Pages

Wednesday, January 30, 2013

ಭಗವಂತನ ಅವತಾರ

ಭಗವಂತನು ಯಾಕೆ ಅವತಾರವನ್ನು ತಾಳಬೇಕು?ಅದರ ಅವಶ್ಯಕತೆ ಏನಿದೆ?ಸಕಲ ಚರಾಚರಗಳಲ್ಲಿಯೂ ಸ್ವಯಂ ಪ್ರಕಾಶಿತನಾದ ಪರಮಾತ್ಮನು ತಾನು ತನ್ನ ಸಂಕಲ್ಪ ಮಾತ್ರದದಿಂದಲೇ ಸಕಲ ಕಾರ್ಯಗಳನ್ನೂ ಮಾಡಿಸಬಲ್ಲಂಥಹ ಶಕ್ತಿಯೇ ಸ್ವಯಂ ತಾನಾಗಿದ್ದರೂ,ಯಾವುದೋ ಜೀವಿಯಾಗಿ ಮೃತ್ಯುಲೋಕದಲ್ಲಿ ಜನ್ಮ ಎತ್ತಲು ಕಾರಣವೇನು?ಅದರ ಅವಶ್ಯಕತೆ ಇದೆಯೇ?


ಧರ್ಮ ಎನ್ನುವುದು ಒಂದೇ ಅದನ್ನು ಬೇರೆ ಬೇರೆ ಜನ ಸಮುದಾಯಗಳು ತಮ್ಮ ಸಮಾಜಕ್ಕೆ, ದೇಶಕ್ಕೆ ಹಾಗೂ ಅನುಕೂಲಕ್ಕೆ ಹೇಗೆ ಬೇಕೋ, ಅದಕ್ಕೆ ತಕ್ಕಂತೆ ಅಳವಡಿಸಿಕೊಂಡಿದೆ.ಕ್ಷಣಿಕ ಸತ್ಯ, ಅರ್ಧ ಸತ್ಯ, ಪೂರ್ಣ ಸತ್ಯಗಳಲ್ಲಿ, ಸತ್ಯದ ಪ್ರಮಾಣ ಬೇರೆ ಬೇರೆ ಯಾದರೂ, ಅದರ ಸ್ವರೂಪ ಬದಲಾಗುವುದಿಲ್ಲ.ಹಾಗಾಗಿ ಕಲ್ಪನೆಗೂ ಹಾಗೂ ಸತ್ಯಕ್ಕೂ ವ್ಯತ್ಯಾಸವಿದೆ.ದೇವರ ಸ್ವರೂಪ ನಮಗೆ ಕಲ್ಪನೆಗೂ ಸಿಗದಂಥದ್ದು ಇರಬಹುದು.ಆದರೆ,"ನಾಸ್ತಿಕ ಧರ್ಮ" ಎಂಬುದು ಇಲ್ಲ.ಎಲ್ಲರೂ ಒಂದೆಲ್ಲ ಒಂದು ದಿನ ಶುದ್ಧ ನಾಸ್ತಿಕ ತತ್ವಕ್ಕೆ ಹೋಗಿ ತಲುಪಬೇಕಾಗುತ್ತದೆ ಅದೇ ನಶ್ವರ ಸಿದ್ಧಾಂತ.ಆಸ್ತಿಕನಾಗಲೀ,ನಾಸ್ತಿಕನಾಗಲೀ ನಂಬಿಕೆಗಳು ಬೇರೆಯಾದರೂ, ತಲುಪಬೇಕಾದ ಗುರಿ ಒಂದೇ ಆಗಿರುತ್ತದೆ.ನಮ್ಮ ಕುರುಡುತನದಲ್ಲಿ ಆನೆಯ ಸ್ವರೂಪ ವಿವರಿಸಲಾಗದಿದ್ದರೂ ಕೂಡ,ಜ್ಞಾನಿಗಳು, ಋಷಿ, ಮುನಿಗಳು ತಮ್ಮ ಅನ್ಥಶಕ್ತಿಯಿಂದ ಅದನ್ನು ನಮಗೆ ತಿಳಿಯಪಡಿಸಿದ್ದಾರೆ.ಆ ಆಘಾಧತೆಯೂ, ಅತಿ ಸೂಕ್ಷಮವೂ, ಆದಿ, ಅಂತ್ಯ, ರಹಿತವಾದ ದಿವ್ಯ ಶಕ್ತಿಯನ್ನು ಸಾಕಾರ ಮಾಡಿಕೊಂಡವರಿಗೆನೂ ಕಡಿಮೆ ಇರುವುದಿಲ್ಲ ಏಕೆಂದರೆ ಬೇರೆಲ್ಲಾ ದೇಶಗಳು ಕರ್ಮಭೂಮಿಯಾಗಿದ್ದರೆ ಭಾರತ ಧರ್ಮಭೂಮಿ.ಅದಕ್ಕೆ ನಮ್ಮಲ್ಲಿ ಋಷಿ ಪರಂಪರೆ ಇತ್ತು.ಹಾಗೆಯೇ ಅವತಾರಗಳಿಗೂ ಕೂಡ ನಿದರ್ಶನವಿದೆ.ಅದನ್ನು ಆತ್ಮಜ್ನಾನಿಗಳೇ ನಮಗೆ ತಿಳಿಸಿರುತ್ತಾರೆ. "ಅವತಾರ" ಎನ್ನುವುದು ಬರೀ ಕಲ್ಪನೆಯಲ್ಲ.ಆದರೆ ಏಕೆ ಭಗವಂತ ಅವತಾರ ತೆಗೆದುಕೊಳ್ಳುತ್ತಾನೆ? ಎಂದರೆ,ಮನುಷ್ಯಮಾತ್ರರಾಗಿ ರೂಪದಲ್ಲಿದ್ದರೂ,ಮಾನವ ರೂಪದಲ್ಲಿ ನಡೆಸುತ್ತಿರುವ ಅಧರ್ಮಿಗಳಿಗೆ ಮಾನವ ರೂಪದಲ್ಲಿಯೇ ಪಾಠಕಲಿಸಲೆಂದು.ಆಗ ಮಾತ್ರಾ ಅಧರ್ಮಿಗಳ ದುರಹಂಕಾರ ಅಳಿಯಲು ಸಾಧ್ಯ ಎಂದು.ಭಗವಂತನಿಂದಾ ಬೇರೆಯಾದ ಆತ್ಮ ತಾನು ಯಾರೆಂದು ಅರಿತು ಮತ್ತೆ ಅವನಲ್ಲಿ ಸಾಯುಜ್ಯ ಹೊಂದುವವರೆಗೆ, ಪ್ರತಿ ಜೀವಿಯೂ ತಾವು ಹೊಂದಿರುವ ದೇಹದ ಇಂದ್ರಿಯಗಳ ವಾಸನೆಯಿಂದಾ, ಮನಸ್ಸು, ಬುದ್ಧಿಯಿಂದಾ ಮಾಡಲ್ಪಟ್ಟ ಕರ್ಮಾನುಸಾರವಾಗಿ, ಅವರವರ ಫಲಗಳನ್ನು ಅನುಭವಿಸುತ್ತಾರೆ. ಅದರಲ್ಲಿ ಭಗವಂತನ ಹಸ್ತಕ್ಷೇಪ ಇರುವುದೇ ಇಲ್ಲ.ಇಲ್ಲದಿದ್ದರೆ ಅಧರ್ಮ ಮಾಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.ಹಾಗಾಗಿ ಅವತಾರ ಬರೀ ಕಲ್ಪನೆಯಲ್ಲ. ಅದು ನಿಜವಾದ ಸಂಗತಿ.ಮನುಷ್ಯನಿಗೆ ತಾನು ಎಕೆ ಹುಟ್ಟಿದ್ದೇನೆ ಎಂಬ ಅರಿವು ಯಾರಿಗೂ ಇರುವುದಿಲ್ಲ. ಕೇವಲ ಹುಡುಕಾಟ ಇರುತ್ತದೆ ಅಷ್ಟೇ. ಅದಕ್ಕಾಗಿಯೇ ಈ ಮನುಷ್ಯ ಎಂಬ ಪ್ರಾಣಿ ಏನು ಮಾಡಬೇಕೆಂದು ತೋಚದೆ ತೋಚಿದ್ದನ್ನೆಲ್ಲಾ ಮಾಡುತ್ತಿರುತ್ತಾನೆಆದ್ದರಿಂದಲೇ ವೈವೀಧ್ಯತೆ ಇರುತ್ತದೆ.ಏಕೆಂದರೆ ಅದೇ ಪರೋಕ್ಷವಾದ ಹುಡುಕಾಟವಾಗಿರುತ್ತದೆ. ಆದರೆ,ಅವತಾರಿಗಳಲ್ಲಿ ತಮ್ಮ ಜನ್ಮದ ಉದ್ದೇಶದ ಅರಿವು ಸ್ಪಷ್ಟವಾಗಿ ಇರುತ್ತದೆ. ಹಾಗೂ ಪ್ರಕೃತಿಯ ಅಧೀನವಾಗಿ ಇರುವುದಿಲ್ಲ. ಇದೇ ಅವತಾರಿಗಳಿಗೂ ನಮ್ಮ ನಿಮ್ಮಂಥ ಹುಲುಮಾನವರಿಗೂ ಇರುವ ವ್ಯತ್ಯಾಸ.

