Pages

Thursday, April 10, 2014

ವಿಜ್ಞಾನ ಇಷ್ಟೊಂದು ಮುಂದುವರೆದಿದೆ, ಜ್ಞಾನದ ಹಾತೊರೆಯುವಿಕೆ ಎಲ್ಲೆಲ್ಲಿಯೂ ಕಾಣಬರುತ್ತದೆ, ನಮ್ಮ ಋಷಿಮುನಿಗಳ ಚಿಂತನೆಯನ್ನು ತಿಳಿಯಲು ವಿಶ್ವದ ಜನರು ಕಾತುರರಾಗಿ ಭಾರತದ ಕಡೆ ನೋಡುತ್ತಿದ್ದಾರೆ. ಆದರೆ.......................

೧. ಇನ್ನೂ ನಮ್ಮಲ್ಲಿ ಮೌಢ್ಯ ಹರಿದಿಲ್ಲ

೨. ಕಟ್ಟುಕತೆಗಳಿಗೇ ವೇದಕ್ಕಿಂತ ಹೆಚ್ಚು ಮಾನ್ಯತೆ ಕೊಡುವ ದೊಡ್ದ ದೊಡ್ದ ವಿದ್ಯಾವಂತರೆನಿಸಿಕೊಂಡವರು ನಮ್ಮಲ್ಲಿಯೇ ಇದ್ದಾರೆ.

೩. ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧು: ಸೌಭಗಾಯ|
ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿ: ಸುದಿನಾ ಮರುದ್ಭ್ಯ: ||
[ಋಕ್ ೫.೬೦.೫]
ಯಾರೂ ದೊಡ್ದವರಲ್ಲಾ,ಯಾರೂ ಚಿಕ್ಕವರಲ್ಲ.ಭೂತಾಯಿಯ ಮಕ್ಕಳು ನಾವು,ಪರಮೇಶ್ವರನೇ ನಮ್ಮ ತಂದೆ. ನಾವೆಲ್ಲಾ ಸೋದರೆಂದು ಸಾರುವ ಋಗ್ವೇದದ ಈ ಮಂತ್ರಕ್ಕೆ ವೇದ ತಿಳಿದವರೇ ಅಪಚಾರ ಮಾಡುತ್ತಿಲ್ಲವಾ?

೪. ವೇದದ ಹೆಸರು ಹೇಳಿದೊಡನೆ ಉರಿದು ಬೀಳುವ ಜನರು ಒಂದು ಕಡೆ, ವೇದವನ್ನು ಅರಿತವರಿಂದಲೇ ವೇದ ವಿರೋಧಿ ನಡೆ ಮತ್ತೊಂದೆಡೆ.ಇದರಿಂದ ಸಮಾಜ ಸೊರಗಿಲ್ಲವೇ?

೫. ಅತ್ಯಂತ ದೊಡ್ದ ದೊಡ್ದ ಪದವೀ ಪಡೆದವರೂ ಕೂಡ ವೇದಕ್ಕೆ ವಿರುದ್ಧವಾದ ಅಂದರೆ ಅಜ್ಞಾನದ ಅಂಧಕಾರದಲ್ಲಿ ಮುಳುಗಿಲ್ಲವೇ? ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಡವೇ?

೬. ನಿಜವನ್ನು ದೇವರಮನೆಯಲ್ಲಿಟ್ಟು ಪೂಜೆ ಮಾಡುವ ವಿದ್ಯಾವಂತರೆನಿಸಿಕೊಂಡವರು ನಿಜವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅವರ ಉದ್ಧಾರವೂ ಆಗುತ್ತದೆ,ಸಮಾಜದ ಉದ್ಧಾರವೂ ಆಗುತ್ತದೆ.

೭. ಭಾರತದಲ್ಲಿ ವೇದದ ನಿಜವಾದ ಅರಿವುಂಟಾದರೆ ಅದು ಉದ್ಧಾರವಾಗುವುದರಜೊತೆಗೆ ವಿಶ್ವವನ್ನೂ ಮೇಲೆತ್ತುವ ಶಕ್ತಿ ಭಾರತಕ್ಕಿದೆ.

೮. ಆದರೆ ಕಟ್ಟು ಕತೆಗಳನ್ನೇ ವೇದದ ಹೆಸರಿನಲ್ಲಿ ಪಾಶ್ಚಾತ್ಯರಿಗೆ ತಿಳಿಸಿ ನಿಜವನ್ನು ಗಂಟುಕಟ್ಟಿಟ್ಟಿರುವ so called ವಿದ್ವಾಂಸರೇ ದಯಮಾಡಿ ವೇದಕ್ಕೆ ಅಪಚಾರ ಮಾಡಬೇಡಿ ತನ್ಮೂಲಕ ನಿಮಗೇ ನೀವು ದ್ರೋಹ ಮಾಡಿಕೊಳ್ಳಬೇಡಿ..