Pages

Saturday, February 20, 2016

ಹೀಗೊಂದು ವೇದೋಕ್ತ ಉಪನಯನ



     ಬೇಲೂರು ತಾಲ್ಲೂಕಿನ ಆಂದಲೆ ಗ್ರಾಮದ ಶ್ರೀ ಕೃಷ್ಣಮೂರ್ತಿ ಶನಿದೇವಾಲಯದ ಅರ್ಚಕರು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ಬೇಲೂರಿನ ಮಿತ್ರರಿಂದ ತಿಳಿದು ದೂರವಾಣಿ ಮೂಲಕ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಕೆಲವು ದಿನಗಳ ಹಿಂದೆ ಸಂಪರ್ಕಿಸಿದರು. ದಲಿತ ಸಮುದಾಯಕ್ಕೆ ಸೇರಿದ ಅವರು ತಮ್ಮ ಮಗ ಚಂದನನಿಗೆ ವೇದೋಕ್ತವಾಗಿ ಉಪನಯನ ಮಾಡಿಸುವ ತಮ್ಮ ಮನದ ಆಸೆಯನ್ನು ಹಂಚಿಕೊಂಡರು. ಸ್ವತಃ ಹಾಸನಕ್ಕೆ ಬಂದು ಮಾತನಾಡಿ ತಮ್ಮ ಇಚ್ಛೆಯನ್ನು ಪುನರುಚ್ಛರಿಸಿದರು. ವೇದಭಾರತಿಯ ಕಾರ್ಯಕರ್ತರು ಇದಕ್ಕೆ ಒಪ್ಪಿದರು. ಅದರಂತೆ ದಿನಾಂಕ 19.02.2016ರಂದು ಗ್ರಾಮದಲ್ಲಿ ಈ ಕಾರ್ಯ ಮಾಡುವುದೆಂದೂ ನಿಶ್ಚಯವಾಯಿತು. ಉತ್ಸಾಹಿ ಕೃಷ್ಣಮೂರ್ತಿಯವರು ಗ್ರಾಮದ ದೇವಸ್ಥಾನದ ಪಕ್ಕದ ಅರಳಿಮರದ ನೆರಳಿನಲ್ಲಿ ಶಾಮಿಯಾನಾ ಹಾಕಿಸಿದರು. ಉಪನಯನಕ್ಕೆ ಅಗತ್ಯದ ಎಲ್ಲಾ ಸಿದ್ಧತೆಗಳನ್ನೂ ವಿವರಗಳನ್ನು ಕೇಳಿ ಮಾಡಿಕೊಂಡಿದ್ದರು. ಗ್ರಾಮಸ್ಥರು, ಬಂಧುಗಳನ್ನು ಆಹ್ವಾನಿಸಿದ್ದರು. 

     ಹಾಸನದಿಂದ ಶ್ರೀಧರ್, ನಾನು, ಸತೀಶ, ರಾಜಶೇಖರ್ ಮತ್ತು ವೇದಾಧ್ಯಾಯಿ ಶ್ರೀ ನವೀನ ಬೆಳಿಗ್ಗೆ 8ರ ವೇಳೆಗೆ ಸ್ಥಳ ತಲುಪಿದಾಗ ಅಲ್ಲಿನ ಹಬ್ಬದ ವಾತಾವರಣ ಕಂಡು ಹರ್ಷಿತರಾದೆವು. ಶ್ರೀ ನವೀನರು ವೇದೋಕ್ತ ರೀತಿಯಲ್ಲಿ ಉಪನಯನ ಕಾರ್ಯ ನಡೆಸಿಕೊಟ್ಟರು. ಸಹಕಾರಿಗಳಾಗಿ ನಾವು ಜೊತೆಯಲ್ಲಿದ್ದೆವು. ಪ್ರತಿ ಕ್ರಿಯೆಯನ್ನೂ ಶ್ರದ್ಧೆಯಿಂದ ಮಾಡುತ್ತಿದ್ದ ವಟು ಚಂದನ್ ಮತ್ತು ಅವನ ತಂದೆ-ತಾಯಿಯರು ಋತ್ವಿಕರು ಪ್ರತಿ ಮಂತ್ರದ ಅರ್ಥ, ಉದ್ದೇಶಗಳನ್ನು ವಿವರಿಸುತ್ತಿದ್ದುದನ್ನು ಗಮನವಿಟ್ಟು ಕೇಳುತ್ತಿದ್ದುದು ವಿಶೇಷವಾಗಿತ್ತು. ಹಾಜರಿದ್ದ ಗ್ರಾಮಸ್ಥರೂ ಸಹ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು.

