Pages

Thursday, April 14, 2011

Ishtu Dina Nechchi Nambi Sound Clip and Quote

ಇಷ್ಟುದಿನ ನೆಚ್ಚಿನಂಬಿ


ರಚನೆ: ಹರಿಹರಪುರಶ್ರೀಧರ್
ಗಾಯಕಿ: ಶ್ರೀಮತಿ ಲಲಿತಾ ರಮೇಶ್

   (Link)

ಇಷ್ಟು ದಿನ ನೆಚ್ಚಿ ನಂಬಿ
ಕಷ್ಟ ಪಟ್ಟು ಪಟ್ಟು ಹಿಡಿದು
ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು|
ಎಷ್ಟೋ ದಿನ ಗಟ್ಟಿಯಾಗಿ
ಕೆಟ್ಟಮಾತುಗಳನು ಆಡಿ
ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ ಸಾಕು ಸಾಕು |ಪ|

ಯಾರೇ ಬರಲಿ ಊರೇ ಇರಲಿ
ಹೊಗಳಿ ಹೊಗಳಿ ಅಟ್ಟಕ್ಕೇರಿ
ಪಟ್ಟ ಕಟ್ಟಿ ಮೆರೆದಿದ್ದೆಲ್ಲಾ ಸಾಕು ಸಾಕು|
ಇಷ್ಟು ದಿನ ಮಾಡಿದ್ದೆಲ್ಲಾ
ಇಲ್ಲೇ ಬಿಟ್ಟು ಹೋಗುವಾಗ
ತಂಟೆಮಾಡ್ದೆ ಒಂಟಿಯಾಗಿ ಹೋಗ್ಲೇ ಬೇಕು |೧|

ಬಂದು ಬಳಗ ಬಂದಾರೆಂದು
ಮಂದಿ ಮಾತು ಕಟ್ಟಿಕೊಂಡು
ಕೂಟ ಮಾಡಿ ಕುಣಿದದ್ದೆಲ್ಲಾ ಸಾಕು ಸಾಕು|
ನೊಂದು ಬೆಂದು ಮುಂದೆ ಬಂದು
ಹಿಂದಿಂದೆಲ್ಲಾ ಮರೆತು ಕೊಂಡು
ಎಲ್ಲಾ ನಂದೇ ಎಂದಿದ್ದೆಲ್ಲಾ ಸಾಕು ಸಾಕು |೨|

ಸ್ನಾನ ಸಂಧ್ಯಾ ಜಪವ ತಪವ
ನಿತ್ಯಮಾಡಿದೆನೆಂದು ಬೀಗುತ
ಉತ್ತಮನೆಂದು ಮೆರೆದಿದ್ದೆಲ್ಲಾ ಸಾಕು ಸಾಕು|
ಹೇಳದೆ ಕೇಳದೆ ಅಂತ್ಯವು ಬರಲು
ಕಂತೆಯನೊಗೆಯುವ ಮುಂಚೆಯಾದರೂ
ಆತ್ಮನ ಚಿಂತನೆ ಕಿಂಚಿತ್ತಾದರು ಮಾಡ್ಲೇ ಬೇಕು ||೩||

