Pages

Saturday, September 27, 2014

ಜೀವನವೇದ-11

ಮೇಲೆದ್ದು ನಡೆ, ಅಧ:ಪತನ ಹೊಂದಬೇಡ


ಈ ಸಂಚಿಕೆಯಲ್ಲಿ  ಮನುಷ್ಯನು ಕಷ್ಟ-ಸುಖಗಳನ್ನು ಹೇಗೆ ಸ್ವೀಕರಿಸಬೇಕೆಂಬುದನ್ನು ತಿಳಿಸುವ  ಅಥರ್ವ ವೇದದ ಒಂದು ಮಂತ್ರದ ಬಗ್ಗೆ ವಿಚಾರ ಮಾಡೋಣ.

ಉತ್ ಕ್ರಾಮಾತ: ಪುರುಷ ಮಾವ  ಪತ್ಥಾ
ಮೃತ್ಯೋ: ಪಡ್ವೀಶಮವಮುಂಚಮಾನ: |
ಮಾ ಚ್ಛಿತ್ಥಾ ಅಸ್ಮಾಲ್ಲೋಕಾದಗ್ನೇ: ಸೂರ್ಯಸ್ಯ ಸಂದೃಶ: ||
[ಅಥರ್ವ : ೮.೧.೪] 

ಅರ್ಥ:
ಪುರುಷ = ಹೇ ಜೀವನೇ
ಮೃತ್ಯೋ: ಪಡ್ವೀಶಂ ಅವಮುಂಚಮಾನ: = ಸಾವಿನ ಬಂಧವನ್ನು ಕೆಳಕ್ಕೆ ಸರಿಸಿಹಾಕುತ್ತಾ
ಅತ: ಉತ್ ಕ್ರಾಮಾ = ಇಲ್ಲಿಂದ ಮೇಲಕ್ಕೆದ್ದು ನಡೆ
ಮಾ ಅವ ಪತ್ಥಾ:  = ಕೆಳಗೆ ಬೀಳಬೇಡ
ಅಸ್ಮಾತ್ ಲೋಕಾತ್ = ಈ ಲೋಕದಿಂದ
ಮಾ ಛಿತ್ಥಾ: = ಕಡಿದುಹೋಗಬೇಡ
ಅಗ್ನೇ: = ರಾತ್ರಿಯಲ್ಲಿ ಅಗ್ನಿಯಂತೆ
ಸೂರ್ಯಸ್ಯ = ಹಗಲಿನಲ್ಲಿ ಸೂರ್ಯನಂತೆ
ಸಂದೃಶ: = ಸಮಾನವಾಗಿ ಪ್ರಕಾಶಿಸು

ಭಾವಾರ್ಥ: 
 ಹೇ ಜೀವನೇ, ನೀನು ಈಗಿರುವ ಸ್ಥಾನದಿಂದ ಮೇಲೆದ್ದು ನಡೆ, ಅಧ: ಪತನ ಹೊಂದಬೇಡ. ಸಾವಿನ ಬಂಧವನ್ನು ಬಿಡಿಸಿ ಕೊಳ್ಳುತ್ತಾ ಈ ಲೋಕದಿಂದ ಕಡಿದುಹೋಗಬೇಡ. 
ಉತ್ಕ್ರಾಮಾ, ಮಾ ಅವಪತ್ಥಾ:  , ಈ ಎರಡು ಪದಗಳು ಮನುಷ್ಯನಿಗೆ ಅದೆಷ್ಟು ಆತ್ಮವಿಶ್ವಾಸವನ್ನೂ, ಚೇತನವನ್ನೂ ಕೊಡುತ್ತದೆ! ವೇದಗಳೇ ಹಾಗೆ. ಯಾರನ್ನೂ ಬೀಳಲು ಬಿಡುವುದಿಲ್ಲ. ಮೇಲೆತ್ತುವುದೇ ವೇದದ ಹೆಚ್ಚುಗಾರಿಕೆ. ಒಂದೊಂದು ಮಂತ್ರದಲ್ಲೂ ಮನುಷ್ಯನ ಏಳಿಗೆ,ಉನ್ನತಿಯ ಬಗ್ಗೆ ಸ್ಪೂರ್ಥಿದಾಯಕ ನುಡಿಗಳೇ! ಕಷ್ಟ ಸುಖಗಳನ್ನು ಹೇಗೆ ಸ್ವೀಕರಿಸಬೇಕೆಂಬುದಕ್ಕೆ ಹೇಳುತ್ತ “ ರಾತ್ರಿಯಲ್ಲಿ ಅಗ್ನಿಯಂತೆ, ಹಗಲಿನಲ್ಲಿ ಸೂರ್ಯನ  ಸಮಾನವಾಗಿ ಪ್ರಕಾಶಿಸು.ಅಂದರೆ ಆಧ್ಯಾತ್ಮಿಕ ಜೀವನದ ಗುಂಗಿನಲ್ಲಿ ಈ ಲೋಕದಿಂದ ಕರ್ತವ್ಯಗಳಿಂದ ದೂರ ಓಡಬಾರದು. ಜೀವನದ ರಾತ್ರಿಯಲ್ಲಿ ಅಂದರೆ ದು:ಖಮಯ ಸ್ಥಿತಿಯಲ್ಲಿ ಅಗ್ನಿಯಂತೆ ಉರಿದು ದು:ಖವನ್ನು ದಹಿಸಬೇಕು. ಜೀವನದ ಹಗಲಿನಲ್ಲಿ ಅಂದರೆ ಸುಖಮಯ ಸ್ಥಿತಿಯಲ್ಲಿ ಸೂರ್ಯನಂತೆ ಬೆಳಗಿ ಎಲ್ಲರಿಗೂ ಆ ಸುಖವನ್ನು ಕೊಡಬೇಕು. ವೇದದ ಒಂದೊಂದು ಮಾತೂ ಚೇತೋಹಾರಿ. ಇಲ್ಲಿ ಆಲಸ್ಯಕ್ಕೆ ಆಸ್ಪದವೇ ಇಲ್ಲ. ಹೇಡಿತನಕ್ಕೆ ಜಾಗವಿಲ್ಲ. ಜೀವನದಲ್ಲಿ ಬರುವ ಕಷ್ಟಸುಖಗಳನ್ನು ಸ್ವೀಕರಿಸುವ ಬಗೆಯನ್ನು  ಅದ್ಭುತವಾಗಿ  ಈ ಮಂತ್ರದಲ್ಲಿ ವರ್ಣಿಸಿದೆ. ಈ ಮಂತ್ರವನ್ನು ನೋಡುವಾಗ ಸಹಜವಾಗಿ ಇದೊಂದು ಜೀವನ ಸೂತ್ರವಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ, ಎಂಬುದು ಮನವರಿಕೆಯಾಗದೆ ಇರದು ಅಲ್ಲವೇ? 

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕವೂ ಮುಗಿಯುತ್ತಾ ಬಂತು. ಬ್ರಿಟಿಶರೇನೋ ನಮ್ಮನ್ನು ಒಟ್ಟಾಗಿ ಇರಲು ಬಿಡಲಿಲ್ಲ. ಒಡೆದು ಆಳುವ ನೀತಿಯನ್ನು ಅನುಸರಿಸಿ ನಮ್ಮ ಸಮಾಜದಲ್ಲಿ ಮೇಲು-ಕೀಳುವರ್ಗಗಳನ್ನು ಉಳಿಸಿಬಿಟ್ಟರು. ಆದರೆ ನಮ್ಮವರ ಕೈಗೆ ಆಡಳಿತದ ಚುಕ್ಕಾಣಿ ಬಂದಮೇಲೆ ಮಾಡಿದ್ದೇನು? ಮತ್ತೆ ಬ್ರಿಟಿಶರದೇ ನೀತಿ. ಎಲ್ಲವೂ ಗದ್ದುಗೆ ಉಳಿಸಿಕೊಳ್ಳುವ ಉಪಾಯಗಳೇ ಹೊರತೂ ನಮ್ಮ ಜನರ ಕೈಗೇ ಆಡಳಿತದ ಹೊಣೆ ಸಿಕ್ಕಮೇಲೂ ನಮ್ಮ ಋಷಿಮುನಿಗಳು ತಮ್ಮ ತಪಸ್ಸಿನ ಪರಿಣಾಮವಾಗಿ ಕಂಡುಕೊಂಡ ಸತ್ಯದ ಮಾರ್ಗದಲ್ಲಿ ಸರ್ಕಾರ ನಡೆಸುವ ಪ್ರಯತ್ನವನ್ನು ಮಾಡಲೇ ಇಲ್ಲ.

ಒಂದು ಸಮಾಜವು ಉತ್ತಮವಾಗಿರಲು, ಮೇಲು ಕೀಳು ಹೋಗಲಾಡಿಸುವ ಸೂತ್ರಗಳು ವೇದದಲ್ಲಿ ಹೇರಳವಾಗಿ ಕಾಣಬರುತ್ತವೆ. ವೇದವು ಒಬ್ಬ ಮನುಷ್ಯನನ್ನು ಸೋಮಾರಿಯಾಗಿರಲು ಬಿಡುವುದೇ ಇಲ್ಲ. ಬದಲಿಗೆ ಜೀವನದಲ್ಲಿ ಕಷ್ಟಗಳು ಬಂದರೆ ಅದನ್ನು ಹೇಗೆ ಸ್ವೀಕರಿಸಬೇಕು, ಅದನ್ನು ಮೆಟ್ಟಿ ನಿಲ್ಲುವ ಬಗೆ ಹೇಗೆ? ಎಂದು ಎಲ್ಲರಲ್ಲೂ ಉತ್ಸಾಹವನ್ನು ತುಂಬುತ್ತದೆ. ನಮ್ಮ ಸರ್ಕಾರದ ನೀತಿಯಾದರೂ ಇದಕ್ಕೆ ತದ್ವಿರುದ್ಧವಾಗಿರುವುದನ್ನು ನಾವು ನೋಡುತ್ತೇವೆ. ಬಡವರಿಗೆ ಒಂದಿಷ್ಟು ಧನಸಹಾಯ ಮಾಡಿ ತತ್ ಕಾಲಕ್ಕೆ ಬಡವನ ಮೂತಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಮಾಡುತ್ತದೆಯೇ ಹೊರತೂ , ಅವನಿಗೆ ದುಡಿಯಲು ಅಗತ್ಯವಾದ ಅವಕಾಶವನ್ನೇ ಮಾಡಿಕೊಡುವುದಿಲ್ಲ. ಅಂತೂ ಸರ್ಕಾರದ ಸಹಾಯಧನ ಪಡೆದು ಅದರ ಹಂಗು ಒಂದು ಕಡೆಯಾದರೆ ಶ್ರಮವಹಿಸಿ ದುಡಿಯುವ ಬದಲು ಸೋಮಾರಿಯಾಗಿ ದೇಶಕ್ಕೆ ದೊಡ್ದ ಸಮಸ್ಯೆಯಾಗುವುದು ಮತ್ತೊಂದು ದುರಂತ.  ಆದರೆ ನಮ್ಮ ವೇದ ಮಂತ್ರಗಳು ಬೀಳುತ್ತಿರುವವನನ್ನು ನೀನು ಬೀಳಬೇಡ, ನಿನ್ನಲ್ಲಿ ಎದ್ದು ನಿಲ್ಲುವ ಸಾಮರ್ಥ್ಯವಿದೆ,ಏಳು ಎಲ್ಲವನ್ನೂ ಎದುರಿಸಿ ಮುಂದೆ ನಡೆಎ॒ಂದು ಪ್ರೇರಣೆಯನ್ನು ತುಂಬುತ್ತವೆ.
ವೇದದ ಮಾತಿಗೆ ಕಿವುಡಾದವರು ಅರ್ಥಾತ್ ಸುವಿಚಾರಗಳನ್ನು ಕೇಳಿಸಿಕೊಳ್ಳದವರ ಪರಿಸ್ಥಿತಿ ಹೇಗಾಗುತ್ತದೆಂಬುದನ್ನೂ ಋಗ್ವೇದದ ಒಂದು ಮಂತ್ರದಿಂದ ತಿಳಿದುಕೊಳ್ಳೋಣ.

ಪ್ರತ್ನಾನ್ಮಾನಾದಧ್ಯಾ ಯೇ  ಸಮಸ್ವರನ್ಛ್ಲೋಕಯಂತ್ರಾಸೋ ರಭಸಸ್ಯ ಮಂತವ: |
ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತ: ||
[ಋಗ್-೯.೭೩.೬]

ಅರ್ಥ:-
ಯೇ = ಯಾರು
ಪ್ರತ್ನಾತ್ ಮಾನಾತ್ ಅಧಿ = ಶಾಶ್ವತ ಪ್ರಮಾಣವಾದ ವೇದ ಜ್ಞಾನದ ಆಶ್ರಯದಲ್ಲಿ 
ಆ ಸಂ ಅಸ್ವರನ್ = ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನ ವನ್ನು ಪಡೆದುಕೊಳ್ಳುತ್ತಾರೋ ಅವರು 
ಶ್ಲೋಕ ಯಂತ್ರಾಸ: = ವೇದ ಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ
ರಭಸಸ್ಯ ಮಂತವ: = ಸರ್ವಶಕ್ತಿಮಾನ್ ಪ್ರಭುವನ್ನು ತಿಳಿದವರೂ ಆಗುತ್ತಾರೆ.
ಅನಕ್ಷಾಸ: = ಜ್ಞಾನದೃಷ್ಟಿಯಿಂದ ಕುರುಡುರೂ
ಬಧಿರಾ: = ಕಿವುಡರೂ 
ಋತಸ್ಯ ಪಂಥಾಮ್ = ಧರ್ಮದ ಮಾರ್ಗವನ್ನು
ಅಹಾಸತ = [ವೇದಜ್ಞಾನವನ್ನು] ತ್ಯಜಿಸುತ್ತಾರೆ
ದುಷ್ಕೃತ: = ದುಷ್ಕರ್ಮ ನಿರತರು 
ನ ತರಂತಿ = ಪಾರುಗಾಣುವುದಿಲ್ಲ

ಭಾವಾರ್ಥ:-
ವೇದದ ಸೂತ್ರಗಳು  ಶಾಶ್ವತವೂ, ಸಾರ್ವಕಾಲಿಕವೂ, ಸಾರ್ವಭೌಮವೂ ಆಗಿದೆ ಎಂಬುದನ್ನು ಹಲವು ಮಂತ್ರಗಳಲ್ಲಿ ಈಗಾಗಲೇ ನೋಡಿದ್ದೇವೆ. ಅದು ಬೋಧಿಸುವ ಮಾರ್ಗವು ಧರ್ಮ ಮಾರ್ಗ.ವೇದಗಳ ನಿರ್ಮಲಜ್ಞಾನವನ್ನು ಪಡೆದು , ಜ್ಞಾನದಾಯಕ ಮಂತ್ರಗಳ ಮೇಲೆ ಅಧಿಕಾರ ಪಡೆದು  ಪ್ರಭುಸಾಕ್ಷಾತ್ಕಾರವನ್ನು ಮಾಡಿಕೊಳ್ಳ ಬಹುದು. ಆದರೆ ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ ಮೂಢಜನರು ಋತದಮಾರ್ಗವನ್ನು ಅಂದರೆ ಧರ್ಮಮಾರ್ಗವನ್ನು ಬಿಡುತ್ತಾರೆ. ಅಂತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು.ಜೀವನಕ್ಕೆ ಎರಡು ಮುಖಗಳಿವೆ.ಆತ್ಮೋದ್ಧಾರಕ್ಕಾಗಿ ಆಧ್ಯಾತ್ಮಿಕ ಸಾಧನೆ, ದೇಹ ಪೋಷಣೆಗಾಗಿ ಲೌಕಿಕ ಕರ್ಮಗಳು. ಸಾಂಸಾರಿಕ ಅಭ್ಯುದಯ ಮತ್ತು ಪಾರಮಾರ್ಥಿಕ ಉತ್ಕರ್ಷ ?ಈ ಎರಡನ್ನೂ ಸಾಧಿಸಿಕೊಡುವ ಜೀವನ ಪಥವೇ ಧರ್ಮ.

“ವೇದ ಮಂತ್ರಗಳ ಮೇಲೆ ಅಧಿಕಾರ ಪಡೆದು  ಪ್ರಭುಸಾಕ್ಷಾತ್ಕಾರವನ್ನು ಮಾಡಿ ಕೊಳ್ಳ ಬಹುದು. ಅಂದರೆ ಆನಂದಮಯ ಜೀವನ ಮಾಡಬಹುದು ಎಂದು ಅರ್ಥ.  ಆದರೆ ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ ಮೂಢಜನರು ಋತ ದಮಾರ್ಗವನ್ನು ಅಂದರೆ ಧರ್ಮಮಾರ್ಗವನ್ನು ಬಿಡುತ್ತಾರೆ. ಅಂತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು, ಅಂದರೆ ಅವರಿಗೆ ಆನಂದಮಯ ಜೀವನ ಲಭ್ಯವಾಗಲು ಅವಕಾಶವೇ ಇಲ್ಲದಂತಾಗುತ್ತದಲ್ಲವೇ?
ಈ ವಿವರಣೆ ನೋಡಿದಾಗ ಇಸ್ಲಾಮ್ ಅಥವಾ ಕ್ರೈಸ್ತಮತಗಳಲ್ಲಿ ಹೇಳುವಂತೆ “ ಈ ಮಾರ್ಗವನ್ನು ನಂಬಿದರೆ ಮಾತ್ರ ನೀನು ಮೋಕ್ಷ ಪಡೆಯಬಲ್ಲೆ” ಎಂಬಂತೆ ಬಾಸವಾಗುತ್ತಲ್ಲಾ! ಎನಿಸದೆ ಇರದು.ಆದರೆ ವೇದವನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗೆ  ಇಂತಹ ಸಂದೇಹ ಬರಲಾರದು. ಕಾರಣ “ನಿನ್ನನ್ನು ಕಲ್ಯಾಣಮಾರ್ಗದಲ್ಲಿ ಯಾವುದು ಕರೆದುಹೊಂಡು ಹೋಗುತ್ತದೋ ಆ ಮಾರ್ಗದಲ್ಲಿ ನಿನ್ನ ಜೀವನ ರಥ ಸಾಗಲಿ, ಎಂಬ  ಮಂತ್ರದ ವಿವರಣೆಯನ್ನು  ಈಗಾಗಲೇ ನಾವು ನೋಡಿದ್ದೇವೆ.ಹಾಗಾಗಿ ವೇದವು ನೆಮ್ಮದಿಯ ಮತ್ತು ಆರೋಗ್ಯಕರ ಜೀವನ ಸೂತ್ರಗಳನ್ನು ಹೇಳುವುದರಿಂದ ಈ ತಿಳುವಳಿಕೆ ಪಡೆದವನು ಸುಖಿಯಾಗಿರಬಲ್ಲನೆಂದೂ ಈ ಅರಿವನ್ನು ತಿರಸ್ಕರಿಸುವವನು ಸುಖಿಯಾಗಿರಲಾರನೆಂದಷ್ಟೇ ಈ ಮಂತ್ರದ ಅರ್ಥ.  ಪ್ರಭುಸಾಕ್ಷಾತ್ಕಾರವೆಂದರೆ  ಭಗವಚ್ಛಕ್ತಿಯ ಸ್ವರೂಪವನ್ನು ನಮ್ಮ ಅಂತರ್ಯದಲ್ಲಿ ಅನುಭವಿಸುವುದೆಂದು ಅರ್ಥ ಮಾಡಿಕೊಂಡರೂ ತಪ್ಪಿಲ್ಲ.

