Pages

Thursday, September 30, 2010

ಮೂಢ ಉವಾಚ -8

                  ನನ್ನದು?
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನೆಲ್ಲಾ!
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ


                ದೀಪಾವಳಿ
ಒಡಲಗುಡಿಯ ರಜ-ತಮಗಳ ಗುಡಿಸಿ
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ
ಮನದ ಕತ್ತಲ ಕಳೆದು ತಿಳಿವಿನ ಬೆಳಕ
ಪಸರಿಪುದೆ ದೀಪಾವಳಿ ತಿಳಿ ಮೂಢ


                 ಸಮಪಾಲು
ಅಹುದಿಹುದು ಅಡೆತಡೆಯು ಬಾಳಹಾದಿಯಲಿ
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ
ಸಮಪಾಲು ಪಡೆದಿರಲು ನೋವು ನಲಿವಿನಲಿ
ಬಾಳು ಬಂಗಾರ ಬದುಕು ಸಿಂಗಾರ ಮೂಢ


                ನೀತಿವಂತ
ನೀತಿವಂತರ ನಡೆಯು ನ್ಯಾಯಕಾಸರೆಯು
ನುಡಿದಂತೆ ನಡೆಯುವರು ಸವಿಯ ನೀಡುವರು
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು
ಜಗದ ಹಿತ ಕಾಯ್ವ ಧೀರರವರು ಮೂಢ
************
-ಕ.ವೆಂ.ನಾಗರಾಜ್

Wednesday, September 29, 2010

ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ಚಡಪಡಿಸಿದ್ದು ಹೀಗೆ

[ಚಿತ್ರ ಅಂತರ್ಜಾಲದಿಂದ]



[ಅಂತರ್ಜಾಲದ ಚಿತ್ರದಿಂದ ಸಮಾಧಾನವಾಗಲಿಲ್ಲ. ತೊಟ್ಟು ಕಿತ್ತು ನೆಲದ ಮೇಲೆ ಬಿದ್ದ ಹೂವಿನ ಚಿತ್ರ ನಾನೇ ಸೆರೆಹಿಡಿದಾಗ]



ತೊಟ್ಟು ಕಿತ್ತು ರಸ್ತೆಯಲ್ಲಿ ಬಿದ್ದಿದ್ದ ಹೂವನ್ನು ಕಂಡು ನನ್ನ ಮನ ಚಡಪಡಿಸಿದ್ದು ಹೀಗೆ

ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು?
ಮನದಲಿ ವ್ಯಥೆಯ ಹೊತ್ತು|
ಯಾವ ಬೆರಳದು ಕ್ರೂರ
ಕೊಟ್ಟಿದೇತಕೆ ನೋವ
ಉಗರಲಿ ತೊಟ್ಟ ಕಿತ್ತು||

ನಗುನಗುತಲಿದೆ ಇನ್ನೂ
ಮುಚ್ಚಲಿಲ್ಲವು ಕಣ್ಣು
ಪಾಪ ಅದಕೇನು ಗೊತ್ತು?
ತಾನೀಗ ಕಾಲರಾಯನ ತುತ್ತು||

ಮೆಲ್ಲ ಮೆಲ್ಲನೆ ಮಾಸಿ
ಆವರಿಸಿದೆ ಕಪ್ಪು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು
ತುಳಿದವರ ಕಾಲಿಗೇ ಮುತ್ತು!!


Tuesday, September 28, 2010

ಎಲ್ಲರ ಜನನ ವಾಗಿರುವುದು ತಾಯಿಯ ಗರ್ಭದಿಂದಲ್ಲವೇ?

ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ-2



[ ಕಳೆದ ಕೆಲವು ದಿನಗಳ ಮುಂಚೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ಬ್ರಾಹ್ಮಣ ಸಮಾಜದಲ್ಲಿ ಮಾಡಿದ ಉಪನ್ಯಾಸದ ಆಡಿಯೋ ವನ್ನು ಇಲ್ಲಿ ನೀವು ಕೇಳಬಹುದು.ಆದರೆ ಕೆಲವರಿಗೆ ಆಡಿಯೋ ಕೇಳುವ ಸೂಕ್ತ ಸೌಲಭ್ಯವಿರುವುದಿಲ್ಲ. ಅವರಿಗಾಗಿ ಉಪನ್ಯಾಸದ ಬರಹರೂಪವನ್ನು ಇಲ್ಲಿ ಕೊಟ್ಟಿದೆ. ಬರಹ ರೂಪವನ್ನು ಓದುವಾಗ ಉಪನ್ಯಾಸವನ್ನು ಕೇಳಿದಂತಾಗುವುದಿಲ್ಲ. ವೀಡಿಯೋ ದಲ್ಲಿ ನೋಡಿದರಂತೂ ಇನ್ನೂ ಭಾವನೆಗಳು ಸ್ಪಷ್ಟವಾಗುತ್ತದೆ. ಆದರೂ ಆಡಿಯೋ/ವೀಡಿಯೋ ಗಳನ್ನು ಅಂತರ್ಜಾಲದಲ್ಲಿ ನೋಡುವಾಗ/ಕೇಳುವಾಗ ಅನೇಕ ತಾಂತ್ರಿಕ ತೊಂದರೆಗಳಿರುತ್ತವೆ. ಅದಕ್ಕಾಗಿ ಬರಹ ರೂಪ ಇಲ್ಲಿದೆ. ಆದರೂ ಆಡಿಯೋ ಕೇಳಿ.]
ಇವತ್ತು ರೂಢಿಯಲ್ಲಿ ಬ್ರಾಹ್ಮಣ ಎಂದರೆ ಅರ್ಥ ಏನು? ಅದು ಒಂದು ಜಾತಿ.ನಾವೆಲ್ಲಾ ಒಪ್ಪಿಕೊಂಡಿರುವಂತೆ ಬ್ರಾಹ್ಮಣ ಎಂಬುದು ಹುಟ್ಟಿನಿಂದ ಬರುತ್ತದೆ,ತಂದೆತಾಯಿ ಬ್ರಾಹ್ಮಣರಾಗಿದ್ದರೆ ಜನಿಸುವ ಮಗುವೂ ಬ್ರಾಹ್ಮಣ ಎಂಬುದು ಈಗ ನಡೆದುಬಂದಿರುವ ವಿಚಾರ.ಇದು ಬ್ರಾಹ್ಮಣ ಎಂಬ ಪದಕ್ಕಷ್ಟೇ ಅಲ್ಲ, ಎಲ್ಲಾ ಜಾತಿಯ ಕಥೆಯೂ ಇದೇ ಆಗಿದೆ. ವೈಶ್ಯ ನೆಂದರೆ ವೈಶ್ಯ ತಂದೆತಾಯಿಗೆ ಜನಿಸಿರುವವ ಎಂದೇ ಅರ್ಥ ಮಾಡುತ್ತೇವೆ.ಇದು ಎಲ್ಲಾ ಜಾತಿಗೂ ಅನ್ವಯ. ಅಥವಾ ಮತಗಳ ಹೆಸರಲ್ಲಿ ನೋಡಬೇಕೆಂದರೆ ಹಿಂದುಗಳ ಮನೆಯಲ್ಲಿ ಹುಟ್ಟಿದ ಮಗು ಹಿಂದು. ಕ್ರಿಶ್ಚಿಯನ್ ಮನೆಯಲ್ಲಿ ಹುಟ್ಟಿದ ಮಗು ಕ್ರೈಸ್ತ್ , ಮುಸಲ್ಮಾನರ ಮನೆಯಲ್ಲಿ ಹುಟ್ಟಿದವ ಮುಸ್ಲಿಮ್,ಲಿಂಗಾಯಿಯತರ ಮನೆಯಲ್ಲಿ ಹುಟ್ಟಿದವ ಲಿಂಗಾಯಿತ. ಒಟ್ಟಿನಲ್ಲಿ ಜಾತಿಯಾಗಲೀ, ಮತವಾಗಲೀ ಹುಟ್ಟಿನಿಂದ ಬರುತ್ತದೆಂಬ ವಿಚಾರ ನಮ್ಮ ತಲೆಯಲ್ಲಿ ಸೇರಿಕೊಂಡಿದೆ. ಆದರೆ ವೇದವು ಹೇಳುವ ವಿಚಾರವನ್ನು ನಾವು ಪ್ರಾಮಾಣಿಕವಾಗಿ ಗಮನಿಸುವುದಾದರೆ ಈ ರೀತಿಯ ಹುಟ್ಟಿನಿಂದ ಬರುವ ಜಾತಿಯನ್ನು ವೇದವು ಒಪ್ಪುವುದಿಲ್ಲ.ಭಗವಂತನು ಈ ರೀತಿಯ ವಿಭಾಗವನ್ನು ಮಾಡಿರುವುದಿಲ್ಲ. ಇಂದು ಇರುವ ಎಲ್ಲಾ ಈ ಜಾತಿಯ ವ್ಯವಸ್ಥೆಯನ್ನು ಮನುಷ್ಯನು ಭಗವಂತನಿಗೆ ವಿರುದ್ಧವಾಗಿ ಮಾಡಿಕೊಂಡಿದ್ದಾನೆಯೇ ಹೊರತು ಭಗವಂತನು ಮಾಡಿದ್ದಲ್ಲ. ಮನುಷ್ಯನು ಮಾಡಬಾರದೆಂದೇನೂ ಅಲ್ಲ, ಆದರೆ ಮನುಷ್ಯನು ಮಾಡಿದ್ದು ಭಗವಂತನ ಆದೇಶಕ್ಕೆ ಅನುಗುಣವಾಗಿರಬೇಕು.ಈ ಜಾತಿ ವ್ಯವಸ್ಥೆಯು ಭಗವಂತನ ಆದೇಶಕ್ಕೆ ವಿರುದ್ಧವಾಗಿದೆ.ಅಲ್ಲದೆ ವೇದದಲ್ಲಿರುವ ವರ್ಣಾಶ್ರಮ ವ್ಯವಸ್ಥೆಗೆ ತದ್ವಿರುದ್ಧವಾಗಿದೆ.ವೇದದಲ್ಲಿ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ,ಶೂದ್ರ ಎಂಬ ಪದಗಳು ಪ್ರಯೋಗದಲ್ಲಿವೆ. ಆದರೆ ಅವುಗಳನ್ನು ಎಲ್ಲೂ ಈಗಿರುವ ಜಾತಿಯ ಅರ್ಥದಲ್ಲಿ ಬಳಸಿಲ್ಲ.ಒಬ್ಬ ವ್ಯಾಪಾರ ಮಾಡುವ ವ್ಯಕ್ತಿ ಇದ್ದಾನೆಂದರೆ ವೇದಗಳ ಪ್ರಕಾರ ಅವನು ವೈಶ್ಯ.ಅವನು ಯಾವ ಮನೆಯಲ್ಲಿ ಹುಟ್ಟಿದ್ದಾನೆ? ಅವರಪ್ಪ ಯಾರು? ಅವರಮ್ಮ ಯಾರು? ಎಂಬುದು ನಗಣ್ಯ.ವ್ಯಾಪಾರ ಮಾಡುವ ವ್ಯಕ್ತಿಯೊಬ್ಬನ ಹೆಸರು ಡಿಸೋಜ ಎಂದು ಭಾವಿಸೋಣ. ಅವನನ್ನು ಇಂದು ನಾವು ಏನೆಂದು ಕರೆಯುತ್ತೇವೆ? ಅವನನ್ನು ಕ್ರಿಶ್ಚಿಯನ್ ಎಂದು ಕರೆಯುತ್ತೇವೆ. ಆದರೆ ವೇದದ ಪ್ರಕಾರ ಅವನು ವೈಶ್ಯ. ಇಬ್ರಾಹಿಮ್ ಎಂಬುವನೊಬ್ಬ ಟೀಚರ್ ಕೆಲಸದಲ್ಲಿದ್ದರೆ ಅವನನ್ನು ಮುಸ್ಲಿಮ್ ಎಂದೇ ನಾವು ಕರೆಯುತ್ತೇವೆ. ವೇದದ ಪ್ರಕಾರ ಜ್ಞಾನವನ್ನು ಪ್ರಚಾರ ಮಾಡುತ್ತಿರುವ ಇಬ್ರಾಹಿಮ್ ಕೂಡ ಬ್ರಾಹ್ಮಣನೇ.ಜಾತಿ ಎಂಬುದು ಹುಟ್ಟಿನಿಂದ ಬರುವಂತಹದ್ದಲ್ಲ. ಇದನ್ನೆಲ್ಲಾ ಮನುಷ್ಯನು ವೇದದ ಆದೇಶಕ್ಕೆ ವಿರುದ್ಧವಾಗಿ ಮಾಡಿಕೊಂಡಿರುವ ವ್ಯವಸ್ಥೆ. ಇದು ತಪ್ಪು.
ಇವತ್ತಿನ ನಮ್ಮ ಕಲ್ಪನೆ ಹೇಗಿದೆ, ಎಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವ್ಯವಸ್ಥೆಯಲ್ಲಿ ಬ್ರಾಹ್ಮಣ ಶ್ರೇಷ್ಠ, ಶೂದ್ರ ಕನಿಷ್ಠ.ಇದು ಇವತ್ತಿನ ವ್ಯವಸ್ಥೆಯಲ್ಲ, ಅನೇಕ ಶತಮಾನಗಳಿಂದ ಶೂದ್ರರನ್ನು ಕೀಳಾಗಿ ಕಾಣುತ್ತಾ ಬರಲಾಗಿರುವ ಧ್ಯೋತಕ..ಮೇಲ್ಜಾತಿ ಎಂಬುವರಿಂದ ಕೀಳ್ಜಾತಿ ಎಂಬುವರ ಮೇಲೆ ದೌರ್ಜನ್ಯಗಳು ನಡೆದಿರುವ ಹಲವು ಉಧಾಹರಣೆಗಳು ಚರಿತ್ರೆಯಲ್ಲಿದೆ.ಇವತ್ತಿಗೂ ಕೆಳಜಾತಿಯವರು ಮೇಲ್ಜಾತಿಯವರ ಸೇವೆ ಮಾಡುವುದಕ್ಕಾಗಿಯೇ ಇರುವುದು ಎಂಬ ಭಾವನೆ ಹಲವರಲ್ಲಿದ್ದು ಸಮಾಜದಲ್ಲಿನ ಸಾಮರಸ್ಯ ಕೆಡಲು ಮುಖ್ಯ ಕಾರಣವಾಗಿದೆ.ಈ ಜಾತಿ ವ್ಯವಸ್ಥೆಯು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆಯೇ ಹೊರತು ನೆಮ್ಮದಿಗೆ ಕಾರಣವಾಗಿಲ್ಲ.ಆದ್ದರಿಂದಲೇ ಇದು ಭಗವಂತನು ಮಾಡಿರುವ ವ್ಯವಸ್ಥೆಯಲ್ಲ. ಭಗವಂತನು ಸಮಾಜದಲ್ಲಿ ನೆಮ್ಮದಿ ಹಾಳುಮಾಡುವ ವ್ಯವಸ್ಥೆ ಮಾಡಿರಲು ಸಾಧ್ಯವೇ ಇಲ್ಲ.ಭಗವಂತನ ಮಕ್ಕಳಾದ ನಾವೆಲ್ಲರೂ ಸುಖ ಶಾಂತಿ, ನೆಮ್ಮದಿಯಿಂದ ಬದುಕ ಬೇಕೆಂಬುದೇ ಭಗವಂತನ ಇಚ್ಛೆ.ಇದನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಾಗ ಈಗ ಸಮಾಜದ ನೆಮ್ಮದಿ ಹಾಳುಮಾಡಲು ಯಾವಯಾವ ವ್ಯವಸ್ಥೆಗಳಿವೆ, ಅವೆಲ್ಲಾ ಭಗವಂತನು ಮಾಡಿದ್ದಲ್ಲ, ಅದನ್ನು ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಜ್ಞಾನಿಗಳು ಮಾಡಿದ್ದು, ಎಂದು ನಾವು ತಿಳಿದುಕೊಳ್ಳಬಹುದು , ಅಷ್ಟೇ ಅಲ್ಲ, ಸಮಾಜದ ನೆಮ್ಮದಿಯನ್ನು ಹಾಳುಮಾಡುವಂತಹ ವ್ಯವಸ್ಥೆಯನ್ನು ಪಾಲಿಸ ಬೇಕಾಗಿಲ್ಲ.
ವೇದವು ನಿಜವಾಗಿ ಏನು ಹೇಳುತ್ತದೆಂಬುದನ್ನು ಈಗ ನೋಡೋಣ.ಶೂದ್ರರನ್ನು ಕೀಳು ಅಥವಾ ಬ್ರಾಹ್ಮಣರನ್ನು ಮೇಲು ಎಂದು ಕರೆಯಲು ಹಾಗೆ ಭಾವಿಸಿರುವವರು ಕೊಡುವ ಕಾರಣವೇನೆಂದರೆ, ವೇದದಲ್ಲಿ ಬರುವ ಒಂದು ಮಂತ್ರ.ಪುರುಷಸೂಕ್ತದ ಈ ಮಂತ್ರವನ್ನು ತಪ್ಪಾಗಿ ಅರ್ಥೈಸಿರುವುದೇ ಇವೆಲ್ಲಾ ಆಭಾಸಗಳಿಗೆ ಮೂಲ ಕಾರಣ. ಅದನ್ನೀಗ ನೋಡೋಣ.
||ಬ್ರಾಹ್ಮಣೋಸ್ಯ ಮುಖಮಾಸೀತ್| ಬಾಹೂ ರಾಜನ್ಯ ಕೃತ: | ಊರೂತದಸ್ಯ ಯದ್ವೈಶ್ಯೋ|ಪದ್ಭ್ಯಾಮ್ ಶೂದ್ರೋ ಅಜಾಯತ|| ಈ ಮಂತ್ರವು ನಾಲ್ಕೂ ವೇದಗಳಲ್ಲಿ ಬರುತ್ತದೆ. ಬ್ರಾಹ್ಮಣರು ಭಗವಂತನ ಮುಖದಿಂದ, ಬಾಹುಗಳಿಂದ ಕ್ಷತ್ರಿಯರು, ತೊಡೆಯಿಂದ ವೈಶ್ಯರು ಹಾಗೂ ಕಾಲುಳಿಂದ ಶೂದ್ರರೂ ಹುಟ್ಟಿದರು, ಎಂದು ತಪ್ಪಾಗಿ ಅರ್ಥೈಸಲಾಗಿದೆ. ಇಲ್ಲಿಂದ ಸಮಾಜದ ನೆಮ್ಮದಿ ಕೆಡಿಸುವ ಕ್ರಿಯೆ ಶುರುವಾಗಿದೆ.ಮುಖದಿಂದ ಹುಟ್ಟಿದ ಬ್ರಾಹ್ಮಣ ಮೇಲು, ಕಾಲುಗಳಿಂದ ಹುಟ್ಟಿದ ಶೂದ್ರ ಕೀಳೆಂಬ ಭಾವನೆಯನ್ನು ಗಟ್ಟಿಯಾಗಿ ಬಿತ್ತಲಾಗಿದೆ.ದುರ್ದೈವವೆಂದರೆ ಹಲವಾರು ಸಂಸ್ಕೃತ ಪಂಡಿತರೆನೆಸಿಕೊಳ್ಳುವರೂ ಸಹ ಈ ಮಂತ್ರಗಳಿಗೆ ಇದೇ ಅರ್ಥವನ್ನು ಹೇಳುತ್ತಾ ಸಮಾಜದ ನೆಮ್ಮದಿ ಹಾಳುಮಾಡುವ ಕೆಲಸವನ್ನು ಮಾಡಿದ್ದಾರೆ.ಇದು ಒಂದು ದೊಡ್ಡ ಗೊಂದಲ. ಈ ಗೊಂದಲವನ್ನು ಮೊದಲು ಬಿಡಿಸಿಕೊಳ್ಳುವ ಪ್ರಯತ್ನ ಮಾಡೋಣ.ಬ್ರಾಹ್ಮಣೋಸ್ಯ ಮುಖಮಾಸೀತ್, ಎಂಬ ಈ ಮಂತ್ರಕ್ಕೆ ಅರ್ಥವನ್ನು ಹುಡುಕುವ ಮೊದಲು ಅದರ ಹಿಂದಿನ ಮಂತ್ರವನ್ನು ನೋಡಬೇಕು. ಹಿಂದಿನ ಮಂತ್ರವು ಏನು ಹೇಳುತ್ತದೆಂದರೆ ಈ ಸಮಾಜ ಪುರುಷನ ಮುಖ ಯಾವುದು? ಬಾಹುಗಳು ಯಾವುವು?ತೊಡೆ ಹಾಗೂ ಕಾಲುಗಳು ಯಾವುವು? ಪ್ರಶ್ನೆ ಹೀಗಿರುವಾಗ ಉತ್ತರ ಹೇಗಿರ ಬೇಕು? ಮುಖ ಯಾವುದೆಂದರೆ ಮುಖ ಇದು ಎಂದು ಹೇಳಬೇಕಲ್ಲವೇ? ಅಂದರೆ ಬ್ರಾಹ್ಮಣನು ಸಮಾಜ ಪುರುಷನ ಮುಖ, ಕ್ಷತ್ರಿಯರು ಬಾಹುಗಳು, ವೈಶ್ಯರು ತೊಡೆಗಳು ಮತ್ತು ಶೂದ್ರರು ಪಾದಗಳು, ಎಂದು ತಾನೇ ಉತ್ತರಿಸ ಬೇಕಾದ್ದು.ಆದರೆ ಹೀಗೆ ಅರ್ಥ ಮಾಡಿದರೆ ಕೇಳಿದ ಪ್ರಶ್ನೆಯೇ ಒಂದು ಉತ್ತರವೇ ಬೇರೆ ಆಗುತ್ತದಲ್ಲವೇ?..........[ಮುಂದುವರೆದ ಮಾತುಗಳನ್ನು ಇದೇ ಅಕ್ಟೋಬರ್ ೧ ಶುಕ್ರವಾರ ನಿರೀಕ್ಷಿಸಿ]


-------------------------------------------------------------------------------------------------
ಹಾಸನದ ಮಲೆನಾಡು ಇಂಜಿನೀರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಎಸ್.ಆರ್.ಜಯರಾಮ್ ಇವರು ತಮ್ಮ ಅಭಿಪ್ರಾಯವನ್ನು ವೇದಸುಧೆಗೆ ಮೇಲ್ ಮಾಡಿದ್ದಾರೆ.
Sri.Sridhar,
Normally I do not Check mail. By chance I did it today.
I think we have already come long way from the old definition of Brahmin. But what are we today!
Jayaram.


Dr.S.R.Jayaram
Professor in Mechanical Engineering
Malnad College of Engineering
HASSAN 573 201
Phone 08172-245307(O)
08172-265456(R)
Cell No. 94481 66877

-------------------------------------------------------------------------------------------------
ಎಷ್ಟೇ ದೂರ ಸಾಗಿದ್ದರೂ ಸತ್ಯದ ಅರಿವಾದಾಗ ಒಪ್ಪಬೇಕಾಗುತ್ತದೆ.ಇಲ್ಲಿ ನನ್ನದೊಂದು ಪ್ರಶ್ನೆ ಇದೆ. ಸುಧಾಕರ ಶರ್ಮರುಹೇಳುತ್ತಿರುವುದು ವೇದದ ಪರವಾಗಿದೆಯೋ ಅಥವಾ ವಿರುದ್ಧವೋ? ಎಂಬುದು. ಹೇಗೂ ವೇದಸುಧೆಗೆ ನಿಮ್ಮ ಪ್ರವೇಶವಾಗಿದೆ.ಇಲ್ಲಿಪ್ರಕಟವಾಗುತ್ತಿರುವುದು ತಪ್ಪೆಂದು ಕಂಡರೆ ತಪ್ಪೆಂದು ಹೇಳಿ.ಇವತ್ತು ನಾವೇನಾಗಿದ್ದೆವೆನ್ನುವ ಪ್ರಶ್ನೆ ಅವರವರ ಅಂತರಂಗಕ್ಕೆಕೇಳಿಕೊಳ್ಳಬಾಕಾದುದಲ್ಲವೇ?
ನಿಮ್ಮ ವನೇ ಆದ
-ಶ್ರೀಧರ್
-------------------------------------------------------------------------------------------------

Monday, September 27, 2010

ವಿಶ್ವ ಗುರು ಭಾರತ

ಭಾರತಮಾತೆಯ ಪವಿತ್ರ ಗರ್ಭದಲ್ಲಿ ಜನಿಸಿರುವ ನಮಗೆ ನಮ್ಮ ಋಷಿಮುನಿಗಳ ನೂರಾರು ವರ್ಷದ ತಪಸ್ಸಿನ ಫಲವಾಗಿ ಒಂದುಜೀವನಕ್ರಮವು ಲಭ್ಯವಾಗಿದೆ. ನಾವೆಷ್ಟು ಪುಣ್ಯಶಾಲಿಗಳೆಂದರೆ ಈ ನಮ್ಮ ಭಾರತ ದೇಶದ ನೆಲದಲ್ಲಿ ಸಹಸ್ರಾರು ವರ್ಷಗಳಿಂದಸಾವಿರಾರು ಸಾದುಸಂತರು ಜನ್ಮವೆತ್ತಿ, ಸಾಧನೆಗೈದು ರೂಪಿಸಿರುವ ಜೀವನ ಕ್ರಮವು ಸರಳ ವಾಗಿರುವುದಷ್ಟೇ ಅಲ್ಲ, ವೈಜ್ಞಾನಿಕವಾಗಿಯೂ, ಸಾರ್ವಕಾಲಿಕ ಅನುಸರಣೀಯವೂ ಆಗಿದೆ.ಹಾಗಾದರೆ ನಮ್ಮ ಜೀವನ ಕ್ರಮದ ವಿಶೇಷತೆ ಏನು?

"ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀತಾ: ಮಾಗೃಧ: ತಸ್ಯ ಸ್ವಿದ್ ಧನಮ್||

ಈ ಜಗತ್ತೆಲ್ಲಾ ಈಶ್ವರ ಮಯ. ಅವನಿಂದಲೇ ಎಲ್ಲವೂ. ಅವನಿಂದ ಅಂದರೆ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ಅರ್ಪಿಸಿಮಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಅನುಭವಿಸು. ಯಾರ ಧನಕ್ಕೂ ಆಸೆ ಪಡಬೇಡ.

ಇದು ನಮ್ಮ ದೃಷ್ಟಿಕೋನ. ಅಂದರೆ ನನ್ನದು ಎಂಬುದು ಏನೂ ಇಲ್ಲ. ಎಲ್ಲವೂ ಭಗವಂತನ ಕೃಪೆಯಿಂದ ಪ್ರಕೃತಿಯು ನಮಗೆಕೊಟ್ಟಿದೆ. ಆದ್ದರಿಂದ ಅವನಿಂದ ಪಡೆದದ್ದನ್ನು ಅವನಿಗೇ ಅರ್ಪಿಸಿ ಮಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಅನುಭವಿಸುವಾಗ ಅದರಲ್ಲಿ ಸಿಗುವಆನಂದವು ಅಪಾರ. ಅಷ್ಟೇ ಅಲ್ಲ. ಇನ್ನೂ ಒಂದು ಮಾತಿದೆ...

ಯಾವತ್ ಭ್ರಿಯೇತ ಜಠರಮ್ ತಾವತ್ ಸ್ವತ್ವಮ್ ದೇಹಿನಾಮ್|
ಅಧಿಕಮ್ ಯೋಭಿ ಮನ್ಯೇತ ಸ ಸ್ತೇನೋ ದಂಡ ಮರ್ಹತಿ||

ದೇಹ ಧಾರಣೆಗೆ ಎಷ್ಟು ಅಗತ್ಯವೋ ಅಷ್ಟನ್ನು ತೆಗೆದುಕೋ, ಇದಕ್ಕಿಂತ ಹೆಚ್ಚಿನ ಆಸೆ ಪಡುವವನು ಕಳ್ಳ. ಅವನು ಶಿಕ್ಷಾರ್ಹ.

ಇದು ನಮ್ಮ ಹೆಚ್ಚುಗಾರಿಕೆ. ನಮ್ಮದು ತ್ಯಾಗದ ಸಂಸ್ಕೃತಿ.ತ್ಯಾಗಮಯ ಜೀವನದಲ್ಲೇ ಆನಂದ ಪಡುವ ಸಂಸ್ಕೃತಿ ನಮ್ಮದು. ಪ್ರಕೃತಿಯಲ್ಲಿ ಯಥೇಚ್ಛವಾಗಿ ಸಂಪತ್ತು ಇದೆ , ಎಂದು ಅದನ್ನು ಲೂಟಿಮಾಡುವಂತಿಲ್ಲ. ತನ್ನ ದೇಹಧಾರಣೆಗೆ ಅಗತ್ಯವಿರುವಷ್ಟುಮಾತ್ರ ಪಡೆದುಕೋ, ಅದಕ್ಕಿಂತ ಹೆಚ್ಚಿನ ಆಸೆಪಟ್ಟರೆ ಅದು ಶಿಕ್ಷಾರ್ಹ ಅಪರಾಧ.ಎಂತಹಾ ಅದ್ಭುತ ಚಿಂತನೆ ನಮ್ಮದು!! ಹೀಗೆಸರಳವಾಗಿ ಬದುಕುವಾಗ ಇತರರ ಬಗ್ಗೆ ನಮ್ಮ ಧೋರಣೆ ಏನು? ಅದಕ್ಕಾಗಿಯೇ ನಿತ್ಯವೂ ಸಂಕಲ್ಪ ಮಾಡುವಾಗ ನಾವುಹೇಳುತ್ತೇವೆ.....

ಸರ್ವೇಪಿ ಸುಖಿನ: ಸಂತು
ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದು:ಖ ಭಾಗ್ಭವೇತ್||

ಎಲ್ಲರೂ /ಎಲ್ಲವೂ ಸುಖವಾಗಿರಲಿ. ಎಲ್ಲರೂ ನೆಮ್ಮದಿಯಿಂದಿರಲಿ. ಎಲ್ಲವೂ ಸಮೃದ್ಧವಾಗಿರಲಿ. ಯಾರೂ ದು:ಖಿತರಾಗುವುದು ಬೇಡ.

ನಾವು ಸಂಕಲ್ಪ ಮಾಡುವಾಗ ಕೇವಲ ನನ್ನ ಕುಟುಂಬ, ನನ್ನ ಬಂಧುಬಳಗ, ನನ್ನ ಜಾತಿ, ನನ್ನ ಮತ, ನನ್ನ ಊರಿಗೆ ಒಳ್ಳೆಯದಾಗಲೀಎಂದು ಪ್ರಾರ್ಥಿಸಲಿಲ್ಲ. ಬದಲಿಗೆ " ಸರ್ವೇಪಿ" ಅಂದರೆ

"ಶನ್ನೋ ಅಸ್ತು ದ್ವಿಪದೇ ಶಂ ಚತುಷ್ಪದೇ" ಎಂದೂ ಹೇಳಿದೆವು. ಎರಡು ಕಾಲಿನ ಮನುಷ್ಯರಿಗಷ್ಟೇ ಅಲ್ಲ, ನಾಲ್ಕು ಕಾಲಿನ ಪ್ರಾಣಿಸಂಕುಲಕ್ಕೂ, ಪಶು-ಪಕ್ಷಿಗಳಿಗೂ, ಕ್ರಿಮಿಕೀಟ ಗಳಿಗೂ ,ಸಸ್ಯ ಸಂಕುಲಕ್ಕೂ ಒಳ್ಳೆಯದಾಗಲೆಂದು ನಿತ್ಯ ಪ್ರಾರ್ಥಿಸುವ ನಾವು ಅದಕ್ಕೆಅನುಗುಣವಾಗಿ ಪ್ರಕೃತಿಯ ದುರುಪಯೋಗ ವಾಗದಂತೆ ಜೀವನ ನಡೆಸುತ್ತಿದ್ದೆವು.

ವಸುಧೈವ ಕುಟುಂಬಕಮ್- ಅಂದರೆ ಇಡೀ ವಿಶ್ವವೇ ಒಂದು ಕುಟುಂಬವೆನ್ನುವ ನಾವು ಉಳಿದ ದೇಶಗಳಿಗೆ ಆದರ್ಶವಾಗಿ ಜೀವನನಡೆಸುತ್ತ ಭಾರತವು "ವಿಶ್ವಗುರು" ಎಂಬ ಮಾನ್ಯತೆಗೆ ಕಾರಣರಾಗಿದ್ದೆವು. ವಿಶ್ವ ಮಂಗಲದ ಚಿಂತನೆ ನಡೆಸುವಾಗ ಈ ನಮ್ಮಚಿಂತನೆಗಳು ನಮಗೆ ದಾರಿ ದೀಪವಾಗಬೇಕು.

ಆದರೆ ಕಾಲ ಕಳೆದಂತೆ ಪಶ್ಚಿಮದತ್ತ ವಾಲುತ್ತಾ ಬಂದೆವು.ನಮ್ಮ ಚಿಂತನೆಗೆ ವಿರುದ್ಧವಾಗಿ ಬದುಕುತ್ತಾ ಬಂದೆವು.ಭೋಗ ಜೀವನದದಾಸರಾದೆವು. " ಆತ್ಮವತ್ ಸರ್ವ ಭೂತೇಶು" ಎಂಬ ಮಾತನ್ನು ಮರೆತು ದುರ್ಬಲರನ್ನು ಶೋಷಣೆ ಮಾಡಿದೆವು. ಬೇಕು-ಬೇಕೆಂಬದುರಾಸೆಯಿಂದ ಪ್ರಕೃತಿಯಮೇಲೆ ದೌರ್ಜನ್ಯ ನಡೆಸಿದೆವು.ನಮ್ಮ ಭೋಗದ ಜೀವನಕ್ಕೆ ಸಿಲುಕಿ ಕಾಡುಗಳು ನಾಷವಾಯ್ತು. ನಮ್ಮಪೂರ್ವಜರು ಕಟ್ಟಿದ ಕೆರೆಕಟ್ಟೆಗಳನ್ನು ಒಡೆದು ಕಟ್ಟಡ ನಿಮಿಸಿದೆವು. ಪ್ರಕೃತಿ ಮುನಿದು ಮಳೆ ಬೆಳೆ ಇಲ್ಲ ದಂತಾಯ್ತು. ಆಗಲೂ ನಾವುಎಚ್ಚೆತ್ತುಕೊಳ್ಳದೆ ಭೂಮಿಯನ್ನೇ ಸೀಳಿ ನೀರು ತಂದೆವು.ಹತ್ತಾರು ವರ್ಷಗಳು ಭೂತಾಯಿಯ ಅಂತರ್ಜಲ ಬಸಿದು ಬರಿದಾದಯ್ತು. ಭೂಕಂಪಗಳಿಗೆ, ಪ್ರಕೃತಿ ವಿಕೋಪಕ್ಕೆ ತುತ್ತಾದೆವು. ಆದರೂ ನಾವು ಬದಲಗಲಿಲ್ಲ.

ಅಮೃತದಂತಹ ಹಾಲನ್ನು ಕರೆಯುತ್ತಿದ್ದ ನಾಡತಳಿ ಹಸುಗಳ ಸಂಖ್ಯೆ ನಮ್ಮ ದುರಾಸೆಗೆ ಬಲಿಯಾಯ್ತು. ಗೋಮಾತೆಯೆಂಬಶ್ರದ್ಧೆಯಿಂದ ಪೂಜಿಸುತ್ತಿದ್ದ ನಾವೇ ಗೋವುಗಳನ್ನು ಕಟುಕರ ಪಾಲು ಮಾಡಿದೆವು. ಅಧಿಕ ಹಾಲಿನ ಇಳುವರಿಗಾಗಿ ನಾಡಹಸುಗಳನ್ನುವಿದೇಶಿ ತಳಿಗಳೊಡನೆ ಸಂಕರ ಗೊಳಿಸಿದೆವು.ಪರಿಣಾಮವಾಗಿ ಹಾಲಿನ ಬಣ್ಣದ ದ್ರವವನ್ನೇ ಹಾಲೆಂದು ಕರೆದು ನಮ್ಮ ಮಕ್ಕಳನ್ನುನಿಜವಾದ ಹಾಲಿನಿಂದ ವಂಚಿಸಿದೆವು.

ರೈತನೊಬ್ಬ ನಾಡಹಸುವಿನಿಂದ ಹಾಲು, ಮೊಸರು , ಬೆಣ್ಣೆ, ತುಪ್ಪ ಸವಿಯುವುದರಜೊತೆಗೆ ಎತ್ತುಗಳಿಂದ ಭೂಮಿ ಉತ್ತು, ಸರಕುಸಾಗಿಸಲು ಗಾಡಿಗೆ ಕಟ್ಟಿ,ಅವುಗಳ ಸಗಣಿಯನ್ನು ಕೃಷಿಗೆ ಗೊಬ್ಬರವಾಗಿ ಬಳಸಿ, ಅವುಗಳ ಗಂಜಲವನ್ನೇ ಔಷಧಿಯಾಗಿ ಬಳಸುತ್ತಾಆನಂದವಾಗಿ ಬದುಕು ಸಾಗಿಸುತ್ತಿದ್ದ. ಅವರಲ್ಲಿದ್ದ ಗೋವಿನ ಸಂಖ್ಯೆಯೇ ನಮ್ಮ ಪೂರ್ವಿಕರ ಸಂಪತ್ತಿಗೆ ಮಾನದಂಡವಾಗಿತ್ತು. ನಮ್ಮರೈತರು ಉಪಯೀಗಿಸುತ್ತಿದ್ದ ಗೋವಿನ ಸತ್ವಪೂರ್ಣ ಸಗಣಿ ಗೊಬ್ಬರದ ಪರಿಣಾಮವಾಗಿ ಆಹಾರಧಾನ್ಯಗಳುಸತ್ವಪೂರ್ಣವಾಗಿರುತ್ತಿತ್ತು.

ಆದರೆ ಗೋಸಂಪತ್ತು ನಶಿಸುತ್ತಾ ಬಂದಂತೆ ರೈತನು ಕೃಷಿಗಾಗಿ ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾಬಂದ. ಪರಿಣಾಮವಾಗಿ ಮಣ್ಣು ವಿಷಯುಕ್ತ ವಾಯ್ತು. ಬೆಳೆಯ ಕೀಟಗಳನ್ನು ನಾಶಪಡಿಸಲು ಕೀಟನಾಷಕಗಳನ್ನು ಸಿಂಪಡಿಸಲುಪ್ರಾರಂಭಿಸಿದ.ಅದರ ಪರಿಣಾಮವಾಗಿ ಆಹಾರಧಾನ್ಯಗಳೂ ವಿಷಯುಕ್ತವಾಯ್ತು.

ಈಗ ನಾವೆಲ್ಲಾ ಅದರ ಫಲವನ್ನು ನಿತ್ಯವೂ ಅನುಭವಿಸುತ್ತಿದ್ದೇವೆ. ವಿಷಮುಕ್ತ ಆಹಾರ ಧಾನ್ಯಗಳು ದುರ್ಲಭವಾಗಿದೆ. ಇದೇಆಹಾರವನ್ನು ಸೇವಿಸುತ್ತಾ ಹಿಂದೆಂದೂ ಕಾಣದಂತಹ ರೋಗಗಳು ಕಾಡುತ್ತಿವೆ. ಸಕ್ಕರೆ ಖಾಯಿಲೆ, ರಕ್ತದೊತ್ತಡ,ಕ್ಯಾನ್ಸರ್,ಕಿಡ್ನಿವೈಫಲ್ಯ ಮುಂತಾದ ರೋಗಗಳು ನಿತ್ಯದ ಮಾತಾಗಿದೆ. ಇವೆಲ್ಲಾ ಒಂದು ಮುಖವಾದರೆ ಮತ್ತೊಂದು ಇನ್ನೂ ಭಯಾನಕ ಮುಖವುನಿತ್ಯವೂ ನಮ್ಮ ನಿದ್ರೆಗೆಡಿಸುತ್ತಿದೆ.

ಕುಟುಂಬ ಒಂದರಲ್ಲಿ ಕಾಣುತ್ತಿದ್ದ ಪ್ರೀತಿ, ವಾತ್ಸಲ್ಯ,ವಿಶ್ವಾಸ, ಮಮಕಾರ,ಹಿರಿಯರ ಬಗ್ಗೆ ಗೌರವ-ಇಂತಹ ಸದ್ಗುಣಗಳುಮರೆಯಾಗುತ್ತಿವೆ.ಕೌಟುಂಬಿಕ ಸಾಮರಸ್ಯ ಏರು ಪೇರಾಗುತ್ತಿರುವ ಉಧಾಹರಣೆಗಳನ್ನು ನೋಡುತ್ತಿದ್ದೇವೆ.ನಮ್ಮ ಆಹಾರಪದ್ದತಿ,ಉಡುಪು, ನಮ್ಮ ಜೀವನ ಶೈಲಿ ಎಲ್ಲವೂ ಬದಲಾಗುತ್ತಿದೆ. ಪರಿಣಾಮವಾಗಿ ಸಂಸಾರದ ನೆಮ್ಮದಿ ಹಾಳಾಗುತ್ತಿದೆ. ಲಜ್ಜಾರಹಿತ ಜೀವನಕ್ಕೆ ಒಗ್ಗಿಕೊಳ್ಳುವ ಪರಿಸ್ಥಿತಿ ಎದಿರಾಗುತ್ತಿದೆ. ಹಡೆದ ಮಕ್ಕಳು ತಂದೆ ತಾಯಿಯರ ಲಾಲನೆ ಪೋಷಣೆ ಕಾಣದೆಅನಾಥರಾಗಿ ದಾದಿಯರೊಡನೆ ಬೆಳೆಯುತ್ತಿರುವ ಉಧಾಹರಣೆಗಳು ಹೆಚ್ಚುತ್ತಿವೆ, ಅದೇ ಸಮಯದಲ್ಲಿ ನೋಡುವವರಿಲ್ಲದೆ ವೃದ್ಧತಂದೆತಾಯಿಯರು ವೃದ್ಧಾಶ್ರಮಗಳನ್ನು ಸೇರುವ ಪರಿಸ್ಥಿತಿ ಬಂದೊದಗಿದೆ.

ಕೇವಲ ಮೂರು ನಾಲ್ಕು ದಶಕಗಳ ಹಿಂದೆ ನಮ್ಮ ಕುಟುಂಬಗಳು ಹೇಗಿದ್ದವು! ಎಂಬುದನ್ನು ಒಮ್ಮೆ ನೆನಪು ಮಾಡಿಕೊಂಡರೆ ನಮ್ಮಹೃದಯ ಒಡೆದು ಹೋಗದಿರದು. ಅಪ್ಪ-ಅಮ್ಮನ ಜೊತೆಗೆ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ದಪ್ಪ-ದೊಡ್ದಮ್ಮ ,ಅಜ್ಜ-ಅಜ್ಜಿ, ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳು. ಇಂತಹಾ ಅವಿಭಕ್ತ ಕುಟುಂಬಗಳಲ್ಲಿ ಇಪ್ಪತ್ತು-ಮೂವತ್ತು ಜನರು ಒಂದೇ ಮನೆಯಲ್ಲಿ ಇರುತ್ತಿದ್ದರು. ಕುಟುಂಬಕ್ಕೆ ಭದ್ರತೆ ಇತ್ತು. ಹಿರಿಯರಾಗಿದ್ದವರು ಮನೆಯ ಯಾವುದೇ ಮಗುವಿನ ಲಾಲನೆ ಪೋಷಣೆ ಮಾಡುತ್ತಿದ್ದರು.ಎಲ್ಲರೂಮನೆಗೆಲಸವನ್ನು ಹಂಚಿಕೊಂಡು ಮಾಡುತ್ತಿದ್ದುದರಿಂದ ಎಲ್ಲವೂ ಸುಗಮವಾಗಿ ಸಂಸಾರ ನಡೆಯುತ್ತಿತ್ತು. ಮನೆಯಲ್ಲಿ ಬರುತ್ತಿದ್ದ ಓರೆಕೋರೆ ಮಾತುಗಳನ್ನು ಕೇಳಿದ ಮನೆಯ ಯಜಮಾನ ತಪ್ಪಿತಸ್ತರಿಗೆ ತಿದ್ದಿ ಬುದ್ಧಿ ಹೇಳುತ್ತಿದ್ದ. ಹಬ್ಬ-ಹರಿದಿನಗಳೆಂದರೆ ಅಂದುಮನೆಯು ಸ್ವರ್ಗಸದೃಶವಾಗಿರುತ್ತಿತ್ತು. ಬದುಕಿನಲ್ಲಿ ಸದಾ ಉತ್ಸಾಹವಿರುತ್ತಿತ್ತು. ಒಂದು ಮನೆಯಲ್ಲಿ ಹತ್ತಾರು ದನಕರುಗಳಿರುತ್ತಿದ್ದು, ಹಾಲು ಮೊಸರು, ಬೆಣ್ಣೆ-ತುಪ್ಪ ಸಂಮೃದ್ಧ ವಾಗಿರುತ್ತಿತ್ತು. ಬಡತನ ವಿದ್ದರೂ ನೆಮ್ಮದಿಗೆ ಕೊರತೆ ಇರಲಿಲ್ಲ.

ಈಗ ಎಲ್ಲವೂ ಬದಲಾಗಿದೆ. ಆದರ್ಶ ಕುಟುಂಬದ ಹೆಸರಿನಲ್ಲಿ ಪತಿ-ಪತ್ನಿ ಮತ್ತು ಒಂದು ಮಗುವಿರುವ ಮನೆಗಳು ಹೆಚ್ಚುತ್ತಿವೆ. ಆಹಾರ-ವಿಹಾರಕ್ಕೆ ತೊಂದರೆ ಇಲ್ಲದಿದ್ದರೂ ಬದುಕಿಗೆ ಭದ್ರತೆ ಇಲ್ಲವಾಗಿದೆ.ತಂದೆ ತಾಯಿ ಇಬ್ಬರೂ ನೌಕರಿಗೆ ಹೋದರಂತೂ ಮಗುಅನಾಥ ವಾದಂತೆಯೇ. ಕೈತುಂಬ ಹಣವಿದ್ದರೂ ಬಹುಪಾಲು ಜನರಿಗೆ ನೆಮ್ಮದಿ ಇಲ್ಲ, ಆರೋಗ್ಯವಿಲ್ಲ. ಹೌದು, ಇವೆಲ್ಲಾ ನಾವೇಸ್ವತ: ಮಡಿಕೊಮ್ಡಿರುವ ತಪ್ಪು. ತಪ್ಪುಗಳ ಸರಮಾಲೆಯಲ್ಲಿ ಸಿಕ್ಕಿ ಹಾಕಿಕೊಮ್ದು ಬಿಟ್ಟಿದ್ದೇವೆ.

ಎಲ್ಲಕ್ಕೂ ಒಂದೇ ಪರಿಹಾರ: ಮತ್ತೊಮ್ಮೆ ನಮ್ಮ ಪೂರ್ವಜರ ಜೀವನಕ್ರಮವನ್ನು ನೆನಪು ಮಾಡಿಕೊಳ್ಳುವುದು ಮತ್ತು ಅದರಂತೆಬದುಕುವುದು. ನಮ್ಮ ಗ್ರಾಮ ಜೀವನವನ್ನು ಪುನರುತ್ಥಾನಗೊಳಿಸುವುದು. ನಮ್ಮ ನೆಲದ ವಿಷವನ್ನು ತೊಳೆಯಬೇಕಿದೆ. ಹೇಗೆತೊಳೆಯಬೇಕು? ನಾಲ್ಕೈದು ದಶಕಗಳಿಂದ ನಾವು ಪ್ರಕೃತಿಗೆ ಮಾಡಿರುವ ಅತ್ಯಾಚಾರದಿಂದ ಪ್ರಕೃತಿಯು ಮತ್ತೊಮ್ಮೆಹಸನ್ಮುಖಿಯಾಗಬೇಕಾದರೆ ದೀರ್ಘ ಕಾಲದ ಚಿಕಿತ್ಸೆಯೇ ಅನಿವಾರ್ಯ. ಕೆಲವು ವರ್ಷಗಳಾದರೂ ನಾವು ಸರಳ ಜೀವನ ಕ್ರಮವನ್ನುಅನುಸರಿಸಲೇ ಬೇಕು. ಪ್ರಕೃತಿಯನ್ನು ಅದರ ಪಾಡಿಗೆ ಬಿಟ್ಟು ಬಿಡಬೇಕು.ಆಗ ನಿಧಾನವಾಗಿಯಾದರೂ ಪರಿಹಾರ ಸಿಕ್ಕೀತು. ನಮ್ಮಸಾಂಸ್ಕೃತಿಕ ಬದುಕನ್ನು ನೆನಪು ಮಾಡಿಕೊಂಡು ಅದರಂತೆ ಬದುಕಲು ಸಂಕಲ್ಪ ತೊಡಬೇಕು. ಇಷ್ಟಾದರೂ ನಮ್ಮ ಸಂಸ್ಕೃತಿಯನ್ನುಮೆಚ್ಚಿ ನಮ್ಮ ಕಡೆ ಮುಖಮಾಡಿರುವ ವಿದೇಶೀಯರಿಗೆ ನಮ್ಮ ಮೆಲೆ ಭರವಸೆ ಹೆಚ್ಚಬೇಕು, ಆಗ ಮಾತ್ರ ನಾವು ವಿಶ್ವ ಮಂಗಲದಕನಸು ಕಾಣಬಹುದು.

Sunday, September 26, 2010

ನಿಮ್ಮ ಸಲಹೆ ನಮಗೆ ಬೇಕು.


ಸ್ನೇಹಿತರೇ,
ಬ್ಲಾಗ್ ಓದುವವರಿಗೆ ಸುಲಭವಾಗಿ ಮಾಹಿತಿ ದೊರೆಯುವಂತಿರಬೇಕೆಂಬ ಉದ್ಧೇಶದಿಂದ ಬ್ಲಾಗ್ ಸುಧಾರಿಸುವ ಪ್ರಯತ್ನದಲ್ಲಿ ಬ್ಲಾಗ್ರೂಪ ಸ್ವಲ್ಪ ಬದಲಾಗಿದೆ ,ಸಾಧ್ಯವಾದಷ್ಟೂ ವೇದದ ಬಗೆಗೆ ಹೆಚ್ಚು ಮಾಹಿತಿ ಕೊಡುವ ಪ್ರಯತ್ನವು ಮುಂದುವರೆಯುವುದು. ವೇದಸುಧೆಯ ಅಭಿಮಾನಿಗಳು ವೇದಸುಧೆಯನ್ನು ಓದುತ್ತಿರುವುದು ವೇದಸುಧೆಯನ್ನು ಭೇಟಿಮಾಡುವವರ ಸಂಖ್ಯೆಯಿಂದ ಸ್ವಲ್ಪಮಟ್ಟಿಗೆ ತಿಳಿಯುತ್ತಿದೆಯಾದರೂ ವೇದಸುಧೆಗೆ ಸಲಹೆಗಳು ಬರುತ್ತಿಲ್ಲ. ಆದ್ದರಿಂದ ನಮಗೆ ಲಭ್ಯವಿರುವ ಮಾಹಿತಿಗಳನ್ನು ವೇದಸುಧೆಯಅಭಿಮಾನಿಗಳಿಗೆ ನೀಡುತ್ತಾ ಮುಂದುವರೆಯುತ್ತೇವಾದರೂ ನಿಮ್ಮ ಸಲಹೆ ನಮಗೆ ಬೇಕು.

