Pages

Tuesday, March 11, 2014

ಗೋಗ್ರಾಸ ನೀಡುವಿರಾ?

     ಮೈಸೂರು ಜಿಲ್ಲೆ ಕೆ.ಆರ್.ನಗರ ತಾ. ಹಂಪಾಪುರದಲ್ಲಿರುವ ಶ್ರೀಮತಿ ಸ್ವರೂಪರಾಣಿ ಮತ್ತು ಶ್ರೀ ಮದುಸೂದನ್ ದಂಪತಿಗಳು ತಮ್ಮ ಮಗನ ಸ್ಮರಣೆಯಲ್ಲಿ  ಸುಭಾಷ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಗೋಶಾಲೆಯಲ್ಲಿ ಸುಮಾರು 35 ಗೋವುಗಳಿವೆ. ಗೋವುಗಳ ಮೇವಿಗಾಗಿ ಪ್ರತಿ ದಿನ ಸುಮಾರು ರೂ. 2500/- ವೆಚ್ಚ ಬರುತ್ತದೆ. ಈ ಗೋಶಾಲೆಯ ನಿರ್ವಹಣೆಗೆ ಗೋಪ್ರೇಮಿಗಳು ಸಹಕರಿಸದಿದ್ದರೆ ಗೋವುಗಳ ನಿರ್ವಹಣೆ ಕಷ್ಟಕರವೆಂಬುದು ಪ್ರತ್ಯಕ್ಷವಾಗಿ ಭೇಟಿ ನೀಡಿರುವ ವೇದಭಾರತಿಯ ಸದಸ್ಯರ ಗಮನಕ್ಕೆ ಬಂದಿದೆ. ಕೆಲವು ದಿನಗಳಿಗಾಗಿವಷ್ಟಾದರೂ ಗೋಗ್ರಾಸಕ್ಕೆ ಆರ್ಥಿಕ ಸಹಕಾರ ನೀಡಬೇಕೆಂಬ ಅನಿಸಿಕೆಗೆ ತಕ್ಷಣ ಸ್ಪಂದಿಸಿ ಇವರುಗಳು ತಲಾ ರೂ. 2500/- ಅನ್ನು ಕೊಟ್ಟಿದ್ದಾರೆ:
ಶ್ರೀಯುತರಾದ: 1. ಕ.ವೆಂ.ನಾಗರಾಜ್, 2. ಹರಿಹರಪುರ ಶ್ರೀಧರ್, 3. ಅಶೋಕ್, 4. ಸಣ್ಣಸ್ವಾಮಿಶೆಟ್ಟಿ.
10-20 ದಿನಗಳಿಗಾಗುವಷ್ಟಾದರೂ ಸಂಗ್ರಹಿಸಿಕೊಡೋಣ. ಆಸಕ್ತರು, ಗೋಪ್ರೇಮಿಗಳು ಕೈಜೋಡಿಸುವಿರಾ?
-ವೇದಭಾರತಿಯ ಸದಸ್ಯರು.