Tuesday, January 29, 2013

ವಿವೇಕವಾಣಿ




     ವೇದಗಳೆಂದರೆ ಗ್ರಂಥಗಳಲ್ಲ. ಅವು ವಿವಿಧ ಅವಧಿಗಳಲ್ಲಿ ವಿವಿಧ ವ್ಯಕ್ತಿಗಳು ಸಂಗ್ರಹಿಸಿದ ಆಧ್ಯಾತ್ಮಿಕ ನಿಯಮಗಳ ಭಂಡಾರ. ಗುರುತ್ವಾಕರ್ಷಣ ಶಕ್ತಿಯ ನಿಯಮವನ್ನು ಕಂಡು ಹಿಡಿಯುವ ಮೊದಲೇ ಅದು ಹೇಗೆ ಇದ್ದಿತ್ತೋ ಮತ್ತು ಮಾನವ ಜನಾಂಗ ಅದನ್ನು ಮರೆತರೂ ಅದು ಹೇಗೆ ಇರುವುದೋ, ಹಾಗೆಯೇ ಆಧ್ಯಾತ್ಮಿಕ ಪ್ರಪಂಚವನ್ನು ನಿಯಂತ್ರಿಸುವ ಈ ನಿಯಮಗಳೂ ಇರುವುವು.
     By the Vedas no books are meant. They mean the accumulated treasury of spiritual laws discovered by different persons in different times. Just as the law of gravitation existed before its discovery, and would exist if all humanity forgot it, so is it with the laws that govern the spiritual world.
-ಸ್ವಾಮಿ ವಿವೇಕಾನಂದ.
     ಆಧ್ಯಾತ್ಮಸಾಧನೆಯ ಉತ್ತುಂಗ ಸ್ಥಿತಿ ತಲುಪಿದ್ದ ಶ್ರೀ ರಾಮಕೃಷ್ಣರ ಪೂರ್ಣಾನುಗ್ರಹ ಪಡೆದ ವಿವೇಕಾನಂದರು ಶಾಸ್ತ್ರಾಧ್ಯಯನ ಸಂಪನ್ನರೂ ಆಗಿದ್ದರು. ಸಮಾಜದೊಂದಿಗೆ ಏಕೀಭಾವ ಹೊಂದಿದ್ದ ಅವರು ಆ ವಿಷಯದಲ್ಲಿ ಎಷ್ಟು ತಾದಾತ್ಮ್ಯ ಹೊಂದಿದ್ದರೆಂದರೆ, ಅವರಿಗೆ ಅದು ಕೇವಲ ವೈಚಾರಿಕ ಧೋರಣೆಯಾಗಿರದೆ ವೈಯಕ್ತಿಕ ಶ್ರದ್ಧೆಯ ವಿಷಯವೂ ಆಗಿತ್ತು. ಈ ಕಾರಣದಿಂದಲೇ ಅವರು ಇಹಲೋಕ ತ್ಯಜಿಸಿ ನೂರು ವರ್ಷಗಳ ಮೇಲಾದರೂ ಇಂದಿಗೂ ಅವರ ವಿಚಾರಗಳು ಜೀವಂತವಾಗಿವೆ ಮತ್ತು ಮಾರ್ಗದರ್ಶಿಯಾಗಿವೆ.

Monday, January 28, 2013

ಸದ್ಭಾವನೆ !


Sudhakar sharma1.JPG

ಮನದಲ್ಲಿ ಹೊಕ್ಕ ವಿಚಾರ ನಮ್ಮಲ್ಲಿ ಏನೆಲ್ಲಾ ಭಾವನೆ ಉಂಟು ಮಾಡಬಹುದು! ನೀವೇ  ನೋಡಿ. ಶ್ರೀ  ವಿಶ್ವನಾಥ ಕಿಣಿಯವರು ವಾಸವಿರುವುದು ಪೂನಾದಲ್ಲಿ. ವೇದಸುಧೆಯಲ್ಲಿ ಸುಧಾಕರ ಶರ್ಮರ ಉಪನ್ಯಾಸಗಳನ್ನು  ಕೇಳಿ, ಅವರ ಭಾವಚಿತ್ರವನ್ನು ನೋಡಿ ಅವರ ಮನಸ್ಸಿನಲ್ಲಿ ಹೇಗೆ ಅನ್ನಿಸಿದೆ, ನೋಡಿ.

-ಹರಿಹರಪುರ ಶ್ರೀಧರ್



Aadaraneeya Shreedhar,

From day one of listening and viewing of Shree Sudhakar Sharma, my mind is saying like -
You know this person, he is familiar to you; like that.
Some 2 months back it was like a flash to me - The similarity is with none other than with
the idol of Lord Shree Vedavyasa, which was worshiped by our Gurus and society.
Kindly view the attachment. the similarity i found were

1. Hair and beard style

2. Sitting posture including the aasana and mudra of hand.

This may feel odd as we are speaking of non-vigraha aradhane and the similarity is non other than lord Vedavyasa 

This is the main reason i haven't sent you the mail so far. But I couldn't resist my self as both have close reference to the 'Veda'.


Thanxz and Regards

Tuesday, January 15, 2013

condolences expressed by RSS Chief for thr demise of Poojya Balagangadharanatha Swmeeji





Vishwa Samvada Kendra Karnataka::
        RSS Sarasanghachalak Mohan Bhagwat has expressed deep condolences on the demise of Balagangadharanatha Swamiji. In his condolence message addressed to Sri Nirmalanandanatha Swamiji of Adichunchanagiri Mutt, RSS Chief Mohan Bhagwat said, “Just received the sad news of demise of Sri Swamiji. I am deeply shocked. Swamiji’s guidance was most needed in these turbulent times. I express condolences on behalf of Rashtriya Swayamsevak Sangh. This calamity of losing an able guide would be a very painful experience for Swamiji’s Shishya’s including yourself. All of us in RSS sympathize with your feelings of lose and pain. This is a national loss. We pray the courage to bear it.Our heartfelt homage to the sacred memory of Param Poojaneeya Swamiji.”