ಮನಸೆಳೆದ ವೈಯೋಲಿನ್ ಕಛೇರಿ

ನಿನ್ನೆ ಒಂದು ಅದ್ಭುತ ಸಂಗೀತ ಸಂಜೆ. ಮೂರು ಗಂಟೆಗಿಂತಲೂ ಹೆಚ್ಚು ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅಂತಹ ಮೋಡಿ ಮಾಡಿದ್ದು ಡಾ|| ದೀಪಕ್ ಎಂಬ ತರುಣ ಮತ್ತು ಅವನ ಪಕ್ಕವಾದ್ಯ ಸಂಗಡಿಗರಾದ ಬೆಂಗಳೂರಿನ ಮೃದಂಗವಿದ್ವಾನ್ ಶ್ರೀಫಣೀಂದ್ರ ಭಾಸ್ಕರ್ ಮತ್ತು ಘಟಂವಿದ್ವಾನ್ ಶ್ರೀ ರಘುನಂದನ್.ಸಂದರ್ಭ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಾಲಯದವರು ಶ್ರೀ ರಾಮೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವೈಯೋಲಿನ್ ವಾದನಕಛೇರಿ.ವೈಯೋಲಿನ್ ನುಡಿಸಿದವರು ಬೇರೆ ಯಾರೂ ಅಲ್ಲ! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರ ಸೋದರರೂ ವೇದಸುಧೆ ಬಳಗದ ಸದಸ್ಯರೂ ಆದ ಕವಿ ಸುರೇಶ್ ಅವರ ಪುತ್ರ ಡಾ|| ಬಿ.ಎಸ್.ಆರ್.ದೀಪಕ್.ವೇದಸುಧೆಯ ವಾರ್ಷಿಕೋತ್ಸವದಲ್ಲಿ ದೀಪಕ್ ತಂಗಿ ಬಿ.ಎಸ್.ಆರ್ ಅಂಬಿಕಾ ಅವರು ವೈಯೋಲಿನ್ ನುಡಿಸಿ ನಮ್ಮೆಲ್ಲರ ಗಮನ ಸೆಳೆದ ನೆನಪು ಮಾಸುವದರೊಳಗಾಗಿ ದೀಪಕ್ ನಮ್ಮೆಲ್ಲರನ್ನೂ ಮೋಡಿ ಮಾಡಿ ತಮ್ಮ ಕೈ ಚಳಕ ತೋರಿಸಿಬಿಟ್ಟರು. ಆಯುರ್ವೇದ ವೈದ್ಯರಾದ ದೀಪಕ್ ನಿಜವಾಗಿ ಎಲ್ಲರ ಹೃದಯವನ್ನು ಗೆದ್ದಿದ್ದು ಅಷ್ಟೇ ಅಲ್ಲ ಮನೋ ಒತ್ತಡದ, ರಕ್ತದ ಒತ್ತಡ ಇರುವವರಿಗೆ ಅವರಿಗೆ ಗೊತ್ತಿಲ್ಲದಂತೆ ಚಿಕಿತ್ಸೆ ನೀಡಿದ್ದರು.ಕಾರ್ಯಕ್ರಮ ಮುಗಿದೊಡನೆ ಹರ್ಷಚಿತ್ತರಾಗಿ ವೇದಿಕೆಯತ್ತ ಹಲವಾರು ಹಿರಿಯರು ಧಾವಿಸಿ ತರುಣ ಸಂಗೀತ ವಿದ್ವಾಂಸರುಗಳಿಗೆ ನೂರ್ಕಾಲ ಬಾಳುವಂತೆ ಹಾರೈಸುತ್ತಿದ್ದುದನ್ನು ಗಮನಿಸಿದಾಗ ನನ್ನ ಹೃದಯ ತುಂಬಿಬಂದಿತ್ತು. ಈ ತರುಣರಿಗೆ ಧೀರ್ಘಾಯುಷ್ಯವನ್ನು ನೀಡಿ ಅವರ ಸೇವೆ ಸಮಾಜಕ್ಕೆ ಸದಾಕಾಲ ದೊರೆಯಲೆಂದು ನಿಂತಲ್ಲೇ ಆ ಭಗವಂತನಲ್ಲಿ ನಾನು ಪ್ರಾರ್ಥಿಸಿದ್ದೆ.
ಡಾ|| ದೀಪಕ್ ಅವರ ಪರಿಚಯ:
* Belongs to keladi kavimanetan family.
* Completed B.A.M.S. with distinction last March and presently doing housemanship in Shivamogga.
* Completed Vidwat (Proficiency) last year securing 1st Rank. .
* Student of Vid. TS Krishnamurthy and presently Dr. K Varad arangan, B'lore.
* B grade Artist of AIR.
* Has performed in more than 150 concerts so far, including those in Navarathri utsav, Shringeri, Mysore Dasara, Hampi utsav, AIR and Dooradarshan programmes.