-ಹರಿಹರಪುರ ಶ್ರೀಧರ್

Saturday, September 25, 2010

ಯೋಚಿಸಲೊ೦ದಿಷ್ಟು-೧೦

. “ನಾನೇ ಶುಧ್ಧಮತ್ತೆಲ್ಲರೂ ಅಶುಧ್ಧರುಎ೦ಬ ನಮ್ಮ ತಿಳುವಳಿಕೆಯೇ ಮೃಗೀಯ ಧರ್ಮ!


. ಪರರಿಗೆ ಉಪಕರಿಸಿ,ಉಪಕರಿಸಿದ೦ತೆ ತೋರ್ಪಡಿಸಿಕೊಳ್ಳಬಾರದು ಯಾ ಮಾಡಿದ ಉಪಕಾರವನ್ನು ವ್ಯಕ್ತಪಡಿಸಬಾರದು.

. ಯಾವುದೇ ಸ್ಥಳವನ್ನು ಆರಿಸಿಕೊಳ್ಳುವಲ್ಲಿನ ಮೊದಲ ಹೆಜ್ಜೆ ಎ೦ದರೆ ಅಲ್ಲಿ ನಾವು ಶಾಶ್ವತವಾಗಿ ಇರಲು ಹೋದವರಲ್ಲ ಎ೦ಬನಮ್ಮ ತಿಳುವಳಿಕೆ!

. ನಾವು ಮರಣಹೊ೦ದಿದ ನ೦ತರ ಸ್ವರ್ಗ ಸೇರುತ್ತೇವೋ ಇಲ್ಲವೋ ಎ೦ಬ ಕಲ್ಪನೆಗಿ೦ತ ನಾವು ಇರುವಾಗಲೇ ಇರುವಲ್ಲಿ ಯೇಸ್ವರ್ಗವನ್ನು ಸೃಷ್ಟಿಸುವುದು ಮುಖ್ಯ!

.ನಮಗೇನನ್ನೂ ಮಾಡದಿದ್ದವರೊ೦ದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎ೦ಬುವುದರಲ್ಲಿಯೇ ನಮ್ಮ ನಿಜವಾದ ಗುಣ/ ನಡತೆಯು ಅರಿಯಲ್ಪಡುತ್ತದೆ!

. ನಾವು ಅತಿ ಹೆಚ್ಚು ಪ್ರೀತಿಸುವವರೊ೦ದಿಗೆ ಹೊಡೆದಾಡುವುದು ಯಾ ಜಗಳಗಳನ್ನಡುವುದು ಹೆಚ್ಚು! ಆದರೆ ನಾವು ಕಣ್ಣೀರಿಡುವಸಮಯದಲ್ಲಿ, ನಮ್ಮ ಕಣ್ಣೀರನ್ನು ಒರೆಸಲು ಅವರು ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾರೆ!

. ನಗುವೆ೦ಬುದು ನಮ್ಮ ಮುಖದಲ್ಲಿನ ಭಾವನೆಗಳನ್ನು ವ್ಯಕ್ತಪಡಿಸುವ ಒ೦ದು ಉತ್ತಮ ಮಾಧ್ಯಮ!

.ನಾವು ಒ೦ದು ಸು೦ದರ ಹಾದಿಯನ್ನು ಕ೦ಡಾಗ ಅದು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎ೦ಬುದನ್ನು ಪ್ರಶ್ನಿಸಿಕೊಳ್ಳೋಣ.ಅದೇ ನಾವೊ೦ದು ಸು೦ದರ ಗುರಿಯನ್ನು ಕ೦ಡುಕೊ೦ಡರೆ, ಆಗುರಿಯನ್ನು ಸಾಧಿಸಲು ಕ್ರಮಿಸಬೇಕಾದ ಯಾವಹಾದಿಯನ್ನಾದರೂ, ( ಹಾದಿಗಳಲ್ಲಿ ಉಸಿರುಗಟ್ಟಿಸುವ ವಾತಾವರಣವಿರಬಹುದಾದರೂ ಹಾಗೂ ಆತ್ಮವ೦ಚನೆಯ ದಾರಿಯೊ೦ದನ್ನು ಬಿಟ್ಟು) ಆಯ್ದುಕೊಳ್ಳಬೇಕು.

. ಬೇರೆಲ್ಲಾ ಸುಖಗಳಿಗಾಗಿ ನಾವು ಬೇರೆಯವರನ್ನು ಅವಲ೦ಬಿಸಬೇಕಾಗಿದ್ದರೂ ನಮ್ಮ ಓದಿನ ಸುಖಕ್ಕೆ ಯಾರ ಹ೦ಗಿನಅವಶ್ಯಕತೆಯೂ ಇಲ್ಲ!

೧೦. ಓದು ಏಕಾ೦ತದಲ್ಲಿ ಸ೦ತೋಷ ನೀಡಿದರೆ,ಸ೦ಭಾಷಣೆಯಲ್ಲಿ ಭೂಷಣವಾಗುತ್ತದೆ!ಕಾರ್ಯಗಳಲ್ಲಿ ದಕ್ಷತೆಯನ್ನು ಉ೦ಟುಮಾಡುತ್ತದೆ.

೧೧. ಚಿ೦ತನೆಯಿ೦ದ ಬುಧ್ಧಿವ೦ತರಾಗಬಹುದಾದರೂ ತಿಳುವಳಿಕೆ ಬರುವುದು ಓದಿನಿ೦ದಲೇ!

೧೨. ಎಲ್ಲ ಕರ್ತವ್ಯಗಳಿಗಿ೦ತನಾವು ಸೌಖ್ಯವಾಗಿದ್ದೇವೆಎ೦ದುಕೊಳ್ಳುವ ಕರ್ತವ್ಯವನ್ನೇ ನಾವು ಕಡೆಗಣಿಸುತ್ತೇವೆ!

೧೩. ಬಡವರ ಕುರಿತಾದ ಶ್ರೀಮ೦ತರ ಕ್ಷಣಿಕ ಕರುಣೆ ಯಾವಾಗಲೂ ಕಹಿಯೇ ಆಗಿರುತ್ತದೆ!

೧೪.ಅ೦ದಿನ ಕೆಲಸ ಯಾ ಕರ್ತವ್ಯವನ್ನು ಅ೦ದೇ ಮಾಡಿ,ಅದರ ಬಗ್ಗೆ ಹೆಚ್ಚು ಚಿ೦ತಿಸದಿರುವುದೇ ನೆಮ್ಮದಿಯನ್ನು ಕ೦ಡು ಕೊಳ್ಳುವಹಾದಿ.

೧೫. ಒಳ್ಳೆಯ ಅಥವಾ ಕೆಟ್ಟದ ಯಾವುದೇ ಚಿ೦ತನೆಗಳನ್ನು ಅಥವಾಅನುಭವಿಗಳನ್ನು ನಿಷ್ಪಕ್ಷಪಾತವಾಗಿ ವಿಮರ್ಶಿಸಿ, ಪ್ರಸಾರಿಸಬೇಕು.

Friday, September 24, 2010

ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ-೧


ನಮ್ಮ ಭಾರತೀಯ ಪರಂಪರೆಯಲ್ಲಿ ವೇದಗಳಿಗೆ ಪ್ರಥಮ ಸ್ಥಾನ.ಆದರೆ ನಮ್ಮ ಆಚರಣೆಗಳು ವೇದಕ್ಕೆ ಅನುಗುಣವಾಗಿವೆಯೇ? ಆತ್ಮವಲೋಕನ ಮಾಡಿಕೊಳ್ಳಲು ಮುಂದಿನ ಉಪನ್ಯಾಸಗಳನ್ನು ಕೇಳಬೇಕು. ಶ್ರೀ ಸುಧಾಕರ ಶರ್ಮರು ತಾವು ನೀಡಲಿರುವ ಉಪನ್ಯಾಸಗಳಿಗೆ ಪೀಠಿಕೆರೂಪದಲ್ಲಿ ಇಲ್ಲಿ ಮಾತನಾಡಿದ್ದಾರೆ.

Thursday, September 23, 2010

ಪುಂಸವನ - ಆಯುರ್ವೇದದ ವಿಶ್ಲೇಷಣೆ

ಪುಂಸವನ ಸಂಸ್ಕಾರದ ಬಗ್ಗೆ ನಡೆದಿರುವ ವಿಚಾರ ವಿನಿಮಯಕ್ಕೆ ಪೂರಕವಾಗಿ ಆಯುರ್ವೇದ ಇದರ ಬಗ್ಗೆ ಏನು ಹೇಳಿದೆಎಂಬುದನ್ನು ಮುಂದೆ ಮಂಡಿಸಿದೆ.

ಪುಂಸವನಂ ಇತಿ ಪುಂಸತ್ವಕಾರಕಂ ಕರ್ಮ || (ಚರಕ ಸಂಹಿತೆ: ಶಾರೀರ ಸ್ಥಾನ 8/19)

ಪುಂಸತ್ವವನ್ನು ಉಂಟು ಮಾಡುವ ಕರ್ಮಕ್ಕೆ ಪುಂಸವನ ಎಂದು ಹೆಸರು. ಶಬ್ದಕಲ್ಪದ್ರುಮ ಎಂಬ ಸಂಸ್ಕೃತ ಶಬ್ದಕೋಶದಲ್ಲಿಪುಂಸವನ' ಎಂಬುದನ್ನು ಹೀಗೆ ವಿಶ್ಲೇಷಿಸಲಾಗಿದೆ:
"ಪುಂಮಾಂಸಮಿವ ಸೂತೆ ಬಲಪ್ರದಾನೇನ ಪುರುಷವತ್ ಜನಯಜತ್ಯನ ಇತಿ'
ವಿಮರ್ಶೆ: ಬಲ ಎಂಬುದು ಪುರುಷನ ಸ್ವಾಭಾವಿಕ ಗುಣಲಕ್ಷಣ (inherent quality). ಪುಂಸತ್ವ ಎಂದರೆ ಅದು ಗಂಡುತನ (ನೇರಅರ್ಥ).
The procedure to be adopted for achieving progeny of desired sex is known as 'pumsavana karma'. The classics have described its appropriate period alongwith the methods.

If the methods prescribed in vedas for achieving male or female progeny are used before the conspicuousness (vyaktibhava) of organs the change of sex is possible. If the 'pumsavana karma' is done keeping in mind the living place ('desa') and specific period ('kala') the result is definite. Otherwise it is just reverse (if due consideration to 'desa' and 'kala' is not given then the sex may change), 'pumsavana karma' should be done after conception but before conspicuousness of organs or upto two months.

Susruta has advocated that it should be done just after achievement of conception (labdhagarbha). Dalhana has explained that this process is done with three objectives: (1) before conception use of inhalation of drugs etc., followed by coitus is for achievement of conception. (2) immediately following conception is for its proper implantation and (3) before three months for change of sex for having male progeny.

Vagbhata I corroborating the period given by Charaka says further that it should be done only during pusya nakshatra. Citing the opinion of others, he says that some advise the duration of 'pumsavanakarma' for twelve days, others during even days of these twelve days, while some advise its daily use. Indu has given four opinions: (1) only on first day (2) on even days (3) daily (4) every even day of twelve days period. Further he says that success depends upon the favour of luck.

Vagbhata II agreeing with the period i.e., before conspicuousness of body parts says that potent 'pumsavanakarma' can alter the luck. Arunadatta has explained that as a potent 'pumsavana karma' can alter the luck, similarly potent luck can make the 'karma' unsuccessful, thus the success of 'pumsavanakarma' depends upon relative strength of luck.

Comments: An ovum is fertilized by the sperm sex chromosome, naturally after fertilization the chances of reversal of sex by any procedure does not seem to be possible. The time limit of twelve days given by Vagbhata I probably refers to 'rtukala'. Dalhana has mentioned the period of use of drugs before coitus in unequivocal words. The description before conspicuousness of body parts can be considered as before conspicuousness of 'garbha' i.e., before fertilization of ovum by sperms. It is hypothetically possible that specific procedure done before fertilization may produce some such changes in female body specially in ovum, that it attracts or permits its penetration by specific sex chromosome bearing sperms only.

Methods of 'Pumsavana Karma'):

"ಲಬ್ಧ ಗರ್ಭಾಯಾಶ್ಚೈತೇಷು ಅಹ:ಸು ಲಕ್ಷ್ಮಣಾವಟ ಶೃಂಗಸಹದೇವಾ ವಿಶ್ವದೇವಾನಾಂ ಅನ್ಯತಮಾಂ ಕ್ಷೀರೇಣಾಭಿಷುತ್ಯ: ತ್ರೀಂಶ್ಚತುರೋ ವಾ ಬಂದೂನ್ ದದ್ಯಾತ್ ದಕ್ಷಿಣೆ ನಾಸಾಪುಟೆ ಪುತ್ರಕಾಮಾಯೈ (ವಾಮೆ ದುಹಿತೃಕಾಮಾಯೈ) ಚತಾನ್ನಷ್ಠೀವೇತ್ || [ಸುಶ್ರುತ ಸಂಹಿತೆ - ಶಾರೀರ}
(ಕೆಳಗೆ ಕೊಟ್ಟಿರುವ ಔಷಧಿಗಳನ್ನು ಹಾಲಿನೊಂದಿಗೆ ಅರೆದು, 3-4 ಬಿಂದುಗಳನ್ನು ಬಲಮೂಗಿಗೆ (ಗಂಡು ಮಗು ಬಯಸುವವರು) ಅಥವಾ ಎಡಮೂಗಿಗೆ (ಹೆಣ್ಣು ಮಗು ಬಯಸುವವರು) ಹಾಕಿಕೊಳ್ಳಬೇಕು. ಔಷಧವನ್ನು ಉಗುಳಬಾರದು)

1) Two intact healthy leaf-buds ('sunga') plucked from two eastern or northern branches of a banyan tree grown in a cowshed, alongwith two perfect (possessing good 'rasa', 'virya' etc.,)seeds of 'dhanya masa' (a kind of kindney bean)a and 'gaura sarsapa (hellow mustard) should be taken with curd during pusya nakshatra.
2) Similarly, the paste of 'jivaka', 'rsabhaka, 'apamarga' and 'sahacara' etc., (plants grown in a cowshed) collectively, individually or few of them should be taken (during pusya nakshatra) after treating (cooking or mixing) these with milk.
3)'Kudyakita'(an insect making abode with wet soil to seal other small insects and laying its eggs) and fish mixed with one 'anjali'(handful) of water should be taken during 'pusya nakshatra'.
4) An anupramana (very small) red hot man-shaped structure made with gold, silver or iron, should be dipped in handful of curd, milk or water and total quantity should be taken during pushya nakshatra.
5) The woman should inhale the steam of 'sali pisti' (dough of rice or pestled rice) being cooked during pusya nakshatra. The same dough should be squeezed and the juice collected in swab. The pregnant woman keeping the head on a doorsill should instill herself few drops from this swab in her right nostril.
6)Other measures suggested by brahmanas, senior persons and ladies should be followed.
7) The drug 'laksmana', 'vatasunga (leafbuds), 'sahadeva' 'viswadeva' etc., should be pestled with cow milk, and 3-4 drops of expressed juice should be instilled in right nostril by the woman desirous of a son; she should not spit.
8) Observing flowers and fruits on the 'laksamana' plant during 'sarada rtu (early winter season), it should be uprooted during pusyayoga of saturday's evening with enchantation of 'mantras'. On some other day, after sunset during 'hastamula' or pusya nakshatra, the 'khadirakilaka' (roots of khadira) should be dug enchanting 'mantra' in 1/4 quantity of 'lakshamana'. Both these should be pestled with milk of cow having calf of similar colour, and a few drops of it should be instilled in right nostril.
9) The woman desirous of a son or daughter should instil herself in right or left nostril respectively, the juice expressed from pestled root of 'swetabrahati' uprooted during pusya nakshatra. Similarly, leaves of 'utpala' and 'kumuda', root of
'lakshamana' and eight 'vatasunga' should be used.
10)The woman wearing while garland and garments should take pestled root of 'lakshmana' uprooted during pusya nakshatra, in the quantity identical to fruit of 'udumbara', with cow milk for getting a male child. Similarly, 'gauradanda apamarga', 'jiwaka', 'rsabhaka', 'sankhapuspi', 'adhyanda' or 'kapikacchu', 'sahacara', 'nagnajiwa', agnijihwa' and eight leaf-buds of 'vata' should be used individually or two or three together.
11)The root of 'lakshmana' pestled with cow milk should be taken orally or through nostril for achievement of son, similarly leaf-buds of 'vata' should also be used.
12)The drugs of 'jiwaniya' group should be used externally or orally.
13)One leaf of 'palasa' should be taken orally with milk.
14)The woman using root of 'sukarasimbi' or pulp of 'dadhiphala' (kapittha fruit) or seeds of 'iswaralingi' pestled with milk never delivers a girl but always a boy.
15)Oral use of root of 'putramanjari' and 'visnukranta' and seeds of 'iswaralingi' for eight days during pregnancy never results in birth of a girl or always a son is born.
-----------------------------------------------------------------------------------

ನನ್ನ ಅನಿಸಿಕೆಗಳು: 1) ಮೂಲತ: ಸಂಸ್ಕಾರದ ಉದ್ದೇಶ ಬಲಯುತವಾದ ಮತ್ತು ಆರೋತ್ಯವಂತವಾದ ಸಂತಾನ (ಗಂಡುಅಥವಾ ಹೆಣ್ಣು)ವನ್ನು ಹೊಂದಲು.
2) ಆಯುರ್ವೇದದ ಪ್ರಕಾರ ನಿರ್ದಿಷ್ಟ ಸಂತಾನವನ್ನು (ಗಂಡು ಅಥವಾ ಹೆಣ್ಣು) ಪಡೆಯಲು ಸೂಕ್ತವಾದ ಔಷಧಿ ಮತ್ತು ಕ್ರಮಗಳಿವೆ.
3) ಬಹುಶ: ಕ್ರಮದ ಬಗ್ಗೆ ಪ್ರಯೋಗಗಳು ಅಥವಾ ನಿರ್ದಿಷ್ಟ ಪ್ರಮಾಣಗಳ ಅಲಭ್ಯತೆಯಿಂದ ಇದನ್ನು ಪ್ರಮಾಣೀಕರಿಸುವಅವಕಾಶಗಳು ಕಡಿಮೆ.
4) ನಾವು ಅದನ್ನು ವಿಧಿವತ್ತಾಗಿ ಪಾಲಿಸದೇ (ಈಗಿನ ಸನ್ನಿವೇಶದಲ್ಲಿ ಮೇಲೆ ವಿವರಿಸಿದಂತೆ ಔಷಧಿಗಳನ್ನು ಬೆಳೆದು ಬಳಸುವುದುಬಹು ಮಟ್ಟಿಗೆ ಅಸಾಧ್ಯವೇ!) ಅದು ಹಾಗಾಗಲು ಸಾಧ್ಯವಿಲ್ಲವೆಂದು ಅಭಿಪ್ರಾಯ ಪಡುವುದು ಸರಿಯಾಗಲಾರದೆನಿಸುತ್ತದೆ.
5) ಮೊದಲೇ ನಾನು ಹೇಳಿದಂತೆ, ಕೊನೆಯದಾಗಿ ಮತ್ತು ಎಲ್ಲಕ್ಕಿಂತ ಪ್ರಾಮುಖ್ಯವಾಗಿ ನಮ್ಮ 'ಗ್ರಹಚಾರ' ರೇಖೆಗಳೂಸರಿಯಿರಬೇಕಷ್ಟೆ!

'
ವಿಷಯದ ಬಗ್ಗೆ ನಾನೂ ಸ್ವಲ್ಪ ಹೆಚ್ಚಿನ ಮಾಹಿತಿ ಹೊಂದಲು ಅವಕಾಶ ಮಾಡಿಕೊಟ್ಟ ಶ್ರೀ ವಿಶಾಲ್ ರವರಿಗೂ ಮತ್ತು ಚರ್ಚೆಯಲ್ಲಿಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು .

Wednesday, September 22, 2010

ಮೂಢ ಉವಾಚ -7

ಸೂತ್ರ
ಸರಸರನೆ ಮೇಲೇರಿ ಗಿರಕಿ ತಿರುಗಿ
ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ
ಬೀಳುವುದು ಗಾಳಿಪಟ ಬಂಧ ತಪ್ಪಿದರೆ
ಸೂತ್ರ ಹರಿದರೆ ಎಚ್ಚರವಿರು ಮೂಢ


ನಾನತ್ವ
ತಾನೇ ಸರಿ ತನ್ನದೇ ಸರಿ ಕಾಣಿರಿ
ಎಂಬ ಸರಿಗರ ಸಿರಿಗರ ಬಡಿದ ಪರಿ
ಏನು ಪೇಳ್ವುದೋ ತಿಪ್ಪೆಯ ಒಡೆಯ
ತಾನೆಂಬ ಶುನಕದ ಹಿರಿಮೆಗೆ ಮೂಢ


ಹೆದರಿಕೆ
ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ
ಹಿತವಿಲ್ಲದ ಕಹಿಪ್ರವರ ಜಗಕೆ ಬೇಕಿಲ್ಲ
ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ
ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ


ತೃಪ್ತಿ
ಉಣ್ಣಲುಡಲಿರಬೇಕು ನೆರಳಿರಬೇಕು
ಮನವರಿತು ಅನುಸರಿಪ ಮಡದಿ ಬೇಕು
ಬೆಳಕಾಗಿ ಬಾಳುವ ಮಕ್ಕಳಿರಬೇಕು
ಇರುವುದೇ ಸಾಕೆಂಬ ಮನ ಬೇಕು ಮೂಢ
*******
-ಕ.ವೆಂ.ನಾಗರಾಜ್

"ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ"

ನಮಗರಿವಿಲ್ಲದಂತೆ ನಾವೆಷ್ಟು ಭೀತರು! ಎಂದರೆ ನಾವು ತಲೆತಲಾಂತರದಿಂದ ಆಚರಿಸಿ ಕೊಂಡು ಬಂದಿರುವ ಆಚರಣೆಗಳಿಗೆ ಅರ್ಥ ಹುಡುಕಹೊರಟಾಗ ಬಹುಪಾಲು ಆಚರಣೆಗಳಿಗೆ ಅರ್ಥವಿಲ್ಲವೆಂಬ ಸತ್ಯದ ಅರಿವಾದರೂ ಅಂಧವಾಗಿ ಅನುಸರಿಸುತ್ತಿರುವ ಆಚರಣೆಗಳನ್ನು ಬಿಡಲು ನಮ್ಮ ಮನ ಒಪ್ಪುವುದಿಲ್ಲ.ಕಳೆದ ಒಂದೆರಡು ವರ್ಷಗಳಿಂದ ಶ್ರೀ ಸುಧಾಕರ ಶರ್ಮರೊಡನೆ ಚರ್ಚಿಸುವಾಗ ನಾನು ಅವರೊಡನೆ ಬಲವಾಗಿ ಮಂಡಿಸುತ್ತಿದ್ದ ವಿಚಾರ ಇಷ್ಟೆ" ಸಮಾಜಕ್ಕೆ ತೊಂದರೆಯಾಗದಂತೆ ನಾನು ಏನು ಮಾಡಿದರೆ ನಿಮಗೇನು? ನೀವೇಕೆ ಅದನ್ನು ವಿರೋಧಿಸುವುದು? "
ಶರ್ಮರು ನನ್ನ ಮಾತುಗಳಿಗೆ ನಗುನಗುತ್ತಲೇ ಉತ್ತರಿಸುತ್ತಿದ್ದರು" ನಿಮಗರಿವಿಲ್ಲದಂತೆ ನೀವು ಸಮಾಜಕ್ಕೆ ತಪ್ಪು ಸಂದೇಶವನ್ನು ಕೊಡುತ್ತಿದ್ದೀರಿ" ನಾನಾದರೋ ಮೊ೦ಡುವಾದ ಮಾಡದೆ ಅಥವಾ ಅವರೂ ಹೆಚ್ಚು ಚರ್ಚಿಸದೆ ದಿನಗಳು ಉರುಳುತ್ತಾ ಬಂದವು. ಆದರೂ ಅವಕಾಶ ಸಿಕ್ಕಿದಾಗಲೆಲ್ಲಾ ಅವರ ಮಾತುಗಳನ್ನು ಕೇಳುವುದನ್ನು ನಾನು ನಿಲ್ಲಿಸಲಿಲ್ಲ. ೨-೩ ವರ್ಷಗಳ ಅವರ ಸಂಪರ್ಕದಿಂದ ಒಂದಂತೂ ನನಗೆ ಅರ್ಥವಾಗುತ್ತಿದೆ. ಶರ್ಮರು ಯಾವುದನ್ನೇ ಖಂಡಿಸಿದರೂ ಆಧಾರ ಸಹಿತವಾಗಿ ಶರ್ಮರನ್ನು " ನೀವು ಹೇಳುತ್ತಿರುವುದು ತಪ್ಪೆಂದು" ಯಾರೂ ತಮ್ಮ ವಾದ ಮಂಡಿಸಿರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಸಕಲ ಮಾನವ ಕುಲಕ್ಕೆ ಒಳಿತಾಗಲೆಂದು ತಿಳಿಸುವ ಅನೇಕ ಮಂತ್ರಗಳು ವೇದದಲ್ಲಿವೆ. ಅಲ್ಲದೆ ಸ್ತ್ರೀಯರಿಗೂ ವೇದಾಧ್ಯಯನದ ಅಧಿಕಾರವಿದೆ, ಎಂಬುದನ್ನು ಶರ್ಮರು ಆಧಾರ ಸಹಿತ ತಮ್ಮ ವಾದ ಮಂಡಿಸುತ್ತಾರೆ. ಬ್ರಾಹ್ಮಣ-ಶೂದ್ರ ಪದಗಳಿಗೆ ವೇದ ಮಂತ್ರಗಳ ಆಧಾರವಾಗಿಟ್ಟುಕೊಂಡು ಮಂಡಿಸುವ ಅವರ ಮಾತುಗಳು ಅದ್ಭುತ.ಶ್ರಾದ್ಧದ ವಿಚಾರದಲ್ಲಂತೂ ಬಹಳ ಸ್ಪಷ್ಟವಾಗಿ ಮನುಷ್ಯನು ಸತ್ತ ನಂತರ ಅಂತ್ಯೇಷ್ಠಿ ಆದರೆ ಅಲ್ಲಿಗೆ ಮುಗಿದಂತೆ.ಪ್ರತಿವರ್ಷ ಮಾಡುವ ಶ್ರಾದ್ಧಕ್ಕೆ ಯಾವ ಅರ್ಥವೂ ಇಲ್ಲವೆಂದು ಹೇಳುತ್ತಾರೆ.

