Pages

Monday, April 19, 2010

ಆತ್ಮಜ್ಞಾನದಿಂದ ಮುಕ್ತಿಯೇ ಹೊರತು ಮುಂಡನದಿಂದಲ್ಲ

ದಾನೇನ ಪಾಣಿರ್ನ ತು ಕಂಕಣೇನ
ಸ್ನಾನೇನ ಶುದ್ಧಿರ್ನ ತು ಚಂದನೇನ|
ಮಾನೇನ ತೃಪ್ತಿರ್ನ ತು ಭೋಜನೇನ
ಜ್ಞಾನೇನ ಮುಕ್ತಿರ್ನ ತು ಮುಂಡನೇನ||

ದಾನದಿಂದ ಕೈ ಶೋಭಿಸುತ್ತದೆಯೇ ಹೊರತು ಬಳೆಯಿಂದಲ್ಲ
ಸ್ನಾನದಿಂದ ಶುದ್ಧಿಯೇ ಹೊರತು ಗಂಧ-ಚಂದನ ಲೇಪನದಿಂದಲ್ಲ
ಸ್ವಾಭಿಮಾನದಿಂದ ತೃಪ್ತಿಯೇ ಹೊರತು ಭೋಜನದಿಂದಲ್ಲ
ಆತ್ಮಜ್ಞಾನದಿಂದ ಮುಕ್ತಿಯೇ ಹೊರತು ಮುಂಡನದಿಂದಲ್ಲ.

ದಾನದಿಂದ ಕೈಗಳಿಗೆ ಶೋಭೆ ಬರುತ್ತದೆಯೇ ಹೊರತು ಮೈಮೇಲೆ ಚಿನ್ನದಾಭರಣ ಹಾಕಿಕೊಂಡು ಇತರರಿಗೆ ತೋರಿಸಿಕೊಂಡರೆ ಶೋಭಿಸುವಿದಿಲ್ಲ. ಸ್ನಾನವನ್ನೇ ಮಾಡದೆ ಮೈಗೆ ಸೆಂಟ್ ಬಳಿದುಕೊಂಡರೆ ಸಾಕೇ? ಶುದ್ಧನೀರಿನಿಂದ ಸ್ನಾನ ಮಾಡಿದಾಗ ಮಾತ್ರ ಶರೀರ ಶುದ್ಧವಾಗುತ್ತದೆ. ಮನಶುದ್ಧಿಯ ವಿಚಾರವೇ ಬೇರೆ. ವಿದ್ವಾಂಸರಿಗೆ ಸನ್ಮಾನದಿಂದ ತೃಪ್ತಿಯೇ ಹೊರತು ಪುಷ್ಕಳವಾದ ಭೋಜನದಿಂದಲ್ಲ. ಊಟ ಹೊಟ್ಟೆ ತುಂಬಲು ಮಾತ್ರ. ಕೇವಲ ತಲೆಬೋಳಿಸಿಕೊಂಡು ಕಾವಿ ಉಟ್ಟರೆ ಸಾಲದು ಆತ್ಮಜ್ಞಾನವನ್ನು ಪಡೆದುಕೊಂಡರೆ ಮಾತ್ರವೇ ಮುಕ್ತಿ.
-