Pages

Monday, July 11, 2011

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ

ಶ್ರೀ ರಾಮಪ್ರಸಾದ್[ಹಂಸಾನಂದಿ] ಇವರು ಮೂಲತ: ಹಾಸನದವರು.ವಿದೇಶದಲ್ಲಿದ್ದು ಕನ್ನಡ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಅತ್ಯಂತ ಕಳಕಳಿಯುಳ್ಳವರು. ಸಂಗೀತದ ಆರಾಧಕರು.ಅವರ ಮತ್ತು ಅವರ ಪತ್ನಿಯ ಪುಸ್ತಕಗಳನ್ನು ಬೆಂಗಳೂರಿನಲ್ಲಿ ಬಿಡುಗಡೆಮಾಡಲಿದ್ದು ವೇದಸುಧೆಯ ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಅವರ ಆಮಂತ್ರಣವನ್ನು ಇಲ್ಲಿ ಪ್ರಕಟಿಸಿರುವೆ. ವೇದಸುಧೆಯ ಅಭಿಮಾನಿಗಳು ಅದರಲ್ಲೂ ಬೆಂಗಳೂರಿನಲ್ಲಿರುವ ಎಲ್ಲರೂ ತಪ್ಪದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಲು ವಿನಂತಿಸುವೆ.
-ಹರಿಹರಪುರಶ್ರೀಧರ್
--------------------------------------------------

ಹಂಸನಾದ ಅಂದರೆ ಕರ್ನಾಟಕ ಸಂಗೀತದ ಒಂದು ಒಂದು ಜನಪ್ರಿಯ ರಾಗ. ನಂತರ, ನನ್ನ ಬ್ಲಾಗಿಗೆ ಅದೇ ಹೆಸರನ್ನು ನಾನು ಕೊಟ್ಟಿದ್ದೆ. ನನ್ನ ಮನಸ್ಸಿಗೆ ತೋಚಿದ್ದನ್ನೆಲ್ಲ ಮೂರು ನಾಲ್ಕು ವರ್ಷಗಳಿಂದ ಗೀಚ್ತಾ ಹೋಗಿದ್ದೆ ಅನ್ನಿ.

ಹೀಗೆ ನಾನು ಬರೆದ ಬರವಣಿಗೆಯಲ್ಲಿ ಆಯ್ದ ಕೆಲವು ಸುಭಾಷಿತ ಅನುವಾದಗಳು ಒಂದು ಪುಸ್ತಕವಾಗಿ ಸದ್ಯದಲೇ ಹೊರಬರಲಿದೆ ಎಂಬ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ.

ಪುಸ್ತಕದ ಹೆಸರು ಕೂಡ ಹಂಸನಾದ ಅಂತಲೇ!

ಪುಸ್ತಕದ ಬಿಡುಗಡೆ ಜುಲೈ ೧೬ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜೊತೆಯಲ್ಲೇ ನನ್ನ ಶ್ರೀಮತಿಯ ಕಥಾಸಂಕಲನವೊಂದು ಕೂಡ ಬಿಡುಗಡೆ ಆಗುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಈ ಸಂತಸವನ್ನು ಇನ್ನೂ ಹೆಚ್ಚಿಸಲು ನೀವು ತಪ್ಪದೇ ಬರಬೇಕು, ನಮ್ಮೊಂದಿಗೆ ಇರಬೇಕು. .

ಹಲವು ಬ್ಲಾಗ್ ಗೆಳೆಯರಿಗೆ ಮಿಂಚಂಚೆ ಕಳಿಸಿರುವೆನಾದರೂ, ಕೆಲವರ ಮಿಂಚಂಚೆ ವಿಳಾಸ ಇರದೆಯೋ, ಇಲ್ಲವೇ ಕಣ್ತಪ್ಪಿನಿಂದಲೋ ನಿಮಗೆ ತಲುಪಿಲ್ಲದಿದ್ದರೆ ದಯವಿಟ್ಟು ಇದನ್ನೇ ನನ್ನ ಕರೆಯೋಲೆಯೆಂದು ತಿಳಿಯಬೇಕೆಂದು ಕೋರಿಕೆ.