-ಹರಿಹರಪುರಶ್ರೀಧರ್



Friday, September 26, 2014

ಜೀವನವೇದ-10


ಸತ್ಯವನ್ನು ಆವಿಷ್ಕರಿಸಿ-ನಿರ್ಭೀತರಾಗಿ ಜೀವನ ನಡೆಸಿ

       ಧರ್ಮದ ಆಚರಣೆ ಎಂದರೆ ಯಾವುದು ತಲೆತಲಾಂತರದಿಂದ ನಡೆದು ಬಂದಿದೆ, ಅದನ್ನು ಪ್ರಶ್ನೆ ಮಾಡದೆ ಅನುಸರಿಸುವುದು-ಎಂಬುದು ಸಾಮಾನ್ಯ ಅಭಿಪ್ರಾಯ. ಇದಕ್ಕೆ ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲ. ಹಾಗೆ ನೋಡಿದರೆ ವಿದ್ಯಾವಂತರೆನಿಸಿಕೊಂಡು ಪದವಿಗಳ ಸರಮಾಲೆಯನ್ನು ಹಾಕಿಕೊಂಡವರೇ ಪ್ರಶ್ನೆ ಮಾಡದೆ ಕುರುಡಾಗಿ ಅನುಸರಿಸುವುದನ್ನು ನಾವು ಸಮಾಜದಲ್ಲಿ ಹೆಚ್ಚು ಕಾಣಬಹುದು.ಇದಕ್ಕೆ ಕಾರಣ ಸ್ಪಷ್ಟ.ಅದುವೇ ಭಯ.
ಹೆಸರಿನ ಮುಂದೆ ಹಲವು ಪದವಿಗಳಿವೆ. ಒಳ್ಳೆಯ ಉದ್ಯೋಗ ಸಿಕ್ಕಿದೆ. ಲಕ್ಷಕ್ಕೆ ಕಮ್ಮಿ ಇಲ್ಲದಂತೆ ದುಡಿಮೆ ಇದೆ. ವಾಸಕ್ಕೆ ಸುಸಜ್ಜಿತ ಮನೆ.ಅದರಲ್ಲಿ ಪತ್ನಿ ಮತ್ತು  ಮುದ್ದಾದ ಮಗುವಿನೊಡನೆ ಹಾಯಾಗಿ ಜೀವನ ಸಾಗಿರುವಾಗ ಯಜಮಾನನಿಗೆ ಅವನಿಗೆ ಅರಿವಿಲ್ಲದಂತೆ ಭಯ,ಅಭದ್ರತೆ ಕಾಡುತ್ತದೆ. ಭಗವಂತ! ಪತ್ನಿ ಮತ್ತು ಮಗುವಿನೊಡನೆ ನನ್ನನ್ನು ಸುಖವಾಗಿ ಕಾಪಾಡೆಂದು ಎಲ್ಲಾ ದೇವರಿಗೂ ಪ್ರಾರ್ಥಿಸಿ ಮನೆ ಮುಂದೆ ಬಂದ ಬುಡುಬುಡುಕೆಯವನ ಬಾಯಲ್ಲಿ ಏನಾದರೂ ಕೆಟ್ಟ ಮಾತು ಬಂದೀತೆಂದು ಮನೆಯಲ್ಲಿದ್ದ ಬಟ್ಟೆಯನ್ನೋ ಹತ್ತಿಪ್ಪತ್ತು ರೂಪಾಯಿ ದುಡ್ದನ್ನೋ ಕೊಟ್ಟು ಅವನು ಹೋದಮೇಲೆ ನಿರಾಳನಾಗುತ್ತಾನೆ.
ಇಂತಾ ಉಧಾಹರಣೆಗಳಿಗೇನೂ ಕೊರತೆ ಇಲ್ಲ. ಜೀವನ ದುಸ್ತರವಾಗಿದ್ದಾಗ ಕಾಡದಿದ್ದ ಅಭದ್ರತೆ ಜೀವನವು ಸುಖವಾಗಿರುವಾಗ ಕಾಡಲಾರಂಭಿಸುವುದೇಕೇ? ಜೀವನದಲ್ಲಿ ಕಷ್ಟವಿದ್ದಾಗ ಇಲ್ಲದಿದ್ದ ಭಯ ಸುಖದಲ್ಲಿ ಕಾಡುವುದಾದರೂ ಏಕೇ? ಸತ್ಯದ ಅರಿವಾಗದಿರುವುದೇ ಜೀವನದಲ್ಲಿ ಭಯಕ್ಕೆ ಕಾರಣ. ಅಭದ್ರತೆಯ ಭಾವನೆಗೆ  ಕಾರಣ.
    ಧರ್ಮಾಚರಣೆಯ ಹೆಸರಲ್ಲಿ ಮೌಢ್ಯದಿಂದ ವರ್ತಿಸುವ ಹಲವು ಉಧಾಹರಣೆಗಳಿವೆ.ಸಾಮಾನ್ಯವಾಗಿ ಬಳಕೆಯಲ್ಲಿರುವ ಒಂದು ಕಥೆ ಎಲ್ಲರಿಗೂ ತಿಳಿದದ್ದೇ.ಆದರೂ ನೆನಪು ಮಾಡುವೆ.
ಬ್ರಾಹ್ಮಣನೊಬ್ಬನ ಮನೆಯಲ್ಲಿ ಅವನ ತಂದೆಯ ಶ್ರಾದ್ಧದ ದಿನ ಮನೆಯಲ್ಲಿದ್ದ ಬೆಕ್ಕಿನ ಮೇಲೆ  ಕುಕ್ಕೆಯೊಂದನ್ನು ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಕಾರಣ ಬಲು ಸರಳ. ಮನೆಯಲ್ಲಿ ಬೆಕ್ಕು ಓಡಾಡುತ್ತಿದ್ದರೆ ಶ್ರಾದ್ಧದ ಊಟ ಮಾಡುತ್ತಿದ್ದವರ ಎಲೆಗೆ ಬೆಕ್ಕಿನ ಕೂದಲು ಬಿದ್ದೀತೆಂಬ ಮುನ್ನೆಚ್ಚರಿಕೆ. ಹೀಗೇ ಹಲವು ವರ್ಷಗಳು ನಡೆಯಿತು. ಮನೆಯ ಯಜಮಾನ ಮರಣ  ಹೊಂದಿದ. ಅವನ ಮಗ ಈಗ ಅವನ ಶ್ರಾದ್ಧಮಾಡಬೇಕು. ಶ್ರಾದ್ಧದ ದಿನ ಬಂತು. ತನ್ನ ಅಪ್ಪ ಶ್ರಾದ್ಧ ಮಾಡುವಾಗ ಬೆಕ್ಕಿನ ಮೇಲೆ ಕುಕ್ಕೆ ಮುಚ್ಚಿ ನಂತರ ಶ್ರಾದ್ಧ ಮಾಡುತ್ತಿದ್ದ. ಆದರೆ ಇವನ ಕಾಲಕ್ಕೆ ಮನೆಯಲ್ಲಿ ಬೆಕ್ಕು ಇಲ್ಲದಂತಾಗಿದೆ. ಏನು ಮಾಡುವುದು? ಊರೆಲ್ಲಾ ಸುತ್ತಿ ಒಂದು ಬೆಕ್ಕು ತಂದ. ಅದರ ಮೇಲೆ ಕುಕ್ಕೆ ಮುಚ್ಚಿದ. ಶ್ರಾದ್ಧ ಮಾಡಿದ್ದಾಯ್ತು. ಎಲ್ಲರೂ  ಊಟವನ್ನೂ ಮಾಡಿದರು. ರಾತ್ರಿಯಾಯ್ತು. ಆ ದಿನ ಕಳೆದು ಹೋಯ್ತು. ಬೆಳಿಗ್ಗೆ ಎದ್ದಾಗ ಕುಕ್ಕೆ ಮುಚ್ಚಿದ್ದ ಬೆಕ್ಕಿನ ಬಗ್ಗೆ ನೆನಪಾಯ್ತು. ಕುಕ್ಕೆ ಎತ್ತುತ್ತಾನೆ. ಬೆಕ್ಕು ಉಸಿರಾಡದೆ ಮಲಗಿದೆ. ಗಾಳಿಯೇ ಆಡದ ಪ್ಲಾಸ್ಟಿಕ್ ಕುಕ್ಕೆಯನ್ನು ಮುಚ್ಚಿ ಅದರ ಮೇಲೆ ಅಲುಗಾಡದಂತೆ ತೂಕವನ್ನು ಇಟ್ಟಿದ್ದ ಪರಿಣಾಮ ಉಸಿರಾಡಲೂ ಸಾಧ್ಯವಿಲ್ಲದೆ ಬೆಕ್ಕು ಕೊನೆ ಉಸಿರೆಳೆದಿತ್ತು!! ಇಂತಾ ಘೋರ ಕೃತ್ಯಕ್ಕೆ ಕಾರಣವಾದರೂ ಏನು? ಹಿಂದಿನ ಉದ್ಧೇಶವನ್ನೇ ತಿಳಿಯದೆ ಆಚರಿಸಿದ  ಕುರುಡು ಆಚರಣೆಯಲ್ಲವೇ?  

ವೇದದ ಹೆಸರು ಕೇಳಿದೊಡನೆ ಒಂದು ಜಾತಿಗೆ ಸೀಮಿತಗೊಳಿಸಿ ಹರಿಹಾಯುವ ಜನರು ತಾವು ನಿರ್ಭೀತ ಜೀವನ ಮಾಡಬೇಕಾದರೆ ವೇದದ ಮಾರ್ಗದರ್ಶನವನ್ನೇ ಪಡೆಯಬೇಕು. ವೇದವು ಜನರಲ್ಲಿ ಎಂತಹಾ ನಿರ್ಭೀತ ಸ್ಥಿತಿಯನ್ನು ಉಂಟುಮಾಡುತ್ತದೆಂಬುದನ್ನು ತಿಳಿಯಲು ಈ ವೇದಮಂತ್ರದ ಅರ್ಥವನ್ನು ಒಮ್ಮೆ ವಿಚಾರ ಮಾಡೋಣ.

ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷ: ||
[ಋಕ್-೧.೮೬.೯]

