Pages

Showing posts with label ಶರ್ಮರ ಪುಟ. Show all posts
Showing posts with label ಶರ್ಮರ ಪುಟ. Show all posts

Saturday, October 18, 2014

ವ್ರತ ಎಂತರೇನು? - ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಪ್ರವಚನ

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಅನಾರೋಗ್ಯ ಸ್ಥಿತಿಯಲ್ಲೂ ನಮ್ಮಂತವರು ಹೋದರೆ ಮಾತನಾಡಿಸದೇ ಸುಮ್ಮನಿರಲು ಅವರಿಂದ ಸಾಧ್ಯವಿಲ್ಲ. ಮೊನ್ನೆ ಶರ್ಮರನ್ನು  ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಹಾಸನದ ವೇದಭಾರತಿಯ ಚಟುವಟಿಕೆಗಳು, ವೇದದ ಬಗ್ಗೆ  ನನ್ನ ಪತ್ರಿಕಾ ಅಂಕಣಗಳು, ವೇದಭಾರತಿಯು ಸಹಕಾರದೊಡನೆ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿ ಮಲಗುಂದದಲ್ಲಿ  ಹಮ್ಮಿಕೊಂಡಿರುವ ಸಾವಿರ ದಂಪತಿಗಳ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮದ ಬಗ್ಗೆ ವಿವರ ತಿಳಿದುಕೊಂಡರು. ಹಲವಾರು ತಿಂಗಳುಗಳಿಂದ ಶರ್ಮರ ಮಾತನ್ನು ನಮ್ಮ ವೇದಸುಧೆಯ ಅಭಿಮಾನಿಗಳಿಗೆ ಕೇಳಿಸಲಾಗಿಲ್ಲವಲ್ಲಾ! ಎಂಬ ನೋವು ನನ್ನನ್ನು ಕಾಡಿತ್ತು. ಒಂದೈದು ನಿಮಿಷದ ಆಡಿಯೋ ಆದರೂ ರೆಕಾರ್ಡ್ ಮಾಡಿಕೊಳ್ಳಲು ನಿರ್ಧರಿಸಿದೆ. ಬರೋಬ್ಬರಿ ಇಪ್ಪತ್ತು ನಿಮಿಷಗಳ ಕಾಲ ಕ್ಷೀಣ ಧ್ವನಿಯಲ್ಲಿ  ವೇದದ ಗಟ್ಟಿ ವಿಚಾರ ತಿಳಿಸಿದರು. ರೆಕಾರ್ಡ್ ಮಾಡಿಕೊಂಡೆ. ಅದರ ಮಾರನೇ ದಿನವೇ ಆರೋಗ್ಯ ಬಿಗಡಾಯಿಸಿ ಮತ್ತೆ ದಿಢೀರನೆ ಒಂದು ದಿನ ವೈದ್ಯರ ಮೇಲ್ವಿಚಾರಣೆಯಲ್ಲಿರಬೇಕಾದ ಸ್ಥಿತಿ! ಭಗವಂತನು ಶರ್ಮರ ಆರೋಗ್ಯ ಸುಧಾರಿಸಬೇಕು.ಅವರಿಂದ ವೇದದ ಕೆಲಸ ಸಾಕಷ್ಟು ಆಗಬೇಕಿದೆ..ಅವರ ಈ ಆಡಿಯೋ ಕೇಳಿ.



- ನಿತ್ಯನಿರಂತರ ಆಚರಣೆ
- ವ್ರತಗಳು ಐದು
- ಅಹಿಂಸೆ : ಯಾರಿಗೂ ನೋವಾಗದಂತಹ ನಮ್ಮ ವರ್ತನೆ
- ಸತ್ಯ : ಇದ್ದದ್ದನ್ನು ಇದ್ದಹಾಗೆ ಅರ್ಥಮಾಡಿಕೊಂಡು ಅದರಂತೆ ನಡೆಯುವುದು
- ಅಸ್ತೇಯ : ಕದಿಯದಿರುವುದು
- ಬ್ರಹ್ಮಚರ್ಯ :  ಜ್ಞಾನ ಸಂಪಾದನೆ
- ಅಪರಿಗ್ರಹ : ಅನವಶ್ಯಕವಾಗಿ ಇನ್ನೊಬ್ಬರಿಂದ  ದಾನ ಸ್ವೀಕರಿಸದಿರುವುದು

Monday, March 31, 2014

ನಿಮ್ಮ ಪ್ರಶ್ಮೆಗೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉತ್ತರ

ವೇದಧ್ಯಾಯಿ ಶ್ರೀಸುಧಾಕರ ಶರ್ಮ ರವರಿಗೆ ವಂದನೆಗಳು.
ತಮ್ಮ ವೇದೋಕ್ತವಾದ ನುಡಿಗಳಿಂದ ನಮ್ಮೆಲ್ಲರಿಗೂ ವೇದತತ್ವಗಳನ್ನ ಬೋಧಿಸುತ್ತಿದ್ದೀರಿ.  ಅದಕ್ಕಾಗಿ ಅಭಿನಂದನೆಗಳು-ಧನ್ಯವಾದಗಳು.   ಹಾಗುಬ್ಲಾಗ್.ವೇದಸುಧೆ ಗೌರವ ಸಂಪಾದಕರು: ಶ್ರೀ ಕವಿ ನಾಗರಾಜ್|ನಿರ್ವಾಹಕ ಸಂಪಾದಕರು:ಶ್ರೀ ಪ್ರಸನ್ನ.ಎಸ್.ಪಿ|ಸಂಪಾದಕರು:ಹರಿಹರಪುರಶ್ರೀಧರ್ ಇವರಿಗೂ
ಅಭಿನಂದನೆಗಳು-ಧನ್ಯವಾದಗಳು.
ಮಹರ್ಷಿ ದಯಾನಂದ ಸರಸ್ವತಿ ಯವರ ಜೀವನಕಥೆಯನ್ನು ಮತ್ತು ಅವರು ರಚಿಸಿದ  "ಸತ್ಯಾರ್ಥಪ್ರಕಾಶ"ಗ್ರಂಥವನ್ನು ಓದಿದ್ದೇನೆ.   ವೇದಸುಧೆ / ಚಂದನ ಟಿವಿ / ಶಂಕರ ಟಿವಿಮೂಲಕ ಹಲವು ವರ್ಷಗಳಿಂದ ನಿಮ್ಮ ಪ್ರವಚನಗಳನ್ನು ಆಲಿಸಿದ್ದೇನೆ.  ನನ್ನ ಎಲ್ಲಾ ತಳಮಳಗಳಿಗೂ ನಿಮ್ಮ ವೇದೋಕ್ತವಾದ ನುಡಿಗಳಿಂದ ಪರಿಹಾರ ಸಿಕ್ಕಿದೆ.
 
ಆದರೂ ಎರಡು ಪ್ರಶ್ನೆಗಳನ್ನು ಈ ಮೂಲಕ ಕೇಳುತ್ತಿದ್ದೇನೆ. ದಯವಿಟ್ಟು ಉತ್ತರಿಸಿ.
1.   ನಮ್ಮ ಮನೆ ಗುಡ್ಡಗಾಡು ಸ್ಥಳದಲ್ಲಿರುವುದರಿಂದ ವಿಷಜಂತುಗಳು ಸಾಮಾನ್ಯವಾಗಿ ಬರುತ್ತಿರುತ್ತವೆ.  ನಾಗರಹಾವನ್ನು ಬಿಟ್ಟು ಬೇರೆ ವಿಷವುಳ್ಳ ಹಾವುಗಳನ್ನು ನಮ್ಮ ಊರಿನಲ್ಲಿ ಕೊಲ್ಲುವ ಕ್ರಿಯೆ ನಡೆಯುತ್ತದೆ.  ಭಗವಂತನ ಈ ಅದ್ಭುತ ಸೃಷ್ಟಿಯಲ್ಲಿ ಅವುಗಳಿಗೂ ಬದುಕುವ ಹಕ್ಕಿಲ್ಲವೇ? ಎಂದನಿಸುತ್ತಿದೆ.  ತಮ್ಮ ಅಭಿಪ್ರಾಯವೇನು?
2.   ಹೆಣ್ಣು ಮಕ್ಕಳ ತಲೆಗೂದಲು ಬಾಚುವಾಗ, ಹೇನುಗಳು ಸಿಗುತ್ತವೆ ಸಹಜ.  ಸಾಮಾನ್ಯವಾಗಿ ಸಿಕ್ಕಿದ ಹೇನುಗಳನ್ನು ಕೊಲ್ಲುವ ಪದ್ದತ್ತಿಯನ್ನು ರೂಢಿಸಿಕೊಂಡಿದ್ದೇವೆ. ಇದು ಸರಿಯೇ?
ದಯವಿಟ್ಟು ಉತ್ತರಿಸುವಿರಾ?
ಧನ್ಯವಾದಗಳೊಂದಿಗೆ,
ಸುರೇಂದ್ರ ಶೆಟ್ಟಿಗಾರ್

ಕೋಟ್ನಾಕಟ್ಟೆ, ಹಿರಿಯಡಕ, ಉಡುಪಿ.   Mobile: 9483931868

ಶ್ರೀಯುತ ಸುರೇಂದ್ರರೇ!
ನಿಮ್ಮ ಜಿಜ್ಞಾಸೆ ಸಾಧುವಾಗಿದೆ.
ಜೀವಕೊಡಲು ಸಾಧ್ಯವಿಲ್ಲದ ಮೇಲೆ ಜೀವ ತೆಗೆಯಲೂ ಹಕ್ಕಿಲ್ಲ.
ಸಕಲ ಜೀವರಾಶಿಗಳೊಡನೆ ಮೈತ್ರಿಯಿಂದ ಬಾಳಬೇಕೆಂಬುದೇ ಮಾನವೀಯತೆ.ದುಷ್ಟಜಂತುಗಳೊಂದಿಗೆ ಅಲಿಖಿತ  ಒಪ್ಪಂದ ಮಾಡಿಕೊಂಡು, ಗಡುಗಳನ್ನು ಗುರುತಿಸಿಕೊಂಡು ಬಾಳಬಹುದು.  ಕಾಡಿನಲ್ಲಿ ಈ ನಿಯಮವನ್ನು ಪ್ರಾಣಿಗಳು ಪಾಲಿಸುತ್ತವೆ.  ಮನುಷ್ಯನು ಕಾಡನ್ನು ಆಕ್ರಮಿಸಿದಾಗ, ಕಾಡುಪ್ರಾಣಿಗಳು - ಆನೆ ಇತ್ಯಾದಿ - ನಾಡಿಗೆ ನುಗ್ಗುವುದು ಅನಿವಾರ್ಯವಾಗುತ್ತದೆ.  ನಮ್ಮ  ಇರುವಿಕೆಗೆ, ಓಡಾಟಕ್ಕೆ ಸ್ಪಷ್ಟವಾದ ಸ್ಥಳಗಳನ್ನು ಗುರುತಿಸಿಕೊಂಡು, ಅದನ್ನು ದಾಟದೆ ಪಾಲಿಸಿದರೆ ಇತರ ಪ್ರಾಣಿಗಳೊಡನೆ - ಅವು ಕ್ರೂರ, ವಿಷಜಂತುಗಳಾದರೂ ಸಹಿತ - ಬದುಕುವುದು ಸಾಧ್ಯವಾಗುತ್ತದೆ.
ಕೂದಲಿನ ಸ್ವಚ್ಛತೆ ಕಾಪಾಡಿಕೊಂಡಾಗ ಹೇನು ಬರುವ ಸಾಧ್ಯತೆಯೇ ಕಡಿಮೆ.  ಹಾಗೂ ಬಂದರೆ ಅವನ್ನು ತೆಗೆದುಹಾಕುವುದೇ ಸರಿಯೇ ಹೊರತು ಸಾಯಿಸುವುದು ಸರಿಯಲ್ಲ.  
ಇದೇ ಪ್ರಶ್ನೆ ಸೊಳ್ಳೆ, ತಿಗಣೆ, ಜಿರಳೆ ಇತ್ಯಾದಿಗಳ ವಿಚಾರದಲ್ಲೂ ಉಂಟಾಗುತ್ತದೆ.  ಸ್ವಚ್ಛತೆ, ಪದಾರ್ಥಗಳ ಅತ್ಯಂತ ಕಡಿಮೆ ಸಂಗ್ರಹ, ಪದಾರ್ಥಗಳನ್ನು ಬಳಸುತ್ತಿರುವುದು, ಆಗಾಗ್ಗೆ ಶುಚಿಗೊಳಿಸುವುದು ಈ ಕ್ರಮವನ್ನು ಅನುಸರಿಸಿ ಅವುಗಳ ಕಾಟವನ್ನು ತಡೆಗಟ್ಟಬಹುದು.  ಅವುಗಳನ್ನು ಕೊಲ್ಲುವ ಬದಲಿಗೆ, ಅವು ಬಾರದಂತೆ ಹೊಗೆ ಇತ್ಯಾದಿಗಳನ್ನೂ ಬಳಸಬಹುದು.
ಅಹಿಂಸೆಯನ್ನು ಪಾಲಿಸಲೇಬೇಕೆಂಬ ಹಠವಿದ್ದಾಗ ಪರಿಹಾರಗಳನ್ನು ಕಂಡುಹಿಡಿಯಬಹುದು.
ತಮ್ಮವ,
ಸುಧಾಕರ ಶರ್ಮಾ

Sunday, October 27, 2013

ನಿಜವ ತಿಳಿಯೋಣ-೧

ನಿಜವ ತಿಳಿಯೋಣ
[ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಉಪನ್ಯಾಸದ ಭರಹ ರೂಪ]

[ಕಳೆದ 47ಭಾನುವಾರಗಳಿಂದ ನಿರಂತರವಾಗಿ ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಬರೆಯುತ್ತಿರುವ “ಎಲ್ಲರಿಗಾಗಿ ವೇದ” ಸರಣಿಯನ್ನು ಕೆಲವು ದಿನ ಇಲ್ಲಿ ಹಂಚಿಕೊಳ್ಳಲಾಗಿತ್ತು. ಇನ್ನು ಮುಂದೆ ಪ್ರತೀ ಭಾನುವಾರ ಮುಂದಿನ ಬರಹಗಳನ್ನು ಪ್ರಕಟಿಸಲಾಗುವುದು]

ಅಥರ್ವವೇದದ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.

ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ|
 ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋ ಮುಖ: ||
[ಅಥರ್ವ ವೇದ ೧೦ನೇ ಕಾಂಡ, ೮ನೇ ಸೂಕ್ತ,೨೭ ನೇ ಮಂತ್ರ]

ಆತ್ಮನ  ವಿಚಾರವನ್ನು ಮೇಲಿನ ಮಂತ್ರದಲ್ಲಿ ವಿವರಿಸಲಾಗಿದೆ.
ತ್ವಂ ಸ್ತ್ರೀ = ನೀನು ಹೆಣ್ಣಾಗಿದ್ದೀಯೆ
ತ್ವಂ ಪುಮಾನಸಿ = ನೀನು ಗಂಡೂ ಕೂಡ ಆಗಿದ್ದೀಯೆ
ಅಂದರೆ ಆತ್ಮಕ್ಕೆ ಲಿಂಗವಿಲ್ಲ. ಅದು ಗಂಡೂ ಹೌದು, ಹೆಣ್ಣೂ ಹೌದು.ಅಂದರೆ ಅದು ಗಂಡು ಶರೀರದಲ್ಲಿದ್ದಾಗ ಗಂಡು, ಹೆಣ್ಣುಶರೀರದಲ್ಲಿದ್ದಾಗ ಹೆಣ್ಣು ಎಂದು ಕರೆಸಿಕೊಳ್ಳುತ್ತದೆ. ತ್ವಂ ಕುಮಾರ ಉತ ವಾ ಕುಮಾರೀನೀನು ಕುಮಾರನೂ ಹೌದು ಅಂತೆಯೇ ಕುಮಾರಿಯೂ ಹೌದು. ಅಣುಚೇತನಕ್ಕೆ [ಆತ್ಮಕ್ಕೆ] ಅದರದೇ ಆದ  ಲಿಂಗವ್ಯವಸ್ಥೆ ಇಲ್ಲದಿರುವುದರಿಂದ ಅದು ಗಂಡೂ ಹೌದು, ಹೆಣ್ಣೂ ಹೌದು, ಕುಮಾರನೂ ಹೌದು, ಕುಮಾರಿಯೂ ಹೌದು. ಅಂದರೆ ಅದು ಯಾವ ಶರೀರದಲ್ಲಿ, ಯಾವ ಸ್ಥಿತಿಯಲ್ಲಿರುತ್ತದೋ ಅದರಂತೆ  ಗಂಡು/ಹೆಣ್ಣು/ಕುಮಾರ/ಕುಮಾರೀ ಎಂದು ಕರೆಯಲ್ಪಡುತ್ತದೆ.
ತ್ವಂ ಜೀರ್ಣೋ ದಂಡೇನ ವಂಚಸಿ  ನೀನು ಒಂದು ಕಾಲದಲ್ಲಿ ಆಶರೀರವು ಜೀರ್ಣವಾದಾಗ ಕೋಲನ್ನು ಹಿಡಿದುಕೊಂಡು ತಡವರಿಸಿಕೊಂಡು ನಡೆಯುತ್ತೀಯೆ  ಅಂದರೆ ಇಲ್ಲಿ ಕುಮಾರ,ಕುಮಾರಿ, ಹೆಣ್ಣು, ಗಂಡು, ವೃದ್ಧ, ಈ ಎಲ್ಲಾ ಸ್ಥಿತಿಯುಂಟಾಗುವುದು ಈ ಅಣುಚೇತನವು ಯಾವ ಶರೀರದಲ್ಲಿದೆಯೋ ಆ ಶರೀರಕ್ಕೆ ಆದ್ದರಿಂದ ಶರೀರಕ್ಕೆ ವೃದ್ಧಾಪ್ಯ ಬಂದಾಗ  ಕೋಲನ್ನು ಹಿಡಿದುಕೊಂಡು ತಡವರಿಸಿಕೊಂಡು ನಡೆಯುತ್ತೀಯೆ ಎಂದು ವಿವರಿಸಲಾಗಿದೆ.ಅಣುಚೇತನಕ್ಕೆ ಮಾತ್ರ ಅದರದೇ ಆದ ಬಾಲ್ಯ-ಯೌವ್ವನ, ವೃದ್ಧಾಪ್ಯದ ಸ್ಥಿತಿಯಾಗಲೀ, ಲಿಂಗವಾಗಲೀ ಇರುವುದಿಲ್ಲ. ಶರೀರದಲ್ಲಿರುವವರೆಗೂ ಆ ಶರೀರಕ್ಕನುಗುಣವಾಗಿ ಗುರುತಿಸಲ್ಪಡುತ್ತದೆ. ಶರೀರವು ಜೀರ್ಣವಾಗಿ ಈ ಶರೀರ,ಇಂದ್ರಿಯ ಮನಸ್ಸುಗಳನ್ನು ಸಾಧನವಾಗಿ ಬಳಸಲು ಅಣುಚೇತನಕ್ಕೆ  ಅಸಾಧ್ಯವಾದಾಗ ಅಂದರೆ ಆ ಶರೀರವು ಅಂತ್ಯವಾದಮೇಲೆ ಅಣುಚೇತನ ಎಲ್ಲಿ ಹೋಗುತ್ತದೆ? ಎಂಬುದನ್ನು ಮಂತ್ರದ ಮುಂದಿನಭಾಗವು ಸ್ಪಷ್ಟಪಡಿಸುತ್ತದೆ.
ತ್ವಂ ಜಾತೋ ಭವಸಿ ವಿಶ್ವತೋ ಮುಖ:
ಈವರಗೆ ಇದ್ದ ಶರೀರದಲ್ಲಿ ಶರೀರ ಇಂದ್ರಿಯ ಮತ್ತು ಮನಸ್ಸನ್ನು ಸಾಧನವಾಗಿ ಇನ್ನು ಉಪಯೋಗಿಸಲು ಸಾಧ್ಯವಿಲ್ಲವೆಂದಾಗ  ಮುಂದೇನಾಗುತ್ತದೆ?  ಎಂಬುದಕ್ಕೆ  ಅಣುಚೇತನವನ್ನು ಕುರಿತು ಮಂತ್ರದ ಈ ಭಾಗ ಹೇಳುತ್ತದೆ ಈ ಶರೀರವನ್ನು ಬಿಟ್ಟು ಬೇರೆ ಶರೀರದಲ್ಲಿ ವಿಶ್ವದಲ್ಲಿ ಎಲ್ಲಿ ಬೇಕಾದರೂ  ಪ್ರಕಟವಾಗುತ್ತೀಯೆ ಒಂದು ಶರೀರವನ್ನು ಬಿಟ್ಟ ಅಣುಚೇತನವು ಮತ್ತೊಂದು ಶರೀರವನ್ನು ಸೇರಬೇಕಾದರೆ ಹಿಂದಿನ ಜನ್ಮದಲ್ಲಿ[ಹಿಂದಿನ ಶರೀರಗಳಲ್ಲಿ] ಮಾಡಿರುವ ಕರ್ಮಗಳ ಆಧಾರದ ಮೇಲೆ  ಯಾವ ಶರೀರವನ್ನು ಸೇರಬೇಕೆಂಬುದು ನಿರ್ಧರಿಸಲ್ಪಡುತ್ತದೆ. ತಾನು ಮಾಡಿದ ಹಿಂದಿನ ಕರ್ಮಾನುಸಾರ ಹೊಸ  ಶರೀರವು ಈ ಅಣುಚೇತನಕ್ಕೆ ಲಭ್ಯವಾಗುತ್ತದೆ.
ಅಂದರೆ ನಾವು ನಮ್ಮ ನಮ್ಮ ಹಿಂದಿನ ಜನ್ಮದ ಕರ್ಮಾನುಸಾರ ಇಂದಿನ ಜನ್ಮದಲ್ಲಿ ಯಾವ ಗರ್ಭದಲ್ಲಿ ಜನ್ಮವೆತ್ತಬೇಕೋ ಅದರಂತೆ ಜನ್ಮವೆತ್ತಿದ್ದೇವೆ. ಕರ್ಮದ ಫಲವನ್ನು ಮುಂದಿನ ಮಂತ್ರದಲ್ಲಿ ಇನ್ನೂ ಸ್ಪಷ್ಟವಾಗಿ ತಿಳಿಸಲಾಗಿದೆ.

ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈ: ಸಮಮಮಾನ ಏತಿ|
ಅನೂನಂ ಪಾತ್ರಂ ನಿಹಿತಂ ನ ಏತತ್ ಪಕ್ತಾರಂ ಪಕ್ವ: ಪುನರಾ ವಿಶಾತಿ||
[ಅಥರ್ವ ವೇದದ ೧೨ ನೇ ಕಾಂಡ,೩ನೇ ಸೂಕ್ತದ ೪೮ ನೇ ಮಂತ್ರ]
 ಮೇಲಿನ ಮಂತ್ರಕ್ಕೆ ಪೂರಕವಾಗಿರುವ ಇನ್ನೂ ಹಲವು ವೇದಮಂತ್ರಗಳ ಆಧಾವಾಗಿಟ್ಟುಕೊಂಡು ಈ ಮಂತ್ರವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಅತ್ರ ಕಿಲ್ಬಿಷಮ್ ನ   ಇಲ್ಲಿ ಕಿಲುಬು[ದೋಷ] ಇಲ್ಲ. ಅಂದರೆ ಭಗವಂತನ ವ್ಯವಸ್ಥೆಯಲ್ಲಿ ಯಾವ ದೋಷವೂ ಇಲ್ಲ. ಭಗವಂತನ  ವ್ಯವಸ್ಥೆಗಳೆಲ್ಲವೂ ದೋಷಮುಕ್ತವಾಗೇ ಇವೆ. ಅಂದರೆ ಈಗ್ಗೆ ಹತ್ತು ಸಾವಿರವರ್ಷಗಳ ಹಿಂದೆ ಯಾವ ವ್ಯವಸ್ಥೆ ಇತ್ತೋ ಅದೇ ವ್ಯವಸ್ಥೆ ಇಂದೂ ಇದೆ. ಅಂದೂ ಸರಿಯಾಗಿತ್ತು.ಇಂದೂ ಸರಿಯಾಗಿಯೇ ಇದೆ.ಆದರೆ ನಾವು ಮಾಡುವ ವ್ಯವಸ್ಥೆ ಹೇಗಿರುತ್ತದೆ, ಒಂದು ಉಧಾಹರಣೆ ನೋಡೋಣ. ಸ್ವಾತಂತ್ರ್ಯ  ಬಂದಮೇಲೆ ನಮ್ಮ ದೇಶದ ಸಂವಿಧಾನ ರಚಿಸಿದರು.ಕೇವಲ ಅರವತ್ತು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ತಿದ್ದುಪಡಿಯನ್ನು ನಾವೇ ಮಾಡಿದ್ದೇವೆ. ಇನ್ನೂ ಎಷ್ಟು ಮಾಡುತ್ತೀವೋ ಗೊತ್ತಿಲ್ಲ. ಆದರೆ ಭಗವಂತನ ವ್ಯವಸ್ಥೆಯು ಎಲ್ಲಾ ಕಾಲಕ್ಕೂ ಒಂದೇ ಆಗಿರುತ್ತದೆ.
ಮುಂದಿನ ಮಂತ್ರಭಾಗ  ನಾಧಾರೋ ಅಸ್ತಿ ಇದಕ್ಕೆ ಯಾವ ಆಧಾರವೂ ಇಲ್ಲ.ಇದೇನಿದು? ಆಧಾರವಿಲ್ಲದ ಯಾವ ಮಾತನ್ನೂ ಒಪ್ಪಿಕೊಳ್ಳಬಾರದು ಎಂದು ವೇದವೇ ಹೇಳುತ್ತದೆ. ಆದರೆ ಭಗವಚ್ಛಕ್ತಿಯ ವಿಚಾರದಲ್ಲಿ ಯಾವ ಆಧಾರವೂ ಇಲ್ಲ, ಎಂದರೆ ಏನು?
ಇಲ್ಲಿ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳ ಬೇಕಾಗುತ್ತದೆ. ಆಧಾರವೆಂಬುದು ಯಾವಾಗ ಬೇಕಾಗುತ್ತದೆ?
ಯಾವುದು ಸ್ವಯಂ ಸಿದ್ಧವಾಗಿದೆಯೋ ಅದಕ್ಕೆ ಆಧಾರ ಬೇಕಾಗಿಲ್ಲ. ಉಧಾಹರಣೆಗೆ ಸೂರ್ಯನಿಂದ ಶಾಖ ಮತ್ತು ಬೆಳಕು ಹೊರಹೊಮ್ಮುತ್ತದೆ, ಎಂಬುದಕ್ಕೆ ಯಾವ ಆಧಾರದ ಅಗತ್ಯವಿದೆ? ಯಾವ ಆಧಾರವೂ ಬೇಕಾಗಿಲ್ಲ, ತಾನೇ? ಅದು ಸ್ವಯಂ ಸಿದ್ಧ. ಆದರೆ ಯಾವುದಕ್ಕೆ ಆಧಾರಬೇಕಾಗುತ್ತದೆಂದರೆ ಎರಡು ವಿಚಾರಗಳಿದ್ದು,ಇದು ಸರಿಯೇ? ಅಥವಾ ಅದು ಸರಿಯೇ? ಎಂಬ ಗೊಂದಲ ಬಂದಾಗ ಯಾವುದು ಸರಿ ಎಂಬುದಕ್ಕೆ ಆಧಾರಬೇಕಾಗುತ್ತದೆ.ಯಾವುದಾದರೂ ಪ್ರಮಾಣ ಬೇಕಾಗುತ್ತದೆ.ಆದರೆ ಭಗವಚ್ಛಕ್ತಿಯ ವಿಚಾರಕ್ಕೆ ಯಾವ ಆಧಾರದ ಅಗತ್ಯವೂ ಇಲ್ಲ.
ಆಧಾರದ ಬಗ್ಗೆ ಚರ್ಚಿಸುವಾಗ ಮತ್ತೊಂದು ವಿಚಾರವನ್ನೂ  ಕೂಡ ಗಮನಿಸಬೇಕು.  ಯಾವುದಾದರೂ ವಿಚಾರವನ್ನು ಸರಿ ಎಂದು ಹೇಳಬೇಕಾದರೆ ಅದಕ್ಕಿಂತ ಪ್ರಾಚೀನವಾದ ಸತ್ಯಕ್ಕೆ ಅದನ್ನು ಹೋಲಿಸಿ ನೋಡಿ ಅದು ಸರಿಯೇ ತಪ್ಪೇ ಎಂದು ನಿರ್ಧರಿಸಬೇಕಾಗುತ್ತದೆ. ಆದರೆ ಪ್ರಪಂಚದ ಅತ್ಯಂತ ಪ್ರಾಚೀನ ಸಾಹಿತ್ಯವು ವೇದವೇ ಆಗಿರುವಾಗ ವೇದವನ್ನು ಯಾವುದಕ್ಕೆ ಹೋಲಿಕೆ ಮಾಡಿ ನೋಡಲು ಸಾಧ್ಯ? ಆದ್ದರಿಂದ ವೇದವು ವಿವರಿಸುವ ಭಗವಚ್ಛಕ್ತಿಯ ವಿಚಾರವನ್ನೂ ಯಾವುದಕ್ಕಾದರೂ ಹೋಲಿಸಲು ಅದಕ್ಕಿಂತ ಪ್ರಾಚೀನ ಸಾಹಿತ್ಯ ಇಲ್ಲವಾದ್ದರಿಂದ ಯಾವ ಆಧಾರವು ಇಲ್ಲ ಎಂದು ವಿವರಿಸಲಾಗಿದೆ, ಎಂದು ಅರ್ಥಮಾಡಿಕೊಳ್ಳಬಹುದು.
 ಯನ್ಮಿತ್ರೈ: ಸಮಮಮಾನ ಏತಿ ನಾವು ನಮ್ಮ ಬಂಧು ಬಾಂಧವರೊಡಗೂಡಿ ಇದ್ದೇವೆ. ಆದ್ದರಿಂದ ನಾವು ಸುರಕ್ಷಿತ ಎಂದು ಕೊಂಡರೆ ವೇದವು ಹೇಳುತ್ತದೆ ಇಲ್ಲ ಭಗವಂತನ ವ್ಯವಸ್ಥೆ ಏನಿದೆ, ಅದನ್ನು ಮುರಿಯಲಾಗುವುದಿಲ್ಲ.
ಒಂದು ಉಧಾಹರಣೆ ನೋಡೋಣ. ಒಬ್ಬ ವ್ಯಕ್ತಿಯು ಯಾವುದೋ ರೋಗಕ್ಕೆ ತುತ್ತಾಗಿದ್ದಾನೆ. ಸಾಕಷ್ಟು ಜನ ಬಂಧು ಬಳಗ ಇದ್ದಾರೆ. ಶ್ರೀಮಂತಿಕೆ ಇದೆ. ಹೈಟೆಕ್ ಆಸ್ಪತ್ರೆಯಲ್ಲಿ ಹತ್ತಾರು ಜನ ಸ್ಪೆಶಲಿಸ್ಟ್ ಗಳು ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ ಪ್ರಾಣ ಹೋಗುವ ಸಮಯ ಬಂದರೆ ಯಾರೂ ಅದನ್ನು ತಡೆಯಲಾರರು. ಭಗವಂತನ ನಿಯಮವನ್ನು ಯಾರೂ ಮುರಿಯಲಾರರು. ಅದೇ ಅಂತಿಮ. ಕೊನೆಯಲ್ಲಿ ವೈದ್ಯರು ಹೇಳುವುದೂ ಇದನ್ನೇ ನಾವು ಮಾಡುವ ಎಲ್ಲಾ ಪ್ರಯತ್ನ ಮಾಡಿದೆವು. ಇನ್ನು ಭಗವಂತನ ಇಚ್ಛೆ.
ಅಂದರೆ ನಾವು ಏನು ಕೆಲಸ ಮಾಡಬೇಕಾದರೂ ಭಗವಂತನ ನಿಯಮವನ್ನರಿತು ಕೆಲಸಮಾಡಿದರೆ ಯಶಸ್ವಿಯಾಗುತ್ತೇವೆ, ಹೊರತು ಅದಕ್ಕೆ ವಿರುದ್ಧವಾಗಿ ಕೆಲಸ ಮಾಡಿದರೆ ಯಾವ ಬಂಧು ಬಳಗವೂ ನಮ್ಮನ್ನು ರಕ್ಷಿ   ಸಲಾಗದು.ಅದ್ದರಿಂದ ಭಗವಂತನ ನಿಯಮವನ್ನು ಅರಿತುಬಾಳಿದರೆ ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಸಿಗಲು ಸಾಧ್ಯ. ಭಗವಂತನ ನಿಯಮಗಳ ಬಗ್ಗೆ ಈಗಾಗಲೇ ಚರ್ಚಿಸಿದ್ದೇವೆ. ಸರಳವಾಗಿ ಹೇಳಬೇಕೆಂದರೆ ಸತ್ಯವನ್ನೇ ಹೇಳು,ಕಳ್ಳತನ ಮಾಡಬೇಡ,ಹಿಂಸೆ ಮಾಡಬೇಡ ಎಂಬುದು ನಿಯಮಗಳು. ಸತ್ಯವನ್ನು ಹೇಳುವ ಅಥವ ಹೇಳದಿರುವ ಸ್ವಾತಂತ್ರ್ಯ ನಮಗೇ ತಾನೇ ಇರುವುದು? ಕಳ್ಳತಾನ ಮಾಡುವ ಅಥವಾ ಮಾಡದಿರುವ ನಿರ್ಧಾರವನ್ನು ಮಾಡಬೇಕಾಗಿರುವವರು ನಾವೇ ತಾನೇ? ಹಿಂಸೆ ಮಾಡುವ ಅಥವಾ ಮಾಡದಿರುವ ನಿರ್ಧಾರವನ್ನು ನಾವೇ ತಾನೇ ಮಾಡಬೇಕು. ಸರಿಯಾದ ನಿರ್ಧಾರ ತೆಗೆದುಕೊಂಡರೆ ಭಗವಂತನ ನಿಯಮದಂತೆ ಬದುಕು ಸಾಗುತ್ತದೆ, ಬದುಕು ಉಜ್ವಲವಾಗುತ್ತದೆ,ಇಲ್ಲವಾದರೆ ಬದುಕಿನಲ್ಲಿ ಸುಖ, ಸಂತೋಷ ನೆಮ್ಮದಿ ಸಿಗಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ
ಇನ್ನೊಂದು ವೇದ ಮಂತ್ರವು ಹೇಳುತ್ತದೆ  ನಾ  ಅನ್ಯಪಂಥಾ ವಿದ್ಯತೇ ಅಯನಾಯ  ಬೇರೆ ದಾರಿಯೇ ಇಲ್ಲ. ಭಗವಂತನ ನಿಯಮದಂತೆ ಕ್ರಮಿಸುವಿರಾ? ನಿಮಗೆ ಯಶಸ್ಸು ಇದೆ,ಇಲ್ಲದಿದ್ದರೆ ಇಲ್ಲ. ನಮಗೆ ಬದಲೀ ಮಾರ್ಗ ವಿಲ್ಲ.
ಒಟ್ಟಿನಲ್ಲಿ ಈ ಒಂದು ವೇದಮಂತ್ರದ ಮೊದಲಭಾಗದಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ್ದು ಏನೆಂದರೆ. . ೧] ಭಗವಂತನ ವ್ಯವಸ್ಥೆಯಲ್ಲಿ ದೋಷವಿಲ್ಲ
೨] ಭಗವಂತನವಿಚಾರವು ಸ್ವಯಂ ಸಿದ್ಧವಾದ್ದರಿಂದ ಯಾವ ಆಧಾರದ ಅಗತ್ಯವಿಲ್ಲ.
೩] ಭಗವಂತನ ನಿಯಮಕ್ಕೆ ವಿರುದ್ಧವಾಗಿ ನಮ್ಮ ಬಂಧುಬಳಗವೂ ಕೂಡ ನಮ್ಮನ್ನು ರಕ್ಷಿಸಲಾರದು
            ಈ ಮಂತ್ರ ಭಾಗದ ಒಟ್ಟು ಸಾರವೆಂದರೆ ಭಗವಂತನನ್ನು ನಂಬಿ ಅವನ ನಿಯಮದಂತೆ ಸತ್ಯದ ಪಥದಲ್ಲಿ ಸಾಗಿದರೆ ನಮ್ಮ ಜೀವನದಲ್ಲಿ ಸುಖ, ನೆಮ್ಮದಿ ಶಾಂತಿ ದೊರಕಬಲ್ಲದು. ಭಗವಂತನ ನಿಯಮ ಮೀರಿ ಜೀವನ ಸಾಗಿಸಿದ್ದೇ ಆದರೆ ಜೀವನದಲ್ಲಿ ಸುಖ, ನೆಮ್ಮದಿ,ಶಾಂತಿ ಸಿಗಲು ಸಾಧ್ಯವಿಲ್ಲ. ಇದೇ ಮಂತ್ರದ ಮುಂದಿನ ಭಾಗವು ಇನ್ನೂ ಅದ್ಭುತವಾಗಿದ್ದು ಅದರ ಅರ್ಥವನ್ನು ಮುಂದಿನವಾರ ನೋಡೋಣ.

-ಹರಿಹರಪುರಶ್ರೀಧರ್

Tuesday, October 15, 2013

ನಾಮಕರಣ ಮಹತ್ವ












Tuesday, October 1, 2013

ಭಗವಂತನ ಅಸ್ತಿತ್ವ

ಭಗವಂತನ ಅಸ್ತಿತ್ವವನ್ನು ತಿಳಿಯಲು ಈ ಒಂದು ವೇದ ಮಂತ್ರವನ್ನು ಅರ್ಥಮಾಡಿಕೊಳ್ಳಬೇಕು. ಪ್ರಯತ್ನ ಪಡೋಣ.
ಇದು ಶ್ರೀ ಸುಧಾಕರಶರ್ಮರ ಉಪನ್ಯಾಸದ ಒಂದು ಬರಹ ರೂಪ.

ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತ: ||
ಈ ಮಂತ್ರವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ
ತದೇಜತಿ ಪದವನ್ನು  ಬಿಡಿಸಿದಾಗ ತತ್ ಏಜತಿ ಎಂದಾಗುತ್ತದೆ. ತತ್ ಅಂದರೆ ಅದು ಏಜತಿ ಅಂದರೆ ಎಲ್ಲಕ್ಕೂ ಗತಿಯನ್ನು ಕೊಡುತ್ತದೆ. ನಾವು ಹಿಂದಿನ ಮಂತ್ರದಲ್ಲಿ ಸುಪರ್ಣಾ ಎನ್ನುವ ಪದದ ಅರ್ಥವನ್ನು ವಿವರವಾಗಿ ತಿಳಿದಿದ್ದೇವೆ. ಸುಪರ್ಣಾ ಎಂದರೆ ಗತಿಶೀಲ ಎಂದು ಅರ್ಥಮಾಡಿಕೊಂಡಿದ್ದೇವೆ. ಅಣುಚೇತನವು ಗತಿ ಶೀಲವಾದರೆ ವಿಶ್ವಚೇತನವು ತಾನು ಚಲಿಸದೆ ಜಡ ಅಸ್ತಿತ್ವಕ್ಕೂ ಮತ್ತು ಅಣುಚೇತನಕ್ಕೂ ಚಾಲನೆಯನ್ನು ಕೊಡುತ್ತಾದ್ದರಿಂದ ಅದೂ ಗತಿಶೀಲವೇ ಎಂದು ಅರ್ಥಮಾಡಿಕೊಂಡಿದ್ದೇವೆ.
ಈಗ ಈ ಮಂತ್ರಭಾಗದ ಅರ್ಥ ನೋಡೋಣ. ತತ್ ಏಜತಿ ಅಂದರೆ ತತ್ ಅಂದರೆ ಆ ವಿಶ್ವಚೇತನ ಶಕ್ತಿಯು, ಏಜತಿ  ಎಂದರೆ ಇಡೀ ಬ್ರಹ್ಮಾಂಡಕ್ಕೆ ಚಾಲನೆಯನ್ನು ಕೊಡುತ್ತದೆ. ಸರಳವಾದ ಎರಡು ಪದಗಳ ಅರ್ಥ ತಿಳಿದುಕೊಳ್ಳೋಣ. ಚಲನೆ ಎಂದರೇನು? ಒಂದು ವಸ್ತುವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರವಾಗಿದ್ದರೆ ಅದಕ್ಕೆ ಚಲನೆ ಉಂಟಾಗಿದೆ ಎಂದು ಹೇಳಬಹುದಲ್ಲವೇ? ಬದಲಾವಣೆ ಎಂದರೇನು? ಒಂದು ಕಿತ್ತಲೆ ಹಣ್ಣು ಒಂದು ಸ್ಥಳದಲ್ಲಿದೆ,ಅದು ಅಲ್ಲೇ ಇದೆ. ಆದರೆ ನಾಲ್ಕು ದಿನಗಳಲ್ಲಿ ಕೊಳೆಯಲು ಆರಂಭಿಸಿ ಅದರ ರೂಪ ಪರಿವರ್ತನೆ ಯಾಗಿದೆ. ಇದಕ್ಕೆ ಬದಲಾವಣೆ ಎನ್ನಬಹುದಲ್ಲವೇ?
ತತ್ ಏಜತಿ ಎಂದರೆ ಆ ವಿಶ್ವ ಚೇತನ ಶಕ್ತಿಯು ಸಕಲ ಜೀವರಾಶಿಗಳ ಚಲನೆ ಮತ್ತು ಬದಲಾವಣೆಗೆ ಕಾರಣವಾಗಿದೆ.ಎಲ್ಲೇ ಬದಲಾವಣೆ ಇರಲಿ ಅಥವಾ ಚಲನೆ ಇರಲಿ ಅದರ ಹಿಂದೆ ವಿಶ್ವಚೇತನ ಶಕ್ತಿಯು ಅದಕ್ಕೆ ಕಾರಣವಾಗಿದೆ. ಮಂತ್ರದ ಮುಂದಿನ ಪದವನ್ನು ನೋಡೋಣ. ತನ್ನೈಜತಿ ಪದವನ್ನು ಬಿಡಿಸಿದಾಗ   ತತ್ ನ ಏಜತಿ ಅಂದರೆ ಅದು [ವಿಶ್ವಚೇತನ ಶಕ್ತಿಯು] ನ ಏಜತಿ ಅಂದರೆ ಚಲಿಸುವುದಿಲ್ಲ. ಹಾಗೂ ಅದು ಬದಲಾವಣೆಗೂ ಒಳಗಾಗುವುದಿಲ್ಲ. ಚಲಿಸದ ಮತ್ತು ಬದವಾವಣೆಗೆ ನಿಲುಕದ ನಿತ್ಯ ನೂತನವಾದ  ಇದನ್ನು ಕಾಲಾತೀತ ಎನ್ನುತ್ತೇವೆ. ವಿಶ್ವಚೇತನ ಶಕ್ತಿಯು ಯಾಕೆ ಚಲಿಸುವುದಿಲ್ಲ ವೆಂಬುದನ್ನು ಈಗಾಗಲೇ ತಿಳಿದುಕೊಂಡಿದ್ದೇವೆ. ನೆನಪು ಮಾಡಿಕೊಳ್ಳಬೇಕೆಂದರೆ ವಿಶ್ವಚೇತನ ಶಕ್ತಿಯು ಸರ್ವವ್ಯಾಪಿಯಾಗಿರುವುದರಿಂದ ಚಲಿಸಲು ಅದಕ್ಕೆ ಅದಿಲ್ಲದಿರುವ ಸ್ಥಳವೇ ಇಲ್ಲವಲ್ಲಾ! ಅದರ ಸೂಕ್ಷ್ಮ ಗುಣ ಸ್ವಭಾವವು ಹೇಗಿರುತ್ತದೆಂದರೆ ಅದು ಎಲ್ಲಾ ಕಾಲದಲ್ಲೂ ಬದಲಾವಣೆ ಇಲ್ಲದೆ ಒಂದೇ ರೀತಿ ಇರುತ್ತದೆ.ಅದು ನಿತ್ಯ ನೂತನವಾಗಿರುತ್ತದೆ. ಅಂದರೆ ಇಂದಿಗೆ ಹೊಸದು,ನಾಳೆಯೂ ಹೊಸದಾಗಿಯೇ ಇರುತ್ತದೆ. ಐವತ್ತು ಸಾವಿರವರ್ಷಗಳ  ಹಿಂದೆಯೂ ಹೀಗೆಯೇ ಇತ್ತು. ಯಾವ ಬದಲಾವಣೆ ಇಲ್ಲ. ಅಂದರೆ ಈ ವಿಶ್ವಚೇತನ ಶಕ್ತಿಯು ವಿಶೇಷರೀತಿಯಲ್ಲಿ ಹೊಸ [ನವ] ದಾಗಿರುತ್ತದಾದ್ದರಿಂದ ಇದನ್ನು  ಪ್ರ+ನವ= ಪ್ರಣವ ಎಂತಲೂ ಕರೆಯುತ್ತೇವೆ. ಪ್ರ+ನವ= ಪ್ರನವ ಆಗಬೇಕಲ್ಲವೇ? ಪ್ರ ಅಕ್ಷರದಲ್ಲಿ ರಕಾರವಿರುವುದರಿಂದ ವ್ಯಾಕರಣಶಾಸ್ತ್ರದಂತೆ ಅದರ ಮುಂದಿನ ನ ಅಕ್ಷರವು ಣ ಕಾರವಾಗಿ ಉಚ್ಚರಿಸಲ್ಡುತ್ತದೆ. ಬೇರೆ ಎಲ್ಲದರ ಚಲನೆಗಳಿಗೂ ಬದಲಾವಣೆಗಳಿಗೂ ಈ ಪ್ರಣವ ಶಕ್ತಿಯು ಕಾರಣವಾಗಿದ್ದರೂ  ತತ್ ನ ಏಜತಿ ಅದು ಚಲಿಸುವುದಿಲ್ಲ.
ಮುಂದಿನ ಮಂತ್ರಭಾಗ ತದ್ದೂರೇ ಪದವನ್ನು ಬಿಡಿಸಿದಾಗ ತತ್ ದೂರೇ ಅಂದರೆ ಅದು ತುಂಬಾ ದೂರದಲ್ಲಿದೆ, ತದ್ವಂತಿಕೇ ಪದವನ್ನು ಬಿಡಿಸಿದಾಗ ತತ್ ಉ ಅಂತಿಕೇ ಅಂದರೆ ಅದು ಅಷ್ಟೇ ಹತ್ತಿರದಲ್ಲೂ ಇದೆ. ಇದೊಂದು ವಿಚಿತ್ರ ಮಾತಾಗಿ ತೋರುತ್ತದಲ್ಲವೇ? ಅದು ದೂರದಲ್ಲಿದೆ ಅಂದೊಡನೆ ಪುನ: ಅದು ಹತ್ತಿರದಲ್ಲೂ ಇದೆ ಎಂಬುದು ಮಂತ್ರದ ಅರ್ಥ. ಹಾಗೆಂದರೇನು?
ಇಲ್ಲಿ ಹೇಳಿರುವ ದೂರ ಮತ್ತು ಹತ್ತಿರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಹೊಳೇನರಸೀಪುರಕ್ಕೆ ಹೋಲಿಸಿದಾಗ ಮೈಸೂರು ದೂರದಲ್ಲಿದೆ. ಚನ್ನರಾಯಪಟ್ಟಣಕ್ಕಿಂತ ಬೆಂಗಳೂರುದೂರದಲ್ಲಿದೆ. ಅಥವಾ ಬೆಂಗಳೂರಿಗಿಂತ ಚನ್ನರಾಯಪಟ್ಟಣ ಹತ್ತಿರದಲ್ಲಿದೆ. ಇದು ನಮಗೆ ಅರ್ಥವಾಗುವ ದೂರ ಮತ್ತು ಹತ್ತಿರ ಪದಗಳ ಅರ್ಥ.ಇದು ಸ್ಥಳದ ದೃಷ್ಟಿಯಿಂದ ದೂರ.ಆದರೆ ಇನ್ನೂ ಎರಡು ದೂರಗಳಿವೆ. ಒಂದು ಕಾಲದ ದೃಷ್ಟಿಯಿಂದ ದೂರ. ರಾಮನ ಕಾಲಕ್ಕೆ ಹೋಲಿಸಿದಾಗ ಮಹಾತ್ಮಗಾಂದಿಯ ಕಾಲ ನಮಗೆ ಹತ್ತಿರ. ಮಹಾತ್ಮ ಗಾಂಧಿಯ ಕಾಲಕ್ಕೆ ಹೋಲಿಸಿದಾಗ ರಾಮನ ಕಾಲ ದೂರ. ಅಲ್ಲವೇ? ಮತ್ತೊಂದು ದೂರವಿದೆ. ಇದು ಮನಸ್ಸಿನ ದೃಷ್ಟಿಯಿಂದ  ಜ್ಞಾನದ ದೃಷ್ಟಿಯಿಂದ ದೂರ. ನಿಮ್ಮ ಪಕ್ಕದಲ್ಲೇ ನಿಮ್ಮೊಡನೆ ಒಬ್ಬರು ಮಾತನಾಡುತ್ತಾಕುಳಿತಿದ್ದಾರೆ,ಎಂದುಕೊಳ್ಳಿ. ಆದರೆ ಅದೇ ಸಮಯದಲ್ಲಿ  ನಿಮ್ಮ ಮನಸ್ಸು ಅಮೆರಿಕೆಯಲ್ಲಿರುವ ನಿಮ್ಮ ಮಗಳಬಗ್ಗೆ ಚಿಂತಿಸುತ್ತಿದೆ. ಈಗ ನಿಮಗೆ ಯಾರು ಹತ್ತಿರ? ಅಮೆರಿಕೆಯಲ್ಲಿರುವ ನಿಮ್ಮ ಮಗಳೋ ಅಥವಾ ಹರಟೆಹೊಡೆಯಲು ಬಂದಿರುವ ನಿಮ್ಮ ಸ್ನೇಹಿತರೋ? ಸಹಜವಾಗಿ ಮಗಳು ನಿಮಗೆ ಹತ್ತಿರವಾಗುತ್ತಾಳೆ ಅಲ್ಲವೇ? ಅವಳು ಸಾವಿರಾರು ಮೈಲು ದೂರದಲ್ಲಿರುವ ಅಮೆರಿಕೆಯಲ್ಲಿದ್ದಾಳೆ. ಅವಳು ನಿಮಗೆ ಹತ್ತಿರವಾದಳು, ಆದರೆ ಪಕ್ಕದಲ್ಲೇ ಇರುವ ನಿಮ್ಮ ಸ್ನೇಹಿತರು ನಿಮ್ಮ ಮಗಳಿಗಿಂತ ದೂರವಾಗುತ್ತಾರೆ. ಅಲ್ಲವೇ? ಅಂದರೆ ನಮ್ಮ ಮನಸ್ಸು, ಜ್ಞಾನ ಎಲ್ಲಿರುತ್ತದೋ ಅದು ಹತ್ತಿರ ಎಲ್ಲಿ ಇರುವುದಿಲ್ಲವೋ ಅದು ದೂರ. ಈ ಮೂರೂ ತರದ ದೂರಗಳನ್ನು ಅರ್ಥಮಾಡಿಕೊಂಡಾಗ  ಭಗವಂತನ ವಿಚಾರದ ತದ್ದೂರೇ ತದ್ವಂತಿಕೇ ಪದಗಳು ನಮಗೆ ಅರ್ಥವಾಗುತ್ತದೆ. ಭಗವಂತನು ಸರ್ವವ್ಯಾಪಿಯಾದ್ದರಿಂದ ಅವನು ಎಲ್ಲಾ ಕಡೆ ಇದ್ದಾನಾದ್ದರಿಂದ ಅವನು ಸ್ಥಳದ ದೃಷ್ಟಿಯಿಂದ ಹತ್ತಿರ. ಕಾಲದ ದೃಷ್ಟಿಯಿಂದ ಯೋಚಿಸುವಾಗ ಶ್ರೀ ರಾಮ ಶ್ರೀ ಕೃಷ್ಣರ ಕಾಲದಲ್ಲಿದ್ದ ಭಗವಂತನೇ ಈಗಲೂ ಇದ್ದಾನೆ. ಅವನು ಸಾರ್ವಕಾಲಿಕನಾದ್ದರಿಂದ ಅವನು ಹತ್ತಿರವೇ. ಸ್ಥಳ ಹಾಗೂ ಕಾಲದ ದೃಷ್ಟಿಯಿಂದ ಭಗವಂತನು ಎಲ್ಲೆಲ್ಲೂ ಇದ್ದು ನಮ್ಮಲ್ಲೂ ಯಾವಕಾಲದಲ್ಲೂ ಇರುವುದರಿಂದ ಅವನು ಹತ್ತಿರವೆಂದಾಯ್ತು. ಹಾಗಾದರೆ ಇನ್ಯಾವ ದೃಷ್ಟಿಯಿಂದ ಅವನು ದೂರ ಅಥವಾ ಹತ್ತಿರವಾಗಬಹುದು? ಉಳಿದದ್ದು ಮನಸ್ಸಿನದೃಷ್ಟಿಯಿಂದ ಮತ್ತು  ಜ್ಞಾನದ ದೃಷ್ಟಿಯಿಂದ ಹತ್ತಿರ ಅಥವಾ ದೂರ. ನಮಗೆ ಭಗವಂತನಲ್ಲಿ ಮನಸ್ಸಿದ್ದರೆ ಅವನು ನಮಗೆ ಹತ್ತಿರ ಮನಸ್ಸಿಲ್ಲದಿದ್ದರೆ ದೂರ , ಅಷ್ಟೆ.
ಮುಂದಿನ ಮಂತ್ರಭಾಗವನ್ನು ನೋಡೋಣ.

ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತ: ||
ತತ್ ಅಂತರಸ್ಯ ಸರ್ವಸ್ಯ ತತ್ ಸರ್ವಸ್ಯ ಅಸ್ಯ ಬಾಹ್ಯತ:
ಈ ಭಗವಚ್ಚಕ್ತಿಯು ಎಲ್ಲದರ ಒಳಗೂ ಇದೆ. ಮತ್ತು ಎಲ್ಲದರ ಹೊರಗೂ ಇದೆ. ಅಂದರೆ ಎಲ್ಲವೂ ಇದರೊಳಗಿದೆ. ಇದೂ ಎಲ್ಲದರ ಒಳಗೂ ಇದೆ. ಈ ರೀತಿಯಲ್ಲಿರುವ ವಿಶ್ವ ವ್ಯಾಪಕ ಶಕ್ತಿಯ  ಅಥವಾ ವಿಶ್ವಚೇತನ ಶಕ್ತಿಯ ವಿವರಣೆ ಇಲ್ಲಿದೆ. ಎಲ್ಲದರ ಚಾಲಕ ಶಕ್ತಿಯಾಗಿದ್ದೂ ಅದು ಮಾತ್ರ ಸ್ವತ: ಚಾಲನೆಗೆ ಮತ್ತು ಬದಲಾವಣೆಗೆ ಸಿಕ್ಕುವುದಿಲ್ಲ. ಅದು ಎಲ್ಲದರ ಒಳಗೂ ಇರುವುದರಿಂದ ಮತ್ತು ಎಲ್ಲವೂ ಅದರೊಳಗೆ    ಇರುವುದರಿಂದ  ಜ್ಞಾನದ ದೃಷ್ಟಿಯಿಂದ ಅದು ನಮ್ಮಿಂದ ಅತಿದೂರದಲ್ಲೂ ಇರಬಹುದು, ಆದರೆ ಅದರಲ್ಲಿ ನಮ್ಮ ಜ್ಞಾನಹೋದಾಗ ಅದು ಅತಿ ಹತ್ತಿರವೂ ಆಗಬಹುದು. ಅದು ಎಷ್ಟು ಹತ್ತಿರಲ್ಲಿರ ಬಹುದೆಂದರೆ ನಮ್ಮ ಜ್ಞಾನ ಕೆಲಸಮಾಡುವ ಮಿದುಳಿನ ಕಣಕಣದಲ್ಲೂ ಆ ವಿಶ್ವಚೇತನ ಶಕ್ತಿ ಇದೆ.ಅಂದರೆ ಅಣುಚೇತನವಾದ ನನ್ನೊಂದಿಗೇ ಆ ವಿಶ್ವಚೇತನ ಶಕ್ತಿಯೂ ಇದೆ. ಹಾಗಾದರೆ ಭಗವತ್ ಸಾಕ್ಷಾತ್ಕಾರಕ್ಕೆ ಅತ್ಯಂತ   ಹತ್ತಿರವಾದ ಸ್ಥಳ ಯಾವುದು? ಎಂದಾಗ ಅದು ಅಣುಚೇತನದ ಅಂತರಂಗವೇ ಆಗಿದೆಯಲ್ಲವೇ? ಅಂದರೆ ಅಂತರಂಗದಿಂದ ಸ್ವಲ್ಪ ಹೊರ ನೋಡಿದರೂ ಭಗವಂತನು ನಮಗೆ ದೂರವಾದಂತೆಯೇ ಅಲ್ಲವೇ? ಅಂದರೆ ಭಗವಂತನನ್ನು ಕಾಣಲು ಸರಿಯಾದ ಸ್ಥಳವು  ನಮ್ಮ ಅಂತರಂಗವೇ ಆಗಿದೆ. ನಮ್ಮಲ್ಲೇ ಇರುವ ಭಗವಂತನನ್ನು ಹೊರಗೆ ಹುಡುಕಬೇಕೇ?ಕೈಯ್ಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆಯಬೇಕೇ?
ನಿನ್ನ ಅಂತರಂಗದಲ್ಲೆ ಭಗವಂತನಿರುವಾಗ ಅವನನ್ನು ಹುಡುಕೊಕೊಂಡು ಎಲ್ಲಿಗೆ ಹೋಗುವೆ ನೀನು? ನಿನ್ನ ಅಂತರಂಗದಲ್ಲಿರುವ ಭಗವಂತನನ್ನು ಗುರುತಿಸಲು ನಿನಗೆ ಸಾಧ್ಯವಿಲ್ಲದಿದ್ದರೆ ಗುರುತಿಸುವೆಯಾದರೂ ಎಲ್ಲಿ? ಮನೆಯಲ್ಲಿರುವ ವಸ್ತುವನ್ನು ನೀನು ಗುರುತಿಸಲು ಸಾಧ್ಯವಿಲ್ಲದಿದ್ದರೆ ಬೀದಿಯಲ್ಲಿ ಸಿಕ್ಕೀತೇ? ಏಕೆಂದರೆ ಮಂತ್ರವೇ ತಿಳಿಸುವಂತೆ
 ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತ: ||
ಈ ಭಗವಚ್ಚಕ್ತಿಯು ಎಲ್ಲದರ ಒಳಗೂ ಇದೆ. ಮತ್ತು ಎಲ್ಲದರ ಹೊರಗೂ ಇದೆ. ಅಂದರೆ ಎಲ್ಲವೂ ಇದರೊಳಗಿದೆ. ಇದೂ ಎಲ್ಲದರ ಒಳಗೂ ಇದೆ. ಬ್ರಹ್ಮಾಂಡದ ಅಣುಅಣುವಿನಲ್ಲಿಯೂ ಅಂದರೆ ಅದು ಜಡದ ಅಣುವಾಗಿರಬಹುದು ಅಥವಾ ಅಣುಚೇತನದ ಅಣುವಾಗಿರಬಹುದು, ಎಲ್ಲಾ ಅಣು ಅಣುವಿನಲ್ಲೂ ಆ ಭಗವಚ್ಚಕ್ತಿ ವ್ಯಾಪಿಸಿಕೊಂಡಿದೆ.ಅದಕ್ಕಾಗಿ ಭಗವಂತನನ್ನು ಸರ್ವವ್ಯಾಪಿ ಎನ್ನುತ್ತಾರೆ. ಅಷ್ಟೇ ಅಲ್ಲ ಇಡೀ ಬ್ರಹ್ಮಾಂಡವು  ಈ ಭಗವಚ್ಚಕ್ತಿಯ ಒಳಗಿದೆ. ಆದ್ದರಿಂದ ಭಗವಂತನಿಲ್ಲದ ಜಾಗವಿಲ್ಲ. ಎಲ್ಲೆಲ್ಲೂ ಭಗವಂತನಿದ್ದಾನೆ. ಎಲ್ಲವೂ ಭಗವಂತನಲ್ಲಿದೆ.ಈ ಸೂಕ್ಷ್ಮವು ಅರ್ಥವಾದರೆ ಭಗವಂತನನ್ನು ಅರ್ಥಮಾಡಿಕೊಳ್ಳುವುದು ಸುಲಭವೂ ಸರಳವೂ ಆಗುತ್ತದೆ.
ಇರುವ ವಸ್ತುವನ್ನು ಮತ್ತು ಆ ವಸ್ತುವು ಯಾವುದರಲ್ಲಿದೆಯೋ ಅದನ್ನು ಎರಡು ಶಬ್ಧಗಳಲ್ಲಿ ಕರೆಯುತ್ತೇವೆ. ಒಂದು ವ್ಯಾಪ್ಯ ಮತ್ತೊಂದು ವ್ಯಾಪಕ. ಇಲ್ಲಿ ನಮಗೆ ಗೊಂದಲ ಉಂಟಾಗಬಾರದು. ಸಾಮಾನ್ಯವಾಗಿ ಭಗವಂತನ ವಿಚಾರದಲ್ಲಿ ಈ ಅಂಶದಲ್ಲಿ ಜನರಲ್ಲಿ ಸ್ವಲ್ಪ ಗೊಂದಲ ಇದೆ. ಯಾವುದು ಆವರಿಸಿಕೊಳ್ಳುತ್ತದೋ ಅದು ವ್ಯಾಪಕ. ಯಾವುದರೊಳಗೆ ವ್ಯಾಪಿಸಿಕೊಳ್ಳುತ್ತದೋ ಅದು ವ್ಯಾಪ್ಯ.ಇಡೀ ಬ್ರಹ್ಮಾಂಡವು ವ್ಯಾಪ್ಯ. ಅದರಲ್ಲಿ ಸಂಪೂರ್ಣವಾಗಿ ವ್ಯಾಪಿಸಿಕೊಂಡಿರುವ ಸರ್ವ ವ್ಯಾಪಕ ಶಕ್ತಿ ವಿಶ್ವಚೇತನ ಶಕ್ತಿಯಾದ ಭಗವಂತ. ನಮ್ಮ ಒಂದೊಂದು ಅಣು ಅಣುವಿನಲ್ಲೂ ಈ ಭಗವಚ್ಚಕ್ತಿ ವ್ಯಾಪಿಸಿಕೊಂಡಿದೆ. ಆದರೆ ಈ ಶರೀರವು ವ್ಯಾಪ್ಯವೇ ಹೊರತೂ ವ್ಯಾಪಕವಲ್ಲ. ಸುಲಭವಾದ ಉಧಾಹರಣೆ ನೋಡೋಣ.ಒಂದು ಲೋಟದಲ್ಲಿ ಹಾಲನ್ನು ತುಂಬಲಾಗಿದೆ. ಇದರಲ್ಲಿ ಲೋಟವು ವ್ಯಾಪ್ಯ. ಹಾಲು ಲೋಟದಲ್ಲಿ ವ್ಯಾಪಿಸಿದೆಯಾದ್ದರಿಂದ ಅದು  ವ್ಯಾಪಕ. ಇದರಿಂದ ನಮಗೆ ಒಂದು ಸ್ಪಷ್ಟತೆ ಇರುವುದು ಅವಶ್ಯಕ.ವ್ಯಾಪ್ಯ ಮತ್ತು ವ್ಯಾಪಕ ಒಂದೇ ಅಲ್ಲ. ವ್ಯಾಪ್ಯವನ್ನು ಪ್ಯಾಪಕವು ವ್ಯಾಪಿಸಿಕೊಂಡಿರುವುದು ಸತ್ಯ,ಲೋಟವನ್ನು ಹಾಲು ವ್ಯಾಪಿಸಿಕೊಂಡಿರುವುದು ಸತ್ಯ. ಆದರೆ ಹಾಲು ಮತ್ತು ಲೋಟ ಒಂದೇ ಅಲ್ಲ. ವ್ಯಾಪಕವೇ ಬೇರೆ.ವ್ಯಾಪ್ಯವೇ ಬೇರೆ. ಇದು ಜಡವಸ್ತು ವ್ಯಾಪ್ಯವಾಗಿದೆ. ಇದರಲ್ಲಿ ವಿಶ್ವಚೇತನ ಶಕ್ತಿಯು ವ್ಯಾಪಿಸಿಕೊಂಡಿದೆ. ಅದು ವ್ಯಾಪಕ. ಆದ್ದರಿಂದ  ಕಣ್ಣಿಗೆ ಕಾಣುವ ಈ ಜಡವಸ್ತು ಮತ್ತು ಇದರಲ್ಲಿ ವ್ಯಾಪಿಸಿರುವ ವಿಶ್ವಚೇತನಶಕ್ತಿ ಎರಡೂ ಒಂದೇ ಅಲ್ಲ. ಎರಡೂ ಬೇರೆ ಬೇರೆಯೇ ಆಗಿದೆ. ಈ ಕಣ್ಣಿಗೆ ಕಾಣುತ್ತಿರುವ ಜಡವಸ್ತುವಿಗೆ ಇತಿಮಿತಿ ಇದೆ. ಆದರೆ ಇದರಲ್ಲಿ ವ್ಯಾಪಿಸಿರುವ ಆ ವಿಶ್ವಚೇತನ ಶಕ್ತಿಗೆ ಇತಿಮಿತಿಯೇ ಇಲ್ಲ. ಅದು ಇದರಲ್ಲೂ ಇದೆ,ಇದರ ಹೊರಗಿರುವ ಬೇರೆ ವಸ್ತುವಿನಲ್ಲೂ ಇದೆ. ಕಾರಣ ಈ ವಿಶ್ವಚೇತನ ಭಗವಚ್ಚಕ್ತಿಯು ಸರ್ವವ್ಯಾಪಕ.ಅಂದರೆ ಈ ಸರ್ವವ್ಯಾಪಕ ಶಕ್ತಿಯು ಕೇವಲ ಈ ವಸ್ತುವಿಗೆ  ಸೀಮಿತವಲ್ಲ. ಇದರಲ್ಲೂ ಇದೆ. ಬೇರೆಯದರಲ್ಲೂ ಇದೆ. ಎಲ್ಲೆಲ್ಲೂ ಇದೆ. ಅದಿಲ್ಲದ ಸ್ಥಳವೇ ಇಲ್ಲ. ಭಗವಚ್ಚಕ್ತಿಗೆ ಇತಿಮಿತಿಯೇ ಇಲ್ಲ. ಆದರೆ ಭೌತಿಕವಾದ ಈ ಜಡವಸ್ತುವಿಗೆ ಇತಿಮಿತಿ ಇದೆ.ಭೌತಿಕ ಜಗತ್ತನ್ನು ವ್ಯಾಪಿಸಿಕೊಂಡಿ ರುವ ವಿಶ್ವಚೇತನ ಶಕ್ತಿಗೆ ಯಾವ ಮಿತಿಯೂ ಇಲ್ಲ.ನಾವು ಕೇವಲ ಒಂದು ವಸ್ತುವಿನಲ್ಲಿ ಮಾತ್ರವೇ ವಿಶ್ವಚೇತನ ಶಕ್ತಿಯನ್ನು ನೋಡುವುದಾದರೆ ಅದು ನನ್ನ ತಪ್ಪು ಗ್ರಹಿಕೆಯಷ್ಟೆ. ಕಾರಣ ಆ ವಿಶ್ವಚೇತನ ಭಗವಚ್ಚಕ್ತಿಯು ಆ ವಸ್ತುವಿನಾಚೆಗೂ ವ್ಯಾಪಿಸಿದೆ. ಅಂದರೆ ಪ್ರತಿಯೊಂದು    ಅಣುಅಣುವಿನಲ್ಲೂ ಈ ಭಗವ್ಚ್ಚಕ್ತಿಯನ್ನು ನೋಡಬಹುದು. ಈ ಮಂತ್ರದ ಆಧಾರದ ಮೇಲೆ ಚಿಂತನೆಯನ್ನು ಮುಂದಿನವಾರ ಮುಂದುವರೆಸೋಣ.
[ ಈ ಉಪನ್ಯಾಸವನ್ನು ಕೇಳಿದ ನಂತರ ನನ್ನ ಮನದಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರ ಕೊಟ್ಟಾಗ ಮೂಡಿಬಂದ ಕವನ ಇಲ್ಲಿದೆ]

ನೀನಿಲ್ಲೆ ಇರುವಾಗ ಎಲ್ಲಿ ಹೋಗಲಿ ನಾನು
ಎಲ್ಲಿಹುಡುಕಲಿ ನಾನು ಏನ ಹುಡುಕಲಿ ನಾನು||

ಮನೆಯಲ್ಲೇ ನೀನಿರುವೆ, ಮನದಲ್ಲೇ ತುಂಬಿರುವೆ
ನೀನಿಲ್ಲೆ ಇರುವಾಗ ಎಲ್ಲಿ ಹೋಗಲಿ ನಾನು||

ನಾನಿಡುವ ಅಡಿಅಡಿಯು ನಿನ್ನದೇ ನಡೆನಡೆಯು
ಸತ್ಯಪಥದಾ ನಡೆಯು ಮುಕ್ತಿಮಾರ್ಗಕೆ ಅಡಿಯು||

ಸಂಸಾರ ಸಾಗರದಿ ಸಿಲುಕಿ ಬಳಲಿಹೆ ನಾನು
ಸಾಗರವ ದಾಟಿಸುವ ಅಂಬಿಗನು ನೀನು||

ನಿನ್ನ ನಂಬಿಹೆ ನಾನು ಎನ್ನ ಬಿಡದಿರು ನೀನು
ಮೋಹಪಾಶದ ಬಲೆಯ ತುಂಡಿರಿಸು ನೀನು||

Saturday, September 28, 2013

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ಸಂದರ್ಶನ



ಇತ್ತೀಚೆಗೆ  ನಡೆದ ವೇದೋಕ್ತ ಜೀವನಶಿಬಿರದಲ್ಲಿ   ಪಾಲ್ಗೊಳ್ಳಲು  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಹಾಸನಕ್ಕೆ ಬಂದಿದ್ದಾಗ ಅವರ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆ ಹಾಸನದ ಆಕಾಶವಾಣಿಯ ಶ್ರೀ ಶ್ರೀನಿವಾಸ್ ಅವರು ಶರ್ಮರೊಡನೆ ಸಂದರ್ಶನ ನಡೆಸಿದರು. ಅದರ ಕೊಂಡಿ ಇಲ್ಲಿದೆ.

