tag:blogger.com,1999:blog-3011800053728614461.post8117256337058008307..comments2024-02-22T22:05:54.275+05:30Comments on ವೇದಸುಧೆ: ಹಾಸನದ ಶ್ರೀಶಂಕರಮಠದಲ್ಲಿ ವೇದಾಂತ ಸಪ್ತಾಹUnknownnoreply@blogger.comBlogger1125tag:blogger.com,1999:blog-3011800053728614461.post-59208890931133355922011-06-06T12:10:05.218+05:302011-06-06T12:10:05.218+05:30ಈ ಆಡಿಯೋ ಪ್ರಕಟವಾದ ಒಂದು ಗಂಟೆಯಲ್ಲಿ ಮಿತ್ರರೊಬ್ಬರು ನನಗೆ ...ಈ ಆಡಿಯೋ ಪ್ರಕಟವಾದ ಒಂದು ಗಂಟೆಯಲ್ಲಿ ಮಿತ್ರರೊಬ್ಬರು ನನಗೆ ದೂರವಾಣಿ ಕರೆಮಾಡಿ " ನೀವು ಪ್ರಕಟಿಸುತ್ತಿದ್ದ ವೇದಾಧ್ಯಾಯೀ ಸುಧಾಕರಶರ್ಮರ ವಿಚಾರಗಳಿಗೂ ಈಗ ಪ್ರಕಟವಾಗಿರುವ ವಿಚಾರಕ್ಕೂ ವಿರೋಧಾಭಾಸ ಕಾಣುತ್ತಿದೆಯಲ್ಲಾ! ಎಂದು ಪ್ರಶ್ನೆ ಮಾಡಿದರು. ಅವರಿಗೂ ನಿಮಗೂ ನನ್ನ ವಿನಂತಿ ಇಷ್ಟೆ- ನಿಮಗೆ ಯಾವ ವಿಚಾರ ವಿರೋಧಾಭಾಸವಾಗಿ ಕಾಣುತ್ತಿದೆ? ವೇದದ ವಿಚಾರಕ್ಕೆ ವಿರೋಧವಾಗಿ ಕಂಡ ವಿಷಯವನ್ನು ತಿಳಿಸಿದರೆ ಆ ಬಗ್ಗೆ ಸ್ವಾಮೀಜಿಯವರೊಡನೆ ಚರ್ಚಿಸಿ ಅವರ ಸಮಝಾಯಿಶಿಯನ್ನು ಪ್ರಕಟಿಸಲಾಗುವುದು. ವೇದಾಧ್ಯಾಯೀ ಸುಧಾಕರಶರ್ಮರು ಚರ್ಚೆಯಲ್ಲಿ ಪಾಲ್ಗೊಂಡರೆ ವೇದಸುಧೆಯ ಅಭಿಮಾನಿಗಳಿಗೆ ಒಂದಿಷ್ಟು ಹೆಚ್ಚಿನ ಅರಿವು ಮೂಡಲು ಸಾಧ್ಯವಾಗುತ್ತದೆ.ಸುಧಾಕರ ಶರ್ಮರ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಅವರು ವೇದಸುಧೆಯನ್ನು ನೋಡುತ್ತಾರೋ ಇಲ್ಲವೋ ತಿಳಿಯದು. ಅಂತೂ ಜಿಜ್ಞಾಸೆಯಿಂದ ನಮ್ಮ ಜ್ಞಾನವು ಹೆಚ್ಚುವುದರಲ್ಲಿ ಸಂಶಯವಿಲ್ಲ. ವೇದಸುಧೆಯು ಇಂತಹ ತತ್ವಜಿಜ್ಞಾಸೆಗೆ ವೇದಿಕೆಯಾಗಲೆಂಬುದು ಅಪೇಕ್ಷೆ. ಆದರೆ ಚರ್ಚೆಯನ್ನು ಮಾಡುವಾಗ ಯಾವುದೂ ಅತಿರೇಕಕ್ಕೆ ಹೋಗಿ ಯಾರ ಮನಸ್ಸಿಗೂ ಕಿರಿಕಿರಿಯಾಗದಿರಲೆಂದು ವಿನಂತಿಸುವೆ <br />-ಹರಿಹರಪುರಶ್ರೀಧರ್<br />ಸಂಪಾದಕvedasudhehttps://www.blogger.com/profile/00612354393874564425noreply@blogger.com