     ಯಜ್ಞೋಪವೀತ ಧಾರಣೆಯಾದ ನಂತರದಲ್ಲಿ ಶ್ರೀ ನವೀನರು ಮಾತನಾಡಿ ಉಪನಯನವೆಂದರೆ 'ಹತ್ತಿರಕ್ಕೆ ಕರೆದೊಯ್ಯುವುದು' ಎಂದು ಅರ್ಥ, ಅಂದರೆ ವಟುವನ್ನು ಗುರುಗಳ ಹತ್ತಿರ ವೇದಾಧ್ಯಯನ ಮತ್ತು ಜ್ಞಾನಸಂಪಾದನೆ ಸಲುವಾಗಿ ಕರೆದೊಯ್ಯುವ ಕ್ರಿಯೆಯಾಗಿದೆ. ವೇದ ಎಂಬ ಪದದ ಅರ್ಥ ಸಹ ಜ್ಞಾನ ಎಂಬುದೇ ಆಗಿದೆ. ಅಗ್ನಿಸಾಕ್ಷಿಯಾಗಿ, ಸೂರ್ಯ, ಚಂದ್ರ, ಸಕಲ ದೇವತೆಗಳ ಸಾಕ್ಷಿಯಾಗಿ, ಗುರು-ಹಿರಿಯರ ಸಾಕ್ಷಿಯಾಗಿ ಸತ್ಯಪಥದಲ್ಲಿ ನಡೆಯತ್ತೇನೆ, ಸಮಾಜಕ್ಕೆ ಹಿತಕಾರಿಯಾಗಿ ಬಾಳುತ್ತೇನೆ ಎಂದು ಈ ಸಂದರ್ಭದಲ್ಲಿ ಸಂಕಲ್ಪವನ್ನೂ ಮಾಡಬೇಕಾಗುತ್ತದೆ ಎಂದರಲ್ಲದೆ ಧರಿಸುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ನೆನಪಿಸುವ, ಸತ್ಯಪಥದಲ್ಲಿ ಸಾಗಬೇಕೆಂಬುದನ್ನು ನೆನಪಿಸುವ ಸಾಧನವಾಗಿದೆಯೆಂದರು. ಎಲ್ಲಾ ಮಾನವರಿಗೂ ವೇದಾಧ್ಯಯನ ಮಾಡಲು ಮತ್ತು ಉಪನಯನ ಸಂಸ್ಕಾರ ಪಡೆಯಲು ಅಧಿಕಾರವಿದೆಯೆಂದರು.

      ಹರಿಹರಪುರ ಶ್ರೀಧರ್, "ನಾವೆಲ್ಲರೂ ಭೂತಾಯಿಯ ಮಕ್ಕಳು, ಸೋದರರಂತೆ ಬಾಳಬೇಕು, ಅಸಮಾನತೆಗೆ ಅವಕಾಶವಿಲ್ಲವೆಂದು ಸಾರಿ ಹೇಳುವ ವೇದಮಂತ್ರದ ಉದಾಹರಣೆಯೊಂದಿಗೆ ಹುಟ್ಟಿನಿಂದ ಯಾರೂ ಶ್ರೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ; ನಮ್ಮ ನಡವಳಿಕೆ ಮತ್ತು ಕರ್ಮಗಳಿಗೆ ಅನುಸಾರವಾಗಿ ಯೋಗ್ಯತೆ ಬರುತ್ತದೆ; ವೇದಭಾರತಿ ಹಲವು ವರ್ಷಗಳಿಂದ ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಸಕ್ತ ಎಲ್ಲರಿಗೂ ವೇದವನ್ನು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಸಾಮರಸ್ಯ ಸಾರುವ ಕಾರ್ಯಗಳು ನಮ್ಮನಮ್ಮಲ್ಲಿ ಬಾಂಧವ್ಯವನ್ನು ಹೆಚ್ಚಿಸಲು ಸಹಕಾರಿ" ಎಂದು ಅಭಿಪ್ರಾಯಪಟ್ಟರು. ಕವಿನಾಗರಾಜರು ಮಾತನಾಡಿ, "ವೇದಭಾರತಿ ಸಮಾಜಮುಖಿಯಾದ ಯಾವುದೇ ಚಟುವಟಕೆಗಳನ್ನು ಯಾರೇ ಮಾಡಲಿ, ಅವರೊಂದಿಗೆ ಕೈಜೋಡಿಸುತ್ತದೆ. ನೀವುಗಳೂ ಸಹ ವೇದಭಾರತಿಯೊಂದಿಗೆ ಕೈಜೋಡಿಸಿದರೆ ಉತ್ತಮ ಕಾರ್ಯಗಳಿಗೆ ಉತ್ತೇಜನ ದೊರೆಯುತ್ತದೆ" ಎಂದರು.