ಸತ್ಯಶವಸ: = ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ
ಯೂಯಮ್ = ನೀವು
ಮಹಿತ್ವನಾ = ನಿಮ್ಮ ಸ್ವಂತ ಮಹಿಮೆಯಿಂದ
ತತ್ ಆವಿಷ್ಕರ್ತ =ಆ ಸತ್ಯವನ್ನು ಆವಿಷ್ಕರಿಸಿರಿ
ರಕ್ಷ: = ದುಷ್ಕಾಮನೆಗಳನ್ನು 
ವಿದ್ಯುತಾ = ನಿಮ್ಮ ಜ್ಞಾನಜ್ಯೋತಿಯಿಂದ
ವಿಧ್ಯತಾ = ಸೀಳಿಹಾಕಿರಿ
ಭಾವಾರ್ಥ:-
ಓ ಧೀರರೇ, ನಿಮ್ಮ ಸ್ವಂತ ಮಹಿಮೆಯಿಂದ ಸತ್ಯವನ್ನು ಆವಿಷ್ಕರಿಸಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿ ಹಾಕಿರಿ.
ಒಂದೊಮ್ಮೆ ಈ ಮಂತ್ರದ ಅರಿವಿದ್ದಿದ್ದರೆ ಬೆಕ್ಕನ್ನು ಕೊಲ್ಲುವ ಮೌಢ್ಯದ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ಬೆಕ್ಕಿನ ಕಥೆಯಲ್ಲಿ ಅತಿರೇಕವಿರ ಬಹುದು. ಆದರೆ ಸತ್ಯವಿಲ್ಲದೆ ಇಲ್ಲ! 
ಈ ಮಂತ್ರವನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ನನ್ನ ಕಣ್ಮುಂದೆ ಒಬ್ಬ ಗುರು ತನ್ನ ಯುವ ಶಿಷ್ಯನಿಗೆ ಸಿಡಿಲಿನಂತಹ ಮಾತುಗಳಿಂದ ಉಪದೇಶ ಮಾಡುತ್ತಿದ್ದಾನೇನೋ ಎಂದು ಭಾಸವಾಗುತ್ತದೆ. ಒಬ್ಬ ತಂದೆ ತನ್ನ ಮಗನಿಗೆ, ಗುರು ತನ್ನ ಶಿಷ್ಯನಿಗೆ ಈ ಮಂತ್ರದ ಅರ್ಥವನ್ನು ತಿಳಿಸಿದರೆ ಅವನಲ್ಲಿ ಅದೆಂತಹಾ ಅದ್ಭುತ ಶಕ್ತಿ ಮೂಡೀತು! ಭಯವೆಂಬುದಕ್ಕೆ ಆಸ್ಪದವೇ ಇಲ್ಲ. ಅಭದ್ರತೆಯ ಭಯವು ಕಾಡಲಾರದು. ಸತ್ಯದ ದರುಶನವಾದಾಗ ನಿರ್ಭೀತ ಜೀವನ ನಮ್ಮ ದಾಗುತ್ತದೆ.
ಮಂತ್ರವಾದರೂ ಏನು ಹೇಳುತ್ತದೆ?  ಹೇ ಧೀರರೇ, ನಿಮ್ಮ ಸ್ವಂತ ಸಾಮರ್ಥ್ಯದಿಂದ, ನಿಮ್ಮ ವಿವೇಕದಿಂದ, ನಿಮ್ಮ ಬುದ್ಧಿಯಿಂದ, ಸತ್ಯವನ್ನು ಆವಿಷ್ಕರಿಸಿ.ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ
ಇಲ್ಲಿ ಕುರುಡು ಆಚರಣೆಗೆ ಅವಕಾಶವಿದೆಯೇ? ವೇದವಾದರೂ ಮಂತ್ರದಲ್ಲಿ ಬಳಸಿರುವ ಪದಗಳ ತೀವ್ರತೆಯನ್ನು ಗಮನಿಸಿದಿರಾ? ನಿಮ್ಮ ಜ್ಞಾನಜ್ಯೋತಿಯಿಂದ ದುಷ್ಕಾಮನೆಗಳನ್ನು ಸೀಳಿಹಾಕಿರಿ- ಇಂತಹ ವಿಶ್ವಾಸ ತುಂಬುವ ಮಾತುಗಳನ್ನು ವೇದವು  ಮಾತ್ರವೇ ಹೇಳಲು ಸಾಧ್ಯ. 

ಅರ್ಥವನ್ನು ಸರಿಯಾಗಿ ತಿಳಿಯದೆ ಆಚರಿಸಿದಾಗ  ಅನರ್ಥಕ್ಕೆ ಕಾರಣವಾಗುತ್ತದೆ                                                                                                          
ಇಂದು ಸಮಾಜದಲ್ಲಿ ಕಾಣುವ ಸಾಮರಸ್ಯದ ಕೊರತೆಗೆ ಧರ್ಮವನ್ನು ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ಆಚರಿಸುವ ಕಂದಾಚಾರಗಳೂ ಕೂಡ ಹಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ, ಯಜ್ಞ ಯಾಗಾದಿಗಳನ್ನು ಮಾಡುವಾಗ ಪ್ರಾಣಿಬಲಿಗೆ ಅವಕಾಶವೇ ಇಲ್ಲದಿದ್ದರೂ ಅಶ್ವಮೇಧ, ಅಜಮೇಧದಂತಹ ಯಜ್ಞಗಳನ್ನು ಮಾಡುವಾಗ ಕುದುರೆಯನ್ನು /ಮೇಕೆಯನ್ನು ಬಲಿಕೊಡಬೇಕೆನ್ನುವ ಒಂದು ವರ್ಗ ಈಗಲೂ ಇರುವಾಗ ಅದನ್ನು ವಿರೋಧಿಸುವ ಒಂದು ವರ್ಗ ಸಹಜವಾಗಿ ಇರುತ್ತದೆ. ಆಗ ಸಾಮಾಜಿಕ ಸಾಮರಸ್ಯವು ಹಾಳಾಗುವುದಕ್ಕೆ ಧರ್ಮದ ಹೆಸರಿನಲ್ಲಿ ನಡೆವುವ ಅಧರ್ಮದ ಕ್ರಿಯೆಗಳು ಕಾರಣವಾಗುತ್ತವೆ. 
ಯಜ್ಞಕ್ಕೆ ಮತ್ತೊಂದು ಹೆಸರು ಅಧ್ವರ ಎಂದು. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದು ಅರ್ಥ. ಹೀಗೆ ಯಜ್ಞಕ್ಕೆ  ಅಹಿಂಸೆ ಎಂಬ ಅರ್ಥವಿದ್ದರೂ ಕೂಡ ಅಲ್ಲಿ ಪ್ರಾಣಿಬಲಿ ಮಾಡಲೇ  ಬೇಕೆನ್ನುವ ಗುಂಪಿನಿಂದ  ಅದನ್ನು ವಿರೋಧಿಸಿದವರನ್ನು ಧರ್ಮದ್ರೋಹಿಗಳೆಂಬ ಹಣೆ ಪಟ್ಟಿ ಕಟ್ಟುವ ಪ್ರಯತ್ನ ನಡೆಯುತ್ತದೆ.
 ನಾವು ಧರ್ಮದ ಹೆಸರಿನಲ್ಲಿ ಆಚರಿಸುವ ಪ್ರತಿಯೊಂದು ಕೆಲಸವನ್ನೂ ಆಚರಣೆಗೆ ಮುಂಚೆ ಅದರಲ್ಲಿ ಸತ್ಯವನ್ನು ಆವಿಷ್ಕರಿಸುವ ಪ್ರಯತ್ನವನ್ನು ಮಾಡಿದ್ದೇ ಆದರೆ ಯಾವ ಧರ್ಮಕಾರ್ಯವೂ ಮಾನವತೆಯ ವಿರೋಧಿಯಾಗಿರುವುದಿಲ್ಲ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯದಲ್ಲೂ ಸತ್ಯವನ್ನು ಆವಿಷ್ಕರಿಸುವಂತಹ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಶ್ವಮೇಧ ಯಾಗದ ನಿಜವಾದ ಅರ್ಥ ತಿಳಿದಾಗ ಅದನ್ನು ವಿರೋಧಿಸುವ ಪ್ರಸಂಗವೇ ಎದುರಾಗುವುದಿಲ್ಲ. ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧದ ಬಗ್ಗೆ ಹೇಳಿದೆ........ "ಅಶ್ವಂ ಇತಿ ರಾಷ್ಟ್ರಂ" ಅದರ ವಿವರಣೆ ಹೀಗಿದೆ. ಶ್ವ: ಅಂದರೆ ನಾಳೆ. ಅಶ್ವ: ಅಂದರೆ ಯಾವುದಕ್ಕೆ ನಾಳೆ ಇಲ್ಲವೋ ಅದು.ಯಾವುದಕ್ಕೆ ನಾಳೆ ಎನ್ನುವುದು ಇಲ್ಲವೋ ಅದಕ್ಕೆ ನಿನ್ನೆ ಎಂಬುದೂ ಇಲ್ಲ. ಅಂದರೆ ಯಾವುದು ನಿರಂತರವಾಗಿ ಇದ್ದೇ ಇರುತ್ತದೋ ಅದಕ್ಕೆ ನಿನ್ನೆ ನಾಳೆಗಳಿಲ್ಲ. ಯಾವುದು ಶಾಶ್ವತವಲ್ಲವೋ ಅದಕ್ಕೆ ನಿನ್ನೆ ನಾಳೆಗಳಿರುತ್ತದೆ. ನಿನ್ನೆ ಇತ್ತು, ಇವತ್ತು ಇದೆ. ನಾಳೆ ಗೊತ್ತಿಲ್ಲ ಅಂದರೆ ಅದು ಶಾಶ್ವತವಲ್ಲ ಎಂದಾಯ್ತು.ಯಾವುದು ನಿನ್ನೆ ಇತ್ತು, ಇವತ್ತೂ ಇದೆ, ನಾಳೆಯೂ ಇರುತ್ತದೋ ಅದು ಮಾತ್ರ ಶಾಶ್ವತ.ಯಾವುದು ನಿರಂತರವಾಗಿರುತ್ತದೆ, ಅದು ಅಶ್ವ.ಆದ್ದರಿಂದಲೇ "ಅಶ್ವಂ ಇತಿ ರಾಷ್ಟ್ರಂ" ನಾನು ಇವತ್ತು ಇದ್ದೀನಿ, ನಾಳೆ ಗೊತ್ತಿಲ್ಲ.ಆದರೆ ರಾಷ್ಟ್ರಶಾಶ್ವತ.["ದೇಹ ನಶ್ವರ-ದೇಶ ಶಾಶ್ವತ] ನಾವೆಲ್ಲಾ ಪ್ರಜೆಗಳು ಇಂದು ಇದ್ದೀವಿ. ಇನ್ನೊಂದು ಐವತ್ತು ವರ್ಷ ನಾವು ಇರಬಹುದೇನೋ , ಮತ್ತೆ ಬೇರೆ ಪ್ರಜೆಗಳ ಹುಟ್ಟು, ಸಾವು, ಇದೆಲ್ಲಾ ನಡೆಯುತ್ತಲೇ ಇರುತ್ತದೆ.ಎಷ್ಟೋ ತಲೆಮಾರು ಕಳೆಯುತ್ತಲೇ ಇರುತ್ತದೆ ,ಅದರೆ ರಾಷ್ಟ್ರ ಮಾತ್ರ ನಿರಂತರ. ಇಂದು ಇದ್ದು ನಾಳೆ ಇಲ್ಲಾವಾಗುವವರು ನಾವು ನೀವು. 
ಇನ್ನು "ಮೇಧ" ಎಂದರೆ " ಸಂಗಮೇ" ಅಂದರೆ ಒಟ್ಟು ಗೂಡಿಸು.ಎಂದಾಗ ರಾಷ್ಟ್ರವನ್ನು ಒಟ್ಟು ಗೂಡಿಸಲು ಮಾಡುವ ಕಾರ್ಯಕ್ರಮಗಳೆಲ್ಲಾ " ಅಶ್ವಮೇಧ ಯಾಗವೇ" ಎಂದಂತಾಯ್ತು. ಎಂತಹಾ ಶ್ರೇಷ್ಠವಾದ ಅರ್ಥ ಇದೆಯಲ್ಲವೇ?. ಸತ್ಯವನ್ನು ಆವಿಷ್ಕಾರ ಮಾಡಿದಾಗ ಮಾತ್ರವೇ ಇಂತಹ ಅದ್ಭುತಗಳು ಗೋಚರವಾಗಲು ಸಾಧ್ಯ.

