Pages

Tuesday, February 28, 2012

 ಮಂಕುತಿಮ್ಮನ ಕಗ್ಗ - ರಸಧಾರೆ 

ಕಗ್ಗ -೧೨ 

ಮಾನವರೋ ದಾನವರೋ ಭೂಮಾತೆಯನು ತಣಿಸೆ 
ಶೋಣಿತವನೆರೆಯುವರು ಬಾಷ್ಪಸಲುವುದಿರೆ?
ಏನು ಹಗೆ! ಏನು ಧಗೆ!ಏನು ಹೊಗೆ! ಯೀ ಧರಿಣಿ
ಸೌನಿಕನ ಕಟ್ಟೆಯೇಂ? - ಮಂಕುತಿಮ್ಮ


ಶೋಣಿತವನೆರೆಯುವರು= ಶೋಣಿತವನು+ ಎರೆಯುವರು/ಬಾಷ್ಪಸಲುವುದಿರೆ= ಭಾಷ್ಪ+ಸಲುವುದು+ಇರೆ

ಶೋಣಿತ= ರಕ್ತ, ಭಾಷ್ಪ = ಕಣ್ಣೀರು, ಎರೆಯುವುದು= ಸುರಿಸುವುದು, ಸಲುವುದಿರೆ= ಸುರಿಸಬೇಕಾದರೆ. ಸೌನಿಕ =
 
ಕಟುಕ, /ಕಟ್ಟೆ= ಜಗುಲಿ. 

  
ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೇರು ಸುರಿಸುವಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ
ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. 

ಮತ್ತದೇ ಯುದ್ಧದ ಸನ್ನಿವೇಶವನ್ನು ಈ ಕಗ್ಗದಲ್ಲೂ ಉಲ್ಲೇಖಿಸುತ್ತಾರೆ, ಶ್ರೀ ಗುಂಡಪ್ಪನವರು. ಪಾಪ ಅವರ ಮನ ಎಷ್ಟು 
ನೊಂದಿತ್ತೋ ಏನೋ? ಇಲ್ಲದಿದ್ದರೆ ಅಂದಿನ ವರ್ತಮಾನ ಸ್ಥಿತಿಗೆ ಇಷ್ಟೊಂದು ಪ್ರತಿಕ್ರಿಯೆ ಬರುತಿತ್ತೆ. 
ಇರಲಿ. ಮಾನವರಾದ ನಾವು ಮಾನವರಂತೆ ಇರದೇ ದಾನವರಂತೆ ಏಕೆ ಒಬ್ಬರಿಗೆ ಮತ್ತೊಬ್ಬರ ರಕ್ತದಾಹ. ಬಾಳುವವನು ಮಾನವ ಎನ್ನುತ್ತದೆ ಪರಿಭಾಷೆ. ಬಾಳದೆ ಯುದ್ಧಮಾಡಿ ನಾಶಕ್ಕೆ ಕಾರಣರಾದವರನ್ನು ಮಾನ್ಯ
ಗುಂಡಪ್ಪನವರು ದಾನವರೆಂದು ಸೂಕ್ತವಾಗೆ ಹೇಳಿದ್ದರೆ. 

ಅಹಂಕಾರದಿಂದ, ಆಸೆಯಿಂದ, ಮದ, ಮತ್ಸರಗಳ ಕಾರಣಗಳಿಂದ ಎಲ್ಲ ಯುದ್ಧಗಳೂ ನಡೆಯುತ್ತವೆ. ನಮ್ಮ ಪುರಾಣಗಳಲ್ಲೂ ಇಂತಹ ಯುದ್ಧಗಳನ್ನು ನೋಡಬಹುದು. ದಾನವರಾಗೆ ಹುಟ್ಟಿದ ಹಿರಣ್ಯಾಕ್ಷ-ಹಿರನ್ಯಕಶಿಪುಗಳೂ ಸಹ
ತಮಗೆ ಸಿಕ್ಕ ವಾರಗಳ ಬಲದಿಂದ, ಮದೋನ್ಮತ್ತರಾಗಿ ಭೂಲೋಕವೇನು ದೇವಲೋಕಕ್ಕೂ ಲಗ್ಗೇ ಇಟ್ಟ ಉಲ್ಲೇಖವುಂಟು .ಮಹಾಭಾರತದ ಯುದ್ಧದಲ್ಲೂ ಇಡೀ ಆರ್ಯವರ್ತವೇ ಇಬ್ಬಾಗವಾಗಿ ಕೆಲವರು ಕೌರವರ ಮತ್ತೆ ಕೆಲವರು ಪಾಂಡವರ ಪಕ್ಷ ವಹಿಸಿ ಯುದ್ಧಮಾಡಿ ೧೮ ಅಕ್ಷೋಹಿಣಿ ( ೧.೫೬ ಸಾವಿರ) ಜನರನ್ನು ಬಳಿ ತೆಗೆದುಕೊಂಡಿತಂತೆ. ಅದು ಪುರಾಣ. ಗ್ರೀಕ್ ಪುರಾಣದಲ್ಲಿ ಬರುವ ಟ್ರೋಜನ್ ಯುದ್ಧವೂ ಸಹ ಒಂದು " ಹೆಲನ್" ಎನ್ನುವ ಹೆಣ್ಣಿಗಾಗಿ ನಡೆದು ಸುಮಾರು ವರ್ಷಗಳಕಾಲ ನಡೆದು ಅಪಾರ ಸಾವು ನೋವುಗಳಿಗೆ ಕಾರಣವಾಯಿತಂತೆ.

ಇನ್ನು ನಮ್ಮ ದೇಶದಲ್ಲಿ ಕ್ರಿಸ್ತ ಪೂರ್ವ ೩೨೩ ರ ಸುಮಾರಿಗೆ ಚಾಣಕ್ಯ ಬರುವವರೆಗೆ, ಸಣ್ಣ ಸಣ್ಣ ರಾಜರು ಮತ್ತು ಕೆಲವು ದೊಡ್ಡ ರಾಜರುಗಳು ಸದಾ ಯುದ್ಧನಿರತರು. ಮಾತ್ರ ಅವರ ದಾನವೀ ಅಹಂಕಾರವನ್ನು ತಣಿಸಲಿಕ್ಕಾಗಿಯೇ

ನಡೆದ ಯುದ್ದ್ಧಗಳು. ಕ್ಷುಲ್ಲಕ ಕಾರಣಕ್ಕಾಗಿಯೇ ನಡೆವ ಯುದ್ಧಗಳಲ್ಲೆಲ್ಲ ನಡೆಯುವುದು ಸಾಮಾನ್ಯರ ಮಾರಣ ಹೋಮ. ಅದು ದಾನವೀ ಪ್ರವೃತ್ತಿ. ನಮ್ಮ ದೇಶವನ್ನೇ ತೆಗೆದುಕೊಂಡರೆ, ಮೊದಲು ಯವನರು, ನಂತರ ಮೊಘಲರು ನಂತರ ಬ್ರಿಟಿಷರು. ಹೀಗೆ ಆಕ್ರಮಣಕಾರರ ದಂಡೇ ನಮ್ಮ ದೇಶವನ್ನು ಲೂಟಿಮಾಡಲು ಹಿಂದೂ ಹಿಂಡಾಗಿ ಬಂದವರೇ ಹೆಚ್ಚು. ಇವರು ಸಾಲದೆಂಬಂತೆ,ಬಂದವರು ಡಚ್ಚರು, ಪೋರ್ಚ್ಯುಗೀಸರು , ಎಲ್ಲರೂ ನಮ್ಮ ನಾಡಿನಮೇಲೆ ದಾಳಿಮಾಡಿದರು. ವಾಚಕರೆ ನೋಡಿ ಭಾರತವು ಯಾವುದೇ ಅನ್ಯ ದೇಶದಮೇಲೆ ದಾಳಿ ಮಾಡಿದ್ದನ್ನು ಯಾವುದಾದರೂ ಪುಸ್ತಕದಲ್ಲಿ ಕಂಡಿದ್ದೀರಾ? ಅಖಂಡವಾಗಿದ್ದ ಭಾರತ ೨೦೦ ವರ್ಷಗಳಲ್ಲಿ ತುಂಡು ತುಂಡಾಗಿ ಹರಿದು ಹಂಚಿಹೋಗಿದೆ.

ಹಾಗಾಗಿ ವಾಚಕರೆ, ಅಹಂಕಾರ ದುರಾಸೆ ಈ ಎಲ್ಲ ಯುದ್ಧಗಳಿಗೂ ಕಾರಣವಾಗಿತ್ತು. ಈ ಜಗತ್ತಿನಲ್ಲಿ ಮಾನವರು ಸುಸಂಸ್ಕೃತ ಪ್ರಾಣಿಗಳು. ಅನ್ಯ ಪ್ರಾಣಿಗಳಿಗಿಂತ ಭಿನ್ನ. ಮಾನವತೆಯಿಂದ ತನ್ನ ಜೀವನವನ್ನು ಮತ್ತು ಅನ್ಯರ
ಜೀವನವನ್ನೂ ಸಹ ಸುಂದರವಾಗಿ ರೂಪಿಸಿಕೊಳ್ಳಬಲ್ಲ ಶಕ್ತಿ ಅವನಿಗೆ ಇದೆ. ಆದರೆ ಮಾತ್ರ ಅಹಂಕಾರದಿಂದ ತನ್ನ ಬುಡಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು ಅನ್ಯರನೂ ಸುಡುವ ಈ ದಾನವೀ ಅಥವಾ ಪೈಶಾಚಿಕ ಪ್ರವೃತ್ತಿ ಏಕೆ?

ದರಣಿ ಸಸ್ಯಶ್ಯಾಮಲವಾಗಿರಬೇಕಾದರೆ, ನೀರು ಮತ್ತು ಶ್ರಮದ ಅವಶ್ಯಕತೆ ಉಂಟು ಅದನ್ನು ಬಿಟ್ಟು ದ್ವೇಷದ ಬೀಜ ಮತ್ತು ರಕ್ತದ ಸಿಂಚನವಾದರೆ, ಬೆಳೆ ಬೆಳೆದೀತೆ? ಹೊಟ್ಟೆ ತುಂಬೀತೆ? ಹಗೆಯ ಹೊಗೆಯಿಂದ ಉಸಿರು ಕಟ್ಟುತ್ತದೆಯೇಹೊರತು ಜೀವ ಪೋಷಣೆಯಾಗದು. ಜೀವನದ ನಡೆಯದು. ಈ ಪ್ರಪಂಚದ ಗತಿಯೇನು? ಅದು ಹಾಗಾದರೆ ಇಡೀ ಪ್ರಪಂಚವೇ ಕಟುಕನ ಜಗಲಿಯಂತಾಗುತ್ತದೆ ಅಲ್ಲವೆ? ಅಂಥಹ ಭಾವಗಳನ್ನೇ ಮಾನ್ಯ ಶ್ರೀ ಗುಂಡಪ್ಪನವರು ವ್ಯಕ್ತ
ಪಡಿಸುತ್ತಾರೆ ಈ ಕಗ್ಗದಲ್ಲಿ.

ಸಹೃದಯರೇ, ಒಂದು ಸಣ್ಣ ಬೀದಿ ಜಗಳ ದಿಂದ ಹಿಡಿದು ಒಂದು ಮಹಾ ಪ್ರಪಂಚ ಯುದ್ಧಕ್ಕೂ ಮಾನವತೆಯ ಕೊರತೆ ಮತ್ತು ಅಹಂಕಾರಭರಿತ ದಾನವತೆಯೇ ಕಾರಣ. ದ್ವೇಶವೇ ಕಾರಣ ಇದರಿಂದ ನಾಶವೇ ಹೊರತು ಬಾಳು ಇಲ್ಲ
ಎಂದು ನಾವೂ ಸಹ ಅರಿತು ನಮ್ಮ ನಮ್ಮಲ್ಲಿ ಇರುವ ಅಂತಹ ವಿನಾಶಕಾರಿ ಭಾವಗಳನ್ನು ತೊಡೆದು, ಈ ಇಡೀ ಜಗತ್ತನ್ನು ಸುಂದರ ತಾಣವನ್ನಾಗಿ ಪರಿವರ್ತಿಸಲು ಪ್ರಯತ್ನಿಸೋಣ.

ಬನ್ನಿ ಇದೆ ಭಾವಗಳೊಂದಿಗೆ ನಾವು ಮುಂದಿನ ಕಗ್ಗಕ್ಕೆ ಹೋಗುವ

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ


ನಮಸ್ಕಾರ

ರವಿ ತಿರುಮಲೈ

Monday, February 27, 2012


ಮಂಕುತಿಮ್ಮನ ಕಗ್ಗ  -  ರಸಧಾರೆ 


            ಕಗ್ಗ - ೧೧ 

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ I
ಮೃತ್ಯುಕುಣಿಯುತಲಿಹನು ಕೇಕೆಹಾಕುತಲಿ II
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ I
ಎತ್ತಲಿದಕೆಲ್ಲ ಕಡೆ? - ಮಂಕುತಿಮ್ಮ II

ಸುತ್ತಿಪುದು = ಸುತ್ತಿಸುತ್ತದೆ , ಅನುದಿನವು= ಪ್ರತಿನಿತ್ಯವು, ಎತ್ತಲಿದಕೆಲ್ಲ = ಇದಕ್ಕೆಲ್ಲ ಎಲ್ಲಿ. 

ಭೂಮಿಕೆ ಅದೇ. ಯುದ್ಧ. ಘೋರ ವಿಶ್ವ ಮಹಾ ಯುದ್ಧ. ಇಡೀ ವಿಶ್ವವೇ ಅಲುಗಾಡುವಂಥ ಯುದ್ಧ. ಎಲ್ಲೆಲ್ಲೂ ರಕ್ತಪಾತ.  ಎಲ್ಲೆಲ್ಲೂ ಯುದ್ಧದ ಕೂಗು. ಅದು ಈ ಭೂಮಿಗೆ ಆವರಿಸಿಕೊಂಡ ದುರ್ದೈವವೆಂದು ವ್ಯಾಖ್ಯಾನಿಸುತ್ತಾರೆ, ಮಾನ್ಯ ಗುಂಡಪ್ಪನವರು. ಎಲ್ಲೆಲ್ಲೂ ಮೃತ್ಯುವಿನ ತಾಂಡವ. ಯುದ್ಧದಲ್ಲಿ, ತಂದೆಯನ್ನೂ, ಅಣ್ಣನನ್ನೋ, ಮಗನನ್ನೂ, ಮಿತ್ರನನ್ನೋ, ತಮ್ಮನನ್ನೋ, ಭೂಮಿಯನ್ನೋ, ಹುಟ್ಟಿದೂರಲ್ಲಿ ಬಿಟ್ಟ ಬೇರನ್ನೋ, ಆ  ಊರಿನ ಮಣ್ಣಿನ  ಋವನ್ನೋ,  ಕಳೆದುಕೊಂಡವರೆ ಬಹಳ ಜನ.  ಕಳೆದುಕೊಂಡವರೆಲ್ಲರಿಗೂ ನೋವು. ಕಳೆದುಕೊಳ್ಳದವರಿಗೂ ಕಳೆದುಕೊಂಡವರ ನೋವಿಗಾಗಿ ಸಂತಾಪ.  ಒಟ್ಟಾರೆ ಇಡೀ ಭೂಮಿಗೆ ಸೂತಕದ ಭಾವ. ಎಲ್ಲ ಕಡೆಯಿಂದಲೂ ಸಾವಿನ ನಷ್ಟದ ಸಮಾಚಾರ. ಪ್ರತಿನಿತ್ಯ ಈ ಸಮಾಚಾರಗಳನೆಲ್ಲ ಕೇಳಿ ಕೇಳಿ, ಪತ್ರಿಕೆಗಳಲ್ಲಿ ಓದಿ  ಓದಿ ತಲೆ ಸುತ್ತುವಂತಾಗುತ್ತದೆ. ಇದಕ್ಕೆಲ್ಲ ಎಂದಿಗಾದರೂ ಕೊನೆಯುಂಟೆ ಎಂದು ಲೋಕ ಶಾಂತಿಗಾಗಿ ಮರುಗುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.  