     ಹರ್ಷಭರಿತರಾಗಿದ್ದ ವಟುವಿನ ತಂದೆ ಕೃಷ್ಣಮೂರ್ತಿಯವರು ಮನದುಂಬಿ ಹೇಳಿದ ಮಾತುಗಳಿವು: "ನಮಗೆ ಇಂದು ಅತ್ಯಂತ ಸಂತೋಷವಾಗಿದೆ. ಯಾವುದೇ ಸಂಕೋಚ, ತಾರತಮ್ಯವಿಲ್ಲದೆ ನಮ್ಮನ್ನೂ ತಮ್ಮವರಂತೆ ಭಾವಿಸಿ ಉಪನಯನ ಮಾಡಿಸಿರುವುದಕ್ಕೆ ವೇದಭಾರತಿಯವರಿಗೆ ಆಭಾರಿಯಾಗಿದ್ದೇನೆ. ನಮ್ಮಲ್ಲೂ ಸಹ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ತಾಮಸ ಆಹಾರವನ್ನು ಬಿಟ್ಟು, ಸಾತ್ವಿಕ ಆಹಾರ ಸೇವಿಸುವುದು, ನಮ್ಮ ಜೀವನದ ರೀತಿಗಳಲ್ಲಿ ಬದಲಾವಣೆ ಮಾಡಿಕೊಂಡು ಶುದ್ಧಜೀವನ ನಡೆಸುವ ಬಗ್ಗೆ ಗಮನಕೊಡಬೇಕು. ನಮ್ಮ ಅನೇಕ ಬಂಧುಗಳು ಆಮಿಷಕ್ಕೊಳಗಾಗಿ ಅನ್ಯಮತಗಳಿಗೆ ಮತಾಂತರ ಹೊಂದಿದ್ದಾರೆ. ಈಗ ಹೇಳಿದಂತೆ ವೇದದ ಆಶಯದಂತೆ ಒಳ್ಳೆಯ ರೀತಿಯಲ್ಲಿ ಎಲ್ಲರೂ ನಡೆದರೆ ಹಿಂದೂಧರ್ಮದ ಉಳಿವಿಗೆ ಸಹಾಯವಾಗುತ್ತದೆ. ಮತಾಂತರಗಳನ್ನು ತಡೆಯಲು ಹಿಂದಿನಿಂದಲೂ ನನ್ನ ಕೈಲಾದ ಪ್ರಯತ್ನ ಮಾಡುತ್ತಲೇ ಇದ್ದೇನೆ. ಇನ್ನು ಮುಂದೆಯೂ ಈ ಕೆಲಸ ಮುಂದುವರೆಸುತ್ತೇನೆ." 
     ವೇದಾಭಿಮಾನಿಗಳು, ಹಿರಿಯರು ವಟುವಿಗೆ ಆಶೀರ್ವದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಭೋಜನ ಸ್ವೀಕರಿಸಿ ಒಳ್ಳೆಯ ಕೆಲಸವಾಯಿತೆಂಬ ಭಾವದೊಂದಿಗೆ ಹಾಸನಕ್ಕೆ ಹಿಂತಿರುಗಿದೆವು.
-ಕ.ವೆಂ.ನಾಗರಾಜ್.
*****************
ಚಿತ್ರಕೃಪೆ: ಹರಿಹರಪುರ ಶ್ರೀದರ್.




