tag:blogger.com,1999:blog-3011800053728614461.post4943549406089647142..comments2024-02-22T22:05:54.275+05:30Comments on ವೇದಸುಧೆ: ದೇವಾಲಯಗಳ ಹಿನ್ನೆಲೆUnknownnoreply@blogger.comBlogger1125tag:blogger.com,1999:blog-3011800053728614461.post-7403364512864780622012-08-01T19:23:07.350+05:302012-08-01T19:23:07.350+05:30ಶರ್ಮರವರು ತಿಳಿಸಿರುವ ವಿಷಯ ಅತಿ ಸ್ಪಷ್ಟವಾಗಿದೆ. ದೇವಸ್ಥಾನ...ಶರ್ಮರವರು ತಿಳಿಸಿರುವ ವಿಷಯ ಅತಿ ಸ್ಪಷ್ಟವಾಗಿದೆ. ದೇವಸ್ಥಾನ ವೆಂದರೆ,ಈಗ ಪರಮಾತ್ಮನು ನೆಲಸಿರುವ ಸ್ಥಾನ ವೆಂದಾಗಿದೆ. ಫರಮಾತ್ಮನು ಸರ್ವವ್ಯಾಪಿಯಾರಗಿರುವಾಗ ಅವನು ಈಗ ಪ್ರಸ್ಥಾಪಿಸಲ್ಪಡುತ್ತಿರುವ ದೇವಸ್ಥಾನದಲ್ಲೂ ಇದ್ದಾನೆ. ಆದರೆ ದೇವ ಸ್ಥಾನದ ಮೂಲ ಅರ್ಥ ದೇವರುಗಳ ಸ್ಥಾನ ಎಂದು. ಇಲ್ಲಿ "ದೇವ" ಎಂದರೆ, ವಿದ್ವಾಂಸ ಎಂದರ್ಥ. ದೇವಸ್ಥಾನಗಳು ವಿದ್ವಾಂಸರು ಇರುವ ಸ್ಥಾನ ವಾಗಿದ್ದು ಅವರು ಈ ಸಮುದಾಯಗಳ ಭವನಗಳ ಮೂಲಕ ಹಿಂದೆ ಜನತೆಗೆ ಮಾರ್ಗದರ್ಶನ ಮಾಡುತ್ತಿದ್ದರು. ಆದರೆ, ಈ ಭಾವಾರ್ಥ ಈಗ ಲುಪ್ತವಾಗಿರುವುದು ತುಂಬಾ ದುಃಖತರುವ ಸಂಗತಿ. ಅದರ ಬದಲಾಗಿ ಅಲ್ಲಿ ಎಲ್ಲ ಮೌಢ್ಯಗಳ ವಾಸಸ್ಥಾನವಾಗಿದೆ. ಉದಾಹರಣೆ ತಿರುಪತಿಯಲ್ಲಿ ನಡೆಯುತ್ತಿರುವ ಜಾತ್ರೆಯಾದರೆ ಕನ್ನಡದ ನಾಡಿನಲ್ಲಿ ನಡೆಯುತ್ತಿರುವ "ಮಡೆಸ್ನಾನ."<br />ಈ ಸಂದರ್ಭದಲ್ಲಿ ಸುಮಾರು 1960 ರ ದಶಕದಲ್ಲಿ ನಡೆದ ಒಂದು ಘಟನೆ ಜ್ಞಾಪಕಕ್ಕೆ ಬರುತ್ತದೆ. ಪುರಿಯಲ್ಲಿ ಭಾರತೀಯ ಜನಸಂಘ ಪಕ್ಷದ ಒಂದು ಸಭೆಯಲ್ಲಿ ಅದರ ಅಖಿಲ ಭಾರತ ಕಾರ್ಯದರ್ಶಿಯಾಗಿದ್ದ ದೀನ ದಯಾಳು ಉಪಾಧ್ಯಾಯರು ಭಾಗವಹಿಸಿದ್ದರು. ಕಾರ್ಯಕರ್ತರ ಒತ್ತಾಯದ ಮೇಲೆ ಪುರಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ದೇವಸ್ಥಾನದಿಂದ ಹೊರಬಂದ ಮೇಲೆ ಪತ್ರಕರ್ತರು ಅವರನ್ನು ದೇವಸ್ಥಾನದಲ್ಲಿ ತಮ್ಮ ಅನುಭವ ಹೇಗಿತ್ತೆಂದು ಪ್ರಶ್ನಿಸಿದರು. ಉಪಾದ್ಯಾಯರು ತುಸು ಹೊತ್ತು ಯೋಚಿಸಿ ಮಾರ್ಮಿಕವಾಗಿ ಹೇಳಿದರು " ದೇವಸ್ಥಾನಕ್ಕೆ ಹೋಗುವ ಮುನ್ನ ನಾನು ಒಬ್ಬ ಸಂಪ್ರದಾಯವಾದೀ ಸನಾತನೀ ಹಿಂದು ವಾಗಿದ್ದೆ, ದೇವಸ್ಥಾನವನ್ನು ಸಂದರ್ಶಿಸಿ ಬಂದ ಮೇಲೆ ನಾನು ಈಗ ಪೂರಾ ಆರ್ಯ ಸಮಾಜೀಯಾಗಿದ್ದೇನೆ ಎಂದರು' ನಮ್ಮ ದೇವಸ್ಥಾನಗಳು ಅದರ ಮೂಲ ಉದ್ದೇಶ್ಯವನ್ನು ಮರೆತು ಅನೇಕ ಶತಮಾನಗಳೇ ಕಳೆದಿವೆ. ಅವು ಜ್ಞಾನವನ್ನು ಪ್ರಸಾರ ಮಾಡುವುದನ್ನು ಮರೆತು ಹೋಟಲ್ ಕೆಲಸ ಮಾಡುತ್ತಿವೆ. ಅದು ಸಂಘಟನೆಯ ಕೇಂದ್ರವಾಗಿಲ್ಲದೆ ಸಮಾಜವನ್ನು ಒಡೆಯುವ ಕಾರ್ಯದಲ್ಲಿ ನಿರತವಾಗಿದೆ. ಇಂದು ಅನೇಕ ಕಡೆ ದಲಿತರಿಗೆ ಪ್ರವೇಶ ನೀಡದಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಶೋಷಣೆಯ ಮಹಾ ಕೇಂದ್ರವಾಗಿ ಈಗ ಹಳೆಯ ಮತ್ತು ನವ ನವೀನ ದೇವಸ್ಥಾನಗಳು ಹೊರಹೊಮ್ಮಿವೆ.<br /> ಇಂತಹ ವಾತಾವರಣದಲ್ಲಿ ಶರ್ಮರವರು ಮಾತುಗಳು ಬರಗಾಲದಲ್ಲಿ ಒಮ್ಮೆಲೆ ಮಳೆ ಬಂದಂತೆ ಭಾಸವಾಗಿ ನಮಗೆ ಸಂತೋಷವನ್ನು ತರುತ್ತದೆ.Anonymoushttps://www.blogger.com/profile/03711259566952464462noreply@blogger.com