-ಹರಿಹರಪುರಶ್ರೀಧರ್

Thursday, September 25, 2014

ಜೀವನವೇದ-9

ತಾಯಿಯು ತನ್ನ ಮಗುವಿಗೆ ಆಸರೆಯಾಗುವಂತೆ ಜಲಧಾರೆಗಳು ನಮಗೆ ಆಸರೆಯಾಗಲಿ

ಸಂಧ್ಯಾವಂದನೆ ಮತ್ತು ದೇವತಾರ್ಚನೆ ಮಾಡುವಾಗ ಹೇಳುವ ಮಾರ್ಜನ ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.
ಅಥರ್ವ ವೇದದ ಮೊದಲ ಕಾಂಡದ ಐದನೇ ಸೂಕ್ತ:
ಮಂತ್ರ-೧
ಆಪೋ ಹಿ ಷ್ಠಾ ಮಯೋ ಭುವಸ್ತಾ ನ ಊರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ ||
ಅರ್ಥ:
ಆಪ: = ಜಲಧಾರೆಗಳೇ
ಮಯೋಭುವ: = ನೀವು ಕಲ್ಯಾಣದಾಯಿನಿಯರು
ಸ್ಥ = ಆಗಿದ್ದೀರಿ
ತಾ: = ಆ ಜಲಧಾರೆಗಳು
ನ: = ನಮ್ಮನ್ನು
ಊರ್ಜೇ = ಬಲಯುತರನ್ನಾಗಿಸಲಿ
ಮಹೇ ರಣಾಯ ಚಕ್ಷಸೇ = ಮಹಾ ರಮಣೀಯವಾದ ದೃಷ್ಟಿಗಾಗಿ
ದಧಾತನ = ಒದಗಲಿ
ಭಾವಾರ್ಥ:-
ಕಲ್ಯಾಣದಾಯಿನಿಯರಾದ ಈ ನದೀನದಾದಿಗಳು ನಮ್ಮನ್ನು  ಸುಂದರರನ್ನಾಗಿಯೂ, ಬಲಶಾಲಿಗಳನ್ನಾಗಿಯೂ ಮಾಡಲಿ. ಸಂಧ್ಯಾವನೆ ಆರಂಭದಲ್ಲಿ  ಉದ್ಧರಣೆಯಲ್ಲಿ ನೀರು ತುಂಬಿ ಬೆರಳುಗಳನ್ನು ಅದರಲ್ಲಿ ಅದ್ದಿ ಈ ಮಂತ್ರವನ್ನು ಹೇಳುತ್ತಾ ದೇಹದ ಅಂಗಾಂಗಗಳಮೇಲೆ ಚುಮುಕಿಸಿಕೊಳ್ಳುತ್ತೇವೆ. ಉಪನಯನ ಸಂಸ್ಕಾರವಾಗುವ ವಟುಗಳಿಗೆ ಸಾಮಾನ್ಯವಾಗಿ ಈ ಮಂತ್ರದ ಲಾಭವನ್ನು ಹೇಳುವಾಗ ಹೀಗೆ ಹೇಳುವುದನ್ನು ಕೇಳಿದ್ದೇನೆ - ನಿಮಗರಿವಿದ್ದೋ ಅಥವಾ ಅರಿವಿಲ್ಲದೆಯೋ ಶಾರೀರಿಕವಾಗಿ ಮಾಡಿದ ಪಾಪವು ಈ ಮಂತ್ರಹೇಳಿ ನೀರನ್ನು ಪ್ರೋಕ್ಷಣೆಮಾಡಿಕೊಳ್ಳುವುದರಿಂದ ನಿವಾರಣೆಯಾಗಿ  ಶರೀರವು ಶುದ್ಧಿಯಾಗುತ್ತದೆ
ವೇದಮಂತ್ರಗಳನ್ನು  ಹೀಗೆ ಅರ್ಥೈಸುವುದು ಎಷ್ಟು ಸರಿ? ಈ ಮಂತ್ರವನ್ನು ಹೇಳುತ್ತಾ  ನೀರನ್ನು ಪ್ರೋಕ್ಷಿಸಿಕೊಳ್ಳುವುದರಿಂದ  ನೀನು ಮಾಡಿದ  ಪಾಪವು ಪರಿಹಾರವಾಗುತ್ತದೆಂದು ಈ ಮಂತ್ರದಲ್ಲಿ ಎಲ್ಲಿ ಹೇಳಿದೆ? ವೇದವಾದರೋ ಪಾಪಕೃತ್ಯವನ್ನು ಮಾಡಲು ಆಸ್ಪದವನ್ನೇ ಕೊಡುವುದಿಲ್ಲ.ಒಂದು ವೇಳೆ ಪಾಪಕೃತ್ಯವನ್ನು ಮಾಡಿದರೆ ಅದರ ಪ್ರತಿಫಲವನ್ನು ಅವನು ಎದುರಿಸಲೇ ಬೇಕಾಗುತ್ತದೆ.
ಹಾಗಾದರೆ ಈ ಮಂತ್ರವು ಏನು ಹೇಳುತ್ತದೆ?
 ಈ ಮಂತ್ರದ ಸರಿಯಾದ  ಅರ್ಥವನ್ನು ತಿಳಿದು ಸಂಧ್ಯಾವಂದನೆ ಮಾಡಿದರೆ! ನೀರನ್ನು ಮೈ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವಾಗ ಅದನ್ನು ನೀಡಿರುವ ಭಗವಂತನನ್ನು ಮನದಲ್ಲಿ ಸ್ಮರಿಸಿಕೊಂಡು “ ಆ  ಭಗವಂತನು ನನಗೆ ಶಕ್ತಿ ಕೊಡಲಿ, ಕಾಂತಿ ಕೊಡಲಿ” ಎಂದು ಪ್ರಾರ್ಥಿಸುತ್ತಾ ಕ್ರಿಯೆಯನ್ನು ಮಾಡಿದರೆ ಮನಸ್ಸಿನಲ್ಲಿ ನಾವು ಏನು ಭಾವಿಸುತ್ತೇವೆಯೋ ಅದರಂತೆಯೇ ಆಗುತ್ತೇವೆ. ಆದ್ದರಿಂದ ನೀರನ್ನು ಪ್ರೋಕ್ಷಿಸಿಕೊಳ್ಳುವುದು ಒಂದು ನೆಪ ಅಷ್ಟೆ. ಆದರೆ ನೀರನ್ನು ಪ್ರೋಕ್ಷಿಸಿಕೊಳ್ಳುವಾಗ ನಮ್ಮಲ್ಲಿ ಈ ಅಂಶಗಳು ಮೂಡಿದರೆ ನಾವು ಆರೋಗ್ಯವಂತರೂ, ರಮಣೀಯರೂ, ಬಲಶಾಲಿಗಳೂ ಆಗುವುದರಲ್ಲಿ ಸಂದೇಹವಿಲ್ಲ. ಆದರೆ ಯಾಂತ್ರಿಕವಾಗಿ ನೀರನ್ನು ಪ್ರೋಕ್ಷಿಸಿಕೊಳ್ಳುತ್ತಾ ಮನದಲ್ಲಿ ಅನ್ಯ ಚಿಂತೆಗಳು ಮೂಡಿದರೆ ನಾವು ಹೇಳುವ ಮಾರ್ಜನ ಮಂತ್ರದ ಪ್ರಭಾವವು ನಮ್ಮ ಶರೀರ ಮನಸ್ಸುಗಳ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು. ಅಲ್ಲದೆ ಕೇವಲ ನೀರನ್ನು ಪ್ರೋಕ್ಷಿಸಿಕೊಂಡರೆ ಮಾಡಿದ್ದ ಪಾಪವು ಪರಿಹಾರವಾಗಲಾರದು.
ಮಂತ್ರ-೨
ಯೋ ವ: ಶಿವತಮೋ ರಸಸ್ತಸ್ಯ ಭಾಜಯತೇಹ ನ: | 
ಉಶತೀರಿವ ಮಾತರ: ||
ಅರ್ಥ:
ಯ: = ಯಾವ
ವ: = ಆ ಜಲವು
ಶಿವತಮ: ರಸ: = ಅತ್ಯಂತ ಕಲ್ಯಾಣಕಾರವಾದ ರಸವಿದೆಯೋ
ಉಶತೀ: ಮಾತರ: ಇವ = ಮಮತೆಯ ಮಾತೆಯರಂತೆ
ನ: ಇಹ ತಸ್ಯ ಭಾಜಯತೇ = ನಮಗೆ ಅದರ ಭಾಗವು ಲಭಿಸಲಿ
ಭಾವಾರ್ಥ: ತಾಯಂದಿರು ವಾತ್ಸಲ್ಯದಿಂದ ತಮ್ಮ ಮಕ್ಕಳಿಗೆ ನೆಲೆ ನೀಡುವಂತೆ, ಆಸರೆಯಾಗುವಂತೆ ಅಮೃತಮಯ ಜಲಧಾರೆಗಳ ಆಶ್ರಯದಲ್ಲಿ ನಮಗೆ ಬದುಕು ಲಭಿಸಲಿ.