ಭಾಗ-1

1(2).mp3http://www.mediafire.com/listen/5bn6yihxh723gv0/AIR-1(2).mp3

ಭಾಗ-2

http://www.mediafire.com/listen/31t8mh1pe5vs5l3/AIR-2.mp3

ಭಾಗ-3

http://www.mediafire.com/listen/eu2h6akun9khww8/AIR-3.mp3

ಭಾಗ-4
http://www.mediafire.com/listen/ewhkhdziww1mgc0/AIR-4.mp3

Friday, July 26, 2013

“ನಿಜವ ತಿಳಿಯೋಣ” -2

                           
[ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಉಪನ್ಯಾಸದ ನೇರ ಮಾತುಗಳು ]
ಪೀಠಿಕೆ
ವೇದವೆಂದರೆ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವನ್ನು  ಬೆಸೆದು  ಸಮತ್ವದಲ್ಲಿ ನಡೆಸಿಕೊಂಡು ಹೋಗುವ ಜೀವನವಿಜ್ಞಾನ. ವೇದವನ್ನೇ ಏಕೆ ಅನುಸರಿಸಬೇಕು? ಅದಕ್ಕೆ ಹೊರತಾಗಿ ಬೇಕಾದಷ್ಟು ಜ್ಞಾನಗಳಿಲ್ಲವೇ?, ಅನೇಕ ಮತಗ್ರಂಥಗಳಿವೆ ಅಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಮನುಷ್ಯನಲ್ಲಿ ಏಳಬಹುದು. ವೇದವು ಹೇಗೆ ಎಲ್ಲಾ ಮತ ಗ್ರಂಥಗಳಿಗೂ ಭಿನ್ನವಾಗುತ್ತದೆ! ಎಂಬುದನ್ನು ತಿಳಿದುಕೊಂಡಾಗ ವೇದದ ಶ್ರೇಷ್ಠತೆ ನಮಗೆ ಗೊತ್ತಾಗುತ್ತದೆ. ಈ ಬಗ್ಗೆ  ವಿಚಾರಮಾಡುತ್ತಾ ಸಾಗೋಣ.
ವೇದವು ಎಲ್ಲರಿಗಾಗಿ ತೆರೆದಿಟ್ಟ ಜ್ಞಾನಭಂಡಾರವಾಗಿದೆ.ಈ ವಿಚಾರವನ್ನು ದೃಢೀಕರಿಸಲು ಹಲವು ಮಂತ್ರಗಳ ಉಧಾಹರಣೆಯನ್ನು ಮುಂದೆ ನೋಡೋಣ. ಆದರೆ ಮತೀಯ ಗ್ರಂಥವನ್ನು ನೋಡಿದಾಗ. ಅದು ಎಲ್ಲರಿಗಾಗಿ ಅಲ್ಲ. ಯಾರು ಒಂದು ಮತವನ್ನು ನಂಬುತ್ತಾರೋ, ಯಾರು ಆ ಮತದ ಆಚಾರ ವಿಚಾರಗಳನ್ನು ಪಾಲಿಸುತ್ತಾರೋ ಅವರಿಗಾಗಿ ಈ ಮತ ಗ್ರಂಥಗಳು ಬರೆಯಲ್ಪಟ್ಟಿವೆ. ಆದರೆ ಈ ಯಾವ ಕಟ್ಟುಪಾಡುಗಳಿಲ್ಲದೆ ಇಲ್ಲಿರುವ  ವಿಚಾರವು ಸಕಲ ಮಾನವನ ಅಭ್ಯುದಯಕ್ಕಾಗಿ ಎಂಬ ಜ್ಞಾನಒಂದಿದ್ದರೆ ಅದು ವೇದಜ್ಞಾನ ಮಾತ್ರ. ಕಾರಣ ವೇದವನ್ನು ತಿಳಿಯಲು ಜಾತಿ ಕಟ್ಟುಪಾಡುಗಳಿಲ್ಲ, ಧರ್ಮದ ಕಟ್ಟುಪಾಡುಗಳಿಲ್ಲ, ಗಂಡು ಹೆಣ್ಣು ಭೇದವಿಲ್ಲ.ಮನುಷ್ಯ ಮಾತ್ರದ ಎಲ್ಲರಿಗಾಗಿ ತೆರೆದಿಟ್ಟ  ಜ್ಞಾನ ಯಾವುದಾದರೂ ಇದೆ ಎಂದಾದರೆ ಅದು ವೇದಜ್ಞಾನ ಮಾತ್ರ.ಇಷ್ಟು ವಿಶಾಲ ದೃಷ್ಟಿಕೋನದ ವೇದವನ್ನು ಕೆಲವರಿಗೆ ಸೀಮಿತ ಗೊಳಿಸಿಲ್ಲವೇ? ಎಂದರೆ ಹೌದು,ಹಾಗಾಗಿದೆ.  ಅದು ನಮ್ಮ ದೌರ್ಭಾಗ್ಯ.ವೇದವನ್ನು ಹೆಚ್ಚು ಬಲ್ಲವರೇ ಇಂತಾ ವೇದವಿರೋಧಿ ಮಾತುಗಳನ್ನಾಡುತ್ತಾರೆ. ಇದೇ ನಮ್ಮ ದುರಂತ.ನಮ್ಮ ಸಮಾಜದ ದು:ಸ್ಥಿತಿಗೆ ಇದೂ ಒಂದು ಮುಖ್ಯ ಕಾರಣ. ನಾವು ವೇದವನ್ನು ನೇರವಾಗಿ ಅಧ್ಯಯನ ಮಾಡಿದಾಗ ಸಹಜವಾಗಿ ನಮಗೆ ಇದು “ಎಲ್ಲರಿಗಾಗಿ ಇರುವ ಜ್ಞಾನ” ಎಂಬುದು ನಮ್ಮ ಅರಿವಿಗೆ ಬರುತ್ತದೆ. ನಾವೇ ನೇರವಾಗಿ ವೇದದ ಅಧ್ಯಯನ ಮಾಡಬೇಕು. ಯಾರದೋ ವ್ಯಾಖ್ಯೆಯನ್ನು ಓದಿ ಅವರ ಅಭಿಪ್ರಾಯವನ್ನೇ ವೇದದ ತಿರುಳು  ಎಂದು ಭಾವಿಸಿದರೆ   ನಮಗೆ ನಿಜವಾದ  ವೇದ ಜ್ಞಾನದ ಅರಿವು ಸಿಗಲಾರದು. [ಈ ಬರಹವು ಶ್ರೀ ಸುಧಾಕರ ಶರ್ಮರ ಉಪನ್ಯಾಸದ ನೇರ ನುಡಿಗಳು. ನಿಮಗೆ ಈ ಬರಹದಲ್ಲಿನ ಅವರ ಮಾತುಗಳು ಒಪ್ಪಿಗೆ ಯಾಗದಿದ್ದರೆ ಅಂದರೆ ಇದು ಸರಿಯಿಲ್ಲ, ವೇದಕ್ಕೆ ಅನುಗುಣವಾಗಿಲ್ಲ ಎಂದೆನಿಸಿದರೆ ನೀವು vedasudhe@gmail.com ಗೆ ನಿಮ್ಮ  ಸಂದೇಹವನ್ನು ಅಥವಾ ಪ್ರಶ್ನೆಯನ್ನು ತಿಳಿಸಿದರೆ ಶ್ರೀ ಸುಧಾಕರ ಶರ್ಮರಿಂದಲೇ ಉತ್ತರ ಕೊಡಿಸಲಾಗುವುದು]
ಕಣ್ಮುಚ್ಚಿಕೊಂಡು ಯಾವುದನ್ನೂ ನಂಬ ಬೇಡಿ. ಕಾರಣ ಪ್ರಪಂಚದಲ್ಲಿ  ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಲಭ್ಯವಿರುವ, ಎಲ್ಲದಕ್ಕೂ ತೆರೆದುಕೊಳ್ಳುವ ಯಾವುದಾದರೂ ಗ್ರಂಥವಿದೆ ಎಂದರೆ ಅದು ವೇದ ಮಾತ್ರ.ಹೀಗೆ ಎಲ್ಲರ ಪ್ರಶ್ನೆಗಳಿಗೂ, ಎಲ್ಲರ ಪರೀಕ್ಷೆಗಳಿಗೂ, ಧಾರಾಳವಾಗಿ ತೆರೆದುಕೊಳ್ಳುವ ಜ್ಞಾನ ಭಂಡಾರವೆಂದರೆ ಅದು ವೇದ ಮಾತ್ರ. ಬೇರೆ ಯಾವ ಮತ ಗ್ರಂಥಗಳಿಗೂ ಈ ಸಾಮರ್ಥ್ಯ ಇಲ್ಲ. ಮುಂದಿನ ಉಪನ್ಯಾಸದ ಭಾಗವನ್ನು ಓದಿದ ನಂತರ ನೀವು ವೇದದ ವೈಶಿಷ್ಠ್ಯಗಳ ಪಟ್ಟಿ ಮಾಡಿಕೊಂಡು ಅದನ್ನು ಬೇರೆ ಯಾವ ಮತೀಯ ಗ್ರಂಥಗಳ ವೈಶಿಷ್ಠ್ಯಗಳ ಪಟ್ಟಿಯೊಡನೆ ಹೋಲಿಕೆ ಮಾಡಿ ನೋಡಿದಾಗ ಯಾವ ಜ್ಞಾನ ಎಲ್ಲರಿಗಾಗಿ ತೆರೆದಿದೆ? ಅಂದರೆ ಮನುಕುಲದ ಎಲ್ಲರ ಏಳಿಗಾಗಿ ಇದೆ ಎಂಬುದನ್ನು ವಾಚಕರು ಸುಲಭವಾಗಿ ಗ್ರಹಿಸಬಹುದು. ಆದರೆ ಈ ಉಪನ್ಯಾಸ ಮಾಲೆಯನ್ನು ಪೂರ್ಣ ಓದಿ ಮುಗಿಸುವ ವರೆಗೂ ವಾಚಕರು ಎರಡು ನಿಯಮಗಳನ್ನು ಪಾಲಿಸುವ ಅಗತ್ಯವಿದೆ. ಮೊದಲನೆಯ ನಿಯಮವೆಂದರೆ ಪೂರ್ವಾಗ್ರಹ ಇರಕೂಡದು, ಎರಡ  ನೆಯದು ಮುಕ್ತ ಮನಸ್ಸಿರಬೇಕು.
ಸಾಮಾನ್ಯವಾಗಿ ನಾವೆಲ್ಲಾ ಬೆಳೆದು ಬಂದಿರುವ ಪರಿಸರದಲ್ಲಿ ಹಲವಾರು ಆಚಾರ ವಿಚಾರಗಳನ್ನು ನಾವು ಆಚರಿಸಿಕೊಂಡು ಬಂದಿರುತ್ತೇವೆ. ಹಲವಾರು ಧಾರ್ಮಿಕ ನಂಬಿಕೆಗಳು, ಮತೀಯ ಭಾವನೆಗಳು, ಎಲ್ಲವೂ ನಮ್ಮಲ್ಲಿರುತ್ತವೆ. ಈ ಉಪನ್ಯಾಸವನ್ನು ಕೇಳುವಾಗ [ಬರಹ ಓದುವಾಗ]  ನಮ್ಮ ಧಾರ್ಮಿಕ ಭಾವನೆಗಳು/ನಮ್ಮ ನಂಬಿಕೆಗಳು ಸಹಜವಾಗಿ  ಮಧ್ಯೆ ಅಡ್ಡಿಯುಂಟುಮಾಡದೆ ಇರದು. ಆದರೆ ನನ್ನ [ಶರ್ಮರ] ಮನವಿ ಏನೆಂದರೆ ಈ ಉಪನ್ಯಾಸ ಮಾಲೆ ಮುಗಿಯುವ ವರೆಗೂ ಸ್ವಲ್ಪ ನಮ್ಮ ನಮ್ಮ ನಂಬಿಕೆಗಳು, ಆಚರಣೆಗಳನ್ನುಸ್ವಲ್ಪ ಸಮಯ ಪಕ್ಕಕ್ಕಿಟ್ಟು ಅವು ಮಧ್ಯದಲ್ಲಿ ಅಡ್ಡಿ ಉಂಟುಮಾಡದಂತೆ ಎಚ್ಚರ ವಹಿಸಿದರೆ  ಈ ಉಪನ್ಯಾಸದ ವಿಚಾರವು ಸ್ಪಷ್ಟವಾಗುತ್ತದೆ. ವೇದದ ವಿಚಾರವನ್ನು ನೇರವಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ.ವೇದವು ಎಲ್ಲರಿಗಾಗಿ ಎಂದು ಆರಂಭದಲ್ಲಿಯೇ ತಿಳಿಸಲಾಗಿದೆ. ಮತ್ತೊಂದು ಮುಖ್ಯ  ವಿಚಾರವೆಂದರೆ  ವೇದಜ್ಞಾನವು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾದ ಜ್ಞಾನಭಂಡಾರ. ನಮ್ಮ ನೆಮ್ಮದಿಯ ಜೀವನಕ್ಕಾಗಿ ವೇದದಲ್ಲಿರುವ ವಿಚಾರಗಳನ್ನು ನೂರಕ್ಕೆ ನೂರು ಅಳವಡಿಸಿಕೊಳ್ಳಬಹುದು. ಇದು ಕಥೆಯಲ್ಲ.ಸಾಮಾನ್ಯವಾಗಿ ವೇದ ವೇದಾಂತಗಳ ವಿಚಾರದಲ್ಲಿ ಪ್ರವಚನಗಳನ್ನು ಕೇಳಿದ ಮೇಲೆ ಯಾರನ್ನೇ ಆಗಲೀ ಕೇಳಿದರೆ ಬರುವ ಉತ್ತರ “ಕೇಳಲು ತುಂಬಾ ಚೆನ್ನಾಗಿತ್ತು” ಆದರೆ ಜೀವನಕ್ಕೆ ಅಳವಡಿಸಿಕೊಳ್ಳುವ ವಿಚಾರ ಬಂದಾಗ  ಪ್ರವಚನ ಕೇಳುವ ಮುಂಚೆ ನಮ್ಮ ಜೀವನ ಹೇಗಿತ್ತೋ, ನಂತರವೂ ಹಾಗೇ ಇದೆ.ಬದಲಾವಣೆಯಾಗಲಿಲ್ಲ, ಅಂದರೆ ಪ್ರವಚನದ ವಿಚಾರಕ್ಕೂ ನಮ್ಮ ಜೀವನಕ್ಕೂ ಸಂಬಂಧವಿಲ್ಲದಂತಾಯ್ತು.ಕೇಳುವುದಕ್ಕೆ ಮಾತ್ರ ಚಂದ.ಹೀಗೂ ಹೇಳುವುದುಂಟು” ಈ ಪ್ರವಚನದ ಉಪಯೋಗ ಇವನು ಸತ್ತ ಮೇಲೆ “ಪುಣ್ಯದ ರೂಪದಲ್ಲಿ  ಆಗುತ್ತದೆ” ಆದರೆ ವೇದದ ವಿಚಾರದಲ್ಲಿ ಒಂದು ಗಂಟೆ  ಪ್ರವಚನ ಕೇಳಿದರೆ ಆ ಒಂದು ಗಂಟೆಯ ನಂತರ ಅವನಲ್ಲಿ ಅವನ ಆವರಗಿನ ಜೀವನದಲ್ಲಿ ಸುಧಾರಣೆಯಾಗಿರಬೇಕು, ನಮ್ಮ ಚಿಂತನೆಯಲ್ಲಿ ಒಂದಿಷ್ಟಾದರೂ ಪರಿವರ್ತನೆಯನ್ನು ಕಾಣಬೇಕು. ಸ್ವಲ್ಪವಾದರೂ ನಮ್ಮ ಬುದ್ಧಿ ಚುರುಕಾಗಬೇಕು.ಸ್ವಲ್ಪವಾದರೂ ಸತ್ಯವನ್ನು ಗುರುತಿಸುವ,   ಪ್ರಿಯವನ್ನು ಗುರುತಿಸುವ, ಹಿತವನ್ನು ಗುರುತಿಸುವ ಸಾಮರ್ಥ್ಯ ಹೆಚ್ಚಾಗಬೇಕು. ಈ ವಿಚಾರಗಳನ್ನು ಮನಸ್ಸಿಗೆ ಇಳಿಸಿಕೊಂಡಷ್ಟೂ  ಜೀವನದಲ್ಲಿ ಹೆಚ್ಚು ಹೆಚ್ಚು ಪರಿವರ್ತನೆಯನ್ನು  ಕಾಣಬಹುದು. ವೇದ ಎಂಬುದು ವಿಜ್ಞಾನ. ಇದಕ್ಕೆ ಆಧಾರವಾಗಿ ನಮಗೆ ಸಿಗುವಂತಹದ್ದು ವೇದ ಮಂತ್ರಗಳು.ವೇದವು ಪ್ರಪಂಚದ ಅತ್ಯಂತ ಹಳೆಯ ಜ್ಞಾನ ಭಂಡಾರ. ವೈದಿಕ ಸಾಹಿತ್ಯದ ಅರ್ಥವನ್ನು  ತಿರುಚಿದ   ಮ್ಯಾಕ್ಸ್ ಮುಲ್ಲರ್ ಕೂಡ ಒಂದು ಕಡೆ ಬರೆಯುತ್ತಾನೆ “ ಪ್ರಪಂಚದ ಅತ್ಯಂತ ಹಳೆಯ ಸಾಹಿತ್ಯವೆಂದರೆ ಋಗ್ವೇದ” ಅತ್ಯಂತ ಪ್ರಾಚೀನವಾದ ಜ್ಞಾನದ ಮೂಲ ವೇದಗಳು. ಮಿಕ್ಕೆಲ್ಲವೂ ವೇದದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉಪಕೃತವಾಗಿರುವ ಸಾಹಿತ್ಯವೇ ಆಗಿವೆ. ಹಾಗಾಗಿ ವೇದವನ್ನು ಪರಮಪ್ರಮಾಣ ವೆಂತಲೂ ಅದರಿಂದ ಉಪಕೃತವಾಗಿರುವ ಗ್ರಂಥಗಳನ್ನು ಪರತ:ಪ್ರಮಾಣವೆಂತಲೂ ಅಳತೆಗೋಲಾಗಿಟ್ಟುಕೊಂಡು ಅರ್ಥಮಾಡಿಕೊಳ್ಳ ಬೇಕಾಗುತ್ತದೆ.
ವೇದ ವಿಜ್ಞಾನ:
ವೇದ ಎಂದೊಡನೆ ನಮ್ಮ ಕಣ್ಮುಂದೆ ಸಹಜವಾಗಿ  ಬರುವ ಅಂಶಗಳೆಂದರೆ ಯಜ್ಞ ಯಾಗಾದಿಗಳನ್ನು ಮಾಡಲು ಅಗತ್ಯವಾದ ಮಂತ್ರಗಳು, ಶ್ರಾದ್ಧ ಕರ್ಮಾದಿಗಳ ಮಂತ್ರಗಳು, ಇತ್ಯಾದಿ…ಇತ್ಯಾದಿ.. ಆದರೆ ವೇದವು ಅಷ್ಟಕ್ಕೇ ಸೀಮಿತವಾಗಿಲ್ಲ. ವೇದದಲ್ಲಿ ಸಮಸ್ತವೂ ಇದೆ. ವೇದ ವಿಜ್ಞಾನದ ಬಗ್ಗೆ ವಿಚಾರ ಮಾಡುತ್ತಾ ಹೋದಾಗ ಹಲವು ಹೊಸ ವಿಷಯಗಳು ನಮ್ಮ ಕಣ್ಮುಂದೆ ಬರುತ್ತವೆ. ಯಾವುದೇ ಸಂಪ್ರದಾಯ-ಆಚರಣೆಗಳಿಂದ ಮುಕ್ತವಾದ ಇವು ನೂರು ಪ್ರತಿಶತ ವೈಜ್ಞಾನಿಕ ಸತ್ಯ ಅಂಶಗಳು. ವಿಜ್ಞಾನವೆಂದರೆ ವಿಶೇಷ ಜ್ಞಾನ. ಈ ಅರ್ಥದಲ್ಲಿ ವಿಚಾರ ಮಾಡುವಾಗ ವೇದ ವಿಜ್ಞಾನದಲ್ಲಿ ಕಾಣಬರುವ ಮೊದಲ ಅಂಶವೆಂದರೆ “ಅಸ್ತಿತ್ವ”.  ಅಸ್ತಿತ್ವ ಎಂದರೆ ಇಂಗ್ಲೀಶ್ ನಲ್ಲಿ ಎಂಟಿಟಿ (ENTITY )ಎನ್ನುತ್ತಾರೆ. ಈ ಪದವನ್ನು ಈಗ ನಿಧಾನವಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದು ಅಸ್ತಿತ್ವದಲ್ಲಿದೆಯೋ ಅದು ಯಾವಾಗಲೂ ಅಸ್ತಿತ್ವದಲ್ಲಿರುತ್ತದೆ. ಅದನ್ನು ನಾಶ ಮಾಡಲೂ ಸಾಧ್ಯವಿಲ್ಲ. ಹೊಸ ದ್ರವ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಯಾವುದು ಇದೆಯೋ ಅದು ಇರುತ್ತದೆ. ಆದರೆ ಸಂದರ್ಭೋಚಿತವಾಗಿ ಬೇರೆ ಬೇರೆ ರೂಪಗಳನ್ನು ಪಡೆದು ರೂಪಾಂತರವಾಗಬಲ್ಲದು, ಅಷ್ಟೆ. ಆದರೆ ಮೂಲ  ದ್ರವ್ಯ ನಾಶವಾಗಲಾರದು.
 ಅಸ್ತಿತ್ವವನ್ನು ಒಂದು ವಸ್ತು ಎಂದು ತಿಳಿಯೋಣ. ಯಾವ ವಸ್ತುವೇ ಆಗಲಿ ಅದು ಆಗಿರುವುದು ದ್ರವ್ಯದಿಂದ.ಈ ದ್ರವ್ಯಕ್ಕೆ  ಮ್ಯಾಟರ್ ಎನ್ನುತ್ತಾರೆ.ದ್ರವ್ಯದ ಬಗ್ಗೆ  ವಿಜ್ಞಾನ ವಾದರೂ ಹೇಳುವುದೇನು “ದ್ರವ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಪಡಿಸಲೂ ಸಾಧ್ಯವಿಲ್ಲ”. ಅಸ್ತಿತ್ವ ಎಂಬುದು ಒಂದೇ.ಆದರೆ ಅದರದೇ ರೂಪಾಂತರ ಅನೇಕ. ಉಧಾಹರಣೆಗೆ ಮಂಜಿನ ಗೆಡ್ಡೆ. ಅದು ಬಿಸಿಯಾದಾಗ  ನೀರಾಗುತ್ತದೆ,ಇನ್ನೂ ಹೆಚ್ಚಿನ ಉಷ್ಣತೆಯಲ್ಲಿ ಆವಿಯಾಗಿ ರೂಪಾಂತರವಾಗುತ್ತದೆ. ಮೂಲದಲ್ಲಿ ವಸ್ತು ಒಂದೇ ಅಲ್ಲವೇ? ಯಾವುದು ಇನ್ನೊಂದರ ಸಹಾಯವಿಲ್ಲದೆ ತನ್ನ ಗುಣ ಲಕ್ಷಣದಮೇಲೆ ಇರುತ್ತದೋ , ಅದನ್ನು ವಿಜ್ಞಾನದಲ್ಲಿ ಅಸ್ತಿತ್ವ ಎನ್ನುತ್ತಾರೆ. ವೇದವು  ಈ ಬಗ್ಗೆ ಏನು ಹೇಳುತ್ತದೆ, ಒಂದು ಮಂತ್ರ ನೋಡೋಣ.
ಅದಕ್ಕಿಂತ ಮುಂಚೆ ವೇದ ಮಂತ್ರವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಬಗ್ಗೆ ಸ್ವಲ್ಪ ವಿಚಾರ ಮಾಡಬೇಕಾಗುತ್ತದೆ. ಅನೇಕರು ಭಾವಿಸಿರುವಂತೆ ವೇದವು ಸಂಸ್ಕೃತದಲ್ಲಿಲ್ಲ. ವೇದವು ವೇದಭಾಷೆಯಲ್ಲಿದೆ, ಎಂದರೆ ಅಚ್ಚರಿಯಾಗಬಹುದು. ವೇದಭಾಷೆ ಎಂದರೇನು? ಪದದ ನಿರ್ಮಾಣ ಹೇಗಾಗುತ್ತದೆ? ಅದರ  ಹಿಂದಿನ ವಿಜ್ಞಾನವನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು, ಇತ್ಯಾದಿ ವಿಚಾರಗಳ ಬಗ್ಗೆ ಮುಂದಿನ ಭಾನುವಾರ ನೋಡೋಣ
[ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉಪನ್ಯಾಸದ ಬರಹ ರೂಪ]

-ಹರಿಹರಪುರಶ್ರೀಧರ್

Thursday, June 27, 2013

“ನಿಜವ ತಿಳಿಯೋಣ” ಭಾಗ-1

 ನನ್ನ ಗುರುಗಳಾದ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಕಳೆದ 25 ವರ್ಷಗಳಿಂದ ಹಲವು ಗುರುಗಳ ಹತ್ತಿರ  ನಿಯಮಿತವಾಗಿ ವೇದಾಧ್ಯಯನ ಮಾಡುತ್ತಿರುವ ಪಂಡಿತರು. ನಮ್ಮ ಸುಖಮಯ ಜೀವನಕ್ಕೆ ವೇದವು ಎಷ್ಟು ಉಪಕಾರಿ ಯಾಗಿದೆ, ಎಂದುದನ್ನು ಬಲು ಸರಳ ಸ್ಪಷ್ಟ ನುಡಿಗಳಲ್ಲಿ ತಮ್ಮ ಉಪನ್ಯಾಸ ಮಾಲೆಯಲ್ಲಿ ತಿಳಿಸಿಕೊಟ್ಟಿದ್ದಾರೆ.  ಉಪನ್ಯಾಸದ ಬರಹ ರೂಪವನ್ನು ಈ ಸಂಚಿಕೆಯಿಂದ ಆರಂಭಿಸಿ ಸುಮಾರು 20 ಸಂಚಿಕೆಯಲ್ಲಿ ಪ್ರಕಟಿಸಲಾಗುವುದು] 
  
ಯಾವುದೇ ವಿಚಾರವನ್ನು ನಾವು ನಂಬಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಅಥವಾ ಬೇರೆಯವರಿಗೆ ತಿಳಿಸಬೇಕಾದರೆ ಒಂದು ಎಚ್ಚರಿಕೆಯನ್ನು ನಾವು ವಹಿಸಬೇಕು.ಅದೇನದು? “ನಾವು ಆಡುತ್ತಿರುವ ಮಾತು ಸತ್ಯವಾಗಿದೆಯೇ? ಪ್ರಿಯವಾಗಿದೆಯೇ? ಮತ್ತು ಎಲ್ಲರ ಹಿತಕ್ಕಾಗಿ ಈ ವಿಚಾರ ಇದೆಯೇ?ನಾವು ಆಡುವ ಮಾತಿನಲ್ಲಿ ಸತ್ಯ, ಪ್ರಿಯ ಮತ್ತು ಹಿತ ಈ ಮೂರು ಅಂಶಗಳು ಇವೆಯೇ ಎಂಬುದನ್ನು ನಾವು ಮೊದಲು ಗಮನಿಸಿಕೊಳ್ಳಬೇಕು.ಯಾವ ನಮ್ಮ ಮಾತಿನಲ್ಲಿ ಯಾವ ನಮ್ಮ ನಂಬಿಕೆಯಲ್ಲಿ ಈ ಮೂರು ಅಂಶಗಳು ಇಲ್ಲ,ಅವು ನಮಗೆ ಜೀವನದಲ್ಲಿ ನಿಶ್ಪ್ರಯೋಜಕ. ಬೆಳಗಿನಿಂದ ಸಂಜೆಯವರಗೆ ನಾವು ಆಡಿರುವ ಮಾತಿನಲ್ಲಿ ಈ ಮೂರೂ ಅಂಶಗಳು ಇವೆಯೇ?  ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ನೋಡೋಣ.ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವಾಡುವ ಬಹಳಷ್ಟು ಮಾತುಗಳು ಈ ಮೂರೂ ಅಂಶಗಳಿಗಿಂದ ದೂರವೇ ಇರುತ್ತದೆ. ಹೀಗಿರುವುದರಿಂದ ನಾವಾಡುವ ಮಾತಿನಿಂದ ಯಾವ ಪ್ರಭಾವ ಆಗುತ್ತಿಲ್ಲ,ಜೀವನದಲ್ಲಿ ಯಾವ ಪರಿವರ್ತನೆ ಆಗಬೇಕಿತ್ತು ಅದು ಆಗುತ್ತಿಲ್ಲ, ಮಾತು ತನ್ನ ಶಕ್ತಿಯನ್ನು ಕಳೆದುಕೊಂಡಿದೆ.ನಮ್ಮ ಜೀವನ “ಇಷ್ಟೇನಾ?” ಎನ್ನುವಂತೆ ಸಪ್ಪೆಯಾಗಿದೆ.ಆದರೆ ಹೀಗಿರಬೇಕಾಗಿಲ್ಲ. ನಮ್ಮ ಜೀವನವನ್ನು ನಗುನಗುತ್ತಾ ಸಂತಸದಿಂದ ಕಳೆಯಲು ಸಾಧ್ಯ.ನಾವು ಚೆನ್ನಾಗಿರುವುದರ ಜೊತೆಗೆ ಬೇರೆಯವರನ್ನೂ ಚೆನ್ನಾಗಿಕಾಣುತ್ತಾ ಬದುಕಬಹುದು.ಅದಕ್ಕೆ ಬೇಕಾದ ಸಕಲ ಸೂತ್ರಗಳೂ ಸಿದ್ಧವಿದೆ.ಹೊಸದಾಗಿ ಹುಡುಕುವ ಅಗತ್ಯವಿಲ್ಲ. ಅದು ಯಾವುದೆಂದರೆ ಅದುವೇ ವೇದದ ಜ್ಞಾನ.
ವೇದ ಎಂಬುದು ನಾವು ನಿತ್ಯಜೀವನದಲ್ಲಿ ಹೇಗೆ ಬಾಳಬೇಕೆಂಬುದನ್ನು ತಿಳಿಸಿಕೊಡುವ ಜ್ಞಾನ. ಈ ಮಾನವ ಜೀವನದಲ್ಲಿ ಹೇಗೆ ಬದುಕಬೇಕು, ಜೀವನ ಮಾಡುತ್ತಲೇ ಅಧ್ಯಾತ್ಮಸಾಧನೆಯನ್ನು ಹೇಗೆ ಮಾಡಬೇಕೆಂಬ   ಅರಿವನ್ನು ವೇದವು ತಿಳಿಸಿಕೊಡುತ್ತದೆ.ಲೌಕಿಕ ಜೀವನವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆಯೂ ಅದ್ಭುತವಾದ ಮಾರ್ಗದರ್ಶನವಿದೆ, ಮತ್ತು ಈ ಜೀವನದ ಪರಮ ಉದ್ಧೇಶವು ಕೆವಲ ಸಂಪತ್ತನ್ನುಗಳಿಸಿ ಭೋಗಜೀವನದಲ್ಲಿಮುಳುಗುವುದಲ್ಲ, ಅದರಾಚೆಗಿರುವ ಆಧ್ಯಾತ್ಮ ಸಾಧನೆಯನ್ನೂ ಮಾಡಬೇಕೆಂಬುದನ್ನು ತಿಳಿಸಿಕೊಡುತ್ತದೆ.ಇದೊಂದು ಸಮನ್ವಯದ ಚಿಂತನೆ.  ಇದನ್ನು ಅರ್ಥಮಾಡಿಕೊಳ್ಳಲು ಮಾಜದಲ್ಲಿರುವ ಎರಡು ವಿಪರೀತವಾದಗಳನ್ನು ನೋಡಬೇಕು.ಒಂದು ವಿಪರೀತವಾದವೇನೆಂದರೆ ಎಷ್ಟು ವರ್ಷಗಳು ಬದುಕ ಬೇಕಾಗಿದೆ! ಬದುಕಿರುವಷ್ಟು ಕಾಲ ಜೀವನವನ್ನು  ಭೋಗಿಸಿ ಬಿಡೋಣ.ಸಾಲಮಾಡಿಯಾದರೂ ತುಪ್ಪ ತಿನ್ನು. ಈ ಜೀವನವನ್ನು ಭೋಗವಾದ ಎನ್ನುತ್ತಾರೆ.ಇದು ಒಂದು ವಿಪರೀತವಾದದ ಗುಂಪು.
 ಈ ಜೀವನ ಎಂಬುದನ್ನು ಪೂರ್ಣ ತಿರಸ್ಕರಿಸಿ ವೈರಾಗ್ಯದ ವಿಚಾರವನ್ನು ಮಾತನಾಡುವ ಮತ್ತೊಂದು  ಗುಂಪು. ಇದು ಪುನ: ವಿಪರೀತವೇ ಸರಿ. ಜೀವನವನ್ನು ಪೂರ್ಣ ತಿರಸ್ಕರಿಸಿ ಬದುಕುವ ಬಗೆಯಾದರೂ ಹೇಗೆ? ಆದರೂ ಇಂತಾದೊಂದು ವಾದವಿದೆ.ವಿಚಿತ್ರವೆಂದರೆ ವೈರಾಗ್ಯದ ಮಾತನಾಡುವವರೂ ಕೂಡ ಲೌಕಿಕವನ್ನು ಬಿಟ್ಟು ಬದುಕಲಾರರು. ಹಾಗಾಗಿ ಈ ಎರಡೂ ವಿಪರೀತವಾದಗಳ  ನಡುವೆ ಎರಡನ್ನೂ ಸಮನ್ವಯಗೊಳಿಸುವ ಒಂದು ಮಾರ್ಗವಿದೆ. ಅದೇ ವೇದದ ನಿಜವಾದ ಮಾರ್ಗ. ಅದು ಏನು ಹೇಳುತ್ತದೆ? ಮಾನವ ಜೀವನದಲ್ಲಿ ಲೌಕಿಕ ಜೀವನವನ್ನು ಅಲ್ಲಗಳೆಯುವಂತಿಲ್ಲ. ಅದು ಇರಲಿ. ಅಂದರೆ ಹೆಂಡತಿ ಮಕ್ಕಳು, ಐಶ್ವರ್ಯ, ಸಂಪತ್ತು ಎಲ್ಲವೂ ಇರಲಿ. ಆದರೆ…..ಇದೇ ಜೀವನದ ಅಂತಿಮ ಲಕ್ಷ್ಯ ಗುರಿ ಅಲ್ಲ.ಅದರಾಚೆಗೂ ಇನ್ನೇನೋ ಇದೆ. ಹಾಗಾಗಿ ಇವುಗಳಲ್ಲಿ ಮುಳುಗಿಹೋಗಬೇಡ.ಅಧ್ಯಾತ್ಮ ವಿಚಾರವನ್ನು ಮಾತನಾಡುವವನಿಗೂ ಹಸಿವಾಗುತ್ತದೆ, ಆದ್ದರಿಂದ ಅನ್ನವನ್ನು ತಿರಸ್ಕರಿಸುವಂತಿಲ್ಲ, ಐಶ್ವರ್ಯ ಸಂಪಾದನೆಯನ್ನು ತಿರಸ್ಕರಿಸುವಂತಿಲ್ಲ, ಎಲ್ಲವೂ ಬೇಕು, ಆದರೆ ಎಲ್ಲವೂ ಜೀವನಕ್ಕೆ ಎಷ್ಟುಬೇಕೋ ಅಷ್ಟರಲ್ಲಿರಲಿ, ಹೆಚ್ಚು ಮಾಡಿಕೊಂಡರೇ ನೀನೇ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳ ಬೇಕಾಗುತ್ತದೆ, ಹೆಚ್ಚಾಗಿ ದುಡಿದ ಯಾವ ಸಂಪತ್ತೂ ಕಡೆಯಲ್ಲಿ ನಿನ್ನಜೊತೆ ಬರುವುದಿಲ್ಲ. ಈ ದೇಹವನ್ನು ಬಿಡುವಾಗ ಎಲ್ಲವನ್ನೂ ಬಿಟ್ಟೇ ಹೋಗಬೇಕಲ್ಲವೇ? ತೆಗೆದುಕೊಡುಹೋದವರನ್ನು ಯಾರಾದರೂ ನೋಡಿದ್ದೀರಾ?
ಆದ್ದರಿಂದ ಕಡೆಯಲ್ಲಿ ಬಿಟ್ಟೇ ಹೋಗಬೇಕಾದ ಸಂಪತ್ತನ್ನು ಎಷ್ಟು ಮಾಡಿಕೊಳ್ಳಬೇಕು? ಇದಕ್ಕಾಗಿ ವಾಮಮಾರ್ಗದಲ್ಲೂ ಸಂಪಾದಿಸಬೇಕೇ? ಇರುವಾಗ ಬದುಕಲು ಹಣದ ಅವಶ್ಯಕತೆ ಇದೆ, ಅದಕ್ಕಾಗಿ ಸಂಪಾದಿಸಲೇ ಬೇಕು.ಅದು ಸರಿ. ಅದು ಕರ್ತವ್ಯವೂ ಕೂಡ.ಸರಿ, ಹಾಗಾದರೆ ಉಳಿದ ಸಮಯವನ್ನೆಲ್ಲಾ ಕಳೆಯುವುದಾದರೂ ಹೇಗೆ? ಅದನ್ನೇ ತಿಳಿದುಕೊಳ್ಳಬೇಕಾದ್ದು. ನಿನ್ನ ಅಗತ್ಯ ದುಡಿಮೆಗೆ ಹೊರತಾಗಿ ಹೆಚ್ಚಾಗಿ ಇರುವ ಸನಯವನ್ನು ಆಧ್ಯಾತ್ಮದ ಸಾಧನೆಗಾಗಿ ಬಳಸಿಕೋ.ಕಾರಣ  ಏನೆಂದರೆ ಈ ಆಧ್ಯಾತ್ಮಿಕ ಸಾಧನೆಮಾಡಲು ಈ ಮನುಷ್ಯಜನ್ಮದಲ್ಲಿ ಮಾತ್ರವೇ ವಿಶೇಷ ಅವಕಾಶವಿದೆ. ಬೇರೆ ಯಾವ ಜನ್ಮದಲ್ಲೂ ಆಧ್ಯಾತ್ಮಿಕ ಸಾಧನೆಮಾಡಲು ಸಾಧ್ಯವಿಲ್ಲ. ಏಕೆಂದರೆ ಮನುಷ್ಯೇತರ ಜೀವಿಗಳಿಗೆ  ಇರುವ ಶರೀರ, ಇಂದ್ರಿಯ ಮನಸ್ಸುಗಳಿಗೆ ಆಧ್ಯಾತ್ಮಿಕ ಸಾಧನೆ ಮಾಡುವ ಸಾಮರ್ಥ್ಯ ಇಲ್ಲ. ಸರಳವಾಗಿ ಹೇಳಬೇಕೆಂದರೆ  ನಮ್ಮ ಶರೀರವು ಒಂದು   ಸೈಂಟಿಫಿಕ್ ಕ್ಯಾಲ್ಕುಲೇಟರ್ ಇದ್ದಂತೆ.ಮಿಕ್ಕ ಜೀವಿಗಳದ್ದು ಸಾಮಾನ್ಯ ಕ್ಯಾಲ್ಕುಲೇಟರ್ . ಅದರಲ್ಲಿ ಕೂಡು,ಕಳೆ,ಗುಣಿಸು, ಭಾಗಿಸು ಇಷ್ಟು ಮಾತ್ರ ಮಾಡಲು ಸಾಧ್ಯ. ನಮ್ಮ ಕ್ಯಾಲ್ಕುಲೇಟರ್ ಆದರೋ ವಿಶೇಷ ಕ್ಯಾಲ್ಕುಲೇಟರ್. ಅದರಲ್ಲಿ ಕೂಡು,ಕಳೆ,ಗುಣಿಸು, ಭಾಗಿಸು,ಜೊತೆಗೆ ಟ್ಯಾನ್ ತೀಟಾ, ಕಾಸ್ ತೀಟಾ, ಟ್ಯಾನ್ ಇನ್ವರ್ಸ್ ಅಲ್ಲದೆ ಇನ್ನೂ ಹಲವಾರು ವಿಶೇಷ ಲಾಭಕ್ಕಾಗಿ ಉಪಯೋಗಿಸಬಹುದು.ಆದರೆ ಸಾಮಾನ್ಯ  ಭೋಗ ಜೀವನ ಅಪೇಕ್ಷಿಸುವವನು ಈ ಒಂದು ಸೈಂಟಿಫಿಕ್ ಕ್ಯಾಲ್ಕುಲೇಟರ್ ನ್ನು ಕೇವಲ  ಕೂಡು,ಕಳೆ,ಗುಣಿಸು, ಭಾಗಿಸುವುದಕ್ಕೆ ಉಪಯೋಗಿಸಿಕೊಳ್ಳುತ್ತಾನೆ. ಇಷ್ಟು ಸಾಧಾರಣ ಕೆಲಸ ಮಾಡಲು ಇಂತಹಾ ಉತ್ತಮ ಸೈಂಟಿಫಿಕ್ ಕ್ಯಾಲ್ಕುಲೇಟರ್ ಬೇಕಾಗಿತ್ತೇ? ಪ್ರಾಣಿಗಳಂತೆ ಕೇವಲ  ತಿಂದುಉಂಡು ಮಕ್ಕಳನ್ನು ಹಡೆಯಲು ಮನುಷ್ಯ ಶರೀರವೇ ಬೇಕೇ? ಯಾವ ಪ್ರಾಣಿಯೂ ಇಷ್ಟು ಕೆಲಸ ಮಾಡುತ್ತೆ.  ಅಷ್ಟನ್ನೇ ಮನುಷ್ಯ ಶರೀರದಲ್ಲೂ ಮಾಡಿದರೆ ಸೈಂಟಿಫಿಕ್ ಕ್ಯಾಲ್ಕುಲೇಟರ್ ನ್ನು ಕೇವಲ ಕೂಡು ಕಳೆಯುವುದಕ್ಕೆ ಉಪಯೋಗಿಸಿದಂತಾಗುತ್ತದೆ.ಇಷ್ಟೇ ಸರಳವಾದ ವಿಚಾರವಿದು.ಮನುಷ್ಯ ಶರೀರ ಸಿಕ್ಕಿರುವಾಗ ಅದನ್ನು ಉಪಯೋಗಿಸಿಕೊಂಡು ಎಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವೋ ಅಷ್ಟು ಮಾಡಬೇಕು.ಆಗ ಮಾತ್ರ ಮನುಷ್ಯನಾಗಿ ಹುಟ್ಟಿದ್ದಕ್ಕೂ ಸಾರ್ಥಕ ವಾಗುತ್ತದೆ.ಹಾಗಾದರೆ ಕೂಡು ಕಳೆಯುವ ಲೆಕ್ಖಾಚಾರ ಬೇಡವೇ? ಅದೂ ಬೇಕು. ಆದರೆ ನಮ್ಮ ಜೀವನ ಅಷ್ಟಕ್ಕೇ ನಿಲ್ಲ ಬಾರದು. ಈ ವಿಶಿಷ್ಟವಾದ ಮಾನವ ಶರೀರವನ್ನು ಉಪಯೋಗಿಸಿಕೊಂಡು ಏನಾದರೂ ಉತ್ತಮ ಕೆಲಸ ಮಾಡಬೇಕು.
ನಮಗೆ ಈಗ ಅರ್ಥವಾಗಬಹುದು ಸಮನ್ವಯದ ಸೂತ್ರ. ಲೌಕಿಕ ಜೀವನ ಬೇಡವೇ? ಬೇಕು. ಶರೀರ  ಮನಸ್ಸು ಇಂದ್ರಿಯಗಳ ಪೋಷಣೆಗಾಗಿ ಏನೇನು ಬೇಕೋ ಎಲ್ಲವೂ ಬೇಕು. ಆದರೆ ಅದೇ ಕೊನೆಯಲ್ಲ. ಅದನ್ನು ಆಧಾರವಾಗಿಟ್ಟುಕೊಂಡು ಮುಂದೆ ಆಧ್ಯಾತ್ಮಿಕ ಸಾಧನೆಮಾಡಬೇಕಾಗಿದೆ ಏಕೆಂದರೆ ಮನುಷ್ಯಜೀವ ಒಂದೇ ಅಧ್ಯಾತ್ಮ ಸಾಧನೆ ಮಾಡಲು ಇರುವ ಅವಕಾಶ. ಈ ಶರೀರವನ್ನು ಬಳಸಿ ಕೊಂಡು ಸಾಧನೆ ಮಾಡಿದರೆ ಉಂಟು, ಇಲ್ಲದಿದ್ದರೆ ಇಲ್ಲ.ಇದೇ ಸಮನ್ವಯದ ಗುಟ್ಟು.ಇದನ್ನೇ ಶ್ರೀ ಕೃಷ್ಣ ಹೇಳಿದ್ದು “ಸಮತ್ವಂ ಯೋಗ ಉಚ್ಚತೇ”. ಇದನ್ನು ಗುರುತಿಸಿಕೊಂಡವನು ಸಾಧನೆ ಮಾಡಬಲ್ಲ. ಹಿಂದಿನ ಋಷಿಮುನಿಗಳೆಲ್ಲಾ ಬಹುಪಾಲು ಗೃಹಸ್ಥರೇ ಆಗಿದ್ದರು. ವೈರಾಗ್ಯದ ಹೆಸರಲ್ಲಿ ತಮ್ಮ ಲೌಕಿಕ ಜೀವನವನ್ನು ಅಲ್ಲಗಳೆದವರಲ್ಲ. ಅವರು ಲೌಕಿಕ ಜೀವನದಲ್ಲಿದ್ದುಕೊಂಡೇ ಆಧ್ಯಾತ್ಮಿಕ ಸಾಧನೆ ಮಾಡಿದವರು.ಇದೇ ಸರಿಯಾದ ಮಾರ್ಗ. ಇದುವೇ ಸಮತ್ವದ ಜೀವನ. ಈ ಮಾರ್ಗವನ್ನು ತಿಳಿಸುವ ಏಕೈಕ ವಿಜ್ಞಾನ ಶಾಸ್ತ್ರವೆಂದರೆ ಅದು ವೇದ. ವೇದವೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಬೇಕಾದ, ಶ್ರಾದ್ಧಾದಿಗಳನ್ನು ಮಾಡಿಸಲು ಇರುವ ಮಂತ್ರಗಳಲ್ಲ. ಒಂದೊಂದು ವೇದ ಮಂತ್ರದಲ್ಲೂ ಮನುಷ್ಯನ ನೆಮ್ಮದಿಯ ಜೀವನಕ್ಕೆ ಬೇಕಾದ ಅದ್ಭುತವಾದ ಜ್ಞಾನ ಭಂಡಾರ ಇದೆ. ನಾವು ಅದನ್ನು ಉಪಯೋಗಿಸಿಕೊಂದು  ಬದುಕಿಗೆ  ಅಳವಡಿಸಿಕೊಂಡು ಜೀವನ ಮಾಡಿದ್ದೇ ಆದರೆ ನಾವೂ ಚೆನ್ನಾಗಿರಬಹುದು, ಜೊತೆಯಲ್ಲಿರುವ ಇತರರನ್ನೂ ಚೆನ್ನಾಗಿರುವಂತೆ ಮಾಡಬಹುದು.ಲೌಕಿಕ ಮತ್ತು ಆಧ್ಯಾತ್ಮಿಕದ ಸಮತ್ವವನ್ನು ಕಾಪಾಡಿಕೊಂಡು ಜೀವನ ನಡೆಸಲು ಇದರಿಂದ ಸಾಧ್ಯ.
ಹಿಂದಿನ ತಲೆಮಾರಿನವರು ಆಧ್ಯಾತ್ಮಿಕ ವಿಷಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆದರೆ  ಈಗಿನ ಪೀಳಿಗೆ “ಯಾಕೆ” ಅಂತ ಪ್ರಶ್ನೆ ಕೇಳಿದರೆ ಹಿಂದಿನ ತಲೆಮಾರಿನವರಲ್ಲಿ ಸ್ಪಷ್ಟ ಉತ್ತರವಿಲ್ಲ. ನಮ್ಮ ಹಿಂದಿನವರು ಮಾಡುತ್ತಿದ್ದರು. ಅದಕ್ಕೆ ನಾನೂ ಮಾಡುತ್ತಿರುವೆ. ನೀನೂ ಮಾಡು, ಹೀಗೆ ಕೊಡುವ ಉತ್ತರದಿಂದ ಇಂದಿನ ಯುವ ಪೀಳಿಗೆಗೆ ಸಮಾಧಾನವಾಗುವುದಿಲ್ಲ. ಹಿಂದಿನ ತಲೆಮಾರು ಮತ್ತು ಈಗಿನ ಯುವ ಪೀಳಿಗೆಯ ನಡುವೆ ಇರುವ ಸಮಸ್ಯೆಯೇ ಇದು. ಇಂದಿನ ಯುವ ಪೀಳಿಗೆ ಏನು ಹೇಳಬಹುದು? ಜೀವನದಲ್ಲಿ ಅನುಭವಿಸಲು ಏನೋ ಸಿಗುತ್ತಿರುವ ಹೊತ್ತಿಗೆ ನೀವು ಅಡ್ಡಿ ಮಾಡುವುದು ಸರಿಯೇ? ಎಂದು ಹಿಂದಿನ ತಲೆಮಾರಿನವರಿಗೆ ಪ್ರಶ್ನೆ ಹಾಕುತ್ತಾರೆ. ಇಂದಿನ ಪೀಳಿಗೆಯ ಪ್ರಶ್ನೆಗೆ ಹಿಂದಿನ ತಲೆಮಾರಿನವರಿಗೆ ಉತ್ತರ ಕೊಡಲು ಗೊತ್ತಿಲ್ಲದಿರುವುದು ಇಂದಿನ ಸಮಸ್ಯೆಗೆಲ್ಲಾ ಮೂಲ ಕಾರಣವಾಗಿದೆ. ಎಲ್ಲರ ಮನೆಗಳಲ್ಲೂ ಈ ಸಮಸ್ಯೆಯನ್ನು ಕಾಣಬಹುದಾಗಿದೆ. ಈ ಎರಡೂ ಪೀಳಿಗೆಗೆ ಸರಿಯಾಗಿ ಸಮನ್ವಯ ಮಾಡುವ ಸಾಮರ್ಥ್ಯ ಇರುವುದು ವೇದಕ್ಕೆ ಮಾತ್ರ. ಹಿಂದಿನವರು ಗೊಡ್ಡು ಸಂಪ್ರದಾಯವನ್ನು ಹೇಳುತ್ತಿದ್ದರೆ ಅದು ಹಾಗಲ್ಲ, ಇದು ಸರಿಯಾದ ಮಾರ್ಗ ಎಂದು ಋಜುಮಾರ್ಗವನ್ನು  ತೋರಿಸಿ ಅವರನ್ನು ತಿದ್ದಲು ಸಹಾಯಕವಾಗುತ್ತದೆ. ಅದೇ ಸಮಯದಲ್ಲಿ ಇಂದಿನ ಪೀಳಿಗೆಯವರ ಪ್ರಶ್ನೆಗಳಿಗೆ ಸರಿಯಾದ ವೈಜ್ಞಾನಿಕ ಉತ್ತರಕೊಟ್ಟು ಅವರ ಅಭ್ಯುದಯಕ್ಕೂ ಕಾರಣ ವಾಗುತ್ತದೆ. ಇದು ವೇದದ ವೈಶಿಷ್ಠ್ಯ.

