Pages

Showing posts with label ಉಭಯ ಕುಶಲೋಪರಿ. Show all posts
Showing posts with label ಉಭಯ ಕುಶಲೋಪರಿ. Show all posts

Sunday, June 9, 2013

ಸಮಾಜಕ್ಕಾಗಿ ಏನಾದರೂ ಮಾಡಲು ಬದುಕಬೇಕು.






ಚಿದ್ರೂಪಾನಂದ ಸರಸ್ವತಿಸ್ವಾಮೀಜಿಯವರೊಡನೆ ಶ್ರೀದತ್ತಾತ್ರೇಯ ಭಟ್



ಶ್ರೀಮತೀ ಸ್ವರೂಪರಾಣಿ

ಶ್ರೀಮತಿ ಸ್ವರೂಪರಾಣಿಯವರ ಮನೆಯಲ್ಲಿ ಸ್ವಾಮಿ ಚಿದ್ರೂಪಾನಂದರು

ಮನೆಯೇ ಗ್ರಂಥಾಲಯ


ಸಭೆಯ ಮುಂದಿನ ಸಾಲಿನಲ್ಲಿ ಹಾಸನದ ವೇದಭಾರತೀ ಸದಸ್ಯರು

ನೋಡಲು ಹೋಗಿದ್ದ ನನ್ನದೂ ಒಂದು ಪಾತ್ರ




ಆರ್.ಎಸ್.ಎಸ್. ಪ್ರೇರಿತ ಧರ್ಮಜಾಗರಣ ವಿಭಾಗದ ಪ್ರಾಂತ ಸಂಚಾಲಕರಾದ ಶ್ರೀಯುತ ಗ.ರಾ.ಸುರೇಶ್ ನನಗೆ ದೂರವಾಣಿಯಲ್ಲಿ ಮಾತನಾಡಿ ಒಂದು ವಿಶಿಷ್ಠ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಕೆ.ಆರ್.ನಗರ ಸಮೀಪದ ಹಂಪಾಪುರದಲ್ಲಿ ಗೋಶಾಲೆಯಲ್ಲೊಂದು ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡಲು ಹುಬ್ಬಳ್ಳಿಯ ಆರ್ಷ ವಿದ್ಯಾ ಗುರುಕುಲದ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರು ಬರುತ್ತಾರೆ, ನೀವೂ ಕಾರ್ಯಕ್ರಮಕ್ಕೆ ಬನ್ನಿ ಎಂದರು. ಅದರ ಮರುದಿನ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಸ್ವರೂಪರಾಣಿಯವರಿಂದ ದೂರವಾಣಿಯಲ್ಲಿ ವಿವರ ಪಡೆದೆ. ನಮ್ಮ ವೇದ ಭಾರತಿಯ ಬಗ್ಗೆಯೂ ತಿಳಿಸಿದೆ. ವೇದಭಾರತಿಯ ಟೀಮ್ ಅಂದು ಬಂದು ಸ್ವಾಮೀಜಿಯವರು ಪುರಪ್ರವೇಶಮಾಡುವಾಗ ಜೊತೆಯಲ್ಲಿದ್ದು ವೇದ ಪಠಣ ಮಾಡಬೇಕೆಂದು ತಿಳಿಸಿದರು. ವೇದಭಾರತಿಯಲ್ಲಿ ಜಾತಿ/ಲಿಂಗ/ವಯಸ್ಸಿನ ಭೇದವಿಲ್ಲದೆ ವೇದಾಧ್ಯಯನ ನಡೆಯುತ್ತಿದೆ ಎಂಬುದು ಅವರಿಗೆ ಸಂತೋಷದ ಸಂಗತಿಯಾಗಿತ್ತು. ಆತ್ಮೀಯವಾಗಿ ಎಲ್ಲರನ್ನೂ ಆಹ್ವಾನಿಸಿದರು. ನಿತ್ಯ ವೇದಾಧ್ಯಯನ ನಡೆಯುತ್ತಿರುವುದರಿಂದ ಚರ್ಚಿಸಿ ನಿರ್ಧರಿಸುವುದು ಕಷ್ಠವೇನಾಗಲಿಲ್ಲ. ಇಂದು ಬೆಳಿಗ್ಗೆ [9.6.2013 ಭಾನುವಾರ] ಹಾಸನದಿಂದ ಒಂದು ಟಾಟಾ ಸುಮೋ ಮತ್ತು ಒಂದು ಕಾರ್ ನಲ್ಲಿ ಹದಿನೈದು ಜನ ಹೊರಟೆವು. ಹಂಪಾಪುರ ತಲುಪಿದಾಗ ಬೆಳಿಗ್ಗೆ 10:30 ಆಗಿತ್ತು. ಆ ಹೊತ್ತಿನಿಂದ ಹಿಂದುರುಗುವ ಸಮಯದ ವರೆಗೂ [ ಮಧ್ಯಾಹ್ನ 2:30] ಒಂದು ಅದ್ಭುತ ಸತ್ಸಂಗದಲ್ಲಿ ನಾವಿದ್ದೆವು ,ಎಂದರೆ ಅನ್ವರ್ಥವಾದೀತು. ನಾವಿನ್ನೂ ಆರೇಳು ತಿಂಗಳಿನಿಂದ ವೇದಾಭ್ಯಾಸವನ್ನು ಮಾಡುತ್ತಿರುವ ಶಿಶುಗಳು! ಸ್ವಾಮೀಜಿಯವರ ಮುಂದೆ ವೇದ ಪಠಣ ಮಾಡುವಾಗ ತಪ್ಪಾದರೆ!! ನಾವು ಒಂದು ನಿರ್ಧಾರ ಮಾಡಿದೆವು. ನಾವು ವೇದಾಧ್ಯಯನದಲ್ಲಿ ಶಿಶುಗಳೆಂಬುದನ್ನು ಸ್ವಾಮೀಜಿಯವರಲ್ಲಿ ಅರಿಕೆಮಾಡಿಕೊಂಡು ಸಾಮೂಹಿಕವಾಗಿ ಹೇಳಿಬಿಡೋಣ, ಎಂತಲೇ ಗಟ್ಟಿ ನಿರ್ಧಾರದೊಂದಿಗೆ. ಹೋದೆವು. ಸ್ವಾಮೀಜಿಯವರ ಪುರಪ್ರವೇಶವಾದಾಗ ಮೆರವಣಿಗೆಯಲ್ಲಿ ನಾವು ಒಟ್ಟಾಗಿ ವೇದಪಠಿಸುತ್ತಾ ಹೆಜ್ಜೆ ಹಾಕಿದೆವು. ಕಾರ್ಯಕ್ರಮದ ಸ್ಥಳವನ್ನು ತಲುಪಿದಾಗ ಶ್ರೀ ಸುರೇಶರು ಸ್ವಾಮೀಜಿಯವರಿಗೆ ನಮ್ಮ ಪರಿಚಯ ಮಾಡಿಕೊಟ್ಟರು. ಹಾಸನ ವೇದ ಭಾರತಿಯ ಧ್ಯೇಯೋದ್ಧೇಶವನ್ನು ಎರಡು ಮಾತುಗಳಲ್ಲಿ ಅರಿಕೆ ಮಾಡಿಕೊಂಡೆವು. ಏನು!! ಎಲ್ಲರಿಗಾಗಿ ವೇದ!! ಜಾತಿಭೇದವಿಲ್ಲ!!! ಹೆಂಗಸರೂ ಕಲಿಯುತ್ತಿದ್ದಾರಾ!!! ಇದೇ ಆಗಬೇಕಾಗಿದ್ದ ಕೆಲಸ, ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅವರ ಮಾತುಗಳ ವೀಡಿಯೋ ನೋಡಿ ಇನ್ನು ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಸ್ವರೂಪರಾಣಿಯವರಬಗ್ಗೆ ಹೇಳಲೇ ಬೇಕು. ಸುಮಾರು ಇಪ್ಪತ್ತು ವರ್ಷದ ಮಗ ಸುಭಾಷ್ ಅಕಾಲಿಕ ವಾಗಿ ಅಗಲಿದಾಗ ಆ ದು:ಖವನ್ನು ಸಹಿಸಲಾರದೆ ಐದಾರು ವರ್ಷ ಜೀವಚ್ಛವವಾಗಿ ಹಾಸಿಗೆ ಹಿಡಿದಿದ್ದ ಸ್ವರೂಪರಾಣಿಯವರಿಗೆ ಧೈರ್ಯತುಂಬಿದವರಲ್ಲಿ ಶ್ರೀಯುತ ಗ.ರಾ .ಸುರೇಶರೂ ಒಬ್ಬರು. ಹಿತೈಷಿಗಳ ಆತ್ಮೀಯನುಡಿಗಳು ಸ್ವರೂಪರಾಣಿಯವರನ್ನು ಬದುಕುವಂತೆ ಮಾಡಿತು. ಹೌದು ಮಗನನ್ನು ಕಳೆದುಕೊಂಡ ಮೇಲೆ ಯಾರಿಗಾಗಿ ಬದುಕಬೇಕು? ಹಿತೈಷಿಗಳ ಹೃದಯಸ್ಪರ್ಶೀ ಮಾತುಗಳಿಂದ ಉತ್ತೇಜಿತರಾಗಿ " ಹೌದು ಬದುಕಿದರೆ ಸಾಮಜಕ್ಕೆ ಏನಾದರೂ ಮಗನ ಹೆಸರಲ್ಲಿ ಮಾಡ ಬೇಕು" ಆಗ ಆರಂಭವಾದದ್ದೇ ಸುಭಾಷ್ ಎಂ.ರಾವ್ ಸ್ಮರಣಾರ್ಥ ಚಾರಿಟಬಲ್ ಟ್ರಸ್ಟ್. ಅದರ ಮೂಲಕ ಅವರು ಮಾಡುತ್ತಿರುವ ಸೇವೆ ಅಪಾರ. ಗೋಶಾಲೆ ತೆರೆದರು. ಗೋವಿನ ಮೂತ್ರದಿಂದ ಜೀವ ರಕ್ಷಕ ಔಷಧಿಗಳನ್ನು ತಯಾರಿಸುವ ತರಬೇತಿ ಪಡೆದು ಗೋ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದರು. ವರ್ಷಕ್ಕೊಮ್ಮೆ ವಸತಿ ಸಹಿತ ವೇದಶಿಬಿರ ಆರಂಭಿಸಿದರು. ಕೇವಲ ಕೆಲವು ಗಂಟೆಗಳಲ್ಲಿ ಇಷ್ಟು ಚಟುವಟಿಕೆಗೆಗಳ ಬಗ್ಗೆ ಮಾಹಿತಿ ದೊರೆಯುತು. ಅವರು ಮಾಡುತ್ತಿರುವ ಸೇವಾ ಕೆಲಸಗಳು ಇನ್ನೂ ಅಪಾರ. ವಿವರಗಳನ್ನು ಪಡೆದು ಮತ್ತೊಮ್ಮೆ ಬರೆಯುವೆ. ಇಂದಿನ ಕಾರ್ಯಕ್ರಮದಲ್ಲಿ ಶ್ರೀ ಯುತ ದತ್ತಾತ್ರೇಯ ಭಟ್ ಮತ್ತು ಪೂಜ್ಯ ಸ್ವಾಮೀಜಿಯವರು ಮಾಡಿರುವ ಉಪನ್ಯಾಸಗಳ ವೀಡಿಯೋ ಗಳನ್ನು ಒಂದೆರಡು ದಿನಗಳ ಲ್ಲಿ ಅಳವಡಿಸುವೆ. ನೀವು ವೀಡಿಯೋ ನೋಡಲೇ ಬೆಕೆಂಬುದು ನನ್ನ ಮನವಿ.

Tuesday, October 30, 2012

ಶಿಬಿರಾರ್ಥಿಯ ಅನುಭವ ಕಥನ


     



RSS ಹತ್ತಿರದಿಂದ ನೋಡಿದವರಿಗೆ ಮಾತ್ರ  ಸಂಘ ಅರ್ಥವಾದೀತು.ಹತ್ತಿರದಿಂದ ನೋಡುವ ವರಗೆ ವಾಸ್ತವಾಂಶಗಳು ತಿಳಿಯಲಾರವು. ರಾಜ್ಯದೆಲ್ಲೆಡೆಯಂತೆ ಹಾಸನಜಿಲ್ಲೆಯ   ಪ್ರಾಥಮಿಕ ಶಿಕ್ಷಾವರ್ಗವು ಹೊಳೇನರಸೀಪುರದಲ್ಲಿ ಅಕ್ಟೋಬರ್ 7 ರಿಂದ  14 ರವರಗೆ ನಡೆಯಿತು.ಜಿಲ್ಲೆಯ ಎಲ್ಲೆಡೆಯಿಂದ ಬಂದಿದ್ದ 179 ಶಿಕ್ಷಾರ್ಥಿಗಳಲ್ಲಿ ಎಂಟನೆಯ ತರಗತಿಯ  ವಿದ್ಯಾರ್ಥಿಗಳಿಂದ ಮೊದಲ್ಗೊಂಡು 70 ವರ್ಷದ ಹಿರಿಯರೂ ಇದ್ದರು. ವಕೀಲರು, ಶಿಕ್ಷಕರು, ವ್ಯಾಪಾರಸ್ಥರು,ಕೃಷಿಕರು...ಇತ್ಯಾದಿಯಾಗಿ ಎಲ್ಲಾ ಕ್ಷೇತ್ರವನ್ನೂ ಪ್ರತಿನಿಧಿಸಿತ್ತು. ಆ ಶಿಬಿರದಲ್ಲಿ ಶಿಬಿರಾಧಿಕಾರಿ ಹೊಣೆ ನನ್ನದಾಗಿತ್ತು. ಒಂದು ವಾರದ ಶಿಕ್ಷಣದ ಅಂತ್ಯದಲ್ಲಿ  ಶಿಬಿರಾರ್ಥಿಗಳಿಂದ ಅನುಭವ ಕಥನವನ್ನು ಕೇಳುವುದೆಂದರೆ ಬಲು ಚೆಂದ. ಒಬ್ಬ ಶಿಕ್ಷಾರ್ಥಿಯ ಅನುಭವ ನೀವೂ ಕೇಳಿ. ನಿಮ್ಮ ಅನಿಸಿಕೆ ತಿಳಿಸಿ.

