-04-30T15:46:27.168+05:302011-04-30T15:46:27.168+05:30Misplaced priorities!Misplaced priorities!SUDHAKARA SHARMAhttps://www.blogger.com/profile/11058617516737180167noreply@blogger.comtag:blogger.com,1999:blog-3011800053728614461.post-33455021358397359622011-04-30T13:08:16.871+05:302011-04-30T13:08:16.871+05:30ಸರ್, ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ನನ್ನದೊಂದು ...ಸರ್, ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ನನ್ನದೊಂದು ಇತ್ತೀಚಿನ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನಾನು ಬೆಂಗಳೂರಿನಲ್ಲಿ ಗಮನಿಸಿದಂತೆ (ಕ್ಷಮಿಸಿ ಇದು ನನ್ನ ಚಾಳಿ!!!) ಕಾರ್ಯಕ್ರಮ ಯಾವುದೇ ಇರಲಿ (ಶುಭ / ದುಃಖ), ಅಲ್ಲಿ ಭಾಗವಹಿಸುವವರ ಅಸ್ಥೆ ಮುಖ್ಯವಾಗಿ ಅವರ ಆಭರಣ / ದುಬಾರಿ ಬಟ್ಟೆಗಳ ಪ್ರದರ್ಶನಕ್ಕೆ ಮೊದಲ ಆದ್ಯತೆ!!! ನಂತರದ ಆದ್ಯತೆ ಸಾಕಷ್ಟು ಹೆಚ್ಚು ಜನರನ್ನು ಜಮಾಯಿಸಿ ಭರ್ಜರಿ ಊಟ ಹಾಕಿಸಿ ಎಲ್ಲರಿಂದ ಭೇಷ್ ಎನಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಾರೆ!!! ಈಗಂತೂ ಒಂದು ಊಟಕ್ಕೆ ಕನಿಷ್ಟ 25 ಐಟಂಗಳಿರುತ್ತವೆ!!! ಅರ್ಧದಷ್ಟು ವ್ಯರ್ಥವಾದರೂ ಯಾರಿಗೂ ಬೇಸರವಾಗಿದ್ದು ಕಾಣೆ!!! ಹಸಿವಿನಿಂದ ಸಾಯುವವರ ಸಂಖ್ಯೆ ನಮ್ಮ ದೇಶದಲ್ಲೇ ಸಾಕಷ್ಟಿದೆಯಲ್ಲವೆ??? ಇನ್ನು ಶಾಸ್ತ್ರ ಸಂಪ್ರದಾಯಗಳ ಉಸಾಬರಿ ಏನಿದ್ದರೂ ನಿಯಮಿತರಾದ ಪುರೋಹಿತರ ಜವಾಬ್ದಾರಿಯಷ್ಟೇ!!! ಒಂದು ತಮಾಷೆಯ ಸಂಗತಿ ಹೇಳುತ್ತೇನೆ, ಕಳೆದ ತಿಂಗಳು ನನ್ನ ಸಂಬಂದಿಯೊಬ್ಬರ ಮದುವೆಯಲ್ಲಿ ಕಾಶೀಯಾತ್ರೆಯಿಂದ ಹುಡುಗನನ್ನು ಕರೆತರಲು ಹುಡುಗಿಯ ಕಡೆಯ ಮುತ್ತೈದೆಯರೇ ಬರುತ್ತಿಲ್ಲ!!! ಆಶ್ಚರ್ಯದಿಂದ ನೋಡಲು ಹೋದಾಗ ಎಲ್ಲ ಮಹಿಳಾಮಣಿಗಳು ಮೇಕಪ್ನಲ್ಲಿ ಬ್ಯುಸಿ!!! ತಕ್ಷಣ ಹೊರಡಲು ಯಾರು ಇನ್ನೂ ರೆಡಿಯಿಲ್ಲ!!! <br />ಬಿ.ವಿ.