Wednesday, March 6, 2013

ಯಾವುದೇ ಸಮಸ್ಯೆಗೂ ಇಲ್ಲಿದೆ ಪರಿಹಾರ!


ಈ ಮಾತು ಉತ್ಪ್ರೇಕ್ಷೆಯಲ್ಲ.  ಲೇಖನದ ಕೊನೆಗೆ ಬಂದಾಗ ನೀವೂ ಇದನ್ನು ಒಪ್ಪುವಿರಿ.  ದಯವಿಟ್ಟು ಸಾಲುಗಳ ಮಧ್ಯದಲ್ಲಿ ಓದುತ್ತಾ ಹೋಗಿ!!

           ಸಮಸ್ಯೆ ಎದುರಾದ ಮೇಲೆ ಪರಿಹಾರ ಹುಡುಕುವುದು, ಮನೆಗೆ ಬೆಂಕಿ ಬಿದ್ದಮೇಲೆ ಬಾವಿಯನ್ನು ತೋಡಲು ಪ್ರಾರಂಭಿಸಿದಂತೆ.  ನಾಳೆ ಬರಬಹುದಾದ ಸಮಸ್ಯೆ ಬಾರದಂತೆ ಇಂದೇ ತಡೆಯೊಡ್ಡುವುದೇ ಜಾಣತನ.  ಒಂದು ವೇಳೆ ತಡೆಯಲಾಗದಿದ್ದರೆ ಅದಕ್ಕೆ ಇಂದೇ ಪರಿಹಾರವನ್ನು ಹುಡುಕಿ ತೆಗೆಯುವುದೂ ಜಾಣತನವೇ.  ಇಷ್ಟಂತೂ ಸತ್ಯ.  ಸಮಸ್ಯೆಗೆ ಹೆದರಿ ಓಡುವುದಾಗಲಿ, ಕೈಚೆಲ್ಲಿ ಕೂಡುವುದಾಗಲಿ, ಕುಸಿದು ಮಡಿಯುವುದಾಗಲೀ ಸಮಸ್ಯೆಗೆ ಪರಿಹಾರವಲ್ಲ.  ಖಚಿತವಾಗಿ ಪರಿಹಾರ ದೊರೆಯುವ ಎಡೆಯನ್ನು ತಿಳಿಯದೇ, ‘ಹೇಗೋ ಒಂದು, ಸಮಸ್ಯೆ ಪರಿಹಾರವಾದರೆ ಸಾಕಪ್ಪಾ’ ಎನ್ನುವ ಮನೋಭಾವದಿಂದ ಸಿಕ್ಕಸಿಕ್ಕಲ್ಲಿ ಅಲೆದು ಪರದಾಡುವುದೂ ಪರಿಹಾರವಲ್ಲ.

             ನಮ್ಮ ಯಾವುದೇ ಸಮಸ್ಯೆಯ ಮೂಲ ಇರುವುದು ನಮ್ಮಲ್ಲೇ!  ಈ ಅರಿವು ನಮಗಿಲ್ಲದಿದ್ದಲ್ಲಿ ಹೊರಗಿನಿಂದ, ಯಾರಿಂದಲೋ ಪರಿಹಾರವನ್ನು ನಿರೀಕ್ಷಿಸುತ್ತಿರುತ್ತೇವೆ, ಇಲ್ಲವೇ, ಸಮಸ್ಯೆಯ ಮೂಲವನ್ನು ಹೊರಗಿನ ಯಾವುದೋ ಸನ್ನಿವೇಶದಲ್ಲಿಯೋ, ಯಾರಲ್ಲೋ ಗುರುತಿಸಿ ಶಪಿಸುತ್ತಿರುತ್ತೇವೆ.  ಇದರಿಂದ ಸಮಸ್ಯೆ ಬಿಗಡಾಯಿಸುವುದೇ ಹೊರತು ಪರಿಹಾರವಂತೂ ಕಾಣುವುದಿಲ್ಲ.  ಸಮಸ್ಯೆಯ ಮೂಲ ನಮ್ಮಲ್ಲಿರುವುದನ್ನು ಗುರುತಿಸಿದಾಗ, ಪರಿಹಾರವೂ ನಮ್ಮಲ್ಲೇ ಇರುವುದು ಸ್ಪಷ್ಟವಾಗುತ್ತದೆ.  ಸಮಸ್ಯೆಯ ಪರಿಹಾರಕ್ಕಾಗಿ ಮೊದಲ ಹೆಜ್ಜೆ ನಮ್ಮಿಂದಲೇ ಆರಂಭವಾಗುತ್ತದೆ.
  
            ಯಾವುದೇ ಸಮಸ್ಯೆಯ ಮೂಲವಿರುವುದು ಅಜ್ಞಾನದಲ್ಲಿ!  ಸರಿಯಾದ ತಿಳಿವಿನೊಂದಿಗೆ ಆಲೋಚಿಸಿ ಕೆಲಸ ಮಾಡಿದಾಗ ಸಮಸ್ಯೆಗೆ ಅವಕಾಶವೇ ಇಲ್ಲ.  ಆ ‘ಸರಿಯಾದ ತಿಳಿವೇ’ ಜ್ಞಾನ.  ಅದೇ ‘ವೇದ’.  ವೇದವನ್ನು ಜ್ಞಾನವೆಂದು ತಿಳಿದಾಗ, ಸಾರ್ವಕಾಲಿಕವೂ, ಸಾರ್ವಜನಿಕವೂ, ಸಾರ್ವದೇಶಿಕವೂ ಆದ ಜ್ಞಾನವೆಂದು ತಿಳಿದಾಗ ಪರಿಹಾರ ಖಚಿತವಾಗಿ ದೊರೆಯುವುದು.  ಈ ವೇದವನ್ನು ಇನ್ನೇನೆಂದೋ ತಿಳಿದಲ್ಲಿ, ಅಜ್ಞಾನದಿಂದಲೋ ಅಥವಾ ಪೂರ್ವಾಗ್ರಹದಿಂದಲೋ, ಕೈಗೆಟಕುವ ಗಟ್ಟಿ ಪರಿಹಾರವನ್ನು ನಾವೇ ದೂರಕ್ಕೆಸೆದು ಸಮಸ್ಯೆಯನ್ನು ಜಟಿಲ ಮಾಡಿಕೊಂಡಂತೆ ಆಗುತ್ತದೆ.  ಮುಕ್ತಮನಸ್ಸಿನಿಂದ ವೇದಗಳಲ್ಲಿರುವ ಸೂಚನೆಗಳನ್ನು ಅನುಸರಿಸಿದಲ್ಲಿ ‘ಯಾವುದೇ ಸಮಸ್ಯೆಗೂ ಇಲ್ಲಿದೆ ಪರಿಹಾರ’ ಎಂಬುದು ಮನದಟ್ಟಾಗುತ್ತದೆ.  ವೇದಗಳು ಯಾವುದೇ ಜಾತಿ-ಮತ-ಪಂಥ-ಪಂಗಡಗಳ ಸ್ವತ್ತಲ್ಲ.  ಗಂಡು-ಹೆಣ್ಣು ಎಂಬ ಭೇದವೂ ಇಲ್ಲದೇ ಇದರಲ್ಲಿರುವ ಜ್ಞಾನ ಎಲ್ಲರಿಗಾಗಿದೆ ಎಂಬ ಸ್ಪಷ್ಟ ದೃಢನಿಲುವಿನೊಂದಿಗೆ, ಎಲ್ಲ ರೀತಿಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಹೇಗಿದೆ ಎಂಬುದನ್ನು ವಿಶ್ಲೇಷಿಸೋಣ.

              ಮೊದಲಿಗೆ ಜಾಗತಿಕ ಸಮಸ್ಯೆಗಳು.  ದೇಶದೇಶಗಳ ನಡುವೆ ವೈರತ್ವ, ಗಡಿ-ರೇಖೆಗಳಿಂದಾಗಿ ನಿರಂತರ ಘರ್ಷಣೆ, ಇತರ ದೇಶಗಳಿಗೆ ಹಾನಿಯುಂಟಾದರೂ ಸರಿಯೇ ತಮ್ಮ ದೇಶದ ಅಭಿವೃದ್ಧಿ ಸಾಧಿಸಬೇಕೆಂಬ ಪೈಪೋಟಿ, ಈ ಪ್ರವೃತ್ತಿಗಳನ್ನೇ ಬಂಡವಾಳವಾಗಿಸಿಕೊಂಡು ಶಸ್ತ್ರಾಸ್ತ್ರಗಳ ನಿರ್ಮಾಣ, ವ್ಯಾಪಾರವನ್ನೇ ಪ್ರಧಾನ ಉದ್ದಿಮೆಯನ್ನಾಗಿಸಿಕೊಂಡಿರುವ ದೇಶಗಳು, ಓಜೋನ್ ಪದರಕ್ಕೆ ತೂತು, ಆಮ್ಲವರ್ಷ, ವಾಯುಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯ, ಭಯಂಕರ ವಿಕಿರಣಗಳನ್ನು ಸೂಸುವ ಅಣುತ್ಯಾಜ್ಯ, ಭೂಮಿಯ ಉಷ್ಣತೆ ನಿರಂತರವಾಗಿ ಏರುತ್ತಿರುವುದು, ಒಂದೇ ಎರಡೇ.  ಒಂದೊಂದು ಸಮಸ್ಯೆಯೂ ಇಡೀ ಭೂಮಂಡಲವನ್ನೇ ನಾಶಗೈಯುವಷ್ಟು ತೀಕ್ಷ್ಣವಾಗಿದೆ.  ಇವು ಜಗತ್ತಿನ ಹಿತವನ್ನು ಕುರಿತು ಚಿಂತಿಸುವವರ ನಿದ್ದೆಯನ್ನು ಸಾಕಷ್ಟು ಕೆಡಿಸಿದೆ, ಕೆಡಿಸುತ್ತಿದೆ.  ನಮ್ಮ ನಾಶವನ್ನು ನಾವೇ ಸಿದ್ಧಪಡಿಸಿಕೊಂಡಂತಾಗಿದೆ.  ಯಾವುದೇ ಕ್ಷಣದಲ್ಲೂ ಈ ನಾಶವು ನಮ್ಮ ಮೇಲೆರಗಬಹುದು.  ಹಲವಾರು ಕಡೆಗಳಲ್ಲಿ ಇವುಗಳಿಗೆ ‘ಕಾರ್ಬನ್ ಟ್ರೇಡಿಂಗ್’ನಂತಹ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿರುವುದು ನಿಜವಾದರೂ, ಪರಿಣಾಮಕಾರಿ ಪ್ರಾಮಾಣಿಕ ಪರಿಹಾರ ಕೈಗೆಟುಕದಿರುವುದೂ ಅಷ್ಟೇ ದಿಟವಾಗಿದೆ.

          ವೇದಗಳಲ್ಲಿ ಇವಕ್ಕೆ ಸ್ಪಷ್ಟವೂ, ಖಚಿತವೂ ಆದ ಪರಿಹಾರಗಳಿರುವುದು ನಿಚ್ಚಳವಾಗಿದೆ.  ಅಷ್ಟೇ ಅಲ್ಲ ಅವುಗಳು ಸತ್ಯಪೂರ್ಣವೂ, ವೈಜ್ಞಾನಿಕವೂ, ತರ್ಕಬದ್ಧವೂ, ಸಾಮಾನ್ಯಜ್ಞಾನಕ್ಕೆ ನಿಲುಕುವಂತೆಯೂ ಇರುವುದನ್ನೂ ಗಮನಿಸಿಕೊಳ್ಳಬಹುದು.

          ಮೊದಲಿಗೆ ಯುದ್ಧಸಂಬಂಧೀ ಸಮಸ್ಯೆಗಳು.  ಇದರ ಮೂಲದಲ್ಲಿರುವುದು ಪ್ರಕೃತಿಯ ಮೇಲಿನ ಹಕ್ಕಿಗಾಗಿ, ಅಲ್ಲಿಯ ಪ್ರಕೃತಿಸಂಪತ್ತಿನ ಮೇಲಿನ ಒಡೆತನಕ್ಕಾಗಿ ನಡೆಸುವ ಪೈಪೋಟಿ.  ಮೂಲದಲ್ಲೇ ಸಮಸ್ಯೆಯಿದೆ.  ನಾವೆಲ್ಲರೂ ಈ ಜಗತ್ತಿಗೆ ಬರುವಾಗ ಬರಿಕೈ, ಹೋಗುವಾಗಲೂ ಬರಿಕೈ!  ಯಾವುದರ ಮೇಲೂ ನಮಗೆ ಒಡೆತನವಿಲ್ಲ.  ನಾವೆಲ್ಲರೂ ಈ ಜಗತ್ತಿನಲ್ಲಿ ಕೆಲಕಾಲ ನಿಂತು ಹೋಗುವವರೇ!  ಹಿಂದಿನ ತಲೆಮಾರಿನವರು ಈ ಪ್ರಕೃತಿಸಂಪತ್ತನ್ನು ನಮಗಾಗಿ ಉಳಿಸಿಹೋಗಿದ್ದರಿಂದ ನಮಗೆ ಅವು ಲಭ್ಯವಾಗಿವೆ.  ಅಂತೆಯೇ ಮುಂದಿನ ಜನಾಂಗಕ್ಕೆ ಅವನ್ನು ಬಿಟ್ಟುಹೋಗುವುದೂ ನಮ್ಮ ಕರ್ತವ್ಯವಾಗಿದೆ.  ಬಡಿದು, ಕಿತ್ತುತಿನ್ನುವ ಪ್ರವೃತ್ತಿಯನ್ನು ನಾವಿಂದು ಪ್ರೋತ್ಸಾಹಿಸುವುದಕ್ಕೆ ಮುಖ್ಯ ಕಾರಣ ನಾವಿಂದು ಬಲಶಾಲಿಗಳಾಗಿದ್ದೇವೆ.  ನಮಗಿಂತ ಬಲಶಾಲಿಗಳು ನಮ್ಮನ್ನು ಬಡಿದು, ಕಿತ್ತುಕೊಂಡೊಯ್ಯುವಾಗ ನಮ್ಮ ನಿಲುವೇನಿರುತ್ತದೆ?!  ಒಟ್ಟಾರೆ ನಾವೆಲ್ಲರೂ ಶಾಂತಿ, ನೆಮ್ಮದಿಯಿಂದ ಪ್ರಕೃತಿಸಂಪತ್ತನ್ನು ಅನುಭವಿಸಬೇಕಾದರೆ ಬಡಿದು, ಕಿತ್ತುತಿನ್ನುವ ಪ್ರವೃತ್ತಿ ಅಣಗಲೇಬೇಕು, ನಾವು ಈ ಪ್ರಕೃತಿಸಂಪತ್ತಿನ ವಿಶ್ವಸ್ತರೇ ಹೊರತು ಮಾಲೀಕರಲ್ಲ ಎಂಬ ಪ್ರಜ್ಞೆಯೂ ಇರಬೇಕು.  ಈ ವೇದಮಂತ್ರಭಾಗದ ಭಾವವಾದರೂ ಅದೇ ತಾನೇ - “ಮಾ ಗೃಧಃ ಕಸ್ಯ ಸ್ವಿದ್ಧನಮ್?” (ಯಜುರ್ವೇದ.೪೦.೧.) - ಕಸಿಯಬೇಡ.  ಯಾರದೀ ಸಂಪತ್ತು?!  ಹಾಗಾದರೆ ನಮ್ಮ ಬದುಕುವಿಕೆಗೆ ಏನೂ ಬೇಡವೇ?!!  ಬೇಕು.  ಪ್ರಕೃತಿಸಂಪತ್ತನ್ನು ಪಾಲಿಸಿ ಪೋಷಿಸಿದಾಗ ಅದು ಬೆಳೆಯುತ್ತದೆ.  ಬೆಳೆದ ಭಾಗ ನಮಗೆ, ಮೂಲ ಮುಂದಿನ ಪೀಳಿಗೆಗೆ!