Wednesday, October 3, 2012

ಚಪ್ಪಲಿ ಹೊಲಿದು ಮಗಳನ್ನು ಇಂಜಿನಿಯರ್ ಮಾಡಿಸಿದ ರಾಜೇಂದರ್!!


ನನ್ನ ತಂಗಿ ಮಗ ಸುಬ್ರಹ್ಮಣ್ಯ ತನ್ನ ಫೇಸ್ ಬುಕ್ ನಲ್ಲಿ  ಈ ಫೋಟೋ ಹಾಕಿಕೊಂಡಿದ್ದ. ನೋಡುತ್ತಿದ್ದಂತೆಯೇ ನನ್ನ ಬಾಲ್ಯ ನೆನಪಾಯ್ತು. ನಮ್ಮಪ್ಪ ಅಮ್ಮ ಕಣ್ಮುಂದೆ ಬಂದರು. ಅಬ್ಭಾ! ಅದೊಂದು ರೋಚಕ ಅಧ್ಯಾಯ!! ಅಂದಿನ ಅನುಭವವೇ ಇಂದು ನನ್ನಲ್ಲೇನಾದರೂ ಮನುಷ್ಯತ್ವದ ಗುಣಗಳಿದ್ದರೆ ಅದಕ್ಕೆ ಕಾರಣ.ನನ್ನ ಕಥೆ ಹಾಗಿರಲಿ.
ಇಲ್ಲಿ ಮೀರಾ ಮತ್ತು ಅವಳ ತಂದೆ ರಾಜೇಂದರ್ ನಮ್ಮೆಲ್ಲರ ಮೆಚ್ಚುಗೆಗೆ ಸಹಜವಾಗಿ ಪಾತ್ರರಲ್ಲವೇ?  ಹಗಲು ರಾತ್ರಿ ಚಪ್ಪಲಿ ಹೊಲಿದು ಮಗಳನ್ನು ಇಂಜಿನಿಯರ್ ಮಾಡಿಸಿದ ರಾಜೇಂದರ್!! ಬಡತನ ಲೆಕ್ಕಿಸದೆ ಓದಿದ ಮೀರಾ!!!
ನಿಮಗೆ ಶತ ಶತ ನಮನಗಳು

Wednesday, February 22, 2012

Body Remembers Everything



The physical ‘you’ could get confused with erratic eating habits and multiple partners, cautions Sadhguru


Today, it is not considered necessary for you to spend all your life with one partner; a partner could come with an expiry date. When you enter into a relationship, you might think it is forever, but within three months you might think, “Why am I with this person?” Your relationships may not last, but if you get into the habit of falling in and out of love too often; if you play around with too many people, after some time, you could become numb. You might find that you do not like anybody. This is because there is something called Runanabandha.


It Records Everything


Runanabandha is a certain structure of karmic substance; it is a kind of recording in the body. Wherever you mingle with people, some runanabandha is created. And when two people come together, the runanabandha is much deeper. The body keeps a record of everything that has happened. If intimacy happens with another body, your body keeps a record of that particular kind of energy.


Since your body remembers it all, if you have multiple partners, the body slowly gets confused over a period of time and this confusion will tell in your life in a myriad ways. Your mind is confused, but you live with that, somehow. But, if the body gets confused, then, you are in deep trouble.


One of the major reasons for the prevalent high level of anxiety, insecurity and depression is that bodies are confused. After some time, you do not need any reason to go nuts. People are just going nuts without any reason because the body itself is confused.


The body gets confused with multiple intimacies; that’s one thing. Another thing is the type of food you eat. In Indic tradition, orthodox people never ate more than two or three items in a meal, and those three items were always matched together. People understood the body so well that in our homes, when a particular vegetable was cooked, it was done in a certain kind of curry. They never cooked that vegetable in another kind of curry, because they understood that if they put two mismatched things together, the body would get confused.


As young boys, we were trained to pick vegetables when we went to the market. “If you buy this vegetable, you do not buy that vegetable because these two cannot be eaten within a span of two days. If you have eaten this, you should not eat that, because the body will get confused, and once your body gets confused, you will go haywire.” This understanding was always there.


But whenever people become a little affluent, they think they have to eat everything in a single meal. If you go to any upscale dinner, you will see that there is total madness. Recently, at one of the events, someone announced with great pride that they have 270 different varieties of food, and he invited guests to take a little of everything and eat. Imagine how confused your body could get with so many items of food!


So, the two major things which confuse the body are — improper eating habits and indiscriminate indulgence in physical intimacy. These will take a toll over a period of time. This has nothing to do with morals. It is a certain existential process. Every action has a consequence. If you do things with your body, certain consequences will follow. Earlier, these things were deeply understood, and life was structured around them. Now, in the name of freedom we want to demolish everything, hence we suffer. Maybe a time will come centuries later when we will realise that this is not the way to live.




courtesy: speaking tree 

Thursday, November 17, 2011


ವೇದಸುಧೆಯ ಆತ್ಮೀಯ ಬಂಧುಗಳೇ ,
ನನ್ನ ಮನೆಯ ಗೃಹಪ್ರವೇಶ ಕ್ಕೆ ಆಮಂತ್ರಣ ವನ್ನೇ ಮುದ್ರಿಸದೆ ಕೇವಲ ದೂರವಾಣಿ ಹಾಗೂ ಅಂತರ್ ಜಾಲದ ಮೂಲಕ ಮಿತ್ರರನ್ನು ಆಹ್ವಾನಿಸಿದೆ. ಸಮಯಾವಕಾಶವಿದ್ದ ಸ್ನೇಹಿತರು ಪಾಲ್ಗೊಂಡರು. ಹಲವರು ದೂರವಾಣಿಯ ಮೂಲಕ ಶುಭಕೋರಿದರು. ಹಲವರು ಗೃಹ ಪ್ರವೇಶಾನಂತರ ಶುಭ ಕೋರಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು. ಕೆಳಗಿನ ಕೊಂಡಿಯಲ್ಲಿ ಗೃಹಪ್ರವೇಶದ ಚಿಕ್ಕ ವರದಿ ಇದೆ.

http://vedasudhe.blogspot.com/2011/11/blog-post_09.html

Wednesday, November 9, 2011

"ಈಶಾವಾಸ್ಯಮ್" ಗೃಹಪ್ರವೇಶ

" ಈಶಾವಾಸ್ಯಂ " ಗೃಹಪ್ರವೇಶದ ಚಿತ್ರಗಳನ್ನು ವೇದಸುಧೆಯಲ್ಲಿ ಪ್ರಕಟಿಸುವುದು ಉಚಿತವೆ? ಹೀಗೆ ನಾಲ್ಕೈದು ದಿನಗಳಿಂದ ಯೋಚಿಸುತ್ತಿದ್ದೆ. ಕೊನೆಗೊಮ್ಮೆ ಗಟ್ಟಿ ನಿರ್ಧಾರಕ್ಕೆ ಬಂದೆ." ಪ್ರಕಟಿಸಬೇಕು" .ಕಾರಣ ನನ್ನ ವಾಸ್ತವ್ಯದ  ಜೊತೆ ಜೊತೆಗೆ ಸಮಾಜಕ್ಕಾಗಿಯೂ ಸ್ವಲ್ಪ ಚಿಂತನೆ ನನ್ನ ಯೋಜನೆಯಲ್ಲಿರ ಬೇಕಾದರೆ ,ಪ್ರಕಟಿಸುವುದು ತಪ್ಪಾಗುವುದಿಲ್ಲ.ಸರಿ ಪ್ರಕಟಿಸುವ ನಿರ್ಧಾರ ಮಾಡಿದೆ.
ಈಶಾವಾಸ್ಯಮ್ ನಲ್ಲಿ ಏನೇನಿದೆ?
* ಸತ್ಸಂಗ ಕ್ಕಾಗಿಯೇ ಸುಮಾರು ೮೦ ಜನರು ಕುಳಿತುಕೊಳ್ಳಲು ಅನುಕೂಲವಾಗಿರುವ ಸಭಾಂಗಣ.
* ಉಪನ್ಯಾಸಕಾರಿಗೆ ವಿಶ್ರಾಂತಿ ಕೊಠಡಿ
*ಸಭಾಂಗಣದಲ್ಲಿ ಶಾಶ್ವತ ಧ್ವನಿ ವರ್ಧಕ
* ಅನಿವಾರ್ಯವಾದವರಿಗೆ ಖುರ್ಚಿ
* ಶೌಚಾಲಯ
*ಅಡಿಗೆ ಸಿದ್ಧಪಡಿಸಲು ಪ್ರತ್ಯೇಕ ವ್ಯವಸ್ಥೆ
*ತಡೆರಹಿತ ವಿದ್ಯುತ್
ಉದ್ಧೇ ಶಿತ ಕಾರ್ಯ ಕ್ರಮಗಳು 
*ವರ್ಷದಲ್ಲಿ ಹತ್ತಾರು ಅಧ್ಯಾತ್ಮ ಶಿಬಿರಗಳು
*ಮಾಸಿಕ ಸತ್ಸಂಗ
*ನಿತ್ಯ ಅಗ್ನಿಹೋತ್ರ \ಧ್ಯಾನ\ಪ್ರಾಣಾಯಾಮ ಅಭ್ಯಾಸ 
-------------------------------------------------------
ಕಳೆದ ಎರಡರಂದು ನಮ್ಮ ಮನೆ ವು ಸಾಂಗವಾಗಿ ನೆರವೇರಿತು. ಮುದ್ರಿತ ಆಮಂತ್ರಣವಿಲ್ಲದ ,ಕೇವಲ ಈ ಮೇಲ್ ಮತ್ತು ದೂರವಾಣಿಯ ಮೂಲಕ ಮಾಡಿದ ಮನವಿಗೆ ಸ್ನೇಹಿತರು ಮತ್ತು ಬಂಧುಗಳು ಬಂದು ಶುಭ ಕೋರಿದರು.ವರ್ಕಿಂಗ್ ಡೇ ಆದ್ದರಿಂದ ಹಲವರಿಗೆ ಬರಲಾಗಲಿಲ್ಲ. ಆದರೂ ಭಾವನಾತ್ಮಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನನ್ನ ಹಲವು ವರ್ಷಗಳ ಕನಸಾದ " ಸತ್ಸಂಗ ಸಭಾಂಗಣ" ತುಂಬಿತ್ತು. ನನ್ನ ಜೀವನದಲ್ಲಿ ನನ್ನನ್ನು ಕೈ ಹಿಡಿದು ನಡೆಸಿದವರನ್ನು ಸ್ಮರಿಸುವ ಕಾರ್ಯಕ್ರಮ " ಸಮಾಜ ಸ್ಮರಣೆ "  ಹಲವರಿಗೆ ಸಂತಸ ನೀಡಿತು. ನನ್ನ ಅಧ್ಯಾತ್ಮ ಕ್ಷೇತ್ರದಲ್ಲಿ ಮಾರ್ಗದರ್ಶಿಗಳಾಗಿರುವ ಬೆಂಗಳೂರಿನ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯೀ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ  ಕಾರ್ಯಕ್ರಮದಲ್ಲಿ  ರಾ. ಸ್ವ.ಸಂಘದ  ಹಿರಿಯ ಪ್ರಚರಕರೂ " ಕುಟುಂಬ ಪ್ರಭೋದನ್"  ಪರಿವಾರದ ಅಖಿಲ ಭಾರತ ಪ್ರಮುಖರೂ ಆದ ಮಾನ್ಯ ಶ್ರೀ ಸು.ರಾಮಣ್ಣ  ನವರು ಉಪಸ್ಥಿತರಿದ್ದು  ನಮ್ಮನ್ನು ಹಾರೈಸಿದರು. ನಮ್ಮ ಕುಟುಂಬದ ಹಿರಿಯರೂ ಅಂದೇ 86 ನೇ ವರ್ಷಕ್ಕೆ ಕಾಲಿಟ್ಟ ಶ್ರೀ ಹೆಚ್.ಆರ್. ಶ್ರೀಕಂಠಯ್ಯನವರು ಸಭೆಯ ಅಧ್ಯಕ್ಷತೆ ವಹಿಸಿದ್ದು ಹಲವರಿಗೆ  ವಿಶೇಷ ವೆನಿಸಿತು.ಸಭೆಯಲ್ಲಿ ಉಪಷ್ಟಿತರಿದ್ದ ನನ್ನ ಗುರುಗಳಾದ ಶ್ರೀ ಹನುಮೇ ಗೌಡರನ್ನೂ, ನನಗೆ ತುತ್ತಿಕ್ಕಿ ಬೆಳಸಿದ ನೂರಾರು ಅನ್ನದಾತರ ಪರವಾಗಿ ಶ್ರೀ ಬೆಳವಾಡಿ ಕೃಷ್ಣ ಮೂರ್ತಿಗಳನ್ನೂ, ಸಮಾಜದಲ್ಲಿ ನನ್ನನ್ನು  ತಿದ್ದಿ ತೀಡಿ ಬೆಳಸಿದ ಶ್ರೀ ಸು.ರಾಮಣ್ಣ ನವರನ್ನೂ ಗೌರವಿಸಲಾಯ್ತು. ನನ್ನ ಕನಸಿನ ಮನೆ " ಈಶಾವಾಸ್ಯಮ್" ನಿರ್ಮಾಣದಲ್ಲಿ ಹಗಲಿರುಳು ದುಡಿದ ಕಾರ್ಮಿಕ ವರ್ಗವನ್ನೂ, ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ  ಅಕ್ಕ ಪಕ್ಕದ ಮನೆಯವರನ್ನೂ ಸಹ ಗೌರವಿಸಲಾಯ್ತು. ಮಿತ್ರ ಚಿನ್ನಪ್ಪ ಸೆರೆ ಹಿಡಿದಿರುವ ಕೆಲವು ದೃಶ್ಯಗಳು ಇಲ್ಲಿವೆ.