ಆ ಯುದ್ಧದಲ್ಲಿ ಗೆಲುವು  ಯಾರದಾಯಿತು ಎಂದು ಯೋಚಿಸಿದರೆ, ಗೆದ್ದದ್ದು " ಮೃತ್ಯು" ಮತ್ತೆಲ್ಲರೂ ಸೋತವರೇ. ಆ ಯುದ್ಧದಲ್ಲೇ ಅಲ್ಲ ಯಾವುದೇ ಯುದ್ಧವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ, ಗೆಲ್ಲುವುದು "ಮೃತ್ಯು"  ಮಾತ್ರ. ಮಿಕ್ಕೆಲ್ಲರೂ, ಎಲ್ಲ ದೇಶಗಳೂ  ಸೋಲುತ್ತವೆ. ಕೇವಲ ಮೃತ್ಯು ಗೆಲ್ಲುತ್ತದೆ. ಎರಡನೇ ಮಹಾ ಯುದ್ಧದ ಸಮಯದಲ್ಲಿ ಕ್ರೂರತ್ವಕ್ಕೆ ಒಂದು ಅಂತ್ಯವೇ ಇರಲಿಲ್ಲ. ಹಿಟ್ಲರನ ರಕ್ತ ದಾಹಕ್ಕೆ ಕೊನೆಯೇ ಇರಲಿಲ್ಲ. ಅದಕ್ಕೊಂದು ನಿದರ್ಶನವೆಂದರೆ
 " ಸಾಬಿಬಾರ್ " ಎಂಬಲ್ಲಿ ವಿಷಾನಿಲ ಘಟಕಗಳನ್ನು ನಿರ್ಮಿಸಿ, ವೈರಿ ದೇಶದ ಸೈನಿಕರಷ್ಟೇ ಅಲ್ಲ ಸೆರೆಸಿಕ್ಕ ಸಾಮಾನ್ಯ ಪ್ರಜೆಗಳನ್ನೂ ಅಲ್ಲಿಗೆ ತಂದು, ಕೆಲಸಮಾಡಲು ಶಕ್ತಿ ಇರುವವರನ್ನು ಹಲವಾರು  ಕೆಲಸಗಳಿಗೆ ಹಚ್ಚಿ, ಕೆಲಸ ಮಾಡಲಾಗದ  ಸ್ತ್ರೀಯರು, ವೃದ್ಧರು, ಮಕ್ಕಳು ಹೀಗೆ ಎಲ್ಲರನ್ನೂ ಅಮಾನವೀಯ ಕ್ರೌರ್ಯದಿಂದ ಆ ವಿಷಾನಿಲ ಘಟಕದೊಳಕ್ಕೆ ತಳ್ಳಿ ಕೊಂದು ಬಿಡುವ ಪರಮ ನೀಚತನವನ್ನು ಹಿಟ್ಲರ ತೋರಿಸಿದ್ದ. ಅದು ಕ್ರೌರ್ಯದ ಹಲವಾರು ಮಾರ್ಗಗಳಲ್ಲಿ ಒಂದಾಗಿತ್ತು. ಎಲ್ಲ ದೇಶಗಳೂ  ಒಂದಲ್ಲ ಒಂದು ದೇಶದ ಪಕ್ಷವನ್ನು ತೆಗೆದುಕೊಂಡು ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ತಳ್ಳುವಂಥಾ ಯುದ್ದವನ್ನು ನಡೆಸಿದರು. ಜಪಾನಿನ ಮೇಲೆ ಬಿದ್ದ ಎರಡು ಅಣು ಬಾಂಬುಗಳು, ಈ ಯುದ್ಧವನ್ನು ಒಂದು ಕೊನೆ ಮುಟ್ಟಿಸಿತು.  ಇದು ಚರಿತ್ರೆ. 

ಆದರೆ ವರ್ತಮಾನವೇನೂ ಭಿನ್ನವಾಗಿಲ್ಲ. ಇನ್ನೂ ಭೀಕರವಾಗುತ್ತಿದೆ. ಆಗ ಒಂದು ಯುದ್ಧ ನಡೆದರೆ, ಈಗ ಹಲವಾರು ಯುದ್ಧಗಳು. ವೈಜ್ಞಾನಿಕವಾಗಿ, ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳು ಹಿಂದಿರುವ ರಾಷ್ಟ್ರಗಳಮೇಲೆ ಆಧಿಪತ್ಯ, ದಬ್ಬಾಳಿಕೆ. ಷಡ್ಯಂತ್ರ, ಒತ್ತಡ, ಅನವಶ್ಯಕ ಹಸ್ತಕ್ಷೇಪದಿಂದ ಇಂದಿಗೂ ದೇಶದೇಶಗಳ ಮಧ್ಯೆ ದ್ವೇಷದ ಭಾವ ಒಂದಿಷ್ಟೂ ಕಡಿಮೆಯಾಗಿಲ್ಲ. ಜಾತಿ, ಮತ, ಭಾಷೆ, ಎಲ್ಲೆ, ಗಡಿ ಹೀಗೆ  ಹೊಡೆದಾಟಕ್ಕೆ ಹಲವಾರು ಕಾರಣಗಳು. ತನ್ನ ಬಲದ ಕಾರಣ ಪರರ ದೇಶಗಳಿಗೆ ಕುಂಟು ನೆಪ ಒಡ್ಡಿ ನುಗ್ಗಿ  ಮಾರಣ ಹೋಮ ನಡೆಸಿ ಅಲ್ಲಿರುವ ಸಂಪತ್ತನ್ನು ಲೂಟಿಮಾಡುವ ಪ್ರವೃತ್ತಿ ಸರಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆಯೂ ಇತ್ತು. ಇಂದೂ ಇದೆ. ಜನಾಂಗಗಳನ್ನು ಒಂದುಗೂಡಿಸುವುದಕ್ಕೆ ಪೂರಕವಾದ  ಜಾತಿ, ಮತ, ಭಾಷೆಗಳೇ ಜನ ಜನರ ಮಧ್ಯೆ, ದೇಶ ದೇಶಗಳ ಮಧ್ಯೆ ವೈರಕ್ಕೆ ಕಾರಣವಾಗಿರುವುದು ಒಂದು ವಿಪರ್ಯಾಸ. ಅಷ್ಟೇ ಅಲ್ಲ, ಅಂದು ಇದ್ದ ಅಸ್ತ್ರ -ಶಶ್ತ್ರಾಸ್ತ್ರ ಗಳಿಗೆ ಹೋಲಿಸಿದರೆ ಇಂದು ಪ್ರಪಂಚದಲ್ಲಿ, ಇಂತಹ ಹತ್ತು ಪ್ರಪಂಚಗಳನ್ನು ನಿಮಿಷದಲ್ಲಿ ಧ್ವಂಸ  ಮಾಡಬಲ್ಲ ಮಾರಕಾಸ್ತ್ರಗಳನ್ನು ಹೊಂದಿರುವ ಹಲವಾರು ದೇಶಗಳುಂಟು. ನಮ್ಮಲ್ಲಿ ಬತ್ತಿಯನ್ನು ಕಿತ್ತು ಸಿದ್ಧವಾಗಿರುವ ಅಸ್ತ್ರಗಳುಂಟು. ಬೆಂಕಿ ಕಡ್ಡಿ ಗೀರಬೇಕಷ್ಟೇ. ಸಮಗ್ರವಾಗಿ ಇದನ್ನೆಲ್ಲಾ ಸೇರಿಸಿ ದುರ್ದೈವ ಎಂದರು ಮಾನ್ಯ ಗುಂಡಪ್ಪನವರು. 

ಅಂದು ಗುಂಡಪ್ಪನವರು ಖೇದ ವ್ಯಕ್ತಪಡಿಸಿದ ಕಾರಣಗಳು ಇಂದಿಗೂ ಇವೆ.  ಅಷ್ಟೇ ಅಲ್ಲ,ಇನ್ನೂ ವಿಕೃತ ರೂಪ ಪಡೆದುಕೊಂಡು ಇಡೀ ಪ್ರಪಂಚವನ್ನೇ ಎತ್ತಕೊಂಡುಹೋಗುತ್ತಿದೆಯೋ ಯಾರು ಬಲ್ಲರು. ಅಂದು ಅಷ್ಟಕ್ಕೇ ಮರುಗಿದ ಗುಂಡಪ್ಪನವರು ಇಂದು ಈ ಸ್ಥಿತಿಯನ್ನು ನೋಡಿದರೆ ಏನು ಹೇಳಿರಬಹುದೆಂದು ಊಹಿಸಲೂ ಕಷ್ಟ. 

ಇಂತಹ ವಿಚಾರಗಳನ್ನು ಮಂಥನಮಾಡುತ್ತ, ಒಂದು ಶಾಂತ ಪ್ರಪಂಚವನ್ನು ನಿರ್ಮಿಸುವ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ, ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ? 

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ. ಎಲ್ಲೆಲ್ಲೂ ಶಾಂತಿ ನೆಲೆಸಲಿ ಎಂದು ಹಾರೈಸುತ್ತಾ

ನಮಸ್ಕಾರ 
ರವಿ ತಿರುಮಲೈ 

Sunday, February 26, 2012

ಸಮಾಜದಲ್ಲಿ ಸಾಮರಸ್ಯ


ಹಾಸನದ ಸಮೀಪ ದೊಡ್ದಪುರದಲ್ಲಿ ನಡೆಯಲಿರುವ  ಸಾಂಕೇತಿಕ ಅಶ್ವಮೇಧ ಯಾಗದ ಬಗ್ಗೆ    ವೇದಸುಧೆಯ ಸಕ್ರಿಯ  ಸದಸ್ಯರೂ ಹಾಗೂ ಪತ್ರಕರ್ತರೂ ಆದ ಶ್ರೀ ಹೆಚ್.ಎಸ್. ಪ್ರಭಾಕರ್ ರವರು  ರಾಜ್ಯದ ಹಲವು ಪತ್ರಿಕೆಗಳಲ್ಲಿ ಮತ್ತು ಹಾಸನದ ಸ್ಥಳೀಯ ಪತ್ರಿಕೆಗಳಲ್ಲಿ ಬರೆದಿರುವ ಲೇಖನವನ್ನು ವೇದಸುಧೆಯಲ್ಲೂ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಶ್ರೀ ಸುಧಾಕರ ಶರ್ಮರ ಉಪನ್ಯಾಸವನ್ನೂ ಮತ್ತು ಅದರ  ಬರಹ ರೂಪವನ್ನೂ ಕೂಡ ವೇದಸುಧೆಯಲ್ಲಿ ಪ್ರಕಟಿಸಲಾಗಿದೆ. ವೇದಸುಧೆಯ ಅಭಿಮಾನಿಗಳಲ್ಲಿ   ವಿನಂತಿಸುವುದೆನೆಂದರೆ  ಸಮಾಜದಲ್ಲಿ ಯಾವುದೇ  ಈ ರೀತಿಯ  ಧಾರ್ಮಿಕ ವಿಧಿಗಳು ನಡೆಯುವಾಗ ನಾವು  ವೇದಕ್ಕೆ ಪೂರಕವಾಗಿ ಹಾಗೂ ಸಮಾಜದಲ್ಲಿ ಸಾಮರಸ್ಯವನ್ನು ತರಲು ಅನುಕೂಲವಾಗುವಂತೆ ವ್ಯವಸ್ಥಾಪಕರಿಗೆ ಸಲಹೆ ಕೊಡಲು ಸಾಧ್ಯವೇ? ಪ್ರಯತ್ನಿಸಬೇಕು. ಅಲ್ಲದೆ ಹೀಗೊಂದು ಕಾರ್ಯಕ್ರಮವನ್ನು ಯೋಜಿಸಿರುವಾಗ ಅದಕ್ಕೆ ಪ್ರತಿರೋಧವನ್ನು ಒಡ್ಡುವುದು ಸಮಾಜದ ಸಾಮರಸ್ಯದ ದೃಷ್ಟಿಯಿಂದ ಸಾದುವಲ್ಲ ಎಂಬುದನ್ನು ಮನಗಂಡು ಇದರಿಂದ ಸಮಾಜದ ನೆಮ್ಮದಿಗೆ ಪೂರಕವಾಗುವಂತೆ, ಹಾಗೂ ಮಾಡುವ  ಯಜ್ಞದಿಂದ ಪರಿಸರ ಶುದ್ಧವಾಗಲು  ,ಪಠಿಸುವ ಮಂತ್ರದಿಂದ ಮನಸ್ಸು ಶುದ್ಧವಾಗಲು ಅನುಕೂಲವಾಗುವಂತೆ ಎಚ್ಚರ ವಹಿಸಲು ವ್ಯವಸ್ಥಾಪಕರಿಗೆ  ಸೂಕ್ತ ಸಲಹೆ ಕೊಡಲು ಪ್ರಯತ್ನಿಸಬೇಕು.