ಸತ್ಯಪ್ರಸಾದ್Anonymousnoreply@blogger.comtag:blogger.com,1999:blog-3011800053728614461.post-72485618221624065512011-04-25T07:21:03.570+05:302011-04-25T07:21:03.570+05:30ಸಾಮಾನ್ಯವಾಗಿ ಶ್ರಾದ್ಧಕರ್ಮಗಳನ್ನು ಮಾಡದಿದ್ದರೆ ಏನೋ ಆಪತ್ತ...ಸಾಮಾನ್ಯವಾಗಿ ಶ್ರಾದ್ಧಕರ್ಮಗಳನ್ನು ಮಾಡದಿದ್ದರೆ ಏನೋ ಆಪತ್ತು ಸಂಭವಿಸಿಬಿಡುತ್ತದೆಂಬ ಭಯ ಸೃಷ್ಟಿಯಾಗಿದೆಯಲ್ಲಾ ಅದನ್ನು ದೂರಮಾಡುವ ಕೆಲಸವಾಗಲೇ ಬೇಕು. ಬದುಕಿದ್ದಾಗ ಬವಣೆ ಪಡುವುದಕ್ಕಿಂತ ಸತ್ತಾಗ ಪಡುವ ಬವಣೆ ಇದೆಯಲ್ಲಾ ಅದರ ಬಗ್ಗೆ ಕಾದಂಬರಿಯನ್ನು ಬರೆಯಬಹುದು. ಒಬ್ಬೂಬ್ಬರದ್ದು ಒಂದೊಂದುರೀತಿಯ ಕಹಿ ಅನುಭವ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸತ್ತಾಗ ಹತ್ತಿರದಲ್ಲಿರುವ ಬಂಧುಗಳಲ್ಲದ ನೆರೆಹೊರೆಯ ಆಪ್ತರು ಮೊದಲು ಸಾವು ಸಂಭವಿಸಿದ ಮನೆಗೆ ಧಾವಿಸುತ್ತಾರೆ. ಸತ್ತವ್ಯಕ್ತಿಯ ಮಕ್ಕಳು ಎಲ್ಲೋ ದೂರದ ಊರಲ್ಲಿರುತ್ತಾರೆ. ಸತ್ತ ಅವರ ಅಪ್ಪನನ್ನೋ ಅಮ್ಮನನ್ನೋ ನೋಡಿಯೇ ವರ್ಷಗಳು ಸಂಭವಿಸಿರುತ್ತದೆ. ಅಷ್ಟರ ಮಟ್ಟಿಗೆ ಮಾತೃ/ಪಿತೃ ವಾತ್ಸಲ್ಯವಿರುತ್ತದೆ!! ಆದರೆ ಆ ಮಕ್ಕಳು ಬರುವ ವರೆಗೂ ಹೆಣ ಎತ್ತುವಂತಿಲ್ಲ. ಪಾಪ! ಸಂಬಂಧಪಡದ ಹತ್ತಿರದ ಆಪ್ತರು ಹೊಟ್ಟೆಗೆ ಹಿಟ್ಟಿಲ್ಲದೆ ಕಾದಿದ್ದೇ ಕಾದಿದ್ದು! ಈಗ ಹೊರಟರಂತೆ ಇನ್ನೇನು ಅರ್ಧಗಂಟೆಯಲ್ಲಿ ಬಂದುಬಿಡ್ತಾರಂತೆ! ಹೀಗೆ ಹೇಳುತ್ತಾ ಸೂರ್ಯಾಸ್ತ ವಾಗುವ ಸಮಯ ಬಂದರೂ ಹೆಣ ಎತ್ತಲು ಆಗಿರುವುದಿಲ್ಲ.ಆ ವೇಳೆಗೆ ನೆರೆಹೊರೆಯ ಜನರು ಹಸಿವಿನಿಂದ ಕಂಗಾಲಾಗಿರುತ್ತಾರೆ. ನಂತರ ಮೃತ ದೇಹವನ್ನು ಎತ್ತಿ ಅಂತ್ಯ ಸಂಸ್ಕಾರ ಮಾಡುವಾಗ ಯಾರಿಗೂ ತಾಳ್ಮೆ ಇರುವುದಿಲ್ಲ. ಮೃತ ದೇಹಕ್ಕೆ ಬೆಂಕಿತಗಲಿಸಿ ಸ್ಮಶಾನದಿಂದ ಹೊರಟು ಬಿಡುತ್ತಾರೆ! ಇವೆಲ್ಲಾ ನಾವು ನಮ್ಮ ಸುತ್ತಮುತ್ತಲೂ ಸಮಾನ್ಯವಾಗಿ ಬ್ರಾಹ್ಮಣ ಸಂಪ್ರದಾಯದಲ್ಲಿ ಕಾಣುವ ಹಲವು ಉಧಾಹರಣೆಗಳು. ಈ ಬಗ್ಗೆ ಕೂಡ ಚಿಂತನ-ಮಂಥನ ನಡೆಸಬೇಕಾದ ಕಾಲ ಬಂದಿದೆ. ಅಪ್ಪ-ಅಮ್ಮನನ್ನು ಬದುಕಿದ್ದಾಗ ನೋಡದ ಮಕ್ಕಳಿಗಾಗಿ ಅಪ್ಪ/ಅಮ್ಮ ಸತ್ತಾಗ ಮಹತ್ವಕೊಟ್ಟು ಅವರ ಬರುವಿಕೆಗಾಗಿ ನೆರೆಹೊರೆಯ ಜನರು ಕಾಯುವ ಈ ಪದ್ದತಿ ತಪ್ಪಬೇಡವೇ? ಸತ್ತಮೇಲೆ ಪಂಚಭೂತಗಳಲ್ಲಿ ಮೃತದೇಹದ ವಿಸರ್ಜನೆಯಾಗಬೇಕು. ಅಷ್ಟೆ. ಅದಕ್ಕಾಗಿ ಕರ್ತೃಗಳಿಗಾಗಿ/ ಪುರೋಹಿತರಿಗಾಗಿ ಕಾಯುವುದರಲ್ಲಿ ಯಾವ ಪುರುಷಾರ್ಥವಿದೆ? ಮೃತದೇಹವು ಸುಟ್ಟು ಭಸ್ಮವಾಗಬೇಕಷ್ಟೆ. ಅಲ್ಲಿಗೆ ಎಲ್ಲಾ ಮುಗಿಯಿತು. ಈ ಬಗ್ಗೆ ಜಾಗೃತಿ ಮೂಡಬೇಕು.