ಶ್ರೀಮತಿ ಲಲಿತಾ ರಮೇಶ್  ಹಾಡಿದ್ದು " ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ"

ವೇದಿಕೆಯಲ್ಲಿ ಮಾನ್ಯ ಶ್ರೀ ಸು.ರಾಮಣ್ಣ,ಶ್ರೀ ಹೆಚ್.ಆರ್.ಶ್ರೀಕಂಠಯ್ಯಮತ್ತು ಮಾತಾಜಿ ವಿವೇಕ ಮಯೀ  

ಶ್ರೀ ಸು.ರಾಮಣ್ಣ ನವರಿಂದ ನಮ್ಮ ಮನೆ ಹೇಗಿರ ಬೇಕು? ಮಾರ್ಗದರ್ಶನ 



ಕೈ ಹಿಡಿದು ನಡೆಸಿದವರಿಗೆ ಗೌರವಾರ್ಪಣೆ 

ಪೂಜ್ಯ ಗುರುಗಳಿಗೆ ಗೌರವಾರ್ಪಣೆ 

ತುತ್ತಿಕ್ಕಿ ಬೆಳಸಿದ ಬೆಳವಾಡಿ ಕೃಷ್ಣಮೂರ್ತಿಗಳು 
 ಆದಿ
ಕಟ್ಟಡ ನಿರ್ಮಿಸಿಕೊಟ್ಟ ಶ್ರೀ ದ್ಯಾವಪ್ಪ 


ಮರಳು ಇಟ್ಟಿಗೆ ಹೊತ್ತ ಸಂದೀಪ 


ಕುಟುಂಬದ ಹಿರಿಯರಾದ ಶ್ರೀಕಂಠಯ್ಯ 

ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾಗ ತಾತ್ಕಾಲಿಕ ಉದ್ಯೋಗ ಕೊಡಿಸಿದ ಭಾವ ಕೃಷ್ಣ ಮೂರ್ತಿ 


ಹೊಳೆ ನರಸೀಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಪೂಜ್ಯ ಅಧ್ವಯಾ ನಂದೇಂದ್ರ ಸರಸ್ವತೀ 




ಶ್ರೀ ಅನಂತನಾರಾಯಣ ರಿಂದ ಕಾರ್ಯಕ್ರಮ  ನಿರ್ವಹಣೆ 



Friday, October 7, 2011

ಸಂಪಾದಕೀಯ


ಕೇಳಿದ  ಉಪನ್ಯಾಸಗಳ ಆಡಿಯೋ ಸಾಕಷ್ಟಿವೆ. ಎಲ್ಲವನ್ನೂ ಎಡಿಟ್ ಮಾಡಿ ವಿಷಯಾನುಕ್ರಮವಾಗಿ ಪ್ರಕಟಿಸಬೇಕಿದೆ. ಆದರೆ ಸಧ್ಯಕ್ಕೆ ಕಂಪ್ಯೂಟರ್ ಆಮೆವೇಗ ತಾಳಿದೆ. ಮನೆ ನಿರ್ಮಾಣದ ಕೆಲಸ ಇನ್ನೂ ಮುಗಿದಿಲ್ಲ. ಬರುವ ನವಂಬರ್ 2 ಕ್ಕೆ ಗೃಹಪ್ರವೇಶ. ಹಾಗಾಗಿ ಇನ್ನು ಒಂದು ತಿಂಗಳು ಬ್ಲಾಗ್ ಮತ್ತು ವೆಬ್ ಸೈಟ್ ಗಳು ನನ್ನ ಕಡೆಯಿಂದ ಅಪ್ಡೇಟ್ ಆಗಲಾರದು. ವೇದಸುಧೆ ಬಳಗದ ಉಳಿದ ಮಿತ್ರರು ಈ ಅವಧಿಯಲ್ಲಿ ವೇದಸುಧೆಯನ್ನು ಮುನ್ನಡೆಸುವರು.ಎಲ್ಲರ ಸಹಕಾರ ಎಂದಿನಂತಿರಲಿ.

Friday, July 15, 2011

ಇಂದು ಗುರುಪೂರ್ಣಿಮಾ



ಇಂದು ಗುರುಪೂರ್ಣಿಮಾ. ಕಳೆದ ವರ್ಷ ಇದೇ ದಿನ ಹಾಸನದಲ್ಲಿ ಆರ್.ಎಸ್.ಎಸ್. ನ ಒಂದು ಶಾಖೆಯಲ್ಲಿ ಉತ್ಸವದ ನಿಮಿತ್ತ ನಾನು ಮಾಡಿದ ಭಾಷಣ ಇಲ್ಲಿದೆ.

Monday, July 11, 2011

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ

ಶ್ರೀ ರಾಮಪ್ರಸಾದ್[ಹಂಸಾನಂದಿ] ಇವರು ಮೂಲತ: ಹಾಸನದವರು.ವಿದೇಶದಲ್ಲಿದ್ದು ಕನ್ನಡ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಅತ್ಯಂತ ಕಳಕಳಿಯುಳ್ಳವರು. ಸಂಗೀತದ ಆರಾಧಕರು.ಅವರ ಮತ್ತು ಅವರ ಪತ್ನಿಯ ಪುಸ್ತಕಗಳನ್ನು ಬೆಂಗಳೂರಿನಲ್ಲಿ ಬಿಡುಗಡೆಮಾಡಲಿದ್ದು ವೇದಸುಧೆಯ ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಅವರ ಆಮಂತ್ರಣವನ್ನು ಇಲ್ಲಿ ಪ್ರಕಟಿಸಿರುವೆ. ವೇದಸುಧೆಯ ಅಭಿಮಾನಿಗಳು ಅದರಲ್ಲೂ ಬೆಂಗಳೂರಿನಲ್ಲಿರುವ ಎಲ್ಲರೂ ತಪ್ಪದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಲು ವಿನಂತಿಸುವೆ.
-ಹರಿಹರಪುರಶ್ರೀಧರ್
--------------------------------------------------

ಹಂಸನಾದ ಅಂದರೆ ಕರ್ನಾಟಕ ಸಂಗೀತದ ಒಂದು ಒಂದು ಜನಪ್ರಿಯ ರಾಗ. ನಂತರ, ನನ್ನ ಬ್ಲಾಗಿಗೆ ಅದೇ ಹೆಸರನ್ನು ನಾನು ಕೊಟ್ಟಿದ್ದೆ. ನನ್ನ ಮನಸ್ಸಿಗೆ ತೋಚಿದ್ದನ್ನೆಲ್ಲ ಮೂರು ನಾಲ್ಕು ವರ್ಷಗಳಿಂದ ಗೀಚ್ತಾ ಹೋಗಿದ್ದೆ ಅನ್ನಿ.

ಹೀಗೆ ನಾನು ಬರೆದ ಬರವಣಿಗೆಯಲ್ಲಿ ಆಯ್ದ ಕೆಲವು ಸುಭಾಷಿತ ಅನುವಾದಗಳು ಒಂದು ಪುಸ್ತಕವಾಗಿ ಸದ್ಯದಲೇ ಹೊರಬರಲಿದೆ ಎಂಬ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ.

ಪುಸ್ತಕದ ಹೆಸರು ಕೂಡ ಹಂಸನಾದ ಅಂತಲೇ!

ಪುಸ್ತಕದ ಬಿಡುಗಡೆ ಜುಲೈ ೧೬ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜೊತೆಯಲ್ಲೇ ನನ್ನ ಶ್ರೀಮತಿಯ ಕಥಾಸಂಕಲನವೊಂದು ಕೂಡ ಬಿಡುಗಡೆ ಆಗುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಈ ಸಂತಸವನ್ನು ಇನ್ನೂ ಹೆಚ್ಚಿಸಲು ನೀವು ತಪ್ಪದೇ ಬರಬೇಕು, ನಮ್ಮೊಂದಿಗೆ ಇರಬೇಕು. .

ಹಲವು ಬ್ಲಾಗ್ ಗೆಳೆಯರಿಗೆ ಮಿಂಚಂಚೆ ಕಳಿಸಿರುವೆನಾದರೂ, ಕೆಲವರ ಮಿಂಚಂಚೆ ವಿಳಾಸ ಇರದೆಯೋ, ಇಲ್ಲವೇ ಕಣ್ತಪ್ಪಿನಿಂದಲೋ ನಿಮಗೆ ತಲುಪಿಲ್ಲದಿದ್ದರೆ ದಯವಿಟ್ಟು ಇದನ್ನೇ ನನ್ನ ಕರೆಯೋಲೆಯೆಂದು ತಿಳಿಯಬೇಕೆಂದು ಕೋರಿಕೆ.


Thursday, June 16, 2011

ಆತ್ಮೀಯ ಅಭಿಮಾನೀ ಓದುಗರೇ,
ವೇದಸುಧೆಗೆ ಪ್ರೇರಕರಾಗಿರುವ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಆರೋಗ್ಯವು ಉತ್ತಮವಾಗಿಲ್ಲ.ಅವರಿಗೆ ಒಂದಿಷ್ಟು ದಿನಗಳ ವಿಶ್ರಾಂತಿ ಅನಿವಾರ್ಯವಾಗಿ ಬೇಕಾಗಿದೆ. ಆದ್ದರಿಂದ ಇನ್ನು ೫-೬ ತಿಂಗಳ ಕಾಲ ಮಾನ್ಯ ಓದುಗರು ಅವರೊಡನೆ ಸಮಾಲೋಚಿಸಲು ಸಾಧ್ಯವಾಗುವುದಿಲ್ಲ.ಆದರೆ ಅವರ ವಿಚಾರಗಳ ಧ್ವನಿಯನ್ನು ಈಗಾಗಲೇ ವೇದಸುಧೆಯಲ್ಲಿ ಸಾಕಷ್ಟು ಪ್ರಕಟಿಸಲಾಗಿದೆ.ಅದರ ಉಪಯೋಗವನ್ನು ಯಾವಾಗಲೂ ಪಡೆಯಬಹುದು.ವೇದಸುಧೆಯ ಹಲವು ಪುಟಗಳಲ್ಲಿ ಹರಡಿಹೋಗಿರುವ ಅವರ ವಿಚಾರಗಳನ್ನು "ಶರ್ಮರ ಪುಟ" ಕ್ಕೆ ವರ್ಗಾಯಿಸುವ ಪ್ರಯತ್ನ ಸಾಗಿದೆ. ಬ್ಲಾಗಿನ ತಲೆಬರಹದಡಿ ಕಾಣುವ "ಶರ್ಮರ ಪುಟ" ವನ್ನು ಕ್ಲಿಕ್ ಮಾಡಿದರೆ ಶರ್ಮರ ಹಲವು ಆಡಿಯೋ ಗಳನ್ನು ಕೇಳಬಹುದಾಗಿದೆ. ಎಲ್ಲರ ಸಹಕಾರ ಎಂದಿನಂತಿರಲಿ.
ನಮಸ್ಕಾರಗಳು.
-ಹರಿಹರಪುರಶ್ರೀಧರ್