ಅಶ್ವಮೇಧ ಯಾಗ



ವೇದವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
19.9.2003  ರಂದು ಬೇಲೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮರು ವೇದವನ್ನು ಸರಿಯಾಗಿಅರ್ಥಮಾಡಿಕೊಳ್ಳುವ ಬಗೆ ಹೇಗೆ? ಎಂಬ ವಿಚಾರವಾಗಿ ಬಹು ಸರಳ ಮತ್ತು ಸ್ಪಷ್ಟ ಮಾತುಗಳಲ್ಲಿ ಉಪನ್ಯಾಸವನ್ನು ಮಾಡಿದ್ದಾರೆ. ಅಂದುಮಾಡಿದ ಉಪನ್ಯಾಸಕ್ಕೆ ಅಕ್ಷರಕೊಡುವ ಪ್ರಯತ್ನ ಮಾಡುತ್ತಿರುವೆ. ಒಂದು ವೇಳೆ ಬರೆಯುವಾಗ ಅಕ್ಷರ ತಪ್ಪಾಗಿ ಅರ್ಥ ತಪ್ಪಾದರೆ ಅದುನನ್ನ ತಪ್ಪು. ಆದರೆ ಅವರ ಮಾತುಗಳನ್ನು ಒಪ್ಪದಿದ್ದರೆ ದಯಮಾಡಿ ಓದುಗರು ಪ್ರತಿಕ್ರಿಯಿಸಿದರೆ ಶ್ರೀಯುತರ ಗಮನಕ್ಕೆ ತಂದುಅವರಿಂದಲೇ ಸಮಾಧಾನದ ಉತ್ತರ ಕೊಡಿಸುವೆ. ಇನ್ನು ಮುಂದೆ ಅವರದೇ ಮಾತು ಕೇಳಿ.......
ನಾವು ಯಾವುದೇ ಪದದ ಅರ್ಥ ಗೊತ್ತಿಲ್ಲವೆಂದಾಗ ನಿಘಂಟಿನ ಮೊರೆಹೋಗುವುದು ಸಹಜ. ಸಂಸ್ಕೃತ ಭಾಷೆಗೂ ನಿಘಂಟಿದೆ. ಆದರೆಅದರಲ್ಲಿ ಎರಡುರೀತಿಯ ನಿಘಂಟಿದೆ. ಈ ಸೂಕ್ಷ್ಮ ನಮಗೆ ತಿಳಿದರೆ ವೇದದ ಅರ್ಥ ತಿಳಿಯುವುದು ಸುಲಭವಾಗುತ್ತೆ. ಆಪ್ಟೆ ಅಥವಾಬೇರಾರೋ ಬರೆದಿರುವ ಒಂದು ರೀತಿಯ ಸಂಸ್ಕೃತ ನಿಘಂಟಿನ ಪರಿಚಯ ಎಲ್ಲರಿಗಿದೆ. ಆದರೆ ವೇದಗಳಲ್ಲಿ ಉಪಯೋಗಿಸಿರುವ ಭಾಷೆಸಂಸ್ಕೃತ ಅಲ್ಲ. ವೇದ ಇರುವುದು ವೇದದ್ದೇ ಭಾಷೆಯಲ್ಲಿ.ಇದರಿಂದ ಸಂಸ್ಕೃತ ಹುಟ್ಟಿದೆಯೇ ಹೊರತೂ ವೇದ ವಿರುವುದು ವೇದಭಾಷೆಯಲ್ಲಿ, ಸಂಸ್ಕೃತದಿಂದಲ್ಲ. ಈ ರಹಸ್ಯ ತಿಳಿಯದಾಗ ಆಭಾಸವಾಗುತ್ತೆ. ವೇದದ ಅರ್ಥ ಗೊತ್ತಾಗದಿದ್ದಾಗ ನಾವು ಮಾಡುವುದಾದರೂ ಏನು, ಯಾವುದಾದರೂ ಸಂಸ್ಕೃತ ನಿಘಂಟನ್ನು ನೋಡುವೆವು. ಆಗ ದಾರಿ ತಪ್ಪುತ್ತೇವೆ. ವೇದಗಳು ವೇದಭಾಷೆಯಲ್ಲಿರುವುದರಿಂದ ವೇದದನಿಘಂಟನ್ನೇ ನೋಡಬೇಕೇ ಹೊರತು ಸಂಸ್ಕೃತ ನಿಘಂಟನ್ನಲ್ಲ. ವೇದದ ನಿಘಂಟನ್ನು ಯಾಸ್ಕರರು ನಿರೂಪಿಸಿದ್ದಾರೆ. ಇದನ್ನುನಿರುಕ್ತ ಎಂದು ಕರೆಯುತ್ತೇವೆ. ಉಧಾಹರಣೆಗೆ "ಅಧ್ವರ " ಎಂಬ ಪದಕ್ಕೆ ನಿರುಕ್ತದಲ್ಲಿ ಯಾಸ್ಕರಾಚಾರ್ಯರು ಹೇಳುವರು" ಧ್ವರ ಇತಿಹಿಂಸಾ ಕರ್ಮ".ಧ್ವರ ಎಂದರೆ ಹಿಂಸೆ ಎಂದಾಗ ಅಧ್ವರ ಎಂದರೆ ಅಹಿಂಸೆ." ಅಗ್ನೇಯೆ ಯಜ್ಞಮಧ್ವರಂ" ಯಜ್ಞಕ್ಕೆ ಅಧ್ವರ ವೆಂತಲೂಕರೆಯುವುದರಿಂದ ಯಜ್ಞ ಎಂದರೆ ಅಹಿಂಸೆ ಎಂದಾಯ್ತು. ಆದ್ದರಿಂದ ಯಜ್ಞಯಾಗಾದಿಗಳಲ್ಲಿ ಹಿಂಸೆಗೆ ಅವಕಾಶವೇ ಇಲ್ಲ. ಆದರೆ ಅಶ್ವಮೇಧಯಾಗ ದಲ್ಲಿ ಕುದುರೆಯನ್ನು ಬಲಿಕೊಡುತ್ತಿದ್ದರಂತಲ್ಲಾ ? ಎಂದು ಕೇಳುವವರಿದ್ದಾರೆ. ಆದರೆ ಅಶ್ವಮೇಧಯಾಗದ ಸರಿಯಾದ ಅರ್ಥಮಾಡಿಕೊಳ್ಳದ ದುಶ್ಪರಿಣಾಮ ಇದು. ಸಂಸ್ಕೃತ ನಿಘಂಟಿನಲ್ಲಿ ಅರ್ಥ ಹುಡುಕಿದಾಗ ಆಭಾಸವಾಗುವ ಅವಕಾಶವಿದೆ. ಅಶ್ವ ಎಂದರೆ ಕುದುರೆ, ಮೇಧ ಎಂದರೆ ಬಲಿಕೊಡು ಎಂದಾಗಿಬಿಡುತ್ತದೆ.[ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಸಂಕ್ಷಿಪ್ತ ಕನ್ನಡ ನಿಘಂಟಿನ ಪುಟ ೭೯ ರಲ್ಲಿಅಶ್ವಮೇಧ= ಕುದುರೆಯನ್ನು ಬಲಿಕೊಡುವ ಒಂದು ಯಾಗವೆಂದು ಬರೆದಿದೆ] ವೇದದ ಪದಗಳ ಅರ್ಥವನ್ನು ಸಂಸ್ಕೃತ ನಿಘಂಟಿನಲ್ಲಿಹುಡುಕಿದರೆ ಇಂತಹ ಆಭಾಸ ವಾಗುತ್ತದೆ. ಯಜ್ಞ ಎಂದರೆ ಅಹಿಂಸೆ ಎಂದು ವೇದದಲ್ಲಿಯೇ ಹೇಳಿರುವಾಗ ಅಶ್ವಮೇಧ= ಕುದುರೆಯನ್ನುಬಲಿಕೊಡುವ ಒಂದು ಯಾಗವೆಂದು ಅರ್ಥ ಮಾಡಿಕೊಂಡರೆ ವೇದಕ್ಕೆ ನಾವು ಅಪಚಾರ ಮಾಡಿದಂತಲ್ಲವೇ?
ನಾವೀಗ ಯಾಸ್ಕರಾಚಾರ್ಯರ ನಿರುಕ್ತದಲ್ಲಿ ಇದರ ಅರ್ಥ ಹುಡುಕಿದಾಗ ನಮಗೆ ಸರಿಯಾದ ಅರ್ಥ ಸಿಗುತ್ತೆ. ಒಂದೊಂದೂಪದದನಿರ್ಮಾಣ ಹೇಗಾಯ್ತು ಎಂದು ಯಾಸ್ಕರಾಚಾರ್ಯರು ವಿವರಿಸುತ್ತಾರೆ. ಅಶ್ವ ಎಂಬ ಶಬ್ಧ ಯಾವ ಮೂಲದಿಂದ ಬಂತು? ಎಂದಾಗ ಅಶ್ಎಂಬ ಮೂಲ ಧಾತುವಿನಿಂದ ಅಶ್ವ ಪದ ಮೂಡಿಬಂದಿದೆ. ಅಶ್ ಎಂದರೆ ಭಕ್ಷಣೆ [ತಿನ್ನು], ಯಾವುದು ತಿನ್ನುತ್ತದೋಅದಕ್ಕೆ ಅಶ್ವ ವೆಂದುಹೆಸರು. ಇದನ್ನು ನಾವು ಶುದ್ಧ ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ನಮಗೆ ಸರಿಯಾಗಿ ಅರ್ಥವಾಗುತ್ತದೆ. ಮೂರು ರೀತಿಯಲ್ಲಿಅರ್ಥವನ್ನು ಹುಡುಕಬೇಕಾಗುತ್ತದೆ.೧]ರೂಢಿಯಲ್ಲಿರುವ ರೂಢಾರ್ಥ ೨] ಧಾತುವಿನಿಂದ ನಿರ್ಮಾಣವಾದ ಯೌಗಿಕಅರ್ಥ ೩]ಇವೆರಡರಬೆರೆಕೆಯಿಂದ ಕಂಡುಕೊಂಡದ್ದು ಯೋಗರೂಢಾರ್ಥ. ಯೋಗರೂಢ ಎಂದರೆ ಧಾತುವಿನಿಂದ ಬಂದ ಅರ್ಥದೊಡನೆ ರೂಢಿಯಿಂದ ಬಂದಅರ್ಥದ ಮಿತಿಯನ್ನು ಹಾಕಿಕೊಂಡು ರೂಢಾರ್ಥವೆನಿಸುತ್ತದೆ. ಆದರೆ ಕೇವಲ ಯೌಗಿಕ ಶಬ್ಧಕ್ಕೆ ಈಮಿತಿಯಿಲ್ಲ. ಒಂದು ಉಧಾಹರಣೆನೋಡೋಣ."ಪಂಕಜ" ಎಂಬ ಪದವನ್ನು ಯೌಗಿಕ ಅರ್ಥದಲ್ಲಿ ತೆಗೆದುಕೊಂಡಾಗ ಪಂಕ ಎಂದರೆಕೆಸರು ಜ ಎಂದರೆ ಹುಟ್ಟಿದ್ದು ಎಂದುಅರ್ಥೈಸಿ ಪಂಕಜ ಎಂದರೆ ಕಮಲ ಎನ್ನುತ್ತೇವೆ. ಆದರೆ ಕೆಸರಿನಲ್ಲಿ ಹುಟ್ಟುವ ಸೊಳ್ಳೆಗಳಿಗೆ ನಾವುಪಂಕಜ ಎಂದು ಕರೆಯುತ್ತೇವೆಯೇ? ಇಲ್ಲ. ಕೆಸರಿನಲ್ಲಿ ಸೊಳ್ಳೆ, ಹುಲ್ಲು, ಕಪ್ಪೆ ಯಾವುದು ಹುಟ್ಟಿದರೂ ಸಹ ರೂಢಿಯ ಬಲದಿಂದಕಮಲಕ್ಕೆ ಮಾತ್ರ ಪಂಕಜ ಕರೆಯುತ್ತೇವೆ.ಅಂದರೆರೂಢಿಯಬಲದಿಂದ ಕೆಸರಿನಲ್ಲಿ ಹುಟ್ಟುವ ಎಲ್ಲಾ ಕ್ರಿಮಿಕೀಟಗಳನ್ನು ಬಿಟ್ಟು ಕಮಲಕ್ಕೆಮಾತ್ರ ಪಂಕಜ ಎಂದು ಕರೆಯಲಾಗಿದೆ. ಇಲ್ಲಿ ಯೌಗಿಕಅರ್ಥವೂ ಇದೆ, ಆದರೆ ರೂಢಿಯಬಲದಿಂದ ಅದನ್ನು ಸಂಕುಚಿತಗೊಳಿಸಿಕೇವಲ ಕಮಲ ಎಂದು ಕರೆಯಲಾಗಿದೆ. ಇದುಯೋಗರೂಢಾರ್ಥಕ್ಕೆ ಉಧಾಹರಣೆ. ಈಗ ಅಶ್ವದ ಅರ್ಥ ನೋಡುವಾಗ ಅಶ್ವ ಎಂದರೆಯಾವುದು ತಿನ್ನುತ್ತದೋ ಅದು , ಎಂದಾಗಕುದುರೆಯು ದಾರಿಯನ್ನುತಿನ್ನುತ್ತದೆ ಅರ್ಥಾತ್ ಕಡಿಮೆ ಮಾಡುತ್ತದೆ , ಹಾಗಾಗಿದಾರಿಯನ್ನು ಕುದುರೆ, ವಾಹನ, ಇತ್ಯಾದಿ ಯಾವುದೇಕಡಿಮೆ ಮಾಡಿದರೂ ಅದನ್ನು ಸಂಕುಚಿತ ಗೊಳಿಸಿ ಅಶ್ವ ಎಂದರೆ ಕುದುರೆಎಂದು ಕರೆಯಲಾಯ್ತು. ಯಾಸ್ಕರು ಹೇಳುತ್ತಾರೆ....ಅಶ್ನಾತಿಅದ್ವಾನಂ ಇತಿ ಅಶ್ವ: , ಅದ್ವಾನ ಎಂದರೆ ರಸ್ತೆ, ಯಾವುದು ರಸ್ತೆಯನ್ನುತಿನ್ನುತ್ತದೋ ಅದು ಅಶ್ವ. ಅಂದರೆ ಕುದುರೆಯು ರಸ್ತೆಯನ್ನುತಿನ್ನುತ್ತದೆ, ಅಂದರೆ ಕ್ರಮಿಸಿ ಕಡಿಮೆ ಮಾಡಿಕೊಡುತ್ತದೆ ಆದ್ದರಿಂದ ಅಶ್ವಎಂದರೆ ಕುದುರೆ ಎಂದು ಅರ್ಥೈಸ ಬಹುದು. ಆದರೆ ಇಷ್ಟಕ್ಕೆನಿಲ್ಲುವಂತಿಲ್ಲ. ನಿಂತರೆ ಪೂರ್ಣ ಅರ್ಥ ವಾಗುವುದಿಲ್ಲ. ತಿನ್ನುವುದೆಲ್ಲವೂಅಶ್ವವೇ. ಅಂದರೆ ಯಾಸ್ಕರಾಚಾರ್ಯರುಹೇಳುತ್ತಾರೆ....ವೇದವನ್ನು ಅರ್ಥಮಾಡಿಕೊಳ್ಳುವಾಗ ಮೂಲ ಧಾತುವಿಗೆ ಹೋಗಬೇಕು, ಯಾವುದು ತಿನ್ನುತ್ತದೋ, ಯಾವುದುಗ್ರಹಿಸುತ್ತದೋ, ಅದು ಅಶ್ವ. ಅಂದರೆ ನಮ್ಮ ಪಂಚೇಂದ್ರಿಯಗಳು. ಕಣ್ಣು ದೃಷ್ಟಿಯನ್ನು, ಕಿವಿಶಬ್ಧವನ್ನು, ಚರ್ಮವು ಸ್ಪರ್ಷವನ್ನು, ನಾಲಿಗೆರುಚಿಯನ್ನು ಮತ್ತು ಮೂಗು ವಾಸನೆಯನ್ನು ಗ್ರಹಿಸುತ್ತವೆ. ಆದ್ದರಿಂದ ಅಶ್ವ ವೆಂದರೆ ನಮ್ಮಪಂಚೇಂದ್ರಿಯಗಳು. ಮೇಧ ಎಂದಾಗ ಒಂದುಅರ್ಥ ಬಲಿಕೊಡು ಎಂದಾದರೆ ಮೇಧೃ ಧಾತುವಿನ ಮತ್ತೊಂದು ಅರ್ಥ ಸಂಗಮೇ. ಅಂದರೆ ಒಟ್ಟುಗೂಡಿಸು. ಅಂದರೆ ಇಂದ್ರಿಯ ನಿಗ್ರಹಿಸುಎಂದರ್ಥ. ಅಂದರೆ ಅಶ್ವಮೇಧ ಯಾಗ ವೆಂದರೆ ನಿಂದ್ರಿಯ ನಿಗ್ರಹ ಮಾಡುವಯಜ್ಞ ಎಂದರ್ಥ. ಅಶ್ವಮೇಧ ಯಾಗದ ಮಂತ್ರಗಳಸರಿಯಾದ ಅರ್ಥವನ್ನು ತಿಳಿದುಕೊಂಡಾಗ ನಮ್ಮ ಇಂದ್ರಿಯ ನಿಗ್ರಹ ಮಾಡಲುಏನು ಮಾಡಬೇಕೆಂಬುದು ಅದರ ಸಾರ.
---------------------------------------------------------------------------------
ಯಜ್ಞ
ಯಜ್ಞ:[ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸದ ಆಯ್ದ ಭಾಗ] 
ಕೇವಲ ಸಮಿತ್ತನ್ನು ಹೋಮಕುಂಡಕ್ಕೆ ಹಾಕಿ ಸ್ವಾಹಾ, ಇದಂ ನಮಮ, ಎನ್ನುವುದಕ್ಕೇ ಯಜ್ಞದ ಅರ್ಥ ಮುಗಿದುಬಿಡುವುದಿಲ್ಲ. ಇದಕ್ಕೆ ಇನ್ನೂ ವಿಸ್ತಾರವಾದ ಅರ್ಥವಿದೆ.ಯಜ್ಞವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದು ಯಾವಧಾತುವಿನಂದ ಬಂತು ಅಲ್ಲಿಂದಲೇ ತಿಳಿಯಬೇಕು.ಆಗ ನಮಗೆ ಸರಿಯದ ಅರ್ಥ ಸಿಗುತ್ತದೆ.ನಾವು ವೇದಾಂಗಕ್ಕೆ ಹೋಗಿ ಆರ್ಶೇಯ ಕ್ರಮದಲ್ಲಿ ಅರ್ಥ ನೋಡುವುದು ಸರಿಯಾದ ಕ್ರಮ. ಯಜ್ಞ ಎನ್ನುವುದಕ್ಕೆ ಅರ್ಥ ಹುಡುಕಿದಾಗ -ಯಜ್ ದೇವಪೂಜಾ ಸಂಗತಿಕರಣ ದಾನೇಶು, ಇದು ಮೂಲದಲ್ಲಿರುವ ಧಾತು. ದೇವಪೂಜ, ಸಂಗತಿಕರಣ ಮತ್ತು ದಾನ ಎಂಬ ಮೂರು ಪದಗಳು ಇದರಿಂದ ಮೂಡುತ್ತವೆ. ಶತಪತಬ್ರಾಹ್ಮಣದಲ್ಲಿ ಹೇಳುತ್ತದೆ "ಯಜ್ಞೋವೈಶ್ರೇಷ್ಠತಮಂ ಕರ್ಮ" ಶ್ರೇಷ್ಠತಮ ಕರ್ಮ ಎಂದಾಗ [ಶ್ರೇಷ್ಠ-ಶ್ರೇಶ್ಠತರ-ಶ್ರೇಷ್ಠತಮ]ಅಂದರೆ ಅತ್ಯಂತಶ್ರೇಷ್ಠವಾದ ಕರ್ಮಗಳಿಗೆ ಯಜ್ಞ ಎಂದು ಅರ್ಥೈಸಲಾಗಿದೆ.ನಾವು ಮಾಡುವ ಆಲೋಚನೆಗಳು, ನಾವು ಆಡುವ ಮಾತುಗಳು, ನಾವು ಮಾಡುವ ಕೆಲಸ ಎಲ್ಲದರಿಂದಲೂ ನಾವು ಯಜ್ಞವನ್ನು ಮಾಡಲು ಸಾಧ್ಯವಿದೆ. ಕೇವಲ ಹೋಮಕುಂಡದ ಅಗ್ನಿಯಿಂದ ಮಾಡುವ ಯಜ್ಞವನ್ನಷ್ಟೇ ನಾವು ಯಜ್ಞ ಎಂದು ಭಾವಿಸಬೇಕಿಲ್ಲ. ನಾವು ಮಾಡುವ ಯಾವುದೇ ಕೆಲಸವನ್ನು ಶ್ರೇಷ್ಠತಮವಾಗಿ ಮಾಡಿದರೆ ಅದು ಯಜ್ಞ ಎನಿಸಿಕೊಳ್ಳುತ್ತದೆ. ನಾವು ಪುರೋಹಿತರಿಂದ ಯಜ್ಞಕುಂಡದ ಎದುರು ಮಾಡುವ ಹೋಮವನ್ನು ಮಾತ್ರವೇ ಯಜ್ಞ ವೆಂದುಭಾವಿಸುತ್ತೇವೆ ,ಆದರೆ ಇದೂ ಕೂಡ ಒಂದು ಯಜ್ಞವೇ ಹೊರತೂ ಯಜ್ಞ ವೆಂದರೆ ಇಷ್ಟೇ ಅಲ್ಲ. ನಾವು ಶ್ರೇಷ್ಠತಮವಾಗಿ ಮಾಡುವ ಪ್ರತಿಯೊಂದು ಕೆಲಸವೂ ಯಜ್ಞವೇ ಆಗಿದೆ.ಈ ಒಂದು ವಿಶಾಲವಾದ ಅರ್ಥವು ದೊರೆತಾಗ ನಮ್ಮ ಇಡೀ ಜೀವನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು.ನಾವು ಇಡೀ ದಿನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು.ನಾವು ಮಾಡುವ ಆಲೋಚನೆಗಳು ಇದಕ್ಕಿಂತ ಇನ್ನೂ ಶ್ರೇಷ್ಠತಮವಾಗಿ ಮಾಡಬಹುದೇ ಎಂದು ಯೋಚಿಸಿ ಮಾಡಿದಾಗ ಅದು ಯಜ್ಞವಾಗುತ್ತದೆ.ನಾವು ಆಡುವ ಮಾತು ಇನ್ನೂ ಶ್ರೇಷ್ಠತಮವಾಗಿ ಆದಬಹುದೇ ಎಂದು ಆಲೋಚಿಸಿ ಆಡಿದಾಗ ಅದೂ ಯಜ್ಞವೇ ಆಗುತ್ತದೆ.ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದೆ. ನಾವು ಅಡಿಗೆ ಮಾಡುವ ಕೆಲಸವೇ ಆಗಲೀ, ಕಸ ಗುಡಿಸುವ ಕೆಲಸವೇ ಆಗಲೀ, ಸೌದೆ ಒಡೆಯುವ ಕೆಲಸವೇ ಆಗಲೀ, ಇದಕ್ಕಿಂತ ಶ್ರೇಷ್ಠತಮವಾಗಿ ಮಾಡಿದೆ ನೆಂದರೆ ಅದು ಯಜ್ಞವೆನಿಸುತ್ತದೆ. ಅಂದರೆ ಇದಕ್ಕಿಂತ ಇನ್ನು ಚೆನ್ನಾಗಿ ಮಾಡಲು ಸಾಧ್ಯವೇ ಇಲ್ಲವೆನ್ನುವಂತೆ ಅತ್ಯಂತ ಶ್ರದ್ಧೆಯಿಂದ ಮಾಡಿದಾಗ ಅದು ಯಜ್ಞವೆನಿಸುತ್ತದೆ.ಶಾಲೆಯಲ್ಲಿ ಪಾಠಮಾಡುವಾಗ ಚೆನ್ನಾಗಿ ಪಾಠಮಾಡಿದೆನೆಂದರೆ ಅದು ಶ್ರೇಷ್ಠ. ಸಂಬಳ ಪಡೆಯುತ್ತೇನಾದ್ದರಿಂದ ಮಕ್ಕಳಿಗೆ ದ್ರೋಹವಾಗದಂತೆ ಪಾಠಮಾಡುತ್ತೇನೆಂದರೆ ಅದು ಶ್ರೇಷ್ಠತರ. ಸಂಬಳ ಬಾರದಿದ್ದರೂ ಚಿಂತೆಯಿಲ್ಲ ಮಕ್ಕಳ ಅಭ್ಯುದಯಕ್ಕಾಗಿನಾನು ಅತ್ಯಂತಶ್ರದ್ಧೆಯಿಂದ ಪಾಠಮಾಡುತ್ತೇನೆಂದರೆ ಅದುಶ್ರೇಷ್ಠತಮ. ಇದು ಎಲ್ಲಾ ಕೆಲಸಕ್ಕೂ ಅನ್ವಯ.ಶ್ರೇಷ್ಠತಮ ಕೆಲಸವು ಯಜ್ಞ ಎನಿಸಿಕೊಳ್ಳುತ್ತದೆ. ಪ್ರತಿಯೊಂದು ಮಾತಿನಲ್ಲೂ ಶ್ರೇಷ್ಠ ,ಶ್ರೇಷ್ಠತರ, ಶ್ರೇಷ್ಠತಮ ಎಂದು ಪರಿಗಣಿಸಲು ಸಾಧ್ಯವಿದೆ. ಮಾತಿನಲ್ಲಿ,ಆಲೋಚನೆಯಲ್ಲಿ, ಕೆಲಸದಲ್ಲಿ ಶ್ರೇಷ್ಠತಮವಾದಾಗ ಅವುಗಳೆಲ್ಲವೂ ಯಜ್ಞ ಎನಿಸಿಕೊಳ್ಳುತ್ತವೆ.ನಮ್ಮ ಇಡೀ ಜೀವನವು ಯಜ್ಞಮಯವಾದಾಗ ನಮಗೆ ಸಿಗುವ ಲಾಭವೂ ಅಷ್ಟೇ ವಿಶೇಷವಾಗಿರುತ್ತದೆ.ನಮಗೆ ಉತ್ತಮ ಆರೋಗ್ಯ , ಸುಖ, ಸಂತೋಷ, ನೆಮ್ಮದಿ ಎಲ್ಲಾ ಬೇಕಾದರೆ ನಮ್ಮ ಜೀವನ ಯಜ್ಞಮಯವಾಗಿರಬೇಕು.ಆಗ ಎಲ್ಲವೂ ತಾನೇ ತಾನಾಗಿ ಲಭ್ಯವಾಗುತದೆ.ವೇದವು ನಮಗೆ ಹೇಳುವ ಮಾರ್ಗ ಇದೇ ಆಗಿದೆ- "ನಾನ್ಯ ಪಂಥಾ ಅಯನಾಯ ವಿದ್ಯತೇ" ಇದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ. ಯಾರುಈ ಮಾರ್ಗವನ್ನು ಅರ್ಥಮಾಡಿಕೊಂಡು ಜೀವನ ಮಾಡುತ್ತಾರೋ ಅವರು ಇಲ್ಲೇ ಅಮೃತತ್ವವನ್ನು ಹೊಂದುತ್ತಾರೆ ಎಂದು ಹೇಳಿದೆ. ಅಮೃತತ್ವ ಎಂದರೇನು? ಮೃತ ಎಂದರೆ ಸಾವು , ಅಮೃತ ಎಂದರೆ ಸಾವಿಲ್ಲದಿರುವುದು.[ಇಲ್ಲಿ ಸುಧಾಕರ ಶರ್ಮರು ಮೃತ್ಯುವೆಂಬ ಪದವನ್ನು ಬಹುವಾಗಿ ವಿಶ್ಲೇಷಿಸಿದ್ದಾರೆ , ಅದನ್ನು ಇಲ್ಲಿ ಬಿಟ್ಟಿದ್ದೇನೆ] ಅಂದರೆ ಯಾರಿಗೂ ಸಾವು ತಪ್ಪಿದ್ದಲ್ಲವಾದರೂ ನಿಜವಾಗಿ ಮನುಷ್ಯನಿಗೆ ನಿಜವಾಗಿ ತೊಂದರೆ ಕೊಡುತ್ತಿರುವುದು ಸಾವಲ್ಲ, ಸಾವಿನಭಯ.ಯಾವಾಗ ಸಾವಿನಭಯ ಹೋಗುತ್ತದೆ, ಇನ್ಯಾವುದಕ್ಕೂ ಭಯ ಪಡುವ ಕಾರಣವೇ ಇಲ್ಲ.ಎಲ್ಲಾಭಯಗಳಿಗೂ ಮೂಲವೇ ಪ್ರಾಣಭಯ.ಆದ್ದರಿಂದ ಯಜ್ಞದ ಜ್ಞಾನದಿಂದ ಪ್ರಾಣಭಯದಿಂದ ದೂರವಾಗುತ್ತಾರೆ.ಯಾವಾಗ ಸಾವಿನಭಯವೇ ಇಲ್ಲ ಆಗ ಅಸತ್ಯ, ಅನ್ತ್ಯಾಯ, ಅಧರ್ಮಗಳಿಗೆ ಅಂಜದೆ ಸತ್ಯಮಾರ್ಗದಲ್ಲಿ ಅವರ ದಾರಿ ಸಾಗುತ್ತದೆ. 
-------------------------------------------------------------------------- 
ನನ್ನ ಮಾತು: 
ಯಜ್ಞದ ಈ ಪರಿಕಲ್ಪನೆ ಮೂಡಿದಾಗ ನಮ್ಮ ಸಮಾಜದ ಸ್ಥಿತಿ ಎಷ್ಟು ಭವ್ಯ ವಾಗಬಹುದು! 
ಸರ್ಕಾರಿ ಕಛೇರಿಯಲ್ಲಿನ ಒಬ್ಬ ನೌಕರ ತನ್ನ ಕರ್ತವ್ಯವನ್ನು ಶ್ರೇಷ್ಠತಮವಾಗಿ ನಿರ್ವಹಿಸಿದರೆ, ಬದುಕಿನ ಯಾವುದೇ ರಂಗದಲ್ಲಿರಲಿ ಆಯಾ ವ್ಯಕ್ತಿ ತನ್ನ ಕರ್ತವ್ಯವನ್ನುಶ್ರೇಷ್ಠತಮವಾಗಿ ನಿರ್ವಹಿಸಿದರೆ ನಮ್ಮ ದೇಶ ಸಮೃದ್ಧವಾಗಲು ಮತ್ತೇನು ಬೇಕು? 
ಒಂದು ಕುಟುಂಬದ ಎಲ್ಲಾ ಸದಸ್ಯರೂ ತಾವು ಮಾತನಾಡುವ ಮುಂಚೆ, ಆಲೋಚಿಸುವ ಮುಂಚೆ, ಕೆಲಸಮಾಡುವ ಮುಂಚೆ, ವೇದದ ಪರಿಕಲ್ಪನೆಯಲ್ಲಿ ಶ್ರೇಷ್ಠತಮವಾಗಿ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಿದರೆ ಅದು ಸುಖೀ ಕುಟುಂಬ ಆಗದಿರದೇ?