ನಮ್ಮ ಆಚರಣೆ ಹೇಗಿದೆ ಎಂದರೆ ಬೆಕ್ಕನ್ನು ಕಟ್ಟಿ ಶ್ರಾದ್ಧಮಾಡಿದ ಒಂದು ಕಥೆ ಇದೆ.ಅದನ್ನು ಹೇಳಿ ಬಿಡುವೆ. ಮನೆಯೊಂದರಲ್ಲಿ ಬೆಕ್ಕನ್ನು ಸಾಕಿದ್ದರು. ಅವರ ಮನೆಯಲ್ಲಿ ಅವರಪ್ಪ ಅಮ್ಮನ ಶ್ರಾದ್ಧ ಮಾಡುವಾಗ ಮಧ್ಯೆದಲ್ಲಿ ಅದು ಓಡಾದಿ ತೊಂದರೆ ಕೊಡುತ್ತಿತ್ತು. ಅದಕ್ಕಾಗಿ ಶ್ರಾದ್ಧದ ದಿನ ಅದನ್ನು ಕಟ್ಟಿಹಾಕಿ ಅದರ ಮೇಲೆ ಒಂದು ಕುಕ್ಕೆ ಮುಚ್ಚಿ ಶ್ರಾದ್ಧ ಮಾಡುತ್ತಿದ್ದರು. ಅವರ ಕಾಲ ಮುಗಿಯಿತು. ಅವರ ಮಕ್ಕಳ ಕಾಲಕ್ಕೆ ಮನೆಯಲ್ಲಿ ಬೆಕ್ಕಿನ ಸಂತತಿ ಇರಲಿಲ್ಲ. ಅಂದು ಶ್ರಾದ್ಧ ಮಾಡಬೇಕು. ಎಲ್ಲೋ ಒಂದು ಬೆಕ್ಕು ಹಿಡಿದು ತಂದರು. ಕಟ್ಟಿಹಾಕಿ ಅದರ ಮೇಲೆ ಕುಕ್ಕೆ ಮುಚ್ಚಿದರು. ಶ್ರಾದ್ಧ ಆಯ್ತು. ಎಲ್ಲರ ಭರ್ಜರಿ ಊಟವಾಯ್ತು. ಬೆಕ್ಕನ್ನು ಮರೆತರು. ಎರಡು -ಮೂರು ದಿನದ ನಂತರ ಮನೆಯಲ್ಲಿ ಅಸಾಧ್ಯವಾದ ದುರ್ನಾತ ಶುರು ವಾಯ್ತು. ಕುಕ್ಕೆಯಿಂದ ಮುಚ್ಚಿದ್ದ ಬೆಕ್ಕು ಸತ್ತು ಕೊಳೆತು ವಾಸನೆ ಬರುತ್ತಿತ್ತು. ನಾವು ಅಂಧವಾಗಿ ನಡೆಸುವ ಆಚರಣೆಗಳು ಅನೇಕ ಭಾರಿ ಹೀಗೆಯೇ ಇರುತ್ತವೆ. " ಏಕೆ? ಆಚರಿಸಬೇಕು. ಎಂಬ ಪ್ರಶ್ನೆ ಮಾಡಲು ನಾವು ಅಂಜುತ್ತೇವೆ. ಕಾರಣ ನಾವು ಬೆಳೆದು ಬಂದಿರುವುದೇ ಹಾಗೆ. ನಾವು ಎನ್ನುವಾಗ ನಾನು ಕೂಡ ಸೇರುತ್ತೇನೆಂದು ಮತ್ತೊಮ್ಮೆ ಹೇಳಬೇಕಾಗಿಲ್ಲ ವಷ್ಟೆ.
ಆದರೆ ಮಿತ್ರರೇ, ಕಳೆದ ಒಂದು ವಾರದಿಂದ ಶರ್ಮರ ಅನೇಕ ಉಪನ್ಯಾಸಗಳನ್ನು ಕೇಳಿರುವೆ. ಅನೇಕ ವೀಡಿಯೋಗಳನ್ನು ವೇದಸುಧೆಗಾಗಿಯೇ ಸಿದ್ಧಪಡಿಸಲು ಶರ್ಮರು ಉಪನ್ಯಾಸವನ್ನು ಮಾಡಿದ್ದಾರೆ.ಅನೇಕ ಆಡಿಯೋ ರೆಕಾರ್ಡಿಂಗ್ ಕೂಡ ಆಗಿದೆ. ಅವೆಲ್ಲವನ್ನೂ ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ದಾರಾವಾಹಿಯಾಗಿ ಪ್ರಕಟಿಸಲಾಗುವುದು. ವೇದಸುಧೆಯ ಅಭಿಮಾನಿ ಬಂಧುಗಳಲ್ಲಿ ಒಂದು ಕಳಕಳಿಯ ಮನವಿಯಿದೆ." ಶರ್ಮರು ಹೇಳಿದ್ದನ್ನೆಲ್ಲಾ ಒಪ್ಪಬೇಕೆಂದೇನೂ ಇಲ್ಲ. ಆದರೆ ಅವರ ಎಲ್ಲಾ ಮಾತಿಗೂ ವೇದದ ಆಧಾರವನ್ನು ಕೊಡುತ್ತಾರೆ.ಅದು ಸರಿಯೋ ತಪ್ಪೋ ಎನ್ನುವುದನ್ನು ವೇದದ ಬಗ್ಗೆ ಇನ್ನೂ ಹೆಚ್ಚು ತಿಳಿದವರು ಹೇಳಬೇಕಷ್ಟೆ. ವೇದವನ್ನು ಆಳವಾಗಿ ಅಧ್ಯಯನ ಮಾಡದವರಿಗೆ ವಾದಮಾಡಲು ಆಧಾರಗಳಿರುವುದಿಲ್ಲ. ವೇದಸುಧೆಯಾದರೋ ಇಂತಹ ಸದ್ವಿಚಾರಗಳಿಗೆ ಒಂದು ವೇದಿಕೆಯೇ ಹೊರತು. ಯಾವುದಕ್ಕೂ ಹೊಣೆಯಲ್ಲ. ಹಾಗಾಗಿ ಶರ್ಮರ ಉಪನ್ಯಾಸಗಳಿಗೆ ಶರ್ಮರೇ ಜವಾಬ್ದಾರರು. ಹಾಗೂ ಯಾವುದೇ ವಾದ ಮಂಡಿಸುವವರು ಕೊಡುವ ದಾಖಲೆಗಳಿಗೆ ಅವರೇ ಜವಾಬ್ದಾರರು. ವೇದಸುಧೆಯು ಇಲ್ಲಿ ಯಾವುದೇ ವಕಾಲತ್ತು ವಹಿಸುವುದಿಲ್ಲ , ಆದರೆ ಸತ್ಯದ ದಾರಿಯನ್ನು ಹುಡುಕುವವರಿಗೆ ಒಂದು ವೇದಿಕೆಯಾಗಿ ತನ್ನ ಅಳಿಲು ಸೇವೆ ಅಥವಾ ಜವಾಬ್ದಾರಿಯನ್ನು ವೇದಸುಧೆಯು ನಿರ್ವಹಿಸುತ್ತದೆ. ಮುಂದೆ ಪ್ರಕಟವಾಗುವ ಸುಧಾಕರಶರ್ಮರ ಉಪನ್ಯಾಸಗಳನ್ನು ದಯಮಾಡಿ ಸತ್ಯ ಶೋಧನೆಗಾಗಿ ಅವಲೋಕಿಸಿ. ಒಮ್ಮೆಗೇ ಉದ್ದನೆಯ ಉಪನ್ಯಾಸಗಳನ್ನು ಮಾಡಿಸುವ ಬದಲು ೫-೧೦ ನಿಮಿಷಗಳಲ್ಲಿ ಮುಗಿಯುವಂತೆ ಚಿಕ್ಕ ಚಿಕ್ಕ ಕಂತುಗಳಾಗಿ ವಿಂಗಡಿಸಲಾಗಿದೆ. ಆದರೆ ಒಂದಕ್ಕೊಂದು ಸಂಬಂಧವಿರುವುದರಿಂದ ಇಂದು ಉಪನ್ಯಾಸವನ್ನು ಕೇಳುವ ಮುಂಚೆ ಅದರ ಹಿಂದಿನ ಉಪನ್ಯಾಸವನ್ನೊಮ್ಮೆ ಪುನ: ಕೇಳುವುದು ಉತ್ತಮ. ಅಂತೂ ಯಾವ ಪೂರ್ವಾಗ್ರಹವಿಲ್ಲದೆ ಸಿದ್ಧವಾಗಿರುವ "ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ" ಯನ್ನು ವೇದಸುಧೆಯ ಅಭಿಮಾನಿಗಳು ಪ್ರೀತಿಯಿಂದ ಸ್ವೀಕರಿಸುವುದಲ್ಲದೆ ಆರೋಗ್ಯಕರ ಚರ್ಚೆಯಲ್ಲಿ ಪಲ್ಗೊಳ್ಳುತ್ತಾರಾಗಿ ವೇದಸುಧೆಯು ಆಶಿಸುತ್ತದೆ.
-ಹರಿಹರಪುರಶ್ರೀಧರ್

ನಿರ್ವಾಹಕ

Tuesday, September 21, 2010

ಶ್ರಾದ್ಧ-ಏನಿದರ ಅರ್ಥ?

ಸುಧಾಕರ ಶರ್ಮರೇ ಹಾಗೆ. ವಿಷಯಗಳನ್ನು ಅತಿ ಸರಳವಾಗಿ ಅತ್ಯಂತ ದೃಢತೆಯಿಂದ ಹೇಳುತ್ತಾರೆ. ಇಂದು ಅವರು ಶ್ರಾದ್ಧ ಕರ್ಮದ ಬಗ್ಗೆ ಮಾತನಾಡಿದ್ದಾರೆ.ಕೇಳಿ. ತಲೆ ತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಅನೇಕ ಆಚರಣೆಗಳಿಗೆ ಅರ್ಥ ವಿಲ್ಲವೆಂದು ಗೊತ್ತಾದಾಗ ಸ್ವಲ್ಪ ಗಾಭರಿಯಾಗುತ್ತೆ. ಆದರೆ ನಮ್ಮ ಆರೋಗ್ಯಕರ ಬದುಕಿಗೆ ಅಗತ್ಯವಾದ ಸತ್ಯವಾದ ಸರಳವಾದ ವೇದದ ಮಾರ್ಗವನ್ನು ತೋರಿಸುವಾಗ ನಾವು ವಿಮರ್ಷೆಮಾಡಬೇಕಲ್ಲವೇ?


Monday, September 20, 2010

ಹೌದಲ್ವಾ!

ಯಾವುದೇ ನಾಯಿ ಇನ್ನೊ೦ದು ನಾಯಿಯನ್ನು ಕೊಲ್ಲುವುದಿಲ್ಲ. ಯಾವುದೇ ಚಿರತೆ ಹುಲಿ ಇನ್ನೊ೦ದು ಚಿರತೆ ಹುಲಿಯನ್ನು ಕೊಲ್ಲುವುದಿಲ್ಲ.ಆದರೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಇರಿದು ಕೊಲ್ಲುತ್ತಾನೆ, ಚಿತ್ರಹಿ೦ಸೆಯಿ೦ದ ಸಾಯಿಸುತ್ತಾನೆ.
Damn with Human Civilization!!
------------------------------------------------------
ಜೀವನದ ತು೦ಬಾ ಕವಲುದಾರಿಗಳು.
ನೇರ ದಾರಿಯೇ ಇಲ್ಲ.
ಯಾವುದೋ ಒ೦ದು ಕವಲಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ.
ಮತ್ತೆ ನೇರ ದಾರಿಗೆ ಬರುವ ಹೊತ್ತಿಗೆ
ಆ ಕವಲೇ ನಮ್ಮ ಬದುಕಿಗೆ ಉರುಳಾಗಿರುತ್ತದೆ....
ಮತ್ತು ಆಗಲೇ ಕಾಲ ಮಿ೦ಚಿರುತ್ತದೆ....
--------------------------------------------------------
ಸಮಾಜ ಕಾರ್ಯಕ್ಕೆ ಒ೦ದು ನೂರು ರೂಪಾಯಿ ದೇಣಿಗೆ ನೀಡಿದಾಗ
ಅದು ನಿನಗೆ ಅತಿ ದೊಡ್ಡ ಮೊತ್ತ ಅನಿಸುವುದು
ಆದರೆ
ನೀನು ಶಾಪಿ೦ಗ್ ಮಾಡುವಾಗ ಅದು ಅತಿ ಚಿಕ್ಕ ಮೊತ್ತ ಅನಿಸುವುದು
ವಿಚಿತ್ರವೆನಿಸುವುದಿಲ್ಲವೇ...?
---------------------------------------------------------------

ಜೀವನದಲ್ಲಿ ಕೆಲವು ಪುಟ್ಟ ಪುಟ್ಟ ಅನಾಮಧೇಯ ಸ೦ಗತಿಗಳು, ಕೆಲಸಗಳು ನಮ್ಮ ಬದುಕನ್ನೇ ಒ೦ದು ಸು೦ದರ ಕಾವ್ಯವನ್ನಾಗಿಸುವ ದೈತ್ಯ ಶಕ್ತಿ ಅವಕ್ಕಿವೆ.
ಒ೦ದು ಮಧುರ ಸ್ಪರ್ಶ, ಪ್ರೀತಿಪಾತ್ರರ ತಲೆಯನ್ನು ಮೃಧುವಾಗಿ ನೇವರಿಸುವುದು ಒಬ್ಬರ ಕಣ್ಣೀರ ಕಥೆಯನ್ನು ಆತ್ಮೀಯವಾಗಿ ಮೌನವಾಗಿ ಕೇಳುವುದು, ಸಾಧ್ಯವಾದರೆ ಅವರಿಗೆ ಒ೦ದೆರಡು ಕಣ್ಣೀರ ಹನಿ ಮುಡಿಪಾಗಿಡುವುದು..
ಒ೦ದು ಸಣ್ಣ ಮುಗುಳ್ನಗೆ, ಕೆಳಕ್ಕೆ ಎಡವಿದಾಗ ನಿಮ್ಮ ಕೈಯನ್ನು ನೀಡುವುದು, ಒ೦ದು ಸು೦ದರ ಸೂರ್ಯಾಸ್ತಮಾನ ವೀಕ್ಷಿಸುವುದು, ಹದವಾದ ಹಸಿ ನೆಲದಲ್ಲಿ ಒ೦ದು ಪುಟ್ಟ ಸಸಿಯನ್ನು ನೆಡುವುದು, ಬೇರೊಬ್ಬರ ಹರ್ಷದ ಘಳಿಗೆಯಲ್ಲಿ ಮನತು೦ಬಿ ನಗುವುದು, ಒ೦ದೆರಡು ಒಳ್ಳೆಯ ಮೆಚ್ಚುಗೆ ನುಡಿಗಳು ಅದೆಷ್ಟು ಅಸ೦ಖ್ಯ ಸ೦ಗತಿಗಳಿವೆ...
ಬನ್ನಿ ಅವುಗಳನ್ನು ದ್ವಿಗುಣಗೊಳಿಸೋಣ.
ಬದುಕಿನ ಸಾರ್ಥಕ್ಯವಿರುವುದೇ ಅ೦ತಹ ಪುಟ್ಟ ಅನಾಮಧೇಯ ಸ್ಪ೦ದನಗಳಲ್ಲಿ..
----------------------------------------------------------------------------

ಕಾಡುಮೃಗಗಳು ಎ೦ದಿಗೂ ಮೋಜಿಗಾಗಿ ಕೊಲ್ಲುವುದಿಲ್ಲ. ತನ್ನ ಸಹಜೀವಿಗಳನ್ನು ಹಿ೦ಸಿಸಿ ಕೊಲ್ಲುವುದು ಮನುಷ್ಯಪ್ರಾಣಿಗೆ ಮಾತ್ರ, ಅದು ಮೋಜಿನ ವಿಚಾರ.
-ಡಾ|| ಜ್ಞಾನದೇವ್

ವೇದಸುಧೆಯು ಅದರ ಮೂಲ ಉದ್ಧೇಶ ಬಿಟ್ಟು ಸಾಗುತ್ತಿದೆಯೇ?

ಶ್ರೀ ವಿಶಾಲ್ ಬೆಂಗಳೂರಿನಿಂದ ವೇದಸುಧೆಗೆ ಒಂದು ಮೇಲ್ ಮಾಡಿದ್ದಾರೆ. ಅದರಲ್ಲಿ ವೇದಸುಧೆಯು ಅದರ ಮೂಲ ಉದ್ಧೇಶ ಬಿಟ್ಟು ಸಾಗುತ್ತಿದೆಯೇ? ಎನ್ನುವ ಸಂದೇಹ ವ್ಯಕ್ತ ಪಡಿಸಿದ್ದಾರೆ.ವೇದಸುಧೆಯಿಂದ ಅವರ ನಿರೀಕ್ಷೆ ಬಹಳ ಇದೆ ಎಂಬುದು ಅವರ ಕಳಕಳಿಯಿಂದಲೇ ವ್ಯಕ್ತವಾಗುತ್ತದೆ. ಅವರ ಅಭಿಪ್ರಾಯಗಳನ್ನು ವೇದಸುಧೆಯ ಎಲ್ಲರ ಗಮನಕ್ಕಾಗಿಯೇ ಇಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಕಳೆದೆರಡು ದಿನಗಳಿಂದ ವೇದಾಧ್ಯಾಯೀ ಸುಧಾಕರಶರ್ಮರು ವೇದಸುಧೆಗಾಗಿ ಆಡಿಯೋ/ವೀಡಿಯೋ ಕ್ಲಿಪ್ ಗಳಲ್ಲಿ ವೈದಿಕ ಚಿಂತನೆ ನಡೆಸಿರುತ್ತಾರೆ. ಇನ್ನು ಮುಂದೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಶ್ರೀ ಶರ್ಮರ ವೈದಿಕ ಚಿಂತನೆಗಳನ್ನು ವೇದಸುಧೆಯಲ್ಲಿ ಪ್ರಕಟಿಸಲಾಗುತ್ತದೆ. ಈ ವಿಷಯಗಳ ಮೇಲೆ ನಮ್ಮ ಸಂದೇಹಗಳನ್ನು /ಅಭಿಪ್ರಾಯಗಳನ್ನು ವೇದಸುಧೆಗೆ ಬರೆಯುತ್ತಾ ಹೋದರೆ ಶ್ರೀ ಶರ್ಮರು ಉತ್ತರಿಸಲು ಒಪ್ಪಿರುತ್ತಾರೆ.
-ಹರಿಹರಪುರಶ್ರೀಧರ್
ನಿರ್ವಾಹಕ

On 17 September 2010 10:37,
Dear Sir,


I have some doubts about vedasudhe and its objective.
I am aware of the fact that vedasudhe is a platform for spiritual thoughts and
its not aligned to any particular school of thought.I would like to list out
few of my questions:


If the objective of the vedasudhe is to spread vedic thoughts to the people then
is it right to post puranic articles which are quite contradictory to the former thoughts.


Or if the platform accepts and agrees everything then there would be no effort to search
truth.


Why do I feel that members wants to be in feel good position and simply appreciates
everything posted


I also feel that most of the members do not want to accept or even agree to the things that are logical
and true.People still are happy to believe their good old thoughts.

I feel that people stop discussing if the argument is not going on their side which is truly disappointing.
I also believe that any vaada should end with a concrete conclusion and one side has to accept the truth.
All those great minds shankara,ramanuja, madhwa believed in the above concept but why people
now say you follow yours and we ll follow ours.


I strongly feel that vedasudhe should a platform for healthy result oriented discussion that aims to
understand more about universal truth and not just a photo/video/article sharing place.


I really dont know what others feel about this but I have written what really makes sense to me.I may sound
rational and bold but I am very much clear about my thoughts.
Hope this wont hurt anyone.


Regards,


Vishal

Sunday, September 19, 2010

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -3

ಇನ್ನೊಂದು ಮಂತ್ರವನ್ನು ನೋಡೋಣ ಬನ್ನಿ:-


ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಹಾಪವಿದ್ಧಮ್|
ಕವಿರ್ಮನೀಷೀ ಪರಿಭೂಃ ಸ್ವಯಂಭೂರ್ಯಾಥಾತಥ್ಯತೋರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ||
(ಯಜು.40.8)


[ಸಃ] ಆ ಚೇತನ ತತ್ವ, [ಪರಿ ಅಗಾತ್] ಎಲ್ಲಕ್ಕಿಂತ ಮೇಲಿದೆ, ಸರ್ವೋತ್ಕೃಷ್ಟವಾಗಿದೆ. [ಶುಕ್ರ] ಜ್ಯೋತಿರ್ಮಯವಾಗಿದೆ. [ಅಕಾಯಮ್] ವ್ರಣರಹಿತವಾಗಿದೆ. [ಅಸ್ಸಾವಿರಮ್] ನರನಾಡಿಗಳ ಬಂಧನವಿಲ್ಲದುದಾಗಿದೆ. [ಶುದ್ಧಮ್] ಪವಿತ್ರವಾಗಿದೆ. [ಅಪಾಪವಿದ್ಧಮ್] ಪಾಪದಿಂದ ಛೇದಿಸಲ್ಪಡದುದಾಗಿದೆ. [ಕವಿಃ] ಸರ್ವಜ್ಞ, ಸರ್ವದ್ರಷ್ಟುವಾಗಿದೆ. [ಮನೀಷೀ] ವಿಚಾರಶೀಲವೂ, ಮನಃಪ್ರೇರಕವೂ ಆಗಿದೆ. [ಪರಿಭೂಃ} ಸರ್ವಶ್ರೇಷ್ಠ, ಸರ್ವಜ್ಯೇಷ್ಠವಾಗಿದೆ. [ಸ್ವಯಂಭೂಃ] ಸ್ವತಃ ಇರತಕ್ಕ, ಅನುತ್ಪನ್ನವಾದ ಅನಾದಿ ತತ್ವವಾಗಿದೆ ಅದು. [ಶಾಶ್ವತೀಭ್ಯಃ ಸಮಾಭ್ಯಃ] ತನ್ನ ಶಾಶ್ವತ ಪ್ರಜೆಗಳಾದ ಜೀವಾತ್ಮರಿಗೆ, [ಯಾಥಾ ತಥ್ಯತಃ] ಹೇಗೆ ಕೊಡಬೇಕೋ ಹಾಗೆ, [ಅರ್ಥಾನ್] ಜೀವಿಕಾ ಸಾಧನಗಳನ್ನೂ, ವಿಷಯಗಳ ಜ್ಞಾನವನ್ನೂ, [ವಿ ಅದಧಾತ್] ವಿಶಿಷ್ಟ ರೀತಿಯಲ್ಲಿ, ವಿವಿಧ ಪ್ರಕಾರದಿಂದ ದಯಪಾಲಿಸುತ್ತಿದೆ.


     ಭಗವಂತನ ಅತ್ಯಂತ ವೈಜ್ಞಾನಿಕವಾದ ಈ ಭವ್ಯಸ್ವರೂಪದ ಚಿತ್ರಣವನ್ನು ನೋಡಿ, ನಾಸ್ತಿಕರೂ ಕೂಡ "ಈ ದೇವರನ್ನಲ್ಲ ನಾವು ಖಂಡಿಸುವುದು" ಎಂದುಕೊಳ್ಳಬೇಕು. ವೈಜ್ಞಾನಿಕರು "ಈ ದೇವರನ್ನಲ್ಲ ನಾವು ಕೊಂದುದು" ಎಂದುಕೊಳ್ಳಬೇಕು! ಈ ಮಹಾನ್ ವಿಶ್ವಚೇತನ ಕೇವಲ ಸರ್ವವ್ಯಾಪಕವಲ್ಲ; ಅದು ಸರ್ವಜ್ಞವೂ ಅಹುದು; ಸರ್ವದ್ರಷ್ಟುವೂ ಅಹುದು, ಅತ್ಯಂತ ಪವಿತ್ರವಾದ ಆ ಪತಿತಪಾವನ ತತ್ವ ಸ್ವತಃ ಸತ್ಯ ಸಂಕಲ್ಪಗಳಿಂದ ಕೂಡಿ ನಿರ್ಮಲಾಂತಃಕರಣ ಚಿತ್ರಗಳಲ್ಲಿ ಪ್ರೇರಣೆ ತುಂಬಿಸುವ ಸದ್ವಸ್ತುವಾಗಿದೆ. ಸರ್ವಶ್ರೇಷ್ಠ. ಸರ್ವಜ್ಯೇಷ್ಠವಾದ ಆ ದಿವ್ಯಚೇತನ ಬೇರೆಯವರಿಂದ ತನ್ನ ಅಸ್ತಿತ್ವವನ್ನು ಎರವು ತೆಗೆದುಕೊಳ್ಳುವುದಿಲ್ಲ. ಯಾರು ಒಪ್ಪಲಿ, ಬಿಡಲಿ, ಅದಂತೂ ಇದ್ದೇ ಇರುತ್ತದೆ

Saturday, September 18, 2010

ದಶಶ್ಲೋಕೀ



ಗುರ್ವಷ್ಟಕಮ್



ನಿರ್ವಾಣ ಷಟ್ಕಮ್
ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ನಿಮಗೆಲ್ಲರಿಗೂ ತಿಳಿದಿರುವಂತೆ ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸಗಳಿಂದ ಪ್ರೇರಿತವಾಗಿ ಸಾಮಾನ್ಯ ಜನರಿಗೆ ಸರಳ ಮಾತುಗಳಲ್ಲಿ ವೇದದ ವಿಚಾರಗಳನ್ನುತಿಳಿಸಲು "ವೇದಸುಧೆ" ಬ್ಲಾಗ್ ಆರಂಭಿಸಿದೆ. ಆದರೆ ಪ್ರಾರಂಭದ ದಿನಗಳಲ್ಲಿ ಶರ್ಮರ ವಿಪರೀತವಾದ ಪ್ರವಾಸಗಳಿಂದ ವೇದಸುಧೆಗೆ ಅವರು ಹೆಚ್ಚು ಸಮಯ ಕೊಡಲು ಸಾಧ್ಯವಾಗಲಿಲ್ಲ. ಹಾಗಾಗಿ ವೇದದ ವಿಚಾರಕ್ಕೆ ಪೂರಕವಾದ ಲೇಖನಗಳನ್ನು ವೇದಸುಧೆಯಲ್ಲಿ ಬರೆಯಲು ವೇದಸುಧೆಯ ಅಭಿಮಾನಿಗಳನ್ನೇ ಆಹ್ವಾನಿಸಲಾಯ್ತು. ನಮ್ಮ ಆಹ್ವಾನವನ್ನು ಮನ್ನಿಸಿ ಶ್ರೀ ವಿಷ್ಣುಭಟ್, ಶ್ರೀರಾಘವೇಂದ್ರ ನಾವಡ, ಶ್ರೀ ಕವಿ ನಾಗರಾಜ್,ಶ್ರೀ ಕವಿಸುರೇಶ್, ಶ್ರೀ ವಿಶಾಲ್, ಡಾ|| ಜ್ಞಾನದೇವ್,ಮತ್ತು ಶ್ರೀ ಹಂಸಾನಂದಿ ಇವರುಗಳು ಹಲವು ಲೇಖನಗಳನ್ನು ಬರೆದು ವೇದಸುಧೆಯನ್ನು ನಿರಂತರವಾಗಿ ಚಟುವಟಿಕೆಯಿಂದಿರುವಂತೆ ಸಹಕರಿಸುತ್ತಾ ಬಂದಿರುವುದು ಸಂತಸದ ಸಂಗತಿ. ಕಳೆದ ಒಂದೆರಡು ದಿನಗಳಿಂದ ಶ್ರೀ ಶರ್ಮರು ಹಾಸನ ಜಿಲ್ಲೆಯ ಬೇಲೂರು, ಹಾಸನ ಮತ್ತು ಅರಕಲಗೂಡಿನಲ್ಲಿ ಪ್ರವಾಸ ಕೈಗೊಂಡು ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಿರುತ್ತಾರೆ. ಅವರ ಎಲ್ಲಾ ಉಪನ್ಯಾಸಗಳನ್ನೂ ವೀಡಿಯೋ/ಆಡಿಯೋ ರೆಕಾರ್ಡ್ ಮಾಡಲಾಗಿದೆ. ಅಲ್ಲದೆ ವೇದಸುಧೆಗಾಗಿಯೇ ಹಲವು ವೀಡಿಯೋ ಕ್ಲಿಪ್ ಗಳನ್ನು ತಯಾರಿಸಲಾಗಿದೆ. ಎಲ್ಲವೂ ನಮ್ಮ ದೈನಂದಿನ ಜೀವನಕ್ಕೆ /ಆರೋಗ್ಯಕರ ಬದುಕಿಗೆ ನೆರವಾಗುವುದರಲ್ಲಿ ಸಂದೇಹವಿಲ್ಲ. ನೂರಾರು ವರ್ಷಗಳಿಂದ ನಾವು ಆಚರಿಸಿಕೊಂಡು ಬಂದಿರುವ ಹಲವು ಸಂಪ್ರದಾಯಗಳು/ಆಚರಣೆಗಳು ವೇದೋಕ್ತವಾಗಿರುವುದಿಲ್ಲವಷ್ಟೇ ಅಲ್ಲ , ನಮ್ಮ ಆಚರಣೆಗಳಲ್ಲಿ ಹಲವು ಆಚರಣೆಗಳು ಅಂಧಾನುಕರಣೆಗಳೇ ಆಗಿವೆ. ಸತ್ಯಾನ್ವೇಶಿಯಾದ ಶ್ರೀ ಶರ್ಮರು ವೇದದ ಆಧಾರವಿಲ್ಲದ ಆಚರಣೆಗಳನ್ನು ಖಂಡಿಸುತ್ತಾರಾದ್ದರಿಂದ ನಮಗೆ ಕಸಿವಿಸಿಯಾಗದಿರದು. ಆದರೆ ಅವರ ಪೂರ್ಣ ಉಪನ್ಯಾಸಗಳನ್ನು ತಾಳ್ಮೆಯಿಂದ ಕೇಳಿದವರಿಗೆ ಒಂದು ಹೊಸ ಹೊಳಹು ಸಿಗುವುದರಲ್ಲಿ ಸಂಶಯವಿಲ್ಲ. ಇಡೀ ಮನುಕುಲದ ಒಳಿತಿಗಾಗಿ ಇರುವ ವೇದವನ್ನು ಎಲ್ಲರಿಗೂ ತಲುಪಿಸುವಲ್ಲಿ ಯಾಕೋ ನಮ್ಮ ವೇದ ಪಂಡಿತರು ಸೋತಿದ್ದಾರೆ. ಆ ಕೆಲಸವನ್ನು ತಮ್ಮ ಶಕ್ತಿ ಮೀರಿ ಮಾಡುತ್ತಿರುವವರಲ್ಲಿ ನಮಗೆ ಶರ್ಮರು ಪ್ರಮುಖವಾಗಿ ಕಾಣುತ್ತಾರೆ. ಅವರ ನಿತ್ಯ ಬದುಕು ನೋಡಿದವರಿಗೆ ಅವರಂತಿರಬೇಕೆನಿಸುತ್ತದೆ. ಆದ್ದರಿಂದ ವೇದಸುಧೆಯು ತನ್ನ ಅಭಿಮಾನಿಗಳಿಗೆ ಇನ್ನು ಮುಂದೆ ವಾರದಲ್ಲಿ ಎರಡುದಿನಗಳು [ಪ್ರತಿ ಮಂಗಳವಾರ ಮತ್ತು ಶುಕ್ರವಾರ] ವೇದದ ವಿಚಾರಗಳನ್ನು ಶರ್ಮರ ಸರಳ ಮಾತುಗಳಲ್ಲಿ ಕೇಳಲು ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಸಧ್ಯಕ್ಕೆ ಒಂದೆರಡು ತಿಂಗಳುಗಳಿಗಾಗುವಷ್ಟು ಸಾಮಗ್ರಿಯನ್ನು ಶರ್ಮರು ಒದಗಿಸಿರುತ್ತಾರೆ. ಅದು ಮುಗಿಯುವುದರೊಳಗಾಗಿ ವೇದಸುಧೆಯು ಪುನ: ಶರ್ಮರ ಬೆನ್ನು ಹತ್ತಿ ಮತ್ತಷ್ಟು ಸರಕು ಸಂಪಾದಿಸಿ ವೇದಸುಧೆಯಲ್ಲಿ ನೀಡುವ ಭರವಸೆಯನ್ನು ನೀಡುತ್ತದೆ. ವೇದಸುಧೆಯಲ್ಲಿ ಬರೆಯುವ ನಮ್ಮ ಬಳಗದ ಮಿತ್ರರು ಮಂಗಳವಾರ ಮತ್ತು ಶುಕ್ರವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ನಿಮ್ಮ ಲೇಖನಗಳನ್ನು ವೇದಸುಧೆಯ ಅಭಿಮಾನಿಗಳಿಗೆ ನೀಡಬೇಕೆಂದು ವೇದಸುಧೆಯು ವಿನಂತಿಸುತ್ತದೆ. ಅಲ್ಲದೆ ಶರ್ಮರ ಉಪನ್ಯಾಸಗಳನ್ನು ತಾಳ್ಮೆಯಿಂದ ಕೇಳಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಸಂದೇಹಗಳಿದ್ದರೆ ಶರ್ಮರಿಂದ ಸಮಾಧಾನವನ್ನು ಪಡೆಯಬಹುದಾಗಿಗೆ ಎಂದು ತಿಳಿಸ ಬಯಸುತ್ತದೆ. ಪುಂಸವನ ಉಪನ್ಯಾಸದ ಬಗ್ಗೆ ಶ್ರೀಯುತ ಕವಿ ಸುರೇಶ್ ಮತ್ತು ಶ್ರೀ ವಿಶಾಲ್ ಆರೋಗ್ಯಕರ ಚರ್ಚೆ ಮಾಡುತ್ತಾ ವೇದಸುಧೆಯ ಘನತೆಯನ್ನು ಹೆಚ್ಚಿಸಿರುತ್ತಾರೆ. ಹೀಗೆಯೇ ವೇದಸುಧೆಯಲ್ಲಿ ಆರೋಗ್ಯಕರ ಚರ್ಚೆಗಳು ನಡೆದು ಒಂದಿಷ್ಟು ಸದ್ವಿಚಾರಗಳು ಎಲ್ಲರಿಗೂ ತಲುಪುವಂತಾಗಲಿ. ಮುಂದಿನ ಏಪ್ರಿಲ್ ಮಾಹೆಯಲ್ಲಿ ವೇದೋಕ್ತ ಜೀವನ ಪಥ ಕಾರ್ಯಗಾರ ಒಂದನ್ನು ಹಾಸನ ಜಿಲ್ಲೆಯ ಕಾವೇರಿ ನದಿ ದಂಡೆಯ ಅಥವಾ ಹೇಮಾವತಿ ದಂಡೆಯ ಪ್ರಕೃತಿ ಮಡಿಲಲ್ಲಿ ಆಯೋಜಿಸಲು ಚಿಂತನೆ ನಡೆದಿದೆ. ಎಲ್ಲರಿಗೂ ಅದಕ್ಕೆ ಮುಕ್ತ ಆಹ್ವಾನವಿದೆ. ಎಂದಿನನಂತೆ ಸಹಕಾರವನ್ನು ಕೋರುತ್ತಾ, ವಂದನೆಗಳೊಂದಿಗೆ,
-ಹರಿಹರಪುರಶ್ರೀಧರ್
ನಿರ್ವಾಹಕ

Friday, September 17, 2010

ಸೂತಕ- ಹಾಗೆಂದರೇನು?




ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಇಂದು ನಡೆದ ಒಂದು ಸತ್ಸಂಗದಲ್ಲಿ ಪಾಲ್ಗೊಂಡಿದ್ದವರ ಅನೇಕ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ಉತ್ತರಿಸಿದರು.ಸುಮಾರು ಎರಡು ಗಂಟೆಗಳು ನಡೆದ ಸತ್ಸಂಗದಲ್ಲಿ ಶ್ರೀ ಶರ್ಮರು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಒಂದು ವಿಷಯದ ಆಡಿಯೋ ಇಲ್ಲಿದೆ. ಇನ್ನು ಮುಂದೆ ವಾರದಲ್ಲಿ ಎರಡು ದಿನ ಶರ್ಮರ ಮಾತುಗಳನ್ನು ಇಲ್ಲಿ ಕೇಳಬಹುದು.

ಎಲೆ ಮಾರೆ ಕಾಯಿಗಳು ಎಷ್ಟಿವೆಯೋ?

ಒಂದೇ ಮಾತಲ್ಲಿ ಹೇಳಬೇಕೂಂದ್ರೆ " ಸಾಹಿತ್ಯ ಕ್ಷೇತ್ರದಲ್ಲಿ ಎಲೆ ಮಾರೆ ಕಾಯಿಗಳು ಎಷ್ಟಿವೆಯೋ? ಬಲ್ಲವರಾರು? ಅದರಲ್ಲಿ ಹಾಸನದ ಸುದಾರ್ಥಿ ಒಬ್ಬರೆನ್ನುವುದರಲ್ಲಿ ಎರಡು ಮಾತಿಲ್ಲ.ಅವರ ನಾಲ್ಕು ದಶಕಗಳ ಸಾಹಿತ್ಯ ಕೃಷಿ ಕಂಡು ಬೆರಗಾದೆ.ಅವರ ಬಗ್ಗೆ ಬರೆಯಲು ಮಿತ್ರ ನಾಗರಾಜರನ್ನು ಕೋಳಿಕೊಳ್ಳುವೆ. ಸಧ್ಯಕ್ಕೆ ಅವರ ಸಂದರ್ಶನದ ಒಂದು ತುಂಡು ಈಗ ನೋಡಿ. ಇನ್ನೂ ಬಹಳ ಇದೆ...ವರ್ಷವೆಲ್ಲಾ ಬರೆಯುವಷ್ಟು [ಗಡಿಬಿಡಿಯಲ್ಲಿ ಆಫೀಸಿಗೆ ಹೊರಟು ನಿಂತಿದ್ದರೂ ಒಂದು ತುಣುಕು ಬ್ಲಾಗಿಗೆ ಪೇರಿಸಿಯೇ ಹೊರಡಬೇಕೆಂಬ ಆಸೆಯಿಂದ ಒಂದು ಕ್ಲಿಪ್ ಹಾಕಿರುವೆ]



Thursday, September 16, 2010

ಬೆಲಗೂರಿನಲ್ಲಿ ನಡೆದ ಶ್ರೀ ಮಹಾಸುದರ್ಶನ ಮತ್ತು ಶ್ರೀ ಮಹಾ ಲಕ್ಷ್ಮೀ ಯಾಗ





















ಇತ್ತೀಚೆಗಷ್ಟೇ ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರು 8 ದಿನಗಳ ಕಾಲ ಅನೇಕ ಹೋಮ-ಯಾಗಗಳ ನಡುವೆ ಪ್ರಮುಖವಾಗಿ ಶ್ರೀ ಮಹಾಲಕ್ಷ್ಮೀ ಯಾಗ ಬಹು ವಿಜೃಂಭಣೆಯಿಂದ, ವಿಧಿವತ್ತಾಗಿ ನಡೆಯಿತು. ಆಗ ತೆಗೆದ ಕೆಲವು ಚಿತ್ರಗಳನ್ನು ಆಸಕ್ತರಿಗೆ ಇಲ್ಲಿ ಕೊಡಲಾಗಿದೆ. ಪ್ರಾರಂಭದ ದಿನ ಉತ್ಸವ ಮೂರ್ತಿಯ ಮೆರವಣಿಗೆಯ ಜೊತೆಗೆ "ವೇದೋತ್ಸವ" ವನ್ನೂ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಚತುರ್ವೇದ ಸಂಹಿತಾ ಯಾಗಗಳನ್ನೂ ನಡೆಸಲಾಯಿತು. ವೇದಕ್ಕೆ ಸಂಬಂಧಪಟ್ಟ ಮತ್ತು ಶಾಸ್ತ್ರ ಪುರಾಣಗಳಿಗೆ ಸಂಬಂಧಪಟ್ಟ ಪವಿತ್ರ ಗ್ರಂಥಗಳನ್ನು ಸಾಲಂಕೃತ ರಥದ ಮೇಲೆ ಇರಿಸಿ ಸುಮಾರು 300ಕ್ಕೂ ಹೆಚ್ಚು ಋತ್ವಿಜರ ವೇದಘೋಷದೊಂದಿಗೆ ಸಾವಿರಾರು ಮಂದಿ ಭಕ್ತರೊಂದಿಗೆ ಊರಿನ ಪ್ರಮುಖ ಬೀದಿಗಳನ್ನು ಸಾಗಿದ್ದು ಬಹುಶ: ಇದೇ ಪ್ರಥಮವಿರಬಹುದು. ಮುಂಚೂಣಿಯಲ್ಲಿ 2 ಅಲಂಕೃತಗೊಂಡ ಆನೆಗಳು, ಅದರ ಹಿಂದೆ ಸಾಲಂಕೃತಗೊಂಡ ಅಶ್ವಗಳು, ಅದರ ಹಿಂದೆ ಗೋವುಗಳು, ಋತ್ವಿಜರು, ಭಕ್ತರು ಮತ್ತು ಸಮವಸ್ತ್ರ ಧರಿಸಿದ ಶಾಲಾ ಮಕ್ಕಳುಗಳು ಉತ್ಸವಕ್ಕೆ ಕಳೆ ಕಟ್ಟಿದ್ದವು. 8 ದಿನಗಳ ಈ ಕಾಲಾವಧಿಯಲ್ಲಿ ಸುಮಾರು 3 ಲಕ್ಷ್ಕ್ಕೂ ಅಧಿಕ ಮಂದಿ ಭಕ್ತರು ಇಲ್ಲಿಗೆ ಬಂದಿದ್ದು, ಸರ್ವರಿಗೂ ಸದಾಕಾಲ ಪಾನೀಯ, ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಸ್ವಾಮೀಜಿಯವರು 2-3 ದಿನ ಕ್ಷೇತ್ರಕ್ಕೆ ಬಂದ ಎಲ್ಲ ಸುಮಂಗಲಿಯರಿಗೆ (ಯಾವುದೇ ಭೇದ-ಭಾವವಿಲ್ಲದೆ) ಸೀರೆಗಳನ್ನು ಮತ್ತು ಮಂಗಳದ್ರವ್ಯಗಳನ್ನು ಆಶೀರ್ವಾದಪೂರ್ವಕವಾಗಿ ನೀಡಿದಾಗ ಅಲ್ಲಿ ಒಂದು ಜಾತ್ರೆಯೇ ನೆರೆದಂತಿತ್ತು. ಕ್ಷೇತ್ರಕ್ಕೆ ಹೆಬ್ಬಳ್ಳಿಯ ಶ್ರೀ ದತ್ತಾವಧೂತರು ಭೇಟಿ ನೀಡಿದ್ದು ಮತ್ತು ಅವರಿಗೆ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಯವರು ಪಾದಪೂಜೆ ಮಾಡಿದ್ದು ಎಲ್ಲರಿಗೂ ಅವಿಸ್ಮರಣೀಯ ಅನುಭವವಾಯಿತು.

ಇಲ್ಲಿ ಭಕ್ತಾದಿಗಳು ನೀಡುವ ದಾನಧರ್ಮಗಳು, ನಡೆವ ದಾರ್ಮಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ನೋಡಿದಾಗ, ಅನೇಕ ವಿಚಾರಗಳ ಬಗ್ಗೆ ನಮ್ಮನ್ನೇ ನಾವು ಬಲು ದೊಡ್ಡವರೆಂದು ಭಾವಿಸಿದ ನಮಗೆ, ನಮ್ಮ ಕುಬ್ಜತನದ ಅರಿವು ಉಂಟಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಬಹುತೇಕ ಎಲ್ಲ ದಾನಿಗಳೂ ಅನಾಮಧೇಯರು. ಎಷ್ಟು ಅನುಕರಣೀಯ ನಡತೆ ಅಲ್ಲವೇ? ಇಲ್ಲಿ ನಡೆವ ಬೃಹತ್ ಕಾರ್ಯಗಳೂ ಕೂಡ ಎಷ್ಟು ಸುಲಭವಾಗಿ ನಡೆಯುತ್ತವೆ ಎಂದರೆ ಅದು ಒಂದು ಅಲೌಕಿಕ ಶಕ್ತಿಯ ಪವಾಡವೇ ಸರಿ. ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಮತ್ತು ಶ್ರೀ ಗುರೂಜಿಗಳ ಕೃಪೆ ಎಲ್ಲರ ಮೇಲಿರಲಿ ಎಂಬ ಆಶಯದೊಂದಿಗೆ.

Wednesday, September 15, 2010

ಇಬ್ಬರು ವಿದ್ವಾಂಸರುಗಳ ಸಂದರ್ಶನ

ಸಿರಿ ಭೂವಲಯದ ಸಂಶೋಧನೆಯಲ್ಲಿ ತೊಡಗಿರುವ ಶ್ರೀ ಸುಧಾರ್ಥಿಯವರನ್ನು ನಾಳೆ ಭೇಟಿಮಾಡುವ ಕಾರ್ಯಕ್ರಮವಿದೆ. ಇದೇ ಶುಕ್ರವಾರ ವೇದಾಧ್ಯಾಯೀ ಸುಧಾಕರ ಶರ್ಮರು ಹಾಸನಜಿಲ್ಲೆಯ ಅರಕಲಗೂಡಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲಿರುವರು . ಆ ಕಾರ್ಯಕ್ರಮದ ವೀಡಿಯೋ ವರದಿ ಹಾಗೂ ವೇದದ ವಿಚಾರದಲ್ಲಿ ಶ್ರೀ ಶರ್ಮರೊಡನೆ ಸ್ಥಳೀಯ ಪತ್ರಿಕೆ ಜನಮಿತ್ರದ ಸಂಪಾದಕರು ಸಂದರ್ಶನ ನಡೆಸುವರು. ಇದೆಲ್ಲವೂ ವೇದಸುಧೆಯಲ್ಲಿ ಪ್ರಕಟವಾಗಲಿವೆ.

Tuesday, September 14, 2010

ಪುಮ್ಸವನ ಸಂಸ್ಕಾರ





ಬೆ೦ಗಳೂರಿನ ಶ್ರೀ ವಿಶಾಲ್ ಅವರ ಮನೆಯಲ್ಲಿ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ನಡೆಸಿಕೊಟ್ಟ ಪುಮ್ಸವನ ಸಂಸ್ಕಾರದ ಆಡಿಯೋ ಕ್ಲಿಪ್ ಇಲ್ಲಿದೆ, ಕೇಳಿ.

ಸಿರಿ ಭೂವಲಯ

ಮೊನ್ನೆ ನನ್ನ ಮಗ ಸುಬ್ರಹ್ಮಣ್ಯನ ಸ್ನೇಹಿತ ಅನಂತ ನಮ್ಮ ಮನೆಗೆ ಬಂದು " ಅಂಕಲ್, ನಮ್ಮ ಬಂಧುಗಳೊಬ್ಬರು ಸುಧಾರ್ಥಿ ಅಂತಾ ಇದಾರೆ. ಅವರ ಪರಿಚಯ ನಿಮಗೆ ಮಾಡಿಕೊಡಬೇಕು, ಅವರು "ಸಿರಿಭೂವಲಯ" ಅನ್ನೋ ಒಂದು ದೊಡ್ದ ಗ್ರಂಥದ ಬಗ್ಗೆ ೨೫-೩೦ ವರ್ಷಗಳಿಂದ ಸಂಶೋಧನೆ ಮಾಡ್ತಾ ಇದಾರೆ. ಅವರ ಮನೆಗೆ ಹೋಗೋಣ, ಯಾವಾಗ ಫ್ರೀ ಟೈಮ್ ಸಿಗುತ್ತೆ? ಹೇಳಿ "ಅಂದ. ಸರಿ ಮುಂದಿನ ಗುರುವಾರ ಭೇಟಿ ಮಾಡಲು ಫಿಕ್ಸ್ ಆಯ್ತು.ಈಮಧ್ಯೆ ನನ್ನ ಮಿತ್ರರಾದ ಸಾಹಿತ್ಯ ಸಂಶೋಧಕರಾದ ಡಾ|| ಶ್ರೀವತ್ಸ.ಎಸ್.ವಟಿ ಯವರು ನಿನ್ನೆ ಹಾಸನ ಆಕಾಶವಾಣಿಗೆ ರೆಕಾರ್ಡಿಂಗ್ ಗೆ ಬಂದಿದ್ದವರು ನಮ್ಮ ಮನೆಗೆ ಬಂದಿದ್ದರು. ಅವರೊಡನೆ ಅನೌಪಚಾರಿಕ ಮಾತುಕತೆ ನಡೆಸುವಾಗ ಅವರೊಡನೆ "ಸಿರಿಭೂವಲಯ" ದ ಬಗ್ಗೆ ಪ್ರಸ್ಥಾಪಿಸಿದೆ. ಅವರು ಆಗಾಗಲೇ ೪-೫ ವರ್ಷಗಳಲ್ಲೇ ತರಂಗ ಪತ್ರಿಕೆಯಲ್ಲಿ ಈ ಬಗ್ಗೆ ವಿಶೇಷ ಲೇಖನ ಬರೆದಿದ್ದಾರೆ. ಅವರೊಡನೆ ನಡೆದ ಮಾತು ಕತೆ ವೇದಸುಧೆಯ ಅಭಿಮಾನಿಗಳಿಗಾಗಿ ಹಾಕಿರುವೆ. ಗುರುವಾರ ಶ್ರೀ ಸುಧಾರ್ಥಿಯವರೊಡನೆ ನಡೆಯುವ ಮಾತುಕತೆಯನ್ನೂ ಇಲ್ಲಿ ಅಪ್ ಲೋಡ್ ಮಾಡುವೆ. ಈ ಬಗ್ಗೆ ವೇದಸುಧೆಯ ಬಳಗದ ಇನ್ಯಾರಿಗಾದರೂ ಮಾಹಿತಿ ಇದ್ದರೆ ದಯಮಾಡಿ ತಿಳಿಸಿ. ಬಹಳ ಅಪರೂಪವಾದ ಅದ್ಭುತವಾದ ಈ ಗ್ರಂಥದ ಪೀಠಿಕೆಯ ಪರಿಚಯ ಮಾಡುವುದರಲ್ಲೇ ೨೫-೩೦ ವರ್ಷದ ಸಂಶೋಧನೆ ಕಳೆದಿದೆ, ಅಂತಾರೆ, ಶ್ರೀ ವಟಿಯವರು. ಅವರ ಮಾತುಗಳನ್ನೇ ಕೇಳಿ.