Friday, June 10, 2011

ವೇದೋಕ್ತ ಜೀವನ ಪಥ ಲೇಖನ ಮತ್ತು ನಾವು

ವೇದಸುಧೆಯು ಯಾವ ಉದ್ಧೇಶದಿಂದ ಆರಂಭವಾಯ್ತೋ ಅದಕ್ಕೆ ಪೂರ್ಣ ನ್ಯಾಯವನ್ನು ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ಕೊಡುತ್ತಿದ್ದಾರೆ. ವೇದೋಕ್ತ ಜೀವನ ಪಥ ಗ್ರಂಥವನ್ನು ದಾರಾವಾಹಿಯಾಗಿ ಶ್ರೀ ನಾಗರಾಜರು ಬರೆಯುತ್ತಿದ್ದಾರೆ. ಆದರೆ ನನಗೊಂದು ಸಂಶಯ ಕಾಡುತ್ತಿದೆ. ವೇದಸುಧೆಯ ಓದುಗರು ಇಂತಹ ಮಹತ್ತರವಾದ ಬರವಣಿಗೆಯನ್ನು ಓದುತ್ತಿದ್ದಾರೆಯೇ? ಎಂದು ಸಂಶಯಿಸಲು ಕಾರಣ ಇಂತಹ ಅದ್ಭುತವಾದ ಲೇಖನಕ್ಕೆ ಓದುಗರು ಪ್ರತಿಕ್ರಿಯಿಸುವುದಿಲ್ಲ. ನನ್ನ ಕಳಕಳಿಯ ಮನವಿ ಇಷ್ಟೆ. " ಚೆನ್ನಾಗಿತ್ತು" "ಉಪಯೋಗವಾಯ್ತು" ಎಂಬ ಒಂದು ಪದದ ಪ್ರತಿಕ್ರಿಯೆ ವ್ಯಕ್ತವಾದರೂ ಬರೆದವರಿಗೆ ಅದನ್ನು ಮುಂದುವರೆಸಲು ಉತ್ಸಾಹಬರುತ್ತದೆ. ಇದು ಮಾನವ ಸಹಜ ಸ್ವಭಾವ. ಅಲ್ಲದೆ ಯಾರೂ ಓದದಿದ್ದರೆ ಬರೆಯುವ ಶ್ರಮವನ್ನಾದರೂ ತೆಗೆದುಕೊಳ್ಳಬೇಕೇಕೆ?
ವೇದೋಕ್ತ ಜೀವನ ಪಥದ ಇಂದಿನ ಭಾಗವಂತೂ ಅದ್ಭುತವಾಗಿದೆ.ಅದನ್ನು ಓದಲೇ ಬೇಕು. ಅದು ಜವನದಲ್ಲಿ ಪ್ರಗತಿಹೊಂದಬೇಕೆಂದು ಆಶಿಸುವವನಿಗೆ ಉಪಯೋಗವಾಗಬಲ್ಲ ಜೀವನ ಸೂತ್ರಗಳು. ಅದನ್ನು ಓದಿದ ನಾನು ನನ್ ಅನಿಸಿಕೆಯನ್ನು ಅಲ್ಲಿ ಬರೆದರೆ ಉದ್ದವಾಗುತ್ತದೆಂದು ಪ್ರತ್ಯೇಕ ಲೇಖನವನ್ನೇ ಮಾಡಿರುವೆ. ನಾಗರಾಜರು ಅನ್ಯಥಾಭಾವಿಸಬಾರದಾಗಿ ಕೋರುವೆ.
---------------------------------------------
ಮಂತ್ರ:
ಏತೇ ಅಸೃಗ್ರಮಾಶವೋssತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್. ೯.೬೩.೪.) ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ |ಅಪಘ್ನಂತೋ ಅರಾವ್ಣಃ || (ಋಕ್. ೯.೬೩.೫.) ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ |ಇಂದ್ರಂ ಗಚ್ಛಂತ ಇಂದವಃ || (ಋಕ್. ೯.೬೩.೬.)

ಅರ್ಥ:
೧]ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, ಕುಟಿಲ ಭಾವನೆಗಳನ್ನು ದಾಟಿ, ಮುಂದೆ ಸಾಗುತ್ತಾರೆ. ೨]ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, ತಮ್ಮ ಆತ್ಮವಿಶ್ವಾಸ ಮಾಡಿಕೊಳ್ಳುತ್ತಾ, ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ. ೩]ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.

ನನ್ನ ಅನಿಸಿಕೆ:
ಎಂತಹ ಪರಮ ಸತ್ಯವನ್ನು ವೇದಗಳು ಹೇಳುತ್ತಾ ಇವೆ ನೋಡಿ. ಜೀವನದಲ್ಲಿ ಪ್ರಗತಿ ಹೊಂದುವವರು ಯಾರು? ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ.ಯಾರು ಜೀವನದಲ್ಲಿ ಸೋಮಾರಿಗಳಲ್ಲ ಅವರು, ಜೀವನದಲ್ಲಿ ಪ್ರಮಾದವನ್ನುಮಾಡದವರು,ಆಚಾರವಿಚರಗಳು ಶುಬ್ರವಾಗಿರುವವರು, ಶಾಂತಸ್ವಭಾವದವರು,ಇವರು ಧರ್ಮದ ಪ್ರವಾಹದಲ್ಲಿ ನಡೆಯುತ್ತಾಎಲ್ಲಾ ಕುಟಿಲಭಾವನೆಗಳನ್ನು ದಾಟಿ ಮುಂದೆ ಹೋಗುತ್ತಾರೆ. ಇಂತವರು ಸಾಮಾನ್ಯವಾಗಿ ಕೆಲಸದಲ್ಲಿ ವೇಗಶಾಲಿಗಳಾಗಿರುತ್ತಾರೆ. ಆತ್ಮವಿಶ್ವಾಸದಿಂದ ಪ್ರಗತಿಯಲ್ಲಿ ಸಾಗುತ್ತಾ ಎಲ್ಲಾ ಸಂಕುಚಿತ ಮನೋಭಾವನೆಗಳನ್ನು ದೂರಮಾಡುತ್ತಾ ಇಡೀ ಮಾನವಕುಲವನ್ನು ಪ್ರೀತಿಸುತ್ತಾ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡಬೇಕೆಂಬ ಧ್ಯೇಯದಲ್ಲಿ ಮುಂದೆ ಸಾಗುತ್ತಾರೆ. ತಮ್ಮನ್ನು ತಾವು ಭಗವಂತನ ಮಕ್ಕಳೆಂದು ತಿಳಿದ ಇವರು ತಮ್ಮ ಚಾರಿತ್ರ್ಯವನ್ನು ನಿರ್ಮಲವಾಗಿಟ್ಟುಕೊಂಡು ನೀರಸವಾಗಿರುವ ಜೀವನದಲ್ಲಿ ಉಲ್ಲಾಸಗೊಳಿಸುತ್ತಾ, ಸರ್ವಶಕ್ತಿವಂತನಾದ ಪರಮಾತ್ಮನೆಡೆಗೆ ಸಾಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ನಿರಂತರವಾಗಿ ಮುಂದೆಸಾಗುತ್ತಾ ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆಯುವರು. ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಜೀವನದಲ್ಲಿ ಉದ್ಧಾರವಾಗಬೇಕೆಂಬುವವನಿಗೆ ಇದಕ್ಕಿಂತ ಸೂತ್ರಗಳು ಬೇಕೆ?

Monday, March 21, 2011

ಅನುಮಾನದ ಮೇಲ್

ವೇದಸುಧೆಯ ಬಂಧುಗಳೇ,
ಇತ್ತೀಚೆಗೆ ಪರಿಚಿತರ ಮೇಲ್ ವಿಳಾಸದಿಂದ ಬರುವ  ಕೆಲವು ಮೇಲ್ ಗಳೂ ಕೂಡ ಸಂಶಯಕ್ಕೆಎಡೆಮಾಡಿಕೊಡುತ್ತಿದೆ. ವೇದಸುಧೆಯ ಬಳಗದ ಶ್ರೀ ಲಕ್ಷ್ಮೀನಾರಾಯಣ್ ರವರಿಗೆ ಹೀಗೊಂದು ಅನುಮಾನದ ಮೇಲ್ ಬಂದಿದೆ. ಶ್ರೀ ವಿಶ್ವನಾಥ ಶರ್ಮರ ಮೇಲ್ ವಿಳಾಸದಿಂದ ನನಗೂ ಇಂತದೇ ಮೇಲ್ ಬಂದಿದೆ.ಈ ಬಗ್ಗೆ ಚಿಂತನೆ ಮಾಡುವುದು ಸೂಕ್ತವೆಂದು ಕಾಣುತ್ತದೆ. ಹಾಗೊಂದು ವೇಳೆ ನಿಮ್ಮ ಪಾಸ್ ವರ್ಡ್ ನ್ನು ಯಾರಾದರೂ ಕದ್ದಿದ್ದಾರೆಂದು ನಿಮಗೆ ನಿಮಗೆ ಸಂಶಯ ಬಂದರೆ ಪಾಸ್ ವರ್ಡ್ ಕೂಡಲೇ ಬದಲಿಸಿಕೊಳ್ಳುವುದು ಸೂಕ್ತ. ಶ್ರೀ ಲಕ್ಷ್ಮೀ ನಾರಾಯಣರಿಂದ ವೇದಸುಧೆಗೆ ಬಂದಿರುವ ಈ ಮೇಲ್ ಎಲ್ಲರ ಗಮನಕ್ಕಾಗಿ ಈ ಕೆಳಗೆ ಪ್ರಕಟಿಸಲಾಗಿದೆ.

ಪ್ರಿಯ ಶ್ರೀಧರ್,
ನನಗೊಂದು ಮೇಲ್ ಬಂದಿದೆ. ಅದು ಹೀಗಿದೆ.
read message ಮೇಲೆ ಕ್ಲಿಕ್ ಮಾಡಿದರೆ , ಅದು ನನ್ನ ಬಗೆಗಿನ ಎಲ್ಲ details ಕೇಳಿ ನಂತರ ನನ್ನ ಮೇಲ್ ಅಡ್ರೆಸ್  ಮತ್ತು password ಕೇಳುತ್ತಿದೆ.
 ನೋಡುವ ಎಂದು ಹೊಸ ಪಾಸ್ವರ್ಡ್ ಕೊಟ್ಟರೆ , invalid ಎನ್ನುವ ಸೂಚನೆ ಬರಿತ್ತಿದೆ. ನನ್ನ gmail na paasword ಕೊಡಲು ಯೋಚಿಸುವಂತಾಯಿತು. ಹಾಗಾಗಿ ಇದು ಏನು , ನಿಮ್ಮ ಗಮನಕ್ಕೆ , ಬಂದಿರದ  ವಿಷಯವೇ ಹೇಗೆ , ನನ್ನ ಪಾಸ್ವರ್ಡ್  ಪಡೆಯಲು ಬೇರೆ ಯಾರೋ ಮಾಡುತ್ತಿರುವ , ವಿಷಯವೇ  ಹೇಗೆ ?
ಇದು ನಿಮಗೆ ತಿಳಿಸುವುದು ಸೂಕ್ತವೆಂದು   ನಿಮಗೆ ಬರೆಯತ್ತಿರುವೆ.,
ವಂದನೆಗಳೊಂದಿಗೆ,
ಬಿ ಎಸ್ಸ್ ಲಕಶ್ಮೀ ನಾರಾಯಣ ರಾವ್.

-----------------------------------------

ನನ್ನ Orkut ಪ್ರೊಫೈಲ್ ಕನ್ನ ಕೊರಕರ ದಾಳಿಗೆ ಗುರಿಯಾದ ಕಥೆ.