ಅಶ್ವಮೇಧ ಯಾಗ
ಅಶ್ವಮೇಧ ಯಾಗ: ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ.ಯಾವುದಕ್ಕೆ ನಿನ್ನೆ ನಾಳೆಗಳಿರುತ್ತದೆ ಎಂದರೆ ಯಾವುದುಶಾಶ್ವತ ವಲ್ಲವೋ ಅದಕ್ಕೆ ಇರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರವೆಂದು, ದೇಶಶಾಶ್ವತವೆಂದು, ನಶ್ವರವುಶಾಶ್ವತಕೆ ಮುಡಿಪಾಗಲೆಂದು" ಎಂಬ ಗೀತೆ ಕೇಳಿರುವೆ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ನಿರಂತರವಾಗಿರುವ ಭೂಮಿ ರಾಷ್ಟ್ರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು. 
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಅಂದರೆ ವೇದಕ್ಕೆ ಸರಿಯಾದ ಅರ್ಥವಿದೆ,ಆದರೆ ನಾವು ಸರಿಯಾಗಿ ಅರ್ಥೈಸದೆ ತಪ್ಪಾಗಿ ಅರ್ಥೈಸಿದ್ದೇವೆ.
ಗೋಮೇಧ: ಗೋಮೇಧ ಎಂದಾಕ್ಷಣ ಗೋವಿನ ಬಲಿ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಆದರೆ ಗೋ ಎಂದರೆ ಹಸು ಎಂದಷ್ಟೇ ಅಲ್ಲ. ಯಾಸ್ಕರ ಪ್ರಕಾರ ಗೋ ಎಂದರೆ " ಇಂದ್ರಿಯ " ಎಂದೂ ಅರ್ಥವಿದೆ." ವಾಕ್" ವಾಣಿ ಎಂದೂ ಅರ್ಥವಿದೆ.ಇಲ್ಲಿ ಗೋಮೇಧ ಎಂದರೆ "ವಾಕ್ ಸಂಯಮ" ಎಂದು ಅರ್ಥ. ಮಾತನ್ನು ನಿಯಂತ್ರಣದಲ್ಲಿಡು ಎಂದು ಅರ್ಥ. ಅಂದರೆ ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಎಂದು ಹೆಸರು.ಗೋಮೇಧಾ ಎಂದರೆ ಹಸುವನ್ನು ಬಲಿಕೊಡುವ ಯಜ್ಞವಲ್ಲ.ವೇದಗಳ ಮೂಲ ಸಿದ್ಧಾಂತವೇ ಅಹಿಂಸೆಯಾದ್ದರಿಂದ ಈ ಅರ್ಥಗಳು ನಾವು ಹುಡುಕಿದರೆ ಸಿಗುತ್ತವೆ.ಮಾತನ್ನು ಹೇಗೆ ಆಡಬೇಕೆಂದೂ ವೇದದಲ್ಲಿಯೇ ಹೇಳಿದೆ. "ಹಿಟ್ಟನ್ನು ಜರಡಿ ಆಡಿದಂತೆ ಜರಡಿಯಾಡಿ ಮಾತನಾಡು" ಎಂದು ಹೇಳಿದೆ. ಹಿಟ್ಟನ್ನು ಜರಡಿಯಾಡಿ ಕಸ ಕಡ್ಡಿ ತೆಗೆದು ನಂತರವಷ್ಟೇ ರೊಟ್ಟಿ ಮಾಡುವುದಿಲ್ಲವೇ ಹಾಗೆ ಮಾತನ್ನು ಆಡುವ ಮುಂಚೆ ಜರಡಿಯಾಡಿ ಮಾತನಾಡು. ಅಂದರೆ ಮಾತನಾಡುವ ಮುನ್ನ ನಾವಾಡುವ ಮಾತು ಸತ್ಯವೇ, ಎಂದು ತಿಳಿದಿರಬೇಕು.ಇದು ಮೊದಲನೆಯ ಹಂತ. ಎರಡನೆಯದು "ಪ್ರಿಯವೇ" . ನಾನಾಡುವ ಮಾತು ಬೇರೆಯವರಲ್ಲಿ ದ್ವೇಶ ಉಂಟುಮಾಡುತ್ತದೋ, ಉದ್ವೇಗ ಉಂಟುಮಾಡುತ್ತದೋ, ಅಥವಾ ಪ್ರಿಯವಾಗುತ್ತದೋ , ಹಿತವಾಗುತ್ತದೋ ಎಂಬುದನ್ನು ಆಲೋಚಿಸಿ ನಂತರ ನಮ್ಮ ಬಾಯಿಂದ ಮಾತು ಹೊರಬರಬೇಕು. ಈಬಗ್ಗೆ ನಾವು ಯೋಚಿಸಿದ್ದೇವೆಯೇ? 
ಈ ಒಂದು ಮಾತಿನ ನಿಯಂತ್ರಣವಿದ್ದರೆ ಮನೆಯಲ್ಲಿ, ಸಮಾಜದಲ್ಲಿ, ದೇಶದಲ್ಲಿ ಅಶಾಂತಿ ಮೂಡುವುದೇ ಇಲ್ಲ. ಮಾತನಾಡುವ ಮುಂಚೆ ಅದು ಸತ್ಯವೇ,ಪ್ರಿಯವೇ, ಹಿತವೇ ಎಂದು ಆಲೋಚಿಸಿ ಮಾತನಾಡಿದರೆ ಸಮಾಜದಲ್ಲಿ ಸಾಮರಸ್ಯಕ್ಕೆ ಬಂಗ ಬರುವುದಿಲ್ಲ.ಸತ್ಯವೂ, ಪ್ರಿಯವೂ, ಹಿತವೂಆದ ಮಾತನ್ನಾಡಿದರೆ ಯಾರಿಗೆ ಇಷ್ಟವಾಗುವುದಿಲ್ಲ? ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿವಾಚಿ"ಮಂಗಳಕರವಾದ ಸಂಪತ್ತು ,ಶ್ರೇಯಸ್ಕರವಾದ ಹಿತ ಅಂತಹಾ ಮಾತಿನಲ್ಲಿ ನೆಲೆಗೊಂಡಿದೆ. ಬ್ಯಾಂಕಿನಲ್ಲಿರುವ ಡಿಪಾಸಿಟ್ ನಮ್ಮನ್ನು ಕಾಪಾಡುವುದಿಲ್ಲ. ನಿಜವಾದ ಸಂಪತ್ತು ನಮ್ಮ ಮಾತಿನಲ್ಲಿದೆ. ಮಾತು ಸರಿಯಾಗಿದ್ದಲ್ಲಿ ಸಂಪತ್ತನ್ನು ಗಳಿಸುವುದು ಕಷ್ಟವಿಲ್ಲ.ಆದರೆ ಮಾತು ಸರಿಯಿಲ್ಲದಿದ್ದಾಗ ಇರುವ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುತ್ತದೆ.ಹೀಗೆ ಜರಡಿಯಿಂದಆಡಿಸಿ ಮಾತನಾಡಬೇಕು, ಇದನ್ನು ವಾಕ್ ಸಂಯಮ ಎನ್ನುವರು. ವಾಕ್ ಸಂಯಮ ಯಜ್ಞಕ್ಕೆ ಗೋಮೇಧಾ ಯಜ್ಞ ಎಂದುಕರೆದರು.ಆದರೆ ಅದನ್ನು ಹಸುವನ್ನು ಬಲಿಕೊಡುವ ಒಂದು ಯಜ್ಞಎಂದು ತಪ್ಪಾಗಿ ಅರ್ಥೈಸಿ ಹಸುವನ್ನು ಬಲಿಕೊಟ್ಟು ಅದರ ವಪೆಯನ್ನು ಯಜ್ಞಕ್ಕೆ ಹಾಕಿ, ಇನ್ನು ಯಜ್ಞಕ್ಕೆ ಗೋಬಲಿ ಕೊಟ್ಟಮೇಲೆ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನು, ಎಂದೆಣಿಸಿ ಮಾಂಸವನ್ನೂ ಭಕ್ಷಿಸಿದರು.ಇದಕ್ಕಿಂತ ಮೂರ್ಖತನ ಬೇರೊಂದಿದೆಯೇ? ಇಂತಾ ಅನರ್ಥ ಎಲ್ಲಿಯವರೆಗೆ ಬೆಳೆದಿದೆ ಎಂದರೆ "ಗೋಘ್ನ" ಎಂಬ ಮಾತಿದೆ. ಇದಕ್ಕೆ ಏನು ಅರ್ಥೈಸಿದ್ದಾರೆಂದರೆ ಮನೆಗೆ ಬಂದ ಅಥಿತಿಗಳಿಗೆ ಊಟದಲ್ಲಿ ಗೋಮಾಂಸ ಬಡಿಸು. ಗೋಘ್ನ ಎನ್ನುವುದಕ್ಕೆ ಇನ್ನೊಂದು ಅರ್ಥ ಗೋವಿನ ಉತ್ಪತ್ತಿ , ಎಂದರೆ ಹಾಲು ಮೊಸರು, ತುಪ್ಪ ಬಡಿಸಿ ಸತ್ಜರಿಸು ಎಂದು ಅರ್ಥೈಸುವ ಬದಲು ಗೋಮಾಂಸ ಬಡಿಸು ಎಂದು ಅರ್ಥೈಸಿದರು! 
ಅಥಿತಿಯನ್ನು ಗೋವಿನಿಂದ ಉಪಚರಿಸಬೇಕೆಂದರೆ ಗೋ ಎಂದರೆ ವಾಕ್ ಎಂತಲೂ ಅರ್ಥವಿರುವುದರಿಂದ ಅಥಿತಿಯನ್ನು ಒಳ್ಳೆಯ ಹಿತವಾದ ಮಾತುಗಳಿಂದ ಉಪಚರಿಸು ಎಂದರ್ಥವಾಗುತ್ತದೆ. ದೊಡ್ದ ದೊಡ್ಡ ವಿಸ್ವಾಂಸರುಗಳೂ ಸಹ ಇದನ್ನು ತಪ್ಪು ತಪ್ಪಾಗಿ ಅರ್ಥೈಸಿದ್ದರ ಪರಿಣಾಮ ಬಹಳ ಅನರ್ಥಗಳು ಸಂಭವಿಸಿವೆ, ವೇದದ ಮುಖಕ್ಕೆ ಮಸಿ ಬಳಿಯುವಂತಹ ಕೆಲಸವಾಗಿದೆ. ಅಂದರೆ ಒಂದೊಂದುಶಬ್ಧವನ್ನೂ ಅರ್ಥಮಾಡಿಕೊಳ್ಳುವಾಗ ಮೂಲ ಸಿದ್ಧಾಂತವನ್ನು ಮರೆತಿದ್ದರಿಂದ ಇಂತಹಾ ಅನರ್ಥಗಳಾಗಿವೆ. ಅಂದರೆ ಮೂಲ ಸಿದ್ಧಾಂತವೇನು? ಯಜ್ಞವೆಂದರೆ ಅಹಿಂಸೆ. ಅದನ್ನೇ ಮರೆತು ಅರ್ಥಹುಡುಕಿದ್ದರಿಂದ ಬಹಳ ಅನರ್ಥಗಳು ಘಟಿಸಿರುವುದು ಸುಳ್ಳಲ್ಲ.


