tag:blogger.com,1999:blog-3011800053728614461.post6016584355130519470..comments2024-02-22T22:05:54.275+05:30Comments on ವೇದಸುಧೆ: ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ - 2Unknownnoreply@blogger.comBlogger9125tag:blogger.com,1999:blog-3011800053728614461.post-36703787980535359612011-04-04T12:38:17.181+05:302011-04-04T12:38:17.181+05:30ಈ ಲೇಖನದ ಕುರಿತು ಸಂಪದಿಗರ ಅಭಿಪ್ರಾಯಗಳು:
Submitted by k...ಈ ಲೇಖನದ ಕುರಿತು ಸಂಪದಿಗರ ಅಭಿಪ್ರಾಯಗಳು:<br />Submitted by ksraghavendranavada on April 2, 2011 - 6:56pm. <br />ನಿಮ್ಮ ಅನುಸರಿಸುವಿಕೆ ಸರಿಯಾದದ್ದು. ನಮ್ಮ ನ೦ಬಿಕೆಗಳು ನಮಗೆ ಮಾತ್ರವೇ ವಿನ: ಪರರಿಗಲ್ಲ.. ಅ೦ತೆಯೇ ಬೇರೊಬ್ಬರ ನ೦ಬಿಕೆಗೆ ಘಾಸಿ ಉ೦ಟು ಮಾಡುವಿಕೆಯು ತರವಲ್ಲ!<br /><br />ಮತ್ತೊ೦ದಿಷ್ಟು:<br /><br />ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಮಾತೊ೦ದು ಸೊಗಸಾಗಿದೆ: “ ಕಲಿಯುಗದಲ್ಲಿ ಮಾನವರು ನನ್ನನ್ನು ಯಾವ ರೀತಿಯಲ್ಲಿ ಬಯಸುತ್ತಾರೋ ಅದೇ ರೀತಿಯಲ್ಲಿ ನಾನವರಿಗೆ ದೊರಕುವೆ“..<br /><br />ನನ್ನ ಅನಿಸಿಕೆಯೆ೦ದರೆ ನಾಸ್ತಿಕತನವೂ ಒ೦ದು ರೀತಿಯ ದೇವರ ಮೇಲಿನ ನ೦ಬಿಕೆಯೇ.. ಸಕಲ ಚರಾಚರಗಳೂ ಆತನ ಅಣತಿಯಿಲ್ಲದೆ ಒ೦ದು ಹೆಜ್ಜೆಯನ್ನೂ ಮು೦ದಿಡಲಾರವು ಎ೦ಬ ಮಾತನ್ನು ನೆನಪಿಸಿಕೊ೦ಡರೆ ನಾಸ್ತಿಕತನವೂ ದೇವರ ಮೇಲಿನ ನ೦ಬಿಕೆಯೇ ಅಲ್ಲವೇ?<br /><br />“ಕಾಯಕವೇ ಕೈಲಾಸ“, ಪರರನ್ನು ಹಿ೦ಸಿಸದಿರುವುದು, ಸದ್ಗುಣಗಳು ಹಾಗೂ ಸತ್ ಚಿ೦ತನೆಗಳನ್ನು ಬೆಳೆಸಿಕೊಳ್ಳುವುದು- ಇವೇ ದೇವರನ್ನು ಒಲಿಸಿಕೊಳ್ಳುವ ಮಾರ್ಗಗಳು- ಪ್ರತಿಯೊ೦ದು ಒಳ್ಳೆಯದರಲ್ಲಿಯೂ ಅವನಿದ್ದಾನೆ ಎ೦ಬ ದೃಢ ನ೦ಬಿಕೆಯಿ೦ದ ಮು೦ದೆ ಸಾಗಿದಲ್ಲಿ ದೇವರ ಅಸಿತ್ವದ ಬಗ್ಗೆ ಸ೦ಶಯಗಳನ್ನೇಳಿಸಿಕೊಳ್ಳುವ ಪ್ರಮೇಯವೇ ಬಾರದು..