ತರಂಗ ಪತ್ರಿಕೆಯಲ್ಲಿನ ಅವರ ಬರಹವನ್ನು ತೋರಿಸುತ್ತಾ ವಿವರಣೆ ಕೊಡುತ್ತಿರುವ ಡಾ|| ಶ್ರೀವತ್ಸ.ಎಸ್. ವಟಿ, ಜೊತೆಯಲ್ಲಿ ಹೊಯ್ಸಳ ಟೂರಿಸಮ್ ಪತ್ರಿಕೆಯ ವ್ಯವಸ್ಥಾಪಕರಾದ ಶ್ರೀ ದಾಸೇಗೌಡ.




ಅಂತರ್ಜಾದಲ್ಲೂ ಒಂದಷ್ಟಿದೆ. ನೋಡಿ: http://en.wikipedia.org/wiki/Siribhoovalaya

Sunday, September 12, 2010

ಮೂಢ ಉವಾಚ -6

ಅರಿವು
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ

ಕೊಂಬೆ
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು
ಮಾಡಿದೆನಬೇಡ ನಿನ್ನದೆನೆಬೇಡ
ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ

ಯಾರು?
ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು
ಎಲ್ಲರ ಸೇವೆ ಬಯಸುವರು ತಾನಾರಿಗೂ ಆಗರು
ಕಂಡರೂ ಕಾಣದೊಲು ನಟಿಸುವ ಚತುರರಿವರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಯಾರು?
ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು
ಒಳಿತು ಮಾಡದ ಕೆಡಕು ಎಣಿಸಲರಿಯರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ
*************
-ಕವಿನಾಗರಾಜ್.

ನಿವೃತ್ತಿ - ಪ್ರವೃತ್ತಿ
















ವೃತ್ತಿಯ ನಂತರ ನಿವೃತ್ತಿ. ನಿವೃತ್ತಿಯ ನಂತರ ಪ್ರವೃತ್ತಿ! ಅಂತಹ ಪ್ರವೃತ್ತಿಯಿದ್ದಾಗಲೇ ನಿವೃತ್ತಿ ಆರಾಮದಾಯಕ ಮತ್ತು ಸಂತೋಷದಾಯಕವಾದೀತು. ಹಾಗೆಂದು ನಿವೃತ್ತಿಯಾದ ನಂತರವೇ ಪ್ರವೃತ್ತಿಗೆ ಸ್ಥಾನವೆಂದರ್ಥವಲ್ಲ. ಸಾಧಾರಣವಾಗಿ ಸಾಕಷ್ಟು ಮಂದಿ ತಮ್ಮ ವೃತ್ತಿಯೊಡನೆಯೇ ಪ್ರವೃತ್ತಿಯನ್ನೂ ರೂಢಿಸಿಕೊಂಡಿರುತ್ತಾರೆ. ಅವರಿಗಂತೂ ನಿವೃತ್ತಿಯ ಕಾವು ತಾಕುವುದೇ ಇಲ್ಲ. ಆದರೆ ಬಹುಮಂದಿ ದುಡಿಮೆಯ ಜಂಜಾಟದಲ್ಲಿ ಹವ್ಯಾಸಗಳನ್ನು ಬೆಳೆಸಿಕೊಂಡಿರುವುದಿಲ್ಲ. ಹಾಗೆಂದೇ ಸೇವೆಯಿಂದ ಬಿಡುಗಡೆ ಹೊಂದಿ ಮನೆಗೆ ಬಂದಾಗ "ಕಾಲ ಕಳೆಯುವ" ದೊಡ್ಡ ಪ್ರಶ್ನೆ ಎದುರಾಗುತ್ತದೆ. ಅಧಿಕಾರದ ನಷ್ಟ, ಆದಾಯದಲ್ಲಿ ಕುಂಠಿತ ಎರಡೂ ಸಾಕಷ್ಟು ಮನ:ಕ್ಲೇಷಕ್ಕೂ ಎಡೆ ಮಾಡುತ್ತದೆ.


ಹಾಗಾಗಿ ವಿಶ್ರಾಂತ ಜೀವನಕ್ಕಾಗಿ ಮೊದಲೇ ಸಾಕಷ್ಟು ತಯಾರಿ - ಮಾನಸಿಕ ಮತ್ತು ಆರ್ಥಿಕ - ಅತ್ಯವಶ್ಯ. ಇಲ್ಲದಿದ್ದಲ್ಲಿ 'ಕುರುಡು ನಾಯಿ ಸಂತೆಗೆ ಬಂದಂತೆ' ಎಲ್ಲೆಲ್ಲೋ ಗೊತ್ತು ಗುರಿಯಿಲ್ಲದೇ ಬಾಳಬೇಕಾದ ಸ್ಥಿತಿ ಬಂದೀತು. ಜೀವನಪೂರ್ತಿ ನಡೆಸಿದ ವೃತ್ತಿಯ ನೆರಳಿನಲ್ಲಿಯೇ ಬರುವ ಅನೇಕ ಹವ್ಯಾಸಗಳನ್ನು ನಂತರ ಬಳಸಿಕೊಳ್ಳಬಹುದು. ಶಾಲಾ ಮಾಸ್ತರರಾಗಿದ್ದರೆ ನಂತರ ಕೆಲ ಮಕ್ಕಳಿಗೆ ಪಾಠ (ಉಚಿತ!) ಹೇಳಿಕೊಡಬಹುದು;ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೆ, ನಂತರ ಊರಿನ ದೇವಸ್ಥಾನ, ಗುಡಿ-ಗೋಪುರ ನಿರ್ಮಾಣ ಮುಂತಾದ ಕಾರ್ಯದಲ್ಲಿ ತಮ್ಮ ವೃತ್ತಿ ಕೌಶಲ್ಯವನ್ನು ಬಳಸಿಕೊಳ್ಳಬಹುದು; ಹೆಚ್ಚಿನ ಪಾಲು ಬರವಣಿಗೆಯಲ್ಲಿ ತೊಡಗಿದ್ದವರು ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಹೀಗೆ ದಾರಿಗಳು ಹತ್ತು ಹಲವಾರು. ಇಂತಹ ಪ್ರವೃತ್ತಿಗಳಿಂದ ಆದಾಯ ನಿರೀಕ್ಷಿಸಿದಷ್ಟೂ ಆ ಕೆಲಸದಿಂದ ದೊರೆಯುವ ತೃಪ್ತಿಯಿಂದ ನಾವು ವಂಚಿತರಾಗುತ್ತೇವೆ. ಅನಾಯಾಸವಾಗಿ ಬಂದರೆ ಬರಲಿ. ಆದರೆ ಆಸೆ ಬೇಡ. ಆಗಲೇ ಮಾಡಿದ ಅಂತಹ ಕೆಲಸಗಳು ಮನಸ್ಸಿಗೆ ಹೆಚ್ಚು ಹೆಚ್ಚು ಮುದ, ನೆಮ್ಮದಿ ನೀಡಬಲ್ಲವು. ಸಾಂಸಾರಿಕ ಜಂಜಾಟಗಳಿಂದ ಆದಷ್ಟೂ ದೂರವಿರುವುದೇ ಲೇಸು.

ಕೆಳದಿ ಕವಿ ವಂಶದ ಓರ್ವ ಶ್ರೇಷ್ಠ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ[1879-1943]. ಅವರ ಪುತ್ರರಾದ ಕವಿ ಕೃಷ್ಣಮೂರ್ತಿಯವರು ಒದಗಿಸಿದ ಅವರ ತಂದೆ ದಿನವೂ ಮಾಡುತ್ತಿದ್ದ ಪ್ರಾರ್ಥನೆಯ ಸಾರಾಂಶ ಹೀಗಿದೆ:

"ಓ ಪರಮಾತ್ಮನೇ, ನನಗೆ ವಯಸ್ಸಾಗುತ್ತಿದೆ. ಆದ್ದರಿಂದ ಮಾತು ಕಡಿಮೆ ಮಾಡುವಂತೆ ಮಾಡು. ಪ್ರತಿ ವಿಷಯದಲ್ಲೂ ತಲೆ ಹಾಕದಂತೆ ಮಾಡು. ಎಲ್ಲರ ತಪ್ಪನ್ನೂ ತಿದ್ದುವ ಕಾಳಜಿ ನನಗೆ ಬೇಡ. ಇಂತಹ ಬುದ್ಧಿ ನನಗೆ ಕೊಡು. ಇತರರ ನೋವು ನಲಿವುಗಳ ಬಗ್ಗೆ ನನಗೆ ಅನುಕಂಪ ಬರಲಿ. ಏಕೆಂದರೆ ನನ್ನ ನೋವುಗಳೇ ದಿನೇದಿನೇ ಹೆಚ್ಚಾಗಬಹುದು. ಅದನ್ನು ಇತರರೊಡನೆ ಆದಷ್ಟೂ ಕಡಿಮೆ ಹಂಚಿಕೊಳ್ಳುತ್ತೇನೆ. ಅನೇಕ ವೇಳೆ ನನ್ನ ಅಭಿಪ್ರಾಯಗಳು ತಪ್ಪಾಗಬಹುದೆಂಬ ಅರಿವೂ ನನಗಾಗಲಿ. ಹಸನ್ಮುಖಿಯಾಗಿರಲು ಕರುಣಿಸು. ನಾನೇನೂ ಮಹಾತ್ಮನಲ್ಲ. ಆದರೆ ಸಪ್ಪೆಮುಖದಿಂದ ಖಿನ್ನನಾಗಿ ಬಾಳಲಾರೆ. ನನ್ನನ್ನು ವಿಚಾರವಂತನನ್ನಾಗಿ ಮಾಡು. ಆದರೆ ಭಾವನಾಜೀವಿಯಾಗಿಸಬೇಡ. ಇತರರಿಗೆ ಸಹಾಯಕನಾಗಿ ಬಾಳುತ್ತೇನೆ. ಆದರೆ ಇತರರನ್ನು ಒತ್ತಾಯ ಮಾಡುವುದಿಲ್ಲ. ಸ್ವಾವಲಂಬಿಯಾಗಿರುತ್ತೇನೆ. ಇತರರ ಔದಾರ್ಯಕ್ಕೆ ಋಣಿಯಾಗಿರುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣದಿಂದ ವಿವೇಕಿ ಎಂಬ ಭಾವನೆ ನನಗೆ ಉಂಟಾಗದಿರಲಿ. ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆಗಳು ನನಗೆ ಇಷ್ಟವಾಗಿರದಿದ್ದರೆ ಅದನ್ನು ನಾನು ವ್ಯಕ್ತಪಡಿಸದೆ ಮೌನವಾಗಿರುವಂತೆ ಮಾಡು. ಇನ್ನೆಷ್ಟು ದಿನ ಇರುತ್ತೇನೋ ನಾನರಿಯೆ. ಕಡೆಗಾಲದಲ್ಲಿ ನನಗೆ ಸ್ನೇಹಿತರು ಒಬ್ಬಿಬ್ಬರಾದರೂ ಉಳಿದಿರಲಿ ಎಂಬುದು ನನ್ನ ಆಶಯ."

ಇದಕ್ಕಿಂತ ಹೆಚ್ಚೇನು ಬೇಕು? ನಮ್ಮ ಹವ್ಯಾಸಗಳಲ್ಲಿ ನಾವು ತೊಡಗಿ, ಮಕ್ಕಳಿಗೆ ಸಂಪೂರ್ಣ ಜವಾಬ್ದಾರಿ ನೀಡಿ, ಅವರ ವ್ಯವಹಾರಗಳಲ್ಲಿ ಮೂಗು ತೂರಿಸದೇ, ಆಶೀರ್ವಾದಪೂರ್ವಕವಾಗಿ ನಮ್ಮ ನಡೆಗಳು ಇದ್ದಾಗ ತೊಂದರೆಗೆ, ಮನಸ್ತಾಪಕ್ಕೆ ಎಡೆ ಎಲ್ಲಿ? ನಿವೃತ್ತಾನಂತರ ನಮ್ಮ ಸಬಲ ಆರ್ಥಿಕ ಸ್ಥಿತಿಯಿಂದ ಮಕ್ಕಳ ಮೇಲೆ ನಮ್ಮ ಅಭಿಪ್ರಾಯಗಳನ್ನು ಹೇರುವುದರಿಂದಲೇ ಕುಟುಂಬದಲ್ಲಿ ಅಶಾಂತಿ ಬರುವುದು. ನಿವೃತ್ತಾನಂತರ ವೃದ್ಧಾಶ್ರಮಕ್ಕೆ ಸೇರುವ ಪರಿಸ್ಥಿತಿಗೆ ನಮ್ಮ ಮಕ್ಕಳ ಪಾತ್ರದೊಂದಿಗೆ ನಮ್ಮ ಇಂತಹ ಸ್ವಪ್ರತಿಷ್ಠೆ ನಡವಳಿಕೆಗಳೂ ಅಷ್ಠೇ ಕಾರಣವೆಂಬುದೂ ಸತ್ಯಾಂಶವೇ.

ನನ್ನ೦ತೆ ನನ್ನ ಜಗತ್ತು.... ಇದೇ ನನ್ನ ದರ್ಶನ..

ನಾನು ಕದ ತಟ್ಟಿದಲ್ಲೆಲ್ಲಾ ಬಾಗಿಲು ತೆರೆಯಲಾಗಿದೆ
ನಾನು ಅಲೆದಾಡಿದಲ್ಲೆಲ್ಲಾ ಒ೦ದು ದಾರಿ ಸೃಷ್ಟಿಯಾಗಿದೆ
ನಾನು ಪ್ರೀತಿಸಿದಲ್ಲೆಲ್ಲಾ ಜಗತ್ತು ಮಧುರವಾಗಿ ಕ೦ಡಿದೆ
ನಾನು ದ್ವೇಷಿಸಿದಾಗಲೆಲ್ಲಾ ಪ್ರಪ೦ಚ ಕುರೂಪಿಯಾಗಿ ಕ೦ಡಿದೆ
ನಾನು ನಕ್ಕಾಗಲೆಲ್ಲಾ ಸ್ವರ್ಗ ನನ್ನ ಬಳಿ ಬ೦ದಿದೆ
ನಾನು ಕಣ್ಣೀರಿಟ್ಟಾಗಲೆಲ್ಲ ಒ೦ದು ಸಾ೦ತ್ವನದ ಸ್ಪರ್ಶ ನನ್ನನ್ನು ಹಗುರಾಗಿಸಿದೆ
ನಾನು ಗೊಣಗಿದಾಗ ಈ ಜಗತ್ತು ಕರ್ಕಶವಾಗಿ ಕ೦ಡಿದೆ
ನಾನು ಪೂಜಿಸಿದಾಗ ದೇವರು ನನ್ನೊಳಗೇ ನುಸುಳಿದ್ದಾನೆ..
ನಾನು ಮೌನಕ್ಕೆ ಮೊರೆಹೋದಾಗಲೆಲ್ಲ ಪ್ರಕೃತಿಯ ನಾದ ಕೇಳಿದ್ದೇನೆ..
ನನ್ನ೦ತೆ ನನ್ನ ಜಗತ್ತು.... ಇದೇ ನನ್ನ ದರ್ಶನ..

- ಡಾ|| ಜ್ಞಾನದೇವ್ ಮೊಳಕಾಲ್ಮೂರು

Thursday, September 9, 2010

ಯೋಚಿಸಲೊ೦ದಿಷ್ಟು... ೯

೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು!
೨.ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು ಸ೦ಪೂರ್ಣವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು.ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳುತ್ತಿರಲೇಬೇಕು.

೩. ವಿವೇಚನೆಯಿಲ್ಲದೆ ಯಾರನ್ನಾದರೂ ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.

೪. ಕುಟು೦ಬ ಹಾಗೂ ಅತ್ಮೀಯ/ಪ್ರೀತಿ ಪಾತ್ರರಾದವರೊ೦ದಿಗೆ ದಿನವೊ೦ದರ ಸ್ವಲ್ಪ ಹೊತ್ತನ್ನಾದರೂ ಕಳೆಯುವುದರಿ೦ದ, ಎಷ್ಟೋ ಮಾನಸಿಕ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಒದ್ದೋಡಿಸಬಹುದು!

೫.  ಎಲ್ಲರೂ ತಪ್ಪನ್ನು ಮಾಡುತ್ತಾರೆ. ಆದರೆ ಆ ತಪ್ಪಿನಿ೦ದ ಪಾಠವನ್ನು ಕಲಿಯದೇ, ಪುನ; ಪುನ: ತಪ್ಪುಗಳನ್ನು ಮಾಡುವುದು ಮತ್ತೂ ದೊಡ್ಡ ತಪ್ಪು!

೬.ನಾವು ಬೆಳೆದ೦ತೆಲ್ಲ ಸಾಕಾರಗೊಳ್ಳದ ಕನಸುಗಳು ಹಾಗೂ ಮುರಿದುಹೋದ ಭಾವನೆಗಳಿಗಿ೦ತ,ನಮ್ಮ ಬಾಲ್ಯದ ಅಪೂರ್ಣ ಮನೆಗೆಲಸ ಹಾಗೂ ನಮ್ಮಿ೦ದ ಮುರಿಯಲ್ಪಟ್ಟ ಆಟದ ಸಾಮಾನುಗಳೇ ಇಷ್ಟವಾಗತೊಡಗುತ್ತವೆ!

೭. ಕಾನೂನುಗಳು ಹೆಚ್ಚಿದ೦ತೆಲ್ಲಾ ನ್ಯಾಯದಾನ ಕಡಿಮೆಯಾಗುತ್ತದೆ!

೮. ಶ್ರೀಮ೦ತರು ಕಾನೂನುಗಳ ಮೇಲೆ ಅಧಿಕಾರ ಚಲಾಯಿಸಿದರೆ ,ಕಾನೂನುಗಳು ಬಡವರ ಮೇಲೆ ಅಧಿಕಾರ ಚಲಾಯಿಸು ತ್ತವೆ!

೯. ಕಾನೂನು ಎ೦ಬುದೊ೦ದು ಜೇಡರ ಬಲೆಯಿದ್ದ೦ತೆ.ದು೦ಬಿ ಅದನ್ನು ಹರಿದುಕೊ೦ಡು ಹೋದರೆ,ಸೊಳ್ಳೆ ಸಿಕ್ಕಿ ಹಾಕಿ ಕೊಳ್ಳುತ್ತದೆ!

೧೦.ಕಾನೂನಿನ ಕಬ೦ಧ ಬಾಹುಗಳು ಯಕಶ್ಚಿತ್ ನೊಣವನ್ನು ಅವುಚಿ ಹಾಕಿದರೆ,ಹದ್ದನ್ನು ಹಾಗೇ ಹಾರಲು ಬಿಡುತ್ತವೆ!

೧೧.ಒಳ್ಳೆಯ ಕಾಲ ಹಾಗೂ ಕೆಟ್ಟ ಕಾಲ ಎ೦ಬುದಿಲ್ಲ.ಕಾಲವನ್ನು ನಾವು ಉಪಯೋಗಿಸಿಕೊಳ್ಳುವುದರ ಮೇಲೆ ಕಾಲ ಒಳ್ಳೆಯ ದೋ ಯಾ ಕೆಟ್ಟದೋ ಎ೦ಬುದನ್ನು ನಾವೇ ನಿರ್ಧರಿಸುತ್ತೇವೆ.

೧೨.ಸಾಧನೆಗೆ ಅ೦ತ್ಯವಿಲ್ಲ. ಅದು ಒಬ್ಬರಿ೦ದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತದೆ ! ಅದು ಸದಾ ಚಲನಶೀಲವಾದದ್ದು.

೧೩. ಜೀವನವೆ೦ಬುದು ಸದಾ ಒ೦ದು ಜಾಗರಣೆ ಇದ್ದ೦ತೆ!

೧೪.ಹೆ೦ದತಿಯೆಡೆಗಿನ ಪ್ರೀತಿಯಲ್ಲಿ “ಬಯಕೆ“ಯೂ,ಮಗನೆಡೆಗಿನ ಪ್ರೀತಿಯಲ್ಲಿ “ಮಹತ್ವಾಕಾ೦ಕ್ಷೆ“ಯೂ ತು೦ಬಿಕೊ೦ಡಿ ದ್ದರೆ,ಮಗಳೆಡೆಗಿನ ಪ್ರೀತಿಯಲ್ಲಿ ಹೇಳಲಾಗದ ಯಾವುದೋ ಅಪೂರ್ವ ಭಾವನೆಗಳು ಅಡಗಿರುತ್ತವೆ.

೧೫.ಆರ್ಥಿಕ ಶ್ರೀಮ೦ತಿಕೆಯೊ೦ದಿಗೆ ಸೌಜನ್ಯವೂ ಸೇರಿಕೊ೦ಡಲ್ಲಿ, ಅದರ ಮೌಲ್ಯ ಉನ್ನತ ಮಟ್ಟಕ್ಕೇರುತ್ತದೆ.

ಎಲ್ಲಾ ಆತ್ಮ ಸಂತೋಷ ಕ್ಕಾಗಿ

ವೇದಸುಧೆಯ ಅಭಿಮಾನಿಳೇ, ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.ಗೌರಿ-ಗಣೇಶನ ವಿಚಾರ ವೇದಗಳಲ್ಲಿದೆಯೇ? ನೀವು ಆಚರಿಸುತ್ತೀರಾ? ನಿಮ್ಮ ಆಚರಣೆಗೆ ಅರ್ಥ ಇದೆಯೇ? ಅಂತಾ ನನ್ನ ಸ್ನೇಹಿತರೊಬ್ಬರು ನನ್ನೊಡನೆ ನಿನ್ನೆ ಚರ್ಚೆ ಆರಂಭಿಸಿದರು.ವೇದಸುಧೆ ಅನ್ನೋ ಹೆಸರಲ್ಲಿ ಬ್ಲಾಗ್ ಶುರು ಮಾಡಿದಮೇಲೆ ಕೆಲವು ಸಲ ನನಗೆ ಮುಜುಗರವೂ ಆಗಿದೆ. ಖುಷಿಯೂ ಆಗಿದೆ.ನನ್ನ ಸ್ನೇಹಿತ ಒಪ್ಪಲಿ ಬಿಡಲಿ ಅವನಿಗೆ ನಾನು ಏನು ಹೇಳಿದೆನೋ ಅದನ್ನು ಮತ್ತು ಇವತ್ತು ಹಬ್ಬದ ತಯಾರಿಯಲ್ಲಿಯೇ ಉಂಟಾಗಿರುವ ಸಂತೋಷವನ್ನೂ ಇಲ್ಲಿ ನಿಮಗೂ ತಿಳಿಸಿ ಬಿಡ್ತೀನಿ.
ನಮ್ಮ ಎಲ್ಲಾ ಚಟುವಟಿಕೆಗಳ ಒಟ್ಟು ಉದ್ಧೇಶವೇನು? ಒಂದು ಸಮಾಧಾನಕರ ಜೀವನ ಸಾಗಿಸುವುದು, ಅಷ್ಟೇ ತಾನೆ? ದಿನವೂ ಆಫೀಸು,ವ್ಯಾಪಾರ-ವ್ಯವಹಾರ ಅಂತಾ ಕಾಲ ಹಾಕೋ ನಾವು ಒಟ್ಟಾರೆ ನಮ್ಮ ಹೊಟ್ಟೆ-ಬಟ್ಟೆಗೆ ಒಂದಿಷ್ಟು ದುಡಿಮೆ ಮಾಡೋದರಲ್ಲಿ ಇಡೀ ದಿನವನ್ನು ಕಳೆದು ಬಿಡ್ತೀವಿ. ಸರ್ಕಾರೀ ನೌಕರರಂತೂ ತಮ್ಮ ೩೦-೩೫ ವರ್ಷಗಳ ಸರ್ವೀಸ್ ನಲ್ಲಿ ಸಾಲಮಾಡಿ ಒಂದು ೩೦*೪೦ ಅಳತೆಯ ಮನೆಕಟ್ಟಿ ಜೀವನವೆಲ್ಲಾ ಸಾಲ ತೀರಿಸಿ ಒಂದು ದಿನ ಗೊಟಕ್ ಅಂದ್ರೆ ಅಲ್ಲಿಗೆ ಅವರ ಜೀವನದ ಕಥೆ ಮುಗಿದಂತೆಯೇ. ಇಂತಾ ಗಡಿಬಿಡಿ ಜೀವನದಲ್ಲಿ ಮನುಷ್ಯನಿಗೆ ಒಂದಿಷ್ಟು ಬದಲಾವಣೆ ಬೇಡವೇ? ಅದಕ್ಕಾಗಿ ಈ ಹಬ್ಬ-ಹರಿದಿನ. ಒಂದು ವೇಳೆ ಗಣಪತಿ ವ್ರತ ಮಾಡದೆ ಹೋದ್ರೆ ಆಕಾಶ ಕಳಚಿ ತಲೆ ಮೇಲೆ ಬೀಳುವುದಿಲ್ಲ. ಆದರೆ ಹಬ್ಬದ ತಯಾರಿಯ ಆ ಸಡಗರ ಇದೆಯಲ್ಲಾ! ಅದನ್ನು ಕಳೆದುಕೊಂಡು ಬಿಡ್ತೀವಲ್ರೀ. ಎಂ.ಬಿ.ಏ ಮಾಡ್ತಿರೋ ನನ್ನ ಮಗಂಗೆ ನಿತ್ಯವೂ ದೇವರಿಗೊಂದು ನಮಸ್ಕಾರ ಹಾಕಬೇಕೆಂಬ ಮನಸ್ಸಿಲ್ಲ. ಆದರೆ ಇವತ್ತು ನನ್ನೊಡನೆ ಮಾರ್ಕೆಟ್ಟಿಗೆ ಬಂದು ಹಣ್ಣು-ಹೂವು, ಬಾಳೆಕಂದು-ಮಾವಿನಸೊಪ್ಪು, ಎಲ್ಲಾ ಖರೀಧಿಸುವಾಗ ಎಂತಾ ಸಡಗರ ಇತ್ತು, ಗೊತ್ತಾ? ನಾನು ಸಾಮಾನ್ಯವಾಗಿ ಒಂದು ಚಿಕ್ಕ ಗಣಪತಿ ವಿಗ್ರಹ ತರ್ತಾ ಇದ್ದೆ. ಈ ವರ್ಷ ಅವನ ದರ್ಬಾರಲ್ಲಿ ಸ್ವಲ್ಪ ದೊಡ್ಡ ಗಣಪನೇ ನಮ್ಮ ಮನೆಗೆ ಬಂದು ಕುಳಿತಿದ್ದಾನೆ. ಇನ್ನು ಗಣಪತಿ ಮಂಟಪ ಕಟ್ಟೋ ಸಡಗರ. ಇನ್ನು ನನ್ನ ಪತ್ನಿಗಾದರೋ ಅವಳ ತಂಗಿ ಜೊತೆ ಸೇರಿಕೊಂಡು ಮೋದಕ ಮಾಡುವ, ಮೊರದ ಬಾಗಿನಕ್ಕೆ ಅಣಿ ಮಾಡಿಕೊಳ್ಳುವ ಸಡಗರ. ಮನೆಯಲ್ಲಿ ಎಲ್ಲಾ ಆಕ್ಟ್ವೀವ್ ಆಗಿಬಿಟ್ಟಿದ್ದಾರೆ. ಬಹುಷ: ಇವತ್ತು ರಾತ್ರಿ, ನಾಳೆ ರಾತ್ರಿ ಮಲಗಿಕೊಳ್ಳುತ್ತಾರೋ ಇಲ್ವೋ ಗೊತ್ತಿಲ್ಲ. ಅಂದಹಾಗೆ ಶನಿವಾರ ಮಾಡೋ ಹಬ್ಬಕ್ಕೆ ಇವತ್ತೇ ಹೂವು- ಹಣ್ಣು ಇತ್ಯಾದಿ ತಂದಾಯ್ತು. ಯಾಕೆ ಗೊತ್ತಾ? ನಾಳೆ ಹಾಸನದ ಮಾರ್ಕೆಟ್ ನಲ್ಲಿ ಒಂದು ಹುಳುವೂ ತೆವಳಲು ಸಾಧ್ಯವಿರುವುದಿಲ್ಲ. ಅಷ್ಟು ರಷ್. ಏನ್ರೀ ಜನಕ್ಕೆ ಹುಚ್ಚು ಅಂತೀರಾ? ನಾನು ಹೇಳೋದು ಹುಚ್ಚಲ್ಲ, ಬದಲಿಗೆ ಸಡಗರ. ಅದರಲ್ಲೇ ಸಂತೋಷ. ಅದರಲ್ಲೇ ಆನಂದ. ಆ ಅನಂದವನ್ನು ಯಾಕೆ ಕಳೆದು ಕೊಳ್ಳಲಿ? ವೇದದಲ್ಲಿ ಇರಲಿ-ಬಿಡಲಿ ಸಂತೋಷಕ್ಕಾಗಿ, ಸಡಗರಕ್ಕಾಗಿ ಗಣೇಶನ ಹಬ್ಬ ಆಚರಿಸುತ್ತೀನಿ. ಅಂದಹಾಗೆ ಹಬ್ಬ ಆಚರಿಸುವುದರಿಂದ ಗಣೇಶ ಸುಪ್ರೀತನಾಗಿ ನಮಗೆ ಬೇಕಾದ ವರ ಕೊಡ್ತಾನೇ ಅಂತಾನೂ ಅಲ್ಲ, ಆಚರಿಸದೆ ಹೋದರೆ ಶಾಪಕ್ಕೆ ಗುರಿಯಾಗುತ್ತೀ ನೆಂದೂ ಅಲ್ಲ. ಎಲ್ಲಾ ಆತ್ಮ ಸಂತೋಷ ಕ್ಕಾಗಿ.

