tag:blogger.com,1999:blog-3011800053728614461.post444084878912104974..comments2024-02-22T22:05:54.275+05:30Comments on ವೇದಸುಧೆ: ಎಲ್ಲರಿಗಾಗಿ ವೇದ ಪ್ರಥಮ ಭಾಗUnknownnoreply@blogger.comBlogger4125tag:blogger.com,1999:blog-3011800053728614461.post-47617367113665034792020-01-31T13:01:22.264+05:302020-01-31T13:01:22.264+05:30ಗುರುಗಳೇ ವಂದನೆಗಳು.
ನಿಮ್ಮ ಅನುಮತಿ ಇಲ್ಲದೇ ಮೇಲಿನ ನಿಮ್...ಗುರುಗಳೇ ವಂದನೆಗಳು. <br />ನಿಮ್ಮ ಅನುಮತಿ ಇಲ್ಲದೇ ಮೇಲಿನ ನಿಮ್ಮ ಲೇಖನವನ್ನು ಮುಖಪುಟದಲ್ಲಿ ಕಾಪೀ ಪೇಸ್ಟ್ ಮಾಡಿದ್ದೇನೆ. ಕ್ಷಮಿಸಿ.<br />ಎಲ್ಲರಿಗೂ ನಿಮ್ಮ ಲೇಖನ ಮುಟ್ಟಲಿ ಎಂಬ ಸದಿಚ್ಛೆಯಿಂದ ಇದನ್ನು ಮಾಡಿದ್ದೇನೆಯೇ ಹೊರತು ಇನ್ನ್ಯಾವ ಸ್ವಾರ್ಥವೂ ಇಲ್ಲ. ನಿಮ್ಮ ಹೆಸರು ತಿಳಿದಿರಲಿಲ್ಲವಾದ್ದರಿಂದ ಹೆಸರು ಬರೆಯಲಿಲ್ಲ <br />dnyaneshhttps://www.blogger.com/profile/08534875455650519537noreply@blogger.comtag:blogger.com,1999:blog-3011800053728614461.post-65422836542005378112014-07-20T22:50:35.759+05:302014-07-20T22:50:35.759+05:30ಈ ಸಿದ್ಧಾಂತವನ್ನೇ ತಾವು ಸೃಷ್ಟಿಸಿದ ಅದ್ವೈತ ಸಿದ್ಧಾಂತವೆಂದ...<br /> ಈ ಸಿದ್ಧಾಂತವನ್ನೇ ತಾವು ಸೃಷ್ಟಿಸಿದ ಅದ್ವೈತ ಸಿದ್ಧಾಂತವೆಂದು ಹೇಳಿರುತ್ತಾರೆ. ಇದರಲ್ಲಿ ನಾಗಾರ್ಜುನನ ಶೂನ್ಯ ಸಿದ್ಧಾಂತವಿದೆ. ಜೋತೆಗೆ ಜಡಭರತನ ಅಹಂ ಬ್ರಹ್ಮಾಸ್ಮಿಯು ಸೇರಿದೆ. ಅದನ್ನು ಸಹಿಸದ ಮಧ್ವರ ಅನುಯಾಯಿಗಳು ಇವರನ್ನು ಸಂಕರಾಚಾರ್ಯರು ( ಬೆರೆಕೆಹುಟ್ಟಿನವರೆಂದು ) ಮೊದಲಿಸಿದರು. ಹಾಗಾದರೇ, ಇವರ ಕಂಡ ಹೊಸ ಸಿದ್ಧಾಂತವಾವುದು ಅರಿಯದಾಗಿದೆ. <br />ಬ್ರಹ್ಮವೆಂದರೇನು ?