   

ಭಾರತ ಮೊದಲು !


ಇದೆಂತಾ ಪ್ರಾಜಾಪ್ರಭುತ್ವ?

ದೇಶದ ವಿರುದ್ಧವಾಗಿ ಘೋಷಣೆ ಕೂಗುವುದನ್ನು ಸಹಿಸಬೇಕು!

ಯಾವ ನೆಲದಲ್ಲಿ ಹಸುವನ್ನು ಗೋಮಾತೆ ಎಂದು ಪೂಜಿಸುತ್ತೇವೋ ಅದೇ ನೆಲದಲ್ಲಿ ಅದರ ಮಾರಣಹೋಮವನ್ನು ನೋಡಬೇಕು!

ಬಾಂಬ್ ಸಿಡಿಸಿ ಅಮಾಯಕರನ್ನು ಹತ್ಯೆ ಮಾಡುವ ರಕ್ಕಸರನ್ನು ಗಲ್ಲಿಗೇರಿಸಿದರೆ ಅದರ ವಿರುದ್ಧ ಪ್ರತಿ ಭಟಿಸಿದವರನ್ನು ಸಹಿಸಿಕೊಳ್ಳ ಬೇಕು!!

ಛೇ! ಛೇ!!
ಅತಿಯಾಯ್ತು!


ಈ ಪ್ರಜಾಬ್ರಭುತ್ವ ವ್ಯವಸ್ಥೆಯಲ್ಲಿ ಇನ್ನೂ ಎಷ್ಟು ಜನರ ಮಾರಣ ಹೋಮ ನಡೆಯಬೇಕಾಗಿದೆ?

ಇನ್ನೂ ಎಷ್ಟು ಗೋಮಾತೆಯ ಹತ್ಯೆಯಾಗಬೇಕಾಗಿದೆ?

ಇನ್ನೂ ಎಷ್ಟು ಮಾತೆಯರ ಮೇಲೆ ಅತ್ಯಾಚಾರ ನಡೆಯಬೇಕಾಗಿದೆ?

ಇನ್ನೂ ಎಷ್ಟು ಪ್ರಾಣಿಗಳ ಮತ್ತು ಮನುಷ್ಯರ ರಕ್ತ ರಸ್ತೆಯಲ್ಲಿ ಹರಿಯಬೇಕಾಗಿದೆ??


ಮನುಷ್ಯಮಾತ್ರದವನು ಇನ್ನು ಸಹಿಸಲು ಸಾಧ್ಯವಿಲ್ಲ!

ಮೋದಿಯವರು ಇನ್ನು ಸುಮ್ಮನಿರಬೇಕಾಗಿಲ್ಲ!


ಪ್ರಧಾನ ಮಂತ್ರಿಗಳೇ,


ನಿಮ್ಮನ್ನು ಈ ದೇಶದ ದೇಶಭಕ್ತರೇ ಆರಿಸಿದ್ದು !! ದೇಶವನ್ನು ತಲ್ಲಣಗೊಳಿಸುತ್ತಿರುವ, 0.001% ಕ್ಕೂ ಕಮ್ಮಿ ಇರುವ ದೇಶದ್ರೋಹಿಗಳಿಂದ ನೀವು ಆರಿಸಿ ಬಂದಿಲ್ಲ!!


ಇನ್ನು ಯಾಕೆ ತಡ ಮಾಡುತ್ತಿದ್ದೀರಿ?

ನಿಮ್ಮ ಅಂತಿಮ ಅಸ್ತ್ರ ಪ್ರಯೋಗಿಸಲು ಕಾಲ ಪಕ್ವವಾಗಿದೆ!


* ಇನ್ನು ಮುಂದೆ ಭಾರತದ ಯಾವ ಮೂಲೆಯಲ್ಲೂ ಅಮಾಯಕರು ಕಣ್ಣೀರು ಹಾಕಬಾರದು.