ಈ ಮಂತ್ರದ ಅರ್ಥ ಎಷ್ಟು ಸೊಗಸಾಗಿದೆ!  ಎಂತಹಾ ಅದ್ಭುತ ಹೋಲಿಕೆ! ತಾಯಾಂದಿರು ತಮ್ಮ ಮಕ್ಕಳಿಗೆ ಮಮಕಾರದಿಂದ ಆಶ್ರಯ ಕೊಡುವಂತೆ ನಮಗೆ ಭಗವಂತನು ಸೃಷ್ಟಿಸಿರುವ ಜಲಧಾರೆಗಳು ಆಶ್ರಯ ಕೊಡಲಿ. ಇಲ್ಲಿ ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಪ್ರೋಕ್ಷಿಸಿಕೊಳ್ಳುತ್ತಿರುವ ನೀರು ಅಂತಿಂತಾ ನೀರಲ್ಲ. ಅದು ಪವಿತ್ರ ಗಂಗೆ! ಅದು ನನಗೆ ಆಶ್ರಯ ಕೊಡಲಿ, ಎಂದರೆ ನಮ್ಮ ಆರೋಗ್ಯಭಾಗ್ಯ ನಮಗೆ ಲಭಿಸಿರುವುದೇ ಈ ಪವಿತ್ರವಾದ ನೀರಿನಿಂದ. ನೀರಿಲ್ಲದ ಒಂದು ದಿನವನ್ನು ಕಲ್ಪಿಸಿಕೊಳ್ಳಿ. ಮನುಶ್ಯನಿಗೆ ಏನಿಲ್ಲದಿದ್ದರೂ ಗಾಳಿ, ನೀರು ಮಾತ್ರ ಅತ್ಯಗತ್ಯವಾಗಿ ಬೇಕು. ನಮಗೆ ಅದರ ಮಹತ್ವ ಗೊತ್ತಿದೆಯೇ? ಎಲ್ಲವೂ ನಮಗೆ ಯಾವ ಸಮಸ್ಯೆಇಲ್ಲದೆ ದೊರಕುತ್ತಿದ್ದಾಗ ಅದರ ಮಹತ್ವ ಗೊತ್ತಾಗುವುದಿಲ್ಲ. ಆದರೆ ಅದರ ಲಭ್ಯತೆ ಕಷ್ಟವಾದಾಗ ಆ ವಸ್ತುವಿನ ಮಹತ್ವ ಗೊತ್ತಾಗುತ್ತದೆ. ನಮ್ಮ ಆರೋಗ್ಯದ ವಿಚಾರದಲ್ಲೂ ಅಷ್ಟೆ. ಮನುಶ್ಯನು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದಾಗ  ಆರೋಗ್ಯದ ಮಹತ್ವ ಗೊತ್ತಾಗುವುದೇ ಇಲ್ಲ. ಆದರೆ ಒಂದುವಾರ ಹಾಸಿಗೆ ಹಿಡಿದು ಮಲಗಿ ಪುನ: ಸುಧಾರಿಸಿಕೊಂಡು ಹಾಸಿಗೆಯಿಂದ ಎದ್ದಾಗ ಮನುಶ್ಯನ ಮಾನಸಿಕತೆ ಹೇಗಿರುತ್ತದೆ? ಮನುಶ್ಯನು ಬಲು ಸಂತಸಗೊಂಡು ಸ್ನೇಹಿತರೊಡನೆಲ್ಲಾ ತನ್ನ ಸಂತಸವನ್ನು ಹಂಚಿಕೊಳ್ಳುತ್ತಾನೆ. ಈಗ ಯೋಚಿಸೋಣ. ಆರೋಗ್ಯ ಕೆಡುವುದಕ್ಕಿಂತ ಒಂದು ದಿನ ಹಿಂದೆ ಇವತ್ತು ಪಡುತ್ತಿರುವ ಸಂತೋಷ ಅನುಭವಿಸಿದ್ದಿರಾ? ಇಲ್ಲ,  ಎನ್ನುವುದಾದರೆ ಯಾಕೇ?  ಏಕೆಂದರೆ ಆರೋಗ್ಯವಂತ ಬದುಕಿನ ಮಹತ್ವ ನಮಗೆ ಗೊತ್ತಿಲ್ಲ. ಯಾವಾಗ ಆರೋಗ್ಯ ಕೆಡುತ್ತದೆಯೋ ಆಗ ಅದರ ಮಹತ್ವದ ಅರಿವಾಗುತ್ತದೆ.
ನೀರಿನ, ಗಾಳಿಯ ವಿಷಯದಲ್ಲೂ ಅಷ್ಟೆ. ನಾವು ನೀರನ್ನು ಅದೆಷ್ಟು ಪೋಲು ಮಾಡುತ್ತೇವೋ! ವಾತಾವರಣವನ್ನು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ! ಕಾರಣ ಗಾಳಿ ಮತ್ತು ನೀರನ್ನು ಹಣಕೊಟ್ಟು ಕೊಳ್ಳಲಿಲ್ಲವಲ್ಲಾ! [ನಗರಗಳಲ್ಲಿ  ವಾಟರ್ ಟ್ಯಾಕ್ಸ್ ಕಟ್ಟಿದರೂ ಅದು ಬಲು ಕಡಿಮೆ] ರಸ್ತೆಯಲ್ಲಿ ತಿರುಗಾಡುವಾಗ  ನಾಲ್ಕಾರು ಮನೆಗಳಿಂದ ಓವರ್ ಹೆಡ್ ಟ್ಯಾಂಕ್ ತುಂಬಿ ಚಿರಂಡಿಗೆ ಅದೆಷ್ಟು ನೀರು ಹರಿದು ಹೋಗುತ್ತದೋ! ಅಂತೆಯೇ ಗಾಳಿಯನ್ನು ನಾವು ಅದೆಷ್ಟು ಕಲುಶಿತಗೊಳಿಸುತ್ತೇವೆಯೋ!
ಈ ಮಂತ್ರವನ್ನು ಹೇಳುವಾಗ   ನೀರು ಮತ್ತು ಗಾಳಿಯ ಮಹತ್ವವು ನಮಗೆ  ಅರ್ಥವಾಗಬೇಕು. ಮಹತ್ವವರಿತು  ಅದರಂತೆ ನಡೆದರೆ  ನೀರು ನಮಗೆ ಆರೋಗ್ಯವನ್ನೂ , ಜೀವನದಲ್ಲಿ ನೆಮ್ಮದಿ, ಶಾಂತಿಯನ್ನೂ ನೀಡುತ್ತದೆ.
ಮಂತ್ರ-೩  
ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|ಆಪೋ ಜನಯಥಾ ಚ ನ:||
ಅರ್ಥ:
ಯಸ್ಯ ಕ್ಷಯಾಯ ಜಿನ್ವಥ = ಯಾವನನ್ನು ನೆಲೆಗೊಳಿಸಲು ಅವು ಹರಿದುಬರುತ್ತವೋ
ತಸ್ಮೈ = ಅವನಿಗಾಗಿ
ಅರಂ ಗಮಾಮ = ಸೂಕ್ತವಾಗಿ ಬಳಸಿಕೊಳ್ಳುತ್ತೇವೆ [ಅವು]
ನ: = ನಮ್ಮನ್ನು
ಜನಯಥ = ಬಲಪಡಿಸಲಿ
ಭಾವಾರ್ಥ:
ನಮ್ಮ ಕಲ್ಯಾಣಕ್ಕೆಂದೇ ಹರಿಯುವ ಜಲರಾಶಿಯನ್ನು ಸಂಪೂರ್ಣವಾಗಿ ಆಶ್ರಯಿಸುತ್ತೇವೆ. ಅವು ನಮ್ಮ ಬದುಕನ್ನು ನಿರಂತರ ಸಂಮೃದ್ಧಗೊಳಿಸಲಿ.
ಮಂತ್ರ-೪
ಈಶಾನಾ ವಾರ್ಯಾಣಾಂ ಕ್ಷಯಂತೀಶ್ಚರ್ಷಣೀನಾಮ್ |
ಅಪೋ ಯಾಚಾಮಿ ಭೇಷಜಮ್ ||
ಅರ್ಥ:
ವಾರ್ಯಾಣಾಂ = ಅಭಿಲಾಷೆ ಪಟ್ಟ ಇಷ್ಟಾರ್ಥಗಳ
ಈಶಾನಾ ಆಪ: = ಗಂಗಾ ಮಾತೆಯಿಂದ
ಚರ್ಷಣೀನಾಂ = ಜೀವಕೋಟಿಗಳ
ಕ್ಷಯಂತೀ: = ರೋಗಗಳನ್ನು ನಾಶಮಾಡುವ
ಭೇಷಜಂ ಯಾಚಾಮಿ = ಔಷಧಿಯು ದೊರಕಲಿ
ಭಾವಾರ್ಥ:
ಇಷ್ಟಾರ್ಥಗಳನ್ನು ನೀಡುವ ಜಲಧಾರೆಗಳು ನಮಗೆ ದಿವ್ಯ ಔಷಧಿಗಳನ್ನು ನೀಡಲಿ.
ಈ ಎರಡು ಮಂತ್ರಗಳು ನೀರಿನ ವಿಶೇಷ ಗುಣಗಳನ್ನು ವಿವರಿಸುತ್ತಾ ,ಇಂತಾ ಪವಿತ್ರ ನೀರು ನಮ್ಮ ಬದುಕನ್ನು ಸಂಮೃದ್ಧ ಗೊಳಿಸಲೆಂದೂ, ನೀರಿನ ಔಷಧ ಗುಣವು ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟಿರಲಿ ಎಂದೂ ಭಗವಂತನನ್ನು ನಾವು  ಈ ಮಂತ್ರದ ಮೂಲಕ ಪ್ರಾರ್ಥಿಸುವಾಗಲೇ ನೀರಿನ ಪಾವಿತ್ರ್ಯವನ್ನು ಹಾಳುಗೆಡವದಂತೆ ನಾನು ಜೀವನ ನಡೆಸುತ್ತೇನೆಂದೂ ಸಹ ಸಂಕಲ್ಪ ಮಾಡಿದಾಗ, ನಮ್ಮ ಸಂಧ್ಯಾವಂದನೆಯು  ನಮ್ಮ ಆರೋಗ್ಯದ ಮೇಲೆ ಸತ್ಪ್ರಭಾವವನ್ನು ಬೀರುವುದಲ್ಲದೆ ನಮ್ಮ ಬದುಕಿನಲ್ಲಿ  ನೆಮ್ಮದಿಯೂ  ಶಾಂತಿಯೂ ನೆಲೆಸುವುದು.

