Pages

Wednesday, November 25, 2015

ಹಾಸನದ ವೇದಭಾರತೀ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ನಾರಾಯಣಾನಂದ ಸರಸ್ವತೀ ಸ್ವಾಮೀಜಿಯವರು ಉಪನ್ಯಾಸ ಮಾಡಿದರು

[ಪೂಜ್ಯ ಶ್ರೀ ನಾರಾಯಣಾನಂದ ಸರಸ್ವತೀ ಸ್ವಾಮೀಜಿಯವರು ಹಾಸನದ ವೇದಭಾರತಿಯಲ್ಲಿ ದಿನಾಂಕ 25.11.2015 ರಂದು ನಡೆಸಿಕೊಟ್ಟ ಉಪನ್ಯಾಸನ ಮೊದಲ ಕಂತು. ಉಪನ್ಯಾಸದ ಬರಹರೂಪವನ್ನು ಸಿದ್ಧಪಡಿಸಿದವರು ಸಂಸ್ಕೃತ ಶಿಕ್ಷಕರಾದ ಶ್ರೀ ಭೈರಪ್ಪಾಜಿ]
ಉಪನ್ಯಾಸದ  ಆಡಿಯೋ  ಮೊದಲ ಕಂತು ಕೆಳಗಿನ ಕೊಂಡಿಯಲ್ಲಿ ಲಭ್ಯ
http://www.vedasudhe.com/wp-content/uploads/2015/11/Astika-Nastika.mp3

ನಾಸ್ತಿಕ ಯಾರು ಅಂತ ಹೇಳಿದ್ರೆ ಯಾರು ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲವೋ ಅವನು ನಾಸ್ತಿಕ. ದೇವರನ್ನ ನಂಬುವರಲ್ಲ ಅಂತ ಅರ್ಥ ಅಲ್ಲ. ನಂಬ್ತಾರೆ. ಆದರೆ ವೇದವನ್ನು ಪ್ರಮಾಣವಾಗಿ ಸ್ವೀಕರಿಸುವುದಿಲ್ಲ. ಆದ್ದರಿಂದಲೆ ಅವರು ನ ಅಸ್ತಿ ಇತಿ ಮನ್ಯತೇ | ಇಲ್ಲ ಅಂತ ಹೇಳ್ತಾರೆ ವೇದವನ್ನು ನಂಬೋದಿಲ್ಲ ಅವರು. ಇನ್ನು ಷಡ್ದರ್ಷನಗಳಿವೆ. ಅವು ವೇದವನ್ನು ಪ್ರಮಾಣವಾಗಿ ಸ್ವೀಕಾರ ಮಾಡುತ್ತವೆ. ಆಸ್ತಿಕರು, ಅಸ್ತಿ, ಅಸ್ತಿ, ಅಸ್ತಿ ಇತಿ ಕಥ್ಯತೇ | ಆಸ್ತಿಕರು, ಏನು ಇದೆ ಅಂತ ಹೇಳ್ತಾರೆ ? ಅಸ್ತಿ ಇತಿ ಮನ್ಯತೆ | ಇದೆ ಅಂತ ಏನು ಇದೆ ? ಮಾನವನ ಒಂದು ಇಂದ್ರಿಯಕ್ಕೆ ನಿಲುಕದಂತ ಒಂದು ವಸ್ತು ಇದೆ. ದಿವ್ಯ ಅದ್ಭುತವಾದ ಒಂದು ಶಕ್ತಿ ಇದೆ. ಈ ಲೋಕ ಮಾತ್ರವಲ್ಲ ಬ್ರಹ್ಮಾಂಡವನ್ನು ನಡೆಸುತ್ತಿರುವ ಒಂದು ಶಕ್ತಿ ಇದೆ. ನಾವೆಲ್ಲರೂ ಅದನ್ನು ನಂಬಿದ್ದೇವೆ.​ ಅದು ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ. ಅದು​ ಗೋಚರವಾಗಲಿಕ್ಕೆ ಸಾಧ್ಯವಿಲ್ಲ.