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-54016765442975697372011-04-24T23:22:56.489+05:302011-04-24T23:22:56.489+05:30೨೨ ದಿನಗಳ ಹಿಂದೆ ೯೨ ವರ್ಷದ ನನ್ನಜ್ಜಿ (ಹಾಸನದ ಕಾಲೆಜೊಂದರಲ...೨೨ ದಿನಗಳ ಹಿಂದೆ ೯೨ ವರ್ಷದ ನನ್ನಜ್ಜಿ (ಹಾಸನದ ಕಾಲೆಜೊಂದರಲ್ಲಿ ಪ್ರಿನ್ಸಿಪಾಲ್ ಆಗಿ ಈಗ ನಿವೃತ್ತರಾಗಿರುವ ವಿ.ನರಹರಿಯವರ ಸ್ವಂತ ಹಿರಿಯಕ್ಕ) ವಯೋಸಹಜ ಸಾವಿನ ನಂತರದ ಕರ್ಮಾಂಗ ಕಣ್ಣಾರೆ ನೋಡಿ 'ವೇದಗಳಲ್ಲಿ ಇರಲಿಕ್ಕಿಲ್ಲ' ಎಂಬ ಅಭಿಪ್ರಾಯದಿಂದ ಕೂಡಿದ ಆ ಪ್ರಶ್ನೆ ಕೇಳಿದೆ. ಅದಕ್ಕೆ ಸುದಾಕರ ಶರ್ಮರ ಉತ್ತರ ನೋಡಿಯೇ ನನಗೆ ರೋಮಾಂಚನ'ಸಂತೋಷ ಹಾಗೂ ಆಶ್ಚರ್ಯವಾಯಿತು.<br />ಮೊನ್ನೆ ನಮ್ಮಜ್ಜಿ ರಾತ್ರಿ ೧೦.೧೫ಕ್ಕೆ ತೀರಿಕೊಂಡಾಗಲೂ ಮಾರನೆದಿನ ಸಂಜೆ ೩.೩೦ ರ ವರೆಗೆ ಸುಡಲಿಕ್ಕೆ ಆಗಲಿಲ್ಲ. ಶೃಂಗೇರಿಯಲ್ಲಿ ನಡೆಯುವ ಯಾವುದೋ ಹೋಮಕ್ಕೆ ಎಲ್ಲಾ ಬುಕ್ಕಾಗಿದ್ದರು!!!ಕೊನೆಯಲ್ಲಿ ಯಾರೋ ಒಬ್ಬರು ಸ್ವಲ್ಪ ವಯಸ್ಸಾದವರು ಬಂದು ದಹನ ಮಾಡಿಸಿದರು.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-3011800053728614461.post-9241804830347608992011-04-22T17:49:09.668+05:302011-04-22T17:49:09.668+05:30ಸುಬ್ರಹ್ಮಣ್ಯರ ಪ್ರಶ್ನೆಗೆ ಶರ್ಮಾಜಿಯವರ ಉತ್ತರ ಮನಸ್ಸಿಗೆ ಹ...ಸುಬ್ರಹ್ಮಣ್ಯರ ಪ್ರಶ್ನೆಗೆ ಶರ್ಮಾಜಿಯವರ ಉತ್ತರ ಮನಸ್ಸಿಗೆ ಹಿತ ತಂದಿದೆ; ಶ್ರೀಧರರ ಅನುಭವ ಮನಮಿಡಿದಿದೆ. ಬದಲಾವಣೆ ನಾವಂದುಕೊಂಡಷ್ಟು ಸುಲಭವಲ್ಲ, ಆದರೂ ವೈಯಕ್ತಿಕವಾಗಿ ನಾವಾದರೂ ಬದಲಾವಣೆ ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿರಬೇಕು!kavinagarajhttps://www.blogger.com/profile/03441731601299137224noreply@blogger.com