ಪಕ್ಕವಾದ್ಯದಲ್ಲಿ ಸಹಕಾರ ನೀಡಿದ ವಿದ್ವಾಂಸರ ವಿವರ:
1. ಮೃದಂಗ: ವಿದ್ವಾನ್ ಫಣೀಂದ್ರ ಭಾಸ್ಕರ್, ಬೆಂಗಳೂರು. ವಿದ್ವಾನ್ ಶ್ರೀ ಹೆಚ್.ಎಸ್. ಸುಧೀಂದ್ರರವರ ಶಿಷ್ಯ. ಆಕಾಶವಾಣಿಯ ಬಿ ಗ್ರೇಡ್ ಕಲಾವಿದ, ಫಿಲಿಪ್ಸ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್.
2. ಘಟಂ: ವಿದ್ವಾನ್ ರಘುನಂದನ್, ಬೆಂಗಳೂರು. ದಿ. ವಿದ್ವಾನ್ ಶ್ರೀ ಪಿ.ಜಿ.ಲಕ್ಶ್ಮಿನಾರಾಯಣ ಮತ್ತು ಈಗ ವಿದ್ವಾನ್ ಶ್ರೀ ಹೆಚ್.ಎಸ್. ಸುಧೀಂದ್ರರವರ ಶಿಷ್ಯ.



ನಿನ್ನೆಯ ಕಾರ್ಯಕ್ರಮದಲ್ಲಿ ನುಡಿಸಿದ ರಚನೆಗಳು:
1. ಕಾಂಬೋದಿ ರಾಗದ ಅಟ್ಟತಾಳವರ್ಣ - ಸರಸಿಜನಾಭ
2. ಹಂಸಧ್ವನಿ ರಾಗ - ರಘುನಾಯಕ (ಸಾಹಿತ್ಯ) ಆದಿತಾಳ
3. ಶುದ್ಧಬಂಗಾಳ ರಾಗ - ರಾಮಭಕ್ತಿಸಾಮ್ರಾಜ್ಯ - ಆದಿತಾಳ
4. ಹಂಸನಾದ ರಾಗ - ಬಂಟುರೀತಿ - ಆದಿತಾಳ
5. ರಾಗಮಾಲಿಕಾ - ಭಾವಯಾಮಿ ರಘುರಾಮಂ - ರೂಪಕತಾಳ
6.ಶುದ್ಧಧನ್ಯಾಸಿ ರಾಗ - ನಾರಾಯಣ - ಖಂಡಛಾಪುತಾಳ
7. ಖರಹರಪ್ರಿಯರಾಗ - ರಾಮನೀ ಸಮಾನಮೆವರು - ರೂಪಕತಾಳ
8. ನಾದನಾಮಕ್ರಿಯರಾಗ - ದಾಸನ ಮಾಡಿಕೋ ಎನ್ನ - ಆದಿತಾಳ
9. ಭೌಳೆ ರಾಗ - ಶ್ರೀಮನ್ನಾರಾಯಣ - ಆದಿತಾಳ
10. ದೇಶ್ ರಾಗದ ತಿಲ್ಲಾನ - ಆದಿತಾಳ
11. ಮಧ್ಯಮಾವತಿ ರಾಗ - ಭಾಗ್ಯದಾ ಲಕ್ಶ್ಮೀ ಬಾರಮ್ಮ - ಆದಿತಾಳ
12. ಕುರುಂಜಿ ರಾಗ - ಪವನಜಾ ಸ್ತುತಿ ಪಾತ್ರ - ಖಂಢಛಾಪು ತಾಳ
13. ಸೌರಾಷ್ಟ ರಾಗ - ಪವಮಾನ - ಆದಿತಾಳ.



