Pages

Thursday, June 3, 2010

ಮುಕ್ತವಾಗಿ ಮಾತನಾಡೋಣ ಬನ್ನಿ.

ವೇದಸುಧೆಯ ಅಭಿಮಾನಿಗಳೇ,
ದಿನದಿಂದ ದಿನಕ್ಕೆವೇದಸುಧೆಗೆ ಇಣುಕುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡು ಸಂತಸವಾಗಿದೆ. ಶ್ರಮದ ಸಾರ್ಥಕತೆ ಕಾಣುತ್ತಿದೆ. ಡಾ|| ಜ್ಞಾನದೇವ್ ಮುಂತಾದ ಆತ್ಮೀಯರು ಹಿಂದಿನ ಬರಹಗಳಿಗೆಲ್ಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓದುತ್ತಿರುವ ಹಾಗೂ ವೇದಸುಧೆಯ ಮುನ್ನೆಡೆಗೆ ಪ್ರತ್ಯಕ್ಷ ಪರೋಕ್ಷ ಕಾರಣರಾಗಿರುವ ಎಲ್ಲಾ ಮಿತ್ರರಿಗೂ ಕೃತಜ್ಞತೆಗಳು. ಹೀಗೆಯೇ ಸಹಕಾರ ವಿರಲಿ. ನಿಮ್ಮ ಒಂದೆರಡು ಪದಗಳು ವೇದಸುಧೆಯನ್ನು ಸದಾ ಜಾಗೃತವಾಗಿರಲು ಸ್ಪೂರ್ಥಿಯಾಗುತ್ತವೆಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ವೇದಸುಧೆಯಲ್ಲಿ ಬರೆದದ್ದೇ / ಕೇಳಿದ್ದೇ ಅಂತಿಮ ಸತ್ಯವೆಂದು ಭಾವಿಸಬೇಕಿಲ್ಲ. ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವೇದಸುಧೆಯೊಡನೆ ಹಂಚಿಕೊಳ್ಳಿ. ನಿತ್ಯ ಕರ್ಮಗಳು/ವ್ರತ ಕಥೆಗಳು/ಹಬ್ಬ ಹರಿದಿನಗಳು/ಶ್ರಾದ್ಧಕರ್ಮಗಳು/ ಹವನ-ಹೋಮಗಳು... ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡೋಣ ಬನ್ನಿ. ಯಾರ ಮನ ನೋಯಿಸುವುದೂ ವೇದಸುಧೆಯ ಉದ್ಧೇಶವಲ್ಲ. ಜ್ಞಾನಿಗಳಿಂದ ವಿಚಾರ ತಿಳಿದುಕೊಳ್ಳಲು ವೇದಸುಧೆಯೊಂದು ವೇದಿಕೆಯಾಗಲಿ, ಎಂಬುದು ಅಪೇಕ್ಷೆ. ಅಂತಿಮವಾಗಿ ಮನುಷ್ಯನ ನೆಮ್ಮದಿಯ ಬದುಕೇ ವೇದಸುಧೆಯ ಪರಮೋದ್ಧೇಶ.

ಶರ್ಮರೊಡನೆ ಮುಕ್ತ ಮಾತುಕತೆ

ಕಳೆದ ೨೯.೫.೨೦೧೦ ಶನಿವಾರ ಶ್ರೀ ಸುಧಾಕರ ಶರ್ಮರು ಹಾಸನಕ್ಕೆ ಬಂದಿದ್ದರು. ರಾತ್ರಿ ಊಟವಾದ ನಂತರ ವೇದಸುಧೆಬಳಗವು ಅವರೊಡನೆ ಮುಕ್ತಮಾತುಕತೆ ನಡೆಸಿತು. ಮಾತುಕತೆಯಲ್ಲಿ ಹಾಸನದ ಶ್ರೀರಾಮಸ್ವಾಮಿ,ಶ್ರೀನಟರಾಜ್ ಪಂಡಿತ್, ಶ್ರೀ ಕವಿ ನಾಗರಾಜ್ ಮತ್ತು ಶ್ರೀಧರ್ ಹಾಗೂ ಬೆಂಗಳೂರಿನ ಡಾ|| ವಿವೇಕ್ ಮತ್ತು ಕೃಷ್ಣಮೂರ್ತಿ ಇದ್ದರು. ಶ್ರೀ ಶರ್ಮರ ನಿಷ್ಠುರ ನುಡಿಗಳಿಗೆ ನಮ್ಮ ನಿಷ್ಠುರ ಪ್ರಶ್ನೆಗಳು. ಆದರೆ ಯಾರಿಗೂ ಮನಸ್ಸಿಗೆ ನೋವಾಗದಂತೆ ಮಾತುಕತೆ ಮುಕ್ತಾಯ. ಅದರ ಫಲಶೃತಿಯೇ ಈ ಧ್ವನಿ ಸುರುಳಿ. ಧ್ವನಿಯನ್ನೇ ನೀವು ನೇರವಾಗಿ ಕೇಳುವಾಗ ಅದರ ವಿವರ ಅನಗತ್ಯ. ಆದರೆ ಮುಕ್ತ ಮಾತುಕತೆ ಕೇಳಿದ ನಿಮ್ಮಿಂದ ಫೀಡ್ ಬ್ಯಾಕ್ ಬೇಕು. ಆಗ ಮಾತ್ರ ಈ ಪ್ರಯತ್ನ ಸಾರ್ಥಕವಾದೀತು.