ಬೆಕ್ಕಿನಮರಿಯ ಕುತೂಹಲದಿಂದಾಗಿ ಇತ್ತೀಚಿಗೆ ನನ್ನ ಆರ್ಕುಟ್ ಪ್ರೊಫೈಲ್ ಕನ್ನಕೊರಕರ ದಾಳಿಗೆ ಗುರಿಯಾಯಿತು. ಆ ಕನ್ನಕೊರಕರಿಗೆ ಕೋಟೆಯ ಹೆಬ್ಬಾಗಿಲಿನ ಬೀಗ ತೋರಿಸಿ ಕೀಲಿ ಕೈಯೆತ್ತಿ ಕೊಟ್ಟವರು ನಾವೇ ಅನ್ನುವುದು ನೂರಕ್ಕೆ ನೂರು ಸತ್ಯ. ನಾವು ಹೇಗೆ ಮಂಗಗಳು ಆದೆವೆಂಬುದನ್ನು ಮುಂದೆ ಓದಿ.
     ಹಿಂದೊಮ್ಮೆ ಸರಿಯಾಗಿ ಏಟು ತಿಂದ ಮೇಲೆ ಜಾಲ ತಾಣ ಕ್ಲಿಕ್ ಮಾಡುವ ವಿಷಯದಲ್ಲಿ ನಾನು ತುಂಬಾ ಎಚ್ಚರವಾಗಿರುತ್ತೇನೆ. ಇಂಟರ್ನೆಟ್ ಹಾಗು ಕಂಪ್ಯೂಟರ್ ಬಂದ ಹೊಸತರಲ್ಲಿ ಏನೇನೋ ಹುಡುಕಿ ಯಾವುದೋ ವೆಬ್ ಸೈಟ್ಗೆ ಹೋಗಿ ಅವಾಂತರ ಪಟ್ಟಿದ್ದೆ.(ಹಾವು ಬಿಡುವವರು ಅವರೇ ದುಡ್ಡಿಗೆ ಹಾವು ಹಿಡಿಯುವವರೂ ಅವರೇ – ಎಂಬ ಮಾತಿನ ಸಾಕ್ಷಾತ್ ಅನುಭವವಾಗಿತ್ತು.) ಡೈಲ್ ಅಪ್ ಇಂಟರ್ನೆಟ್ ನಲ್ಲೇ ತುಂಬಾ ಹಾನಿಯಾಗಿತ್ತು. ಕಂಪ್ಯೂಟರ್ ರಿ ಫಾರ್ಮೆಟ್ ಮಾಡಬೇಕಾಯಿತು. ಆಗ ಡಿಜಿಟಲ್ ಕ್ಯಾಮೆರಾ ಇರಲಿಲ್ಲವಾದ್ದರಿಂದ ಕೆಲವೊಂದು ಹಾಡುಗಳನ್ನ ಬಿಟ್ಟರೆ ಹೆಚ್ಹೇನನ್ನು ಕಳೆದುಕೊಂಡಿರಲಿಲ್ಲ. ಒಮ್ಮೆ ಹಾಗೆ ಆದಮೇಲೆ ಮತ್ತೆ ಹಾಗೆಂದೂ ಆಗಿರಲಿಲ್ಲ. ಆನ್ ಲೈನ್ ವಹಿವಾಟುಗಳನ್ನು ಮಾಡುತ್ತಿದ್ದರೂ ಏನೂ ಆಗಿರಲಿಲ್ಲ.
        ಆದರೆ ಮೊನ್ನೆ ಮಾತ್ರ ಆರ್ಕುಟ್ನಲ್ಲಿ ಏನಾಯಿತೆಂದರೆ —
ಅರವತ್ತಕ್ಕಿಂತ ಹೆಚ್ಚು ವಯಸ್ಸಾದ, ದೊಡ್ಡ ಶಾಲೆಯೊಂದರ ನಿರ್ದೇಶಕರಾದ, ಜ್ಯೋತಿಷ್ಯ ವಿಶಾರದರಾದ, ನನ್ನ ಕಸಿನ್ ಹೆಂಡತಿಯ ನೆಂಟರಾದ, ದೊಡ್ಡ ಫೋಟೋಗ್ರಾಫರ್ ಆದ ನನ್ನ ಆರ್ಕುಟ್ ಸ್ನೇಹಿತರೊಬ್ಬರ (ನನ್ನ ಹೋಂ ಪೇಜ್ನಲ್ಲಿ ಕಂಡ) ಅಪ್ ಡೆಟ್ ನ ಲಿಂಕ್ ಒಂದರ ಮೇಲೆ ಬೆಕ್ಕಿನ ಮರಿಯ ಕುತೂಹಲದಿಂದ ಕ್ಲಿಕ್ ಮಾಡಿದೆ.(ಅವರು ವಿನೋದಕ್ಕೆ ಆ ಸೈಟಿನ ಲಿಂಕ್ ಅಪ್ ಡೆಟ್ ಮಾಡಿಕೊಂದಿದ್ದರೆನೋ. ಬೇರೆ ಹುಡುಗ ಬುದ್ದಿಯವರು ಆ ವೆಬ್ ಸೈಟ್ ಲಿಂಕ್ ಅಪ್ ಡೆಟ್ ಮಾಡಿದ್ದರೆ ಕಣ್ಣೆತ್ತಿಯೂ ನೋಡುತ್ತುರಲಿಲ್ಲ.) ಅಷ್ಟು ಮಾಡಿದ್ದೆ ತಡ ಆರ್ಕುಟ್ ಹೋಂ ಪೇಜ್ ಪ್ರತ್ಯಕ್ಷವಾಯಿತು. ಕೆಲವೊಮ್ಮೆ ಬೇರೆ ಟ್ಯಾಬ್ ನಲ್ಲಿ ಗೂಗಲ್ ನವರ ಇತರ ಸೇವೆಗಳು ಅಂದರೆ ಬ್ಲಾಗರ್, ಜಿ ಮೇಲ್ ಕೆಲಸ ಮಾಡುತ್ತಿದ್ದು ಅಲ್ಲಿ ನಾವು ಸೈನ್ ಔಟ್ ಮಾಡಿ ಆರ್ಕುಟ್ ನ ನಮ್ಮ ಪೇಜ್ ಮೇಲೆ ಏನಾದರೂ ಕ್ಲಿಕ್ ಮಾಡಿದಾಗ ಅಲ್ಲೂ ಹಾಗೇ ಆಗಿ ಆರ್ಕುಟ್ ಹೋಂ ಪೇಜ್ ಬರುತ್ತಿತ್ತು. ನಾವು ಮತ್ತೊಮ್ಮೆ ನಮ್ಮ ಯುಸರ್ ನೇಮ್ ಪಾಸ್ ವರ್ಡ್ ಕೊಟ್ಟು ಮತ್ತೊಮ್ಮೆ ಲಾಗಿನ್ ಆಗಬೇಕಿತ್ತು. ಹಾಗೇನೂ ಆಯಿತೇನೋ ಎಂದು ತಿಳಿದು ಪ್ರತ್ಯಕ್ಷವಾದ ಆರ್ಕುಟ್ ಹೋಂ ಪೇಜ್ ನಲ್ಲಿ ನನ್ನ ಯುಸರ್ ನೇಮ್, ಪಾಸ್ ವರ್ಡ್ ಕೊಟ್ಟು ಎಂಟರ್ ಒತ್ತಿ ನನ್ನ ಪೇಜ್ ತೆರೆಯುವುದೇ ಕಾಯುತ್ತಿದ್ದೆ. ತೆರೆಯದಿದ್ದಾಗ ಅನುಮಾನ ಬಂದು ಆ ಸೈಟನ್ನು ಕ್ಲೋಸ್ ಮಾಡಿ ಲ್ಯಾಪ್ ಟಾಪ್ ಆಫ್ ಮಾಡಿದೆ. ಅಷ್ಟರಲ್ಲಾಗಲೇ ಬೀಗ ಮತ್ತು ಬೀಗದ ಕೈ ಕನ್ನಕೊರಕರ ಕೈ ಸೇರಿಯಾಗಿದೆ.
           ನಾನು ಮೊನ್ನೆ ರಾತ್ರಿ ಮನೆ ಸೇರುತ್ತಿದ್ದಂತೆಯೇ ಹೆಂಡತಿ ಮೊದಲು ಹೇಳಿದ ವಿಷಯ ಇಂಜಿನಿಯರ್ ಓದುತ್ತಿರುವ ನನ್ನ ಅಕ್ಕನ (ಕಸಿನ್) ಮಗ ನಮ್ಮನೆಗೆ ಫೋನ್ ಮಾಡಿ ನನ್ನ ಪ್ರೊಫೈಲ್ ಹ್ಯಾಕ್ ಆಗಿದೆಯೆಂದು ಹೇಳಿದ್ದು. ಸಾದಾರಣ ಉಟವಾದಮೇಲೆ ನೆಟ್ ತೆರೆಯುವವನು ಅಂದು ಕೂಡಲೇ ಕನೆಕ್ಟ್ ಮಾಡಿ ನನ್ನ ಆರ್ಕುಟ್ ಪೇಜ್ ನೋಡ್ತೀನಿ. ಏನಿದೆ ಅಲ್ಲಿ? ನನ್ನ ಫೋಟೋ ಬದಲು ಜೀನ್ಸ್ – ಟಿ ಶರ್ಟ್ ಧಾರಿ ನಗುಮೊಗದ ಚೆಲುವೆಯ ಚಿತ್ರ!! ಹೆಸರೂ ತುಂಬ ರಮ್ಯ."Call girl for sex"-ಅಂತ. (ಅಷ್ಟರಲ್ಲಾಗಲೇ ಕೊಂಗನೊಬ್ಬನ ಫ್ರೆಂಡ್ ರಿಕ್ವೆಸ್ಟ್ ಬೇರೆ!!) ಹ್ಯಾಕ್ ಆಗಿದೆಯೆಂದು ನನ್ನ ಕೆಲವು ಮಿತ್ರರ ಹೇಳಿಕೆಗಳು. ಕೂಡಲೇ ಆನ್ ಲೈನಲ್ಲಿ ಕಾಣಿಸಿಕೊಂಡ ಒಂದಿಬ್ಬರು ಮಿತ್ರರು ಹ್ಯಾಗಾಯಿತೆಂಬ ಪ್ರಶ್ನೆ. ಒಮ್ಮೆಲೇ ಜೋರು ನಗುಬಂತು. ಸದ್ಯ ೫-೬ ಘಂಟೆ ಮಾತ್ರ ಆಗಿದ್ದದರಿಂದ ಹೆಚ್ಚಿನ ಜನ ನೋಡಿರಲಿಲ್ಲ.
 ಹತ್ತು ನಿಮಿಷದಲ್ಲೇ ಎಲ್ಲಾ ಸರಿಮಾಡಿಕೊಂಡೆ. ನಾನು ಏನೇನು ಮಾಡಿದೆನೆಂದು ಹೇಳುತ್ತೇನೆ. ನಾಳೆ ನಿಮ್ಮ ಪ್ರೋಫೈಲೂ ಹ್ಯಾಕ್ ಆಗಬಹುದು. ನೀವೂ ಹೀಗೇ ಮಾಡಿಕೊಳ್ಳಬಹುದು.
-ಆರ್ಕುಟ್ ನಿಂದ ಸೈನ್ ಔಟ್ ಮಾಡಿ ಗೂಗಲ್ ಅಕೌಂಟ್ಗೆ ಹೋಗಿ ಸೈನ್ ಇನ್ ಮಾಡಿದೆ.
-ಪಾಸ್ ವರ್ಡ್ ಚೇಂಜ್ ಕ್ಲಿಕ್ ಮಾಡಿ ಹೊಸ ಪಾಸ್ ವರ್ಡ್ ಪಡೆದೆ.
-ಈಗ ಮತ್ತೆ ಹೊಸ ಪಾಸ್ ವರ್ಡ್ ನಿಂದ ಆರ್ಕುಟ್ ಲಾಗ್ ಇನ್ ಆಗಿ ಪ್ರೊಫೈಲನ್ನು ಹೊಸದಾಗಿ ಎಡಿಟ್ ಮಾಡಿ ಹಾರ್ಡ್ ಡಿಸ್ಕ್ ನಿಂದ ನನ್ನ ಫೋಟೋ ಅಪ್ ಲೋಡ್ ಮಾಡಿಕೊಂಡೆ. ಸ್ನೇಹಿತರಿಗೆಲ್ಲ ಸುದ್ದಿ ಮುಟ್ಟಿಸಿದ್ದಕ್ಕೆ ಧನ್ಯವಾದ ಹೇಳಿದೆ.
-ಹ್ಯಾಕರ್ ನನ್ನನ್ನು ಸೇರಿಸಿದ ಯಾವ್ಯಾವುದೋ ಕಮ್ಯೂನಿಟಿಯಿಂದ ಹೊರಬಂದೆ.
      ಇಲ್ಲಿ ನಾನು (ನಾವು) ತಪ್ಪದೇ ಧನ್ಯವಾದ ಹೇಳಬೇಕಾಗಿರುವುದು ಆ ಪುಣ್ಯಾತ್ಮ ಹ್ಯಾಕರ್ ನಿಗೆ!!!! ನಿಜಕ್ಕೂ ಪುಣ್ಯಾತ್ಮ. ಆತ ಏನು ಬೇಕಾದರೂ ಮಾಡಬಹುದಿತ್ತು. ಬ್ಲಾಗುಗಳನ್ನ, ಮೇಲ್ಗಳನ್ನ ಹಾಗೂ ಪಿಕಾಸದಲ್ಲಿದ್ದ ಅನೇಕ ನೂರು ಫೋಟೋಗಳನ್ನ ಅಳಿಸಿ ಹಾಕಬಹುದಿತ್ತು. ಆದರೆ ಹಾಗಾಗಿರಲಿಲ್ಲ.

         ನೀವೂ ಹ್ಯಾಕರ್ ದಾಳಿ ಅನುಭವ ಪಡೆಯಬೇಕೇ? ಅಥವಾ ನಿಮ್ಮ ಸ್ನೇಹಿತರಿಗೆ ಆ ಅನುಭವ ಕೊಡಬೇಕೇ?

Friday, February 11, 2011

ಓದುಗರ ಉತ್ಸಾಹ ಕಡಿಮೆಯಾಗಿದೆಯೇ?