Saturday, February 25, 2012

`ಧರ್ಮ'ದ ನೆಲೆಗಟ್ಟಲ್ಲಿ `ಆಶ್ವಮೇಧ' ನಿತ್ಯವೂ ನಡೆಯಬೇಕು!

C±Àé ªÉÄÃzsÀ                                 

``zsÀªÀÄð''zÀ £É¯ÉUÀlÖ°è ``C±Àé ªÉÄÃzsÀ'' ¤vÀåªÀÇ £ÀqÉAiÀĨÉÃPÀÄ!

ºÁ¸À£À ¸À«ÄÃ¥ÀzÀ zÉÆqÀØ¥ÀÄgÀ ²æà ¸ÀªÀÄxÀð gÁªÀiÁ±ÀæªÀÄzÀ ¸ÁPÉÃvÀ¥ÀÄgÀzÀ°è 2012 ¥sÉ. 29 jAzÀ ªÀiÁ. 6gÀªÀgÉUÉ `¸ÁAPÉÃwPÀ C±Àé ªÉÄÃzsÀ AiÀiÁUÀ'ªÉÇAzÀÄ PÉÆÃmÁåAvÀgÀ gÀÆ. ªÉZÀÑzÀ°è £ÀqÉAiÀÄÄwÛzÉ; EzÀgÀ OavÀåzÀ PÀÄjvÀÄ ¸ÁPÀµÀÄÖ ZÀZÉðUÀ¼ÁUÀÄwÛªÉ. EzÉ®èQÌAvÀ ªÉÆzÀ®Ä `zsÀªÀÄð' ªÀÄvÀÄÛ `C±Àé ªÉÄÃzsÀ'zÀ ¤dªÁzÀ CxÀð w½AiÀĨÉÃPÀÄ; F ¤dªÁzÀ CxÀðPÉÌ C£ÀĸÁgÀªÁV CzÀÄ C£ÀĵÁ×£ÀªÁUÀÄwÛzÉAiÉÆà CxÀªÁ §jà ``CxÀð''(ºÀt) ªÀ£ÀÄß C£ÀĸÀj¹zÀ C£ÀxÀðªÉÇà JA§ÄzÀgÀ ªÉÄÃ¯É EzÀgÀ OavÀå C£ËavÀåUÀ¼À ¤zsÁðgÀPÉÌ §gÀ§ºÀÄzÀÄ!
C±Àé ªÉÄÃzsÀzÀ ¤dªÁzÀ CxÀð w½zÀÄPÉƼÀÄîªÀ ªÀÄÄ£Àß, ¥Àæ¸ÀÄÛvÀ ¨sÁgÀwÃAiÀÄ ¥ÀgÀA¥ÀgÉAiÀÄ°è ªÉÃzÉÆÃ¥À¤µÀvÀÄÛUÀ¼À ºÉ¸Àj£À°è ¸ÁV §A¢gÀĪÀ vÀ¥ÀÄà PÀ®à£ÉUÀ¼ÀÄ, ¥ÀæQë¥ÀÛUÀ¼ÀÄ, ªÉÊ¥ÀjÃvÀåUÀ¼ÀÄ, CeÁÕ£À ºÁUÀÆ C«ªÉÃPÀzÀ DZÀgÀuÉUÀ¼À PÀÄjvÀÄ ¸ÀAQë¥ÀÛªÁVAiÀiÁzÀgÀÆ w½zÀÄPÉƼÀÄîªÀÅzÀÄ C¤ªÁAiÀÄð. PÀ¼ÀAPÀUÀ¼À£ÀßµÉÖà »rzÀÄ dUÁÎqÀÄvÁÛ ªÀÄÆ® ¹zÁÞAvÀ ºÁUÀÆ ¸ÀvÀåUÀ¼À£ÀÄß ªÀÄgÉvÀgÉ ZÀZÉð ºÁ¢ vÀ¥ÀÄàvÀÛzÉ; «vÀAqÀ ªÁzÀªÀÇ DUÀÄvÀÛzÉ.
ªÀÄÆ® ªÉÃzÀUÀ¼À°è£À ªÀÄAvÀæUÀ¼À£Éßà G¯ÉèÃT¸ÀÄvÁÛ ªÉÃzÁzsÁå¬Ä ²æà ¸ÀÄzsÁPÀgÀ ±ÀªÀÄð CªÀgÀÄ ¤ÃrgÀĪÀ «zÀévÀÆàtð G¥À£Áå¸ÀUÀ¼À DzsÁgÀ ªÉÄÃ¯É F ¸ÀvÀå ¸ÀAUÀwUÀ¼À£ÀÄß E°è G¯ÉèÃT¸ÀÄwÛzÉÝãÉ:
1) `ªÉÃzÀ' JAzÀgÉ `eÁÕ£À'. dUÀwÛ£À°è ªÀÄ£ÀĵÀå ºÉÃUÉ §zÀÄPÀ¨ÉÃPÉA§ÄzÀPÉÌ ªÀiÁUÀð ¸ÀÆaAiÀiÁV ¸ÁªÀðPÁ°PÀ ¤vÀå ¸ÀvÀåUÀ¼À£ÀÄß ªÀiÁvÀæ F ZÀvÀĪÉÃðzÀUÀ¼ÀÄ ¥Àæ¸ÀÄÛvÀ¥Àr¸ÀÄvÀÛªÉ. `ªÀÄ£ÀÄPÀÄ®zÀ ¸ÀA«zsÁ£À' J¤¹zÀ F ªÉÃzÀUÀ¼ÀÄ ¸ÀvÀå-C»A¸É ¹zÁÞAvÀzÀ vÀ¼ÀºÀ¢ ºÉÆA¢ªÉ. DgÀÄ ªÉÃzÁAUÀUÀ¼À ¸À»vÀ CvÀåAvÀ ¸ÀĨsÀzÀæªÁzÀ ¢UÀâAzsÀ£À ºÉÆA¢gÀĪÀÅzÀjAzÀ ªÉÃzÀUÀ¼À£ÀÄß wgÀÄZÀ®Ä, ¥ÀæQë¥ÀÛUÉƽ¸À®Ä, CªÀÅUÀ¼À°è ``PÉÊAiÀiÁår¸À®Ä'' FªÀgÉUÀÆ ¸ÁzsÀåªÁV®è; DzÀÝjAzÀ¯Éà `ªÉÃzÀ ªÁPÀå' JA§ £ÁtÄÚr ºÀÄnÖPÉÆArgÀĪÀÅzÀÄ! ±ÀvÀ-±ÀvÀªÀiÁ£ÀUÀ¼ÀµÀÄÖ »A¢£À gÀZÀ£ÉUÀ¼ÁVgÀĪÀÅzÀjAzÀ EªÀÅUÀ¼À PÁ®ªÀiÁ£À E£ÀÆß RavÀ¥ÀnÖ®è. EzÀjAzÁV C£Á¢; ¸À£ÁvÀ£À J¤¹PÉÆArªÉ!
2) G½zÀ J®è jÃwAiÀÄ ¥ÀÄgÁtUÀ¼ÀÄ, ¸ÀäøwUÀ¼ÀÄ, ±Á¸ÀÛçUÀ¼ÀÄ, DUÀªÀÄUÀ¼ÀÄ, «Äw «ÄÃjzÀ zÉêÀgÀÄUÀ¼ÀÄ, zÉêÀvÁZÀð£É, C¥ÀgÀ PÀªÀÄð (±ÁæzÀÞ), eÉÆåÃwµÀå, ªÁ¸ÀÄÛ, zsÁ«ÄðPÀ DZÀgÀuÉ, ¥Áæt §°, C»A¸É, ªÁªÀiÁZÁgÀ (ªÀiÁl) EvÁå¢UÀ¼É®èªÀÇ ªÉÃzÉÆÃ¥À¤µÀvÀÄÛUÀ¼À £ÀAvÀgÀ ºÀÄnÖPÉÆAqÀªÀÅUÀ¼ÁVªÉ. PÁ® ¥ÀæªÁºÀPÉÌ ¹QÌ DAiÀiÁ PÁ®PÉÌ C£ÀÄUÀÄtªÁV ¥ÀjªÀvÀð£ÉUÉƼÀÄîvÁÛ, FUÀ ªÉÃzÉÆÃ¥À¤µÀvÀÄÛUÀ¼À ºÉ¸ÀgÀ°è ¥ÀæZÀ°vÀ«gÀĪÀ EªÉ®èªÀÇ §ºÀÄvÉÃPÀ ªÉÃzÀ «gÀÄzÀÞ, ¥ÀæQë¥ÀÛ ºÁUÀÆ CªÉÊeÁÕ¤PÀ!
3) PÁ® ¥ÀæªÁºÀzÀ°è DAiÀiÁ ¸ÀAzÀ¨sÀð, CeÁÕ£À, C«ªÉÃPÀzÀ ¥sÀ®ªÁV ªÀÄÆ® ¹zÁÞAvÀªÀ£Éßà PÀqÉUÀt¸ÀÄvÁÛ, ªÉÃzÀUÀ¼À PÀÄjvÀÄ ¥Á±ÁÑvÀå «zÁéA¸ÀgÀÄ ªÀiÁrzÀ vÀPÀð, PÀÄvÀPÀð, HºÁ¥ÉÆúÀUÀ½UÉ ªÀiÁ£ÀåvÉ ¤ÃqÀÄvÁÛ §AzÀ PÁgÀt ªÉÃzÀ ªÀÄAvÀæUÀ½UÉ `C¥ÁxÀð'UÀ¼ÀÄ DgÉÆæ¸À®àlÖªÀÅ. ±ÀvÀªÀiÁ£ÀUÀ½AzÀ®Æ »ÃUÉ wgÀÄZÀ®àlÖ vÀ¥ÀÄà PÀ®à£ÉUÀ¼ÀÄ ªÁå¥ÀPÀªÁV ºÀgÀrzÀ ¥ÀjuÁªÀĪÁVAiÉÄà EA¢£À ZÁvÀĪÀðtð, C¸Ààø±ÀåvÉ, eÁwÃAiÀÄvÉ, EvÁå¢ ªÀiÁ£ÀªÀ «gÉÆâü ¦qÀÄUÀÄUÀ¼ÀÄ DªÀj¹ªÉ.
4) FV£À zÉêÀvÁZÀð£É, ªÀævÀUÀ¼ÀÄ, ¥ÀÆeÉ, ¥ÀÄ£À¸ÁÌgÀ ºÁUÀÆ C¯Éè¯Áè ºÉüÀĪÀ ªÀÄAvÀæUÀ¼ÀÄ AiÀiÁªÀŪÀÇ ¸ÀºÀ ªÉÃzÀ ªÀÄAvÀæUÀ¼À®è! CªÉ®è DUÀªÀÄ ±Á¸ÀÛçUÀ¼À°è£À (ªÉÊSÁ£À¸À EvÁå¢) ªÀÄAvÀæUÀ¼ÁVªÉ; DzÀgÀÆ C®è°è, £ÀqÀÄ £ÀqÀÄªÉ ªÀÄÆ® ªÉÃzÀ ªÀÄAvÀæUÀ¼ÀÄ ¸ÀºÀ EtÄPÀÄvÀÛªÉ (D¥ÉÆûµÁ× ªÀÄAiÉÆèsÀĪÀ¸ÁÜ£À.....EvÁå¢)! ªÉÃzÀ vÀ£ÀßzÉà DzÀ `ªÉÃzÀ ¨sÁµÉ'AiÀÄ°èzÉAiÉÄà ºÉÆgÀvÀÄ, ¸ÀA¸ÀÌøvÀzÀ°è®è! ªÉÃzÀ ¨sÁµÉAiÀÄ ¥Àæ¨sÁªÀ¢AzÀ¯Éà ¸ÀA¸ÀÌøvÀ £ÀAvÀgÀ ºÀÄnÖPÉÆArvÀÄ. E£ÀÄß,. ªÉÃzÀUÀ¼À°è£À AiÀÄdÕ AiÀiÁUÁ¢UÀ¼À DZÀgÀuÉ «zsÁ£ÀUÀ¼ÀAvÀÆ §ºÀÄvÉÃPÀ wgÀÄZÀ®ànÖgÀĪÀÅzÀjAzÀ C¥Àæ¸ÀÄÛvÀªÁVªÉ.
5) ±ÀvÀªÀiÁ£ÀUÀ¼ÀµÀÄÖ PÁ® UÀt£É £ÀqÀÄªÉ EµÉÖ¯Áè C£ÁºÀÄvÀUÀ¼ÀÄ AiÀiÁªÁUÀ ¸ÀA¨sÀ«¹zÀªÀÅ? AiÀiÁgÀÄ ªÀiÁrzÀÄÝ? KPÉ ªÀiÁrzÀÄÝ? ºÉÃUÁ¬ÄvÀÄ? JA©vÁå¢ ¥Àæ±ÉßUÀ½UÉ ¸ÀàµÀÖ GvÀÛgÀ ¹UÀĪÀÅzÀÄ CµÀÄÖ ¸ÀÄ®¨sÀ«®è! KPÉAzÀgÉ EwºÁ¸ÀPÀÆÌ Ew«ÄwUÀ½ªÉ. ªÉÆUÀ®jUÀÆ »AzÉ DVgÀ§ºÀÄzÁzÀ ¥ÀgÀQÃAiÀÄgÀ zÁ½UÀ¼ÀÄ, CzÀPÀÆÌ »A¢£À ¨sÁgÀvÀzÀ ¨sËUÉÆýPÀ ºÁUÀÆ ¸ÁªÀiÁfPÀ ¥Àj¹Üw, ¥ÀgÀQÃAiÀÄgÀ zÁ½UÀ¼À £ÀAvÀgÀzÀ ¸ÁªÀiÁfPÀ ¥Àj¹Üw EvÁå¢UÀ¼À£Éß®è MªÉÄä vÀ¯ÉUÉ vÀAzÀÄPÉÆAqÀÄ F feÁÕ¸ÉUÉ GvÀÛgÀ ºÀÄqÀÄPÀÄvÁÛ ºÉÆÃzÀgÀÆ ¸ÀºÀ, `PÀtÄÚ PÀnÖPÉÆAqÀÄ PÀvÀÛ®°è PÀj ¨ÉPÀÄÌ' ºÀÄqÀÄQzÀAvÉAiÉÄÃ' ¸Àj! ªÉÄîÌAqÀ J®è «µÀAiÀÄUÀ¼À §UÉÎ ¥ÀævÉåÃPÀªÁV «µÀAiÀĪÁgÀÄ ¯ÉÃR£ÀUÀ¼À gÁ²AiÀÄ£Éßà ¸ÀȶָÀ§ºÀÄzÀÄ; £Á¤°è J®èªÀ£ÀÆß ¸ÀAQë¥ÀÛªÁV G¯ÉèÃT¸ÀÄwÛzÉÝÃ£É CµÉÖ.