ಲಂಡನ್ ಮಕ್ಕಳ ಸಂಸ್ಕೃತ ಪ್ರೇಮ







"ಬೈ ಡ್ಯಾಡ್, ಬೈ ಮಾಮ್, ಬೈ ತಾತ್"
     ಒಂದನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಮೊಮ್ಮಗಳು ಪುಸ್ತಕದ ಮೂಟೆಯನ್ನು ಹೊತ್ತುಕೊಂಡು ಶಾಲೆಯ ಬಸ್ಸಿಗೆ ಹತ್ತುವಾಗ ಕೈಬೀಸಿ ಹೇಳಿದ್ದು ಹೀಗೆ. ಅವಳು ನನ್ನನ್ನು 'ತಾತ್' ಎಂದು ಕರೆಯುವುದಕ್ಕೆ ಕೊಟ್ಟಿದ್ದ ವಿವರಣೆ: "ತಾತಾ, ಗ್ರ್ಯಾಂಡ್ ಫಾದರ್, ಗ್ರ್ಯಾಂಡ್ ಪಾ ಈಸ್ ಟೂ ಲಾಂಗ್. ಸೋ ಐ ಕಾಲ್ ಯು ತಾತ್!" ಲಕ್ಷಗಟ್ಟಲೆ ಡೊನೇಶನ್ ಕೊಟ್ಟು ಸೇರಿಸಿದ್ದ ಆ ಪ್ರತಿಷ್ಠಿತ  ಶಾಲೆಯಲ್ಲಿ ಕನ್ನಡ ಮಾತನಾಡುವಂತಿರಲಿಲ್ಲ. ಎಲ್ಲಾ ಇಂಗ್ಲಿಷಿನಲ್ಲೇ ಆಗಬೇಕು. ಬೆಂಗಳೂರಿನಲ್ಲಿ ಕೆಲವು ದಶಕಗಳ ಹಿಂದೆ ಮಕ್ಕಳು ಮಾತ್ರ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದವು. ಈಗ ಆ ಮಕ್ಕಳೂ ದೊಡ್ಡವರಾಗಿದ್ದಾರೆ. ಈಗ ಎಲ್ಲರೂ, ಎಲ್ಲೆಲ್ಲೂ ಇಂಗ್ಲಿಷಿನಲ್ಲೇ ಮಾತನಾಡುತ್ತಾರೆ. ಬೆಂಗಳೂರಿನಲ್ಲಿ ಅವಿದ್ಯಾವಂತರೂ ಸಹ ಇಂಗ್ಲಿಷಿನಲ್ಲಿ ಸರಾಗವಾಗಿ ಮಾತನಾಡಬಲ್ಲರು. ಅದೇ ಕನ್ನಡ ಮಾತನಾಡಬೇಕಾದರೆ ಕನ್ನಡಿಗರೇ ಬಹಳ ಕಷ್ಟಪಡುತ್ತಾರೆ. ಕನ್ನಡ ಬಾರದಿದ್ದವರು ಮಾತನಾಡುವ ಕನ್ನಡದ ಉಚ್ಛಾರದಂತೆ ಕನ್ನಡಿಗರೇ ಮಾತನಾಡುವುದನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಹಿಂದೆ ಲಾರ್ಡ್ ಮೆಕಾಲೆ ಹೇಳಿದ್ದ, "ಈ ರೀತಿಯ ವಿದ್ಯಾಭ್ಯಾಸ ಕ್ರಮದಿಂದ ಇನ್ನು ಕೆಲವು ದಶಕಗಳಲ್ಲಿ ಇಂಡಿಯಾದಲ್ಲಿ ಕರಿಚರ್ಮದ ಬ್ರಿಟಿಷರು ಇರುತ್ತಾರೆ" ಎಂಬ ಮಾತು ನಿಜವಾಗಿದೆ. ಆದರೆ ಯಾವ ದೇಶದ ಗುಲಾಮಗಿರಿಯ ಕಾಣಿಕೆಯಾದ ಇಂಗ್ಲಿಷನ್ನು ಹೆಮ್ಮೆಯಿಂದ ಆಡುತ್ತೇವೋ, ಆ ದೇಶದ ರಾಜಧಾನಿ ಲಂಡನ್ನಿಗೆ ಸಂಬಂಧಿಸಿದ ಸಂಗತಿಯನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
     ಅದು ಲಂಡನ್ನಿನ ಸೈಂಟ್ ಜೇಮ್ಸ್ ಜೂನಿಯರ್ ಸ್ಕೂಲ್. ಅಲ್ಲಿ ೧೯೭೫ರಿಂದಲೂ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಸ್ಕೃತ ಕಲಿಯುತ್ತಿರುವವರ ಸಂಖ್ಯೆ ಇಂಗ್ಲೆಂಡಿನಲ್ಲಿ ಮಿತಿಯನ್ನು ಮೀರಿ ಬೆಳೆಯುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂಗ್ಲಿಷ್ ಮಾತನಾಡುವವರಿಗೆ ಸಂಸ್ಕೃತದ ಉಚ್ಛಾರ ಕಷ್ಟವಾದರೂ ಅಲ್ಲಿ ಸಂಸ್ಕೃತ ಕಲಿಯಲು ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಾರ್ಷಿಕ ಸಂಸ್ಕೃತ ಸಂಭಾಷಣಾ ಸ್ಪರ್ಧೆಯಲ್ಲಿ ತಮ್ಮ ಪುಟಾಣಿಗಳು ಭಾಗವಹಿಸಿ, ವೇದ ಮಂತ್ರ, ಉಪನಿಷತ್ತಿನ ಶ್ಲೋಕಗಳನ್ನು ಹೇಳುತ್ತಿದ್ದರೆ ಅದನ್ನು ಕೇಳುವ ಪೋಷಕರು, ತಂದೆ-ತಾಯಿಗಳು ಹೆಮ್ಮೆಯಿಂದ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಸಂಸ್ಕೃತ ವಿಭಾಗದ ಮುಖ್ಯಸ್ಥ ವಾರ್ವಿಕ್ ಜೆಸೊಪ್, "ಸಂಸ್ಕೃತ ಭಾಷೆ ಅದ್ಭುತವಾಗಿದೆ. ಸಂಸ್ಕೃತದ ಸಾಹಿತ್ಯ ಸ್ಫೂರ್ತಿದಾಯಕವಾಗಿದೆ ಮತ್ತು ತತ್ವಾದರ್ಶಗಳಿಂದ ಕೂಡಿದೆ. ಅದಕ್ಕಾಗಿ ಅದನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದೇವೆ" ಎನ್ನುತ್ತಾರೆ. ಇದೇ ಮಾತನ್ನು ಇಲ್ಲಿ ಯಾರಾದರೂ ಹೇಳಿದರೆ ವಿಚಾರವಂತರೆಂದು ಹಣೆಪಟ್ಟಿ ಹಚ್ಚಿಕೊಂಡವರು ಏನು ಹೇಳಬಹುದೆಂಬುದು ನಿಮಗೇ ಬಿಟ್ಟ ವಿಷಯ. ಸಂಸ್ಕೃತ ಕಲಿಯುವ ಮಕ್ಕಳನ್ನು ಕೇಳಿದರೆ ಅವರು ಹೇಳುವುದೇನೆಂದರೆ, "ಅದು ನಮಗೆ ಬಹಳ ಖುಷಿ ಕೊಡುತ್ತದೆ. ಅದು ನಮ್ಮ ಮೆಚ್ಚಿನ ಭಾಷೆ!"
     ಸಂಸ್ಕೃತ ಕಲಿಯುತ್ತಿದ್ದ ಒಬ್ಬ ವಿದ್ಯಾರ್ಥಿಯ ಹೃದಯದ ಮಾತಿದು: "ಸಂಸ್ಕೃತ ಕಲಿಯುವುದು ಒಂದು ವಿಶೇಷ ಅನುಭವ. ಅದನ್ನು ಕಲಿಯಲು ನನಗೆ ಬಹಳ ಆನಂದವಾಗುತ್ತದೆ, ಏಕೆಂದರೆ ಸಂಸ್ಕೃತ ಕಲಿಸುತ್ತಿರುವ ಕೆಲವೇ ಶಾಲೆಗಳಿದ್ದು, ಅದರ ಪೈಕಿ ನಾವೂ ಒಬ್ಬರು ಎಂಬುದು. ಅದು ನಮಗೆ ಹಲವಾರು ರೀತಿಯಲ್ಲಿ ಉಪಯೋಗವಾಗಿದೆ. ನಮ್ಮ ಉಚ್ಚಾರಣೆ ಸುಧಾರಿಸುತ್ತದೆ ಮತ್ತು ಪದಸಂಪತ್ತನ್ನು ಹೆಚ್ಚಿಸುತ್ತದೆ. ಪಾರಮಾರ್ಥಿಕ ಅನುಕೂಲಗಳೂ ಇವೆ. ರಾಮಾಯಣ ಮತ್ತು ಮಹಾಭಾರತದಂತಹ ಹಲವಾರು ಕಥೆಗಳಿದ್ದು, ಹಿಂದೆ ಪ್ರಪಂಚದಲ್ಲಿ ಏನೆಲ್ಲಾ ಆಯಿತು ಎಂಬುದನ್ನೂ ತಿಳಿಯಲು ಸಹಾಯ ಮಾಡುತ್ತದೆ."
     ಈ ಶಾಲೆಯಲ್ಲಿ ೪ ರಿಂದ ೧೮ ವರ್ಷಗಳವರೆಗೆ ಸಂಸ್ಕೃತ ಕಲಿಯಲು ಸೌಲಭ್ಯವಿದೆ. ನಂತರದಲ್ಲಿ ಪ್ರತಿಷ್ಠಿತ ಶಾಲೆಗಳಾದ ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಎಡಿನ್ ಬರೋ ಮುಂತಾದ ಶಾಲೆಗಳಲ್ಲಿ ಮುಂದುವರೆದ ಸಂಸ್ಕೃತ ವಿದ್ಯಾಭಾಸ ಮಾಡಬಹುದಾಗಿದೆ. ಲಂಡನ್ ಶಾಲೆಗೆ ಸಂಬಂಧಿಸಿದ ಒಂದು ಕಿರುವಿಡಿಯೋ ಅನ್ನು ಈ ಲಿಂಕಿನಲ್ಲಿ ನೋಡಬಹುದು.
     ನಾನು ಕೇವಲ ಇಂಗ್ಲೆಂಡಿನ ಉದಾಹರಣೆ ನೀಡಿದ್ದರೂ, ಅಮೆರಿಕಾ ಸೇರಿದಂತೆ ಹಲವಾರು ವಿದೇಶಿ ರಾಷ್ಟ್ರಗಳಲ್ಲಿ ಸಂಸ್ಕೃತ ಕಲಿಕೆ ಗಣನೀಯವಾಗಿ ಹೆಚ್ಚಿದ್ದು, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಕಡಿಮೆಯಲ್ಲ. ಊರು ಕೊಳ್ಳೆ ಹೋದ ನಂತರದಲ್ಲಿ ನಮ್ಮವರಿಗೆ ಎಚ್ಚರವಾಗಬಹುದು.
-ಕ.ವೆಂ.ನಾಗರಾಜ್.

Thursday, January 10, 2013

ಕೇಂದ್ರ ಸರ್ಕಾರಕ್ಕೆ ಒತ್ತಡ ತರುವಿರಾ?