<br /> ಬ್ರಹ್ಮವೆಂದರೇನೆಂದು ತಿಳಿಯುವ ಮೊದಲು ದೇವರೆಂದರೇನೆಂದು ತಿಳಿಯಬೇಕು. ದೇವರೆಂಬುದು ಒಂದು ನಂಬಿಕೆಯ ವಿಚಾರ. ಯಾವ ದೇವರನ್ನು ನಂಬುವುದು ಎಂದರೇ ನಮ್ಮ ನಂಬಿಕೆಗೆ ಪಾತ್ರರಾದ ದೇವರುಗಳು. ನಮ್ಮ ದೇವರುಗಳು ಯಾರೆಂದರೆ ? ಶಕ್ತಿ, ಶಿವಾ, ವಿಷ್ಣು, ಬ್ರಹ್ಮ, ಗಣೇಶ, ಹೀಗೆ ಹಿಂದೂ ದೇವರ ಸಾಲು ಮೂವತ್ತುಮೂರು ಕೋಟಿಯನ್ನು ದಾಟಿ ಮುಂದೆಯು ಹೋಗುತ್ತಲಿದೆ. ಅದಲ್ಲದೇ ಬೇರೆ ಧರ್ಮದ ದೇವರುಗಳು ಏಸು, ಬುದ್ಧ, ಮಹಾವೀರ, ಯಹ್ವೆಹ್( ಯಾಹ್ವಹ್ ), ಸಮನ್ತ ದೇವರುಗಳು, ಹೀಗೆ ಅದೊಂದು ಬಹಳ ದೇವರುಗಳ ಪಟ್ಟಿಬೆಳೆಯುತ್ತದೆ. ಈ ದೇವರುಗಳು ಇದ್ದಾರೆಂದು ಮಾನವರು ಮಾತ್ರ ನಂಬಿಕೆಯಿಟ್ಟಿರುವರು. ನಂಬಿಕೆಯೆಂಬುದು ಬರೀ ನಂಬಿಕೆ ಮಾತ್ರ. ಅದು ಏಂದೂ ನಿಜವಾಗಲಾರದು ಕಾರಣ, ನಂಬಿಕೆಯು ಏಂದೂ ಅನುಭವವಾಗ ಲಾರದು, ನಂಬಿಕೆಯೇ ಬೇರೆ ಅನುಭವವೇ ಬೇರೆ, ದೇವರ ಅನುಭವವೇ ಬಹಳ ಬಹಳ ಬಹಳ ಮುಖ್ಯ. ಆದರೆ, ಯಾರಿಗಾದರೂ ದೇವರ ಅನುಭವ ಸಿಕ್ಕಿದೆಯಾ ಎಂದರೇ ಜಗದೆಲ್ಲರಿಂದ ಇಲ್ಲವೆಂದೇ ಸಾಮಾನ್ಯ ಉತ್ತರ ಸಿಕ್ಕುವುದು. ಅಂದರೆ, ನಾವು ಹೇಳುತಿರುವ ಕೇಳಿರುವ ದೇವರುಗಳೆಲ್ಲಾ ಯಾವ ಕಾಲದಲ್ಲೂ ಯಾರಿಗೂ ಏಂದೂ ನಮ್ಮ ಸನಾತನರಿಗೂ ನಮಗೂ ಸಿಕ್ಕಿಲ್ಲವೆಂದರ್ಥ. ಅದೂ ಸತ್ಯವು ಕೂಡ. ಈ ದೇವರುಗಳ ಮೇಲೆ ಮತ್ತೊಂದು ದೇವರು ಇದೆಯೆಂದು ಎಂದು ನಮ್ಮ ಸನಾತನರು ಹೇಳಿದ್ದಾರೆ. <br /> ಉದಾಹರಣೆಗೆ ಶಿವನು ಹಿಮಾಲಯದಲ್ಲಿ ತಪಸ್ಸು ಮಾಡುತ್ತಿದ್ದಾನೆಂಬುದು ನಿಮಗೆ ತಿಳಿದ ವಿಚಾರ ಹಾಗೆಯೇ ಚತುರ್ಮುಖ ಬ್ರಹ್ಮ ವಿಷ್ಣುವು ಯೋಗನಿದ್ರೆಯಲಿ ತಪಗೈದಿರುವುದು ಎಲ್ಲರಿಗೂ ತಿಳಿದ ವಿಚಾರ ಏಸುವು ತನ್ನ ತಂದೆಯಾದ ಪರಮಪಿತನಲ್ಲಿ ಯಾಚಿಸಿರುವುದು ಎಲ್ಲರಿಗೂ ತಿಳಿದವಿಚಾರ ಅದೇ ಆ ಶಕ್ತಿ ನಿರಂಕುಶ, ನಿರಂಜನ ಶಕ್ತಿ ಎಲ್ಲಕ್ಕೂ ಮಿಗಿಲಾದ ಒಡೆತನಹೊಂದಿರುವುದಿದೆ "ಅದೇ ಬ್ರಹ್ಮ", <br /> ಶಕ್ತಿಯದು ನಪುಂಸಕ ಲಿಂಗವಾಗಿದ್ದು , ಅದೇ ಅಲ್ಲಾ, ಅದೇ ಪರಮಪಿತ, ಅದೇ ಶಕ್ತಿ, ಅದೇ ಮಾತೃಕೆಗಳು ಸ್ತ್ರೀಲಿಂಗವಾದರೇ, ಶಿವಾ, ವಿಷ್ಣು, ಬ್ರಹ್ಮ, ಏಸು ಹೀಗೆ ಇವೇಲ್ಲಾ ಪುಲಿಂಗವಾದರೇ, ಇವನೆಲ್ಲಾ ಮೀರಿದ " ಆ ಆ ಬ್ರಹ್ಮವೇ "ಬೇರೆ ಅದು ನಪುಂಸಕಲಿಂಗ. ಅದು ಹೇಗಿದೆ ಎಂದರೇ, ಅದು ನಿರಾಕಾರ, ನಿರ್ವಿಕಾರ, ನಿರಾಧಾರ, ನಿಗೂಢ, ನಿರ್ಗುಣ, ನಿರ್ಜರ, ನಿರ್ಜೀವ, ನಿರ್ಮಲ, ನಿರ್ಲಿಪ್ತ, ನಿರ್ವಿವಾದ, ನಿರ್ವಾಣವಾಗಿದೆ ( ಶೂನ್ಯವಾಗಿದೆ ) . ವೇದಗಳ ನಾಯಕ ಬ್ರಹ್ಮನಿಗೂ ದೇವಾಲಯವಿದೆ ಆದರೇ, ಈ ಬ್ರಹ್ಮಕ್ಕೆ ಏಲ್ಲೂ ದೇವಸ್ಥಾನವಿಲ್ಲ. ಕಾರಣ ಮುಂದೆ ನೀವು ನೋಡುವಿರಂತೆ.<br />ಉದಾಹರಣೆಗೆ :- ಸಂಸ್ಕೃತದಲ್ಲಿ ನಾನು ಈ ವಾಕ್ಯಗಳ ಬರೆಯಲು ಹೋಗಿಲ್ಲ ಕನ್ನಡದಲ್ಲಿಯೇ ಅರ್ಥಗಳನ್ನು ಮಾತ್ರ ಬರೆದಿದ್ದೇನೆ. <br /> ಓಂ ಎಂಬುವ ಪ್ರಣವ ಮಂತ್ರವು ಬ್ರಹ್ಮವೇ, ಆಕಾಶವು ಬ್ರಹ್ಮವೇ, ತೇಜಸ್ಸು ಬ್ರಹ್ಮವೇ, ಸತ್ಯ ಙ್ಞಾನ ಅನಂತವು ಬ್ರಹ್ಮವೇ, ಸ್ಮೃತಿಯು ಬ್ರಹ್ಮವೇ, ಪ್ರಾಣವು ಬ್ರಹ್ಮವೇ, ವಾಯುವು ಬ್ರಹ್ಮವೇ, ನೀನು ಬ್ರಹ್ಮವೇ, ನಾನು ಬ್ರಹ್ಮವೇ, ಈ ಆತ್ಮವು ಬ್ರಹ್ಮವೇ, ಪ್ರಙ್ಞಾನ ಬ್ರಹ್ಮವೇ, ಆಧಿತ್ಯನೂ ಬ್ರಹ್ಮವೇ, ಸುಖವು ಬ್ರಹ್ಮವೇ, ವಾಕ್ಕು ಬ್ರಹ್ಮವೇ, ಮನಸ್ಸು ಬ್ರಹ್ಮವೇ, ಸಂಕಲ್ಪವು ಬ್ರಹ್ಮವೇ, ಚಿತ್ತವು ಬ್ರಹ್ಮವೇ, ವಿಙ್ಞಾನವು ಬ್ರಹ್ಮವೇ, ಬಲವು ಬ್ರಹ್ಮವೇ, ಅನ್ನವು ಬ್ರಹ್ಮವೇ, ನೀರು ಬ್ರಹ್ಮವೇ, ಆಶೆಯು ಬ್ರಹ್ಮವೇ, ಕಣ್ಣು ಪರಮ ಬ್ರಹ್ಮವೇ, ಸತ್ಯವು ಪರಮ ಬ್ರಹ್ಮವೇ, ತಪಸ್ಸು ಬ್ರಹ್ಮವೇ, ಸರ್ವವು ಬ್ರಹ್ಮವೇ.<br /> "ಸರ್ವಂ ಖಿಲ್ವಿದಂ ಬ್ರಹ್ಮ" ಇದೆಲ್ಲಾವು ಬ್ರಹ್ಮ, " ಏತತ್ ಬ್ರಹ್ಮ ಅಪೂರ್ವಂ ಅನಪರಂವೊ ಅನಂತವೊ ಅಬಾಹ್ಯಂ", ಈ ಬ್ರಹ್ಮವು ಅಪೂರ್ವವೊ ಅನಪರವೊ ಅನಂತವೊ ಅಬಾಹ್ಯವೊ ಆಗಿದೆ. " ತತ್ ತ್ವಂ ಅಸಿ " ನೀನು ಅದೇ ಆಗಿದ್ದೀಯಾ. ಕಡೆಗೇ ಅಹಂ ಬ್ರಹ್ಮಾಸಿ ನಾನೇ ಬ್ರಹ್ಮ". ಈ ವೇಧಾಂತವನ್ನು ಶಂಕರಿಗೆ ಮುಂಚೆಯೇ ಬಹಳ ಜನ ಹೇಳಿದ್ದಾರೆ.<br /> ಈಗ ನಾನು ಹೇಳುವುದು ನಿಮ್ಮನ್ನು ಅಙ್ಞಾನದ ದೊಡ್ಡಕೂಪಕ್ಕೆ ತಳ್ಳಿದಂತೆ ನಿಮಗೆ ಭಾಸವಾಗಿರಬೇಕಲ್ಲವೇ, ಇದೇ ನಮ್ಮವರ ಶೂನ್ಯ ಸಂಪದ ಬ್ರಹ್ಮ. ಈಗಲೂ ನಮ್ಮದೇ ದೊಡ್ಡ ಧರ್ಮವೆಂದು ಸಾರುತ್ತಲಿ ಅದಕ್ಕಾಗಿ ಎಲ್ಲರು ಹೋರಾಡ ಬೇಕೆಂಬುದು ಸರಿಯಿಲ್ಲ. ಹೋರಾಟ ಮಾಡುವ ಅಙ್ಞಾನಿಗಳಿಗೆ ಧರ್ಮಾಂಧ ಮತಾಂಧರಾದ ಜನರಿಗೆ ಇದು ಅರ್ಥವಾದರೇ ಸರಿ ಎಂಬುದೇ ನನ್ನ ಅಭಿಲಾಷೆ.<br /> <br />ಸೂಚನೆ : - ಇದರ ಅರ್ಥಗಳು ಬೇರೆಯಿದ್ದಲ್ಲಿ ಬರೆಯಿರಿ ಬರೆದಿರುವುದರಲ್ಲಿ ತಪ್ಪುಗಳಿದ್ದಲ್ಲಿ ತಿದ್ದಿಕೊಳ್ಳುವುದು. agasyahttps://www.blogger.com/profile/18405268561694009749noreply@blogger.comtag:blogger.com,1999:blog-3011800053728614461.post-85040930561853994212014-07-20T22:49:36.560+05:302014-07-20T22:49:36.560+05:30ನಮ್ಮವರ ಶೂನ್ಯ ಸಂಪದ ಬ್ರಹ್ಮ.