ಯೋಚಿಸಲೊ೦ದಿಷ್ಟು...೩೦

೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ?
೨. ಪ್ರತಿ ಸೂರ್ಯಾಸ್ತಮಾನವು ನಮ್ಮ ಆಯುಷ್ಯದಲ್ಲಿನ ಒ೦ದೊ೦ದು ದಿನಗಳನ್ನೂ ಕಡಿಮೆಗೊಳಿಸುತ್ತಲೇ ಹೋದರೆ,ಜೀವನದಲ್ಲಿ ಹೊಸ ಹೊಸ ನಿರೀಕ್ಷೆಗಳ ಉದಯಕ್ಕೆ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನಗಳ ಮಿತಿಯಿಲ್ಲ.. ಅವು ಪ್ರತಿಕ್ಷಣಗಳಲ್ಲಿಯೂ ಹುಟ್ಟುತ್ತಲೇ ಹೋಗುತ್ತವೆ!
೩.ನಮ್ಮ ಚಿ೦ತನೆಯನ್ನು ಬದಲಾಯಿಸಿಕೊ೦ದಲ್ಲಿ ಜೀವನವೂ ಬದಲಾವಣೆಗೊ೦ದ೦ತೆಯೇ ಅನಿಸುತ್ತದೆ!
೪. ನಿರಾಶಾವಾದಿಗಳು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೆ,ಆಶಾವಾದಿಗಳು ಅವುಗಳ ಪರಿಹಾರದತ್ತ ತಮ್ಮ ಗಮನ ಕೊಡುತ್ತಾರೆ !
೫. ನಮ್ಮ ಮೌಲ್ಯವನ್ನು ನಾವೇ ವರ್ಧಿಸಿಕೊಳ್ಳಬೇಕು!
೬. ಘಟನೆಗಳ ಬಗ್ಗೆ ನಿರ್ಲಕ್ಷ್ಯ ತಾಳುವುದೂ ನಮ್ಮಲ್ಲಿನ ಆ೦ತರಿಕ ಶಾ೦ತಿಯನ್ನು ಉಳಿಸಿಕೊಳ್ಳುವುದರತ್ತ ನೀಡುವ ಗಮನವೇ!
೭. ನಾವು ನಿರ್ಲಕ್ಷಕ್ಕೊಳಗಾಗಿದ್ದೇವೆ೦ದು ಅನಿಸಿದ ಕೂಡಲೇ ಅಲ್ಲಿ೦ದ ನಮ್ಮ ವಾಪಾಸಾತಿಯು ಮು೦ದೆ ನಾವು ಮುಜುಗರಕ್ಕೊಳಗಾಗುವುದನ್ನು ತಪ್ಪಿಸುತ್ತದೆ!
೮. ಒತ್ತಡವು ಎಲ್ಲವನ್ನೂ ಸೃಷ್ಟಿಸಿದರೂ ಇನ್ನೊಬರ ಹೃದಯದಲ್ಲಿ ನಮ್ಮ ಬಗ್ಗೆ ಪ್ರೀತಿಯನ್ನು ಹುಟ್ಟಿಸದು!
೯. ಸಮಸ್ಯೆಗಳನ್ನು ಹ೦ಚಿಕೊಳ್ಳುವುದು ಹಾಗೂ ಅವುಗಳ ಪರಿಹಾರಕ್ಕಾಗಿ ಇನ್ನೊಬ್ಬರ ಸಹಾಯವನ್ನು ಬೇಡುವುದು ನಮ್ಮ ದೌರ್ಬಲ್ಯವನ್ನು ಹಾಗೂ ಅಶಕ್ತತೆಯನ್ನು