<br /><br />ಎರಡೂ ಭಾಗಗಳೂ ಉತ್ತಮ ಚಿ೦ತನೆಯಿ೦ದ ಕೂಡಿದ, ಪ್ರಸ್ತುತ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಸ೦ದೇಶಗಳಿ೦ದ ಕೂಡಿದ ಪ್ರಬುಧ್ಧ ಲೇಖನವಾಗಿದೆ.<br /><br />ನಮಸ್ಕಾರಗಳೊ೦ದಿಗೆ,<br />ನಿಮ್ಮವ ನಾವಡ.<br />********<br />Submitted by santhosh_87 on April 3, 2011 - 5:12pm. <br />ವೈಯಕ್ತಿಕವಾಗಿ ದೇವರು ಮತ್ತು ಅವನ ಅಸ್ತಿತ್ವದ ಎಲ್ಲಾ ಸಾಧ್ಯತೆಗಳನ್ನೂ ನಾನು ನಂಬದಿದ್ದರೂ ’ದೇವರನ್ನು ದೇವರ ಪಾಡಿಗೆ ಬಿಟ್ಟು ಬಿಡೋಣ’ ಎಂಬ ಮಾತಿಗೆ ನನ್ನ ಸಹಮತವಿದೆ. ಹೇಗೆ ನಾಸ್ತಿಕವಾದಕ್ಕೆ ತನ್ನದೇ ಆದ ವಾದಗಳಿವೆಯೋ ಹಾಗೆಯೇ ಆಸ್ತಿಕವಾದವೂ ದೇವರ ಅಸ್ತಿತ್ವಕ್ಕಾಗಿ ಸೂಕ್ತ ಮಾಹಿತಿಯನ್ನು ನೀಡುತ್ತದೆ. ಆದ್ದರಿಂದ ಆ ವಿಷಯವನ್ನು ಚರ್ಚೆಯ ಪರಿಧಿಯಿಂದ ಹೊರಗಿಟ್ಟಷ್ಟೂ ಒಳ್ಳೆಯದೇ. ದೇವರಿಲ್ಲ ಎಂದು ಸಾಧಿಸಿದ ಪುರುಷ ಕೂಡ ಅವನ ಕಾಲಾನಂತರ ದೇವರಾಗುವ ಬುದ್ಧಿ ಮನುಷ್ಯ ಮಾತ್ರ ಪಡೆದಿದ್ದು. :)<br />****************<br />Submitted by partha1059 on April 3, 2011 - 7:57pm. <br />ನಾಗರಾಜ್ ಸರ್<br />ದೇವರ ಬಗ್ಗೆ ಉತ್ತಮ ಚಿಂತನೆ . ದೇವರು ಮತ್ತು ದರ್ಮದ ಬಗ್ಗೆ ನಿಜವಾದ ಆಸಕ್ತಿ ಮತ್ತು ಶ್ರದ್ದೆ ಯಿದ್ದರೆ<br />ಒಂದಂತು ಅನುಕೂಲವಿದೆ . ನಮಗೆ ಸ್ವಸ್ಥ ಸಮಾಜ , ಹಾಗು ಉತ್ತಮ ವಾತವರಣ ದೊರೆಯುತ್ತದೆ.<br />ಪಾರ್ಥಸಾರಥಿkavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-71306081522205576732011-04-04T12:24:31.785+05:302011-04-04T12:24:31.785+05:30ಓದಿ ವಿಮರ್ಶಾತ್ಮಕ ಪ್ರತಿಕ್ರಿಯೆ ನೀಡಿದ ಡಾ.ಕೃಷ್ಣಮೂರ್ತಿ, ...ಓದಿ ವಿಮರ್ಶಾತ್ಮಕ ಪ್ರತಿಕ್ರಿಯೆ ನೀಡಿದ ಡಾ.ಕೃಷ್ಣಮೂರ್ತಿ, ಹರಿಹರಪುರ ಶ್ರೀಧರ್,ಪ್ರಭಾಕರ, ಸುಬ್ರಹ್ಮಣ್ಯ ಮಾಚಿಕೊಪ್ಪ ಮತ್ತು ಸುರೇಶರಿಗೆ ವಂದನೆಗಳು.