...ನಮ್ಮವರ ಶೂನ್ಯ ಸಂಪದ ಬ್ರಹ್ಮ.<br /> <br /> ಬುದ್ಧನ ನಂತರ ಬಂದ ಶಂಕರರು ಅಂದರೇ, ಎಂಟನೇ ಶತಮಾನದ ನಂತರ ಉಪನಿಷದ್ ಮತ್ತು ಭಗವಧ್ಗೀತೆಯಲ್ಲಿ ಹೇಳಿರುವುದನ್ನು ಈ ಜಗತ್ತು ಪರಮಾತ್ಮ ಬ್ರಹ್ಮನ ಸೃಷ್ಟಿಯೆಂದೇ ಹೇಳಿದ್ದವು. ಅವುಗಳನ್ನು ತಿರಸ್ಕರಿಸಿ ವಿರುದ್ಧವಾಗಿ ಜಗತ್ತು ಒಂದು ಬ್ರಾಂತಿಯೆಂದು, ಈ ಉಪನಿಷದ್ ಮತ್ತು ಭಗವಧ್ಗೀತೆಯಲ್ಲಿ ಹೇಳಿರುವುದ ವಿರುದ್ಧವಾಗಿಯೂ, ನೈಜವಾದ ಬೌದ್ಧಧರ್ಮವನ್ನೇ ಹೀಯಾಳಿಸಿ, ತನ್ನದೇ ಆದ ಮತ ಸಿದ್ಧಾಂತವೆಂದೂ " ನಾಗಾರ್ಜುನ ಶೂನ್ಯವಾದವನ್ನೇ " ಮತ್ತೇ ಜಗತ್ತಿಗೆ ತೋರಿಸಿರುತ್ತಾರೆ. ಜಗತ್ತು ಮಿಥ್ಯೆ ಅಥವಾ ಮಾಯೇ, ಬ್ರಹ್ಮನಿಂದ ಅಥವಾ ದೇವರಿಂದ ಜಗತ್ತು ಸೃಷ್ಟಿಯಾಗಲಿಲ್ಲವೆಂದು ಹೇಳಿರುತ್ತಾರೆ. ಬ್ರಹ್ಮವೇ ಸತ್ಯವೆಂದು ಜಗತ್ತೇ ಬ್ರಹ್ಮ, ಬ್ರಹ್ಮವೇ ಜಗತ್ತು ಎರಡು ಒಂದೇ ಎಂಬ ಅದ್ವೈತ (ಎರಡಲ್ಲ ಒಂದು ) ಸಿದ್ಧಾಂತವನ್ನು ಕೊಟ್ಟಿರುತ್ತಾರೆ. ಕಲ್ಪನಾತೀತ ಜಗತ್ತು ಹಾಗು ಬ್ರಹ್ಮ ಸ್ವಯಂಭು. ತಾನೇ ತಾನಾಗಿಯೇ ಇದ್ದಿತು. ಅದೆಂದಿಗೂ ಹಾಗೇಯೇ ಇರುವಂತದು. ಅಹಂ ಬ್ರಹ್ಮಾಸ್ಮಿ ಅಂದರೇ, " ನಾನೇ ದೇವರಾಗಿದ್ದೇನೆ " ಅದರ ಹಿಂದೆ ದೊಡ್ಡ ಕಥೆಯೇ ಇದೆ. <br /> ಉದಾಹರಣೆಗೆ, ಜನಕ ಮಹಾರಾಜನ ಕಾಲದ ಕಥೆಯಲ್ಲಿ ಒಬ್ಬ ಜಡಭರತನೆಂಬ ಮಹಾಮೇಧಾವಿ, ಮಹಾಮುನಿ, ವೇಧಾಂತಿ ಬರುತ್ತಾನೆ. ಆತನೋ ಈ ಜಗತ್ತಿಗೆ ಅಂಟಿ ಕೊಂಡಿರುವುದುಲ್ಲ. ತಾನೊಬ್ಬನೇ ಇದ್ದು ಯಾರೊಂದಿಗೂ ಸಹವಾಸವಿಲ್ಲದೇ ಒಂಟಿಯಾಗಿ ತಮ್ಮ ಹೊಲದಲ್ಲಿಯೇ ಅಟ್ಟವನ್ನು