Pages

Friday, July 30, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -11

ದೃಷ್ಟ್ವಾ ರೂಪೇ ವ್ಯಾಕರೋತ್ ಸತ್ಯಾನೃತೇ ಪ್ರಜಾಪತಿಃ|
ಅಶ್ರದ್ಧಾಮನೃತೇsದಧಾಚ್ಛ,ದ್ಧಾಂ ಸತ್ಯೇ ಪ್ರಜಾಪತಿಃ|| (ಯಜು.19.77)
[ಪ್ರಜಾಪತಿಃ] ಜೀವರೆಲ್ಲರ ಪಾಲಕನಾದ ಭಗವಂತನು [ರೂಪೇ ದೃಷ್ಟ್ವಾ] ಸತ್ಯಾಸತ್ಯಗಳ ರೂಪಗಳನ್ನು ನೋಡಿ [ಸತ್ಯಾನೃತೇ ವ್ಯಾಕರೋತ್] ಸತ್ಯವನ್ನೂ ಅಸತ್ಯವನ್ನೂ ಬೇರ್ಪಡಿಸಿದನು. [ಅನೃತೇ] ಅಸತ್ಯದಲ್ಲಿ [ಅಶ್ರದ್ಧಾಂ ಅದಧಾತ್] ಅಶ್ರದ್ಧೆಯನ್ನು ನೆಲೆಗೊಳಿಸಿದನು. [ಪ್ರಜಾಪತಿಃ] ಜೀವಮಾತ್ರರ ಸ್ವಾಮಿಯಾಧ ಭಗವಂತನು [ಸತ್ಯೇ] ಸತ್ಯದಲ್ಲಿ [ಶ್ರದ್ಧಾಂ ಅದಧಾತ್]ಶ್ರದ್ಧೆಯನ್ನು ನಿರೂಪಿಸಿದನು. ಸತ್ಯದಲ್ಲಿ ಶ್ರದ್ಧೆಯಿಡಬೇಕು.