<br />ಪ್ರಿಯ ಪ್ರಭಾಕರ್, ನಿಮ್ಮ ವಿಮರ್ಶೆ ವಿವರಣಾತ್ಮಕವಾಗಿ ಒಂದು ಲೇಖನವಾಗಿ ಹೊರಬರಲಿ. ನನ್ನಂತಹವರಿಗೆ ಉಪಯೋಗವಾದೀತು.<br />ಪ್ರಿಯ ಸುಬ್ರಹ್ಮಣ್ಯ ಮಾಚಿಕೊಪ್ಪ, ನಿಮ್ಮ ಅಭಿಪ್ರಾಯಕ್ಕೆ ವಂದನೆ. ನನ್ನ ಇದುವರೆಗಿನ ಅನುಭವ,ಅರಿವಿಗನುಸಾರವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಪೂರ್ವಾಗ್ರಹ ಪೀಡಿತನಾಗದೆ, ನನ್ನ ಅಭಿಪ್ರಾಯವೇ ಸರಿ ಎಂದು ಅಂಟಿಕೊಳ್ಳದೆ ನನ್ನ ಅಭಿಪ್ರಾಯ ಸರಿಯಲ್ಲವೆಂದು ಸಾಧಾರವಾಗಿ ತೋರಿಸಿಕೊಡುವ ಯಾವುದೇ ಸಂಗತಿ/ವಿಚಾರಗಳನ್ನು ಒಪ್ಪಿಕೊಳ್ಳುವೆ. ಈ ಕುರಿತು ವಿಸ್ತೃತವಾಗಿ ಬರೆಯಿರಿ.<br />-ಕ.ವೆಂ.ನಾಗರಾಜ್.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-49521535130259160532011-04-04T11:08:31.865+05:302011-04-04T11:08:31.865+05:30".....ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ...".....ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ. ಆ ಶಕ್ತಿ ಎಲ್ಲರನ್ನೂ -ನಂಬುವವರನ್ನೂ, ನಂಬದವರನ್ನೂ, ಕೆಟ್ಟವರನ್ನೂ, ಒಳ್ಳೆಯವರನ್ನೂ - ಸಮಾನಭಾವದಿಂದ ಕಾಣುತ್ತದೆ. ಆ ಶಕ್ತಿ ಕೇವಲ ಮಾನವ ಜೀವಿಗಳಿಗೆ ಮತ್ತು ನಿರ್ದಿಷ್ಟ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ...."<br /><br />ಇದನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಆ ಶಕ್ತಿಯನ್ನು ಒಬ್ಬೊಬ್ಬರು ಒಂದೊಂದು ರೂಪದಲ್ಲಿ ನೋಡುತ್ತಾರೆ;ಪರಿಭಾವಿಸುತ್ತಾರೆ ಮತ್ತು ಅನುಭವಿಸುತ್ತಾರೆ. ಎಲ್ಲಿಯವರೆಗೆ ಇದು ಶಾಂತಿ;ನೆಮ್ಮದಿಗೆ ಪೂರಕವೋ ಮತ್ತು ಇತರರಿಗೆ ಕಿರಿಕರಿ ಉಂಟುಮಾಡುವುದಿಲ್ಲವೋ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅಂತಿಮವಾಗಿ ಬೇಕಾದ್ದು ಸತ್ಯಶೋಧಕನಿಗೆ ಸಿಗಬೇಕಾದ ನೆಮ್ಮದಿ. ಅದಕ್ಕಾಗಿ ತನಗೊಪ್ಪು ಮಾರ್ಗ ತುಳಿಯುವುದು ವ್ಯಕ್ತಿಗತವಾದದ್ದು.