* ಅತ್ಯಾಚಾರ ನಡೆಯಬಾರದು

* ಪ್ರಾಣಿಗಳ ರಕ್ತ ರಸ್ತೆಯಲ್ಲಿ ಹರಿಯಬಾರದು

* ಭಯೋತ್ಪಾದಕರ ನಿರ್ನಾಮವಾಗಬೇಕು


ಪೇಲಿಸರಿಗೆ ಮತ್ತು ನಮ್ಮ ದೇಶವನ್ನು ಕಾಯುವ ಸೈನಿಕರಿಗೆ ಆತ್ಮಬಲವನ್ನು ತುಂಬುವ ಕೆಲಸವಾಗಬೇಕು. ದೇಶದ್ರೋಹಿಗಳ ಚಟುವಟಿಕೆಗಳ ಮೆಲೆ ನಿರಂತರ ಕಣ್ಣಿಡಲು ಗುಪ್ತಚರ ಇಲಾಖೆಯ ಸಾಮರ್ಥ್ಯವನ್ನು ಹೆಚ್ಚಿಸಿ. ಅತ್ಯಂತ ಸೂಕ್ಷ್ಮವಾದ ಮತ್ತು ಹೆಚ್ಚು ಸಾಮರ್ಥ್ಯ ಉಳ್ಳ ಸಲಕರಣೆ ಗಳನ್ನು ನಮ್ಮ ಗುಪ್ತಚರ ಇಲಾಖೆಗೆ ಒದಗಿಸಿ,ದೇಶದ ಸಾರ್ವಭೌಮತ್ವಕ್ಕೆ, ಅಖಂಡತೆಗೆ, ಶಾಂತಿಗೆ ಬಂಗ ತರುವಂತಹ ಯಾವುದೇ ವ್ಯಕ್ತಿಯನ್ನು ಆಧಾರ ಸಹಿತ ಅರೆಸ್ಟ್ ಮಾಡಲು ಆದೇಶ ಕೊಡಿ. ಯಾವುದೇ ವಿಚಾರಧಾರೆಯ ಛತ್ರಿಯಡಿಯಲ್ಲಿ ದೇಶದ್ರೋಹಿಗಳು ರಕ್ಷಣೆ ಪಡೆಯಬಾರದು. ಹಾಗೆ ಆದೇಶ ಹೊರಡಿಸಿ.


ಭಾರತ ಮೊದಲು !

ದೇಶದ ಅಖಂಡತೆಗೆ ಪ್ರಥಮ ಪ್ರಾಶಸ್ತ್ಯ!

ಅಮಾಯಕರ ನೆಮ್ಮದಿಯೇ ಸರ್ಕಾರದ ಗುರಿಯಾಗಲಿ!

ನಮ್ಮ ದೇಶದ ಎಲ್ಲಾ ಪೋಲೀಸ್ ಅಧಿಕಾರಿಗಳಿಗೆ, ಸೈನ್ಯದ ಅಧಿಕಾರಿಗಳಿಗೆ, ಮತ್ತು ಡಿವಿಶನಲ್ ಕಮೀಶನರುಗಳಿಗೆ ದೇಶಭಕ್ತಿಯ ಸರಿಯಾದ ತರಬೇತಿ ಕೊಡಿ. ಅವರಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಅರ್ಹತೆ ಬೆಳಸಿ. ನಾಲಾಯಕ್ ಅಧಿಕಾರಿಗಳನ್ನು ಮನೆಗೆ ಕಳಿಸಿ.


ಹೌದು , ದೇಶದಲ್ಲಿ ಶಾಂತಿ , ನೆಮ್ಮದಿ ನೆಲಸಿ, ದೇಶವು ಸುಭಿಕ್ಷವಾಗಿರಬೇಕಾದರೆ ಕೆಲವು ದೇಶದ್ರೋಹಿಗಳ ತಲೆ ಉರುಳಲೇ ಬೇಕಾಗುತ್ತದೆ.ರಾಷ್ಟ್ರ ಯಜ್ಞಕ್ಕೆ ಆಹುತಿಯಾಗದೇ ಫಲ ಸಿಗಲಾರದು!!! ಕೋಟಿ ಕೋಟಿ ಜನರ ನೆಮ್ಮದಿಗಾಗಿ ಕೆಲವು ನೂರುಜನ ದೇಶದ್ರೋಹಿಗಳ ಆಹುತಿಯಾಗಬಹುದು!!