Wednesday, September 8, 2010

ಹಾಡು- ಶೃಂಗಪುರಾಧೀಶ್ವರೀ ಶಾರದೆ

ಹಾಡು- ಶೃಂಗಪುರಾಧೀಶ್ವರೀ ಶಾರದೆ ಗಾಯಕಿ- ಶ್ರೀಮತಿ ಲಲಿತಾರಮೇಶ್

Monday, September 6, 2010

ನಮ್ಮ ಋಷಿಮುನಿಗಳು ಮತ್ತು ಆಧುನಿಕ ವಿಜ್ಞಾನಿಗಳು

ನಮ್ಮ ಋಷಿಮುನಿಗಳ ತಪಸ್ಸಿನ ಫಲ ಮತ್ತು ಆಧುನಿಕ ವಿಜ್ಞಾನಿಗಳ ಸಂಶೋಧನೆ ಪರಿಣಾಮ- ಒಂದು ಚಿಂತನೆ
ಅದೊಂದು ಶಿಸ್ತುಬದ್ಧ ಕಾರ್ಯಕ್ರಮ.ಹಾಸನದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಶ್ರೀ ಧನ್ವಂತರಿ ಮೂರ್ತಿ ಎದಿರು ನಿಂತು ಸಭೆಯನ್ನು ಒಮ್ಮೆ ವೀಕ್ಷಿಸಿದಾಗ ಕಣ್ ತುಂಬಿಬಂತು. ಕಾಲೇಜಿನ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು,ವಿದ್ಯಾರ್ಥಿಗಳು, ಆಸ್ಪತ್ರೆಯ ವೈದ್ಯರು, ಸಿಬ್ಬಂಧಿ, ಅಷ್ಟೇ ಅಲ್ಲ ಅಲ್ಲಿನ ರೋಗಿಗಳು ಮತ್ತು ಅವರ ಸಹಾಯಕರು, ಎಲ್ಲರೂ ಸದ್ಭಾವನೆಯನ್ನು ಹಂಚಿಕೊಳ್ಳಲು ಸೇರಿದ್ದ ಅಪೂರ್ವ ಸಮಾರಂಭ. ಎಲ್ಲವೂ ಶಿಸ್ತು ಬದ್ಧ. ಮುಖ್ಯ ಅತಿಥಿಯಾಗಿ ಆಹ್ವಾನಿತನಾಗಿದ್ದ ನನಗೆ ಹದಿನೈದು ನಿಮಿಷ ಮಾತನಾಡಲು ಅವಕಾಶ. ಮೊದಲು ಸುಶ್ರಾವ್ಯ ಪ್ರಾರ್ಥನೆ ಮತ್ತು ನನ್ನ ಭಾಷಣದ ನಂತರವೂ ಸಮೂಹ ಗೀತೆ. ಅಧ್ಯಕ್ಷರ ಭಾಷಣ. ನಂತರ ಪರಸ್ಪರ ಸದ್ಭಾವನೆಯ ಸಂಕೇತವಾಗಿ ರಕ್ಷಾ ಬಂಧನ.ಹೌದು, ಅಲ್ಲಿನ ವಾತಾವರಣದಿಂದ ರೋಮಾಂಚನವಾಗಿತ್ತು. ಆಗ ಭಗವತಿಯ ಅನುಗ್ರಹದಿಂದ ಹೊರಹೊಮ್ಮಿದ ಮಾತುಗಳು ವೇದಸುಧೆಯ ಅಭಿಮಾನಿಗಳ ಕಿವಿಗೂ ಮುಟ್ಟಲೆಂದು ಇಲ್ಲಿ ಪೇರಿಸಲಾಗಿದೆ.


"ಹೊಸಯುಕ್ತಿ-ಹಳೆ ತತ್ವದೊಡೆಗೂಡೆ ಸ್ವರ್ಗ" ಎಂಬ ಡಿವಿಜಿಯವರ ಮಾತನ್ನು ಆಚಾರದಲ್ಲಿ ತಂದದ್ದೇ ಆದರೆ ಸ್ವರ್ಗ ಇಲ್ಲೇ ನಿರ್ಮಾಣವಾಗಬಹುದಲ್ಲವೇ?
-ಹರಿಹರಪುರ ಶ್ರೀಧರ್

ಸಪ್ತಪದಿ


ಹಿಂದು ವಿವಾಹ ಪದ್ದತಿಯಲ್ಲಿ "ಸಪ್ತಪದಿ" ಯ ಹೆಸರು ಬಹಳ ಮಹತ್ವ ಪಡೆದಿದೆ. ಈ ಬಗ್ಗೆ ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸ ಇಲ್ಲಿದೆ.

Saturday, September 4, 2010

ಲಿವಿಂಗ್ ಇನ್ ದಿ ಹೆವನ್ !


ಲಿವಿಂಗ್ ಇನ್ ದಿ ಹೆವನ್ !

ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್ [ ಪಾರ್ಟ್-೧ ]

ಬುದ್ಧ ಧ್ಯಾನಾಸಕ್ತನಾಗಿದ್ದ ವೇಳೆ ಅವನಿಗೂ ಕೆಲವು ಉಪದ್ರವಗಳಿದ್ದವು ! ಏನಪ್ಪಾ ಇದುವರೆಗೂ ಕೇಳದ ಹೊಸ ಕಥೆ ಅಂತ ಹುಬ್ಬೇರಿಸಬೇಡಿ. ಬುದ್ಧನಿಗೆ ತೊಂದರೆ ಕೊಟ್ಟ ಉಪದ್ರವಿಗಳು ಬೇರಾರೂ ಅಲ್ಲ-ಬದಲಾಗಿ ಅವನೊಳಗಿನ ಬತ್ತಿರದ ಆಸೆಗಳು! ಧ್ಯಾನದಲ್ಲಿ ಆತನ ಹೆಂಡತಿ ಮತ್ತು ಮಗು ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಹೆಂಡತಿ ಕೇಳುತ್ತಾಳೆ " ಯಾಕೆ ಸ್ವಾಮೀ ನಮ್ಮನ್ನೆಲ್ಲ ಮರೆತು ಇಲ್ಲಿಗೆ ಬಂದಿರಿ? ರೂಪವತಿಯಾದ ನನ್ನನ್ನೂ ಇಗೋ ನೋಡಿ ಇಷ್ಟು ಸುಂದರವಾದ ಮಗುವನ್ನೂ ತೊರೆದು ಇಲ್ಲಿಗೆ ಬಂದಿರಲ್ಲ ಇದು ನ್ಯಾಯವೇ ? " ಬುದ್ಧ ತನ್ನ ಮನವನ್ನು ಸ್ಥಿಮಿತಕ್ಕೆ ತಂದುಕೊಂಡ, ಮತ್ತು ಮನಸ್ಸಿಗೆ ಹೇಳಿದ " ಎಲೈ ಮನವೇ ನನಗೆ ಆ ಭಾವನೆಗಳು ಬೇಡ, ಆ ಆಸೆಗಳನ್ನು ಕತ್ತರಿಸಿ ತುಂಡು ತುಂಡು ಮಾಡು ಮತ್ತು ಎಲ್ಲಾದರೂ ಬಿಸಾಡಿಬಿಡು. ಆತ ಮನಸ್ಸನ್ನು ಹಾಗೆ ಹೇಳೀ ಹೇಳೀ ಹೇಳೀ ಗೆದ್ದ. ಯಾವಾಗ ಆತ ಸಂಪೂರ್ಣ ಗೆದ್ದನೋ ಆತನೇ ಘೋಷಿಸಿದ " ಆಸೆಯೇ ದುಃಖಕ್ಕೆ ಮೂಲ" !

ಏಸುಕ್ರಿಸ್ತ ಗುಡ್ಡದ ಮೇಲೆ ಧ್ಯಾನಾಸಕ್ತನಾಗಿದ್ದವೇಳೆ ಬಹಳ ಜನ ಅನುಯಾಯಿಗಳು ಬಂದು "ನೀವು ಇಲ್ಲಿ ಏನುಮಾಡುತ್ತೀರಿ ಸ್ವಾಮೀ, ಬೇಕಾದ ಸಾಮಗ್ರಿಗಳಿರುವ ಖಜಾನೆಯೇ ಊರಲ್ಲಿರುವಾಗ ಈ ಗುಡ್ಡದಲ್ಲಿ ಅದೇನು ಕಂಡಿರಿ ? " ಏಸುವು ಮಾತನಾಡಿರಲಿಲ್ಲ, ಮೌನದಲ್ಲಿ ಹಾಗೇ ಮುನ್ನಡೆದಿದ್ದ. ಆತ ಧ್ಯಾನದಲ್ಲಿ ಪಡೆದದ್ದನ್ನೇ ಶಾಂತಿಯೆಂದು ಬೋಧಿಸಿದ. ಉತ್ತರ ಅಮೇರಿಕಾದ ಮರುಭೂಮಿಗಳಲ್ಲಿ ವಾಸಿಸಿದ್ದ ಸಂತ ಅಂತೋನಿ ಬಹಳ ದಾರ್ಶನಿಕನಾಗಿದ್ದ. ಧ್ಯಾನಾಸಕ್ತನಾಗಿ ತಿರುಗಾಡುವಾಗ ಆತನಿಗೆ ಆತನ ಪೂರ್ವಾಶ್ರಮದ ರೋಮನ್ ಚಕ್ರಾಧಿಪತ್ಯದ ರಾಜಮಹಲುಗಳೂ, ವೈಭವದ ಸಿಂಹಾಸನಗಳೂ, ರಾಜೋಪಚಾರ ಸೇವೆಗಳೂ ನೆನೆಪಿಗೆ ಬಂದವು, ಅವು ಹಾಗೇ ಆತನ ಎದುರಲ್ಲಿ ಮೂರ್ತರೂಪ ಪಡೆದು ಆತನನ್ನು ಸಾಯುವ ಸ್ಥಿತಿಗೆ ತಳ್ಳಿದಾಗ ಆತನೆಂದುಕೊಂಡ ಅವುಗಳನ್ನೆಲ್ಲ ದೂರ ಅಟ್ಟಿದರೇನೆ ತನಗೆ ಬೇಕಾದ್ದು ಸಿಗುತ್ತದೆ, ಅಂತೇಯೇ ಆತ ಅವುಗಳನ್ನೆಲ್ಲ ಮನಸ್ಸಲ್ಲೇ ಸೇರಿಸಿ ನಿವಾಳಿಸಿ ಎಸೆದ!

ಪ್ರಾಚೀನ ಹಿಂದೂಸ್ಥಾನದ ಅನೇಕ ಋಷಿಮುನಿಗಳು ಯಾಕೆ ಎಲ್ಲವನ್ನೂ ಬಿಟ್ಟು ತಪಸ್ಸನ್ನಾಚರಿಸಿದರು ? ಮಾಡಲಿಕ್ಕೆ ಬೇರೆ ಕೆಲಸವಿಲ್ಲವೆಂದೇ? ಅಥವಾ ಸನ್ಯಾಸಿಗಳಾದರೆ ಹಾಯಾಗಿರಬಹುದೆಂದೇ ? ಅಲ್ಲವಲ್ಲ ! ವಾಸ್ತವದಲ್ಲಿ ಸನ್ಯಾಸಧರ್ಮ ಅತಿ ಕಠಿಣ! ಅವರು ಸರ್ವಸಂಗ ಪರಿತ್ಯಾಗಿಗಳಾಗಿ ಎಲ್ಲಾ ಬಯಕೆಗಳನ್ನೂ ದಮನಮಾಡಿಕೊಂಡು ತನ್ಮೂಲಕ ನಿರಾಕಾರ ಮೂಲಸ್ವರೂಪ ಪರಮಾತ್ಮನ ಸಾಯುಜ್ಯವನ್ನು ಸಾಕಾರ ರೂಪದಲ್ಲಿ ಕಾಣುತ್ತಾರೆ! ನಮಗೆ ಇರುವ ಪಂಚೇಂದ್ರಿಯಗಳ ಮೂಲ ಹುಡುಕಿ ನೋಡಿದರೆ ಅದೆಲ್ಲಾ ಒಂದೇ ಮೂಲರೂಪಕ್ಕೆ ಸೇರಿದ್ದು! ಉದಾಹರಣೆಗೆ ಸೂರ್ಯನ ಬೆಳಕನ್ನು ಬೇರೆ ಬೇರೆ ರೀತಿಯ ಸ್ಪಟಿಕದ ಅಥವಾ ರಾಹುಗನ್ನಡಿಯ ಮೂಲಕ ಹಾಯಿಸಿದಾಗ ನಮಗೆ ಬೇರೆ ಬೇರೆ ಬಣ್ಣಗಳ ಮತ್ತು ಆಕಾರಗಳ ದರ್ಶನವಾಗುತ್ತದೆ. ಅವುಗಳಲ್ಲಿ ಕಾಮನಬಿಲ್ಲೂ ಒಂದು ಅಲ್ಲವೇ ? ಕಾಮನಬಿಲ್ಲಿನಲ್ಲಿ ಏಳು ಬೇರೆ ಬೇರೆ ಬಣ್ಣಗಳನ್ನು ನಾವು ಕಾಣುತ್ತೇವೆ. ಆದರೆ ಅವೆಲ್ಲಾ ಬಣ್ಣಗಳೂ ಸೇರಿದಾಗ ಬಿಳಿಯಬಣ್ಣವೇ ಆಗುತ್ತದೆ! ಕೆಲವು ಬೇರೆ ಬೇರೆ ದಪ್ಪದ ಗಾಜಿನ ಜಾಡಿಗಳಲ್ಲಿ ಒಂದೇ ವಸ್ತುವನ್ನು ಇಡುತ್ತ ಬನ್ನಿ: ಅದು ಬೇರೆ ಬೇರೆ ಗಾತ್ರಗಳಲ್ಲಿ ಗೋಚರಿಸುತ್ತದೆ. ನೀರಿನ ತೊಟ್ಟಿಯೊಂದರಲ್ಲಿ ನಾಣ್ಯವನ್ನು ಹಾಕಿ ತಳದಲ್ಲಿ ಕುಳಿತ ಅದನ್ನು ನೇರವಾಗಿ ತಾಕುವಂತೆ ಒಂದು ಕೋಲನ್ನು ಇಳಿಸಿ, ನೀವು ಮೇಲಿಂದ ನೋಡಿದ ಜಾಗಕ್ಕೆ ಕೋಲು ಇಳಿದಾಗ ನಿಜವಾಗಿಯೂ ನಾಣ್ಯ ಅಲ್ಲಿರುವುದಿಲ್ಲ ಬದಲಿಗೆ ಅದು ಅಲ್ಲಿಗೆ ಹತ್ತಿರದಲ್ಲೇ ಆಚೀಚೆ ಇರುತ್ತದೆ.

ಹೀಗೇ ನಮ್ಮೊಳಗೆ ಕುಳಿತ ಯಾವುದೋ ಒಂದು ’ಏನೋ’ ಕಣ್ಣಿನಿಂದ ಸುಂದರವಾದ ದೃಶ್ಯಗಳನ್ನು ನೋಡಬಯಸುತ್ತದೆ, ಕಿವಿಯಿಂದ ಇಂಪಾದ ಸಂಗೀತವನ್ನು ಕೇಳಬಯಸುತ್ತದೆ, ನಾಲಿಗೆಯಿಂದ ರುಚಿರುಚಿಯಾದ ತಿನಿಸುಗಳನ್ನು ತಿನ್ನಬಯಸುತ್ತದೆ, ಮೂಗಿನಿಂದ ಆಹ್ಲಾದಕರ ಸುಗಂಧವನ್ನು ಹೀರಬಯಸುತ್ತದೆ, ಚರ್ಮದಿಂದ ಮೆತ್ತನೆಯ ವಸ್ತುವನ್ನು ಸ್ಪರ್ಶಿಸಲು ಹಾತೊರೆಯುತ್ತದೆ. ಇವಿಷ್ಟನ್ನು ಬಿಟ್ಟು ಈ ಲೋಕದಲ್ಲಿ ಬೇರೇ ಏನೂ ಇಲ್ಲವೇ ಇಲ್ಲ. ಮಾನವನ ಮಿಕ್ಕುಳಿದ ಎಲ್ಲಾ ಆಸೆಗಳೂ ಇವುಗಳ ಸುತ್ತ ಬೆಸೆದ ಹಲವು ಮಜಲುಗಳಲ್ಲಿ ಹೂಡಲ್ಪಟ್ಟಿವೆ. ಕಾಣಬೇಕಾದ ಸೌಂದರ್ಯಕ್ಕೆ ಯಾರೋ ಅಡ್ಡಿಪಡಿಸಿದರೆ, ಮೂಗಿಗೆ ಕೆಟ್ಟ ವಾಸನೆ ಬಡಿದರೆ,ಚರ್ಮಕ್ಕೆ ಚುಚ್ಚುವ ಅಥವಾ ಗಟ್ಟಿಯ ವಸ್ತು ತಾಗಿದರೆ, ಕಿವಿಗೆ ಕರ್ಕಶಧ್ವನಿ ಕೇಳಿಸಿದರೆ, ನಾಲಿಗೆಗೆ ರುಚಿಯಿರದ ಪದಾರ್ಥಗಳು ತಾಗಿದರೆ ನಾವು ಕೋಪಗೊಳ್ಳುತ್ತೇವೆ! ಕೋಪ ಎಂಬುದು ನಮ್ಮೊಳಗಿನ ಆರುವೈರಿಗಳಲ್ಲಿ ಒಂದು ಎಂದು ಕೇಳಿದ್ದೇವಷ್ಟೇ? ಈ ಆರುವೈರಿಗಳೂ ಐದು ದಾರಿಗಳಿಂದ ಒಂದೆಡೆ ಸೇರಿ ನಮ್ಮ ಮೂಲರೂಪದ ಆತ್ಮನನ್ನು ನಮ್ಮೊಳಗಿಂದ ಹೊರಗೆಳೆದು ಆತನಿಗೆ ಬೇಡದ್ದನ್ನು ಅಂಟಿಸಿ ಆತನ ತೇಜೋವಧೆ ಮಾಡುತ್ತವೆ. ಯಾವಾಗ ಆ ಆತ್ಮ ಇವುಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೋ ಆವಾಗ ಇವುಗಳು ಆಡಿದ್ದೇ ಆಟ! ತನ್ನ ಮೂಲಸ್ವರೂಪವನ್ನು ಮರೆತ ಆತ್ಮ ತನ್ನ ನೈಜತೆಯನ್ನು ತೊರೆದು ಲೌಕಿಕಾಧೀನವಾಗಿ ಇಲ್ಲದ ಉಪದ್ವ್ಯಾಪಕ್ಕೆ ಈಡಾಗುತ್ತಾನೆ.[ಆತ್ಮ ಪರಮಾತ್ಮನ ರೂಪ ಎಂಬ ಕಾರಣಕ್ಕೆ ಪುಲ್ಲಿಂಗ ಸಾಂಕೇತಿಕವಾಗಿ ಬಳಸಿದ್ದೇನೆ]

ಹಾಗಾದರೆ ನಾವು ವಿಜ್ಞಾನವನ್ನು ನೋಡೋಣ. ಇಲ್ಲಿ ಕಿವಿ-ಮೂಗು-ಬಾಯಿ[ಗಂಟಲು] ಒಂದೇ ಕನೆಕ್ಟಿಂಗ್ ಪಾಯಿಂಟ್ ಸೇರುತ್ತವೆ. ದೆರ್ ಈಸ್ ಇಂಟರ್ ಕನೆಕ್ಟಿವಿಟಿ. ಇನ್ನುಳಿದದ್ದು ಎರಡೇ ಒಂದು ಕಣ್ಣು ಇನ್ನೊಂದು ಚರ್ಮ. ನಾನು ಅನೇಕಾವರ್ತಿ ಕಣ್ಣಿಗೆ ಕಾಯಿಲೆಬಂದಾಗ ಉಪಯೋಗಿಸಿದ ಆಲೋಪಥಿ ಔಷಧ ದ್ರವ್ಯ ಪರೋಕ್ಷ ಬಾಯಿಗೆ ಕಹಿ ಕಹಿಯಾಗಿ ಬಂದಿದ್ದನ್ನು ಹಲವಾರು ಸಲ ನೆನೆಸಿಕೊಂಡಿದ್ದೇನೆ! ಅಂದಮೇಲೆ ಕಣ್ಣಿಗೂ ಆ ಕನೆಕ್ಟಿಂಗ್ ಪಾಯಿಂಟ್ ಗೂ ಏನೋ ಅವಿನಾಭಾವ ಸಂಪರ್ಕ ಸಂಬಂಧ ಇರಲೇಬೇಕಲ್ಲವೇ? ಚರ್ಮ ನಮ್ಮನ್ನು ಎಲ್ಲೆಲ್ಲೂ ಆವರಿಸಿಕೊಂಡಿದೆ! ಹಾಗಾದ್ರೆ ಈ ಎಲ್ಲವೂ ಒಂದೇ ಮೂಲ ಕನೆಕ್ಟಿಂಗ್ ಪಾಯಿಂಟ್ ಸೇರುತ್ತವೆ. ಆಗಲೇ ನಮಗೆ ಲೌಕಿಕದ ಎಲ್ಲದರ ಅನುಭೂತಿ ಸಿಗುವುದು. ಒಳಗಿರುವ ಒಂದೇ ’ಏನೋ’ ಅದು/ಅವನು ಹೊರಗಡೆಗೆ ತನ್ನ ಕಿರಣಗಳನ್ನು ಕಣ್ಣು, ಮೂಗು, ಬಾಯಿ, ಕಿವಿ, ಚರ್ಮಗಳ ಮೂಲಕ ಹರಿಬಿಟ್ಟಾಗ ನಮಗೆ ಇವೆಲ್ಲಾ ಬೇರೆ ಬೇರೆ ಎಂಬ ಅನಿಸಿಕೆಯಾಗುತ್ತದೆ. ಆ ಒಳಗಿರುವ ’ಏನೋ’ ಎಂದೆನಲ್ಲ ಅದೇ ಮನಸ್ಸು. ಮನಸ್ಸು ಆತ್ಮನ ಒಂದು ಭಾಗ. ಯಾವಾಗ ಶರೀರದಲ್ಲಿ ಆತ್ಮ ಇರುವುದಿಲ್ಲವೋ ಆಗ ಕಣ್ಣು ತೆರೆದೇ ಇದ್ದರೂ ಆ ಹೆಣ ನೋಡಲಾರದು, ಕಿವಿಯಿಂದ ಕೇಳಲಾರದು,. ಬಾಯಿಂದ ತಿನ್ನಲಾರದು ಹೀಗೇ ಈ ಎಲ್ಲಾ ಕೆಲಸಗಳು ಸ್ವಸ್ಥಸ್ಥಿತಿಯಲ್ಲಿ ನಡೆಯಬೇಕಾದರೆ ಶರೀರದ ಒಳಗೆ ಆತ್ಮನಿರಬೇಕು. ಆ ಆತ್ಮದ ಭಾಗವಾದ ಮನಸ್ಸಿರಬೇಕು.