        ದೆಹಲಿಯ ರೇಪ್ ಪ್ರಕರಣದ ಬಗ್ಗೆ  ಬರೆಯುವುದರಿಂದೇನೂ ಪ್ರಯೋಜನವಿಲ್ಲ, ಬೇಡವೆಂದು  ಸುಮ್ಮನಿದ್ದೆ..ಸುಮ್ಮನಿರಲು ಸಾಧ್ಯವಿಲ್ಲ. ಕಾರಣ    ಈ ವಿಚಾರ ವ್ಯಾದಿಗಳಿಗೆ ನಿಜಕ್ಕೂ  ಸಮಾಜಿಕ ನೆಮ್ಮದಿಯ ಬಗ್ಗೆ ಸ್ವಲ್ಪವೂ ಕಳಕಳಿ ಇಲ್ಲ. ಆರ್.ಎಸ್.ಎಸ್ ನಾಯಕರು ಏನೇ ಹೇಳಿದರೂ  ಹೇಳಿಕೆಯ ಯಾವುದೋ ಅಂಶವನ್ನು ಹಿಡಿದುಕೊಂಡು             ಅಪಪ್ರಚಾರ  ಮಾಡುವುದು. ಇದು ವಿಚಾರವ್ಯಾದಿಯಲ್ಲದೆ ಮತ್ತೇನು?
       ಸನ್ಮಾನ್ಯ  ಶ್ರೀ ಮೋಹನ್ ಜಿ ಭಾಗವತ್ ರಾಗಲೀ,  ಒಬ್ಬ ಬಾಬಾ ಆಗಲೀ ಯಾವ ನಿನ್ನೆಲೆಯಲ್ಲಿ ಮಾತನಾಡಿದ್ದಾರೆಂಬ ಪೂರ್ವಾಪರ ಚಿಂತನೆ ನಡೆಸದವರಿಗೆ ಏನೆನ್ನಬೇಕು? ಒಂದು ಸುಸಂಸ್ಕೃತ ಸಮಾಜ ನಿರ್ಮಾಣ ಕ್ಕಾಗಿ                ಜೀವನವನ್ನೇ ಮುಡಿಪಾಗಿಟ್ಟವರು ಮಹಿಳಾ ವಿರೋಧಿಗಳು! ಇವರು ಇನ್ನೂ ಯಾವ ಕಾಲದಲ್ಲಿದ್ದಾರೆ! ಎಂದು ಕುಟುಕುವವರಿಗೆ ಜೈ ಅನ್ನಬೇಕೆ? ಅಲ್ಲವೇ?
ವಿವೇಕಾನಂದರು ಈಗ್ಗೆ ನೂರ ಇಪ್ಪತ್ತು ವರ್ಷಗಳ    ಹಿಂದೆ  ಯಾವ ವಿದ್ಯಾವಂತರೆನಿಸಿಕೊಂಡವರ ಮಾನಸಿಕತೆ ಬಗ್ಗೆ ದು:ಖಿತರಾಗಿದ್ದರೋ ಅದೇ ಮಾನಸಿಕತೆಯ ವಿದ್ಯಾವಂತರೆನಿಸಿಕೊಂಡವರು ಇಂದೂ ನಮ್ಮ ಸಂಸ್ಕೃತಿ -ಪರಂಪರೆಯ ಬಗ್ಗೆ  ಅಪಪ್ರಚಾರ ಮಾಡುತ್ತಲೇ ಇದ್ದಾರೆ, ಎನ್ನದೆ ವಿಧಿ ಇಲ್ಲ. ಅವರು ಯಾಕೆ ಹೀಗೆ  ಅಪಪ್ರಚಾರ ಮಾಡುತ್ತಿದ್ದಾರೆ? ಆಳವಾಗಿ ಯೋಚಿಸಿದಾಗ ಗೊತ್ತಾಗುವುದು ಇವರು  ಏನಕೇನ ಪ್ರಕಾರೇಣ  ಪ್ರಚಾರದಲ್ಲಿರಬೇಕು. ಅಷ್ಟೆ. 
ಮಹಿಳೆ ಯೊಬ್ಬಳ ಮೇಲೆ, ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ವಾಗಿದೆ ಎಂದು ತಿಳಿದ ಕೂಡಲೇ  ನೋವು ಅನುಭವಿಸಿದ್ದ ವ್ಯಕ್ತಿಗೆ ಘಟನೆಯಿಂದ ಎಷ್ಟು ನೋವಾಗಿತ್ತೋ  ಇವರ  ಪ್ರಚಾರದಿಂದ ಅದರ ಹತ್ತರಷ್ಟು ನೋವಾಗುತ್ತದೆ!  ಇಂತಾ ಸೂಕ್ಷ್ಮ ವಿಚಾರ  ವಿದ್ಯಾವಂತರೆನಿಸಿಕೊಂಡ ವರಿಗೆ  ಅರ್ಥವೇ ಆಗುವುದಿಲ್ಲವೇ? 
ದೆಹಲಿಯ ಘಟನೆ ಸುದ್ಧಿ ಪ್ರಕಟವಾದ  ನಂತರ ನಿತ್ಯವೂ  ಅಂತಹ  ನಾಲ್ಕಾರು ಸುದ್ಧಿಗಳು ಪೇಪರ್ ನಲ್ಲಿ ಜಾಗ ಪಡೆಯುತ್ತಿವೆ. ಇದೇನು ಶುಭ ಸೂಚನೆಯೇ?  ಕೆಲವರ  ಆಕ್ಷೇಪಣೆ ಎಂದರೆ  ಇಂತಹಾ ಪ್ರಕರಣಗಳನ್ನು  ಬಲಪಂಥೀಯರು ಖಂಡಿಸಿ ಹೇಳಿಕೆ ಕೊಡುವುದೇ ಇಲ್ಲ!! ಎಂತಹಾ ದೌರ್ಭಾಗ್ಯ ನೋಡಿ. 

ಯಾವುದೇ  ಅಹಿತ ಘಟನೆ ಯಾದಾಗ ಅದಕ್ಕೆ ಪರಿಹಾರ ಕಂಡುಹಿಡಿಯಬೇಕು, ಸೂಕ್ತ ಸಹಾಯ ಮಾಡಬೇಕು, ನಮ್ಮ ಮನೆಯಲ್ಲಿ ಇಂತಹ ಘಟನೆ ನಡೆದಾಗ  ಪೇಪರ್ನಲ್ಲಿ ಸುದ್ಧಿ ಮಾಡಲು ಬಯಸುತ್ತೇವೋ ಅಥವಾ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು  ಯತ್ನಿಸುತ್ತೀವೋ? 
ಇಡೀ ದೇಶವೇ ಏಕೆ, ವಿಶ್ವವೇ ಒಂದು ಕುಟುಂಬ!  ಎಲ್ಲಿ ಇಂತಹ ಅಹಿತ ಘಟನೆಗಳು ನಡೆದರೂ ಹತ್ತಿರದಲ್ಲಿರುವವರು ಸ್ಪಂಧಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೇ ಹೊರತೂ  ಅದಕ್ಕೆ ಇನ್ನೂ ಹೆಚ್ಚಿನ  ಮಾಧ್ಯಮದ  ಪ್ರಚಾರ ಕೊಡಿಸಿ ,ಮೊದಲೇ ದು:ಖದಲ್ಲಿರುವವರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಬಾರದು.

ಅತ್ಯಾಚಾರಿಗಳಿಗೆ ಧಿಕ್ಕಾರ! ಅದನ್ನು ಪ್ರಚಾರ ಮಾಡುವವರಿಗೂ ಧಿಕ್ಕಾರ!!  ನಿಜವಾಗಿ ದೇಶಪ್ರೇಮವಿರುವವರು ಕಾಶ್ಮೀರದ ಗಡಿಯಲ್ಲೇನಾಗುತ್ತಿದೆ? ಎಂಬುದನ್ನು ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ    ಕೇಂದ್ರ ಸರ್ಕಾರಕ್ಕೆ  ಒತ್ತಡ ತರುವಿರಾ?


Thursday, January 3, 2013

ಸಾಧಕ ಶ್ರೀ ನ.ಕೃಷ್ಣಪ್ಪ






ಹಿರಿಯ ಆರೆಸ್ಸೆಸ್ ಪ್ರಚಾರಕರಾದ ನ ಕೃಷ್ಣಪ್ಪನವರ ಕುರಿತು ಕಿರುತೆರೆ ನಿರ್ದೇಶಕ ಟಿ .ಎನ್ ಸೀತಾರಾಂ ಲೇಖನ
Na Krishnappa, Senior RSS Pracharak, (A noted Cancer Survivor in Karnataka)


ಕ್ಯಾನ್ಸರ್ ಎಂಬ ಭಯಾನಕ ವ್ಯಾಧಿಯನ್ನು ಯಶಸ್ವಿಯಾಗಿ ಎದುರಿಸಿ ಅರೋಗ್ಯ ಪೂರ್ಣ ಜೀವನ ಸಾಗಿಸುತ್ತಿರುವ ಸಾಧಕರ ಜೀವನ-ಸಾಧನೆಯ ಕುರಿತು ಬೆಳಕು ಚೆಲ್ಲುವ ಪುಸ್ತಕವೇ ಮೃತ್ಯು ಮಿತ್ರ . ಬೆಂಗಳೂರಿನ ಜಿ ಎಸ ಭಟ್ ಬರೆದಿರುವ ಈ ಪುಸ್ತಕವನ್ನು ಪ್ರಕಟಿಸಿದವರು ಗೋವರ್ಧನ್ ಅಂಕೋಲೆಕರ್. ಕ್ರಿಕೆಟಿಗ ಯುವರಾಜ್ ಸಿಂಗ್, ಕಲಾವಿದ ಎನ್ ಮುರಳೀಧರ್ ಕಷಿಕರ್, ಅಲೆಕ್ಸಾಂಡರ್, ರಮಿ  ಸೇಥ್, ಬ್ಯಾಂಕ್ ಮ್ಯಾನೇಜರ್ ಶ್ರೀಕಾಂತ್ , ಮಾಯಾ ತಿವಾರಿ ಸೇರಿದಂತೆ ಅನೇಕರ ಜೀವನಗಾಥೆಯನ್ನು ಓದುಗರಿಗೆ ಪರಿಚಯಿಸುತ್ತದೆ ಮೃತ್ಯು ಮಿತ್ರ .  ಕ್ಯಾನ್ಸರ್ ನ್ನು ತಮ್ಮ ಶಿಸ್ತು ಬದ್ಧ ಜೀವನ ಶೈಲಿಯ ಮೂಲಕ ಬಹು ವರ್ಷದ ಹಿಂದೆಯೇ ಗೆದ್ದು ಸಂತೃಪ್ತಿಯ ಜೀವನ ನಡೆಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಹಿರಿಯ ಪ್ರಚಾರಕರಾದ ನ ಕೃಷ್ಣಪ್ಪನವರ ಬದುಕನ್ನೂ ಓದುಗರಿಗೆ ತೆರೆದಿಡುತ್ತದೆ ಈ ಪುಸ್ತಕ. ಕೃಷ್ಣಪ್ಪನವರ ಕುರಿತು ಕಿರುತೆರೆ ನಿರ್ದೇಶಕ, ಕಲಾವಿದ ಟಿ .ಎನ್  ಸೀತಾರಾಂ ಬರೆದಿರುವ ಲೇಖನವನ್ನು ಇಲ್ಲಿ ನೀಡಲಾಗಿದೆ.- ಸಂ