"ನಮಸ್ಕಾರ ಶ್ರೀಧರ್ ಸರ್,
ವಾರ್ಷಿಕೋತ್ಸವ ಆದಮೇಲೆ ಓದುಗರ ಉತ್ಸಾಹ ಕಡಿಮೆಯಾಗಿರುವಂತಿದೆ, ಯಾರೂ ಕಾಮೆಂಟ್ ಮಾಡುತ್ತಲೇ ಇಲ್ಲ. ಯಾಕೆ ಸಾರ್?"
ಇಂದು ಹೀಗೊಂದು ಕರೆ ಬಂತು. ಮಾತುಗಳಲ್ಲಿ ಕಳಕಳಿ ಇತ್ತು. ಕಾಮೇಂಟ್ ಬಂದರೆ ಬರೆಯುವವರಿಗೆ ಉತ್ಸಾಹ ಹೆಚ್ಚುತ್ತದೆನ್ನುವುದು ಅವರ ಮಾತಿನ ಅರ್ಥ. ನಾನು ಮಿತ್ರರಿಗೆ ಉತ್ತರಿಸಿದೆ." ವೇದಸುಧೆಯಲ್ಲಿ ಕಾಮೆಂಟ್ ಮಾಡಬೇಕಾದರೆ ಸ್ವಲ್ಪ ಯೋಚಿಸಬೇಕಾಗುತ್ತದೆ. " ಚೆನ್ನಾಗಿದೆ" ಎಂದು ಬರೆದರೆ ನಮಗೆ ಸಂತೋಷವಾಗುತ್ತಾದರೂ ಬರೆದಿಲ್ಲವೆಂದರೆ ಖಂಡಿತವಾಗಿ ಬೇಸರವಾಗುವುದಿಲ್ಲ. ಕಾರಣ  ನಿತ್ಯವೂ ನೂರಾರು ಜನರು ವೇದಸುಧೆಯನ್ನು ಓದುತ್ತಿರುವುದು ನಮ್ಮ ಅರಿವಿಗೆ    ಬರುತ್ತಲೇ ಇದೆ.ಒಂದು ವೇಳೆ ಓದುಗರ ಸಂಖ್ಯೆ ೧೦-೨೦ ಕ್ಕೆ ಕುಸಿದರೆ ಆಗ  ಇಷ್ಟೊಂದು ಸಮಯ ವ್ಯರ್ಥವಾಗುತಿದೆಯೇ? ಎಂದು ಸ್ವಲ್ಪ ತಲೆಕೆಡಸಿಕೊಳ್ಳಬೇಕಾಗುತ್ತದೆ. ಹಾಗಾಗಿಲ್ಲವಲ್ಲಾ! ಆದ್ದರಿಂದ  ಒದುತ್ತಿರುವವರಲ್ಲಿ  ಒಂದಿಷ್ಟು ಸದ್ವಿಚಾರಗಳನ್ನು ಹಂಚಿಕೊಳ್ಳಲೇ ಬೇಕಾಗುತ್ತದೆಂದು ತಿಳಿಸಿ ಸಮಾಧಾನ ಪಡಿಸಿದೆ.
ಹೌದು, ಮನರಂಜನಾತಾಣಗಳಲ್ಲಿ ಬರೆಯುವಂತೆ ವೇದಸುಧೆಯಲ್ಲಿ ಬರೆಯಲಾಗುವುದಿಲ್ಲ. ಆದರೂ ಗಂಭೀರವಾದ ವಿಷಯಗಳನ್ನೂ ಓದುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು,
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

Monday, February 7, 2011

ಒಂದೇ ಮಾಲಿಕೆಯಡಿ ವಾರ್ಷಿಕೋತ್ಸವ ಮಾಹಿತಿ

ಆತ್ಮೀಯ ವೇದಾಭಿಮಾನಿಗಳೇ,
ದಿನಾಂಕ ೩೦.೧.೨೦೧೧ ಭಾನುವಾರ ಹಾಸನದಲ್ಲಿ ಸಂಪನ್ನಗೊಂಡವೇದಸುಧೆಯ ವಾರ್ಷಿಕೋತ್ಸವದ ಹತ್ತಾರು ಬರಹಗಳು ಈಗಾಗಲೇ ವೇದಸುಧೆಯಲ್ಲಿ ಪ್ರಕಟವಾಗಿವೆ.ಶೃಂಗೇರಿ ಶಾರದಾ ಪೀಠದ ಪೂಜ್ಯ ಶ್ರೀ ಶ್ರೀ ಭಾರತೀತೀರ್ಥಮಹಾಸ್ವಾಮಿಗಳ ಆಶೀರ್ವಾದ ಪತ್ರವನ್ನೊಳಗೊಂಡಂತೆ, ಹಲವಾರು ಸ್ಮರಣೀಯ ಚಿತ್ರಗಳು, ಪಾಲ್ಗೊಂಡವರ ಅನಿಸಿಕೆಗಳು,...ಹೀಗೆ ಎಲ್ಲವನ್ನೂ  " ವಾರ್ಷಿಕೋತ್ಸವ"  ಮಾಲಿಕೆಯಡಿ ಒಂದೇ ಕಡೆ ಪ್ರಕಟಿಸಲಾಗಿದೆ. ಇನ್ನು ಮುಂದೆಯೂ ಹಲವಾರು ಫೋಟೋಗಳು, ಆಡಿಯೋಗಳು, ಬರಹಗಳು, ಇತ್ಯಾದಿಗಳನ್ನು ಇದೇ ಮಾಲಿಕೆಯಡಿ ಪ್ರಕಟಿಸಲಾಗುವುದು. ಆಸಕ್ತರು ವಾರ್ಷಿಕೋತ್ಸವ"ಮಾಲಿಕೆಯನ್ನು ತೆರೆದು ಅದರಡಿ ಎಲ್ಲಾ ಬರಹಗಳನ್ನೂ ನೋಡಬಹುದಾಗಿದೆ. ಮುಂದೆ ಬರೆಯುವವರೂ ಸಹ ಇದೇ ಮಾಲಿಕೆಯ ಲೇಬಲ್ ಹಾಕಿ ಬರೆದರೆ ಒಂದೇ ಮಾಲಿಕೆಯಡಿ ಎಲ್ಲವೂ ಪ್ರಕಟಗೊಳ್ಳುತ್ತವೆ.

Friday, January 21, 2011

ವಾರ್ಷಿಕೋತ್ಸವ ಮಾಹಿತಿ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ವಾರ್ಷಿಕೋತ್ಸವ ದಿನವು ಸಮೀಪಿಸುತ್ತಿದ್ದಂತೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಹಾಸನಕ್ಕೆ ಬರಲು ಉತ್ಸುಕರಾಗಿರುವ ಅನೇಕರು ಮೇಲ್ ಮೂಲಕ ಹಾಗೂ  ದೂರವಾಣಿಯ ಮೂಲಕ ವೇದಸುಧೆಯ ಸಂಪರ್ಕದಲ್ಲಿದ್ದಾರೆ.ವಾರ್ಷಿಕೋತ್ಸವದ ಹಿಂದಿನ ದಿನ ಸಂಜೆ ಶ್ರೀ ಸುಧಾಕರಶರ್ಮರ ಉಪನ್ಯಾಸವೊಂದು ಯೋಜಿಸಲ್ಪಟ್ಟಿರುವುದರಿಂದ ಹಲವರು ಆಹೊತ್ತಿಗೇ ಬರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಿಂದ ನಲವತ್ತಕ್ಕೂ ಹೆಚ್ಚು ಅಭಿಮಾನಿಗಳು ಹೊರಟಿದ್ದರೂ ಬೇರೆ ಬೇರೆ ಸಮಯದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಹೊರಡುತ್ತಿರುವುದರಿಂದ ಒಟ್ಟಾಗಿ ಒಂದು ವಾಹದಲ್ಲಿ ಹೊರಡುವ ಚಿಂತನೆ ಕಾರ್ಯರೂಪಕ್ಕೆ ಬರುತ್ತದೋ ಇಲ್ಲವೋ ತಿಳಿಯದು.ಈ ಮಧ್ಯೆ  ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ದಮಗ್ಗೆ  ಸಮೀಪ ಒಂದು ಹಳ್ಳಿಯಲ್ಲಿ ಶ್ರೀ ಸುಧಾಕರಶರ್ಮರ ಮಾರ್ಗದರ್ಶನದಲ್ಲಿ ವೇದೋಕ್ತ ಜೀವನ ಕಾರ್ಯಾಗಾರ ಒಂದು ಇಂದು ರಾತ್ರಿ [21.01.2011] ಆರಂಭವಾಗಿ 25.01.2011 ರಂದು ಬೆಳಿಗ್ಗೆ ವರಗೆ ನಡೆಯಲಿದೆ.ಆ ಕಾರ್ಯಾಗಾರದಲ್ಲಿ ನಾನೂ ಕೂಡ ಪಾಲ್ಗೊಳ್ಳುತ್ತಿದ್ದೇನಾದ್ದರಿಂದ 
25.01.2011ರವರಗೆ ದೂರವಾಣಿಯಾಗಲೀ ಅಥವಾ ಅಂತರ್ಜಾಲ ಸಂಪರ್ಕವಾಗಲೀ ದೊರೆಯುವ ಅವಕಾಶಗಳು ಕಡಿಮೆ ಇರಬಹುದು. ಆದರೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ಅಂತರ್ಜಾಲ ಸಂಪರ್ಕಕ್ಕೂ ದೂರವಾಣಿ ಸಂಪರ್ಕಕ್ಕೂ ಲಭ್ಯವಿರುತ್ತಾರಾದ್ದರಿಂದ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಅವರನ್ನು ದಯಮಾಡಿ ಸಂಪರ್ಕಿಸಿ. 
kavinagaraj2010@gmail.com
Mo: 9448501804
29.01.2011 ರಂದು ರಾತ್ರಿ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಇರುವುದರಿಂದ ಶನಿವಾರ ಸಂಜೆ 6.00 ಗಂಟೆಯೊಳಗೆ  ಶರ್ಮರ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆಯೇ ಬರಲು ಕೋರುತ್ತೇನೆ.
-ಹರಿಹರಪುರ ಶ್ರೀಧರ್
ಸಂಪಾದಕ,
  ವೇದಸುಧೆ

Monday, January 17, 2011

"ನಿಜವ ತಿಳಿಯೋಣ"

30.01.2011 ರಂದು ಹಾಸನದಲ್ಲಿ ನಡೆಯಲಿರುವ ವೇದಸುಧೆಯ ವಾರ್ಷಿಕೋತ್ಸವದಲ್ಲಿ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ "ನಿಜವ ತಿಳಿಯೋಣ" ಪ್ರವಚನ ಮಾಲಿಕೆ ಸಿಡಿ ಬಿಡುಗಡೆಯಾಗಲಿದ್ದು ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಅದರ ಪರಿಚಯವನ್ನು ಮಾಡಿಕೊಡಲಿದ್ದಾರೆ. ಅದರ ಒಂದು ಕ್ಲಿಪ್ ವೇದಸುಧೆಯ ಅಭಿಮಾನಿಗಳಿಗಾಗಿ



ಸತ್ಯಪಥವ ಹುಡುಕಬೇಕಲ್ಲಾ!