ರಾಷ್ಟ್ರಾಯ ಸ್ವಾಹಾssssss|

ರಾಷ್ಟ್ರಾಯ ಇದಂ ನಮಮ ||

Friday, February 19, 2016

ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ

 ಶ್ರೀ ಕೃಷ್ಣಮೂರ್ತಿಯವರು ಬೇಲೂರು ತಾಲ್ಲೂಕು ಆಂದಲೆ ಗ್ರಾಮದಲ್ಲಿ ಶನಿದೇವಾಲಯದ ಅರ್ಚಕರು.  ದಲಿತ ಕುಟುಂಬಕ್ಕೆ ಸೇರಿದ ಶ್ರೀಯುತರಿಗೆ ಮಕ್ಕಳಿಗೆ ವೇದೋಕ್ತವಾಗಿ ಉಪನಯನ ಮಾಡಿಸುವಾಸೆ. ವೇದಭಾರತಿಯನ್ನು ಸಂಪರ್ಕಿಸಿದರು.ನಾವು ಅತ್ಯಂತ     ಸಂತೋಷದಿಂದ ಒಪ್ಪಿಕೊಂಡೆವು. ದಿನಾಂಕ ೧೯.೨.೨೦೧೬ ರಂದು ಬ್ರಹ್ಮೋಪನಯನಕ್ಕೆ ಮುಹೂರ್ತ ಕೂಡಿಬಂತು. ಶನಿದೇವಾಲಯದ ಮುಂದೆ ಶಾಮಿಯಾನ ಹಾಕಿ  ಅಶ್ವತ್ಥ ವೃಕ್ಷದ ಕೆಳಗೆ ಕಾರ್ಯಕ್ರಮ ನಡೆಸಲಾಯ್ತು. ವೇದಾಧ್ಯಾಯೀ ಶ್ರೀ ನವೀನ್ ಅವರಿಗೆ ಸಹಕಾರಿಯಾಗಿ ವೇದಭಾರತಿಯ ಕಾರ್ಯಕರ್ತರು ನಿಂತೆವು.  ಕಾಲೊನಿಯ ಜನರೆಲ್ಲಾ ಬಂದರು. ಬ್ರಹ್ಮೋಪದೇಶ ಆದನಂತರ ವೇದಾಧ್ಯಾಯೀ ಶ್ರೀ ನವೀನ್  ಬ್ರಹ್ಮೋಪದೇಶದ ಬಗ್ಗೆ ತಿಳಿಸಿದರೆ "ಎಲ್ಲರಿಗಾಗಿ ವೇದ " ಪರಿಚಯವನ್ನು ಹರಿಹರಪುರಶ್ರೀಧರ್ ಮಾಡಿಕೊಟ್ಟರು.ವೇದಭಾರತಿಯ ಗೌರವಾಧ್ಯಕ್ಷರಾದ ಶ್ರೀ ಕವಿ ನಾಗರಾಜ್ ಅವರು ಸಮಾರಂಭ ಕುರಿತು ಮೆಚ್ಚುಗೆಯ ಮಾತನಾಡಿದರು . ವಟುವಿನ ತಂದೆ ಕೃಷ್ಣ ಮೂರ್ತಿಗಳ ಹೃದಯಾಂತರದ  ಮಾತು  ನಮ್ಮೆಲ್ಲರಲ್ಲೂ ಸಾರ್ಥಕತೆಯ ಭಾವ ಮೂಡಿಸಿತು. 
ಕೃಷ್ಣ ಮೂರ್ತಿಗಳ  ಮನದಾಳದ ಮಾತು