-ಹರಿಹರಪುರಶ್ರೀಧರ್

Wednesday, September 24, 2014

ಶ್ರೀ ಅಶೋಕ್‌ಕುಮಾರ್ ರವರಿಂದ ಉಪನ್ಯಾಸ

ಓಂ
ವೇದಭಾರತೀ,ಹಾಸನ

ಸಾಪ್ತಾಹಿಕ ವಿಶೇಷ ಸತ್ಸಂಗ

೨೪.೯.೨೦೧೪ ಬುಧವಾರ ಸಂಜೆ ೬.೦೦ ಕ್ಕೆ

ಸ್ಥಳ: ಈಶಾವಾಸ್ಯಮ್,ಹೊಯ್ಸಳನಗರ,ಹಾಸನ

ಉಪನ್ಯಾಸ: ಶ್ರೀ ಅಶೋಕ್‌ಕುಮಾರ್

ವಿಷಯ : ದೇಹವೇ ದೇವಾಲಯ

ಮಿತ್ರರೊಡಗೂಡಿ ಬನ್ನಿ.

ವೇದಮಂತ್ರ ಪಠಣ

           ವೇದಮಂತ್ರಗಳನ್ನು ಇಂತಾ ಮಹಾತ್ಮರ ಕಂಠದಿಂದ ಕೇಳಲು ಬಲು ಹಿತವಾಗುತ್ತೆ. ನಮ್ಮ "ವೇದಭಾರತಿಯ" "ಎಲ್ಲರಿಗಾಗಿ ವೇದ" ಎಂಬ ಧ್ಯೇಯವನ್ನು ಕೇಳಿದ ಹಲವರು "ಇದು ಸಾಧ್ಯವೇ?" ವೇದಾಭ್ಯಾಸ  ಮಾಡಲು  ಎಷ್ಟು ಅರ್ಹತೆಗಳು ಬೇಕು!! ಇದೆಲ್ಲಾ ಶಾಸ್ತ್ರೋಕ್ತವಾಗಿ ಒಂದೆರಡು ದಶಕಗಳು ಕಲಿತಿರುವ ಗುರುಮುಖೇನ ಮಾಡಬೇಕಾದ್ದು ಎಂಬ ಅಭಿಪ್ರಾಅಯವನ್ನು ಪ್ರೀತಿಯಿಂದಲೇ ವ್ಯಕ್ತ ಪಡಿಸುತ್ತಾರೆ. ನನಗೂ ಹೌದೆನಿಸುತ್ತದೆ.ಆದರೆ ವೇದಭಾರತಿಯ ಪ್ರಯತ್ನವೇನೆಂದರೆ  "ಸಾಮಾನ್ಯ ಜನರಿಗೂ ವೇದದ ಅರಿವು ಮೂಡಿಸುವುದು" ಇದರರ್ಥ ವೇದಮಂತ್ರವನ್ನು ಕಲಿಸಬೇಕೆಂದಲ್ಲ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರು ವೇದಭಾರತಿಯಿಂದ ವೇದಮಂತ್ರವನ್ನು ಕಲಿಸಿಕೊಡಿ ಎಂದು ದಂಬಾಲು ಬೀಳುತ್ತಾರೆ. ನಮ್ಮ ಪ್ರಯತ್ನದಲ್ಲಿ ಗುರು ಮುಖೇನವೇ ಸಾಮಾನ್ಯವಾಗಿ ಮಾಡುವಂತಹ "ದೈನಂದಿನ ಅಗ್ನಿಹೋತ್ರ " ಮತ್ತು ಅದರೊಟ್ಟಿಗೆ ಕೆಲವು ಸರಳವಾದ ಸೂಕ್ತಗಳನ್ನು   ಕಲಿಸಿಕೊಡಲಾಗುತ್ತಿದೆ. ನಮ್ಮ ಪ್ರಮುಖ ಉದ್ದೇಶವೇ  ಮನುಷ್ಯನ ನೆಮ್ಮದಿಯ ಆರೋಗ್ಯಕರವಾದ ಬದುಕಿಗಾಗಿ ವೇದದ ಮಾರ್ಗದರ್ಶನದ ಅರಿವು ಮೂಡಿಸುವುದಾಗಿದೆ. ಅದರರ್ಥ ಪರಂಪರೆಯಿಂದ ಬಂದಿರುವ ಇಂತಹ ಪಂಡಿತರಿಗೆ ಇದು ಪರ್ಯಾಯವಲ್ಲ. ಇಂತಾ ಘನಕಾರ್ಯ ಯಾವಾಗಲೂ ಇನ್ನೂ ಹೆಚ್ಚು ಮುಂದುವರೆಯಬೇಕು



ವೇದಸುಧೆಯ ನಿರ್ವಹಣಾ ತಂಡಕ್ಕೆ ಸೇರ್ಪಡೆ


 ವೇದಸುಧೆಯ ಆತ್ಮೀಯ ಅಭಿಮಾನಿಗಳೇ,

          ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರೇರಣೆಯಿಂದ ಆರಂಭವಾದ "ವೇದಸುಧೆ"ಯಲ್ಲಿ ಶ್ರೀ ಶರ್ಮರ ಉಪನ್ಯಾಸಗಳು,ಲೇಖನಗಳು,ವೀಡಿಯೋಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟಿಸಲಾಗಿದೆ. ಸಧ್ಯಕ್ಕೆ ಶರ್ಮರ ಅನಾರೋಗ್ಯದಿಂದ ಅವರ ಲೇಖನಗಳನ್ನು  ಹೆಚ್ಚು  ಪ್ರಕಟಿಸಲು ಸಾಧ್ಯವಾಗಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರತೀ ವರ್ಷವೂ  ಓದುಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈಗಾಗಲೇ ಓದುಗರ ಸಂಖ್ಯೆಯು ಒಂದು ಲಕ್ಷವನ್ನು ದಾಟಿ 1,35,000 ಪುಟಗಳ ವೀಕ್ಷಣೆಯಾಗಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಕಳೆದೆರಡು ವರ್ಷದಿಂದ ಪತ್ರಿಕೆಗಳಲ್ಲಿಯೂ ಸಾಮಾನ್ಯಜನರಿಗೆ ವೇದದ ಅರಿವು ಮೂಡಿಸುವ ಪ್ರಯತ್ನವಾಗಿ  ರಾಜ್ಯಮಟ್ಟದ ವಾರ ಪತ್ರಿಕೆಯಾದ " ವಿಕ್ರಮದಲ್ಲಿ "   "ಜೀವನವೇದ" ಎಂಬ ಅಂಕಣವನ್ನು ಬರೆಯಲಾಗುತ್ತಿದೆಯಲ್ಲದೆ ಹಾಸನದ ಸ್ಥಳೀಯ ಪತ್ರಿಕೆಗಳಾದ  "ಜನಮಿತ್ರ" ಮತ್ತು ಜನಹಿತ" ಪತ್ರಿಕೆಗಳ ಲ್ಲಿಯೂ ಪ್ರತೀ ವಾರ   ಅಂಕಣಗಳನ್ನು   ಬರೆಯಲಾಗುತ್ತಿದೆ. ಜೊತೆಗೆ ವೇದಭಾರತಿಯ ಹೆಸರಲ್ಲಿ ನಿತ್ಯವೂ ಅಗ್ನಿಹೋತ್ರ ಮತ್ತು ಸತ್ಸಂಗ ,ಪ್ರತೀ ಬುಧವಾರ ವಿಶೆಷ ಸತ್ಸಂಗದಲ್ಲಿ ಉಪನ್ಯಾಸಗಳ ಯೋಜನೆ, ಪ್ರತೀ ವಾರ ವೇದ ಪಾಠ ,ಅಲ್ಲದೆ  ಆಗಿಂದಾಗ್ಗೆ  ವಿಶೇಷ ಉಪನ್ಯಾಸಕಾರ್ಯಕ್ರಮಗಳನ್ನು  ನಡೆಸಲಾಗುತ್ತಿದೆ. ಈ ಎಲ್ಲಾ  ಕೆಲಸಗಳ  ಒತ್ತಡದಲ್ಲಿ  ವೇದಸುಧೆಯ ನಿರ್ವಹಣೆ ಸ್ವಲ್ಪ ಕಷ್ಟವಾಗಿತ್ತು. ಅದಕ್ಕಾಗಿ ಓದುಗರ ಸಹಕಾರವನ್ನು ಅಪೇಕ್ಷಿಸಿದ್ದೆವು. ಅದರಂತೆ  ವೇದಾಭಿಮಾನಿಗಳಾದ ಶ್ರೀಮತಿ ಪ್ರಿಯಾಭಟ್ ಅವರು ವೇದಸುಧೆಯನ್ನು ಅಚ್ಚುಕಟ್ಟಾಗಿಡಲು ಸಹಕರಿಸುವುದಾಗಿ ಒಪ್ಪಿ ಕೆಲಸವನ್ನು ಆರಂಭಿಸಿದ್ದಾರೆ. ಈಗಾಗಲೇ   ನಮ್ಮ ಗುಂಪಿನಲ್ಲಿ ಶ್ರೀಮತಿ ಪ್ರಿಯಾಭಟ್ ಅವರು ವೇದಸುಧೆಯ ನಿರ್ವಹಣೆಯಲ್ಲಿ ತಮ್ಮ ಯೋಗದಾನವನ್ನು ನೀಡಲು ಆರಂಭಿಸಿದ್ದಾರೆಂದು ತಿಳಿಸಲು ಹರ್ಷಿಸುತ್ತಾ ವೇದಸುಧೆಯ ಎಲ್ಲಾ ಆತ್ಮೀಯ ಅಭಿಮಾನಗಳ ಪರವಾಗಿ ಅವರನ್ನು ವೇದಸುಧೆಯ ನಿರ್ವಹಣಾ  ತಂಡಕ್ಕೆ    ಆಹ್ವಾನಿಸುತ್ತೇನೆ

-ಹರಿಹರಪುರಶ್ರೀಧರ್
 ಸಂಪಾದಕ

Thursday, September 18, 2014

ವೇದ ಭಾರತೀ,ಹಾಸನ : ಸಾಮೂಹಿಕ ಅಗ್ನಿಹೋತ್ರ

ವೇದ ಭಾರತೀ,ಹಾಸನ : ಸಾಮೂಹಿಕ ಅಗ್ನಿಹೋತ್ರ: ಹಾಸನ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗ ಹುಬ್ಬಳ್ಳಿಯ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಕನಸು-ಸಾವಿರ ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಬೃಹತ್ ಕ...

ಹಾಸನ ವೇದಭಾರತೀ ಸತ್ಸಂಗದಲ್ಲಿ ಸಾಹಿತಿ ಬೆಳವಾಡಿ ಅಶ್ವತ್ಥನಾರಾಯಣ್ ಉಪನ್ಯಾಸದ ಆಡಿಯೋ ಕೇಳಿ









Monday, September 15, 2014

ನನ್ನ ಬಾಯಲ್ಲಿ ಮಧುರವಾದ ಮಾತುಗಳೇ ಹೊರಬರಲಿ

ಅಥರ್ವ ವೇದದದ ೧೨ನೇ ಕಾಂಡದ ಮೊದಲನೇ ಸೂಕ್ತದ ೫೮ನೇ ಮಂತ್ರದಲ್ಲಿ ಈ ಬಗ್ಗೆ ಏನು ಹೇಳಿದೆ, ವಿಚಾರ ಮಾಡೋಣ.