                     ಇಂದು ರಾಷ್ಟ್ರ ರಾಷ್ಟ್ರಗಳ ನಡುವೆ ನಾವು ಕಾಣುತ್ತಿರುವ ಗಡಿ-ರೇಖೆಗಳೆಲ್ಲ ಕೃತಕ, ಮಾನವನಿರ್ಮಿತ.  ಯಾವುದೇ ಪ್ರಕೃತಿಯ ನಿಯಮ ಈ ಗಡಿ-ರೇಖೆಗಳನ್ನು ಒಪ್ಪುವುದಿಲ್ಲ, ಗೌರವಿಸುವುದೂ ಇಲ್ಲ!!  ಒಂದು ದೇಶದ ಕಾರ್ಖಾನೆಯ ಕೆಟ್ಟಹೊಗೆ ಆ ದೇಶದ ಗಡಿ ಬಂದ ತಕ್ಷಣ ಅಲ್ಲಿಯೇ ನಿಲ್ಲುವುದಿಲ್ಲ.  ಗಡಿ ಮೀರಿ ಹರಡುತ್ತದೆ.  ಒಂದು ದೇಶದಲ್ಲಿ ಹರಿಯುವ ನದಿಯ ನೀರು ಆ ದೇಶದ ಗಡಿ ಬಂದ ತಕ್ಷಣ ನಿಂತುಬಿಡುವುದಿಲ್ಲ.  ಗಡಿ ದಾಟಿ ಸಮುದ್ರದೆಡೆಗೆ ಹರಿಯುತ್ತದೆ.  ಯಾವುದೇ ಪ್ರಾಣಿ, ಪಕ್ಷಿ ಇಂತಹ ಗಡಿಗಳನ್ನು ಗಮನಿಸಿಕೊಂಡು ಓಡುವುದಿಲ್ಲ, ಹಾರುವುದಿಲ್ಲ!!  ಯಾವುದೇ ಜಲಚರ ದೇಶದ ಗಡಿಯಲ್ಲಿಯೇ ಈಸುವುದಿಲ್ಲ.  ಇಡೀ ಸಮುದ್ರ, ಸಾಗರವೇ ಅದರ ಸಾಮ್ರಾಜ್ಯ!!  ವೇದಗಳ ದೃಷ್ಟಿಯಲ್ಲಿ ರಾಷ್ಟ್ರವೆಂದರೆ ಇಡೀ ಜಗತ್ತು.  ಒಂದೆಡೆಯ ಪ್ರಕೃತಿ ವಿಕೋಪ ಜಗತ್ತಿನ ಇತರ ಭಾಗಗಳ ಮೇಲೂ ಪ್ರಭಾವ ಬೀರುತ್ತದೆ.  ಇಂದು ನಾವು ಮಾಡಿಕೊಂಡಿರುವ ಯಾವುದೇ ದೇಶ ಸುಭಿಕ್ಷವಾಗಿ, ಶಾಂತವಾಗಿರಬೇಕಾದರೆ ಇಡೀ ಜಗತ್ತು ಸುಭಿಕ್ಷವಾಗಿ, ಶಾಂತವಾಗಿ ಇರಲೇಬೇಕು.

                 ಜಗತ್ತಿನಲ್ಲಿಯ ಒಂದೊಂದು ದೇಶವೂ ತನ್ನದೇ ಆದ ಸಂವಿಧಾನವನ್ನು ಹೊಂದಿರುವುದು ತಿಳಿದ ವಿಷಯವೇ ಆಗಿದೆ.  ಈ ಸಂವಿಧಾನಗಳ ನಡುವೇ ವೈರುಧ್ಯಗಳಿರುವುದೂ ತಿಳಿದದ್ದೇ.  ಇವುಗಳಿಂದಾಗಿ ಜಾಗತಿಕ ಹಂತದಲ್ಲಿ ಘರ್ಷಣೆಗಳು ತಪ್ಪಿದ್ದಲ್ಲ.  ಇಡೀ ಜಗತ್ತಿಗೇ, ಇಡೀ ಮನುಕುಲಕ್ಕೇ ಒಂದು ಸಂವಿಧಾನದ ಅಗತ್ಯವಿದೆ.  ವಿಶ್ವಂ ಭವತ್ಯೇಕ ನೀಡಮ್|| (ಯಜುರ್ವೇದ.೩೨.೮) - ಇಡೀ ಜಗತ್ತು ಒಂದು ಪುಟ್ಟ ಗೂಡಾಗಿದೆ.  ಈ ಜ್ಞಾನ ನಮ್ಮದಾದ ದಿನವೇ ಇಡೀ ವಿಶ್ವದಲ್ಲಿಯ ಎಲ್ಲ ಯುದ್ಧಸಂಬಂಧೀ ಸಮಸ್ಯೆಗಳೂ ಪರಿಹಾರವಾದಂತೆಯೇ!!

             ಇನ್ನು ಪಂಚಭೂತಗಳ ಮಾಲಿನ್ಯ.  ಎಂದಿನವರೆಗೂ ಈ ಪಂಚಭೂತಗಳನ್ನು ನಮ್ಮ ಭೋಗಕ್ಕಿರುವ ಸಾಧನಗಳೆಂದು ತಿಳಿಯುತ್ತಿರುತ್ತೇವೋ ಅಲ್ಲಿಯವರೆಗೂ ಅವುಗಳ ಶೋಷಣೆ, ಅರ್ಥಾತ್ ಅವುಗಳ ಮೇಲಿನ ಅತ್ಯಾಚಾರ ತಪ್ಪುವುದಿಲ್ಲ.  ಅವು ನಮ್ಮ ಉಳಿವಿಗೆ ಅತ್ಯಾವಶ್ಯಕ, ಅವುಗಳ ಕೊಡುಗೆಗಳು ನಮಗೆ ಅನಿವಾರ್ಯ ಎಂಬ ಪ್ರಜ್ಞೆ ಬರುವವರೆಗೂ, ಕುಳಿತ ರೆಂಬೆಯನ್ನೇ ಕಡಿಯುವ ನಮ್ಮ ಮೂರ್ಖತನ ಕೊನೆಗೊಳ್ಳುವುದಿಲ್ಲ.  ಈ ಪಂಚಭೂತಗಳೆಲ್ಲವೂ ‘ದೇವ’, ನಮ್ಮ ಬಾಳ್ವೆಗೆ ಬೇಕಾದ್ದನ್ನು ಕೊಡುವಂತಹವು ಎಂಬ ಅರಿವು ಮೂಡಿ, ಅವುಗಳ ‘ಪೂಜೆ’ ಅರ್ಥಾತ್ ಸತ್ಕಾರ, ಸದುಪಯೋಗ ಮಾಡಿಕೊಂಡಾಗ ಮಾತ್ರ ಸಕಲವಿಧ ಮಾಲಿನ್ಯಗಳು ನಿಲ್ಲುವುದು ಸಾಧ್ಯ.  ಆಗಿರುವು ಮಾಲಿನ್ಯಗಳ ದುಷ್ಪರಿಣಾಮಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯ.  ಅಗ್ನಿರ್ದೇವತಾ ವಾತೋ ದೇವತಾ ...... ವರುಣೋ ದೇವತಾ ..... || (ಯಜುರ್ವೇದ.೧೪.೨೦.) - ಅಗ್ನಿ, ವಾಯು, ನೀರು ಮೊದಲಾದವು ದೇವತೆಗಳು.  ಈಗಾಗಲೇ ಆಗಿರುವ ಮಾಲಿನ್ಯಗಳನ್ನು ಹೋಗಲಾಡಿಸಲು ವೇದಗಳ ಪರಿಹಾರ ‘ಯಜ್ಞ’.  ವಾಯು ಮೊದಲಾದವುಗಳ ಶುದ್ಧಿಗಾಗಿ ಮಾಡುವ ‘ದ್ರವ್ಯಯಜ್ಞ’ವೂ ಹೌದು.  ಅದರಲ್ಲಿ ಔಷಧೀಯ ಗುಣಗಳಿಂದ ಕೂಡಿದ ವಸ್ತುಗಳನ್ನು ಮಾತ್ರ ಬಳಸುವುದರಿಂದ ಶುದ್ಧತೆಯನ್ನು ಸಾಧಿಸಬಹುದು.  ವಿಶಾಲವಾದ ಅರ್ಥದಲ್ಲಿ ‘ಯಜ್ಞ’ವೆಂದರೆ ಶ್ರೇಷ್ಠತಮ ಕರ್ಮವೆಂದರ್ಥ.  ನಾವು ಮಾಡುವ ಯಾವುದೇ ಕಾರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿದ್ದಾದರೆ ಅದು ಯಜ್ಞವೆನಿಸುತ್ತದೆ.  ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ|| (ಯಜುರ್ವೇದ.೧.೧.) - ಪ್ರೇರಕನಾದ ಜ್ಯೋತಿಸ್ವರೂಪ ಭಗವಂತನು ನಿಮ್ಮನ್ನು ಶ್ರೇಷ್ಠತಮ ಕರ್ಮಕ್ಕೆ ಪ್ರೇರೇಪಿಸಲಿ.  ಒಂದು ಎಚ್ಚರಿಕೆಯ ಮಾತು.  ಯಜ್ಞದಲ್ಲಿ ಸಾಮಾನ್ಯವಾಗಿ ನಾವು ತಿಳಿದಿರುವಂತೆ ಪ್ರಾಣಿಬಲಿ ಮೊದಲಾದ ಹಿಂಸಾಕಾರ್ಯಗಳಿಲ್ಲ.  ಅಹಿಂಸಾಕರ್ಮಗಳಿಗೆ ‘ಅಧ್ವರ’ ಎಂದು ಹೆಸರು.  ಇದು ಯಜ್ಞಕ್ಕಿರುವ ಮತ್ತೊಂದು ಹೆಸರು.

               ಇನ್ನು ಸಾಮಾಜಿಕ ಸಮಸ್ಯೆಗಳು.  ಒಂದಾಗಿರಬೇಕಾಗಿದ್ದ ಮಾನವ ಸಮಾಜವು ಇಂದು ಜಾತಿ-ಮತ, ಪಂಥ-ಪಂಗಡ, ಪಕ್ಷಗಳ ಹೆಸರಿನಲ್ಲಿ ಒಡೆದು ನುಚ್ಚುನೂರಾಗಿದೆ.  ಮೇಲು-ಕೀಳುಗಳ ಜೇಡರಬಲೆಯಲ್ಲಿ ಸಿಕ್ಕು ತೊಳಲುತ್ತಿದೆ.  ಇವುಗಳಿಂದಾಗಿ ಇನ್ನಿತರ ಸಾಮಾಜಿಕ ಸಮಸ್ಯೆಗಳು ಉದ್ಭವವಾಗಿವೆ.  ಇವೆರಡನ್ನೂ ಪರಿಹರಿಸಿಕೊಂಡರೆ ಉಳದ ಸಮಸ್ಯೆಗಳು ತಮ್ಮಂತೆ ತಾವೇ ಮರಣವನ್ನಪ್ಪುತ್ತವೆ.

             ವೇದಗಳಲ್ಲಿ ಎಲ್ಲಿಯೂ ಇಂದು ನಾವು ಕಾಣುತ್ತಿರುವ ಜಾತಿಪದ್ಧತಿಯ ಲವಲೇಶವೂ ಕಂಡುಬರುವುದಿಲ್ಲ.  ಅದು ಹೇಳುವ ಜಾತಿ ಹುಟ್ಟಿನಿಂದ ಬಂದು, ಸಾಯುವವರೆಗೂ ಬದಲಾಗದ, ನೋಡಿದ ಕೂಡಲೇ ತಿಳಿದುಬರುವ ಲಕ್ಷಣಗಳನ್ನು ಹೊಂದಿದ (ಜಾತಿ ಪದದ ಮೂಲವಾದ ಜನೀ ಪ್ರಾದುರ್ಭಾವೇ ಧಾತುವಿನ ಅರ್ಥದ ಆಧಾರದ ಮೇಲೆ) ಇಂದಿನ ಯಾವ ಜಾತಿಯೂ ಈ ವಿವರಣೆಗೆ ಹೊಂದುವುದಿಲ್ಲ.  ಹುಟ್ಟಿದ ಮಗು ಯಾವ ಜಾತಿಯೆಂದು ಯಾರೂ ಹೇಳಲಾಗುವುದಿಲ್ಲ.  ಮಧ್ಯದಲ್ಲಿ ಜಾತಿ-ಮತಗಳನ್ನು ಬೇಕಾದಂತೆ ಬದಲಾಯಿಸಿಕೊಳ್ಳಬಹುದು.  ಹಾಗಾಗಿ ಜಾತಿ = ಇಂದಿನ Caste  ಅಲ್ಲ.  ಜಾತಿ ಪದದ ನಿಜವಾದ ಅರ್ಥ ಪ್ರಾಣಿಪ್ರಭೇದ, ಪ್ರಾಣಿವರ್ಗ, Species  ಎಂಬುದೇ ಆಗಿದೆ.  ಹಾಗಾಗಿ ನಮ್ಮೆಲ್ಲ ಜಾತಿ ಒಂದೇ ‘ಮಾನವಜಾತಿ’. ಮಾನವಜಾತಿಗೆ ಒಂದೇ ಧರ್ಮ, ‘ಮಾನವಧರ್ಮ’.  ಮತಗಳನ್ನು ಧರ್ಮಗಳೆಂದು ತಪ್ಪು ತಿಳಿದಾಗ ಗೊಂದಲ, ಘರ್ಷಣೆಗಳು ತಪ್ಪುವುದೇ ಇಲ್ಲ.  ಎಲ್ಲ ಮತಗಳೂ ವ್ಯಕ್ತಿಗಳಿಂದ ಪ್ರಾರಂಭವಾದರೆ, ಧರ್ಮವು ಅರ್ಥಾತ್ ಎಲ್ಲರನ್ನೂ ಧರಿಸಿ, ಉಳಿಸಿ, ಬೆಳೆಸುವ ತತ್ತ್ವಗಳು (ಯದ್ಧಾರ್ಯತೇ ತದ್ಧರ್ಮಮ್; ಮೂಲ ಧಾತು ಡುಧಾಞ ಧಾರಣಪೋಷಣಯೋಃ) ಪ್ರಕೃತಿನಿಯಮಗಳನ್ನನುಸರಿಸುತ್ತವೆಯೇ ಹೊರತು ವ್ಯಕ್ತಿಗಳನ್ನು ಆಶ್ರಯಿಸುವುದಿಲ್ಲ.

            ವ್ಯಕ್ತಿ ವ್ಯಕ್ತಿಗಳ ನಡುವೆ ಅಭಿಪ್ರಾಯ ಭೇದ ಇರುವುದು ಸಹಜವೇ.  ಮತಗಳಲ್ಲಿ ಭಿನ್ನತೆ ಅನಿವಾರ್ಯ.  ಆದರೆ, ಇದು ಘರ್ಷಣೆಗೆ, ಮೇಲು-ಕೀಳಿಗೆ ಕಾರಣವಾಗಬಾರದು.  ಹಾಗೆ ಕಾರಣವಾದರೆ, ಒಂದು ಮತವನ್ನು ಸ್ವೀಕರಿಸುವವರು ತಾವು ಶ್ರೇಷ್ಠರೆಂದು ಇತರರ ಮೇಲೆ ತಮ್ಮ ಅಭಿಪ್ರಾಯವನ್ನು ಹೇರಿದರೆ, ಅದು ಗುಂಪುಗಾರಿಕೆ ಎನಿಸುತ್ತದೆ.  ಪಂಥ, ಪಂಗಡ, ಪಕ್ಷಗಳ ಕಥೆಯೂ ಇಷ್ಟೇ.  ಮತಭೇದವಿದ್ದಾಗ ಆರೋಗ್ಯಕರ ಚರ್ಚೆ, ಸತ್ಯಾನ್ವೇಷಣೆಗಳನ್ನು ಮುಕ್ತಮನಸ್ಸಿನಿಂದ ಮಾಡುವುದೊಂದೇ ಪರಿಹಾರ.  ಅದು ನಮಗೂ ಸಮಾಜಕ್ಕೂ ಬಲವನ್ನೀಯುತ್ತದೆ.  ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ|| (ಋಗ್ವೇದ.೧.೮೬.೯.) - ಸತ್ಯವನ್ನೇ ಶಕ್ತಿಯನ್ನಾಗಿ ಹೊಂದಿರುವ ಮಾನವರೇ!  ನೀವು ನಿಮ್ಮೆಲ್ಲ ಶಕ್ತಿಗಳನ್ನು ಬಳಸಿಕೊಂಡು ಆ ಸತ್ಯವನ್ನು ಅನ್ವೇಷಿಸಿರಿ.  ಹುಟ್ಟಿನಿಂದ ಹಿಡಿದು, ಬಹುಮತ ಸೇರಿ, ಚರ್ಮದ ಬಣ್ಣದವರೆಗೆ ಯಾವುದೇ ಕಾರಣವನ್ನು ಮುಂದೊಡ್ಡಿ ಜನಜನರ ನಡುವೆ ಮೇಲು-ಕೀಳೆಂಬ ಭಾವನೆಯನ್ನು ಪ್ರೋತ್ಸಾಹಿಸುವುದು ಅಮಾನವೀಯವೇ ಸರಿ.  ಅಜ್ಯೇಷ್ಠಾಸೋ ಅಕನಿಷ್ಠಾಸಃ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ|| (ಋಗ್ವೇದ.೫.೬೦.೫.) - ಈ ಮಾನವರಲ್ಲಿ ಯಾರೂ ಜ್ಯೇಷ್ಠರಲ್ಲ, ಯಾರೂ ಕನಿಷ್ಠರಲ್ಲ.  ಸಹೋದರರಾದ ನೀವೆಲ್ಲರೂ ಒಂದುಗೂಡಿ ನಿಮ್ಮ ಸೌಭಾಗ್ಯವನ್ನು ಸಾಧಿಸಿಕೊಳ್ಳಿ.  ವೇದಗಳಲ್ಲಿ ಇಂತಹ ವಿಶ್ವಭ್ರಾತೃತ್ವದ, ಸಹಬಾಳ್ವೆಯ ಮಾತುಗಳಿಗೆ ಲೆಕ್ಕವೇ ಇಲ್ಲ.  ಸುಜಾತಾಸೋ ಜನುಷಾ|| (ಋಗ್ವೇದ.೫.೫೯.೬.) - ಜನ್ಮದಿಂದ ಎಲ್ಲರೂ ಕುಲೀನರೇ.  ಸಮಾನೀ ಪ್ರಪಾ ಸಹ ವೋsನ್ನಭಾಗಃ|| (ಅಥರ್ವವೇದ.೩.೩೦.೬.) - ನಿಮ್ಮೆಲ್ಲರ ಜಲಮೂಲಗಳು ಒಂದಾಗಿರಲಿ, ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ.

              ಜ್ಯಾಯಸ್ವಂತಶ್ಚಿತ್ತಿನೋ ಮಾ ವಿ ಯೌಷ್ಟ ಸಂರಾಧಯಂತಃ ಸಧುರಾಶ್ಚರಂತಃ| ಅನ್ಯೋ ಅನ್ಯಸ್ಮೈ ವಲ್ಗು ವದಂತ ಏತ ಸಧ್ರೀಚೀನಾನ್ವಃ ಸಂಮನಸಸ್ಕೃಣೋಮಿ|| (ಅಥರ್ವವೇದ.೩.೩೦.೫.) - ಮಾನವರೇ!  ಉನ್ನತ ಆದರ್ಶಗಳನ್ನು ಹೊಂದಿದವರಾಗಿರಿ.  ತಿಳಿದವರೂ, ಜಾಗರೂಕರೂ ಆಗಿರಿ.  ಒಬ್ಬರಿಂದೊಬ್ಬರು ಬೇರೆಯಾಗಬೇಡಿರಿ.  ಒಗ್ಗಟ್ಟಾಗಿ ಸಂಪತ್ತನ್ನು ಸಂಪಾದಿಸಿರಿ.  ಒಂದೇ ಮಾನವಧರ್ಮದ ನೊಗವನ್ನು ಹೊತ್ತು ಸಾಗಿರಿ.  ಪರಸ್ಪರರ ನಡುವೆ ಒಳ್ಳೆಯ ಮಾತುಗಳನ್ನೇ ಆಡುವವರಾಗಿ ಉನ್ನತಿಯನ್ನು ಸಾಧಿಸಿರಿ.  ನೀವೆಲ್ಲರೂ ಒಂದೇ ಮಾನವಪಥದಲ್ಲಿ ನಡೆಯುವಂತೆಯೂ, ಸಮಾನಮನಸ್ಕರಾಗಿರುವಂತೆಯೂ ಮಾಡಿರುತ್ತೇನೆ.  ಅನ್ಯೋ ಅನ್ಯಮಭಿ ಹರ್ಯತ|| (ಅಥರ್ವವೇದ.೩.೩೦.೭.) - ಒಬ್ಬರನ್ನೊಬ್ಬರು ಪ್ರೀತಿಸಿರಿ, ಒಬ್ಬರು ಇನ್ನೊಬ್ಬರ ಮನವನ್ನು ಗೆಲ್ಲಿರಿ.  ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.
ವೇದಗಳಲ್ಲಿ ಇಂದು ಜಾತಿಯ ಹೆಸರಿನಲ್ಲಿ ಬಳಕೆಯಾಗಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮೊದಲಾದ ಪದಗಳ ಪ್ರಯೋಗವಿದೆ.  ಆದರೆ, ಅಲ್ಲೆಲ್ಲಿಯೂ ಅವುಗಳನ್ನು ಇಂದು ನಾವು ಕೃತಕವಾಗಿ ನಿರ್ಮಿಸಿಕೊಂಡಿರುವ ಜಾತಿ =  Cast  ಎಂದು ಅಪ್ಪಿತಪ್ಪಿಯೂ ಹೇಳಿಲ್ಲ.  ವೇದಗಳು ಅವನ್ನು ಅತ್ಯಂತ ಸ್ಪಷ್ಟವಾಗಿ ವರ್ಣಗಳೆಂದು ಕರೆದಿವೆ.  ವರ್ಣವೆಂದರೆ ಆರಿಸಿಕೊಳ್ಳಲು ಸಂಪೂರ್ಣ ಅವಕಾಶವಿರುವ ಜೀವನ ಪದ್ಧತಿ.  ನಮ್ಮ ನಮ್ಮ ಗುಣ, ಕರ್ಮ, ಸ್ವಭಾವ, ಸಾಮರ್ಥ್ಯಗಳಿಗನುಸಾರವಾಗಿ ಆಯ್ಕೆಮಾಡಿಕೊಳ್ಳಲು ನಮಗೆ ಸ್ವಾತಂತ್ರ್ಯವಿರುವುದಕ್ಕೇ ವರ್ಣವೆಂದು ಹೆಸರು.  ಈಗಾಗಲೇ ಹೇಳಿರುವಂತೆ ಈ ವರ್ಣಗಳ ನಡುವೆ ಹೆಚ್ಚು-ಕಡಿಮೆ ಎಂಬುದಿಲ್ಲ.  ಎಲ್ಲದಕ್ಕೂ ಸಮಾನವಾದ ಪ್ರಾಶಸ್ತ್ಯ.