<br /><br />ಉತ್ತಮ ವಿಚಾರಗಳಿಗಾಗಿ ಅಭಿನಂದನೆಗಳು!!KAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-3011800053728614461.post-18699859954842094902011-04-04T10:10:31.844+05:302011-04-04T10:10:31.844+05:30ಶ್ರೀ ಸುಬ್ರಹ್ಮಣ್ಯ,
ನಮಸ್ತೆ,
ಪುನರ್ಜನ್ಮದ ಬಗ್ಗೆ ಸಾಕಷ್ಟು...ಶ್ರೀ ಸುಬ್ರಹ್ಮಣ್ಯ,<br />ನಮಸ್ತೆ,<br />ಪುನರ್ಜನ್ಮದ ಬಗ್ಗೆ ಸಾಕಷ್ಟು ಬಿನ್ನಾಭಿಪ್ರಾಯಗಳಿವೆ. ಪುನರ್ ಜನ್ಮ ಇಲ್ಲವೆಂಬ ನಿಮ್ಮ ನಿಲುವಿನ ಬಗ್ಗೆ ನೀವು ವಿವರವಾಗಿ ಬರೆದರೆ ಉತ್ತಮ.ಅದು ಒಂದು ಚರ್ಚೆಯೇ ಆಗಲಿ. ಪುನರ್ಜನ್ಮದಬಗೆಗೆ ನಾನು ತಲೆಕೆಡಸಿಕೊಂಡಿಯೇ ಇಲ್ಲ."ಅನಾಯಾಸೇನ ಮರಣಂ,ವಿನಾದೈನ್ಯೇನ ಜೀವನಂ" ಎಂಬ ಮಾತಿದೆಯಲ್ಲ. ಅದಕ್ಕೆ ನನ್ನ ಒತ್ತು. ದೇಹೀ ಎನ್ನದಂತೆ ಜೀವನ ಸಾಗಿದರೆ ಸಾಕು,ಅಂತೆಯೇ ಮರಣವು ಅನಾಯಾಸವಾಗಿರಬೇಕು. ಅಂದರೆ ಅಂತ್ಯದ ಕಾಲದ ವರೆಗೂ ಶರೀರ ಮನಸ್ಸು ಆರೋಗ್ಯಕರವಾಗಿರಬೇಕು. ನನ್ನ ನಂಬಿಕೆಯಂತೆ ನಮ್ಮ ಚಿಂತನೆಗಳು, ಜೀವನ ಶೈಲಿ, ಆಹಾರ ಕ್ರಮ-ಇವೆಲ್ಲವೂ ಮತ್ತೊಬ್ಬರಿಗೆ ನೋವಾಗದಂತೆ-ತನಗೆ ಹಿತವೆನಿಸುವಂತಿದ್ದರೆ ಬಹುಷ: ಮೇಲಿನೆರಡೂ ಸಮಸ್ಯೆಗಳು ಎದುರಾಗದಿರಬಹುದು. ಅಥವಾ ಅವು ಸಮಸ್ಯೆ ಎನಿಸದೆ ಅದನ್ನು ಎದುರಿಸುವ ಮಾನಸಿಕತೆ ಉಂಟಾಗಬಹುದು. ಇಷ್ಟರಮಟ್ಟಿಗೆ ನನ್ನ ಚಿಂತನೆ ಬಹು ಸೀಮಿತ. ಸಾಕೆನಿಸುತ್ತದೆ. ಅದಕ್ಕೂ ಮುಂದೆ ಹೋಗಿ ವಿಚಾರ ಮಥನ ಮಾಡುವವರ ಮಾತು ಕೇಳಲು ಸಿದ್ಧ. ಪುನರ್ ಜನ್ಮವೆನ್ನುವುದು ಏನಿದ್ದರೂ ನಾವು ಸತ್ತಮೇಲೆ ತಾನೇ? ಈಗ ಬದುಕಿರುವವರೆಗೂ ಒಂದು ಉತ್ತಮ ಬದುಕನ್ನು ನಡೆಸೋಣ ಅಲ್ಲವೇ?vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-57304697195523999202011-04-04T08:01:55.163+05:302011-04-04T08:01:55.163+05:30"೩. ಪುನರ್ಜನ್ಮವಿದೆ. ನಾವು ಮಾಡುವ ಒಳ್ಳೆಯ ಕೆಲಸಗಳು ..."