ಮಾಡಿಕೊಂಡು ಅದರಲ್ಲಿ ಜೀವನ ನಡೆಸುತ್ತಿರುತ್ತಾನೆ. ತಾಯಿ, ಯಾರಾದರೂ ಊಟ ತಂದುಕೊಟ್ಟಲ್ಲಿ ತಿಂದು ಅಲ್ಲಿಯೇ ಮಲಗಿರುತ್ತಾನೆ. ಒಂದು ದಿನ ಜನಕ ಮಹಾರಾಜನನ್ನು ನೋಡಲು ಬಂದವ ರಾಜ ರಹುಗುಣ ಪಲ್ಲಕ್ಕಿ ಹೊರುವವರಲ್ಲಿ ಒಬ್ಬನಿಗೆ ತಾಳಲಾರದ ಹೊಟ್ಟೆ ನೋವಿನಿಂದ ನರಳುತ್ತಿರಲು. ಅಲ್ಲಿ ಹುಡುಕಲು ಬಲವಾದ ಗಟ್ಟಿಗನಾದ ಯುವಕನನ್ನು ಕಾಣುತ್ತಾರೆ. ಆತನನ್ನೇ ಪಲ್ಲಕ್ಕಿ ಹೊರಲು ಹೇಳುತ್ತಾರೆ. ವಿಧಿಯಿಲ್ಲದೇ ಒಪ್ಪಿಕೊಳ್ಳುತ್ತಾನೆ. ಹೊತ್ತು ಮುಂದೆ ನಡೆಯುವಲ್ಲಿ ಆಗಾಗ್ಗೆ ಪಲ್ಲಕ್ಕಿ ಏರಿಳಿತವಕಂಡು ರಹುಗುಣನು ಕೊಪಗೊಳ್ಳುತ್ತಾನೆ. ಅವನ ಅನುಚರರನ್ನು ಕೇಳುತ್ತಾನೆ. ಅವರು ಈ ಹೊಸದಾಗಿ ಬಂದ ಜಡಭರತನೇ ಹೀಗೆ ದಾಟಿ ದಾಟಿ ಹೆಜ್ಜೆಇಡುವುದರಿಂದ ಹೀಗಾಗುತ್ತಿದೆ ಎನ್ನಲು ವಿಷಯವರಿಯದೇ ಎಡಕಾಲಿನಿಂದ ಜಡಭರತನನ್ನು ಹೊದೆಯುತ್ತಾನೆ. ಆಗ ಕೆಳಗೆಬಿದ್ದ ಜಡಭರತನು ರಹುಗುಣನಿಗೆ ಒಂದು ಮಾತು ಪ್ರೆಶ್ನೆಯನ್ನು ಹೇಳುತ್ತಾನೆ ಕೇಳುತ್ತಾನೆ. ಅದೇನೆಂದರೇ, ನೀವು ನನ್ನ ಶರೀರವನ್ನು ಮಾತ್ರ ಹೊದೆಯಬಹುದೇ ಹೊರತು ನನ್ನನ್ನು ಮಾತ್ರ ನಿಮ್ಮಿಂದ ಹೊದೆಯಲು ಸಾಧ್ಯವೇಯಿಲ್ಲ ಎನ್ನುತ್ತಾನೆ. ಆಗ ಆಲ್ಲಿ ರಹುಗುಣ ರಾಜನೇ ಕುಸಿದು ಹೋಗುತ್ತಾನೆ. ಅಯ್ಯೋ ಎಂತಹ ತಪ್ಪುಮಾಡಿದೆ ಎಂದು ಪಲ್ಲಕ್ಕಿಯಿಂದ ಇಳಿದುಬಂದು ಜಡಭರತನ ಕಾಲಿಗೆ ಬೀಳುತ್ತಾನೆ. ತಾವು ಯಾರೆಂದು ಪ್ರೆಶ್ನಿಸುತ್ತಾನೆ. ಆಗ ಜಡಭರತನೆಂಬ ಈತನನ್ನೇ ತಾ ಹುಡುಕಿ ಬಂದುದಾಗಿ ಹೇಳಿ ಆತನ ಶಿಷ್ಯನಾಗುತ್ತಾನೆ.