Pages

Sunday, September 27, 2015

ಚನ್ನರಾಯಪಟ್ಣದ ಸಾರ್ವಜನಿಕ ಗಣೇಶೋತ್ಸವದಲ್ಲಿ ಅಗ್ನಿಹೋತ್ರ ಪ್ರಾತ್ಯಕ್ಷಿಕೆ

 ವೇದಭಾರತಿಯ ಅಗ್ನಿಹೋತ್ರ ಆಂದೋಳನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಪತಂಜಲಿ ಯೋಗ ಕೇಂದ್ರದ ಶ್ರೀ ಶೇಷಪ್ಪನವರು ಕಳೆದ ಹತ್ತು ದಿನಗಳಿಂದ  ಚನ್ನರಾಯಪಟ್ಟಣದಲ್ಲಿ ನಡೆಸುತ್ತಿರುವ ಯೋಗ ಶಿಬಿರದಲ್ಲಿ ಇಂದು ಆರು ಕುಂಡಗಳಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ವೇದಭಾರತಿಯ ಸಹಪಾರದೊಡನೆ ಆಯೋಜಿಸಲಾಗಿತ್ತು. ಪರಿಸರವಾದಿ ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಅವರ ನೇತೃತ್ವದಲ್ಲಿ ನಡೆದ ಈ ಅದ್ಭುತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಭಾವವಶರಾದರು.
ಆರಂಭದಲ್ಲಿ "ಎಲ್ಲರಿಗಾಗಿ ವೇದ" ಮತ್ತು  ಅಗ್ನಿಹೋತ್ರ ಮಹತ್ವವನ್ನು ಕುರಿತು ನನ್ನ ಮಾತುಗಳು. ನಂತರ ನಡೆದ ಅಗ್ನಿಹೋತ್ರವು ಎಲ್ಲರನ್ನೂ ಆಕರ್ಶಿಸಿ ಕಾರ್ಯಕ್ರಮವು ಸಾರ್ಥಕವೆನಿಸಿತು.