ನಮ್ಮ ಸಮಾಜ ಬಲು ವಿಚಿತ್ರ. ಬೆಳಗಿನಿಂದ ರಾತ್ರಿಯವರೆಗೂ ದುಡಿದು ಸೋತು ಸೊಪ್ಪಾಗಿ ರಾತ್ರಿ ಮನೆಗೆಬಂದು ಹಾಸಿಗೆಯಲ್ಲಿ ಕಾಲು ಚಾಚುವವರು ಕೆಲವರು. ಅವರಿಗೆ ದುಡಿಮೆಯೇ ಜೀವನ.ಇಂತವರು ಯಾವಾಗಲಾದರೊಮ್ಮೆ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಯಾವುದಾದರೂ ದೇವಾಲಯಗಳಲ್ಲಿ ಸೇವೆ ಮಾಡಿಸಿ ಸಮಾಧಾನ ಪಡುವುದುಂಟು. ಇನ್ನೊಂದು ವರ್ಗವಿದೆ.ಜೀವನದಲ್ಲಿ ನೈತಿಕ ಮೌಲ್ಯಗಳನ್ನುಳನ್ನು ಬಿಟ್ಟು ವಾಮಮಾರ್ಗಗಳಲ್ಲಿ ಹಣ ಸಂಪಾದಿಸುವುದು, ಆದರೆ ಧಾರ್ಮಿಕ ಕೆಲಸಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವುದು. ಮತ್ತೊಂದು ವರ್ಗವಿದೆ. ಪ್ರಾಮಾಣಿಕವಾಗಿ ದುಡಿದು ನಮ್ಮ ಪರಂಪರೆಯಲ್ಲಿ ಬಂದಿರುವ ಎಲ್ಲಾ ವ್ರತಾಚರಣೆಗಳು, ಹಬ್ಬ ಹರಿದಿನಗಳನ್ನು ಆಚರಿಸುತ್ತಾ ತಾವು ಆಚರಿಸುತ್ತಿರುವ ಯಾವ ಆಚರಣೆಯನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸದೆ ಸುಮ್ಮನೆ ಅನುಸರಿಸುವುದು. ಇದು ದೊಡ್ಡ ಸಮೂಹ. ನಮ್ಮ ಹಿಂದಿನವರು ಹೀಗೆ ಮಾಡುತ್ತಿದ್ದರು. ನಾವೂ ಮಾಡುತ್ತೇವೆ. ನಮ್ಮ ಮಕ್ಕಳಿಗೂ ಮಾಡಲು ಕಲಿಸುತ್ತೇವೆ, ಎನ್ನುವ ಈ ವರ್ಗ ಯಾವುದಕ್ಕೂ ತಲೆ ಕೆಡಸಿಕೊಳ್ಳುವುದಿಲ್ಲ. ಭಯದಿಂದ ಧರ್ಮಾಚರಣೆ ಮಾಡುವ ಕೆಲವರು. ಪ್ರತೀ ವರ್ಷವೂ ತಮ್ಮ ಮನೆದೇವರಿಗೆ ಯಾತ್ರೆ ಮಾಡುವ ಕೆಲವರು ಕಾರಣಾಂತರದಿಂದ ಒಂದು ವರ್ಷ ಯಾತ್ರೆ ಮಾಡದಿದ್ದಾಗ ಅವರ ಮನೆಯಲ್ಲಿ ಯಾವುದಾದರೂ ಅಪತ್ತು ಎದುರಾದರೆ ಅದಕ್ಕೆ ಅವರು ಮನೆ ದೇವರ ದರ್ಶನವನ್ನು ಮಾಡದಿದ್ದುದೇ ಕಾರಣವೆಂದು ತಿಳಿದು ತಪ್ಪು ಕಾಣಿಕೆಯನ್ನು ತಮ್ಮ ಮನೆಯೆ ಪೂಜಾಗೃಹದಲ್ಲಿ ದೇವರ ಮುಂದಿಟ್ಟು " ಭಗವಂತಾ, ನನ್ನ ತಪ್ಪು ಕ್ಷಮಿಸಿ ನಮ್ಮ ಮನೆಯನ್ನು ಕಾಪಾಡು, ಮುಂದಿನ ವರ್ಷ ಮನೆಮಂದಿಯೆಲ್ಲಾ ಬಂದು ನಿನ್ನ ಸೇವೆ ಮಾಡಿಸಿ ಕೊಂಡು ಬರುತ್ತೇವೆಂದು" ಮನ: ಪೂರ್ವಕ ದೇವರಲ್ಲಿ ಬೇಡುವ ಒಂದು ಮುಗ್ಧ ವರ್ಗ.
ಭಗವಂತನ ಪೂಜೆಯನ್ನು ನೂರಾರು ರೀತಿಯಲ್ಲಿ ತಮ್ಮದೇ ಸರಿ ಎನ್ನುತ್ತಾ ನಿತ್ಯವೂ ತಮ್ಮದೇ ರೀತಿಯಲ್ಲಿ ಪೂಜೆಮಾಡುವ ಹಲವಾರು ಸಮೂಹ. ಅಷ್ಟೇ ಅಲ್ಲ, ಧರ್ಮದ, ದೇವರ, ಮತದ, ಮಠದ ಹೆಸರಲ್ಲಿ ಬಡಿದಾಡುವ ಗುಂಪುಗಳು.
ನಿತ್ಯವೂ ಪುರಾಣ ಪಠಣ-ಶ್ರವಣ ಮಾಡುತ್ತಾ,ಇದೇ ಸರಿಯಾದ ಮಾರ್ಗವೆಂದು ಭಾವಿಸಿರುವ ಒಂದು ಸಮೂಹ. ಪುರಾಣವೇ ಸುಳ್ಳು, ಅದು ಬರೀ ಕಟ್ಟುಕಥೆ ಎನ್ನುವ ಒಂದು ಗುಂಪು.ಇಷ್ಟೇ ಅಲ್ಲ, ಇನ್ನೂ ಸಾಕಷ್ಟು ಗೊಂದಲಗಳು.ಇವುಗಳ ಮಧ್ಯೆದಲ್ಲೇ ಇದ್ದು ಸತ್ಯಪಥವ ಹುಡುಕಬೇಕಲ್ಲಾ! ಹಿಂದಿನಿಂದ ನಡೆದು ಬಂದಿರುವ ಎಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸದೆ, ಕುರುಡು ಆಚರಣೆ ಎಂದು ಮನವರಿಕೆ ಆದದ್ದನ್ನು ಬಿಡುತ್ತಾ, ಯಾವುದು ಅನೈತಿಕವೆಂದು ನಮ್ಮ ಅಂತರಾತ್ಮ ತಿಳಿಯುತ್ತದೋ ಅದರಿಂದ ದೂರವಿರುತ್ತಾ, ಒಂದು ಸತ್ಯದ ಹಾದಿಯಲ್ಲಿ ಸಾಗುವುದೇ ಒಂದು ಮಹಾನ್ ಯಜ್ಞ. ಅಂತಾ ಒಂದು ಯಾತ್ರೆಯಲ್ಲಿ ಸಾಗುವುದೇ ವೇದಸುಧೆಯ ಉದ್ಧೇಶ. ಹಲವು ಗೊಂದಲಗಳು ಎದುರಾದರೂ ಸತ್ಯದ ಶೋಧನೆಯಲ್ಲಿ ಮುಂದುವರೆಯೋಣ ಬನ್ನಿ.ಇದೊಂದು ಸತ್ಯದ ಹಾದಿಯನ್ನು ಹುಡುಕುವ ವೇದಿಕೆಯಾದ್ದರಿಂದ ಯಾರು ಏನೇ ಅಭಿಪ್ರಾಯ ಹೊರಹಾಕಿದರೂ ಅದರ ಬಗ್ಗೆ ವಿಮರ್ಷೆ ಮಾಡೋಣ. ಯಾವುದನ್ನೂ ವೈಯಕ್ತಿಕನೆಲೆಯಲ್ಲಿ ನೋಡದೆ ವೈಚಾರಿಕ ಹಿನ್ನೆಲೆಯಲ್ಲಿ ಚರ್ಚಿಸಿದಾಗ ಒಂದಲ್ಲಾ ಒಂದು ದಿನ ಋಜುಮಾರ್ಗದಲ್ಲಿ ಸಾಗುವುದು ಯಾರಿಗೂ ಕಷ್ಟವಾಗಲಾರದು.

Saturday, January 15, 2011

ವೇದಸುಧೆ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಬೆಂಗಳೂರಿನ ಅಭಿಮಾನಿಗಳ ಗಮನಕ್ಕಾಗಿ

ವೇದಸುಧೆವಾರ್ಷಿಕೋತ್ಸವವು ನಡೆಯುವ ದಿನ 30.01.2011 ರಂದು ಭಾನುವಾರ ಬೆಳಗ್ಗೆ 5.30 ರ ಸುಮಾರಿಗೆ ಬೆಂಗಳೂರಿನಿಂದ ಹೊರಟು ಹಾಸನವನ್ನು 9.00 ಗಂಟೆಗೆ ತಲುಪನುಕೂಲವಾಗುವಂತೆ ಒಂದು ವಾಹನದ ವ್ಯವಸ್ಥೆ ಮಾಡಬೇಕೆಂಬ ಯೋಜನೆ ಇದೆ. ವಾಹನವು ಯಾವುದಾಗಿರಬೇಕೆಂಬುದು ಹೊರಡುವ ಸಂಖ್ಯೆಯನ್ನು ಅವಲಂಭಿಸಿದೆ. ಹಾಗೊಂದು ವೇಳೆ ಬೆಂಗಳೂರಿನಿಂದ ವಾಹನವು ಹೊರಟರೆ  ಬಸವನಗುಡಿ, ವಿಜಯನಗರ ಮತ್ತು ಇನ್ನೊಂದೆರಡು ಪಿಕ್ ಅಪ್ ಪಾಯಿಂಟ್ ಗಳನ್ನು ಗುರುತಿಸಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುವುದು. ಸಮಾರಂಭವು ಮುಗಿದ ಮೇಲೆ ಹೊರಟು ಬೆಳಿಗ್ಗೆ ಬೆಂಗಳೂರಿನಲ್ಲಿಪಿಕ್ ಅಪ್ ಮಾಡಿದ ಸ್ಥಳಗಳಿಗೆ ರಾತ್ರಿ  ಡ್ರಾಪ್ ಮಾಡುವ ಉದ್ಧೇಶವಿದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಅಯ್ಯಪ್ಪಸ್ವಾಮಿ ಯಾತ್ರೆಗಾಗಿ  ವಾಹನಗಳು ಬಾಡಿಗೆಗೆ ಹೋಗುವುದರಿಂದ ಆದಷ್ಟು ಬೇಗ ನಮ್ಮ ಈ  ಪ್ರವಾಸಯೋಜನೆ ಫಿಕ್ಸ್ ಆಗಬೇಕು.ಇಲ್ಲವಾದರೆ ಸ್ವಂತ ವಾಹನದಲ್ಲೋ ಸರ್ಕಾರಿ ಬಸ್ ನಲ್ಲೋ ಹೊರಡಬೇಕಾಗುತ್ತದೆ. ಸಾಮೂಹಿಕವಾಗಿ ಒಂದು ಮಿನಿ ಬಸ್ ನಲ್ಲೋ ಅಥವಾ ಸಂಖ್ಯೆ ಹೆಚ್ಚಾದರೆ ದೊಡ್ದ ಬಸ್ ನಲ್ಲೋ ಹೊರಟರೆ ಎಲ್ಲರ ಪರಿಚಯ, ಮಾತುಕತೆ, ಹರಟೆ, ವಿಚಾರ ವಿನಿಮಯಕ್ಕೆ ಅವಕಾಶಗಳಿರುತ್ತದೆ. ಆದ್ದರಿಂದ ಬೆಂಗಳೂರಿನಿಂದ ಹೊರಡುವ  ಅಭಿಮಾನಿಗಳು  ಇಲ್ಲಿ ಪ್ರತಿಕ್ರಿಯೆ ಬರೆಯುವುದರ ಮೂಲಕ ಅಥವಾ ಕೆಳಗಿನ ಫೋನ್ ನಂಬರುಗಳಿಗೆ ದಿನಾಂಕ 20.01.2011 ರೊಳಗಾಗಿ ಕರೆಮಾಡಿ ತಿಳಿಸಬೇಕಾಗಿ ಕೋರುವೆ.
ಈಗಾಗಲೇ ವೇದಸುಧೆಯ ಗಮನಕ್ಕೆ ಬಂದಿರುವಂತೆ ಹಾಸನಕ್ಕೆ ಕುಟುಂಬ ಸಹಿತರಾಗಿ  ಹೊರಟಿರುವ ಅಭಿಮಾನಿಗಳ ಪಟ್ಟಿ
೧] ವೇದಾಧ್ಯಾಯೀ ಸುಧಾಕರ ಶರ್ಮ
೨] ಶ್ರೀ ವಿಷ್ಣುಭಟ್ 
೩] ಶ್ರೀ ವಿಶಾಲ್ 
೪] ಜಗದೀಶ್
೫] ಎಂ.ಡಿ.ಎನ್ ಪ್ರಭಾಕರ್ 
೬] ಶ್ರೀ ಹರೀಶ್ ಆತ್ರೇಯ
೭] ಶ್ರೀಮತಿ ಚಿತ್ರ ಮತ್ತು ಶ್ರೀ ಪ್ರಸನ್ನ
೮] ಶ್ರೀ ಕೃಷ್ಣಮೂರ್ತಿ
೯] ಡಾ|| ವಿವೇಕ್
೧೦] ಶ್ರೀ ದಕ್ಷಿಣಾಮೂರ್ತಿ

ಸಂಪರ್ಕಿಸಲು ದೂರವಾಣಿ:
ಶ್ರೀಸುಧಾಕರಶರ್ಮ: 9448842474 / 08022421950
ಶ್ರೀ ವಿಶಾಲ್:   9880455251
ಶ್ರೀ ಹರಿಹರಪುರಶ್ರೀಧರ್:  9663572406/ 08172250566
ಮೇಲ್ ಮೂಲಕ ಕೂಡ ನಿಮ್ಮೊಡನೆ  ಹಾಸನಕ್ಕೆ ಬರುವವರ ವಿವರವನ್ನು ದಿನಾಂಕ 20.01.2011 ರೊಳಗೆ ನೀಡಬಹುದಾಗಿದೆ.
ನಮ್ಮ ಮೇಲ್ ವಿಳಾಸ:  vedasudhe@gmail.com

Wednesday, January 12, 2011

" ಅದಕ್ಕಿನ್ನೂ ಕಾಲವಿದೆ" :