F J®è »£É߯ÉAiÀÄ°è ªÉÄîÌAqÀ PÀ¸ÀªÀ£Éß®è w¥ÉàUÉ J¸ÉzÀÄ, ªÀÄÆ® ªÉÃzÀUÀ¼À°è `C±Àé ªÉÄÃzsÀ' ºÁUÀÆ `zsÀªÀÄð'UÀ½UÉ EgÀĪÀ ¤dªÁzÀ CxÀðUÀ¼ÀvÀÛ UÀªÀÄ£À ºÀj¸ÉÆÃt:
`C±ï' JA§ ªÀÄÆ® zsÁvÀÄ«¤AzÀ C±Àé ¥ÀzÀ ¤µÀàwÛAiÀiÁVzÉ. ªÉÃzÁAUÀªÁzÀ `¤gÀÄPÀÛ' (ªÉÃzÀUÀ½UÉà «ÄøÀ¯ÁzÀ ¤WÀAlÄ) zÀ°è AiÀiÁ¸ÀÌgÀÄ EzÀPÉÌ 2 CxÀðUÀ¼À£ÀÄß ¤ÃrzÁÝgÉ. DzsÁåwäPÀªÁV ºÉüÀ¨ÉÃPÉAzÀgÉ, AiÀiÁªÀÅzÀÄ ªÀÄÄAzÀÄ ªÀÄÄAzÀPÉÌ £ÀqɸÀÄvÀÛzÉAiÉÆà CzÀPÉÌ C±Àé J£ÀÄßvÁÛgÉ. D CxÀðzÀ°è £ÀªÀÄä£ÀÄß AiÀiÁªÀÅzÀÄ ªÀÄÄAzÀÄ ªÀÄÄAzÉ PÀgÉzÉÆAiÀÄåvÀÛªÉAiÉÆà CªÉ®èªÀÇ `C±Àé'ªÉà DUÀÄvÀÛzÉ; DzÀgÉ ¨sÁµÁ ¥ÀæAiÉÆÃUÀzÀ°è ªÀiÁvÀæ ¸ÀA¸ÀÌøvÀ ¤WÀAlÄ«£À°è EzÀPÉÌ `PÀÄzÀÄgÉ' JA§ ¸ÁªÀiÁ£Àå CxÀð PÀ°à¸À¯ÁVzÉ. ªÉÃzÀUÀ¼À ªÀÄÆ® ¹zÁÞAvÀzÀ DzsÁgÀzÀ ªÉÄÃ¯É £ÉÆÃrzÁUÀ ªÀiÁ£ÀªÀ fëAiÀÄ£ÀÄß ªÀÄÄAzÀÄ ªÀÄÄAzÀPÉÌ PÀgÉzÉÆAiÀÄÄåªÀ ¥ÀAZÉÃA¢æAiÀÄUÀ½UÉ C±Àé J£ÀÄßvÉÛêÉ! CzÉà jÃw AiÀiÁªÀÅzÀPÉÌ `£Á¼É'UÀ½®èªÉÇà CzÀPÉÌ `C±Àé' J£ÀÄßvÉÛêÉ. £Á¼ÉUÀ½®è JAzÀ ªÉÄÃ¯É CzÀPÉÌ `¤£Éß'UÀ¼ÀÆ E®è; CAzÀgÉ AiÀiÁªÀÅzÀÄ ¤gÀAvÀgÀªÉÇÃ; ±Á±ÀévÀªÉÇà CzÀPÉÌ C±Àé J£ÀÄßvÉÛêÉ. F ±ÀjÃgÀ EAzÀÄ EgÀÄvÀÛzÉ; £Á¼É ºÉÆÃUÀÄvÀÛzÉ; DzÀgÉ JµÉÖà ±ÀjÃgÀUÀ¼À£ÀÄß ¥ÀqÉzÀgÀÆ CzÀgÉƼÀV£À `DvÀä' ªÀiÁvÀæ ±Á±ÀévÀ; »ÃUÁV DvÀäPÉ C±Àé J£À߯ÁUÀÄvÀÛzÉ!
CzÉà jÃw, gÁµÀÖçPÀÆÌ `C±Àé' J£À߯ÁUÀÄvÀÛzÉ. gÁµÀÖçzÀ°è ¥ÀæeÉUÀ¼ÀÄ ºÀÄlÄÖvÀÛ¯Éà EgÀÄvÁÛgÉ; ¸ÁAiÀÄÄvÀÛ¯Éà EgÀÄvÁÛgÉ; EAzÀÄ EzÀÄÝ £Á¼É ºÉÆÃUÀÄvÁÛgÉ; DzÀgÉ gÁµÀÖç ªÀiÁvÀæ EzÉÝà EgÀÄvÀÛzÉ. »ÃUÁV, ¤gÀÄPÀÛzÀ°è `C±ÀéA Ew gÁµÀÖçB' JAzÀÄ w½¸À¯ÁVzÉ! `ªÉÄÃzsÀ' ±À§ÝPÉÌ `MlÄÖUÀÆr¸ÀÄ' JA§ CxÀð«zÉ. DzÀgÉ AiÀiÁªÀÅzÉÆà PÁ®zÀ°è; AiÀiÁªÀÅzÉÆà ¸ÀAzÀ¨sÀðzÀ°è ¸ÀA¸ÀÌøvÀ ¤WÀAlÄ DzsÀj¹, C±Àé JAzÀgÉ PÀÄzÀÄgÉ; ªÉÄÃzsÀ JAzÀgÉ PÀvÀÛj¸ÀÄ- CAzÀgÉ `PÀÄzÀÄgÉ vÀAzÀÄ PÀvÀÛj¸ÀÄ'ªÀÅzÀ£ÀÄß C±ÀéªÉÄÃzsÀ JA§ÄzÁV ¸ÀªÉÃð ¸ÁªÀiÁ£Àå CxÀð PÀ°à¸À¯Á¬ÄvÀÄ. F CxÀðªÀ£ÀÄß §®ªÁV C¦àPÉÆAqÉà gÁd ªÀĺÁgÁdgÀÄ vÀªÀÄä ¸ÁéxÀð §Ä¢ÞAiÀÄ ¸ÁªÀiÁædå «¸ÀÛgÀuÉ ªÀĺÀvÁéPÁAPÉëUÁV C±Àé ªÉÄÃzsÀ AiÀiÁUÀªÀ£ÀÄß CzÀgÀ ¸ÁªÀiÁ£Àå ±À¨ÁÝxÀðzÀAvÉAiÉÄà C£ÀĵÁ×£ÀUÉƽ¸ÀÄvÁÛ §AzÀgÀÄ; CzÉà ¤dªÉAzÀÄ £ÁªÀÇ £ÀA©zɪÀÅ! ªÉÃzÀ ±À§ÝªÉÇAzÀPÉÌ C¥ÁxÀð PÀ°à¹zÀgÉ K£ÉãÀÄ C£ÁºÀÄvÀUÀ¼ÁUÀÄvÀÛªÉ JA§ÄzÀPÉÌ EzÉÆAzÀÄ ¤zÀ±Àð£À ¸ÁPÀÄ; EAxÀªÀÅ ¨ÉÃPÁzÀ¶ÖªÉ. CªÉ®èzÀgÀ zÀĵÀàjuÁªÀĪÀ£ÀÄß ±ÀvÀªÀiÁ£ÀUÀ¼À £ÀAvÀgÀªÀÇ £ÁªÀÅ C£ÀĨsÀ«¸ÀÄwÛzÉÝêÉ!
ªÉÃzÀUÀ¼À ªÀÄÆ® ¹zÁÞAvÀ C»A¸É JA§ »£É߯ÉAiÀÄ®Æè ¥ÀgÁªÀIJð¹: GzÁ: `AiÀÄdÕ' ±À§ÝPÉÌ E£ÉÆßAzÀÄ ¥ÀgÁåAiÀÄ ¥ÀzÀ `CzsÀégÀ'. (zsÀégÀ JAzÀgÉ »A¸É); CzsÀégÀ JAzÀgÉ C»A¸É; ºÁVzÀÝ ªÉÄÃ¯É AiÀÄdÕ AiÀiÁUÁ¢UÀ¼À°è ¥Áæt §°AiÀÄ ªÀiÁvÉ°è §AvÀÄ!? ªÉÄîÌAqÀ ¤eÁxÀðUÀ¼À£ÀÄß »rzÀÄ FUÀ MªÉÄä AiÉÆÃa¹! £ÀªÀÄä£ÀÄß CqÀØ zÁjAiÀÄ°è ªÀÄÄ£ÀßqɸÀĪÀ ¥ÀAZÉÃA¢æAiÀÄUÀ¼À£ÀÄß MnÖUÉà PÀnÖlÄÖ ¤AiÀÄAvÀætzÀ°èqÀĪÀ DvÀä AiÀÄdÕªÉà C±ÀéªÉÄÃzsÀ! CzÉà jÃw gÁµÀÖçªÀ£ÀÄß MUÀÆÎr¸À®Ä ªÀiÁqÀĪÀ AiÀiÁªÀÅzÉà PÁAiÀÄðªÀÇ C±ÀéªÉÄÃzsÀªÉÃ!! F jÃwAiÀiÁV `C±Àé ªÉÄÃzsÀ'PÉÌ MAzÀÄ WÀ£À, UÀA©üÃgÀ ºÁUÀÆ GzÁvÀÛ CxÀð«zÉ. F jÃwAiÀiÁV dUÀwÛ£À ¸ÀªÀðgÀÆ ¤vÀåªÀÇ C±ÀéªÉÄÃzsÀ ªÀiÁrzÀgÉ!? MªÉÄä PÀ°à¹PÉƽî; CzÉÆAzÀÄ `¸ÀĪÀtð AiÀÄÄUÀ'ªÉà D¢ÃvÀÄ!
FUÀ OavÀå ºÁUÀÄ C£ËavÀåzÀ ¥Àæ±ÉßUÉ §gÉÆÃt: AiÀÄdÕ AiÀiÁUÁ¢UÀ½AzÀ ¥Àj¸ÀgÀ ªÀiÁ°£Àå zÀÆgÀªÁV UÁ½ ±ÀÄzÀÞªÁUÀÄvÀÛzÉ JA§ ªÁzÀ«zÉ. ¤d! EzÀÄ ªÉÊeÁÕ¤PÀªÁV ¸Á©ÃvÁVgÀĪÀ ¸ÀvÀå. DzÀgÉ AiÀÄdÕ PÀÄAqÀzÀ°è£À CVßUÉ ¤ÃªÀÅ K£ÉãÀ£ÀÄß C¦ð¸ÀÄwÛ¢ÝÃj JA§ÄzÀgÀ ªÉÄÃ¯É F ¸ÀvÁå¸ÀvÀåUÀ¼ÀÄ ¤AwªÉ. ¢£ÀªÀÇ ªÀÄ£ÉUÀ¼À°è ªÀiÁqÀĪÀ ¸ÁªÀiÁ£Àå CVß ºÉÆÃvÀæzÀ®Æè ¸ÀºÀ ¤¢ðµÀÖ ¸À«ÄvÀÄÛ, ¤¢ðµÀÖ ªÀÄgÀzÀ PÀrØUÀ¼À£ÀÄß ¸ÀÄqÀ¨ÉÃPÀÄ JA§ ¥ÀnÖAiÉÄà EzÉ. D ¥ÀnÖ ¥ÀæPÁgÀ DAiÀiÁ ªÀ£À¸Ààw, ªÀÄgÀzÀ PÀrØUÀ¼ÀÄ, ¸À«ÄvÀÄÛUÀ¼ÀÄ ºÁUÀÆ OµÀ¢üÃAiÀÄ ¨ÉÃgÀÄUÀ¼À£ÀÄß ºÁQzÁUÀ ªÀiÁvÀæ CzÀjAzÀ K¼ÀĪÀ ºÉÆUÉ ªÁvÁªÀgÀtªÀ£ÀÄß ±ÀÄzÀÞªÀiÁr ¸ÀvÀàjuÁªÀÄ GAlÄ ªÀiÁqÀÄvÀÛzÉ.
DzÀgÉ FUÀ £ÀqÉAiÀÄÄwÛgÀĪÀÅzÉãÀÄ? qsÁA©PÀvÀ£À ¥ÀæzÀ±Àð£ÀPÁÌV CVßUÉ ¹ÃgÉ, gÀ«PÉ, gÉõÉä §mÉÖ, zÀÄqÀÄØ EvÁå¢ `CAiÉÆÃUÀå' ªÀ¸ÀÄÛUÀ¼À£ÀÄß ºÁPÀÄvÁÛgÉ. CªÉ®è ¸ÀÄlÄÖ ¨sÀ¸ÀäªÁV EvÀÛ DyðPÀªÁVAiÀÄÆ £ÀµÀÖ; CvÀÛ ªÁvÁªÀgÀtPÀÆÌ PÀµÀÖ! EzÀgÀ°è ¯ÉÆÃPÀ PÀ¯ÁåtzÀ ªÀiÁvÉ°è §AvÀÄ? ªÉÃzÀUÀ¼À°è ºÉýgÀĪÀ ¤UÀ¢vÀ ¸À«ÄvÀÄÛ, OµÀ¢üAiÀÄ ¨ÉÃgÀÄUÀ¼À ¥ÀnÖAiÀÄ C£ÀĸÁgÀ AiÀÄdÕ ªÀiÁrzÀgÉ ªÀiÁvÀæ CzÀgÀ ¥sÀ® ¯ÉÆÃPÀPÉÌ ¹PÉÌà ¹UÀÄvÀÛzÉ. MmÁÖgÉ ¸ÀgÀ¼ÀªÁV ºÉüÀĪÀÅzÁzÀgÉ, `ªÀiÁqÀ¨ÉÃPÁzÀÝ£ÀÄß ªÀiÁrzÀgÉ DUÀ¨ÉÃPÁzÀÄÝ DVAiÉÄà DUÀÄvÀÛzÉ'; CzÉà jÃw `ªÀiÁqÀ¨ÁgÀzÀÄÝ ªÀiÁrzÀgÉ; DUÀ¨ÁgÀzÀÄÝ DVAiÉÄà wÃgÀÄvÀÛzÉ'.
PÉÆÃmÁåAvÀgÀ gÀÆ. ªÉZÀÑzÀ PÉÃA¢æÃPÀÈvÀ AiÀÄdÕ AiÀiÁUÁ¢UÀ¼À `C£ÀĪÀiÁ£Á¸ÀàzÀ DyðPÀ ºÉÆgÉ' C£ËavÀå. CzÀgÀ §zÀ¯ÁV ¥Àæw ªÀÄ£ÉUÀ¼À®Æè ¥Àæw ¢£À ¨É¼ÀUÉÎ-¸ÀAeÉ 2 ºÉÆvÀÄÛ ¸ÀgÀ¼ÀªÁV J®ègÀÆ ``ªÉÃzÉÆÃPÀÛ CVß ºÉÆÃvÀæ'' ªÀiÁqÀĪÀÅzÉà OavÀå. EzÀjAzÀ RArvÀªÁV £ÀªÀÄä ¸ÀÄvÀÛ°£À ¥Àj¸ÀgÀ ºÁUÀÆ UÁ½ ±ÀÄzÀÞªÁUÀÄvÀÛzÉ. £ÁªÀÅ ºÉüÀĪÀ ªÀÄAvÀæUÀ½AzÀ £ÀªÀÄä ªÀÄ£ÉÆà ªÀiÁ°£ÀåªÀÇ zÀÆgÀªÁV £ÉªÀÄä¢ £É¯É¸ÀÄvÀÛzÉ; EªÉgÀqÀgÀ ªÀÄÆ®PÀ ¯ÉÆÃPÀ PÀ¯ÁåtªÀÇ DUÀÄvÀÛzÉ. G½zÀ J®èªÀÇ ±ÀÄzÀÞA ¦n¦n CµÉÖ!