<br /> ಮುಂದೆ ಚಾಂಡಾಲನಿಂದ ಬುದ್ಧಿಯನ್ನು ಕಲಿತಿರುತ್ತಾರೆ. ಅದು ಹೇಗೆಂದರೇ, ಒಂದು ಸಂದರ್ಭದಲ್ಲಿ ಆಗಿನ ಕಾಲದಲ್ಲಿ ಕಾಲುದಾರಿ ಒಂದು ಒಣಿಯಲ್ಲಿ ಅಲ್ಲಿ ಶಂಕರಾಚಾರ್ಯರ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರಲು ಒಬ್ಬ ಚಾಂಡಾಲನು ಎದುರಾಗುತ್ತಾರೆ. ಅವನಿಗೆ ಶಂಕರರ ಶಿಷ್ಯರು ದಾರಿಬಿಡಿ, ದಾರಿಬಿಡಿ ಗುರುಗಳು ಬರುತ್ತಿದ್ದಾರೆ ಎಂದು ಕೂಗುತಿರುತ್ತಾರೆ. ಈ ಚಾಂಡಾಲನು ದಾರಿಯನ್ನು ಕೊಡುವುದಿಲ್ಲ ಆಗ ಏಕೆಂದು ಕೇಳಲಾಗಿ ಅವನು ಹೇಳುತ್ತಾನೆ. ನಿಮ್ಮ ಗುರುಗಳು ನನ್ನ ಪ್ರೆಶ್ನೇಗೆ ಉತ್ತರಿಸಿದರೇ ಮಾತ್ರವೇ ದಾರಿಕೊಡುತ್ತೇನೆ ಎನ್ನುತ್ತಾನೆ. ಇವರಿಗೆ ಎಲ್ಲಿಲ್ಲದ ಆಶ್ಚರ್ಯ, ಕೋಪ ಕಿಡಿಕೆಂಡವಾಗುತ್ತಾರೆ. ಆತನೋ ಬಲಶಾಲಿಯಾಗಿದ್ದಾನೆ. ಜೋತೆಗೆ ಅವನಲ್ಲಿ ಹೆಂಡದ ಮಡಿಕೆಯಿದೆ ನಾಲ್ಕು ನಾಯಿಗಳಿದೆ. ಶಿಷ್ಯರು ಆತನನ್ನು ಮುಟ್ಟುವಂತಿಲ್ಲ ಬೇರೆ ದಾರಿಕಾಣದೇ ಕೇಳಲು ಒಪ್ಪುತ್ತಾರೆ. ಆತನೋ ಮಹಾವೇಧಾಂತಿ ಬಹುಙ್ಞಾನವಂತ ( ಬೆಸ್ತ ವ್ಯಾಸರಂತೆ, ದರೋಡೆಕೊರ ವಾಲ್ಮೀಕಿಯಂತೆ ) ಅವನು ಶಂಕರರನ್ನು ಕುರಿತು " ನಾನು ನಿಮಗೆ ದಾರಿ ಬಿಡಬೇಕೆ ?. ಅಥವಾ ನನ್ನ ಶರೀರ ನಿಮಗೆ ದಾರಿಬಿಡಬೇಕೆ ? ". ಎನ್ನುತ್ತಾನೆ. ಶಂಕರರೋ ಭೂಮಿಗೆ ಇಳಿದುಬಿಡುತ್ತಾರೆ. ಹೇಳಲು ದಾರಿ ಕಾಣದೇ ಅತನ ಕಾಲಿಗೆಬಿದ್ದು ನಮಸ್ಕರಿಸಿ ತಪ್ಪೊಪ್ಪಿಕೊಳ್ಳುತ್ತಾರೆ. ಆದರೋ ಶಂಕರರು ಜಟ್ಟಿ ಕೆಳಗೆಬಿದ್ದರು ಮಣ್ಣಾಗಲಿಲ್ಲವೆನ್ನುವಂತೆ ಆತನೇ ಶಿವನೆಂದು ಚಾಂಡಾಲ ರೂಪದಲ್ಲಿ ಕಾಣಿಸಿಕೊಂಡನೆಂದು ಆತನ ಕೈಯಲ್ಲಿನ ಕೊಲೇ ತ್ರೀಶೂಲವೆಂದು ನಾಲ್ಕು ನಾಯಿಗಳೇ ನಾಲ್ಕು ವೇದಗಳೆಂದು. ಮಡಿಕೆಯ ಹೆಂಡವೇ ಅಮೃತವೆಂದು ಬುರುಡೆಯನ್ನು ಬಿಟ್ಟಿರುತ್ತಾರೆ.