TN Seetharam, Noted TV Serial Director, Actor
(ಮೃತ್ಯು ಮಿತ್ರ ಪುಸ್ತಕಕ್ಕೆ ಬರೆದ ಮುನ್ನಡಿಯಿಂದ)

ನೆಚ್ಚಿನ ಕೃಷ್ಣಪ್ಪನವರಿಗೆ ಪ್ರಣಾಮಗಳು.

ನೆನಪಿದೆಯಾ? ಕೃಷ್ಣಪ್ಪನವರೆ ಹೀಗೆ ಪತ್ರ ಶುರು ಮಾಡುವುದನ್ನು ನೀವೇ ನನಗೆ ಕಲಿಸಿಕೊಟ್ಟಿದ್ದು. 1932[1952]ರಲ್ಲಿ ನಾನಿನ್ನೂಚಿಕ್ಕ ಹುಡುಗ.ಮಿಡ್ಲ್‌ಸ್ಕೂಲ್‌ನಲ್ಲಿಓದುತ್ತಿದ್ದೆನೆಂದು ನೆನಪು.ಯಾವುದೋಅನಾರೋಗ್ಯಕ್ಕೆ ನನ್ನನ್ನು ಚಿಕ್ಕಬಳ್ಳಾಪುರದ ಮಿಷನ್ ಆಸ್ಪತ್ರೆಗೆ ಸೇರಿಸಿದ್ದರು.ಅಲ್ಲಿ ನನ್ನ ವಿಳಾಸಕ್ಕೆ ನೀವು ನೆಚ್ಚಿನರಾಜ, ಅಕ್ಕರೆಯ ನೆನಪುಗಳು ಎಂದು ರುಜು ಮಾಡಿ 9 ಪುಟಗಳ ಒಂದು ಪತ್ರ ಬರೆದಿದ್ದಿರಿ (ಮನೆಯಲ್ಲಿ ನನ್ನನ್ನುರಾಜಎಂದುಕರೆಯುತ್ತಿದ್ದರು). ನನ್ನನ್ನುಅದಕ್ಕೆ ಮುಂಚೆ ನೀವು 5-6 ಬಾರಿ ನಮ್ಮ ಮನೆಯ ಹತ್ತಿರವಿದ್ದ ಮೈದಾನದಲ್ಲಿ ನೋಡಿದ್ದೀರಿ ಅಷ್ಟೆ. ಆದರೆ ನಾನು ಯಾತನೆಯಿಂದ ಮನಸ್ಸೆಲ್ಲ ಮಂಕಾಗಿ ಮಲಗಿದ್ದಾಗ – ಒಬ್ಬ 10 ವರ್ಷದ ಚಿಕ್ಕ ಹುಡುಗನಿಗೆಅಂತಃಕರಣ, ವಿಶ್ವಾಸ ಮತ್ತು ಭರವಸೆತುಂಬಿದ ೯ ಪುಟದ ಪತ್ರ ಬರೆದಿದ್ದಿರಿ. ಖಾಯಿಲೆ ಬಿದ್ದಿರುವಚಿಕ್ಕಅಪರಿಚಿತ ಹುಡುಗನ ಮೇಲೆ ಯಾರುತೋರಿಸುತ್ತಾರೆಅಂಥ ವಿಶ್ವಾಸ ಈ ಕಾಲದಲ್ಲಿ? ಆ ಪತ್ರ ಬಂದಾಗ ಖಾಯಿಲೆಯಿಂದ ಮಲಗಿದ್ದ ನಾನು ಅಪರೂಪದ ಸಂಭ್ರಮ ಪಟ್ಟಿದ್ದೆ. ನನಗೆ ಮೊದಲ ಪತ್ರವಿರಬೇಕು. ಪತ್ರದ ತುಂಬಾ ಅಂತಃಕರಣ, ಸುಂದರ ಅಕ್ಷರಗಳು, ಸ್ವಚ್ಛ ಭಾಷೆ. ಅಂಥ ಪತ್ರವನ್ನು ನಾನು ಮುಂಚೆ ನೋಡಿಯೂ ಇರಲಿಲ್ಲ. ಆಮೇಲೆ ನಮ್ಮ ಮನೆಯಲ್ಲಿ ಎಷ್ಟೋ ವರ್ಷ ನಿಮ್ಮ ಪತ್ರದ್ದೇ ಮಾತು. ಪತ್ರಬರೆದರೆಕೃಷ್ಣಪ್ಪನವರಥರ ಬರೆಯಬೇಕು ಎಂದು ಎಲ್ಲರೂ ಅಂದುಕೊಳ್ಳುವಷ್ಟು ಸುಂದರವಾಗಿತ್ತು ನಿಮ್ಮ ಪತ್ರ.ಪಾಯಶಃ ನಿಮ್ಮ ಪತ್ರದ ಭಾಷೆ ಮತ್ತು ಅಂತರ್ಗತ ಭಾವ ಕೋಶತೆ ನನ್ನನ್ನು ಸಾಹಿತ್ಯ ಮತ್ತು ಕಲೆಯಕಡೆ ಸೆಳೆದವು ಎಂದು ನನ್ನ ಭಾವನೆ.

ನಿಮಗೇ ಗೊತ್ತು ನಮ್ಮತಂದೆಕಾಂಗ್ರೆಸ್‌ನವರು.ತುಂಬಾ ಶಿಸ್ತಿನ ಮನುಷ್ಯರು. ಹಳೆಯ ಕಾಂಗ್ರೆಸ್‌ನವರಿಗೆ ಸಂಘದವರನ್ನು ಕಂಡರೆ ಕೋಪವಿರುತ್ತಿದ್ದ ದಿನಗಳು. ಅಂಥಾ ನಮ್ಮ ಮನೆಯಲ್ಲಿಕೂಡ ನಿಮ್ಮನ್ನುಕಂಡೆ ನಮ್ಮ ಮನೆಯಎಲ್ಲರಿಗೂ ಎಷ್ಟು ಪ್ರೀತಿ ವಿಶ್ವಾಸ. ನೆನಪಿದೆಯಾ?ಅಷ್ಟು ವಿಶ್ವಾಸ, ಅಂತಃಕರಣತಮ್ಮಲ್ಲಿಕಾಣುತ್ತಿದ್ದೆವು ನಾವು.

