Pages

Sunday, December 5, 2010

5.12.2010 ರಂದು ಹಾಸನದಲ್ಲಿ ಶುಭಾರಂಭಗೊಂಡ ಶ್ರೀ ರಾಮಕೃಷ್ಣ ಸೇವಾಶ್ರಮ.

ವೇದಿಕೆ

ಸ್ವಾಮಿ ಸುರೇಶಾನಂದಜಿ ಮಹಾರಾಜ್

ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್

ಭಕ್ತವೃಂದ

 ಹಾಸನದ ಎನ್.ಡಿ.ಆರ್.ಕೆ.ಬಾಲಕಿಯರ ಪ್ರೌಢಶಾಲೆಯಲ್ಲಿ ಆಶ್ರಮಕ್ಕಾಗಿ  ಶ್ರೀ ಪ್ರಸಾದ್ ಇವರು ನೀಡಿರುವ ಕೊಠಡಿಯಲ್ಲಿ ಸ್ಥಾಪಿತವಾಗಿರುವ  ಶ್ರೀ ರಾಮಕೃಷ್ಣ-ವಿವೇಕಾನಂದ ಮತ್ತು ಶಾರದಾದೇವಿ ಯವರ ಭಾವ ಚಿತ್ರ

ಸೋಲೇ ಗೆಲುವಿನ ಮೊದಲ ಮೆಟ್ಟಿಲು

ಸೋಲೇ ಗೆಲುವಿನ ಮೊದಲ ಮೆಟ್ಟಿಲು

ದಾಟುವೆನೆಂದೂ ತುಂಬಿದ ನದಿಯ
ತೀರದೆ ಕುಳಿತರೆ ದುರ್ಲಭವೇ
ಅಲ್ಪ ಸ್ವಲ್ಪವೇ ದಿನವೂ ಕಲಿಯೇ
 ಈಜಿ ದಾಟಲು ಸುಲಭವೆ

ಕಲಿಯುವ ಆಸೆ ನಿನ್ನಲಿ ಬಲಿತರೆ
 ಕಷ್ಟವೂ ಇಷ್ಟವೇ ಅನಿಸುವುದೂ
ಆಸೆಯ ನಿಗೃಹ ಬೆಳೆಸುತ ಕಲಿತರೆ
ಸಾರ್ಥಕ ಬದುಕೂ ಹನಿಸುವುದು

ಸೋಲೇ ಗೆಲುವಿನ ಮೊದಲ ಮೆಟ್ಟಿಲು
ಸಾಧಕ ಗುರಿಯನು ಮುಟ್ಟಲು
ಸತತ ಪರಿಶ್ರಮ ಸಾರ್ಥಕ ಬಟ್ಟಲು
ಯಶಸ್ಸು  ಕೀರ್ತಿಯನು ಕಟ್ಟಲು

ಕಲಿವದು ಎಂದಿಗೂ ಮುಗಿಯದ ಆಟ
ಬದುಕಿನ ಅಂತಿಮ ಘಳಿಗೆಗೂ ಪಾಠ
ದಿನದಿನ ಹೊಸತನ ಕಲಿವುದೇ ರೀತಿ
ಪ್ರಕೃತಿಯ ಅಣು ಅಣು ಕಲಿಸದೇ ನೀತಿ

ಜೀವನ ಮತ್ತು ಬದುಕು ಎರಡೂ ಒಂದೇ ಅಲ್ಲ!

ಬದುಕಿಗೂ ಮತ್ತು ಜೀವನಕ್ಕೂ ಇರುವ ವ್ಯತ್ಯಾಸವನ್ನು, ಮುಕ್ತಿಗೂ ಮತ್ತು ಅಮರತ್ವಕ್ಕೂ ಇರುವ ಅಂತರವನ್ನು ಗ್ರಹಿಸದೇ ಹೋದಾಗ ಎಲ್ಲಗೊಂದಲಗಳು, ಮನುಷ್ಯನ ಮನಸ್ಸಿನಲ್ಲಿ, ಹಾಗೂ ಮೌಢ್ಯಗಳು. ಅವುಗಳನ್ನೇ ಮಕ್ಕಳಿಗೆ ಪಾಠ ಒಪ್ಪಿಸುವುದಾಗುತ್ತದೆ. ಇಂದಿಗೂ ಬಹಳಷ್ಟು ಮಂದಿಗೆ ಬದುಕು ಮತ್ತು ಜೀವನ ಎರಡೂ ಒಂದೇ ಎಂದು ಭಾವಿಸಿದ್ದಾರೆ. ಜೀವನ ನಶ್ವರ ಎಂದು ಯಾರು ಹೇಳಿದರೋ ಅದು ಸರಿಯಲ್ಲ. ಬದುಕು ನಶ್ವರ. ಜೀವಿಸುವುದಕ್ಕಾಗಿ ನಾವು ಬದುಕುವುದಲ್ಲವೇ? ಅದ್ಯಾವಾಗ ಜೀವ ಹೋಗುತ್ತದೋ ಯಾರಿಗೂ ಗೊತ್ತಿಲ್ಲ. ಆಗ ಬದುಕು ಇರುವುದಿಲ್ಲ
.
ಜೀವ ಈ ಶರೀರವನ್ನು ತ್ಯಜಿಸಿ ಹೋಗುತ್ತದೆ. ಅದು ಪುನರ್ಜನ್ಮ ಪಡೆಯ ಬಹುದಾಗಿದೆ; ಅದೆಂದಿಗೂ ಶಾಶ್ವತ ಅಥವಾ ಅಮರ.
ಜೀವವು ಸತ್ಯ ಸುಂದರ, ಹಾಗೆಯೇ ಈ ಜೀವನವೂ ಕೂಡ. ಇಂಥ ಅಮೂಲ್ಯ ಜೀವನವನ್ನು ಅನುಭವಿಸುವುದಕ್ಕಾಗಿಯೆ ನಾವು ಧೀರ್ಘಾಯುಷಿಗಳಾಗಿ ಬದುಕಲು ಪ್ರಯತ್ನಿಸಬೇಕು.

ಶಾಶ್ವತ ಮುಕ್ತಿಗಾಗಿ ಎಂದು ಯಾರು ಹೇಳಿದರೂ ಅದು ಸರಿಯಲ್ಲ. ಮುಕ್ತಿ ಎಂಬುದು ಈ ಶರೀರದಿಂದ ಬಿಡುಗಡೆಯಷ್ಟೇ. ಅದೇ ಶಾಶ್ವತ ಹೇಗಾದೀತು!
ನಾವು ಸತ್ಯಸುಂದರವಾದ ಈ ಪ್ರಪಂಚದಲ್ಲಿ ಜೀವಿಸುತ್ತೇವೆ.( We are living in this finite world) .
ನಮ್ಮಈ ಬದುಕು ನಮಗೆ ಬಂಧುರವಾಗಲು, ಅಷ್ಟೇ ಸುಧೀರ್ಘವಾಗಲು ನಿತ್ಯವೂ ಪ್ರಯತ್ನಿಸಬೇಕು.
ಇಲ್ಲಿಂದ ಮುಕ್ತರಾಗಿ ಅಮರತ್ವವನ್ನು ಹೊಂದಬೇಕು .( from this finite to infinite). ಅಂಥ ಮಹತ್ತರವಾದ ಸದಾಶಯ ನಮ್ಮದಾಗಬೇಕಲ್ಲವೇ..