<br /> ಹೊಲಸಾದ ಮನುಸ್ಮೃತಿಯನ್ನು ಒಪ್ಪಿಕೊಂಡಿರುತ್ತಾರೆ. ಪ್ರತಿಯೊಂದು ಮಾತಿನಲ್ಲಿಯು ಈ ಐಹಿಕ ಜಗತ್ತಿಗೆ ಔಷದವಿದ್ದಂತೆ ಎಂದು ಘೋಷಿಸಿದ್ದಾರೆ. ಶೂದ್ರನ ಬಾಳು ಸಂಕಷ್ಟದಲ್ಲಿಯೇ ಇರಬೇಕು. ಅವನಿಗೆ ಮೋಕ್ಷವು ಲಭ್ಯವೇಯಿಲ್ಲ ವೆಂದಿರುತ್ತಾರೆ. ಏಕೆಂದರೆ, ಅವನಿಗೆ ವೇದದ ಪಾಠಕ್ಕೆ ಪ್ರವೇಶವಿಲ್ಲ ವೆಂದಿರುತ್ತಾರೆ. ವೇದ ಪಠಣವೇನಾದರೂ ಮಾಡಿದರೆ ಶೂದ್ರನ ನಾಲಿಗೆಯನ್ನು ಕತ್ತರಿಸಬೇಕು ವೇದಗಳನ್ನು ಕೇಳಿದರೇ ಕಿವಿಗೆ ಸೀಸವನ್ನು ಕಾಸಿ ಕಿವಿಗಳಿಗೆ ತುಂಬಬೇಕು ಎಂದು ಹೇಳುವ ಮನುವನ್ನು ಸಮರ್ಥಿಸುತ್ತಾರೆ.<br /> ಈ ಸಿದ್ಧಾಂತವನ್ನೇ ತಾವು ಸೃಷ್ಟಿಸಿದ ಅದ್ವೈತ ಸಿದ್ಧಾಂತವೆಂದು ಹೇಳಿರುತ್ತಾರೆ. ಇದರಲ್ಲಿ ನಾಗಾರ್ಜುನನ ಶೂನ್ಯ ಸಿದ್ಧಾಂತವಿದೆ. ಜೋತೆಗೆ ಜಡಭರತನ ಅಹಂ ಬ್ರಹ್ಮಾಸ್ಮಿಯು ಸೇರಿದೆ. ಅದನ್ನು ಸಹಿಸದ ಮಧ್ವರ ಅನುಯಾಯಿಗಳು ಇವರನ್ನು ಸಂಕರಾಚಾರ್ಯರು ( ಬೆರೆಕೆಹುಟ್ಟಿನವರೆಂದು ) ಮೊದಲಿಸಿದರು. ಹಾಗಾದರೇ, ಇವರ ಕಂಡ ಹೊಸ ಸಿದ್ಧಾಂತವಾವುದು ಅರಿಯದಾಗಿದೆ. <br />ಬ್ರಹ್ಮವೆಂದರೇನು ?<br /> agasyahttps://www.blogger.com/profile/18405268561694009749noreply@blogger.comtag:blogger.com,1999:blog-3011800053728614461.post-66237508707704684872013-12-03T15:38:12.097+05:302013-12-03T15:38:12.097+05:30thank you sir, very much narrated and well explain...thank you sir, very much narrated and well explained. please continue to send the mails.<br />-Vishnumoorthy BhatAnonymousnoreply@blogger.com