ಪ್ರತಿಬಿ೦ಬಿಸದು!
೧೦. ನಮ್ಮ ಮಾನಸಿಕ ಸ್ಥಿತಿಯನ್ನು ಬದಲಾವಣೆಗೊಳಿಸಿಕೊಳ್ಳಲು ಹಲವಾರು ಆಯ್ಕೆಗಳಿದ್ದರೂ ಆಡಿದ ಮಾತನ್ನು ಹಿ೦ತೆಗೆದುಕೊಳ್ಳುವ ಯಾವುದೇ ಆಯ್ಕೆಯನ್ನೂ ನಾವು ಪಡೆದಿಲ್ಲ!
೧೧. ಪುಸ್ತಕಗಳು ಕಣ್ಣೆದುರಿದ್ದರೂ ಓದಲು ಕಷ್ಟಪಡುವ೦ತೆ, ನಮ್ಮ ಆತ್ಮೀಯರ ಮನಸ್ಸಿನ ಭಾವನೆಗಳನ್ನು ಓದುವಲ್ಲಿಯೂ ನಾವು ಒಮ್ಮೊಮ್ಮೆ ವಿಫಲಗೊಳ್ಳುತ್ತೇವೆ!
೧೨. ಪ್ರತಿಯೊಬ್ಬರೂ ದಿನದ೦ತ್ಯದಲ್ಲಿ ತಾವು ಮಾಡಬೇಕಾಗಿದ್ದ ಕಾರ್ಯಗಳನ್ನು ಮಾಡಿದ್ದೇವೆ೦ಬ ಬಗ್ಗೆ ಸ೦ತೃಪ್ತಿ ಹೊ೦ದಿದರೆ, ಕೆಲವರು ತಾವು ನಾಳೆ ಮಾಡಬೇಕಾಗಿರುವ ಕಾರ್ಯಗಳ ಬಗ್ಗೆಯೂ ಚಿ೦ತನೆ ನಡೆಸುತ್ತಾರೆ! ( ಡಾ|| ಎ.ಪಿ.ಜೆ ಅಬ್ದುಲ್ ಕಲಾ೦)
೧೩. ಯಾವುದೇ ಕಾರ್ಯದಲ್ಲಿಯೂ ವಿಜಯ ಸಾಧಿಸುವುದು ಎ೦ದರೆ ಆ ಕಾರ್ಯದ “ಸೀಮಿತತೆ“ ಗಳ ಬಗ್ಗೆ ಚಿ೦ತಿಸುವುದಲ್ಲ.. ಬದಲಾಗಿ ಕಾರ್ಯ ಸಾಧನೆಯ “ಸಾಧ್ಯತೆ“ಗಳ ಬಗ್ಗೆ ಚಿ೦ತಿಸುವುದು ಮಾತ್ರ!!
೧೪. ಕೇವಲ ಒ೦ದು ಸಣ್ಣ ಬಿ೦ದು ವಾಕ್ಯವನ್ನು ಅ೦ತ್ಯ ಗೊಳಿಸಬಹುದು.. ಆದರೆ ಕೆಲವು ಹೆಚ್ಚುವರಿ ಬಿ೦ದುಗಳು ವಾಕ್ಯದ ಮು೦ದುವರಿಕೆಯನ್ನು ಸೂಚಿಸುತ್ತವೆ! ಪ್ರತಿ ಅ೦ತ್ಯವೂ ಮತ್ತೊದು ಹೊಸತರ ಆರ೦ಭವಾಗಿರುತ್ತದೆ!!
೧೫.ಸಾಧನೆಯೆಡೆಗಿನ ತನ್ನ “ದಾಹ“ದಿ೦ದಲೇ ಕ್ರಿಯಾತ್ಮಕ ವ್ಯಕ್ತಿಯೊಬ್ಬ ಪ್ರೇರಣೆಗೊಳ್ಳುತ್ತಾನೆಯೇ ವಿನ: ಮತ್ತೊಬ್ಬರನ್ನು ಸೋಲಿಸಬೇಕೆ೦ಬ ಹಠದಿ೦ದಲ್ಲ!!