೩. ಪುನರ್ಜನ್ಮವಿದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಒಳಿತನ್ನೇ ತರುತ್ತದೆ, ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ!"-ಲೇಖನದ ಈ ಭಾಗಕ್ಕೆ ನನ್ನ ಸಂಪೂರ್ಣ ವಿರೋದ!!! ಪುನರ್ಜನ್ಮ ಇಲ್ಲ!!!! ಸಾವಿನ ಸಮೀಪದ ಅನುಭವಗಳೇ ಪುನರ್ಜನ್ಮ ಕಲ್ಪನೆಗೆ ಕಾರಣ.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-3011800053728614461.post-14783527625122320712011-04-04T07:18:13.868+05:302011-04-04T07:18:13.868+05:30[ಒಂದು ಪರಂಪರೆ ಸಾಗಿ ಬರುವ ಬಹು ದೂರದ ಮಾರ್ಗ ಮಧ್ಯೆ ಅನೇಕ ಅ...[ಒಂದು ಪರಂಪರೆ ಸಾಗಿ ಬರುವ ಬಹು ದೂರದ ಮಾರ್ಗ ಮಧ್ಯೆ ಅನೇಕ ಅಗೋಚರ ಹಾಗೂ ಅಸಂಗತ ವ್ಯತ್ಯಾಸಗಳು, ಪರಿಕಲ್ಪನೆಗಳು,ಐತಿಹಾಸಿಕ ಘಟನಾವಳಿಗಳು, ಅನಿವಾರ್ಯ ಸಂದರ್ಭಗಳು ಎದುರಾಗಿರುತ್ತವೆ]<br />ಸತ್ಯವಾದ ಮಾತು.<br /> ಆತ್ಮೀಯ ಪ್ರಭಾಕರ್, ನಿಮ್ಮ ಪ್ರತಿಕ್ರಿಯೆಯೇ ಒಂದು ಲೇಖನವಾಗಲು ಯೋಗ್ಯವಾಗಿದೆ.ನಿಮ್ಮ ಚಿಂತನಾಲಹರಿಯನ್ನು ದಯಮಾಡಿ ಹಂಚಿಕೊಳ್ಳಿ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಚಿಂತನೆಗಳನ್ನು ಹಂಚಿಕೊಳ್ಳುತ್ತೀರಾಗಿ ಆಶಿಸುವೆ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-63041437266609399482011-04-04T01:26:50.673+05:302011-04-04T01:26:50.673+05:30ಪ್ರೀತಿಯ ನಾಗರಾಜ್ ಅವರ ಲೇಖನ ಹಾಗೂ ಶ್ರೀಧರ್ ಅವರ ಅಭಿಪ್ರಾಯ...ಪ್ರೀತಿಯ ನಾಗರಾಜ್ ಅವರ ಲೇಖನ ಹಾಗೂ ಶ್ರೀಧರ್ ಅವರ ಅಭಿಪ್ರಾಯ ಎರಡನ್ನೂ ಓದಿದ ಮೇಲೆ ನನಗನಿಸುವುದಿಷ್ಟು. ಇದೆಲ್ಲ ನಮಗನಿಸುವಷ್ಟು ಸುಲಭ ಸಂಗತಿಗಳಲ್ಲ! ನಾಗರಾಜ್ ಅವರ ಲೇಖನ ಸಾರ್ವತ್ರಿಕವಾಗಿದೆ. ಬಹುತೇಕ ಸಾತ್ವಿಕರ ಮನೋಸ್ಥಿತಿ ಹಾಗೂ ಚಿಂತನಾ ಲಹರಿ ಇದೇ ರೀತಿ ಇರುವುದು ಸಹಜ!