Pages

Saturday, April 30, 2011

ಆತ್ಮೀಯ ವೇದಸುಧೆಯ ಅಭಿಮಾನಿಗಳೇ,
ನಮಸ್ತೆ. ಇತ್ತೀಚೆಗೆ ಪುಟ್ಟಬರ್ತಿಸಾಯಿಬಾಬ ಅವರು ಇಹಲೋಕವನ್ನು ತ್ಯಜಿಸಿದ್ದಾರೆ. ಅವರ ಬಗ್ಗೆ ಲಕ್ಷಾಂತರ ಭಕ್ತರು ತಮ್ಮ ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ.ಸಾಯಿಬಾಬಾ ಅವರು ಆಂದ್ರದಲ್ಲಿ ಒಂದು ಜಿಲ್ಲೆಗೆ ನೀರುಣಿಸುವ ಹಾಗೂ ಉತ್ತಮವಾದ ಆಸ್ಪತ್ರೆಯನ್ನು ತೆರೆದು ಜನರ ಸೇವೆ ಮಾಡಿದ್ದಾರೆಂಬ ಬಗ್ಗೆ ಅವರ ಬಗ್ಗೆ ಮೆಚ್ಚುಗೆ ಇದೆ. ವೇದಸುಧೆಯಲ್ಲಿ ಬಳಗದ ಹಿರಿಯ ಸದಸ್ಯರಾದ ಶ್ರೀ ವಿ.ಆರ್.ಭಟ್ಟರು ಒಂದು ಉತ್ತಮವಾದ ಲೇಖನವನ್ನು ಬರೆದು ಅದರಲ್ಲಿ ಆರೋಗ್ಯಕರ ಚರ್ಚೆ ನಡೆದು ಶ್ರೀ ಕವಿನಾಗರಾಜ್, ಶ್ರೀಸುಧಾಕರಶರ್ಮರು, ಕವಿ ಸುರೇಶ್ ಇವರುಗಳು ಪಾಲ್ಗೊಂಡು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುತ್ತಾರೆ.ಯಾವಾಗ ಒಂದು ಲೇಖನವು ಹಲವು ಜನರ ಚರ್ಚೆಗೆ ಕಾರಣವಾಗುತ್ತದೋ ಅದು ಸಾರ್ಥಕವಾಯಿತೆಂದೇ ಅದರ ಅರ್ಥ. ಸತ್ಯವೆಂಬುದು ಯಾರೂ ಬದಲಾವಣೆ ಮಾಡಲು ಸಾಧ್ಯವಾಗದಂತಹ ಒಂದು ವಿಷಯ. ಆದರೂ ಜನರು ಅವರರವರ ಮನಸ್ಸಿಗೆ ಹಿತವೆನಿಸಿದ್ದನ್ನು "ಇದು ಸತ್ಯ" ವೆಂದು ಭಾವಿಸುತ್ತಾರೆ. ಇದು ಸಹಜ. ನನ್ನ ಮನ ಒಪ್ಪುವುದು ನನಗೆ ಸತ್ಯವಾಗಿ ತೋರುತ್ತದೆ. ನಿಮ್ಮ ಮನ ಒಪ್ಪುವುದು ನಿಮಗೆ ಸತ್ಯವಾಗಿ ತೋರುತ್ತದೆ. ಆದರೆ ನಿಜವಾಗಿ ಸತ್ಯವು ಬೇರೆಲ್ಲೋ ಇರುತ್ತದೆ. ವೇದಸುಧೆಯ ಮುಖ್ಯವಾದ ಒಂದು ಉದ್ಧೇಶವೆಂದರೆ ಯಾವುದೇ ವಿಚಾರವನ್ನು ಕುರುಡಾಗಿ ಒಪ್ಪಬಾರದು, ಅಲ್ಲದೆ ದೇವರ ಬಗ್ಗೆಯೂ ಕೂಡ ಭಯ ದೂರವಾಗಬೇಕು.ಇಂತಹ ಒಂದು ಮಾನಸಿಕತೆಯ ಜಾಗೃತಿಯಾದರೆ ಸಮಾಜಕ್ಕೆ ಅದು ಒಳ್ಳೆಯದಲ್ಲವೇ? ಪ್ರಸ್ತುತ ಚರ್ಚೆಯಲ್ಲಿರುವ ಶ್ರೀ ವಿ.ಆರ್.ಭಟ್ಟರ ಲೇಖನದ ಕೊಂಡಿ ಇಲ್ಲಿದೆ.http://vedasudhe.blogspot.com/2011/04/blog-post_25.html ಎಲ್ಲರೂ ಓದಲೇ ಬೇಕಾದ ಲೇಖನವಿದು. ದಯಮಾಡಿ ಓದಿ. ನಿಮ್ಮ ನಿಮ್ಮ ಪ್ರತಿಕ್ರಿಯೆಯನ್ನು ಕೊಡಿ. ನಿಮ್ಮ ಪ್ರತಿಕ್ರಿಯೆ ಅದು ನಿಮ್ಮ ವಿಚಾರವೂ ಆಗಬಲ್ಲದು. ಯಾರೂ ಕೂಡ ವಿಚಾರ ಭೇದವನ್ನು ವೈಯಕ್ತಿವಾಗಿ ತೆಗೆದುಕೊಳ್ಳುವುದು ಬೇಡ. ಅಂತೂ ಸತ್ಯಪಥದತ್ತ ಯಾರೂ ಕೊಂಡೊಯ್ಯಬಹುದು. ಎಲ್ಲರಿಗೂ ಬೇಕಾಗಿರುವುದು ಸತ್ಯಪಥ.