---------------------------------------------------------------
ಡಾ||ಜ್ಞಾನದೇವ್ ಅಭಿಪ್ರಾಯ ಕೇಳಿ

---------------------------------------------------------------
ಸು೦ದರ ಅಪರೂಪದ
ಆಕರ್ಶಕ ಅಸಕ್ತಿಕರ ಮಾತುಕತೆಯನ್ನು ಬಹು ಕುತೂಹಲದಿ೦ದ ಆಲಿಸಿದೆ. ನಿಜಕ್ಕೂಮನಸ್ಸನ್ನು ವಿಸ್ತಾರಗೊಳಿಸುವ ವಿವಸ್ತ್ರಗೊಳಿಸುವ ಮಾತುಕತೆಯೂ ಹೌದು. ಶರ್ಮಾರವರ ಉತ್ತರಗಳು ಉತ್ತಮವಾಗಿದ್ದರೂಎಲ್ಲೋ ಒ೦ದು ಕಡೆ ತುಸು ಉದ್ಧಟನದ ಛಾಯೆ ಕ೦ಡುಬರುತ್ತದೆಯೇನೋ ಎ೦ದು ನನಗೆ ಭಾಸವಗುತ್ತದೆ. ನಿಮ್ಮ ಪ್ರಶ್ನೆಗಳು, ನಿಮ್ಮ ಮಾತಿನ ಶೈಲಿ ಶಬ್ದಗಳ ಗಾ೦ಭೀರ್ಯ ನಿಮ್ಮ ಪ್ರಾಮಾಣಿಕತೆ, ನಿಮ್ಮ ಆಳವಾದ ಧ್ವನಿ ಎಲ್ಲವೂ ನನಗೆ ಬಹು ಮೆಚ್ಚುಗೆಯಾದಅ೦ಶಗಳು. ಕೆಲವೆಡೆ ಶರ್ಮಾರವರ ಉತ್ತರಗಳು ಸಮ೦ಜಸವಾಗಿದ್ದರೂ ಇನ್ನು ಕೆಲವೆಡೆ ಹಾರಿಕೆ ಉತ್ತರಗಳೇನೋ ಎನಿಸುತ್ತವೆ. ಒಟ್ಟಾರೆ ಒ೦ದು ಎನ್ಲೈಟನಿ೦ಗ್ ಹರಟೆ ಅದು. ಸತ್ಯವನ್ನು ಅ೦ತಿಮವಾಗಿ ಮನುಷ್ಯನೇ ಕ೦ಡುಕೊಳ್ಳಬೇಕಾದರೂ ಆ ನಿಟ್ಟಿನಲ್ಲಿಅವನಿಗೆ ಬೆಳಕಿನ ಅಗತ್ಯವಿದೆ ಎ೦ಬುದನ್ನು ಯಾರೂ ಅಲ್ಲಗಳೆಯಲಾರು. ಅ ಬೆಳಕು ವೇದದಿ೦ದಲಾಗಲೀ ಇತರಧರ್ಮಗ್ರ೦ಥಗಳಿ೦ದಾಗಲೀ ಅಥವಾ ಬದುಕಿನ ಅನನ್ಯ ಅನುಭವಗಳಿ೦ದಲೂ ವ್ಯಕ್ತಿಗಳ ವೈಯುಕ್ತಿಕ ಪ್ರಭಾವಗಳಿ೦ದಲೂಬರಬಹುದು. ಏನೇ ಆಗಲೀ ಒಬ್ಬ ಹೇಳಿದ ಮಾತ್ರಕ್ಕೇ ಅದು ನಮ್ಮ ಪಾಲಿಗೆ ಸತ್ಯವಾಗಲಾರದು. ಅದು ನಮ್ಮ ಬದುಕಿನ ಅನುಭವದಮೂಸೆಯಲ್ಲಿ ಬೆ೦ದು ಹೊರಬ೦ದಾಗ ಮಾತ್ರ ಅ೦ಥ ಸತ್ಯಕ್ಕೆ ಬೆಲೆ ಅರ್ಥ. ಇದು ನನ್ನ ಭಾವನೆ. ನಿಮ್ಮ ನ೦ಬಿಕೆಗಳಿಗೆ ಶ್ರದ್ಧೆಗಳಿಗೆನನ್ನ ಅಪಾರ ಗೌರವವಿದೆ
ನಿಮ್ಮ ಈ ಸಚ್ಚಿ೦ತನ ಸತ್ ಪ್ರಯತ್ನಗಳು ನಿಜಕ್ಕೂ ಅನುಕರಣೀಯ ಶ್ಲಾಘನೀಯ ಶ್ರೀಧರ್.
ವ೦ದನೆಗಳೊ೦ದಿಗೆ
ನಿಮ್ಮ ಆತ್ಮೀಯ
ಡಾ||ಜ್ಞಾನದೇವ್

----------------------------------------------------
ಶ್ರೀ ವಿಶಾಲ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಅವರ ಮಾತನ್ನು ನೋಡಿ. ನಿಮ್ಮ ಅಭಿಪ್ರಾಯವನ್ನೂ ತಿಳಿಸಿ--------------------------------------------------
Sir,
Pardon me for writing this comment in English.
First of all the conversation was really interesting,it brought out so many questions and answers we all are searching for.

But at the same time I feel that we aren't going deep enough to understand what all sharmaji says.Our previous belief, faith & fear are the biggest roadblocks to understand the ultimate truth.So we were misguided by people who are greedy and dumb,all in the name of God.

As sharmaji rightly says(ofcourse from vedas), a person can
be misguided easily if
1.He is Ignorant
2.He has got fear
3.He has lots of desires.
We all have certain amount of these things which is acting againstus to accept the ultimate truth.

Its really sad that people think a lot about what other people think about them rather than understanding self.The fear what we have is always temporary if its seen in broader sense.

Life is all about the options we get and the choices we make.We have the option now,choosing the right thing is upto the individual.


Regards,

Vishal
June 4, 2010 6:45 PM