ನಮ್ಮ ಆಧುನಿಕ ವೈದ್ಯ ವಿಜ್ಞಾನ ಇಷ್ಟೆಲ್ಲಾ ಮುಂದುವರಿದರೂ ಮನಸ್ಸಿನ ರೂಪವನ್ನು ಕಂಡುಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ. ನಾವು ಬರೇ ಮೆಮರಿ ಸೆಲ್ಸ್ ಅಂತೀವಿ ಅಷ್ಟೇ! ಆದರೆ ಆ ಮೆಮರಿ ಸೆಲ್ಸ್ ಹೆಣದಲ್ಲಿ ಯಾಕೆ ಕೆಲಸಮಾಡುವುದಿಲ್ಲ? ನೋಡಿ ತಾವು ಕೇಳಿರುತ್ತೀರಿ-ಯಾರಾದರೂ ಆತ್ಮಹತ್ಯೆಗೆ ಪ್ರಯತ್ನಿಸಿ ಕೋಮಾದಲ್ಲಿದ್ದರೆ ವೈದ್ಯ ಪರಿಭಾಷೆಯಲ್ಲಿ ಅವರು ಹೇಳುತ್ತಾರೆ ’ ಮೈಂಡ್ ಈಸ್ ಇನ್ಸಲ್ಟೆಡ್ ಟು ದಿ ಮ್ಯಾಕ್ಸಿಮಮ್’ ! ಹಾಗಾದ್ರೆ ಮನಸ್ಸಿಗೆ ಇನ್ಸಲ್ಟ್ ಅಂದ್ರೆ ಏನು? ಯಾವುದನ್ನು ನಮ್ಮೊಳಗಿನ ಆತ್ಮ ಸ್ವೀಕರಿಸಲು ಇಷ್ಟಪಡುವುದಿಲ್ಲವೋ ಅದನ್ನು ಅದಕ್ಕೆ ಬಲವಂತವಾಗಿ ನಮ್ಮ ಇಂದ್ರಿಯಗಳ ಮೂಲಕ ನಾವು ತುರುಕಿದರೆ ಅದು ಮನಸ್ಸಿಗೆ ನಾವು ಮಾಡುವ ಇನ್ಸಲ್ಟ್ ಆಗಿರುತ್ತದೆ. ಈ ಇನ್ಸಲ್ಟ್ ಬೇರೆಯವರ ಕೃತ್ಯದಿಂದ ಆದದ್ದೂ ಆಗಿರಬಹುದು. ಇನ್ಸಲ್ಟ್ ನಲ್ಲಿ ಎರಡು ವಿಧ, ಒಂದು ಬಾಹ್ಯ ಮತ್ತೊಂದು ಆಂತರಿಕ. ಬಾಹ್ಯವಾಗಿ ನಡೆದ ಇನ್ಸಲ್ಟ್ ಬಹಳ ಮೊನಚಾಗಿ ಇಲ್ಲದಿದ್ದರೆ ಅದು ಯಾವುದೇ ವಿಪತ್ತಿಗೆ ಕಾರಣವಾಗುವುದಿಲ್ಲ, ಒಂದೊಮ್ಮೆ ಬಾಹ್ಯದಲ್ಲಿ ನಡೆಯುವ ಇನ್ಸಲ್ಟ್ ಬಹಳ ಮೊನಚಾಗಿದ್ದರೆ ಅದು ಆಂತರಿಕ ಇನ್ಸಲ್ಟ್ ಆಗಿ ಪರಿವರ್ತಿತಗೊಳ್ಳುತ್ತದೆ. ಈ ಇನ್ಸಲ್ಟ್ ನಮ್ಮ ಮನಸ್ಸಿಗೆ ಒತ್ತಡ ತಂದೂ ತಂದೂ ಮನಸ್ಸು ನಮ್ಮನ್ನು ತ್ಯಜಿಸುವಂತೆ ಮಾಡುತ್ತದೆಯಲ್ಲಾ ಆಗಲೇ ಬಹುತೇಕರಿಗೆ ಹೃದಯಸ್ತಂಭನವಾಗುತ್ತದೆ!

ಮನಗೆದ್ದು ಮಾರುಗೆಲ್ಲು ಎಂಬ ಗಾದೆಯೊಂದಿದೆ. ಸಂಸ್ಕೃತದಲ್ಲಿ || ಮನಏವ ಮನುಷ್ಯಾಣಾಂ || ಎಂದಿದ್ದಾರೆ.ಇದರ ಅರ್ಥ ಅಂತರಾತ್ಮ ಯಾವುದನ್ನು ಒಪ್ಪಿ ಮಾಡುತ್ತದೋ ಅಲ್ಲಿ ಸಿದ್ಧಿಯಿದೆ.ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ನಮ್ಮೊಳಗೇ ಅಳುಕು ಇದ್ದರೆ ಅಲ್ಲಿ ನಮಗೆ ಯಶಸ್ಸು ಸಿಗುವುದಿಲ್ಲ! ವಿದ್ಯಾರ್ಥಿಯೊಬ್ಬ ಓದಿರುವುದಿಲ್ಲ, ಪರೀಕ್ಷೆಗೆ ಹೆದರಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ--ಆದರೆ ಮನೆಗೆ ಹೇಳುವುದಿಲ್ಲ. ಅಲ್ಲಿ ಆತನ ಮನಸ್ಸು ಕಳ್ಳತನಮಾಡಿದ್ದನ್ನು ದಾಖಲಿಸಿಕೊಳ್ಳುತ್ತದೆ, ಮತ್ತು ಆಗಾಗ ಅವನನ್ನೇ ತಿವಿಯುತ್ತಿರುತ್ತದೆ. ಅದಕ್ಕೇ ಕೊಲೆಸುಲಿಗೆ ಮಾಡುವವರು ಅಂತರಾತ್ಮದ ಮಾತು ಕೇಳದೇ ಮದ್ಯ ಸೇವಿಸಿ ಅಂತಹ ದುಷ್ಕೃತ್ಯಗಳಲ್ಲಿ ತೊಡಗುತ್ತಾರೆ. ಸಹಜಸ್ಥಿತಿಯಲ್ಲಿ ಅವರಿಗೆ ಆ ಕೆಲಸ ಸಾಧ್ಯವಾಗುವುದಿಲ್ಲ, ಮಾಡಿದಮೇಲೆ ಮಾಡಿದ ತಪ್ಪಿನ ಅರಿವಾಗಿ ಕೊರಗುತ್ತಾರೆ ಕೆಲವರು, ಮತ್ತೆ ಮಾಡುತ್ತ ತಮ್ಮಲ್ಲಿ ನೆಗೆಟಿವ್ ಡೆಪಾಸಿಟ್ಸ್ ಜಾಸ್ತಿ ಮಾಡಿಕೊಳ್ಳುತ್ತಾರೆ ಇನ್ನೂ ಕೆಲವರು ಹೀಗೇ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ’ಒಳಗಿನ ಕರೆ’ಯನ್ನು ಮನ್ನಿಸಿ ನಡೆದವ ಎಡಹುವುದಿಲ್ಲ. ಅಕಸ್ಮಾತ್ ಎಡವಿದ್ದರೆ ಅವನಲ್ಲಿ ಇಬ್ಬಂದಿತನವಿತ್ತು ಎಂತಲೇ ಲೆಕ್ಕ.

"ಬೀಸಿಬರುವ ಚಂಡಮಾರುತವನ್ನೂ, ಧಗಧಗಿಸುವ ಬೆಂಕಿಯನ್ನೂ, ಪ್ರಳಯಕಾಲದಂತೇ ಉಕ್ಕೇರಿದ ಸಮುದ್ರದ ಅಲೆಗಳನ್ನೂ ನೀನು ನಿಗ್ರಹಿಸ ಬಲ್ಲೆ, ಪರ್ವತದ ಬುಡವನ್ನೇ ಅಲ್ಲಾಡಿಸಬಲ್ಲೆ, ಶ್ರೀರಾಮಾ ಆದರೆ ಮನೋ ನಿಗ್ರಹ ಅದಕ್ಕಿಂತ ಕಠಿಣ" ಎಂದು ಗುರು ವಶಿಷ್ಠರು ತಮ್ಮ ಯೋಗವಾಶಿಷ್ಠದಲ್ಲಿ ಹೇಳಿದ್ದಾರೆ. ಘರ್ಜಿಸುವ ಸಿಂಹವನ್ನಾಗಲೀ, ಮದವೇರಿದ ಆನೆಯನ್ನಾಗಲೀ, ಕಡಿಯಬರುವ ಚಾಂಡಾಲನನ್ನಾಗಲೀ ನಿಗ್ರಹಿಸಬಹುದು-ಆದರೆ ಈ ಮನಸ್ಸೆಂಬುದನ್ನು ನಿಗ್ರಹಿಸುವುದು ಕಷ್ಟ ಎನ್ನುತ್ತವೆ ಹಲವು ಉಲ್ಲೇಖಗಳು. ಇವತ್ತು ನಾವಿದನ್ನೆಲ್ಲ ವೆಬ್ ಮೂಲಕ ಓದುತ್ತಿದ್ದೇವೆ, ನಮ್ಮ ಮೊಬೈಲ್ ಮೂಲಕ ಸಂಪರ್ಕಿಸುತ್ತೇವೆ, ಸಿನಿಮಾಗಳನ್ನು ನೋಡಿ ಸಂತಸಪಡುತ್ತೇವೆ, ಬೇಕಾದವರ ಪ್ರೀತಿಗೆ ಪಾತ್ರರೆಂದು ಹೆಮ್ಮೆಯಿಂದ ಬೀಗುತ್ತೇವೆ, ತಿಂಗಳಿಗೋ ವರ್ಷಕ್ಕೋ ಲೇಖನ ಬರೆದು ಕೆಲವಾರು ಒಳ್ಳೆಯ ಪ್ರತಿಕ್ರಿಯೆಗಳು ಬಂದದ್ದಕ್ಕೆ ಪುಳಕಗೊಳ್ಳುತ್ತೇವೆ, ಯಾವುದೋ ಜಾತ್ರೆ ಎಲ್ಲೋ ಹುಟ್ಟು ಹಬ್ಬ, ಮದುವೆ-ಮುಂಜಿ ಅಂತೂ ನಾವು ನಮಗೆ ಬೇಕಾದ ಹೂರಣಗಳಲ್ಲಿ ಮುಳುಗಿರುತ್ತೇವೆ. ಒಂದಿ ದಿನ ಲ್ಯಾಪ್ ಟಾಪು. ಮೊಬೈಲು, ಇಂಟರ್ನೆಟ್ಟು ಇರದಿದ್ದರೆ ನಮಗೆ ಏನನ್ನೋ ಕಳೆದುಕೊಂಡ ಅನುಭವ! ಇವೆಲ್ಲಾ ಇರದೆಯೂ ನಾವು ಬದುಕಿರಲಾರೆವೇ ? ಹಿಂದೆ ಬದುಕಿರಲಿಲ್ಲವೇ ? ಇದಕ್ಕೆ ಉತ್ತರ ನಾವೇ ಕಂಡುಕೊಳ್ಳಬೇಕು.

[ನಿನ್ನೆಯ ಪ್ರತ್ಯಾಹಾರ ಕಾವ್ಯಕ್ಕೆ ಪ್ರತಿಕ್ರಿಯಿಸುತ್ತ ಪೂರ್ಣಿಮಾ ಎಂಬ ಹೆಸರಿನಿಂದ 'ನಿಮ್ಮೊಡನೆ ವಿ.ಆರ್.ಭಟ್ ' ಬ್ಲಾಗಿನಲ್ಲೂ ಹಾಗೂ ಅನಾನಿಮಸ್ ಎಂಬ ಅನಾಮಧೇಯರಾಗಿ ’ವೇದಸುಧೆ’ ಬ್ಲಾಗಿನಲ್ಲೂ ಪ್ರತಿಕ್ರಿಯಿಸಿದವಳ/ರ ಕುರಿತು ನನಗೆ ಮರುಕವುಂಟಾಗುತ್ತದೆ. ರೋಷವೇನಿಲ್ಲ! ಪಾಪ ತಿಳುವಳಿಕೆ ಕಮ್ಮಿ ಎನಿಸಿ ಸುಮ್ಮನಾಗಿ ಅದನ್ನು ಅಳಿಸಿಹಾಕಿದ್ದೇನೆ. ’ಬೆದೆಬಂದ ನಾಯಿ’ ಎನ್ನುವ ಕೀಳು ಪದವನ್ನು ಉಪಯೋಗಿಸಿದೆ ಎಂಬುದು ಅವರ ಆರೋಪ. ಇಲ್ಲಿ ಪೂರ್ಣಿಮಾ ಹೇಳುವುದು ನಾನು ಗುಂಡಪ್ಪನವರ ಕಾವ್ಯಕ್ಕೂ ಸ್ಪರ್ಧೆ ಕೊಡಲು ಹೊರಟಿದ್ದೇನಂತೆ, ಹುಳಿಯೆಂದು ದ್ರಾಕ್ಷಿಯನ್ನು ತಿನ್ನದೇ ಇರುವ ನರಿಗೂ ನಿರುಪಯುಕ್ತವಂತೆ ಆ ಬರಹ, ನರರೋಗ ತಜ್ಞರಿಗೆ ಕೈತುಂಬಾ ಕೆಲಸವಂತೆ, ಬ್ಲಾಗಿಗರೆಲ್ಲಾ ಪರಸ್ಪರ ನೆಕ್ಕುವ ದಂಡಂತೆ. ಅವರ ’ಬೆದೆ ಬಂದ’ ಮನಸ್ಥಿತಿಯೇ ಹಾಗೆಲ್ಲಾ ಬರೆಯಲು ಕಾರಣ ಎಂದುಕೊಳ್ಳುತ್ತೇನೆ ನಾನು. ಯಾಕೆಂದರೆ ನಮ್ಮ ಅನಿಯಂತ್ರಿತ ಮನಸ್ಸಿಗೂ ಹಾಗೂ ಬೆದೆಬಂದ ನಾಯಿಗೂ ಬಹಳ ಹೋಲಿಕೆಯಿದೆ. ಆ ನಾಯಿ ಹೇಗೆ ಒಂದೆಡೆ ಕೂರುವುದಿಲ್ಲವೋ ಹಾಗೇ ನಮ್ಮ ಮನಸ್ಸೂ ಕೂಡ, ಅದೇ ಕಾರಣವಾಗಿ ಅವರ ಮನಸ್ಸೂ ಹಾಗೇ ಮಾಡಿತು. ಇಂದ್ರಿಯ ನಿಗ್ರಹದಲ್ಲಿ ಕಾಮವನ್ನು ಗೆಲ್ಲುವುದೂ ಒಂದು ಸಬ್ಜೆಕ್ಟ್ ಅಲ್ಲವೇ ಪೂರ್ಣಿಮಾ / ಅನಾನಿಮಸ್ಸರೇ ? ನೀವದನ್ನು ಗೆದ್ದಿರೇ ? ಆ ಕಾಮ ತುಂಬಿದ ಮನಸ್ಸನ್ನು ಬೆದೆಬಂದ/ನೆಶೆಬಂದ ನಾಯಿಗೆ ಹೋಲಿಸಿದ್ದರಲ್ಲಿ ತಪ್ಪೇನಿದೆ ಹೇಳಿ? ಕಾವ್ಯವನ್ನು ಬರೆಯುವಾಗ ತಲೆಯಿಲ್ಲದೇ ಬರೆಯುವುದಿಲ್ಲ, ಅದರಲ್ಲೂ ಜಗದಮಿತ್ರ ಗುಂಡಪ್ಪನವರನ್ನು ತನ್ನ ಮಾನಸ ಗುರುವೆಂದು ಸ್ವೀಕರಿಸಿ ಬರೆದ ಕಾವ್ಯಗಳು ಕ್ಲೀಷೆಗಳಿಗೆ ಈಡಾಗಬಾರದಲ್ಲ. ನಿಮ್ಮ ಮನಸ್ಸು ಇನ್ನೂ ಕೂಪದೊಳಗಿನ ಮಂಡೂಕ! ಆ ಮಂಡೂಕಕ್ಕೆ ಸಮುದ್ರವನ್ನು ತೋರಿಸಿ, ಆಗ ಶಬ್ದಗಳ ಅರ್ಥ ಸರಿಯಾಗಿ ಧ್ವನಿಸುತ್ತದೆ! ನಿಮಗೆ ಅರ್ಥವಾಗುತ್ತದೆ. ಅದಿಲ್ಲವೋ ನೀವು ಹಾಗೇ ಇರಿ ನಾವು ಬರೆಯುತ್ತಲೇ ಇರುತ್ತೇವೆ-ನಿಮ್ಮ ಆ ಕ್ಷುಲ್ಲಕತನದ ಕಲ್ಲೆಸೆತಕ್ಕೆ ಧಕ್ಕೆಗೆ ಒಳಗಾಗುವ ಪುಕ್ಕಲು ಮನಸ್ಸಲ್ಲ ನಮ್ಮದು, ತಿಳಿದಿರಲಿ! ನಮ್ಮ ಬುನಾದಿ ಭದ್ರವಾಗಿದೆ, ಅದಕ್ಕೆ ಛಾವಣಿಯೂ ತಕ್ಕುದಾಗೇ ಇದೆ. ಇಲ್ಲಿ ಬರೆಯುವ ಯಾವ ಮಾಹಿತಿಯೂ ಕಡತಂದ ಸೌಭಾಗ್ಯವಲ್ಲ ಎಂಬುದು ನಿಮಗೆ ತಿಳಿದರೆ ನೀವು ಮತ್ತೆ ಹಾಗೆ ಬೇಕಾಬಿಟ್ಟಿ ಬರೆಯಲಾರಿರಿ ಅಲ್ಲವೇ ? ನಿಮ್ಮ ಮಿಂಚಂಚೆಯನ್ನು ಕೊಡಿ ಇನ್ನೂ ಬೇಕಾದ್ರೆ ನಿಮಗೆ ಮಾಹಿತಿ ನೀಡೋಣ ಮತ್ತು ನಿಮ್ಮಿಂದ ’ಸಂಸ್ಕಾರ’ ದ ಅರ್ಥ ತಿಳಿದುಕೊಳ್ಳಬೇಕಾಗಿದೆ ಕೊಡುವಿರೇ ? ಇಷ್ಟು ಸಾಕಲ್ಲವೇ ]

ಮನಸ್ಸನ್ನು ಹತೋಟಿಯಲ್ಲಿ, ಸಮಚಿತ್ತದಲ್ಲಿ ನಿಭಾಯಿಸಿದವರು ಹೃದಯ ಸಂಬಂಧೀ ಕಾಯಿಲೆಗಳಿಗೆ ತುತ್ತಾಗುವುದೇ ಇಲ್ಲ. ಆದರೆ ನಮ್ಮಲ್ಲಿ ಬಹುಸಂಖ್ಯಾಕರು ನಾವಿದನ್ನು ಪಾಲಿಸದೇ ವಯಸ್ಸಿಗೆ ತಕ್ಕಂತೇ ಬರುವ ಕಾಯಿಲೆಗಳ ಗುಂಪಿಗೆ ಹೃದಯಸ್ತಂಭನ, ಮಧುಮೇಹ, ರಕ್ತದೊತ್ತಡ ಹೀಗೇ ಹೆಸರಿಸಿ ಇಟ್ಟುಕೊಂಡಿದ್ದೇವೆ. ಸತ್ಯವಾದ ಒಂದು ವಾಕ್ಯ ಕೇಳಿ- ಯಾವಾಗ ಭೌತಿಕ ಶರೀರಕ್ಕೂ ನಮ್ಮೊಳಗಿನ ಸೂಕ್ಷ್ಮ ಶರೀರಕ್ಕೂ[ಮನಸ್ಸು ಎಂದಿಟ್ಟುಕೊಳ್ಳೋಣ!] ಲೆಕ್ಕಾಚಾರದಲ್ಲಿ ಭಿನ್ನತೆ ತೋರಿಬರುತ್ತದೋ ಆವಾಗಲೇ ನಮಗೆ ಇಲ್ಲದ ಕಾಯಿಲೆಗಳು ಅಡರಿಕೊಳ್ಳಲು ತೊಡಗುತ್ತವೆ! ನಿಜವಾಗಿ ಯೋಗಿಯಾದವನು ನಿರೋಗಿಯಾಗುತ್ತಾನೆ! ಹಾಗಾದ್ರೆ ಅವನಿಗೂ ೪೦ ವಯಸ್ಸು ದಾಟುವುದಿಲ್ಲವೇ ? ಆತನಿಗೂ ಹಲವು ಕಾಯಿಲೆಗಳು ಮುಪ್ಪಡರುವ ಶರೀರಕ್ಕೆ ಬರುವುದಿಲ್ಲವೇ ? ಇಲ್ಲಾ ಸ್ವಾಮೀ, ಯೋಗಿಗಳು ಕಾಯಿಲೆಗಳನ್ನೆಲ್ಲ ಮೀರಿನಿಲ್ಲುವ ಅದ್ಬುತ ಚೈತನ್ಯ ಪಡೆದಿರುತ್ತಾರೆ! ನೀವು ಬಾಬಾ ರಾಮದೇವ್ ಅವರನ್ನೇ ಕೇಳಿ, ಅವರು ಅಷ್ಟು ಚೆನ್ನಾಗಿ ಹೊಟ್ಟೆ, ಕೈಕಾಲು ಎಲ್ಲವನ್ನೂ ತಿರುಚುತ್ತ ಯೋಗಮಾಡುತ್ತಾರಲ್ಲ ಅವರಿಗೆ ಯವುದಾದರೂ ಕಾಯಿಲೆ ಇಲ್ಲವೇ ? ಉತ್ತರ ನಾನೇ ಹೇಳುತ್ತೇನೆ-ಇಲ್ಲ! ಕಾಯಿಲೆ ಅವರ ಹತ್ತಿರ ಬರುವುದೂ ಇಲ್ಲ!

ಹೋಗಿ ಭಟ್ಟರೆ ನೀವೆಲ್ಲಾ ಆಗಹೋಗದ್ದನ್ನೇ ಹೇಳುತ್ತೀರಿ ಎನ್ನುವ ಮಟ್ಟಕ್ಕೆ ನೀವೀಗ ತಲ್ಪಿರುತ್ತೀರಿ. ಇದನ್ನೇ ನಾನೊಬ್ಬ ಯೋಗಿಯಾಗಿ ಹೇಳಿದರೆ ನನ್ನ ಶಿಷ್ಯಂದಿರಾಗಲು ತಯಾರಾಗುತ್ತೀರಿ! ಪ್ರತ್ಯಾಹಾರವನ್ನು ಅರಿಯಲು, ಅಳವಡಿಸಿಕೊಳ್ಳಲು ಕೇವಲ ಸನ್ಯಾಸಿಯೇ ಆಗಬೇಕೆಂದೇನಿಲ್ಲ, ಸಂಸಾರಿಗಳೂ ಅದನ್ನು ಸಾಧಿಸಬಹುದು. ಮಹಾಭಾರತದ ಮೂಲಕ ಭಗವಾನ್ ಶ್ರೀಕೃಷ್ಣ ಗೀತೆಯಲ್ಲಿ ಇದನ್ನೇ ಲೋಕಾರ್ಪಣೆ ಮಾಡಿದ್ದಾನೆ. ಇದನ್ನು ಸರಿಯಾಗಿ ಅರಿತರೆ, ಅಳವಡಿಸಿಕೊಂಡರೆ ನಮ್ಮಲ್ಲಿರುವ ನೆಗೆಟಿವ್ ಎನರ್ಜಿ ಹೊರಟು ಹೋಗುತ್ತದೆ! ಯಾವಾಗ ನಮ್ಮಲ್ಲಿ ಪಾಸಿಟಿವ್ ಎನರ್ಜಿ ನೆಲೆಸುತ್ತದೋ ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಲು ಅದು ಕಾರಣವಾಗುತ್ತದೆ. ಯಾವಾಗ ಸಮಸ್ಯೆಗಳು ನಿವಾರಣೆಯಾಗುತ್ತವೆಯೋ ಆವಾಗ ನಮಗೆ ಜೀವನ ಹಗುರವಾಗುತ್ತದೆ, ನಿಜವಾದ ಆನಂದ ದೊರೆಯತೊಡಗುತ್ತದೆ. ಅದೇ ಸ್ವರ್ಗೀಯ ಆನಂದ! ಆ ಆನಂದವನ್ನು ಪಡೆಯ ಬಯಸುವವರು ನಿತ್ಯವೂ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಹಾಗೆ ಪಾಲಿಸುವುದರಿಂದ ಮಾತ್ರ ಆ ಆನಂದವನ್ನು ಪಡೆಯಲು ಸಾಧ್ಯವೇ ಹೊರತು ಅದು ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲ!

ಇದನ್ನೆಲ್ಲ ನೋಡಿಯೇ ನಮ್ಮ ಆದಿಶಂಕರರು ಹೇಳಿದರು :

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಃ ||

ಉಳಿದುದನ್ನು ಮುಂದಿನ ಭಾಗದಲ್ಲಿ ನೋಡೋಣ,

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾವೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ||

|| ಶ್ರೀ ಕೃಷ್ಣಾಯ ತುಭ್ಯಂ ನಮಃ ||

---ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ 'ಹತ್ತಿರದಿಂದ ' ಪ್ರಬಂಧ ಸಂಕಲನದಿಂದ