E£ÀÄß, `zsÀªÀÄð'zÀ §UÉÎ w½AiÉÆÃt:
PÀÄgÀÄPÉëÃvÀæ AiÀÄÄzÁÞ£ÀAvÀgÀ, ±ÀgÀ ±ÀAiÉÄåAiÀÄ°è ªÀÄ®VzÀÝ ©üõÀägÀ (CªÀgÀÄ ±ÀgÀ ±ÀAiÉÄåAiÀÄ°è ªÀÄ®VzÀÝgÉÆà E®èªÉÇà CzÀÄ E°è C¥Àæ¸ÀÄÛvÀ) §½UÉ §AzÀ zsÀªÀÄðgÁd¤UÉ CªÀgÀÄ zsÀªÉÆÃð¥ÀzÉñÀ ªÀiÁqÀÄvÁÛgÉ. DUÀ CªÀgÀÄ ºÉýzÀ ªÉÃzÀ ªÀÄAvÀæzÀ GvÀÛgÁzsÀð »ÃVzÉ:
`........DvÀä£ÀB ¥ÀæwPÀƯÁ¤; ¥ÀgÉõÁA £À ¸ÀªÀiÁZÀgÉÃvï!'
CAzÀgÉ, `¤£Àß DvÀäPÉÌ AiÀiÁªÀÅzÀÄ ¥ÀæwÃPÀÆ®ªÉÇà CzÀ£ÀÄß ¥ÀgÀjUÉ C£Àé¬Ä¸À®Ä ºÉÆÃUÀ¨ÉÃqÀ!' EµÉÖà EzÀgÀ CxÀð. GzÁºÀgÀuÉUÉ: M§â ªÀåQÛ ¤ªÀÄä PÀvÀÛ£ÀÄß PÀvÀÛj¸À®Ä §AzÁUÀ CzÀPÉÌ ¤ÃªÀÅ ¥ÀæwgÉÆÃzsÀ MqÀÄØwÛÃj; CAzÀgÉ DvÀä£ÀB ¥ÀæwPÀƯÁ¤-CzÀÄ £ÀªÀÄä DvÀäPÉÌ ¥ÀæwPÀÆ®. CAzÀ ªÉÄïÉ, `¥ÀgÉõÁA £À ¸ÀªÀiÁZÀgÉÃvï'- ¤ÃªÀÇ ¸ÀºÀ ¥ÀgÀgÀ PÀvÀÄÛ PÀÄAiÀÄå®Ä ºÉÆÃUÀ¨ÉÃr! EzÉà ¤dªÁzÀ zsÀªÀÄð!!
AiÉÆÃa¹ £ÉÆÃr; EzÀÄ ¸ÁªÀðPÁ°PÀ. ¥Àæw ¸ÀAzÀ¨sÀð, ¥Àæw PÉ®¸À, ¥Àæw £ÀqÀªÀ½PÉUÀÆ EzÀ£ÀÄß ºÉÆð¸À§ºÀÄzÀÄ. EzÀ£ÀÄß dUÀwÛ£À J®ègÀÆ ¥Á°¹zÀgÉ ¤dªÁzsÀ `zsÀªÀÄð' vÁ£Éà vÁ£ÁV £É¯É ¤®ÄèvÀÛzÉ. F ªÀiÁw£À ªÀÄÆ®ªÀÅ `C£ÀÄPÀA§, PÀgÀÄuÉ CxÀªÁ zÀAiÉÄ' JA§°èUÉ §AzÀÄ ¤®ÄèvÀÛzÉ; ªÉÃzÉÆÃ¥À¤µÀvÀÄÛUÀ¼À F ªÀiÁvÀ£Éßà §¸ÀªÀtÚ£ÀªÀgÀÄ vÀªÀÄä ¸ÀgÀ¼À ªÀZÀ£ÀzÀ°è `zÀAiÉÄAiÉÄà zsÀªÀÄðzÀ ªÀÄÆ®ªÀAiÀiÁå' JAzÀgÀÄ!
DzÀgÉ FUÀ dUÀwÛ£À°è DUÀÄwÛgÀĪÀÅzÉãÀÄ? ªÀÄÆ® ªÉÃzÉÆÃ¥À¤µÀvÀÄÛUÀ¼ÀÄ ¸ÁjgÀĪÀ ¤vÀå ¸ÀvÀåUÀ¼À£ÀÄß ¢üPÀÌj¹, `CªÀÅ £ÀªÀÄäzÀ®è' JA§AvÉ PÀqÉUÀt¸À¯ÁUÀÄwÛzÉ. £ÀªÀÄä CAvÀgÁ¼ÀzÀ¯Éèà EgÀĪÀ zÉêÀgÀ£ÀÄß PÁtzÉ, ªÀiÁrzÀ ¥Á¥À PÀÈvÀåUÀ¼À ©üÃw ºÉÆÃUÀ¯Ár¹PÉƼÀî®Ä ±ÁAw £ÉªÀÄä¢ CgÀ¸ÀÄvÁÛ zÉêÁ®AiÀÄUÀ¼À ªÀÄÄAzÉ GzÀÝ£É PÀÆå ¤®ÄèwÛzÉÝêÉ! MAzÀÄ ¸ÀgÀ¼À-¸ÁªÀiÁ£Àå ªÀiÁ£À«ÃAiÀÄ zsÀªÀÄðªÀ£ÀÄß ¥Á°¸À®Æ C±ÀPÀÛ£ÁV EAzÀÄ ªÀÄ£ÀĵÀå ºÀt-C¢üPÁgÀzÀ ªÁåªÉÆúÀPÉÌ ©zÀÄÝ CzÀgÀ §¯É¬ÄAzÀ ©r¹PÉƼÀî¯ÁUÀzÉ ZÀqÀ¥Àr¸ÀÄwÛzÁÝ£É. `PÉÊAiÀÄ°è ¨ÉuÉÚ ElÄÖPÉÆAqÀÄ vÀÄ¥ÀàPÁÌV HgɯÁè C¯ÉzÀgÀÄ' JA§AvÉ ¥ÉæÃvÀzÀAvÉ C¯ÉAiÀÄÄwÛzÁÝ£É. ªÀiÁ«£À ªÀÄgÀ PÀrzÀÄ; ¨Éë£À ©Ãd ©wÛ; ªÀiÁ«£À ¥sÀ® ¤jÃQë¸ÀĪÀÅzÀQÌAvÀ ªÀÄÆRðvÀ£À E£ÉÆßA¢zÉAiÉÄÃ?

                                                JZï.J¸ï. ¥Àæ¨sÁPÀgÀ,
                                            ¥ÀvÀæPÀvÀð, JZï.Dgï.J¸ï. PÁA¥ËAqï,
                                          6£Éà PÁæ¸ï, PÉ.Dgï. ¥ÀÄgÀA, ºÁ¸À£À.
                                                ªÉÆ. 9448365816

ವೈದ್ಯರಿಗೆ ವೈದ್ಯರಾದ ಭಗವಾನ್ ಶ್ರೀ ರಮಣ ಮಹರ್ಷಿಗಳು



1929 ರಲ್ಲಿ ರಮಣ ಆಶ್ರಮದಲ್ಲಿ ಪ್ರಾರಂಭಿಸಲಾದ ಚಿಕಿತ್ಸಾಲಯದ   ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿ, ಮಹರ್ಷಿಗಳ ಅನುಕಂಪಕ್ಕೆ ಮತ್ತು ಅನುಗ್ರಹಕ್ಕೆ ಒಳಗಾದ ಸುಪ್ರಸಿದ್ದ ಪ್ರಥಮ ವೈದ್ಯರು.  ಡಾಕ್ಟರ್ಕೃಷ್ಣಮೂರ್ತಿ ರವರು ಮಹರ್ಷಿಗಳ ಪರಮ ಭಕ್ತರಾಗಿದ್ದು ಈ ಆಶ್ರಮದಲ್ಲಿ  ಚಿಕಿತ್ಸೆಗೆ ಬರುತ್ತಿದ್ದ  ಎಲ್ಲಾ ರೋಗಿಗಳ ಶಿಶ್ರುಷೆಯಂತು ಅತ್ಯಂತ ಪ್ರೇಮ ಮತ್ತು ಸೌಹಾರ್ದದಿಂದ ಮಾಡುತ್ತಿದ್ದರು .    ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದ ಈ ಚಿಕಿತ್ಸಾಲಯಕ್ಕೆ  ಮುಖ್ಯ ಕಾರಣವೆಂದರೆ ಮಹರ್ಷಿಗಳ ಕೃಪಾವಲಯ ಮತ್ತು ಅನುಗ್ರಹ.   ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿಯವರು ತಿರುವನ್ನಮಲೈ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದರು.  ಪ್ರತಿನಿತ್ಯ ಆಶ್ರಮಕ್ಕೆ ಬಂದು ತಮ್ಮ ಸೇವೆಯನ್ನು ಮಾಡಿ ಹೋಗುತ್ತಿದ್ದರು. ಮಹರ್ಷಿಗಳು  ಬ್ರಹ್ಮ ನಿರ್ವಾಣ ಹೊಂದಿದ ಮೇಲೂ ಡಾಕ್ಟರ್ರವರು ಮಹರ್ಷಿಗಳ ಸಮಾಧಿಯ ಬಳಿ ನಿಂತು ಭಕ್ತಿ ಗೀತೆಯನ್ನು ಹಾಡಿ ನಂತರದಲ್ಲಿ ಗಿರಿ ಪ್ರದಕ್ಷಿಣೆಗೆ ಹೋಗುತ್ತಿದ್ದರು. ಇಂತಹ ಪರಮ ಭಕ್ತರ ಜೀವನದಲ್ಲಿ ಭಗವಾನರ ಅನುಗ್ರಹ ಹೇಗೆ ಆಯಿತು? ಎಂಬುದರ  ಬಗ್ಗೆ ಶ್ರೀ ವಿ ಗಣೇಶನ್ ಧಾಖಲಿಸಿರುವ ಒಂದು ಘಟನೆ.


1930  ರ ಸಮಯದಲ್ಲಿ ಮಹರ್ಷಿಗಳಿಗೆ ಅಗ್ಗಾಗ್ಗೆ ತೊಂದರೆ ಕೊಡುತ್ತಿದ್ದ ಬಿಕ್ಕಳಿಕೆಯನ್ನು ತಡೆಯಲು  ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿಯವರು ಮಹರ್ಷಿಗಳಿಗೆ ಚಿಕಿತ್ಸೆಯನ್ನು ಕೊಡುತ್ತಿದ್ದರು. ಆದರೆ, ದಿನ ಕಳೆದಂತೆ ಈ ಬಿಕ್ಕಳಿಕೆ ಕಡಿಮೆಯಾಗಲೇ ಇಲ್ಲ. ಎಲ್ಲಾ ತರಹದ ಔಷದಿಗಳನ್ನು ಪ್ರಯತ್ನಿಸಲಾಯಿತು.  ಆದರೂ, ಮಹರ್ಷಿಗಳು ಗುಣಮುಖರಾಗಲೇ ಇಲ್ಲ.  ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿಯವರಿಗೆ  ಆತಂಕ ಪ್ರಾರಂಭವಾಯಿತು.  ಈತನ್ಮಧ್ಯೆ ಮಹರ್ಷಿಗಳ ನಾಡಿ ಮಿಡಿತವನ್ನು ಪರೀಕ್ಷಿಸಲಾಗಿ ಅದೂ ಸಹ ಬಹಳ ಕಡಿಮೆಯಾದ ಕಾರಣ ಆತಂಕ ಇನ್ನಷ್ಟು ಜಾಸ್ತಿಯಾಯಿತು.  ಡಾಕ್ಟರ್ರವರ ಮನಸಿನಲ್ಲಿ ಮಹರ್ಷಿಗಳ ಜೀವಿತಾವಧಿ ಕೆಲವು ದಿನಗಳು ಇರಬಹುದೇ? ಎಂಬ ಸಂಶಯ ಬಲವಾಗಿ ಕಾಡತೊಡಗಿತು.  ಡಾಕ್ಟರ್ ಕೃಷ್ಣಮೂರ್ತಿಯವರು ಮಹರ್ಷಿಯವರಲ್ಲಿ ಏನೊಂದು ಮಾತನಾಡಲಿಲ್ಲ , ಅವರ ಎದುರಿನಲ್ಲಿ ಕೈ ಕಟ್ಟಿ ನಿಂತು ಮುಂದೆ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಕಣ್ಣು ಬಾಯಿ ಬಿಡುತ್ತ ನಿಂತಿದ್ದರು.  ಆದರೆ, ಮನಸ್ಸು ಮಾತ್ರ " ಏನಾದರೊಂದು ದಾರಿ ತೋರಿಸಿ ಗುರುವೇ" ಎಂದು ಅಂಗಲಾಚುತ್ತಿತ್ತು.  ಮಹರ್ಷಿಗಳು ಮಾತ್ರ ತಮಗೇನೂ ಗೊತ್ತಿಲ್ಲ ಎನ್ನುವಂತೆ ಸುಮ್ಮನೆ ಕುಳಿತು ಬಿಟ್ಟಿದ್ದರು.  ಸ್ವಲ್ಪ ಸಮಯದ ನಂತರ ಡಾಕ್ಟರ್ರವರು ಒಲ್ಲದ ಮತ್ತು ಭಾರವಾದ ಮನಸ್ಸಿನಿಂದ ಮನೆಗೆ ಹಿಂತಿರುಗಿದರು.


ಮನೆಗೆ ಬಂದ ನಂತರದಲ್ಲಿ ಡಾಕ್ಟರ್ ಎಂ ಆರ್ ಕೃಷ್ಣಮೂರ್ತಿರವರಿಗೆ ತಮ್ಮ ದುಃಖ ತಡೆದು ಕೊಳ್ಳಲು ಸಾಧ್ಯವಾಗಲೇ ಇಲ್ಲ.  ದುಃಖ ಉಮ್ಮಳಿಸಿ ಬಂತು. ದಿಕ್ಕು ತೋಚದೆ  ಚಿಕ್ಕ ಮಗುವಿನಂತೆ  ಗಟ್ಟಿಯಾಗಿ ಅಳಲು ಪ್ರಾರಂಭ ಮಾಡಿದರು.  ಯಾರು ಸಮಾಧಾನ ಮಾಡಿದರು ಸಮಾಧಾನ ಆಗಲೇ ಇಲ್ಲ. ಅಂದು ಊಟವನ್ನು ಮಾಡದೆ ಹಾಗೆ ಮಲಗಿಬಿಟ್ಟರು.  ಬಹಳಹೊತ್ತು ನಿದ್ದೆ ಬಾರದೆ ಏನೇನೋ ಚಿಂತೆಗಳು ಕಾಡುತ್ತಲೇ ಇದ್ದವು.  ಯಾವಾಗಲೋ ನಿದ್ದೆ ಹತ್ತಿದೆ.   ಸುಮಾರು ಬೆಳಗಿನ ಜಾವದ ಸಮಯ ಇರಬಹುದೇನೋ ಆ ಸಮಯದಲ್ಲಿ ಭಗವಾನರು ಇವರ ಕನಸಿನಲ್ಲಿ ಬಂದು " ಏಕೆ ಅಳುತ್ತಿಯೇ?" ಎಂದು ಕೇಳಿದರು.  ಡಾಕ್ಟರ್ " ಭಗವಾನ್ ನಿಮಗೆ ಗೊತ್ತಿಲ್ಲದ್ದು ಏನಿದೆ? ನಾನು ಏಕೆ ಅಳುತ್ತಿರುವೆನೆಂದು ನಿಮಗೆ ಗೊತ್ತಿಲ್ಲವೇ?  ನಿಮ್ಮ ಈ ಬಿಕ್ಕಳಿಕೆಯ ರೋಗವನ್ನು  ಏನು ಮಾಡಿದರು ನನ್ನಿಂದ ಗುಣಪಡಿಸಲಾಗುತ್ತಿಲ್ಲವಲ್ಲ, ನಾನು ಏನು ಮಾಡಲಿ?"  ಎಂದು ಪುನಃ ಅಳಲು ಪ್ರಾರಂಭ ಮಾಡಿದರು.  ಆಗ ಮಹರ್ಷಿಗಳು " ಅಳಬೇಡ. ನಿಮ್ಮ ಮನೆಯ ಅಂಗಳದಲ್ಲಿ 'ಸೀಂಧಿಕೊಡಿ' ಎಂಬ ಗಿಡ ಇದೆ.  ಈ ಗಿಡದ ಎಲೆಗಳನ್ನು ಕಿತ್ತು ಶುಚಿಮಾಡಿ, ತುಪ್ಪದಲ್ಲಿ ಹುರಿದು,  ನಂತರ ಒಣಗಿದ ಶುಂಟಿ ಮತ್ತು ಬೆಲ್ಲವನ್ನು ಬೆರೆಸಿ ಚೆನ್ನಾಗಿ ಮಿದ್ದು ಗೋಲಿಗಳನ್ನು ಮಾಡಿಕೊಂಡು ನಾಳೆ ತೆಗೆದು ಕೊಂಡು ಬಾ.  ಏಕೆ ಸುಮ್ಮನೆ ಚಿಂತಿಸುತ್ತಿಯ?" ಎಂದು ಹೇಳಿದ ಹಾಗೆ ಭಾಸವಾಯಿತು.