ಏಕೆಂದರೆ ಇದರಲ್ಲಿ ಕಾಲದ ಪ್ರಶ್ನೆ ಅಡಗಿದೆ. ದೇವರು (ಅಥವಾ ವಿಶ್ವ ಚೇತನ ಶಕ್ತಿ)ಒಬ್ಬನೇ; ಅವನು ಸರ್ವ ವ್ಯಾಪಿ ಎಂಬುದು ನಮ್ಮ ಹಿಂದಿನ ತಲೆಮಾರುಗಳ ಹಿರಿಯರೂ ಸೇರಿದಂತೆ ಪ್ರತಿಯೊಬ್ಬರಿಗೂ ಗೊತ್ತಿತ್ತು ಮತ್ತು ಈಗಲೂ ಎಲ್ಲರಿಗೂ ಗೊತ್ತು. ಇದೆಲ್ಲ ಅನುಭೂತಿ ನಾವು ಪಡೆಯುವ ಸಂಸ್ಕಾರ, ಬೆಳೆದುಬಂದ ಹಾದಿ, ಸಾಮಾಜಿಕ ಶಿಕ್ಷಣ,ಆರ್ಥಿಕ ಸ್ಥಿತಿ ಗತಿಗಳು,ವಿವೇಚನೆ ಎಂಬ ಸಾಣೆಕಲ್ಲಿಗೆ ಉಜ್ಜುವ ನಮ್ಮ ಜೀವನ ಕ್ರಮ ಇತ್ಯಾದಿಗಳ ಮೇಲೆ ಅವಲಂಬಿತವಾಗಿವೆ. ಆದರೆ ಒಂದು ಪರಂಪರೆ ಸಾಗಿ ಬರುವ ಬಹು ದೂರದ ಮಾರ್ಗ ಮಧ್ಯೆ ಅನೇಕ ಅಗೋಚರ ಹಾಗೂ ಅಸಂಗತ ವ್ಯತ್ಯಾಸಗಳು, ಪರಿಕಲ್ಪನೆಗಳು,ಐತಿಹಾಸಿಕ ಘಟನಾವಳಿಗಳು, ಅನಿವಾರ್ಯ ಸಂದರ್ಭಗಳು ಎದುರಾಗಿರುತ್ತವೆ. ಅವು ಏನೇನು ಎಂದು ನಾವು ಪತ್ತೆ ಮಾಡಿ, ಕಾರಣಗಳನ್ನು ಹುಡುಕಿ ಸರಿಪಡಿಸಬೇಕು. ಇದೂ ಸಹ ಅಂದುಕೊಂಡಷ್ಟು ಸುಲಭವಲ್ಲ. ಉದಾ: ಮೂಲದಲ್ಲಿ ನೀರು ಶುದ್ಧವಾಗಿಯೇ ಇರುತ್ತದೆ. ಆದರೆ ನದಿ ಹರಿದಂತೆ ಕೆಲವೆಡೆ ನೀರು ಕೆಂಪಾಗಿರುತ್ತದೆ; ಹರಿಯದೆ ನಿಂತ ಕಡೆ ಹಸಿರಾಗಿರಲೂ ಬಹುದು! ಮೇಲೆ ತೇಲುವ ಕಸ, ಕಡ್ಡಿಗಳನ್ನಷ್ಟೆ ಸುಲಭವಾಗಿ ತೆಗೆಯಬಹುದು. ಹೆಚ್ಚು ವಿವರಣೆ ಅಗತ್ಯವಿಲ್ಲ; ಈ ಉದಾಹರಣೆ ನಿಮಗೆ ಅರ್ಥವಾಯಿತೆಂದುಕೊಳ್ಳುವೆ!<br />ನಾಗರಾಜ್ ಅವರು ಹೇಳುವ ಮಾನಸಿಕ ಸ್ಥಿತಿ ಗತಿಗಳು ಪರಾಕಾಷ್ಟ ತಲುಪಿದಾಗ- ಅದೇ ಒಂದು ಸಾಧನೆಯಾಗಿಯೂ ಬದಲಾಗಬಹುದು; ವೈಜ್ಞಾನಿಕವಾಗಿ ಹೇಳಬೇಕೆಂದರೆ ಅದು ಪ್ಯಾರಾ ಸೈಕಾಲಜಿ (ಪಾರಮಾನಸ ಶಾಸ್ತ್ರ)ವಾಗಿ ಬದಲಾಗುವ ಸಾಧ್ಯತೆಗಳಿವೆ! ಒಟ್ಟಾರೆ ಎಲ್ಲದಕ್ಕೂ ಮೂಲ ಮನುಷ್ಯನ ಮನಸ್ಸು-ಅದೇ ನಿಗೂಢ!!<br />ನಾಗರಾಜರ ಲೇಖನ ಸರಳ, ಸುಂದರ ಹಾಗೂ ಸರಸರ ಓದಿಸಿಕೊಂಡು ಹೋಗುತ್ತದೆ.