ನಾನು ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ಕರ್ಮಠ ವಾತಾವರಣದಲ್ಲಿ ಬೆಳೆದ ಹುಡುಗ.ಮತ ಮತ್ತು ಧರ್ಮಗಳು ಒಂದೇಎಂದು ನಂಬಿದ ವಾತಾವರಣ ಅದು. ಬೇರೆ ಜಾತಿಯವರ ಮನೆಯಲ್ಲಿ ನೀರು ಕುಡಿಯಲೂ ಕೂಡ ಬೇಡವೆನ್ನುತ್ತಿದ್ದ ಸಂಪ್ರದಾಯ. ನೀವು ಕಾರ್ಯಾಲಯದಲ್ಲಿ ವಾಸಮಾಡುತ್ತಿದ್ದಿರಿ. ಊಟಕ್ಕೆ ಯಾರದಾದರೂ ಮನೆಗೆ ಹೋಗುತ್ತಿದ್ದಿರಿ. ನೀವು ಜಾತಿ ಆಧಾರದ ವಿಂಗಡಣೆಯನ್ನುಎತ್ತಿ ಹಿಡಿಯುವ ಸಂಘಟನೆಗೆ ಸೇರಿದವರೆಂದು ನಮ್ಮ ಬೀದಿಯಲ್ಲಿಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ಅತ್ಯಂತ ಕೆಳಜಾತಿಗೆ ಸೇರಿದ ಹುಡುಗನೊಬ್ಬನ ಗುಡಿಸಲಿಗೆ ಆಗಾಗ ನೀವು ಊಟಕ್ಕೆ ಹೋಗುತ್ತಿದ್ದುದನ್ನು ನಾನು ನೋಡಿ ಗಾಬರಿಗೊಳ್ಳುತ್ತಿದ್ದೆ. ಮಂಕಾಗುತ್ತಿದ್ದ ನನಗೆ ಜಾತಿಯ ತಾರತಮ್ಯ ಎಷ್ಟು ಅರ್ಥಹೀನ ಎಂಬುದನ್ನು ನನ್ನಚಿಕ್ಕ ವಯಸ್ಸಿನ ಬುದ್ಧಿಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಿರಿ. ನೋಡು ರಾಜ, ನಮ್ಮ ಮನೆಯಲ್ಲೂ ಬಾವಿಯಿಂದ ನೀರು ತರುತ್ತಾರೆ,  ಅವರ ಮನೆಯಲ್ಲಿಯೂ ಬಾವಿಯಿಂದ ನೀರು ತರುತ್ತಾರೆ. ಅಲ್ಲಿಗೆ ನೀರು ಒಂದೇ….. ಭೂಮಿಯಲ್ಲಿ ಬೆಳೆದ ಭತ್ತದಿಂದ ಅಕ್ಕಿಯಾಗುತ್ತಷ್ಟೆ. ಅಕ್ಕಿಗೆ ಅಕ್ಕಿ ಒಂದೇ. ಬೆಂಕಿಗೆ ಮೈಲಿಗೆ ಇಲ್ಲ. ಅಲ್ಲಿಗೆ ಅವರ ಮನೆಯಲ್ಲಿ ಮಾಡುವ ಅನ್ನಕ್ಕೂ ನಮ್ಮರೀತಿಯಲ್ಲಿ ಮಾಡುವ ಅನ್ನಕ್ಕೂ ಏನು ವ್ಯತ್ಯಾಸ?ಎರಡೂ ಒಂದೇ ಅಲ್ಲವೆ ಎಂದು ನಗುತ್ತಾ ನನ್ನನ್ನು ಸಮಾಧಾನ ಮಾಡುತ್ತಿದ್ದಿರಿ. ನಾನು ನಂತರ ಎಷ್ಟೋ ವರ್ಷ ಕಾಲೇಜಿನ ಬಾಳುಗಳಲ್ಲಿ ಜಾತಿಯ ಒಂದು ಮಾತು ಬಂದರೆ ಅದೇ ಉದಾಹರಣೆಕೊಟ್ಟು ಎಲ್ಲರನ್ನು ಬೆರಗುಗೊಳಿಸುತ್ತಿದ್ದೆ. ನಿಜವಾಗಿಯೂ ನಿರ್ಮಲ ಮನಸ್ಸಿನ ಜಾತ್ಯಾತೀತ ವ್ಯಕ್ತಿ ನೀವು.

ನೀವು ನಂಬಿದ ಸಂಘಟನೆಯ ಸೈದ್ಧಾಂತಿಕ ತತ್ವಗಳಿಗೆ ನಾನು ಬಹುದೂರ ಹೋಗಿ ಸಮಾಜವಾದಿ ಪಕ್ಷಕ್ಕೆ ಸೇರಿದಾಗಲೂ ನಿಮ್ಮ ಬಗೆಗಿನ ವೈಯಕ್ತಿಕಗೌರವ ನನಗೆ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಅಂಥದೊಡ್ಡ ವ್ಯಕ್ತಿ ನೀವು. ಆಗ ನಿಮಗೆ 28-30 ವಯಸ್ಸು ಅನಿಸುತ್ತೆ.ದೇಹದ ಮತ್ತು ಬದುಕಿನಆಕರ್ಷಣೆಯ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಲ್ಲ. ಆದರೆ ಆ ವಯಸ್ಸಿನಲ್ಲಿ ನೀವು ಎಂಥ ನಿಸ್ಪೃಹ ಬದುಕು ಬದುಕುತ್ತಿದ್ದಿರಿಎಂದು ಅನೇಕ ವರ್ಷಗಳ ನಂತರ ನನಗೆ ಅರಿವಾಗತೊಡಗಿತು. ಈ ಸಮಾಜಕ್ಕೆ ನನ್ನ ಬದುಕುಅರ್ಪಣೆ ಎಂದುಆತ್ಮವಿಶ್ವಾಸದ ನಗೆ ಬೀರುತ್ತಾ ಹೇಳುತ್ತಿದ್ದಿರಿ. ನಿಮ್ಮಔಷಧಿಗಾಗಿ ಕೊಂಡುಕೊಂಡ ಒಂದು ಆಗಿನ ಮೂರು ಪೈಸೆಯ ನಿಂಬೆಹಣ್ಣಿನ ಲೆಕ್ಕ ಕೂಡ ಬರೆದುಕೊಳ್ಳುತ್ತಿದ್ದಿರಿ. ಅದನ್ನು ನಿಮ್ಮಕೇಂದ್ರ ಶಾಖೆಗೆ ಕಳುಹಿಸುತ್ತಿದ್ದರೋ ಏನೋ ಗೊತ್ತಿಲ್ಲ. ಅಷ್ಟು ನಿಸ್ಪೃಹ ಮನುಷ್ಯರು ನೀವು. ನಾನು ಮೆಚ್ಚುವ ಗಾಂಧಿಯಂತಅತ್ಯಂತ ಸರಳ ಬದುಕನ್ನು ಬದುಕಿದ ಮನುಷ್ಯ ನೀವು.ಕೃಷ್ಣಪ್ಪನವರೆ ನಿಮ್ಮ ಬುದ್ಧಿಶಕ್ತಿಗೆ, ನಿಮ್ಮ ವಿದ್ಯಾಭ್ಯಾಸಕ್ಕೆ ನಿಮ್ಮ ಚಮಕಿಗೆ ನೀವು ಸುಲಭವಾಗಿಐಎಎಸ್ ಮಾಡಿದೊಡ್ಡಅಧಿಕಾರಿಯಾಗಬಹುದಿತ್ತು.ಏನು ಬೇಕಾದರೂ ಆಗಬಹುದಿತ್ತು.ಆದರೆ ನೀವು ಅದೆಲ್ಲವನ್ನು ಧಿಕ್ಕರಿಸಿ ಸಂಘಟನೆಗೆ ನಿಮ್ಮನ್ನು ಸಮರ್ಪಿಸಿಕೊಂಡಿರಿ.

ನಿಮ್ಮ ಸಂಘಟನೆಯ ಬಗ್ಗೆ ನನ್ನದೇಆದ ವಿರೋಧವಿದೆ.ಭಾರತವನ್ನುಅಮೆರಿಕಾದ ಮಡಿಲಲ್ಲಿ ಇಡಲುಕಾರಣವಾದ ಸಂಘಟನೆ ಎಂಬ ಆಳದ ಸಿಟ್ಟು ಇದೆ.ಆರ್ಥಿಕ ಸಮಾನತೆಯ ಬಗ್ಗೆ ಚಕಾರವೆತ್ತದೆ ಧರ್ಮದ ವಿಚಾರದಲ್ಲಿ ಮಾತ್ರಉದ್ವಿಗ್ನರಾಗುವವರು ಎಂಬ ಆಕ್ಷೇಪಣೆ ನನ್ನದು. ನಾನು ಸೈದ್ಧಾಂತಿಕವಾಗಿ ಬೇರೆದಾರಿ ಹಿಡಿದರೂಕೂಡ ಇಂದಿಗೂ ನನ್ನ ಮನಸ್ಸಿನಲ್ಲಿ ಮತ್ತು ಹೃದಯಲ್ಲಿಅತ್ಯಂತಆತ್ಮೀಯಗುರುವಿನಂತೆ ನಿಂತವರಲ್ಲಿ ನೀವು ಮೊದಲಿಗರು.ನಾನು ದೂರ ಹೋದೆನೆಂದುಕೋಪಗೊಂಡವರು ನೀವಲ್ಲ. ಬದಲಿಗೆ ಎಷ್ಟೋ ವರ್ಷಗಳ ನಂತರ ಮಾಯಾಮೃಗತೆಗೆದದ್ದು ನಾನೇ ಎಂದುಗೊತ್ತಾದಾಗ ನನ್ನನ್ನು ಹುಡುಕಿಕೊಂಡು ಬಂದುಆತ್ಮೀಯವಾಗಿಅಪ್ಪಿಕೊಂಡು ಹೆಮ್ಮೆಪಟ್ಟ ಬಂಧು ನೀವು.

ನಾನು  ಜೀವನದಲ್ಲಿ ಮೊದಲು ಓದಿದಕಾದಂಬರಿ ಭೈರಪ್ಪನವರ ’ಧರ್ಮಶ್ರೀ’ಯನ್ನು ನಾನು ಹೈಸ್ಕೂಲಿನಲ್ಲಿದ್ದಾಗ ಓದಿಸಿದವರು ನೀವು. ಶಿವರಾಮ ಕಾರಂತರಕಾದಂಬರಿ ಓದಿಸಿದವರು ನೀವು.ಜೆ.ಪಿ.ಯವರ ಪುಸ್ತಕ ’ಕಮ್ಯುನಿಸಂ ನಿಂದ ಸೋಷಿಲಿಸಂವರೆಗೆ’ ಎಂಬ ಪುಸ್ತಕ ಓದಿಸಿ ರಾಜಕೀಯ ಚಿಂತನೆಯನ್ನು ನನ್ನಲ್ಲಿ ಶುರು ಮಾಡಿದವರು ನೀವು.ನಿಮ್ಮ ಬಗ್ಗೆ ನನಗೆ ತೀರಿಸಲಾಗದಋಣವಿದೆ.