ಇಂದ್ರಿಯಾತೀವಾಗಿರುವಂತದ್ದು ಅದು. ಕಣ್ಣಿಂದ ಕಿವಿಗಳಿಂದ ಅಥವಾ ನಮ್ಮ ಯಾವುದೇ ಇಂದ್ರಿಯಗಳಿಂದ ಅದನ್ನು ಅನುಭವಿಸಲಿಕ್ಕೆ ಸಾಧ್ಯವಿಲ್ಲ. ನಿದ್ದೆಯಲ್ಲಿ ಶೂನ್ಯದ ಅವಸ್ಥೆಯಲ್ಲಿರುತ್ತೇವೆ. ನೋಡಿ ಅದು ಬ್ರಹ್ಮಾನಂದಸ್ಥಿತಿ. ಬ್ರಹ್ಮೈಕ್ಯದ ಸ್ಥಿತಿ. ಅದಕ್ಕೆ ಯಾರೋ ಒಬ್ಗರು ಹಿರಿಯರು ಹೇಳ್ತಾ ಇದ್ದರು. ನಾವು ನಿದ್ರೆ ಮಾಡಿದರೆ ಅದು ಅಲ್ಪ ಕಾಲದ ಮರಣ. ನಾವು ಸುಧೀರ್ಘವಾದ ನಿದ್ರೆ ಮಾಡಿದರೆ ಅದು ಮರಣ. ಅಲ್ಪ ಮರಣ ನಿದ್ರೆ. ಸುಧೀರ್ಘ ನಿದ್ರೆ ಮರಣ. ಎಷ್ಟು ಸೊಗಸಾಗಿ ಹೇಳಿದರು ನೋಡಿ. ಆ ಅಲ್ಪ ಮರಣದ ನಿದ್ರೆಯಲ್ಲಿ ​ ಹೇಗೆ ಇರುತ್ತೇವೆ ನೋಡಿ. ಆಗ ಬ್ರಹ್ಮೈಕ್ಯದ ಸ್ಥಿತಿಯಲ್ಲಿರುತ್ತೇವೆ. ಯಾರನ್ನಾದರೂ ಎಬ್ಬಿಸಿ ಕೇಳಿ. ಏನಪ್ಪಾ ಹೇಗಿತ್ತು ?​ ಅಂದರೆ​ ಅವರು ಹೇಳ್ತಾರೆ. ಹೇಗಿತ್ತು..... ಅಹಂ ಕಿಮಪಿ ನ ಜಾನಾಮಿ | ನನಗೇನು ಗೊತ್ತಾಗಲಿಲ್ಲ. ಆದರೆ ಒಂಥರಾ ಒಂಥರಾ ಸುಖವಾಗಿತ್ತು. ಸುಖವಾಗಿತ್ತು ? ಆದರೆ ಏನು ಗೊತ್ತಾಗಿಲ್ಲ ಅಂತ ಹೇಳ್ತೀರಿ. ಮತ್ತೆ ಸುಖವಾಗಿದ್ದೆ ಅಂತ ಹೇಳ್ತೀರಿ ? ಅಲ್ಲ ಅದೇನೋ ಒಂಥರಾ ಎಲ್ಲ ಮರೆತಿದ್ದೆ ನಾನು. ನಾನು ಯಾರು ಎಂಬುದನ್ನು ಕೂಡ ಮರೆತಿದ್ದೆ. ವಿಚಾರ ಮಾಡಿ. ಆತ ಆಸ್ತಿಕ. ಸತ್ಯದ ಅವಸ್ಥೆಯಲ್ಲಿರುತ್ತಾನೆ. ಅದಕ್ಕೆ ಮಾಂಡೂಕ್ಯ ಉಪನಿಷತ್ತಿನಲ್ಲಿ ಹೇಳ್ತಾರೆ. ಹೇಗೆ ನಾವು ನಿದ್ರಾ ಸ್ಥಿತಿಯಲ್ಲಿದ್ದೆವೋ ಅದೇ ರೀತಿ ಜಾಗೃತಾವಸ್ಥೆಯಲ್ಲಿದ್ದರೆ ಅಲೌಕಿಕ ಚಿಂತನೆಯಲ್ಲಿದ್ದೇವೆ ಅಂತ ಅರ್ಥ. ಮತ್ತೊಮ್ಮೆ ಹೇಳ್ತೇವೆ. ನಿದ್ರೆಯ ಅವಸ್ಥೆಯಲ್ಲಿ ಹೇಗಿರುತ್ತೇವೆಯೋ ಅದೇ ಅವಸ್ಥೆಯನ್ನು ಜಾಗೃತ ಅವಸ್ಥೆಯಲ್ಲಿ ಅನುಭವಿಸಿದಾಗ ಅದು ಅಲೌಕಿಕವಾದಂತಹ ಸ್ಥಿತಿ. ಅರ್ಥ ಆಯ್ತಲ್ಲ ?