               ಮುಂದಿನ ಹಂತದಲ್ಲಿ ದಾಂಪತ್ಯ, ಪಾರಿವಾರಿಕ, ಕೌಟುಂಬಿಕ, ಸಾಂಸಾರಿಕ ಸಮಸ್ಯೆಗಳು.  ಕುಟುಂಬ, ಸಂಸಾರ ಪ್ರಾರಂಭವಾಗುವುದೇ ‘ವಿವಾಹ’ ಸಂಸ್ಕಾರದಿಂದ.  ಆ ಸಂದರ್ಭದಲ್ಲೇ ವಧೂ-ವರರ ಬಾಯಿಯಲ್ಲಿ ಈ ಮಾತನ್ನು ಹೇಳಿಸಲಾಗುತ್ತದೆ.  ವಧೂ-ವರರು ಅರ್ಥ ತಿಳಿದೇ ಹೇಳಬೇಕು.  ಸಮಾಪೋ ಹೃದಯಾನಿ ನೌ|| (ಋಗ್ವೇದ.೧೦.೮೫.೪೭.) - ಎರಡು ನೀರುಗಳು ಬೆರೆತ ಮೇಲೆ ಅವುಗಳನ್ನು ಪ್ರತ್ಯೇಕವಾಗಿ ಗುರಿತಿಸಲಾಗದಂತೆ, ನಮ್ಮಿಬ್ಬರ ಹೃದಯಗಳನ್ನು ಒಂದಾಗಿ ಬೆಸೆಯುವ ಸಂಕಲ್ಪ ನಮ್ಮದಾಗಿದೆ.  ಈ ಸಂಕಲ್ಪವು ಇಬ್ಬರಲ್ಲೂ ದೃಢವಾಗಿದ್ದಲ್ಲಿ ಎಷ್ಟೋ ದಾಂಪತ್ಯ ಸಮಸ್ಯೆಗಳು ಉಂಟಾಗುವುದೇ ಇಲ್ಲ.  ಪತಿ-ಪತ್ನಿಯರ ನಡುವೆ ನೂರಕ್ಕೆ ನೂರು ಹೊಂದಾಣಿಕೆ ಎಂಬುದು ವಾಸ್ತವವಲ್ಲ.  ಹೊಂದಿಸಿಕೊಂಡು ಹೋಗುವ ಮನೋಭಾವ ಇಬ್ಬರಲ್ಲೂ ಇರಬೇಕು.  ಸಂಬಂಧವನ್ನು ಕಡಿದುಕೊಳ್ಳುವ ಧೋರಣೆಗೆ ಇಲ್ಲಿ ಅವಕಾಶವಿಲ್ಲ.  ಪಾಣಿಗ್ರಹಣ ಸಂದರ್ಭದಲ್ಲಿ ವರನು ವಧುವಿಗೆ ಇದನ್ನೇ ಹೇಳುತ್ತಾನೆ.  ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯಥಾಸಃ|| (ಋಗ್ವೇದ.೧೦.೮೫.೩೬.) - ಪತಿಯಾಗುವ ನನ್ನೊಂದಿಗೆ ನೀನು ಮುಪ್ಪಿನ ಕಾಲದವರೆಗೂ ಬಾಳುವಂತೆ, ಆಧ್ಯಾತ್ಮಿಕ ಮತ್ತು ಭೌತಿಕ ಸೌಭಾಗ್ಯಪ್ರಾಪ್ತಿಗಾಗಿ ನಾನು ನಿನ್ನ ಕೈ ಹಿಡಿಯುತ್ತಿದ್ದೇನೆ.  ಇಂದು ದಾಂಪತ್ಯದಲ್ಲಿ ಒಡಕುಂಟಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅನೈತಿಕ ಹಾಗೂ ವಿವಾಹೇತರ ಸಂಬಂಧಗಳು.  ಇವುಗಳನ್ನು ಮೂಲದಲ್ಲಿಯೇ ಚಿವುಟಿಹಾಕುವಂತಹ ಮಾರ್ಗದರ್ಶನ ವೇದಗಳಲ್ಲಿವೆ.  ವರನು ವಧುವಿಗೆ ತಾನು ಗೃಹಸ್ಥನಾಗಿ ಬಾಳುವೆ ಮಾಡುವ ಸಂದರ್ಭದಲ್ಲಿ ತನ್ನ ನಡತೆ ಹೇಗಿರುತ್ತದೆ ಎಂಬುದನ್ನು ತಿಳಿಸುವಾಗ, ನ ಸ್ತೇಯಮದ್ಮಿ ಮನಸೋದಮುಚ್ಯೇ|| (ಅಥರ್ವ.೧೪.೧.೫೭.) - ನಾನು ನಿನಗೆ ಕಾಣದಂತೆ ಕಳ್ಳತನದಿಂದ ಯಾವ ಭೋಗವನ್ನೂ ಅನುಭವಿಸೆನು, ಮನದಿಂದ ಕಳ್ಳತನದ ಭಾವನೆಯನ್ನೇ ಕಿತ್ತು ಬಿಸಾಡುವೆನು, ಎಂದು ಆಶ್ವಾಸನೆಯನ್ನು ನೀಡುತ್ತಾನೆ.  ಅರಿತು ಈ ಮಾತುಗಳನ್ನಾಡಿದಾಗ ಎಷ್ಟೋ ಸಮಸ್ಯೆಗಳು ಹುಟ್ಟುವುದೇ ಇಲ್ಲ.  ಇಂತಹ ವರನ ಅನೇಕ ಮಾತುಗಳಿಗೆ ಪ್ರತಿಕ್ರಿಯಿಸುತ್ತಾ ವಧುವು ಲಾಜಾಹೋಮದಲ್ಲಿ, ದೀರ್ಘಾಯುರಸ್ತು ಮೇ ಪತಿಃ|| (ಅಥರ್ವವೇದ.೧೪.೨.೬೩.) - ನನ್ನ ಪತಿಯು ದೀರ್ಘಾಯುವಾಗಲಿ, ಎನ್ನುತ್ತಾಳೆ.  ದಾಂಪತ್ಯದ ಸೌಖ್ಯಕ್ಕಾಗಿ ಅನೇಕ ಮಾರ್ಗದರ್ಶನಗಳಿವೆ.  ಉದಾಹರಣೆಗೆ, ಜಾಯಾ ಪತ್ಯೇ ಮಧುಮತೀಂ ವಾಚಂ ವದತು ಶಂತಿವಾಮ್|| (ಅಥರ್ವವೇದ.೩.೩೦.೨.) - ಪತ್ನಿಯು ಪತಿಯ ವಿಚಾರದಲ್ಲಿ ಮಧುರವೂ, ಶಾಂತಿದಾಯಕವೂ ಆದ ಮಾತುಗಳನ್ನಾಡಲಿ.  ಈ ಸೂಚನೆ ಇಬ್ಬರಿಗೂ ಹೊಂದುತ್ತದೆ.  ಪತಿಯು ಪತ್ನಿಯ ವಿಚಾರದಲ್ಲಿ ಮಧುರವೂ, ಶಾಂತಿದಾಯಕವೂ ಆದ ಮಾತುಗಳನ್ನಾಡಲಿ.  ತಂದೆ, ತಾಯಿ, ಮಕ್ಕಳ ನಡುವಿನ ಸಂಬಂಧಗಳು ಹೇಗಿರಬೇಕು ಎಂಬುದನ್ನು ಸೂಚಿಸುತ್ತಾ, ಅನುವ್ರತಃ ಪಿತುಃ ಪುತ್ರೋ ಮಾತ್ರಾ ಭವತು ಸಂಮನಾಃ|| (ಅಥರ್ವವೇದ.೩.೩೦.೨.) - ತಂದೆಯ ಸಂಕಲ್ಪಗಳಿಗೆ ಅನುಗುಣವಾದ ಸಂಕಲ್ಪಗಳು ಮಗ/ಮಗಳಲ್ಲಿ ಮೂಡಲಿ.  ತಾಯಿಯೊಂದಿಗೆ ಸಮಾನಚಿತ್ತವಿರಲಿ.  ಇನ್ನು ಸಹೋದರ, ಸಹೋದರಿಯರ ನಡುವಣ ಬಾಂಧವ್ಯಕ್ಕೆ ಸಂಬಂದಿಸಿದಂತೆ ಈ ಮಾತುಗಳು ಸ್ಪಷ್ಟವಾಗಿಯೇ ಇವೆ.  ಮಾ ಭ್ರಾತಾ ಭ್ರಾತರಂ ದ್ವಿಕ್ಷನ್ಮಾ ಸ್ವಸಾರಮುತ ಸ್ವಸಾ|| (ಅಥರ್ವವೇದ.೩.೩೦.೩.) - ಸೋದರನು ಸೋದರನನ್ನು, ಅಂತೆಯೇ ಸೋದರಿಯು ಸೋದರಿಯನ್ನು ದ್ವೇಷಿಸದಿರಲಿ.  ಪರಸ್ಪರರ ನಡುವೆ ದ್ವೇಷಭಾವನೆ ಇಲ್ಲದಿರಲಿ.  ಅತ್ತೆ, ಮಾವ, ಸೊಸೆ, ಅಳಿಯಂದಿರ ನಡುವಣ ನೆಂಟಸ್ತಿಕೆ ಹೇಗಿರಬೇಕೆಂಬುದಕ್ಕೆ ಒಂದು ಉದಾಹರಣೆ.  ಸಮ್ರಾಜ್ಞೀ ಶ್ವಶುರೇ ಭವ ಸಮ್ರಾಜ್ಞೀ ಶ್ವಶ್ವ್ರಾಂ ಭವ|| (ಋಗ್ವೇದ.೧೦.೮೫.೪೬.) - ಅತ್ತೆ-ಮಾವ ಇವರುಗಳಿಗೆ ಸಾಮ್ರಾಜ್ಞಿಯೆನಿಸು/ಸಮ್ರಾಜನೆನಿಸು..  ತನ್ನ ಸೇವೆ, ಪ್ರೀತಿ, ಆದರಗಳಿಂದ ಉನ್ನತವಾದ ಸ್ಥಾನವನ್ನು ಗಳಿಸಿಕೊಳ್ಳಬೇಕೆಂಬುದು ತಾತ್ಪರ್ಯ.  ಇಂದು ಇಂತಹ ವೇದಮಾರ್ಗದರ್ಶನ, ಶಿಕ್ಷಣಗಳಿಲ್ಲದ ಕಾರಣ ನೂರಾರು ಸಮಸ್ಯೆಗಳುಂಟಾಗಿವೆ.  ಈ ಸಾಮರಸ್ಯದ ಮಾರ್ಗದರ್ಶನ ಎಷ್ಟು ವಿಶಾಲವಾಗಿದೆಯೆಂದರೆ ಸಕಲ ಜೀವರಾಶಿಗಳ ಬಗ್ಗೆಯೂ ಮೈತ್ರೀಭಾವನೆಯಿರಲಿ ಎನ್ನುತ್ತದೆ ವೇದ.  ಮಿತ್ರಸ್ಯ ಮಾ ಚಕ್ಷುಷಾ ಸರ್ವಾಣಿ ಭೂತಾನಿ ಸಮೀಕ್ಷಂತಾಮ್| ಮಿತ್ರಸ್ಯಾಹಂ ಚಕ್ಷುಷಾ ಸರ್ವಾಣಿಭೂತಾನಿ ಸಮೀಕ್ಷೇ ಮಿತ್ರಸ್ಯ ಚಕ್ಷುಷಾ ಸಮೀಕ್ಷಾಮಹೇ|| (ಯಜುರ್ವೇದ.೩೬.೧೮.) - ಮೈತ್ರೀಭಾವನೆಯಿಂದಲೇ ಸಕಲಜೀವರಾಶಿಗಳೂ ನನ್ನೊಡನೆ ವ್ಯವಹರಿಸಲಿ.  ನಾನೂ ಕೂಡ ಮೈತ್ರೀಭಾವನೆಯಿಂದಲೇ ಸಕಲಜೀವರಾಶಿಗಳೊಂದಿಗೆ ವ್ಯವಹರಿಸುತ್ತೇನೆ.  ಸಕಲಜೀವರಾಶಿಗಳು ಮೈತ್ರೀಭಾವನೆಯಿಂದಲೇ ಪರಸ್ಪರರ ವಿಷಯದಲ್ಲಿ ವ್ಯವಹರಿಸಲಿ.

          ಕೊನೆಯದಾಗಿ ವ್ಯಕ್ತಿಗತ ಸಮಸ್ಯೆಗಳು.  ಶಾರೀರಿಕ ಆರೋಗ್ಯಸಾಧನೆಗೆ ಮಾರ್ಗಸೂಚಿಗಳಿವೆ.  ಅಶ್ಮಾ ಭವತ ನಸ್ತನೂಃ|| (ಅಥರ್ವವೇದ.೨.೧೩.೪.) - ನಮ್ಮ ಶರೀರವು ಕಲ್ಲಿನಂತಾಗಲಿ.  ಬಲಂ ಧೇಹಿ ತನೂಷು ನಃ|| (ಋಗ್ವೇದ.೩.೫೩.೧೮.) - ನಮ್ಮ ಶರೀರಗಳಲ್ಲಿ ಬಲವನ್ನು ಧಾರಣೆ ಮಾಡಿಸು.  ಶಾರೀರಿಕ, ಮಾನಸಿಕ ಆರೋಗ್ಯ ಸಾಧನೆಯ ಸಂಕಲ್ಪಕ್ಕೆ ಪ್ರೇರಣೆಯಿದೆ.  ಅದೀನಾಃ ಸ್ಯಾಮ ಶರದಃ ಶತಮ್|| (ಯಜುರ್ವೇದ.೩೬.೩೪.) - ದೈನ್ಯತೆ ಇಲ್ಲದೆ ನೂರ್ಕಾಲ ಬಾಳೋಣ.  ಮಾನಸಿಕ ಆರೋಗ್ಯಸಿದ್ಧಿಗಾಗಿ ನಮ್ಮಲ್ಲಿ ಮಂಗಳಕರವಾದ ಚಿಂತನೆಗಳು ಅತ್ಯಗತ್ಯ.  ಭಗವಂತನಲ್ಲಿ ನಮ್ಮ ಪ್ರಾರ್ಥನೇ ಅದೇ ಆಗಿರಬೇಕು.  ತನ್ಮೇ ಮನಃ ಶಿವಸಂಕಲ್ಪಮಸ್ತು|| (ಯಜುರ್ವೇದ.೩೪.೧.) - ನನ್ನ ಮನಸ್ಸು ಮಂಗಳಕರ ಸಂಕಲ್ಪಗಳನ್ನು ಉಳ್ಳದ್ದಾಗಲಿ. ಧಿಯೋ ಯೋ ನಃ ಪ್ರಚೋದಯಾತ್|| (ಯಜುರ್ವೇದ.೩.೩೫.) - ನಮ್ಮ ಪ್ರಜ್ಞಾ-ಕರ್ಮಗಳನ್ನು (ಆ ವಿಶ್ವಚೇತನನು) ಪ್ರಚೋದಿಸಲಿ.  ಪರೋsಪೇಹಿ ಮನಸ್ಪಾಪ|| (ಅಥರ್ವವೇದ.೬.೪೫.೧.) - ಹೇ ಪಾಪವೇ! ನನ್ನ ಮನಸ್ಸಿನಿಂದ ದೂರಹೋಗು.  ವಿಶ್ವಾಯುರ್ಧೇಹ್ಯಕ್ಷಿತಮ್|| (ಋಗ್ವೇದ.೧.೯.೭.) - ಕೊರತೆಗಳಿಲ್ಲದ ಪೂರ್ಣ ಆಯಸ್ಸನ್ನು ಧಾರಣೆ ಮಾಡಿಸು.

                ಈ ಶಾರೀರಿಕ, ಮಾನಸಿಕ ಆರೋಗ್ಯಗಳ ಹಿಂದಿರುವುದು ಆಧ್ಯಾತ್ಮಿಕ ಆರೋಗ್ಯ.  ಅಲ್ಲಿ ‘ಸಂಸ್ಕಾರ’ಗಳದೇ ಸಾಮ್ರಾಜ್ಯ.  ಅವುಗಳ ಶುದ್ಧತೆಗಾಗಿ ಪ್ರಾರ್ಥನೆಗಳಿವೆ.  ಪ್ರಾರ್ಥನೆಯೆಂದರೆ ಬರೀ ಬೇಡುವುದಲ್ಲ, ಅದರಂತೆ ನಡೆಯುವ ಸಂಕಲ್ಪ, ಆನುಷ್ಠಾನ.  ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಿಭಿರ್ಯಜತ್ರಾಃ|  ಸ್ಥಿರೈರಂಗೈಸ್ತುಷ್ಟುವಾಗ್ ಮ್ ಸಸ್ತ      ನೂಭಿಃ ವ್ಯಶೇಮ ದೇವಹಿತಂ ಯದಾಯುಃ|| (ಯಜುರ್ವೇದ.೨೫.೨೧.) - ಮಂಗಳಕರವಾದುದನ್ನೇ ಕಿವಿಗಳಿಂದ ಕೇಳೋಣ, ಕಲ್ಯಾಣಕರವಾದುವನ್ನೇ ಕಣ್ಣುಗಳಿಂದ ನೋಡೋಣ.  ಸ್ಥಿರವಾದ ಅಂಗಾಗಗಳನ್ನು ಹೊಂದಿದವರಾಗಿ, ನಮ್ಮೀ ಶರೀರವನ್ನು ಸಂಪೂರ್ಣ ಆಯುವಿರುವವರೆಗೆ ಸಾಧನೆಗಾಗಿ ಬಳಸಿಕೊಳ್ಳೋಣ.  ಜಹಿ ರಕ್ಷಾಂಸಿ ಸುಕ್ರತೋ|| (ಋಗ್ವೇದ.೬.೧೬.೨೯.) - ಸತ್ಕರ್ಮಶೀಲನೇ! ರಾಕ್ಷಸೀಗುಣಗಳನ್ನು ನಾಶಮಾಡು.  ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಂ ಉತ ಕೋಕಯಾತುಮ್|  ಸುಪರ್ಣಯಾತುಂ ಉತ ಗೃಧ್ರಯಾತುಂ ದೃಶದೇವ ಪ್ರಮೃಣ ರಕ್ಷ ಇಂದ್ರ|| (ಅಥರ್ವವೇದ.೮.೪.೨೨.) - ಹೇ ಭಗವಂತ!  ನನ್ನಲ್ಲಿರುವ ಗೂಬೆಯ ಗುಣ (ಮೋಹ), ತೋಳನ ಗುಣ (ಕ್ರೋಧ), ನಾಯಿಯ ನಡೆ (ಮತ್ಸರ), ಕೋಕಪಕ್ಷಿಯ ರೀತಿ (ಕಾಮ), ಗರುಡನ ಗುಣ (ಮದ), ಹದ್ದಿನ ನಡೆ (ಲೋಭ), ಇವುಗಳನ್ನು ಕಲ್ಲಿನಿಂದೆಂಬಂತೆ ತಿಕ್ಕಿ ತೀಡಿಬಿಡು.  ನನ್ನಲ್ಲಿರುವ ಪಶುತ್ವವು ಇಲ್ಲವಾಗಲಿ.  ನಮ್ಮೊಳಗಿನ ‘ಸಂಸ್ಕಾರ’ಗಳ ಶುದ್ಧಿಗಾಗಿ ಇಂತಹ ನೂರಾರು ಮಂತ್ರಗಳಿವೆ.

                      ಮೇಲಿನವೆಲ್ಲವೂ ಪ್ರಾರ್ಥನೆ, ಸಂಕಲ್ಪಗಳ ರೂಪದಲ್ಲಿದ್ದರೆ, ಇನ್ನೂ ಅನೇಕ ಮಂತ್ರಗಳು ಅವನ್ನು ಸಾಧಿಸಲು ಬೇಕಾದ ಅನುಷ್ಠಾನಪರವಾದ ಮಾತುಗಳನ್ನೂ ನೇರವಾಗಿಯೇ ಆಡಿವೆ.  ಅಕ್ಷೈರ್ಮಾ ದೀವ್ಯಃ|| (ಋಗ್ವೇದ.೧೦.೩೪.೧೩.) - ದಾಳ ಮೊದಲಾದವುಗಳಿಂದ ಜೂಜಾಡಬೇಡ.  ಅನಾಗೋ ಹತ್ಯಾ ವೈ ಭೀಮಾ|| (ಅಥರ್ವವೇದ.೧೦.೧.೨೯.) - ನಿಷ್ಪಾಪ ಪ್ರಾಣಿಗಳನ್ನು ಕೊಲ್ಲುವುದು ಭಯಾನಕವು. ಅನೃಣಾಃ ಸ್ಯಾಮ||  (ಋಗ್ವೇದ.೬.೧೧೭.೩.) - ಸಾಲವಿಲ್ಲದವರಾಗೋಣ.  ಉಪಸರ್ಪ ಮಾತರಂ ಭೂಮಿಮೇತಾಮ್|| (ಋಗ್ವೇದ.೧೦.೧೮.) - ಈ ತಾಯಿನೆಲದ ಬಳಿ ಸಾರು.  ಕೇವಲಾಘೋ ಭವತಿ ಕೇವಲಾದೀ|| (ಋಗ್ವೇದ.೧೦.೧೧೭.೬.) - ಒಬ್ಬನೇ ತಿನ್ನುವವನು ಶುದ್ಧ ಪಾಪಿಯೆನಿಸುತ್ತಾನೆ.  ಮನುರ್ಭವ|| (ಋಗ್ವೇದ.೧೦.೫೩.೬.) - ಮನನಶೀಲನಾಗು.  ಮರ್ಯಾದೇ ಪುತ್ರಮಾಧೇಹಿ|| (ಅಥರ್ವವೇದ.೬.೮೧.೨.) - ಮಿತಿಯಲ್ಲಿ ಸಂತಾನವನ್ನು ಹೊಂದಿರಿ.  ಮಾ ಕ್ರುಧಃ|| (ಅಥರ್ವವೇದ.೧೧.೨.೨೦.) - ಕೋಪಿಸಿಕೊಳ್ಳಬೇಡ.  ಮಾ ನಿಂದತಃ|| (ಋಗ್ವೇದ.೪.೫.೨.) - ನಿಂದೆಯನ್ನು ಮಾಡಬೇಡ.  ಮಾ ರುವಣ್ಯಃ|| (ಋಗ್ವೇದ.೮.೯೬.೧೨.) - ಅಳಲೇಬೇಡ.  ಇಂತಹ ಉದಾಹರಣೆಗಳನ್ನು ನೂರಾರು ಕೊಡಬಹುದು.

         ಒಂದೊಂದು ಮಾರ್ಗದರ್ಶನವೂ ಎಷ್ಟು ಗಂಭೀರವಾಗಿದೆ ಮತ್ತು ಅವುಗಳ ಪಾಲನೆಯಿಂದ ಇಂದು ಜಗತ್ತನ್ನು, ಸಮಾಜವನ್ನು, ಪರಿವಾರಗಳನ್ನು, ವ್ಯಕ್ತಿಗಳನ್ನು ಕಾಡುತ್ತಿರುವ ಎಷ್ಟೋ ಸಮಸ್ಯೆಗಳು ಮೂಲದಲ್ಲಿಯೇ ಇಲ್ಲವಾಗುತ್ತವೆ ಎಂಬುದನ್ನು ಯಾರು ಬೇಕಾದರೂ ಕಾಣಬಹುದಾಗಿದೆ.  ಈಗಲಾದರೂ ಯಾವುದೇ ಸಮಸ್ಯೆಗೂ ವೇದಗಳಲ್ಲಿ ಪರಿಹಾರವಿದೆ ಎಂಬುದನ್ನು ಒಪ್ಪುತ್ತೀರಿ ತಾನೇ!!!

- ವೇದಾಧ್ಯಾಯೀ ಸುಧಾಕರ ಶರ್ಮಾ / ೯೪೪೮೮೪೨೪೭೪.

Tuesday, October 16, 2012

LET US GET CONFUSED AND CONFUSE OTHERS!

ಬೆಂಗಳೂರಿನ ಡಾ.ಸುಬ್ರಹ್ಮಣ್ಯ ಬಿ.ಆರ್. ಅವರ  perception   ಬರಹಕ್ಕೆ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಕಟಿಸಲಾಗಿದೆ. ಓದುಗರು perception ಲೇಖನವನ್ನು  ಇಲ್ಲೇ ಕೆಳಗೆ ಓದಿ ನಂತರ ಶರ್ಮರ ಬರಹವನ್ನು ಓದಿ ತಮ್ಮ ಅನಿಸಿಕೆ   ವ್ಯಕ್ತಪಡಿಸಬಹುದು.
----------------------------------------------------------------------------------------------------------------
This is a common problem with those who understand and advocate Shankara wrongly!
They speak of vyavaharika sathya and paaramarthika sathya.
But they miss the point as to where they are standing at the time of speaking.
If they are in vyavaharika base their experience of paaramarthika sathya is questionable!  At the same time they fail to quote the VEDAS in support of their theory!!
If they are in paaramarthika sathya base, there exists only one Brahman and there can not be one who speaks and one who listens!!  There can not be 'the perceiver, the perceived or the process of perception'!!
The theory that the world is just an illusion and just a 'perceived world' without real existence makes one inactive, lazy and lethargic.  Because actions do not find a place in an illusionary world!!  But why the very propounders of this theory are doing so many actions to fill their bellies, accumulating wealth and owning them?!!!!!  Does not this amount to double standards.
VEDAS are clear that. we have to live in this REAL world and labour and work to gain spiritual strength and 'perceive' the world as it is!!  "Kurvanneveha Karmaani jijeevisheth Shathagam samaaha" (Yajurveda.40.2.) - Perform your duties wishing to live for Hundred years & "Maa cchiththaa asmaath Lokaath" (Atharvaveda.8.1.4.) - Sever not yourself from this world.
It is true that Buddha and the like have uttered many words of wisdom, but their words are not infallible as compared to the VEDAS.
Human beings do perceive many things rightly and wrongly.  The process of unlearning has to be with reference to wrong perceptions!!
Shankara, a great VEDIC scholar was only speaking of the world wherein we have to distinguish between FACE VALUE and INTRINSIC VALUE that things and theories have.  When we are clear about the intrinsic value the face value can not mislead us or attract us!  Hence the face value is just superfluous and illusionary.
Now it is open for the readers - for me readers are there, notes to be read too are there and the process of reading too is there - to "perceive" the essence of the above remarks, which I promise is perfectly in good faith and with an open mind.

- Vedadhyaayi Sudhakara Sharma.

------------------------------------------------------------------------------------

This blog is just an individual opinion of mine,not to offend or hurt anyone.
I would be more than happy if someone can correct me if they find anything wrong.
    Look around,what do u percieve?seeing or hearing is different from perception,perception is a function of mind.you can give any kind of perception to a recieved stimuli or even desist to give any.When u look at a book,u know its a "book" cause u had learnt, book is a collection of facts,it has sentences arranged in it as  chapters,the words follow grammar,if you finish reading this book it might help you in a certain way,and so on.All these learnt perceptions act subconsciously when you look at a book.In reality that book is nothing,it has no meaning to it when u look at it from an absolutely unlearnt eye.Show the book to a baby,its just like any other thing ,it is no different from a toy.As the baby grows it learns the difference between a toy and the book,this is how learning develops based on perception.If u had taught the baby toy as book and book as toy,it would ve learnt it sameway.Eventually the babay lives in a "percieved world".
      What about the world we see ,feel n hear?the world is just there, its dead,its your perception that makes it lively,colurful,sad,miserable etc,You are choosing to give it meaning.If you dont believe it, work backwards and you will see,how "your world" has emerged.Our intelligence arises similarly,its like decieving ourselves twice. On a nothing,we assume something because of desire or inquisitiveness and then work backwards to find a relation,because that gives harmony to the mind.All our laws ,postulates, theorems are created on an assumed "something".So in reality there is no absolute law, ethics,mathematics,logic etc,law and ethics give harmony to assumed society and relations.Maths n logic give harmony to the assumed numbers and concepts.All these law and  maths are not wrong but only work for assumed concepts.They themselves are pointing backwards,telling us this is how you assumed things and this is how you find harmony.So everything emerges from "nothing".So this "nothing" denotes absolute harmony.For example ,we introduce the non existant "1" on  a truly existant "0",and when tried to relate them, a law emerges(subtraction) pointing the origin. This is like knowing all the laws and theorems to all possible assumptions ever made.This is nothing but OMNISCIENT. This is what Buddha called "shunyavastha",and Adi shankara called "Brahman".This is paramarthika satyam,'Brahma satyam jagat mithya' and our laws are vyavaharika satyam."Tat Tvam asi" is a mahavakya from Chandogya Upanishad.You dont have to believe it because someone says it or is told in vedas,when you yourself look thru a discerning unbiased eye,you ll see the world to be untrue and is based on assumptions, appearing falsely true(maya) and is a reflection of something truely true.What i have presented is a logical framework,i dont know what is it like to drop all assumptions.To really feel how is it to be to be "nothing",you should try droping all conscious and subconscious assumptions,this path is called raja yoga.and what Buddha described as Zen.All other paths eventually lead to Raja yoga,be it jnana yoga or karma yoga,and Raja yoga leads to absolute truth..
         Each human being represents a thought, and thats all he is,and thoughts emerge when mind uses its imagination,all three can be used interchangebly.just as our thoughts cease to exist on proving the contrary,every human can unlearn his false existence.As J krishnamurthi says, by observing his mind as an outsider,the observer eventually becomes the observed.                      

Saturday, October 6, 2012

ಮುಕ್ತ ಸಂವಾದ-1

ದಿನಾಂಕ 30.9.2012 ಭಾನುವಾರ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ಹಾಸನದಲ್ಲಿ ನಡೆದ ಮುಕ್ತ ಸಂವಾದದಲ್ಲಿ ಶ್ರೀ ಶರ್ಮರ ಪ್ರಾಸ್ತಾವಿಕ ನುಡಿಗಳು ಭಾಗ-1

Saturday, September 29, 2012

‘ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತ’-ಮಾಧ್ಯಮ ಸಂವಾದದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರು


ಹಾಸನ, ಸೆ. ೨೯: ವೇದಗಳು ಹಳಸಲು ಎಂದಾಗಲಿ, ಕಾಲ ಮಿತಿಯುಳ್ಳ ಅಪ್ರಸ್ತುತ ವಿಷಯವೆಂದಾಗಲಿ ತಿಳಿಯುವುದೇ ಅಜ್ಞಾನ ಹಾಗೂ ತಪ್ಪು ಕಲ್ಪನೆಯಾಗಿದೆ; ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತವೇ ಆಗಿವೆ ಎಂದು ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರು  ಪ್ರತಿಪಾದಿಸಿದರು.

ಭಾನುವಾರ ವೇದಗಳ ಕುರಿತಾದ ಮುಕ್ತ ಸಂವಾದ ನಡೆಸಿಕೊಡಲಿಕ್ಕಾಗಿ ಇಂದು ನಗರಕ್ಕೆ ಭೇಟಿ ನೀಡಿದ್ದ ಅವರು, ಇಂದು ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಭಾಗವಹಿಸಿ ವೇದಗಳ ಕುರಿತಾದ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಮಾನವ ಜೀವಿಯ ಜತೆಯಾಗಿಯೇ ಇರುವ ಹಾಗೂ ಇರಬೇಕಾದ ಹಲವಾರು ಸತ್ಯ ಸಂಗತಿಗಳ ಕುರಿತು ತಿಳಿವಳಿಕೆ, ಜ್ಞಾನ ಹಾಗೂ ಮುನ್ನಡೆಯಲು ಮಾರ್ಗದರ್ಶನ ಮಾಡುವುದರಿಂದ ವೇದಗಳು ಎಂದೆಂದಿಗೂ ಪ್ರಸ್ತುತವೇ ಎಂದು ಹಲವು ನಿದರ್ಶನಗಳ ಸಹಿತ ತಿಳಿಸಿಕೊಟ್ಟ ಅವರು, ಮತ್ತೊಬ್ಬರನ್ನು ಹಾಳು ಮಾಡುವ ಗುಣ, ಹಿಂಸೆ, ತಾರತಮ್ಯ ಅಥವಾ ಭೇದ ಭಾವ ಇತ್ಯಾದಿ ಯಾವುದೇ ನಕಾರಾತ್ಮಕ ಅಂಶಗಳು ವೇದಗಳಲ್ಲಿಲ್ಲ ಎಂದು ತಿಳಿಸಿದರು. ಮನು ಸ್ಮೃತಿ ಸೇರಿದಂತೆ ಹಲವಾರು ಸ್ಮೃತಿಗಳು ಆಯಾ ಕಾಲ ಕಾಲಮಾನಗಳಿಗೆ ತಕ್ಕಂತೆ ರಚಿತವಾದ ನಿಯಮಗಳೇ ಹೊರತು ಅವು ಪ್ರಸ್ತುತವಾಗುವುದಿಲ್ಲ ಹಾಗೂ ಹಲವಾರು ಕಲಬೆರಕೆ ಅಂಶಗಳೂ ಸಹ ಸೇರಿರುವುದರಿಂದ ಅವು ಪರಮ ಪ್ರಮಾಣವೂ ಆಗುವುದಿಲ್ಲ; ಆದರೆ ಮೂಲ ವೇದಗಳು ಮಾತ್ರ ಎಲ್ಲ ವಿಷಯಗಳಿಗೂ ಪರಮ ಪ್ರಮಾಣವಾಗುತ್ತವೆ. ಏಕೆಂದರೆ ವೇದಗಳೊಂದಿಗೆ ವ್ಯಾಕರಣ, ಶಿಕ್ಷಾ, ಛಂದಸ್ಸು, ಜ್ಯೋತಿಷ (ಖಗೋಳ ವಿಜ್ಞಾನವೇ ಹೊರತು ಈಗಿನ ಫಲ ಜ್ಯೋತಿಷ್ಯ ಅಲ್ಲ), ನಿರುಕ್ತ ಮತ್ತು ಕಲ್ಪ ಎಂಬ ಈ ೬ ವೇದಾಂಗಗಳ ಚೌಕಟ್ಟಿನ ನಡುವೆ ವೇದಗಳು ಬಂಧಿಸಲ್ಪಟ್ಟಿರುವುದರಿಂದ ಅವು ಸುರಕ್ಷಿತವಾಗಿವೆ. ಯಾವುದೇ ಕಲಬೆರಕೆಯಾಗಲಿ; ತಿದ್ದುಪಡಿಯಾಗಲಿ; ಬದಲಾವಣೆಯಾಗಲಿ ಮಾಡಲು ಸಾಧ್ಯವಾಗಿಲ್ಲ; ಸಾಧ್ಯವಾಗುವುದೂ ಇಲ್ಲ. ಹೀಗಾಗಿ ಅವರು ಪರಮ ಪ್ರಮಾಣವೇ ಸರಿ; ಆದರೆ ಇದೇ ಮಾತನ್ನು ಇತರೆ ಪುರಾಣ ಪುಣ್ಯ ಕಥೆಗಳ ಬಗ್ಗೆ ಹೇಳುವಂತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಹಲವು ಸಮರ್ಥನೆಗೊಂದಿಗೆ ಉತ್ತರ ಬಿಡಿಸಿಟ್ಟರು.