"ವೇದಸುಧೆ" ಎಂಬ ನನ್ನ ಬ್ಲಾಗ್ ಹೆಸರು  ಕೇಳಿದಾಗ [ಕ್ಷಮೆ ಇರಲಿ, ಇದು ವೇದಸುಧೆಬಳಗದ ಬ್ಲಾಗ್] ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ.
* ಈಗತಾನೇ ಬಿ.ಇ.ಮುಗಿಸಿ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ನನ್ನ ಮಗನಿಗೆ ಹೇಳಿದೆ" ನನ್ನ ಬ್ಲಾಗ್ "ವೇದಸುಧೆ ಯನ್ನು ನೋಡು." ಅದರ ಬಗೆಗೆ ಪೂರ್ಣ ವಿಚಾರ ತಿಳಿಯಲು ವ್ಯವಧಾನವಿಲ್ಲದ ಅವನು ಹೇಳಿದ " ಅದಕ್ಕಿನ್ನೂ ಕಾಲವಿದೆ" " ನಾನೂ ನಿನ್ನ ವಯಸ್ಸಿಗೆ ಬಂದಾಗ ಅದೆಲ್ಲಾ  ಶುರುಮಾಡುವೆ
* ವೇದಸುಧೆ ಹೆಸರು ಕೇಳಿದೊಡನೆ ಪುರೋಹಿತರೊಬ್ಬರು " ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
* ಸಾಮಾನ್ಯ ಗೃಹಸ್ತರೊಬ್ಬರು ಯಾವುದೋ ಪೂಜಾ ವಿಧಾನದ ಬಗ್ಗೆ ತಮ್ಮ ಸಂಶಯ ಕೇಳಿದರು
* ಆಸ್ತಿಕರೊಬ್ಬರು ಯಜ್ಞ ಯಾಗಾದಿಗಳ ಫೋಟೋಗಳನ್ನು ಕಳುಹಿಸಿಕೊಟ್ಟರು
* ನಮ್ಮ ಮಕ್ಕಳಿಗೆ ಪುರಾಣಪುಣ್ಯಕಥೆಗಳ ಬಗ್ಗೆ ತಿಳಿಸಬೇಕೆಂದವರು ಕೆಲವರು
* ನಮ್ಮ ಯುವ ಪೀಳಿಗೆಗೆ ಹಬ್ಬ ಹರಿದಿನಗಳ ಬಗೆಗೆ  ವೇದಸುಧೆಯಲ್ಲಿ ಪರಿಚಯ ಮಾಡಿಸಬೇಕೆಂದವರು ಕೆಲವರು
* ನೋಡಿ ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ- ಅದನ್ನು ಉಳಿಸುವ ಕೆಲಸವಾಗಬೇಕೆಂದವರು ಒಬ್ಬ ಹಿರಿಯರು
         ವೇದವೆಂಬ ಎರಡಕ್ಷರವನ್ನು ಕೇಳಿದಾಗ ಹಲವರಿಂದ ಬಂದ ಹಲವು ಅಭಿಪ್ರಾಯಗಳಿವು. ಇವು ಅನೇಕರ ಅಭಿಪ್ರಾಯಗಳಿರಬಹುದು.ಒಂದೊಂದನ್ನೇ ವಿಮರ್ಶಿಸುತ್ತಾ ವಿಚಾರ ಮಾಡೋಣ.
" ಅದಕ್ಕಿನ್ನೂ ಕಾಲವಿದೆ" :
    ಒಂದು ಅತ್ಯಂತ ಬಡತನದ ಮನೆಯಲ್ಲಿ ಹುಟ್ಟಿದ್ದರಿಂದ ನನಗೆ  ಜೀವನಾನುಭವ ಸಾಕಷ್ಟು ಆಗಿದೆಯಾದ್ದರಿಂದ "   ನಿಜ ಮನುಷ್ಯನನ್ನು ಮಾಡುವ ನಿಜವಾದ ವೇದಾಧ್ಯಯನವು  ನನ್ನ ಬಾಲ್ಯದಿಂದಲೇ ಆಗಿದೆ ಎಂಬ ಸಮಾಧಾನ ನನಗಿದೆ" ನನ್ನ ಜೀವನದ ಪಾಠವು  ವೇದದಲ್ಲಿದೆ ಎಂಬುದು ಈಗೀಗ ಅರ್ಥವಾಗುತ್ತಿದೆ.ಆದ್ದರಿಂದ  ತುತ್ತು ಅನ್ನಕ್ಕೆ ಪರಿತಪಿಸುವ ಮನೆಯಲ್ಲಿ ನನ್ನ ಜನ್ಮಕ್ಕೆ ಕಾರಣನಾದ ಆ ಭಗವಂತ ಮತ್ತು ನನಗೆ ಬಡತನದ ಬದುಕು ಹೇಗಿರುತ್ತದೆಂದು ಅನುಭವ ನೀಡಿದ ನನ್ನ ಮಾತಪಿತೃಗಳೇ ನನಗೆ ನಿಜವಾದ ವೇದಾಧ್ಯಯನ ಮಾಡಿಸಿದ ಆಚಾರ್ಯರೆಂದು ತಿಳಿದು ಅವರನ್ನು ಸದಾಸ್ಮರಿಸುತ್ತೇನೆ.ಆದರೆ ನನ್ನ ಮಗ ಒಬ್ಬ ಸ್ಥಿತಿವಂತನ ಮನೆಯಲ್ಲಿ ಹುಟ್ಟಿದ[ಆಹೊತ್ತಿಗೆ ನನ್ನ ಬಡತನದ ಬೇಗೆ ಮಾಯವಾಗಿತ್ತು] ಅವನಿಗೆ ನನ್ನಂತೆ ಜೀವನಾನುಭವವೂ ಆಗಲಿಲ್ಲ. ವೇದಾಧ್ಯಯನವೂ ಆಗಲಿಲ್ಲ. ಅವನಿಗೆ ನಿಜವಾಗಿ ಸಮಯ ಜಾರುತ್ತಿದೆ. "ವೇದಸುಧೆಯಲ್ಲಿ ನೆಮ್ಮದಿಯ ಬದುಕಿಗಾಗಿ ವೇದ ಜ್ಞಾನದ ಬಗೆಗೆ ಸುಧಾಕರಶರ್ಮರು ಸಾಕಷ್ಟು ತಿಳುವಳಿಕೆ ನೀಡುತ್ತಿದ್ದಾರೆ. ಅವನಂತ ಯುವಕರಿಗೆ ಖಂಡಿತವಾಗಿಯೂ "ವೇದಸುಧೆಯು" ದಾರಿ ದೀಪವಾಗಬಲ್ಲದು. ಆದರೆ ಶರ್ಮರ ಉಪನ್ಯಾಸಗಳನ್ನಾದರೂ ನಿತ್ಯವೂ ಅರ್ಧಗಂಟೆಯಾದರೂ ಕೇಳಬೇಕು.
" ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
ವೇದದ ನಿಜವಾದ ಅರ್ಥವನ್ನು ತಿಳಿದಾಗ ವ್ರಥಕಥೆಗಳ ಮಾತೇ ಬರುವುದಿಲ್ಲ.
ಪೂಜಾ ವಿಧಾನ:
ನಿತ್ಯಬದುಕೇ ಒಂದು ಆರಾಧನೆ, ಒಂದು ಯಜ್ಞ.ಸಮಾಜಮುಖಿಯಾಗಿ ಬಾಳುವುದನ್ನು ವೇದವು ನಮಗೆ ಕಲಿಸಿಕೊಡುತ್ತದೆ, ನಾವೀಗ ಮಾಡುತ್ತಿರುವ ಪೂಜಾವಿಧಾನವೇ ಬದಲಾಗುತ್ತದೆ.
ಪುರಾಣಪುಣ್ಯಕಥೆಗಳ ಬಗ್ಗೆ :
ನನಗನಿಸುವಂತೆ  ಪೂರ್ವದಲ್ಲಿ ರಾಮಾಯಣ ಮಹಾಭಾರತದ ಯುದ್ಧ ಕಾಲದಲ್ಲಿ ವೇದ ಪ್ರಸಾರಕ್ಕೆ ಧಕ್ಕೆ ಬಂದಿದೆ[ ಇದನ್ನು ಬಲ್ಲವರು ಸರಿಯಾಗಿ ವಿವರಿಸ ಬೇಕು] ಆನಂತರ ಜನರು ಧರ್ಮಬ್ರಷ್ಠರಾಗುತ್ತಾರೆಂದು ಅರಿತ ಕೆಲವು ಋಷಿಗಳು[ಋಷಿ ಎಂಬ ಪದ ಉಚಿತವೋ ಅಲ್ಲವೋ ತಿಳಿಯದು] ಭೀತಿಯಿಂದ ಭಗವಂತನಲ್ಲಿ ನಂಬಿಕೆಬರುವಂತೆ ಸರಳವಾಗಿ ರಚಿಸಿರುವ ಕಥೆಗಳಿರಬಹುದು.ಯಾವುದೋ ಆಪತ್ಕಾಲಕ್ಕೆ ಮಾಡಿರುವ ಆ ಪ್ರಯತ್ನವು ತಲೆತಲಾಂತರಗಳಲ್ಲೂ ಮುಂದುವರೆದು ವೇದ-ಪುರಾಣಗಳೆಂಬ ಮಟ್ಟಿಗೆ ಬೆಳೆದದ್ದು ಸುಳ್ಳಲ್ಲ.  ವೇದವು ಆ ಸಂದರ್ಭದಲ್ಲಿ ನಾಶವಾಗಿಲ್ಲ. ಬದಲಿಗೆ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿ ಅದರ ಪರಿಣಾಮವಾಗಿ  ವೇದವನ್ನು ಬ್ರಾಹ್ಮಣರ ಹೊರತಾಗಿ ಅನ್ಯ ವರ್ಗದ ಜನರ ಕಿವಿಯ ಮೇಲೂ ಬೀಳಬಾರದೆಂಬ ಮಟ್ಟಿಗೆ ನಡೆದುಕೊಂಡದ್ದು ಕಥೆಯಲ್ಲ-ವಾಸ್ತವ.ಆದರೆ ಬ್ರಾಹ್ಮಣ ಪದದ ಅರ್ಥವೇ ಬೇರೆ. ಅದು ಒಂದು ಜಾತಿಯ ಹೆಸರಲ್ಲ. ಅದನ್ನು ವೇದಸುಧೆಯ ಶರ್ಮರ ಪುಟದಲ್ಲಿ ಆಡಿಯೋ ಕೇಳಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಪುರಾಣಪುಣ್ಯಕಥೆಗಳೆಂಬ ಕಟ್ಟು ಕಥೆಗಳ ಹಿಂದೆ ಬಿದ್ದು ನಿಜವಾದ ವೇದವನ್ನು ಮರೆತಿರುವುದು ಸರಿಯೇ? ಚಿಂತನೆ ಮಾಡಬೇಕು.
ಹಬ್ಬ ಹರಿದಿನಗಳ ಬಗೆಗೆ
 ಎಷ್ಟು ಓದಿದರೇನು? ನಾವಿನ್ನೂ ಕಂದಾಚಾರಗಳಿಗೇ ಕಟ್ಟು ಬಿದ್ದಿದ್ದೇವೆ.ಮೊನ್ನೆ ನನ್ನ ತಂಗಿಯ  ಮನೆಯಲ್ಲಿ "ಸುಬ್ರಹ್ಮಣ್ಯ ಷಷ್ಠಿ" ಯ ಆಚರಣೆ. .ಊಟದಲ್ಲಿ ಅಡಿಗೆಗೆ ಖಾರವನ್ನೇ ಹಾಕಿಲ್ಲ. ಬರಿ ಸಪ್ಪೆ. ಮಾಡಿದ್ದು ಹಲವು ಬಗೆ ಅಡಿಗೆ. ಅದರಲ್ಲಿ ಒಂದು  ಅವರೆ ಕಾಳಿನ ಸಾಂಬಾರ್ ಇರಬಹುದು.ಬರಿ ಸಪ್ಪೆ. ನಾನು ಉಪ್ಪಿನ ಕಾಯಿ ಹಾಕ್ತೀರಾ? ಎಂದೆ " ಇವತ್ತು ಹಾಕುವಂತಿಲ್ಲ" ಎಂದರು.
ನೋಡಿ ನಮ್ಮ ಆಚರಣೆಗಳ ಫಲ! ಬಹುಷ: ಆರೋಗ್ಯದ ಕಾರಣಕ್ಕೆ ಯಾವ ಕಾಲದಲ್ಲೋ ಯಾರೋ ಒಬ್ಬರು "ಸುಬ್ರಹ್ಮಣ್ಯ ಷಷ್ಠಿ"ಯ ಹೆಸರಲ್ಲಿ ಆರೋಗ್ಯಕರವಾದ ಅಡಿಗೆ ಹೇಳಿರಬಹುದು. ಆದರೆ ಕಡೆಯಲ್ಲಿ ಉಳಿದಿದ್ದೇನು? ಅಂದು ಅಡಿಗೆಗೆ  ಖಾರವನ್ನೇ ಹಾಕಬಾರದು. ಆದರೆ ಅವರೇ ಕಾಳಿನ ಸಾಂಬಾರ್ ಮಾಡಬಹುದೇ? ಚಿಂತಿಸಲೇ ಇಲ್ಲ.ನಮ್ಮ ಹಬ್ಬಗಳ ಆಚರಣೆ ಹೀಗಿದೆ. ಅರ್ಥ ಕಳೆದುಕೊಂಡಿದೆ ಎನಿಸುತ್ತಿಲ್ಲವೇ?
ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ
ಪ್ರಶ್ನೆ ಕೇಳಿದವರು ಬ್ರಾಹ್ಮಣ ಎಂದರೆ ಒಂದು ಜಾತಿಯನ್ನು ಉದ್ಧೇಶಿಸಿ ಕೇಳಿದ್ದರು. ಅದರೆ ಬ್ರಾಹ್ಮಣ ಪದಕ್ಕೆ ಅರ್ಥವೇ ಬೇರೆ. ಬ್ರಹ್ಮಜ್ಞಾನವನ್ನು ಪಡೆಯುವವ ಬ್ರಾಹ್ಮಣ.ಹೌದು ಬ್ರಹ್ಮಜ್ಞಾನದ ಪ್ರಸಾರವಾಗಬೇಕು.

ವೇದಸುಧೆಯಲ್ಲಿ ನಿಜವಾದ ವೇದಾರ್ಥಪ್ರಸಾರವಾಗಬೇಕು, ಬದುಕಿಗೆ ನಿಜವಾದ ಮಾರ್ಗದರ್ಶನ ವೇದಗಳಿಂದ ಸಿಗಬೇಕೆಂಬ ಮಹತ್ವಾಕಾಂಕ್ಷೆಯಿಂದ ವೇದಸುಧೆ ಆರಂಭವಾಗಿದೆ. ಆಪ್ರಯತ್ನದಲ್ಲಿ ಅವಿರತ ಶ್ರಮಿಸುತ್ತಿದೆ. ಇಂತಹ ವೇದಸುಧೆಯನ್ನು ಯಾವ ವಯಸ್ಸಿನಿಂದ  ಓದಬೇಕು? ಬಹಳ ಪ್ರೀತಿಂದ ಒಂದು ಮಾತು ಹೇಳಿ ಈ ಬರಹ ಮುಗಿಸುವೆ" ವೇದಸುಧೆಗೆ ತಾಂತ್ರಿಕ ಸಲಹೆ ನೀಡುತ್ತಿರುವ ನಮ್ಮ ಮಿತ್ರ ಪ್ರಸನ್ನ  ಪಿ.ಯು.ಸಿ ವಿದ್ಯಾರ್ಥಿ.
ಒಂದು ಮಾತು: ವೇದಸುಧೆಯಲ್ಲಿ ನಾನೊಬ್ಬ ಅಂಚೆ ಪೇದೆ. ನಿಮಗೆ ಏನೇ ಸಂಶಯವಿರಲಿ. ಕೇಳಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರ ನೀಡುವರು. ಕಾರಣ ಅವರು ಮೂರು ದಶಕಗಳಿಂದ ವೇದಾಧ್ಯಯನ ಮಾಡುತ್ತಿದ್ದಾರೆ. ಅವರೇ ಸಮರ್ಥರು.