ತಕ್ಷಣ ಎಚ್ಚರವಾಯಿತು.  ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಭಾಸವಾಯಿತು. ಆಶ್ಚರ್ಯದೊಂದಿಗೆ ಮೈ ಪುಲಕಿತ ಗೊಂಡಿತು. ತಕ್ಷಣ ತಮ್ಮ ಪತ್ನಿಯನ್ನು ಎಬ್ಬಿಸಿಕೊಂಡು ಕೈ ದೀಪ ಹಿಡಿದುಕೊಂಡು ಅಂಗಳವೆಲ್ಲವನ್ನು ಹುಡುಕಲು ಪ್ರಾರಂಭ ಮಾಡಿದರು . ಆ ಮನೆಯ ಅಂಗಳದ ಸ್ವಲ್ಪ ಭಾಗ ಬಿಟ್ಟು ಮಿಕ್ಕೆಲ್ಲ ಭಾಗ  ಗಾರೆ ಹಾಕಲ್ಪಟ್ಟಿತ್ತು.   ಆ ಇರುವ ಸ್ವಲ್ಪ ಜಾಗದಲ್ಲಿ ಈ ಗಿಡ ಹುಡುಕಬೇಕಾಗಿತ್ತು.  ಈ ಇರುವ ಮಣ್ಣಿನ ಜಾಗದಲ್ಲಿ ಹಲವಾರು ಗಿಡಗಳು ಪೊದೆಯಂತೆ ಬೆಳೆದು ಬಿಟ್ಟಿದ್ದವು.  ನಿಧಾನವಾಗಿ ಗಿಡಗಳನ್ನು ಸರಿಸುತ್ತ ಮಹರ್ಷಿಗಳು ಹೇಳಿದ ಗಿಡಕ್ಕಾಗಿ ಹುಡುಕಾಟ ಪ್ರಾರಂಭ ಮಾಡಿದರು.  ಒಂದು ಮೂಲೆಯಲ್ಲಿ ಮಹರ್ಷಿಗಳು ಹೇಳಿದ ಒಂದೇ ಒಂದು ಗಿಡ ಸಿಕ್ಕಿತು.  ಈ ದಂಪತಿಗಳಿಗೆ ಪರಮಾನಂದವಾಯಿತು. ಅವರ ಸಂತೋಷಕ್ಕೆ  ಪಾರವೇ ಇಲ್ಲ. ತಕ್ಷಣ ಆ ಗಿಡವನ್ನು ತಂದು ಮಹರ್ಷಿಗಳ ಆಜ್ಞಾನುಸಾರ  ಲೇಹ್ಯವನ್ನು ತಯಾರು ಮಾಡಿದರು.


ಈ ಲೇಹ್ಯವನ್ನು ತೆಗೆದುಕೊಂಡು ಆಶ್ರಮಕ್ಕೆ ಓಡಿದರು.  ಎಂದಿನಂತೆ ಆಶ್ರಮದಲ್ಲಿ ಸತ್ಸಂಗಕ್ಕೆ ಎಲ್ಲರು ಸೇರಿದ್ದರು. ಮಹರ್ಷಿಗಳು ತಮ್ಮ ಜಾಗದಲ್ಲಿ ಆಸೀನರಾಗಿದ್ದರು.  ಈ ದಂಪತಿಗಳನ್ನು ಕಂಡ ಮಹಷಿಗಳು ಮುಗುಳುನಕ್ಕು ಸ್ವಾಗತಿಸಿ ತಮ್ಮ ಕೈಯನ್ನು ಮುಂದೆ ಚಾಚಿ " ಅದೇನು ತಂದಿರುವಿರೋ ಅದನ್ನು ಕೊಡಿ" ಎಂದು ಔಷಧಿಯನ್ನು ಪಡೆದುಕೊಂಡು ಒಂದೆರಡು ಗೋಲಿಗಳನ್ನು ತಿಂದು ಬಿಟ್ಟರು.  ನಂತರದಲ್ಲಿ ತಮಗೆ ಬಿದ್ದ ಕನಸಿನ ಬಗ್ಗೆ ವಿಸ್ತಾರವಾಗಿ ಮಹಾರ್ಹಿಗಳಲ್ಲಿ ನಿವೇದಿಸಿಕೊಂಡಾಗ ತಮಗೇನೂ ಗೊತ್ತಿಲ್ಲದವರಂತೆ ಸುಮ್ಮನೆ ಕುಳಿತ್ತಿದ್ದರು.  ಒಂದೆರಡು ದಿನಗಳಲ್ಲೇ ಮಹರ್ಷಿಗಳ ಬಿಕ್ಕಳಿಕೆ ನಿಂತು ಸಹಜ ಸ್ತಿತಿಗೆ ಬಂದರು.




ಮಹರ್ಷಿಗಳ ಕೃಪೆಯೇ ಹಾಗೆ!  ಮಹರ್ಷಿಗಳು ಯಾರನ್ನು ಯಾವಾಗ, ಹೇಗೆ ಮತ್ತು ಯಾವ ಪರಿಸ್ಥಿತಿಯ  ಮುಖಾಂತರ ಅಹಂಕಾರವನ್ನು ನಾಶಮಾಡಬೇಕೆಂದು ತಿಳಿದು ಅಂತಹವರಿಗೆ ಯಾವ ಸುಳಿವನ್ನು ಕೊಡದೆ ಅಂದುಕೊಂಡ ಕೆಲಸವನ್ನು ನಿರ್ವಹಿಸುತ್ತಿದ್ದರು.   ಈ ರೀತಿಯ ಉಪದೇಶದಿಂದ ಭಕ್ತರನ್ನು ಸರಿ ದಾರಿಗೆ ತಂದು  ಉದ್ಧಾರ ಮಾಡಿ, ಜೀವನದಲ್ಲಿ ಎಂದೂ ಮರೆಯಲಾಗದ ಪಾಠವನ್ನು ಕಲಿಸಿಬಿಡುತ್ತಿದ್ದರು. ಡಾಕ್ಟರ ಜೀವನದಲ್ಲೂ ಎಲ್ಲೋ ಅಡಗಿದ್ದ ಅಹಂಕಾರದ ಮೂಲವನ್ನು ಹುಡುಕಿ ಬೇರು ಸಮೇತ ಕಿತ್ತು ಬಿಟ್ಟರು. "ಎಲ್ಲವೂ ನೀನೆ, ನಾನು ನೆಪ ಮಾತ್ರ" ಎಂಬ ಸತ್ಯವನ್ನು  ದೃಢವಾಗಿ ಇವರ ಮನಸ್ಸಿನಲ್ಲಿ ನೆಟ್ಟು ಬಿಟ್ಟರು.  ಇಂತಹ ಸಾವಿರಾರು ಉದಾಹರಣೆಗಳು ಮಹರ್ಷಿಗಳ ಜೀವನದಲ್ಲಿ ನಡೆದಿವೆ.  ಇದೊಂದು ತುಣುಕು ಮಾತ್ರ.  ಈ ರೀತಿಯ ಭಗವಾನರ ಕೃಪಾ ವಲಯಕ್ಕೆ ಬಂದ ಅದೆಷ್ಟೋ ಭಕ್ತರು ತಮ್ಮ ಜೀವನವನ್ನು ಪಾವನ ಮಾಡಿಕೊಂಡು ಬಿಟ್ಟರು. ಇಂತಹ ಪುಣ್ಯ ಪುರುಷರ ಅನುಭವಾಮೃತ ಕೇಳುವಾಗಲೇ ನಮ್ಮ ಮೈ ಮತ್ತು ಮನಸ್ಸು ಪುಲಕಿತ ವಾಗುತ್ತದೆ.  ಇನ್ನು ಸ್ವತಃ ಅನುಭವ ಆದಾಗ........ ಅದನ್ನು ಪದಗಳು ಪ್ರಾಯಶಃ ಬಣ್ಣಿಸಲಾರವು.   ಆದರೂ, ನಮ್ಮಂತಹ ಪಾಮರರಿಗಾಗಿ ಅನುಭವ ಕಥನವನ್ನು ಧಾಖಲಿಸಿರುವುದೂ ಸಹ ನಮ್ಮ ಪೂರ್ವಪುಣ್ಯದ ವಿಶೇಷವೆಂದೇ ನಾನು ಭಾವಿಸುತ್ತೇನೆ.


ಹೆಚ್ ಏನ್ ಪ್ರಕಾಶ್ 

ಅಗ್ನಿಹೋತ್ರ ಮತ್ತು ಗೋಶಾಲೆ

ಅಮೆರಿಕೆಯ ಡಾ.ಜೆಸ್ಸೀ ಇವರು ವೇದಸುಧೆಯ ಮೂಲಕ ಸಂಪರ್ಕಕ್ಕೆ ಬಂದು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರನ್ನು ಭೇಟಿಯಾಗಲು ಕಳೆದ ತಿ೦ಗಳು ಬೆ೦ಗಳೂರಿಗೆ ಬಂದಿದ್ದರು. ಅವರು ಅವರ ಮಿತ್ರರೊಬ್ಬರು ನಡೆಸುತ್ತಿರುವ ಅಗ್ನಿಹೋತ್ರ ಮತ್ತು ಗೋಶಾಲೆಯ ಬಗ್ಗೆ ವೀಡಿಯೋ ಕೊ೦ಡಿಯೊ೦ದನ್ನು ಕಳಿಸಿಕೊಟ್ಟಿದ್ದಾರೆ. ಅವರ ಮಾತುಗಳೊಡನೆ ಇಲ್ಲಿ ಪ್ರಕಟಿಸುತ್ತಿರುವೆ. ಹೊರದೇಶಗಳಲ್ಲಿ ನಮ್ಮ ದೇಶದ ವೇದ,ಯೋಗ ಮುಂತಾದ ಜ್ಞಾನದ ಉಪಯೋಗವನ್ನು ಪಡೆಯುತ್ತಿರುವ ಉಧಾಹರಣೆಗಳ೦ತೂ ಸಾಕಷ್ಟು ಲಭ್ಯವಾಗುತ್ತಿವೆ. ಈಜ್ಞಾನದ ಸದುಪಯೋಗವಾಗುತ್ತಿದೆಯೋ ಮಾರಾಟವಾಗುತ್ತಿದೆಯೋ ಅದರ ಅರಿವು ನನಗಿಲ್ಲ ಜ್ಞಾನವ೦ತೂ ಪ್ರಸಾರವಾಗುತ್ತಿದೆ. ಪ್ರಸಾರವಾಗುವಾಗ ಅದರ ನೈಜತೆಯನ್ನು ಕಳೆದುಕೊಳ್ಳಲೂ ಬಹುದು.ಆದರೂ ನಮ್ಮ ಪೂರ್ವಜರ ಚಿಂತನೆಯನ್ನು ಪಾಶ್ಚಿಮಾತ್ಯರು ಕಾತುರದಿಂದ ನಿರೀಕ್ಷಿಸುತ್ತಿರುವುದಂತೂ ಸತ್ಯ
-ಹರಿಹರಪುರಶ್ರೀಧರ್
. I have been in communication with Linda Voith for a number of years. I have done several free vaastu consultations for her. I fully support her work to create a safe haven for cows. She does that with love and an understanding of the sacredness of all life. I also support her use of her special cow dung for yagya and agni hotra. I urge anyone interested in learning a specia fire ceremony to conatact her. Just as important please donate to her farm. - Jessie Mercay

ಒತ್ತಡ-ನಿಗ್ರಹ



ಅನುಗಾಲವೂ ಚಿಂತೆ ಈ ಜೀವ ಜೀವನಕೆ
ತನುಮನಕೆ ಇಲ್ಲ ಸುಖ ಎಲ್ಲ ಸಂದೇಹ
ಕನಸುಗಳು ಏರುತ್ತ ತಕತಕನೆ ಕುಣಿವಾಗ
ಮನಸು ಬಳಲುತಲಿಹುದು | ಜಗದಮಿತ್ರ

ಅಧಿಕಾರ ಬೇಕೆಂಬ ಆಸೆ ಒಂದೆಡೆಯಲ್ಲಿ
ಪದಕುಸಿವ ಭಯವಿಹುದು ಇನ್ನೊಂದು ಕಡೆಗೆ
ಬೆದಕುತ್ತ ಹಲವರಲಿ ಅಂಗಲಾಚುವ ಕಾಲ
ಬದುಕು ಹೋರಾಟವೈ | ಜಗದಮಿತ್ರ

ಒಡೆಯನಣತಿಯ ಮೀರೆ ಹದಗೆಡುಗು ಜೀವನವು
ಬಿಡುಗಡೆಗೆ ಬಯಸುವುದು ಸೋತ ತನುಮನವು
ಕಡೆಗೊಮ್ಮೆ ತನುವೆದುರು ಮನಸೋತು ಮಣಿದಾಗ
ಕೆಡುಗು ದೇಹಸ್ಥಿತಿಯು | ಜಗದಮಿತ್ರ

ಸಿರಿವಂತ ನೆಂಟರನು ಕಂಡೊಮ್ಮೆ ಕುಳಿತಾಗ
ಕರೆವಂತೆ ಧನಿಕನಾಗುವ ಆಸೆ ಮನಕೆ !
ಹರಸಾಹಸದಿ ನಿತ್ಯ ಹಣಗಳಿಸುವಾಸೆಯಲಿ
ತಿರುಚಿ ಕೊಂಬುದು ಹೃದಯ | ಜಗದಮಿತ್ರ

ಸತಿಯಾಸೆ ಅತಿಯಾಗೆ ಪತಿಗಧಿಕದೊತ್ತಡವು
ಪತಿಯಾಸೆ ಅತಿಯಾಗೆ ಸತಿಗಕ್ಕು ನೋವು
ಸತಿಪತಿಗಳಿಬ್ಬರಿಗೂ ಅತಿಯಾಸೆ ಜೋರಾಗೆ
ಕಥೆಗೆ ಮಂಗಳವಕ್ಕು ! ಜಗದಮಿತ್ರ

ಮಕ್ಕಳಿಗೆ ಶಿಕ್ಷಣದಿ ಹೆಚ್ಚು ಗುಣಪಡೆವಂತೆ
ಇಕ್ಕಳದ ಅಡಕೊತ್ತು ಇಟ್ಟು ಹೆದರಿಸುತ
ಹೊಕ್ಕಳಿನ ಬಳ್ಳಿಕೊಯ್ಯುವಮುಂಚೆಯೇ ಶಾಲೆ !
ಮಕ್ಕಳಾಟವೆ ಬದುಕು ? ಜಗದಮಿತ್ರ

ಯುಗಧರ್ಮ ನಗಧರ್ಮ ಆಗಿಹುದು ಈ ದಿನದಿ
ಬಗೆಬಗೆಯ ಹಾದಿಯಲಿ ಮೋಸ-ವಂಚನೆಯು !
ನಗುನಗುತ ಬಂದವರೆ ನುಗ್ಗಿ ಕದ್ದೊಯ್ಯುವರು
ನಗಕೆ ಚೋರರ ಭಯವು | ಜಗದಮಿತ್ರ

ನಿತ್ಯ ಕುಳಿತಾಗೊಮ್ಮೆ ಬರೆದು ಕರ್ಮಂಗಳನು
ಸತ್ಯ-ಮಿಥ್ಯದ ಲೆಕ್ಕ ಒಪ್ಪಿಸುತ ಮನಕೆ
ತಥ್ಯದೊಳ್ ಪರಮಾತ್ಮ ಅಡಗಿಹನು ಮನದೊಳಗೆ
ಪಥ್ಯ ಸರಳತೆ ಇಹಕೆ | ಜಗದಮಿತ್ರ

ತಾಪ-ತ್ರಯಗಳಿಂ ಬೇಯುವುದು ಜೀವನವು
ಕೋಪ ಮೋಹಾದಿ ಮದ-ಮಾತ್ಸರ್ಯ ಗುಣಗಳ್
ವ್ಯಾಪಾರ ನಡೆದಿಹುದು ನಮಗರಿವೆ ಇಲ್ಲದಲೆ
ದೀಪಬುಡ ಕತ್ತಲವು | ಜಗದಮಿತ್ರ

ಯೋಗ-ಧ್ಯಾನವು ಬೇಕು ಭೋಗವೈಖರಿ ಜೊತೆಗೆ
ಕಾಗೆ-ಕುನ್ನಿಗೆ ಹಾರ ಇಡಬೇಕು ಬದುಕೆ
ಸಾಗರವು ಸಂಸಾರ ಆಗುವುದು ಸಾಕಾರ
ನೀಗು ಒತ್ತಡ ನಿರತ | ಜಗದಮಿತ್ರ

----ರೂಪಿತಗೊಳ್ಳುತ್ತಿರುವ ’ ಜಗದಮಿತ್ರನ ಕಗ್ಗ ’ ದ ೨೭ ನೇ ಕಂತು. ಮೊದಲ ಭಾಗ ತಯಾರಿಯಲ್ಲಿದೆ!