ನನ್ನ ಅಭಿಪ್ರಾಯವೇನೆಂದರೆ ಈ ಮಾನಸಿಕ ಸ್ಥಿತಿಗತಿ ಜತೆಗೆ ಸ್ವಭಾವವೂ ಸೇರಿಕೊಳ್ಳುತ್ತದೆ. ಧರ್ಮ, ದೇವರು, ದೆವ್ವ, ಮೂಢನಂಬಿಕೆ, ಆಚರಣೆ, ಬಿಡಿಸಿಕೊಳ್ಳಲಾಗದಷ್ಟು ಬಂಧನ ಇತ್ಯಾದಿ ಅಪಭ್ರಂಶಗಳಿಗೆಲ್ಲ ಮನುಷ್ಯನ `'ಆರಾಧನಾ'' ಪ್ರವೃತ್ತಿಯೇ ಕಾರಣ. ಈ ಪ್ರವೃತ್ತಿ ನಿಜವಾದ ಜ್ಞಾನ ಹಾಗೂ ವಿವೇಚನಾ ಶಕ್ತಿಯ ಮೇಲೆ ಮುಸುಕು ಹಾಕುತ್ತದೆ. ಏನಂತೀರಿ?H.S. Prabhakarahttps://www.blogger.com/profile/06444933134060520626noreply@blogger.comtag:blogger.com,1999:blog-3011800053728614461.post-9724625974263122292011-04-03T21:19:59.525+05:302011-04-03T21:19:59.525+05:30ಪ್ರಿಯಶ್ರೀ ನಾಗರಾಜ್,
ಲೇಖನವನ್ನು ಪೂರ್ಣ ಒಡಿದ ಮೇಲೆ ನಾವಿಬ...ಪ್ರಿಯಶ್ರೀ ನಾಗರಾಜ್,<br />ಲೇಖನವನ್ನು ಪೂರ್ಣ ಒಡಿದ ಮೇಲೆ ನಾವಿಬ್ಬರೂ ಒಂದೇ ದೋಣಿಯಲ್ಲಿ ಸಾಗುತ್ತಿದ್ದೇವೆಂಬುದು ಇನ್ನೂ ಹೆಚ್ಚು ಖಚಿತವಾಯ್ತು. ಶರ್ಮರ ವಿಚಾರ ಧಾರೆಯನ್ನು ಕೇಳಿದಮೇಲೆ ನಮ್ಮ ಅಪ್ಪ-ಅಮ್ಮ, ಅಜ್ಜ-ಮುತ್ತಜ್ಜಂದಿರುಗಳಿಗೆ ಸತ್ಯದ ದಾರಿ ತೆರೆಯಲು ಅವಕಾಶವೇ ಇಲ್ಲವಾಗಿ ಹಿಂದಿನವರು ನಡೆಸಿಕೊಂಡುಬಂದಿದ್ದೆಲ್ಲಾ ಸತ್ಯ, ಅದೇ ಧರ್ಮ, ಎಂಬ ನಂಬಿಕೆಯಿಂದ ತಮ್ಮ ಜೀವನವನ್ನು ಮುಗಿಸಿಬಿಟ್ಟರಲ್ಲಾ! ಎಂದು ವ್ಯಥೆಯಾಗುತ್ತದೆ.ಯಾಕೆ ಹೀಗಾಯ್ತು? ಸತ್ಯವನ್ನು ಏಕೆ ಬಚ್ಚಿಟ್ಟಿದ್ದರು? ವಿಚಾರಮಂಥನ ಮಾಡುವಷ್ಟು ಸಾಮರ್ಥ್ಯವೇ ಇರಲಿಲ್ಲವೇ?ಎಂದು ಆಶ್ಚರ್ಯವಾಗುತ್ತದೆ.<br />"ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ"<br />ಎಂಬ ನಿಮ್ಮ ಸಲಹೆ ಸಮಂಜಸವಾಗಿದೆ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-10664293670232914482011-04-03T18:54:30.666+05:302011-04-03T18:54:30.666+05:30ಇಂತಹ ವೈಚಾರಿಕ ,ಪ್ರಬುದ್ಧ ಲೇಖನ ನೀಡಿದ್ದಕ್ಕೆ ತಮಗೆ ಅನಂತ ...ಇಂತಹ ವೈಚಾರಿಕ ,ಪ್ರಬುದ್ಧ ಲೇಖನ ನೀಡಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು ಸರ್.ನಮಸ್ಕಾರ.Dr.D.T.Krishna Murthy.https://www.blogger.com/profile/12071380245298075356noreply@blogger.com