Pages

Sunday, June 15, 2014

ಅಂಧ ಮಕ್ಕಳ ಶಾಲೆಯಲ್ಲಿ ಪರಿಸರ ಜಾಗೃತಿ ಯಜ್ಞ

ಅದೊಂದು ಸುಂದರ ಕಾರ್ಯಕ್ರಮ. ಅಂಧಮಕ್ಕಳೊಡನೆ ಮೂರ್ನಾಲ್ಕು ಗಂಟೆ ಕಳೆದ ಮಧುರ ಕ್ಷಣಗಳು. ಪರಿಸರ ಜಾಗೃತಿ ಕಾರ್ಯಕ್ರಮ.ಸ್ಪಂಧನ ವೇದಿಕೆ ಮತ್ತು ವೇದಭಾರತಿಯ ಕಾರ್ಯಕರ್ತರು ಜೊತೆಗೂಡಿ ಮಾಡಿದ ಕಾರ್ಯಕ್ರಮ. ಎಲ್ಲಾ ಮಕ್ಕಳೂ ಹವಿಸ್ಸೊಂದನನ್ನು ಯಜ್ಞಕ್ಕೆ ಅರ್ಪಿಸಿದಾಗ ಅವರ ಮುಖದ ಮೇಲೆ ಅದೆಂತಹ ಆನಂದ!!















ಹಾಸನದ ಎಂ.ಕೃಷ್ಣಾ ಅಂಧಮಕ್ಕಳ ಶಾಲೆಯಲ್ಲಿ ಇಂದು ಸ್ಪಂಧನ ವೇದಿಕೆ ಮತ್ತು ವೇದಭಾರತಿಯ ಸಹಯೋಗದೊಡನೆ ಪರಿಸರ ಜಾಗೃತಿ ಕಾರ್ಯಕ್ರಮದ ನಿಮಿತ್ತ "ಪರಿಸರ ಜಾಗೃತಿ ಯಜ್ಞ" ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಲಲಾಗಿತ್ತು. ಆರಂಭದಲ್ಲಿ ವೇದಭಾರತಿಯ ಸದಸ್ಯರುಗಳಿಂದ ಅಗ್ನಿಹೋತ್ರ ನಡೆಯಿತು. ಎಲ್ಲಾ ಅಂಧಮಕ್ಕಳೂ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸುವಾಗ ಆನಂದ ಪರವಶರಾದರು. ಉತ್ತಮ ಪರಿಸರಕ್ಕಾಗಿ ಅಗ್ನಿಹೋತ್ರದ ಲಾಭವನ್ನು ವೇದಭಾರತಿಯ ಸಂಯೋಜಕರಾದ ಶ್ರೀ ಹರಿಹರಪುರಶ್ರೀಧರ್ ಅವರು ತಿಳಿಸುತ್ತಾ ಅಗ್ನಿಹೋತ್ರದ ಮಂತ್ರಗಳಿಂದ ಅಂತರಂಗ ಶುದ್ಧಿಯಾದರೆ ಅಗ್ನಿಹೋತ್ರದಲ್ಲಿ ಬಳಸುವ ತುಪ್ಪ, ಸಮಿತ್ತು ಮತ್ತು ಗಿಡ ಮೂಲಿಕೆಗಳು ಅಗ್ನಿಯಲ್ಲಿ ದಹನವಾಗಿ ಉಂಟಾಗುವ ರಾಸಾಯನಿಕ ಕ್ರಿಯೆಯಿಂದ ಪರಿಸರ ಶುದ್ಧವಾಗುವುದೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಮಲ್ಲೇಶಗೌಡರು ಭೂತಾಯಿ ಮತ್ತು ಹೆತ್ತತಾಯಿಯ ಮಹತ್ವವನ್ನು ತಿಳಿಸುತ್ತಾ , ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆತು ಸಮಾಜವು ಹಾದಿತಪ್ಪುತ್ತಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.

ಸಮಾರಂಭದ ನಂತರ ಶಾಲಾ ಹೊರ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯ್ತು. ಕಾರ್ಯಕ್ರಮದಲ್ಲಿ ಸ್ಪಂಧನ ವೇದಿಕೆಯ ಪ್ರಮುಖರೂ ವೇದಭಾರತಿಯ ಕಾರ್ಯದರ್ಶಿಗಳೂ ಆದ ಶ್ರೀಮತಿ ಕಲಾವತಿ, ಶಾಲೆಯ ಆದಳಿತಾಧಿಕಾರಿಗಳಾದ ಪ್ರೊ.ಜಯರಾಮ್ ಹಾಗೂ ವೇದಭಾರತಿ ಮತ್ತು ಸ್ಪಂಧನ ವೇದಿಕೆಯ ಸದಸ್ಯರುಗಳು ಪಾಲ್ಗೊಂಡಿದ್ದರು. ಆರಂಭದಲ್ಲಿ ನಿವೃತ್ತ ತಹಸಿಲ್ದಾರ್ ಮತ್ತು ವೇದಭಾರತಿಯ ಉಪಾಧ್ಯಕ್ಷರಾದ ಶ್ರೀ ಜಗದೀಶ್ ಅವರು ಸ್ವಾಗತಿಸಿದರೆ ಕೊನೆಯಲ್ಲಿ ಶ್ರೀಮತಿ ಉಮಾಜಗದೀಶ್ ಅವರು ವಂದನಾರ್ಪಣೆ ಮಾಡಿದರು.ಇಡೀ ಕಾರ್ಯಕ್ರಮವನ್ನು ಶ್ರೀಮತಿ ಕಲಾವತಿ ಅಚ್ಚುಕಟ್ಟಾಗಿ ನಿರ್ವಹಿಸಿದವರು.