ಅಂತಹ ನೀವು ಕ್ಯಾನ್ಸರ್‌ ರೋಗಕ್ಕೆತುತ್ತಾಗಿರುವಿರೆಂದು ಗೊತ್ತಾದಾಗ ನಾನು ತುಂಬಾ ನೋವು ಅನುಭವಿಸಿದ್ದೆ. ಆದರೆ ಆ ಕ್ಯಾನ್ಸರನ್ನು ನಿಮ್ಮದೇ ಇಚ್ಛಾ ಶಕ್ತಿಯಿಂದ ನಗುನಗುತ್ತಾಗೆದ್ದವರು ನೀವು. ನೀವು ಕ್ಯಾನ್ಸರನ್ನುಗೆದ್ದ ಬಗ್ಗೆ ಓದುತ್ತಿದ್ದಾಗ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತಿದ್ದೀರಿ. ಸಣ್ಣಪುಟ್ಟ ಕಷ್ಟಗಳಿಗೆ ಹೆದರಿ ಹಿಂಜರಿಯುವ ನಮ್ಮಂಥವರಿಗೆ ನೀವು ದಾರಿ ದೀಪವಾಗಿ ನಿಂತಿದ್ದೀರಿ. ನೀವು ಬರಿಯ ನಿಮ್ಮ ಖಾಯಿಲೆ ವಾಸಿ ಮಾಡಿಕೊಳ್ಳುತ್ತಾ ಆತ್ಮಕೇಂದ್ರಿತವಾಗಿ ಕಾಲವನ್ನು ಕಳೆಯಲಿಲ್ಲ. ಬದಲಿಗೆ ಹೀಗೆ ಕ್ಯಾನ್ಸರ್‌ನಿಂದ ಸೋತಿರುವ ಸಾವಿರಾರು ಮಾದರಿಯಜನರನ್ನು ಭೇಟಿ ಮಾಡುತ್ತಾಅವರಿಗೆ ಬದುಕಿನಲ್ಲಿ ಭರವಸೆ ಮತ್ತುಜೀವೋತ್ಸಾಹವನ್ನುತುಂಬಿದ್ದೀರಿ.ಇದಕ್ಕಿಂತ ಸಾರ್ಥಕವಾದದ್ದುಇನ್ನೇನಿದೆ?

ನನ್ನಅಮ್ಮ ಸಾವಿನ ಅಂತ್ಯದಲ್ಲಿ ನರಳುತ್ತಾ ಮಲಗಿದ್ದಾಗ ನೀವು ಅವರನ್ನು ಭೇಟಿ ಮಾಡಿ ಮನೆಯವರಿಗೆಧೈರ್ಯಕೊಟ್ಟಿದ್ದೀರಿ.

ಇಡೀ ಬದುಕಿನಲ್ಲಿಇಷ್ಟೊಂದು ಮಾನವೀಯತೆಯನ್ನು, ಆತ್ಮೀಯತೆಯನ್ನುಇಟ್ಟುಕೊಂಡ ಮನುಷ್ಯರನ್ನು ನಾನು ನೋಡಿದ್ದುಕಡಿಮೆ.ನೀವು, ನಿಮ್ಮ ಬದುಕು ಸಹೃದಯರಿಗೆಒಂದು ಪಠ್ಯ ಪುಸ್ತಕ.

ನಿಮ್ಮ ಈಗಿನ ಪುಸ್ತಕ ಓದುತ್ತಾ ಹೋದಂತೆ ನನ್ನಲ್ಲಿ ಈ ನೆನಪುಗಳೆಲ್ಲಾ ಬಂದವು. ಅಂಥಎಲ್ಲ ಸಂತೋಷಕರ ನೆನಪುಗಳಿಗಾಗಿ ನಿಮಗೆ ನನ್ನ ಅನಂತಾನಂತ ಕೃತಜ್ಞತೆಗಳು.

ಟಿ.ಎನ್. ಸೀತಾರಾಮ್

ಕಿರುತೆರೆ ಕಲಾವಿದರು ಮತ್ತು ನಿರ್ದೇಶಕರು

(ಮೃತ್ಯು ಮಿತ್ರ ಪುಸ್ತಕಕ್ಕೆ ಬರೆದ ಮುನ್ನಡಿಯಿಂದ)

ಕೃಪೆ: ವಿಶ್ವ ಸಂವಾದ,ಕರ್ನಾಟಕ
--

Tuesday, January 1, 2013

ಟಿ.ವಿ.ದಾರಾವಾಹಿ ಮತ್ತು ನಾವು

‎4-5 ವರ್ಷದ ಹೆಣ್ಣು ಮಗುವನ್ನು ಹೇಗೆ ಸಾಯಿಸಬೇಕು, ಯಾವ ರೀತಿ ಯೋಜನೆಗಳನ್ನು ಹಾಕಬೇಕು, ಅವಳಿಗೆ ಹಾವು ಕಚ್ಚಿದರೆ ಒಳ್ಳೆಯ ಚಿಕಿತ್ಸೆ ಕೊಡದೆ ಸಾಯಿಸಬೇಕೆಂದು ಡಾಕ್ಟರರಿಗೆ ಲಂಚ ಕೊಡಬೇಕೇ? ಅಲಮೈರಾದಲ್ಲಿ ತುರುಕಿ ಬೀಗ ಹಾಕಿ ಉಸಿರುಗಟ್ಟಿಸಿ ಸಾಯಿಸಬೇಕೇ? ಕಣ್ಣಾಮುಚ್ಚೆ ಆಟ ಆಡುವ ನೆಪದಲ್ಲಿ ಮಗುವಿಗೆ ಕಣ್ಣಿಗೆ ಬಟ್ಟೆ ಕಟ್ಟಿ ನೀರಿನ ಸಂಪಿನೊಳಗೆ ಮುಳುಗಿಸಬೇಕೇ? ಮಹಡಿಯ ಮೇಲಿನಿಂದ ದೂಕಬೇಕೇ?, , , , , ಇತ್ಯಾದಿ ಹಲವಾರು ಪ್ಲಾನುಗಳು ನಿಮಗೆ ಬೇಕೇ? ಸಾಯಿಸಿದರೂ ಅನುಮಾನ ಬರದಂತೆ ಹೇಗೆ ಸಾಯಿಸಬಹುದು? ಅದರಲ್ಲೂ ಮಗುವಿನ ಅಜ್ಜಿ, ಚಿಕ್ಕಪ್ಪ, ಅತ್ತೆ, ಹತ್ತಿರದ ಸಂಬಂಧಿಗಳು ಮಗುವನ್ನು ಸಾಯಿಸುವ ಯೋಚನೆಯಲ್ಲೇ ಸದಾ ಇರುವುದನ್ನು ಕಾಣಬೇಕೇ? ಹಾಗಾದರೆ ಸುವರ್ಣ ಚಾನೆಲ್ಲಿನಲ್ಲಿ ಪ್ರಸಾರವಾಗುತ್ತಿರುವ 'ಪಲ್ಲವಿ ಅನುಪಲ್ಲವಿ' ಧಾರಾವಾಹಿ ತಪ್ಪದೆ ನೋಡಿ. ನಿಮಗೂ ಇಂತಹ ಹಲವಾರು ಮನೆಹಾಳು ಐಡಿಯಾಗಳು ಬರಬಹುದು. ಈ ಧಾರಾವಾಹಿ ನಿಮಗೆ ಇಷ್ಟವಾದರೆ ಅದರ ಲೇಖಕರು, ಪಾತ್ರಧಾರಿಗಳು, ಚಾನೆಲ್ ಮಾಲಿಕರು, ಕಾರ್ಯಕ್ರಮ ನಿರ್ವಾಹಕರು, ಪ್ರಾಯೋಜಕರು,... ಎಲ್ಲರನ್ನೂ ಅಭಿನಂದಿಸಿರಿ. ಇದು ವಿಕೃತರ ಸೃಷ್ಟಿ ಎನ್ನಿಸಿದರೆ ಸಂಬಂಧಿಸಿದವರಿಗೆ ಧಿಕ್ಕಾರ-ಗಟ್ಟಿಧ್ವನಿಯ ಧಿಕ್ಕಾರ ಹೇಳಲು ಮರೆಯದಿರಿ.

-Kavi Nagaraj

ಕವಿನಾಗರಾಜರು ಫೇಸ್ ಬುಕ್ ನಲ್ಲಿ ತಮ್ಮ ಸಂಕಟವನ್ನು ತೋಡಿಕೊಂಡಿರುವುದನ್ನು ಇಲ್ಲಿ ಹಾಗೆಯೇ ಪ್ರಕಟಿಸಿರುವೆ.

