Pages

Sunday, July 13, 2014

ದೇವರೇ ಗತಿ!


      ಈ ಚಿತ್ರಗಳನ್ನು ನೋಡಿ. ಒಂದೊಮ್ಮೆ ಮನೆಯಲ್ಲಿ ಧೂಪ, ದೀಪ, ಆರತಿ ಬೆಳಗಿಸಿಕೊಂಡು ಪೂಜೆ, ಪುನಸ್ಕಾರಗಳನ್ನು ಮಾಡಿಸಿಕೊಳ್ಳುತ್ತಿದ್ದ ಈ ದೇವರುಗಳ ಫೋಟೋಗಳು ಈಗ ಮರದ ಬುಡದಲ್ಲಿ ಅನಾಥವಾಗಿ ಬಿದ್ದಿವೆ. ಮನೆಗೆ ಬೇಡವೆನಿಸುವ ದೇವರ ಫೋಟೋಗಳು ಮೊದಮೊದಲು ದೇವಸ್ಥಾನಕ್ಕೆ ಸೇರಿಸಲ್ಪಡುತ್ತಿದ್ದವು, ಹಿರಿಯರನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮದಲ್ಲಿ ಸೇರಿಸುವಂತೆ! ಈಗ ದೇವಸ್ಥಾನಗಳಲ್ಲಿ ಅಂತಹ ಫೋಟೋಗಳನ್ನು ಇಟ್ಟುಕೊಳ್ಳಬಯಸುತ್ತಿಲ್ಲ. ಹೀಗಾಗಿ ದೇವಸ್ಥಾನದ ಬಾಗಿಲ ಪಕ್ಕದಲ್ಲಿ, ಅರಳಿಮರದ ಬುಡಗಳಲ್ಲಿ, ಪಾರ್ಕುಗಳಲ್ಲಿನ ಮರಗಳ ಬುಡದಲ್ಲಿ, ಹುತ್ತಗಳ ಪಕ್ಕದಲ್ಲಿ ಹಾಳಾದ, ಹಳೆಯದಾದ, ಬೇಡವೆನಿಸುವ ದೇವರ ಫೋಟೋಗಳು ತಮ್ಮ ಸ್ಥಾನ ಕಂಡುಕೊಳ್ಳುತ್ತಿವೆ ಅರ್ಥಾತ್ ಮನೆಯಿಂದ ಹೊರದಬ್ಬಲ್ಪಟ್ಟಿರುತ್ತವೆ. ಬಾಡಿಗೆ ಮನೆ ಖಾಲಿ ಮಾಡಿ ಬೇರೆ ಮನೆಗೆ ಹೋಗುವಾಗ ಹಳೆಯ ಮನೆಯಲ್ಲಿ ಉಳಿಸಿ ಹೋಗುವುದು ಉಪಯೋಗಕ್ಕೆ ಬಾರದ ಹಳೆಯ ವಸ್ತುಗಳು, ಕಸ ಮತ್ತು ಕೆಲವು ಹಳೆಯ ದೇವರ ಫೋಟೋಗಳು! ಮನೆ ಪೂರ್ತಿ ಖಾಲಿ ಮಾಡಬಾರದು, ಕಸ ಗುಡಿಸಿಹೋಗಬಾರದು ಎಂಬ ಅನುಕೂಲಸಿಂಧು ಶಾಸ್ತ್ರ ಹೇಳಿಬಿಟ್ಟರೆ ಆಯಿತು. ಒಟ್ಟಿನಲ್ಲಿ ಹೇಳಬೇಕೆಂದರೆ, ಈ ದೇವರುಗಳ ಸ್ಥಿತಿ ದೇವರೇ ಗತಿ ಅನ್ನುವಂತಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಿದೆ. 
. . .ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ:
http://vedajeevana.blogspot.in/2014/07/blog-post_6.html
-ಕ.ವೆಂ.ನಾಗರಾಜ್.
**************
16.6.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.