ಈ ಆಸ್ತಿಕ ನಾಸ್ತಿಕ ಭೇದದಲ್ಲಿ ಲೋಕದ ಜನರಿದ್ದಾರೆ. ಅಲೌಕಿಕ ಅಂದರೆ ಅರ್ಥ ಏನು ? ಈ ಲೋಕಕ್ಕೂ ಮಿಗಿಲಾಗಿರುವಂತದ್ದು. ಇಂಗ್ಲಿಷ್ ನಲ್ಲಿ ಹೇಳ್ತೇವೆ. Here and hereafter ಇಲ್ಲಿ ಮತ್ತು ಇಲ್ಲಿಂದಾಚೆ ಯಾರೂ ಕೂಡ ಇದೂವರೆಗೆ ಇಲ್ಲಿಂದಾಚೆ ಹೋದವರು ಈ ಲೋಕದಿಂದ ಹೋದವರು ವಾಪಸ್ಸು ಬಂದು ನಮಗೆ ರಿಪೋರ್ಟ್ ಕೊಟ್ಟಿಲ್ಲ. ಓ ನೋಡಪ್ಪ ಅಲ್ಲಿ ಇದ್ದೀನಿ ನಾನು. ಅಲ್ಲಿದ್ದೆ. No past tense, no present tense ಅಲ್ಲಿ. ಹೋದರೆ ಹೋದಾಗೆ. ಮತ್ತೆ ಅವರು ಎಲ್ಲಿದ್ದಾರೋ ? ಯಾವ ಲೋಕ ಸೇರಿಕೊಂಡಿದ್ದಾರೋ ? ಯಾವ ಹುದ್ದೆ ? ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೋ ? ಏನು ಗೊತ್ತಿಲ್ಲ. ರಹಸ್ಯವಾಗಿದೆ ಅದು. ಆದರಿಂದಲೇ ನಾವು ವೇದಪ್ರಮಾಣವನ್ನು ತೆಗೆದು ಕೊಂಡಾಗ ಹೇಗೆ ಜೀವಿಸಬೇಕು ಅನ್ನೋದನ್ನ ಕಲಿಯೋದು ಮಾತ್ರವಲ್ಲ. ಹೇಗೆ ಜೀವಿಸಿದರೆ ಹೇಗೆ ಪ್ರಾಪ್ತಿಯಾಗುತ್ತೆ ಅನ್ನೋದು ಕೂಡ ವೇದದಲ್ಲಿದೆ. ಏಕೆಂದರೆ ಅದನ್ನು ಮಾನವನು ಹೇಳೋಕೆ ಸಾಧ್ಯವಿಲ್ಲ. ಮಾನವ ಶರೀರ ಬಿಟ್ಟರೆ ಬಿಟ್ಟ ಹಾಗೆ. ವಾಪಸ್ಸು ಬಂದು ಹೇಳೋದಿಲ್ಲ.