" ನನಗೆ ಇಂದು ಅತ್ಯಂತ ಸಂತೋಷವಾಗುತ್ತಿದೆ. ವೇದೋಕ್ತವಾಗಿ ನನ್ನ ಮಗನಿಗೆ ವೇದಭಾರತಿಯವರು ಉಪನಯನ ಮಾಡಿದ್ದಾರೆ.   ಇಂತಾ ಒಂದು  ಪವಿತ್ರ  ಕಾರ್ಯಕ್ರಮ ಹಿಂದೆ  ಎಂದೂ ಆಗಿರಲಿಲ್ಲ.   ನಮ್ಮ ಸಮುದಾಯಕ್ಕೆ  ಹಿಂದು ಸಮಾಜದಲ್ಲಿ ಗೌರವ ಸಿಗಬೇಕಾದರೆ ನಮ್ಮ ಬದುಕು ಪರಿಶುದ್ಧವಾಗಿರಬೇಕು.  ನಾವು  ಮಾಂಸಾಹಾರವನ್ನಾಗಲೀ ಬೇರೆ ಯಾವ ತಾಮಸ ಆಹಾರವನ್ನೂ ತೆಗೆದುಕೊಳ್ಳದಿರುವ ದೃಢ ನಿರ್ಧಾರ ಮಾಡಬೇಕು.  ಮೇಲು-ಕೀಳಿಗೆ ವೇದದಲ್ಲಿ ಅವಕಾಶವೇ ಇಲ್ಲ, ನಾವೆಲ್ಲಾ ಭೂತಾಯಿಯ ಮಕ್ಕಳು.ನಾವೆಲ್ಲಾ ಅಣ್ಣ ತಮ್ಮ, ಅಕ್ಕ-ತಂಗಿಯರೆಂದು ವೇದವು ಸಾರುತ್ತದೆಂಬ ಅಂಶವನ್ನು ವೇದದ ಆಧಾರದಲ್ಲೇ ತಿಳಿದು ಸಂತೋಷವಾಗಿದೆ. ನಾವೆಲ್ಲಾ ಸೇರಿ ಹಿಂದು ಸಮಾಜಕ್ಕೆ ಶಕ್ತಿಯನ್ನು ತುಂಬಬೇಕು. ಅನ್ಯಮತೀಯರು ನಮಗೆ ಆಮಿಶ ಒಡ್ಡಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ . ನಾವು   ಎಚ್ಚರದಿಂದ ಇರಬೇಕು.  ಹಿಂದು  ಸಮಾಜದಲ್ಲಿ ನಾವು ನೆಮ್ಮದಿಯಾಗಿ ಬಾಳಲು ಅವಕಾಶ ಇದ್ದೇ ಇದೆ.  ಎಂಬತ್ನಾಲ್ಕು ಲಕ್ಷ  ಜೀವಿಗಳಲ್ಲಿ ಮಾನವ ಜನ್ಮ ದೊಡ್ಡದು.   ನಾವು ವೇದದ ಆಶಯದಂತೆ ನಡೆದರೆ ಇನ್ನೂ ಉನ್ನತ ಸ್ಥಿತಿಯಲ್ಲಿ ನಮ್ಮ ಮುಂದಿನ ಜನ್ಮವಾಗುತ್ತದೆ.  ಇಲ್ಲವಾದಲ್ಲಿ ಮತ್ತೆ ನಮಗೆ ಮಾನವ ಜನ್ಮ ಸಿಗಲು ಎಂಬತ್ನಾಲ್ಕು ಲಕ್ಷ ಜನ್ಮಗಳನ್ನೆತ್ತಬೇಕಾಗುತ್ತದೆ.ಆದ್ದರಿಂದ ಸಿಕ್ಕಿರುವ ಈ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ. 
  ಬ್ರಹ್ಮೋಪನಯನಕ್ಕೆ ವಟು ವೇದಿಕೆಗೆ ಬಂದದ್ದು ಹೀಗೆ

ಬೇಲೂರಿನ ಸುಬ್ರಹ್ಮಣ್ಯ ದಂಪತಿಗಳಿಂದ ಬ್ರಹ್ಮಚಾರಿಗೆ ಭಿಕ್ಷೆ

ಎಲ್ಲರಿಗಾಗಿ ವೇದ ಪರಿಚಯ ನುಡಿ



ವಟುವಿನ ತಂದೆ ಕೃಷ್ಣಮೂರ್ತಿಗಳ ಹೃದಯಾಳದ ಮಾತು

ವೇದಾಧ್ಯಾಯೀ ಶ್ರೀ ನವೀನ್ ಶರ್ಮರಿಂದ ಬ್ರಹ್ಮೋಪನಯನದ ಬಗ್ಗೆ ನಾಲ್ಕು ಮಾತು