       ಬ್ರೀಟೀಷರ  ಮೆಕಾಲೆ ಪ್ರಣೀತವಾದ ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಯಾರ ಉದ್ಧಾರವೂ ಸಾಧ್ಯವಿಲ್ಲ. ಈಗಿನ ಎಲ್.ಕೆ.ಜಿ.ಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಯಾವುದೇ ಸರ್ಟಿಫಿಕೇಟ್ ಆಧಾರಿತ ಶಿಕ್ಷಣದಲ್ಲಿ ಹೊರಗಿನ ವಿಷಯಗಳನ್ನು ಬಲವಂತವಾಗಿ ಮನುಷ್ಯನ ಮೆದುಳಿಗೆ ತುರುಕುವುದಾಗಿದೆ. ಆದ್ದರಿಂದ ಅದು ನಿಜವಾದ ಶಿಕ್ಷಣವೇ ಅಲ್ಲ. ಮನುಷ್ಯನೊಳಗಿನ ಪ್ರತಿಭೆ ಅಥವಾ ಶಕ್ತಿಯನ್ನು ಸಮಾಜದ ಉದ್ಧಾರಕ್ಕಾಗಿ ಹೊರಗೆ ಹಾಕುವುದೇ ನಿಜವಾದ ಶಿಕ್ಷಣ. ಆದರೆ ಅದು ನಡೆಯುತ್ತಿಲ್ಲ. ಈಗೆಲ್ಲಾ ಉಲ್ಟಾ ಶಿಕ್ಷಣವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ವಿಷಾದಿಸಿ, ಶಾಲೆಯ ಮೆಟ್ಟಿಲನ್ನೂ ಹತ್ತದವರು ಪ್ರತಿಭಾವಂತರಾಗಿ ಸಮಾಜ ಸುಧಾರಣೆ ಮಾಡಿದವರ ಪಟ್ಟಿಯನ್ನೇ ಮುಂದಿಟ್ಟರು!
            ವೇದಗಳು ಜಗತ್ತಿನ ಸರ್ವರಿಗಾಗಿಯೇ ಇವೆ; ವೇದ ಎಂದರೆ ಜ್ಞಾನ ಎಂದರ್ಥ. ಅವು ಎಲ್ಲೂ ಜಾತಿ ಪದ್ಧತಿ, ಲಿಂಗ ಭೇದ, ಮೂರ್ತಿ ಪೂಜೆಗಳನ್ನು ಹೇಳಿಲ್ಲ; ಅವೆಲ್ಲ ಶತಮಾನಗಳಿಂದೀಚೆಗೆ ಹುಟ್ಟಿಕೊಂಡ ಸ್ವಾರ್ಥ ಲಾಲಸೆಯ ಪಿಡುಗುಗಳಾಗಿವೆ. ವೇದಗಳು ವಾಸ್ತವವಾಗಿ ವೇದಗಳು ವರ್ಣಗಳ ಕುರಿತು ಹೇಳುತ್ತವೆ; ವರ್ಣ ಎಂದರೆ ಜಾತಿಯಲ್ಲ; ಅದು ‘ಆಯ್ಕೆ’ ಎಂದರ್ಥ. ಸಾಮಾಜಿಕ ಅನಿಷ್ಟಗಳಾದ ಅಜ್ಞಾನ, ಅನ್ಯಾಯ, ಅಭಾವ ಮತ್ತು ಆಲಸ್ಯಗಳ ವಿರುದ್ಧ ಹೋರಾಡಲು ಯಾರಿಗೆ ಯೋಗ್ಯತೆ ಇದೆಯೋ; ಯಾರು ಆ ರೀತಿ ಹೋರಾಟ ಮಾಡಲು ‘ಆಯ್ಕೆ’ ಮಾಡಿಕೊಳ್ಳುವರೋ ಅಂತಹವರಿಗೆ ಕ್ರಮವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ಹೆಸರು. ಅಂತಹ ಮನೋಭಾವ ಹುಟ್ಟಿನಿಂದಲೇ ಬರಬೇಕೆಂದೇನೂ ಇಲ್ಲ; ಯೋಗ್ಯತೆಯಿಂದ ಗಳಿಸಬೇಕು. ಈ ನಾಲ್ವರಲ್ಲಿ ಯಾರೂ ಜೇಷ್ಠರೂ ಅಲ್ಲ; ಕನಿಷ್ಠರೂ ಅಲ್ಲ. ಸಮಾಜೋದ್ಧಾರಕ್ಕೆ ಈ ಎಲ್ಲರೂ ಅಗತ್ಯವಾಗಿ ಬೇಕಾದವರೇ ಆಗಿದ್ದಾರೆ. ಹೀಗಾಗಿ ಈ ಅರ್ಥದಲ್ಲಿ ವರ್ಣಾಶ್ರಮಗಳು ಎಂದೆಂದಿಗೂ ಪ್ರಸ್ತುತ ಎಂದು ಶರ್ಮಾಜಿ ವ್ಯಾಖ್ಯಾನಿಸಿದರು.
           ಅರ್ಥಪೂರ್ಣವಾಗಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ‘ವೇದ ಭಾರತೀ’ ಸಂಚಾಲಕರುಗಳಾದ ಹರಿಹರಪುರ ಶ್ರೀಧರ್, ಕವಿ ನಾಗರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಪ್ರಭಾಕರ ಸ್ವಾಗತಿಸಿ, ವಂದಿಸಿದರು.

Thursday, September 27, 2012

ವೇದಾಧ್ಯಾಯೀ ಶ್ರೀ ಸುಧಾಕರಶರ್ಮ ಕಿರು ಪರಿಚಯ


     ಈಗ್ಗೆ ೧ ವರ್ಷದ ಹಿಂದೆ ‘ಖತಾರ್’ ಎಂಬ ಖಾಸಗಿ ಧಾರ್ಮಿಕ ಟಿ.ವಿ. ವಾಹಿನಿಯಲ್ಲಿ ವಿವಿಧ ಮತ ಧರ್ಮಗಳ ಗುರುಗಳ ನಡುವೆ ಧಾರ್ಮಿಕ ಚರ್ಚೆಯೊಂದು ನೇರ ಸಂವಾದ ರೂಪದಲ್ಲಿ ನಡೆದಿತ್ತು. ಆ ಗುರುಗಳ ನಡುವೆ ‘ಬದುಕುವ ಕಲೆ’ ಕಲಿಸುವ ಓರ್ವ ಗುರು ಭಾರತ ದೇಶವನ್ನು ಪ್ರತಿನಿಧಿಸಿದ್ದರು. ಆದರೆ ಪರಸ್ಪರ ವಾದ ವಿವಾದ ಸಾಗಿದಂತೆ ನಮ್ಮ ಗುರುಗಳಿಗೆ ಸೋಲುಂಟಾಯಿತು! ಈ ಮಹನೀಯರು ನಮ್ಮ ಮನುಕುಲದ ಜ್ಞಾನ ಭಂಡಾರವೆನಿಸಿದ ವೇದಗಳನ್ನು ಬದಿಗಿಟ್ಟು, ನಮ್ಮ ಪರಂಪರೆ ನಡುವೆ ಸಾಗಿ ಬಂದಿರುವ ಕೆಲಸಕ್ಕೆ ಬಾರದ ಪುರಾಣಗಳು-ಪುಣ್ಯ ಕಥೆಗಳನ್ನು ಆಧರಿಸಿ ತಮ್ಮ ವಾದ ಮಂಡಿಸಲು ಯತ್ನಿಸಿದ್ದೇ ಅವರ ಸೋಲಿಗೆ ಕಾರಣವಾಯಿತು. ಅವರ ಜಾಗದಲ್ಲಿ ಪಂಡಿತ್ ಸುಧಾಕರ ಚತುರ್ವೇದಿಗಳೋ ಅಥವಾ ಅವರ ಶಿಷ್ಯ ಸುಧಾಕರ ಶರ್ಮರೋ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು! ಅಂದಹಾಗೆ ಯಾರು ಈ ಸುಧಾಕರ ಶರ್ಮ?


     ಪ್ರಳಯದ ಭೀತಿ, ವಾಸ್ತು, ಜ್ಯೋತಿಷ್ಯ, ವ್ರತಾಚರಣೆ, ವಿಶೇಷ ಪೂಜೆ ಅವುಗಳಿಂದ ಸಿಗುತ್ತದೆನ್ನುವ ಪ್ರತಿಫಲ ಇತ್ಯಾದಿ ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಕಾತರರಾಗುವ ನಾವು ಟಿ.ವಿ. ಮುಂದೆ ಕುಳಿತು ಅಂತಹ ಕಾರ್ಯಕ್ರಮಗಳನ್ನು ಎವೆಯಿಕ್ಕದೆ ವೀಕ್ಷಿಸುತ್ತೇವೆ. ಇಂತಹ ಅಸಂಬದ್ಧ ಪುರಾಣಗಳು, ಪುಣ್ಯ ಕಥೆಗಳು, ಪೂಜೆ, ಪುನಸ್ಕಾರದಂತಹ ವಿಷಯಗಳಾವುವೂ ವೇದದಲ್ಲಿಲ್ಲ; ಜಗತ್ತಿನಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಬೋಧಿಸುವ ‘ಮನುಕುಲದ ಸಂವಿಧಾನ’ವೇ ವೇದ ಎಂಬ ಸತ್ಯ ಸಂಗತಿಗಳನ್ನು ವೇದ ಮಂತ್ರಗಳ ನಿಜವಾದ ಅರ್ಥ ಬಿಡಿಸಿಟ್ಟು ತಿಳಿಸಿಕೊಡುವ ದಾರ್ಶನಿಕರೇ ವೇದಾಧ್ಯಾಯಿ ಸುಧಾಕರಶರ್ಮ! ‘ಚಂದನ’ ವಾಹಿನಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ ೯-೩೦ ರಿಂದ ಪ್ರಸಾರವಾಗುತ್ತಿರುವ ‘ಹೊಸ ಬೆಳಕು’ ಧಾರಾವಾಹಿಯ ಕೇಂದ್ರ ಬಿಂದು- ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವೇದ, ವಿಜ್ಞಾನ ಹಾಗೂ ವೈಚಾರಿಕತೆ- ಈ ಮೂರನ್ನೂ ಮೇಳೈಸಿಕೊಂಡಿರುವ ಅಪರೂಪದ ವಿಶಿಷ್ಟ ಬಹುಮುಖ ವ್ಯಕ್ತಿತ್ವದ ಜ್ಞಾನ ವೃದ್ಧ ಈ ವ್ಯಕ್ತಿ!!
     ಪ್ರಸ್ತುತ ಭಾರತ ದೇಶ ಸಾಗುತ್ತಿರುವ ಹಾದಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ವೇದಗಳ ಕುರಿತು ಚರ್ಚಿಸಲು ಹೊರಟಾಗ ಯಾರಾದರೂ ಮೂಗು ಮುರಿದರೆ ಅಥವಾ ‘ಅನಿಷ್ಟಕ್ಕೆಲ್ಲ ಶನೇಶ್ವರ ಹೊಣೆ’ ಎಂಬಂತೆ ವೇದಗಳನ್ನು ದೂಷಿಸಿದರೆ ಅದು ಸಹಜ ಹಾಗೂ ತಪ್ಪು ಅವರದಲ್ಲ! ಏಕೆಂದರೆ ವೇದಗಳ ಕುರಿತು ಶತ ಶತಮಾನಗಳಿಂದಲೂ ಹರಿದುಬಂದ ತಪ್ಪು ಕಲ್ಪನೆಗಳು, ಪ್ರಕ್ಷಿಪ್ತಗಳು, ಅರೆಬೆಂದ ಎರವಲು ಜ್ಞಾನ, ಗೊಡ್ಡು ಸಂಪ್ರದಾಯಗಳು, ವಿಚಾರವಿಲ್ಲದ ಆಚರಣೆಗಳು, ಜೀವನ ಶೈಲಿ ಇತ್ಯಾದಿ ಅನಿಷ್ಟ ಕಲಸು ಮೇಲೋಗರಗಳ ನಡುವೆ ಭಾರತೀಯರು ಬೆಳೆದು ಬಂದಿರುವ ಬಗೆಯೇ ಇದಕ್ಕೆ ಕಾರಣ. ವೇದಗಳು ವಜ್ರವಿದ್ದಂತೆ; ಆದರೆ ಅಜ್ಞಾನದಿಂದಾಗಿ ವಜ್ರವನ್ನು ತಿಪ್ಪೆಗೆ ಎಸೆಯಲಾಗಿದೆ; ಅದು ವಜ್ರದ ತಪ್ಪಲ್ಲವಲ್ಲ!? ಜಗತ್ತಿಗೇ ಶಾಂತಿ ಪಾಠ ಹೇಳಿದ ನಮ್ಮ ದೇಶದ ಸದ್ಯದ ಪರಿಸ್ಥಿತಿಗೆ ಕೈಗನ್ನಡಿಯಾಗಿ ಖತಾರ್ ಟಿ.ವಿ. ಪ್ರಕರಣ ರೂಪದಲ್ಲಿ ಇನ್ನೊಂದು ವಿಪರ್ಯಾಸ ಸೇರ್ಪಡೆಯಾಯಿತಷ್ಟೆ.
   ವೇದಾಧ್ಯಾಯಿ ಎಂದ ಕೂಡಲೇ ಸಂತನೋ, ಮುನಿಯೋ ಅಥವಾ ಯಾವುದೋ ಮಠದ ಸ್ವಾಮೀಜಿಯೋ ಎಂದೇನೂ ಭಾವಿಸಬೇಕಾಗಿಲ್ಲ. ಬಹುಮುಖ ವಿದ್ಯಾರ್ಹತೆ- ಅಂದರೆ ವಿಜ್ಞಾನ. ಸಂಸ್ಕೃತ ಹಾಗೂ ಲೆಕ್ಕ ಶಾಸ್ತ್ರ (ಐ.ಸಿಡಬ್ಲ್ಯುಎ) ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ವೇದಾಧ್ಯಾಯಿಯೂ ಆಗಿದ್ದು ಸಾಮಾನ್ಯರಲ್ಲಿ ಅಸಾಮಾನ್ಯ ಎಂದು ಧಾರಾಳವಾಗಿ ಹೇಳಬಹುದು! ಈ ಹಿಂದೆ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿದ್ದ ದಿ. ಎನ್. ಶ್ರೀಕಂಠಯ್ಯ ಅವರ ಪುತ್ರರಾದ ಶ್ರೀಯುತರು, ಮಹಾತ್ಮ ಗಾಂಧಿಯವರ ನಿಕಟವರ್ತಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಚತುರ್ವೇದಗಳ ಪಂಡಿತ ಸುಧಾಕರ ಚತುರ್ವೇದಿ ಅವರ ಶಿಷ್ಯರಾಗಿದ್ದಾರೆ. ಇವರ ಇಡೀ ಸುಖೀ ಕುಟುಂಬವೇ ವೇದೋಕ್ತ!
     ೧೯೭೩ ರಿಂದಲೂ ಬೆಂಗಳೂರು ಆಕಾಶವಾಣಿಯ ನಾಟಕ ಕಲಾವಿದರೂ, ಹಲವು ಮಹತ್ವದ ಕೃತಿಗಳ ರಚನಾಕಾರರೂ ಆಗಿರುವ ಶರ್ಮ ಅವರು ನಮ್ಮ ಪರಂಪರೆಯಲ್ಲಿ ಸಾಗಿಬಂದಿರುವ ಅನಿಷ್ಟ ಆಚರಣೆಗಳು, ಗೊಡ್ಡು ಸಂಪ್ರದಾಯಗಳ ಕಟ್ಟಾ ವಿರೋಧಿಯಾಗಿರುವುದರಿಂದ ‘ಖಂಡಿತವಾದಿ ಲೋಕ ವಿರೋಧಿ’ ಎಂಬಂತೆ ಸಂಪ್ರದಾಯಸ್ಥ ವೈದಿಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ‘ಮದುವೆ-ಏಕೆ-ಯಾವಾಗ-ಹೇಗೆ?’, ‘ಮೃತ್ಯುವೇ ನಮಸ್ಕಾರ’, ‘ಜ್ಯೋತಿಷಿಗಳೇ ಸತ್ಯದ ಕೊಲೆ ಮಾಡಬೇಡಿ!’, ‘ವಾಸ್ತು ಬೀಳದಿರಿ ಬೇಸ್ತು!"; ‘ಜನಿವಾರದಲ್ಲಿ ಬ್ರಾಹ್ಮಣ್ಯವಿಲ್ಲ’ ಇತ್ಯಾದಿ ಮಹತ್ವದ ಕೃತಿಗಳ ರಚನಾಕಾರರಾದ ಇವರು ಕರ್ನಾಟಕದಾದ್ಯಂತ ಹಾಗೂ ಪಕ್ಕದ ಆಂಧ್ರ ಪ್ರದೇಶದಲ್ಲೂ ವೇದಗಳ ಕುರಿತು ನಿರಂತರ ಉಪನ್ಯಾಸ ಹಾಗೂ ಪ್ರವಚನಗಳನ್ನು ನೀಡುತ್ತಿದ್ದಾರೆ.
     ವೇದಗಳ ಕುರಿತಾದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಹತ್ವಪೂರ್ಣ ಪ್ರಬಂಧಗಳನ್ನು ಮಂಡಿಸಿರುವ ಶರ್ಮಾಜಿ, ವೇದ ಮಂತ್ರಾರ್ಥಗಳ ವಿವರಣೆ ಸಹಿತವಾಗಿ ಬ್ರಾಹ್ಮಣೇತರರು, ಮಹಿಳೆಯರು ಹಾಗೂ ಬಾಲಕಿಯರಿಗೂ ಸಹ ಉಪನಯನ ಸಂಸ್ಕಾರ ಮಾಡಿಸಿದ್ದಾರೆ; ಮಾಡಿಸುತ್ತಾರೆ! ವ್ಯಕ್ತಿತ್ವ ವಿಕಸನ, ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕೌನ್ಸಿಲಿಂಗ್ (ಸಮಾಲೋಚನೆ) ಮಾಡುವ ಶ್ರೀಯುತರನ್ನು, ರಾಜ್ಯದ ಅನೇಕ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ಟಿ.ವಿ. ಮಾಧ್ಯಮಗಳು ಹಲವು ಕಾರ್ಯಕ್ರಮಗಳ ಮೂಲಕ ಪರಿಚಯಿಸಿವೆ; ಅವರ ಲೇಖನಗಳನ್ನು ಪ್ರಕಟಿಸುತ್ತಿವೆ ಹಾಗೂ ತಮ್ಮ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿವೆ.
     ಬೆಂಗಳೂರು ನಿವಾಸಿಗಳಾಗಿರುವ ಶ್ರೀಯುತರು, ತಮ್ಮ ಮಕ್ಕಳನ್ನು ಹೊರಗಿನ ಯಾವುದೇ ಶಾಲೆಗಳಿಗೂ ಕಳುಹಿಸದೆ ಮನೆಯಲ್ಲೇ ಗುರುಕುಲ ಮಾದರಿ ವೇದ ಶಿಕ್ಷಣ ಕೊಡಿಸಿದ್ದು, ಯಾವ ಪದವೀಧರರಿಗಿಂತಲೂ ಕಡಿಮೆಯಿಲ್ಲದೆ ಒಂದು ಕೈ ಹೆಚ್ಚಾಗಿಯೇ ಬುದ್ಧಿವಂತರನ್ನಾಗಿ ಬೆಳೆಸಿದ್ದಾರೆಂದರೆ ಅಚ್ಚರಿಯೇ ಸರಿ!
-ಎಚ್.ಎಸ್. ಪ್ರಭಾಕರ, ಹಿರಿಯ ಪತ್ರಕರ್ತರು,
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪತ್ರಕರ್ತರ ಸಂಘ,
ಎಚ್.ಆರ್.ಎಸ್. ಕಾಂಪೌಂಡ್, ೬ನೇ ಕ್ರಾಸ್,
ಕೆ.ಆರ್. ಪುರಂ, ಹಾಸನ-೫೭೩ ೨೦೧

Friday, September 7, 2012

ವೇದಾಧ್ಯಾಯೀ ಶ್ರೀಸುಧಾಕರ ಶರ್ಮ


 ಯಾರ ಪ್ರೇರಣೆಯಿಂದ ವೇದಸುಧೆಯು ಆರಂಭವಾಗಿದೆಯೋ ಅಂತಹವರ ಬಗ್ಗೆ  ನಮಗೆ ಸ್ವಲ್ಪ ತಿಳಿದಿರ ಬೇಕಲ್ಲವೇ?
ಇಲ್ಲಿದೆ ಅವರ ಪರಿಚಯ.



EDUCATIONAL QUALIFICATION: B.Sc. (Physics, Chemistry, Mathematics)
A.I.C.W.A.
M.A. (Sanskrit)
OCCUPATION Practicing Cost Accountant;
A guide to students appearing for I.C.W.A. C.A.
M.Com. M.B.A. M.C.A. C.S. courses etc.,
OTHER STUDIES: A student of Vedaas.
TEACHERS/MENTORS: Late.N.Srikantiah (Father), Journalist, Author,
Researcher.
Late.R.V.Krishnarao (Engineer by profession,
deciple of Late.Sir.M.Vishveshwaraiah)
Late.Dr.M.Gopalakrishna Rao (Ayurvedic Doctor,
Author, Social worker, Deciple of
Late.Pt.Taranath)
Late.Sahithya Shiromani A.Vasudeva Ballal
(Sanskrit Scholar)
Late.Pt.Ramarao.V.Nayak (Renowned Hindustani
Classical Musician)
Late.Pt.Vijyan Bhikshuji (Vedic and Sanskrit
Scholar)
Pt.Sudhakara Chaturvedi (Centenarian Vedic
Scholar, Freedom fighter, Close associate of
Mahathma Gandhiji)
OTHER INFORMATION: Married. Wife: Indumathi Sudhakara M.A.(Sanskrit)
Two children.
Daughter - Amruthavarshini
Vyakaranacharya
Son-in-law - Umesh Hegde (Sanskrit
Scholar)
Son - Brahmachari Bhrugu.S.Devaratha.
Children are not sent to any school. Trained
at home and under able teachers in Gurukula
system.
All the members of the family are into Vedic Studies.
OTHER ACTIVITIES: Writing and Publishing of small tracts - Vedic and
Humanitarian - and their distribution freely.
Some titles - Maduve Eke, Yaavaaga, Hege?
Mruthyuve Namaskara!
BIO-DATA
Jyothishigale Sathyada Kole Maadabedi!
Vaasthu, Beeladiri Besthu!
Janivaaradalli Brahmanyavilla!
Jeevanavinnoo Idhe
Pakvathege 16 Mettilugalu
Nooru Hithanudigalu,
I Trust you!,
Saptha Saamajika Paathakagalu, etc.,
Public lectures on topics related to Vedaas and
Humanity, Ethics, Administration, Personality
development, Psychology etc.,
Some regular places -
Vivekananda Yoga Training Center,
Jeevanbima Nagar;
Arya samaja,V.V.Puram; Bangalore
Arya Samaj, Mysore
House of Sri.Balakrishna Arya,
Kanakapura;
Bharathiya Vidya Bhavan, South Bangalore;
Veda Vijyana Gurukula, Chennenahalli,
Veda Bhashya Prakashana Samithi,
Basavanagudi, Bangalore,
BAIF Institute for Rural Development –
Karnataka, Tiptur
Theosophical Society, City lodge, Bangalore
Ragigudda Anjaneya Temple,
Eccumenical Christian Center, Whlitefield,
Siddha Samadhi Yoga of Rishi Prabhakar,
Doddamaralawadi,
Udaya Bhanu Kala Sangha, Gavipuram
Institute of Agricultural Technologists
Dignity Foundation, Jayanagar, Bangalore
Administrative Training Institute,
Mysore
Staff Training Institute of Comptroller
and Audit General of India, Bangalore
etc.,
And many platforms through out Karnataka
and some parts of Andhrapradesh.
Conducts Family Councelling, counselling on varied
issues such as family problems, personality
development, inspiration lectures for students, and
on several legal issues. Guides professionals in
solving intra-personal problems, inter personal
problems.
Conducts Vedic rituals strictly according to Vedic
guidance, explaining the meaning and significance of
the Manthras chanted. In particular Upanayanam.
This Samskara has been given to
so called non-Brahmins and Girls/Women too.
Has given several programmes in
* Doordarshana Chandana
- Samskrutha Sourabha, Maarga Darshana,
Jeevana Darshana. (Live Phone in
programme)
* All India Radio, Bangalore Drama Artist since
1973.
* Jnaanavani, FM Channel of IGNOU, Bangalore
* Udaya TV has covered the couple under
"Parichaya" programme.
* Shankara TV, Programme "Beyond"
Has presented papers on Vedas in
* International Conference held at Kangdi
Gurukula, Haridwar.
* National Conference held at Veda vijyana
Gurukula, Chennenahalli, Bangalore Rural
District.
Articles on topics in Veda, Vedic mathematics being
contributed to periodicals like Vedataranga
(Monthly), Vipravahini (Fortnightly), Vikrama
(Weekly), Aseema (Monthly), Vijaya Karnataka
(Daily), Sirisamaruddhi (Monthly), Hinduvaani
(Monthly), Prajavani (Daily) etc., and to several
special issues/souvinirs brought out by reputed
Organisations.
Has produced an Audio-visual digital documentary
on “Rain fed Sericulture” (22 Minutes) for an
N.G.O. BIRD-K of Tiptur.
Has brought out a few Audio Compact Disc.
1, A lecture on Marriage, the ritual and its
significance. (2 Hours and 10 Minutes)
2. Nijava Thiliyona, about methods of seeking Truth
(1 Hour and 30 Minutes)
CURRENTLY A T.V. SERIAL CALLED
"HOSABELAKU - SATHYA
SAMPRADAYATTA" IS BEING TELECAST IN
CHANDANA T.V. CHANNEL EVERY SUNDAY
BETWEEN 09.30 TO 10.00 A.M.