ನನಗ್ಯಾಕೋ  ನಮ್ಮ ತಾಯಂದಿರಮೇಲೆ ಬಲು ಬೇಸರವಾಗುತ್ತಿದೆ. ನಿಮಗೆ ಸಿಟ್ಟು ಬರುತ್ತೆ, ಅಲ್ವಾ? ನಾನಂತೂ ಹತ್ತಾರು ಮನೆಗಳಲ್ಲಿ ತಾಯಂದಿರನ್ನು ನೋಡಿ ಬಲು ನೊಂದುಕೊಂಡಿದ್ದೇನೆ. ದಿನಕ್ಕೆ ನಾಲ್ಕಾರು ದಾರಾವಾಹಿಗಳನ್ನು ಅವರು ನೋಡಲೇ ಬೇಕು. ಅದೇ ದಾರವಾಹಿಯ ಸಮಯದಲ್ಲಿ ಯಾವುದಾದರೂ ಮುಖ್ಯ ಸಮಾಚಾರಗಳು ಪ್ರಕಟವಾಗುತ್ತಿದ್ದರೂ ಸುದ್ಧಿ ನೋಡಲು ಅವಕಾಶವಿಲ್ಲ. ಒಂದು ವೇಳೆ ಸುದ್ಧಿ ನೋಡಬೇಕೆಂದು ನೀವು ಚಾನಲ್ ಬದಲಿಸದರೆ ಕಥೆ ಮುಗಿದಂತೆಯೇ! 
"ಏನೋ ಬೇಜಾರು, ಅಂತಾ ದಾರಾವಾಹಿ ನೋಡ್ತಾರೆ, ಅವರಿಗ್ಯಾಕ್ರೀ ತೊಂದರೆ ಕೊಡ್ತೀರಿ? "......ದಾರಾವಾಹಿಯನ್ನು ನೋಡುವ ತಾಯಂದಿರ ಹೆಣ್ಣುಮಕ್ಕಳಿರ್ತಾರಲ್ಲಾ ಅಥವಾ ಸೊಸೆ ಇರ್ತಾರಲ್ಲಾ, ಅವರು  ಅವರ ಪತಿಗೆ ಹೇಳುವ ಮಾತಿದು.
ಎಷ್ಟೋ ಮನೆಯಲ್ಲಿ  ಈ ದಾರಾವಾಹಿಯನ್ನು ನೋಡಲು ಅವಕಾಶವಿಲ್ಲವೆಂದು  ಎಲ್ಲಿ ದಾರಾವಾಹಿಯನ್ನು ನೋ   ಡಲು     ಯಾರೂ ಅಡ್ಡಿಮಾಡುವುದಿಲ್ಲವೋ ಅಂತಹಾ ಮಕ್ಕಳ ಮನೆಗೆ ಅವರ ತಾಯಂದಿರು ಹೋಗಿಬಿಡ್ತಾರೆ!!
ಹೌದು, ವಯಸ್ಸು ಅರವತ್ತು-ಎಪ್ಪತ್ತು ಆಗಿರುವ ತಾಯಂದಿರ ಕಥೆ ಇದು.
ಹೋಗಲೀ ನೋಡುವ ದಾರಾವಾಹಿಯ ಕಥೆ ಏನು ಗೊತ್ತಾ?  ಗಂಡನಿಗೆ ಮೋಸ ಮಾಡಿ ಪ್ರಿಯಕರನ ಜೊತೆ ಮೋಜು ಮಾಡುವ ಹೆಣ್ಣಿನ ದೃಶ್ಯ! ಪ್ರಿಯಕರನಿಗಾಗಿ ಗಂಡನನ್ನು ಕೊಲೆಮಾಲು ಸಂಚು ರೂಪಿಸುವ ದೃಶ್ಯ!  ತಮ್ಮ ಕಛೇರಿಯಲ್ಲಿ  ಕೆಲಸಮಾಡುವ ಹುಡುಗಿರ ಜೊತೆ ಚೆಲ್ಲಾಟ‘ವಾಡುವ ಗೃಹಸ್ಥ   ಭೂಪರು! 
ಹುಡುಗಿಯರ ರೌಢಿಸಮ್ !!

ಅಬ್ಭಬ್ಭಾ!! ನಿಜವಾಗಿ ಹೇಳ್ರೀ ನೀವು ನೋಡುವ ದಾರಾವಾಹಿಗಳಲ್ಲಿ ಮೇಲಿನ ಯಾವುದಾದರೊಂದು ದೃಶ್ಯ ಇಲ್ಲದೆ ದಾರಾವಾಹಿ ನಡೆಯುತ್ತದೆಯೇ? ಇಂತಹಾ ದಾರಾವಾಹಿಗಳನ್ನು ನೋಡುತ್ತಾ ಬಹುಪಾಲು ಕಾಲಕಳೆಯುವ ನಮ್ಮ ತಾಯಂದಿರನ್ನು ನೋಡಿದಾಗ ಅವರ ಇಂತಹ   ಸ್ಥಿತಿ ಕಂಡು ಮರುಕ ಹುಟ್ಟುವುದಿಲ್ಲವೇ?

ಟಿ.ವಿ ಯಲ್ಲಿ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳು  ನಡೆಯುವುದಿಲ್ಲವೇ? ಹತ್ತಾರು ಚಾನಲ್ ಗಳಲ್ಲಿ  ನಿಮ್ಮ  ಮನಸ್ಸಿಗೆ ಮುದನೀಡುವ, ನಿಮ್ಮ ಅರಿವನ್ನು ಹೆಚ್ಚಿಸುವ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು     ಅನುಕೂಲವಾಗಬಲ್ಲ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಆದರೆ ಅವೆಲ್ಲಾ ಇಂತಹ ದಾರಾವಾಹಿಗಳನ್ನು ನೋಡುವವರಿಗೆ ಹಿಡಿಸದು, ಅಷ್ಟೇಕೆ, ಮಕ್ಕಳು  ನೋಡಬಹುದಾದ ಕಾರ್ಯಕ್ರಮಗಳನ್ನು ಮಕ್ಕಳು          ನೋಡುತ್ತಿದ್ದರೆ,  ನಿಮಗೇನೂ ಕೆಲಸ ವಿಲ್ಲವೇನ್ರೋ, ಓದಿಕೊಳ್ಳಿ, ಎಂದು ಮಕ್ಕಳನ್ನು ಬೈದು, ಈ ತಾಯಂದಿರು ಮಾಡುವ ಕೆಲಸವೇನು ಗೊತ್ತಾ? ಮನೆಹಾಳುಮಾಡುವ ದಾರಾವಾಹಿಗಳನ್ನು ನೋಡುವುದೇ ಆಗಿದೆ. ಅಸಭ್ಯ ದೃಶ್ಯಗಳನ್ನು ನೋಡುವವರಲ್ಲಿ  ಅತಿ ಹೆಚ್ಚಿನವರು ಅರವತ್ತು ಎಪ್ಪತ್ತು ವರ್ಷದ ತಾಯಂದಿರು, ಎಂಬ ನಾನು ಕಂಡ   ಸತ್ಯವನ್ನು ಅತ್ಯಂತ ನೋವಿನಿಂದ ಹೇಳ ಬಯಸುತ್ತೇನೆ, ಅಲ್ಲದೆ  ವಿಚಾರ ಮಾಡಲು ಸಮರ್ಥರಾದವರು  ಅವರ ವಯಸ್ಸು ಎಷ್ಟೇ ಇರಲಿ, ಕೆಟ್ಟ  ದಾರಾವಾಹಿಗಳನ್ನು ನೋಡುವವರಿಗೆ ಅವರು ಹಿರಿಯರಾದರೂ ಚಿಂತೆಇಲ್ಲ  ತಿಳಿ ಹೇಳಲೇ ಬೇಕು. ದೂರ ದರ್ಶನ ನೋಲು ಒಂದು ನೀತಿ ಸಂಹಿತೆಯನ್ನು ರೂಪಿಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ.
ನನ್ನ ಮಾತಿಗೆ ಹಲವರು ಆಕ್ಷೇಪಣೆ ಮಾಡುತ್ತಾರೆಂಬ ಅರಿವು ನನಗಿದೆ." ಕೇವಲ ಹೆಂಗಸರು ನಿಮ್ಮ ಕಣ್ಣಿಗೆ ಬಿದ್ರಾ? ಗಂಡಸರು  ನೋಡುವುದಿಲ್ಲವೇ? ಅನ್ನೋ ಮಾತು ಬಂದೇ ಬರುತ್ತೆ. ಹೌದು, ಗಂಡಸರು ನೋಡಿದರೆ ಅದೂ ತಪ್ಪೇ. ಆದರೆ ನನ್ನ ಕಣ್ಣಿಗೆ  ತಾಯಂದಿರ ಸಂಖ್ಯೆ ಹೆಚ್ಚು  ಕಂಡಿದೆ. ಅವರಲ್ಲಿ ಕ್ಷಮೆ ಕೋರುತ್ತಾ " ಅಮ್ಮಾ, ನೀವು  ಒಂದು ಮನೆಯ ಹಿರಿಯರು, ಮನೆಯಲ್ಲಿ ಕೆಲವರಿಗೆ ತಾಯಿ, ಕೆಲವರಿಗೆ ಅತ್ತೆ, ಕೆಲವರಿಗೆ ಅಜ್ಜಿ.....ಆದರೆ ನೀವು ಎಲ್ಲರಿಗೂ ದೇವರು. ನೀವು ಸಮಾಜವನ್ನು  ತಿದ್ದಬಲ್ಲಿರಿ, ನಿಮ್ಮನ್ನು ತಿದ್ದುವ ಹೀನ ಸ್ಥಿತಿ ಈ ಸಮಾಜಕ್ಕೆ ಬಾರದಿರಲೆಂದೇ ಭಗವಂತನಲ್ಲಿ  ನನ್ನ ಪ್ರಾರ್ಥನೆ.