ಯದ್ ವದಾಮಿ ಮಧುಮತ್ ತದ್ ವದಾಮಿ ಯದೀಕ್ಷೇ ತದ್ ವನಂತಿ ಮಾ| ತ್ವಿಷೀಮಾನಸ್ಮಿ ಜೂತಿಮಾನವಾನ್ಯಾನ್ ಹನ್ಮಿ ದೋಧತಃ ||

ಅನ್ವಯ:
ಯದ್ ವದಾಮಿ = ಯಾವಾಗ ನುಡಿಯುತ್ತೀನೋ
ತತ್ ಮಧುವತ್ ವದಾಮಿ = ಆಗೆಲ್ಲಾ ಮಧುರವಾದ ಸುಂದರವಾದ ಮಾತನ್ನೇಆಡುತ್ತೇನೆ
ಯತ್ ಈಕ್ಷೇ = ಯಾವಾಗ ನೋಡುತ್ತೇನೋ
ತತ್ ಮಾ ವನಂತಿ = ಆಗೆಲ್ಲಾ ಜನರು ನನ್ನನ್ನು ಪ್ರೀತಿಯಿಂದಲೇ ಕಾಣಲಿ
ತ್ವಿಷೀಮಾನ್ = ಆಕರ್ಷಣೀಯನೂ
ಜೂತಿಮಾನ್ = ಪ್ರೀತನೂ
ಅಸ್ಮಿ = ಆಗಿದ್ದೇನೆ
ದೋಧತಃ ಅನ್ಯಾನ್ ಅವಹನ್ಮಿ = ನನ್ನನ್ನು ಪೀಡಿಸುವವರನ್ನು ನಾನು ಸೆದೆಬಡೆದುಹಾಕುತ್ತೇನೆ

ಭಾವಾರ್ಥ:
ನಾನು ಮಾತನಾಡುವಾಗಲೆಲ್ಲಾ ನನ್ನ ಬಾಯಲ್ಲಿ ಮಧುರವಾದ ಮಾತುಗಳೇ ಹೊರಬರಲಿ.ನಾನು ನೋಡುವಾಗಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದಲೇ ಕಾಣುವಂತಾಗಲಿ.ಎಲ್ಲರಿಗೂ ಆಕರ್ಷಣೀಯನೂ, ಪ್ರೀತನೂ ಆದ ನನ್ನನ್ನು ಪೀಡಿಸುವವರನ್ನು ನಾನು ಸದೆಬಡಿಯುವಂತಾಗಲಿ.

ವೇದಭಾರತಿಯ ವಿಶೇಷ ಸತ್ಸಂಗ







Sunday, September 14, 2014

ಹಾಸನದ ವೇದಭಾರತೀ ನಿತ್ಯ ನಡೆಸುವ ಅಗ್ನಿಹೋತ್ರದ ಒಂದು ನೋಟ.


















"ಎಲ್ಲರಿಗಾಗಿ ವೇದ" - ಇದು ನಮ್ಮ ಉದ್ದೇಶ. ಅದಕ್ಕಾಗಿ   ಯಾವ ಜಾತಿ-ಮತ-ಪಂಥ ಭೇದವಿಲ್ಲದೆ ನಿತ್ಯವೂ  ಅಗ್ನಿಹೋತ್ರ. ಪೂಜ್ಯ ಚಿದ್ರೂಪಾನಂದ ಸ್ವಾಮೀಜಿಯವರ ಕಲ್ಪನೆಗೆ ಒತ್ತಾಸೆಯಾಗಿ ನಿಂತು ಸಾವಿರಜನರಿಂದ ನಡೆಯುವ ಸಾಮೂಹಿಕ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಎಲ್ಲರಿಗೂ ಅಗ್ನಿಹೋತ್ರಮಂತ್ರ ಕಲಿಸಿಕೊಡಲು ವೇದಭಾರತಿಯು  ಚಿಂತನೆ ನಡೆಸಿದೆ. ಆಸಕ್ತರು vedasudhe@gmail.com ಸಂಪರ್ಕಿಸಲು ಮನವಿ.




Thursday, September 11, 2014



ಓಂ

ಪೂಜ್ಯ ಸ್ವಾಮಿ ಚಿದ್ರೂಪಾನಂದರ

ಮಾರ್ಗದರ್ಶನದಲ್ಲಿ ರಾಜ್ಯಮಟ್ಟದಲ್ಲಿ ನಡೆಯಲಿರುವ


"ಸಾಮೂಹಿಕ ಬೃಹತ್ ಅಗ್ನಿಹೋತ್ರ 

ಮತ್ತು 

"ಎಲ್ಲರಿಗಾಗಿ ವೇದ" 

ಕಾರ್ಯಕ್ರಮದ " ಪೂರ್ವಭಾವಿ ಸಭೆ"
Photo: ಪೂಜ್ಯ ಸ್ವಾಮಿ ಚಿದ್ರೂಪಾನಂದರ ಮಾರ್ಗದರ್ಶನದಲ್ಲಿ  ರಾಜ್ಯಮಟ್ತದಲ್ಲಿ   ನಡೆಯಲಿರುವ  "ಸಾಮೂಹಿಕ ಬೃಹತ್  ಅಗ್ನಿಹೋತ್ರ ಮತ್ತು ಎಲ್ಲರಿಗಾಗಿ ವೇದ ಕಾರ್ಯಕ್ರಮದ " ಪೂರ್ವಭಾವಿ ಸಭೆ"

ಸಭೆಯು ನಡೆಯುವ ಸ್ಥಳ : ಈಶಾವಾಸ್ಯಮ್ ,ಹೊಯ್ಸಳನಗರ, ಹಾಸನ

ದಿನಾಂಕ : 14.9.2014 ಭಾನುವಾರ   ಸಂಜೆ 6.00 ಕ್ಕೆ

ಐದು ನಿಮಿಷಗಳು ಮುಂಚಿತವಾಗಿ ಬನ್ನಿ,

ವಿ.ಸೂ: ವೇದಭಾರತಿಯ ಕಾರ್ಯಕ್ರಮಗಳು ಸಮಯಕ್ಕೆ  ಸರಿಯಾಗಿ ಆರಂಭವಾಗುವುದರಿಂದ ಹತ್ತು ನಿಮಿಷ ಮುಂಚಿತವಾಗಿ  ಬನ್ನಿ

- ಅಧ್ಯಕ್ಷರು ಮತ್ತು ಪಾಧಿಕಾರಿಗಳು
ವೇದಭಾರತೀ, ಹಾಸನ


ಸಭೆಯು ನಡೆಯುವ ಸ್ಥಳ : ಈಶಾವಾಸ್ಯಮ್ ,ಹೊಯ್ಸಳನಗರ, ಹಾಸನ

ದಿನಾಂಕ : 14.9.2014 ಭಾನುವಾರ ಸಂಜೆ 6.00 ಕ್ಕೆ


ವಿ.ಸೂ: ವೇದಭಾರತಿಯ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ 

ಆರಂಭವಾಗುವುದರಿಂದ ಹತ್ತು ನಿಮಿಷ ಮುಂಚಿತವಾಗಿ ಬನ್ನಿ

Sarasa Nethra (Thyagaraja Krithi)

Sunday, September 7, 2014

ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ

Photo: ಹಾಸನದ ವೇದಭಾರತಿಯು ನಡೆಸುವ ದೈನಂದಿನ  ಅಗ್ನಿಹೋತ್ರವನ್ನು ವೀಕ್ಷಿಸಿದ    ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ  ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ   ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು  ವೇದಭಾರತಿಯ ಸಂಚಾಲಕತ್ವದಲ್ಲಿ  ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು  ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ  ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ  ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ  ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು  ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ  ಸಂಪರ್ಕಿಸಬಹುದು.

ಮಂತ್ರದ ಡೌನ್ ಲೋಡ್ ಗಾಗಿ ಕೊಂಡಿ

http://www.divshare.com/download/26086812-18b



ಹಾಸನದ ವೇದಭಾರತಿಯು ನಡೆಸುವ ದೈನಂದಿನ ಅಗ್ನಿಹೋತ್ರವನ್ನು ವೀಕ್ಷಿಸಿದ ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು ವೇದಭಾರತಿಯ ಸಂಚಾಲಕತ್ವದಲ್ಲಿ ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ ಸಂಪರ್ಕಿಸಬಹುದು.

Saturday, September 6, 2014

ಹಾಸನ ವೇದಭಾರತಿಯ ವಿಶೇಷ ಸತ್ಸಂಗ

ಎರಡು ವರ್ಷಗಳ ಹಿಂದೆ ಹಾಸನದಲ್ಲಿ ಆರಂಭವಾದ ವೇದಭಾರತಿಯು ಪ್ರತೀ ದಿನ ಸಂಜೆ 6.00 ರಿಂದ 7.00 ರವರಗೆ ಅಗ್ನಿಹೋತ್ರ ,ವೇದಮಂತ್ರಾಭ್ಯಾಸ ಸಹಿತ ಸತ್ಸಂಗವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ತಿಂಗಳು 16 ಮತ್ತು 17 ರಂದು ನಡೆದ ದ್ವಿತೀಯ ವಾರ್ಷಿಕೋತ್ಸವದಲ್ಲಿ ತೀರ್ಮಾನಿಸಿದಂತೆ ಪ್ರತೀ ಬುಧವಾರ ವಿಶೇಷ ಸತ್ಸಂಗವನ್ನು ನಡೆಸಲು ಆರಂಭಿಸಿದೆ. ವಿಶೇಷ ಸತ್ಸಂಗಕ್ಕೆ ವೇದಭಾರತಿಯ ಎಲ್ಲಾ ಸದಸ್ಯರ ಜೊತೆಗೆ ಹೊಸಬರನ್ನೂ ಆಹ್ವಾನಿಸಲಾಗುತ್ತಿದೆ.























ದುಡ್ಡು ನಿಮ್ಮದಿರಬಹುದು, ಆಹಾರ ಸಮಾಜದ್ದು!


     ನನ್ನ ತಮ್ಮ ತನಗೆ ಬರುವ ಉತ್ತಮ ಸಂದೇಶವಿರುವ ಮಿಂಚಂಚೆಗಳನ್ನು ಹಂಚಿಕೊಳ್ಳುತ್ತಿರುತ್ತಾನೆ. ಅಂತಹ ಒಂದು ಮಿಂಚಂಚೆಯ ವಿಷಯ ಈ ಲೇಖನಕ್ಕೆ ಪ್ರೇರಿಸಿದೆ. ಆ ಮಿಂಚಂಚೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಜರ್ಮನಿಗೆ ಹೋಗಿದ್ದವರೊಬ್ಬರು ತಮ್ಮ ಅನಿಸಿಕೆಯನ್ನು ಹೀಗೆ ಹಂಚಿಕೊಂಡಿದ್ದರು: "ಜರ್ಮನಿ ಒಂದು ಅತ್ಯಂತ ಪ್ರತಿಷ್ಠಿತ ಕೈಗಾರಿಕಾ ದೇಶ. ಅಲ್ಲಿ ಪ್ರಪಂಚದ ಅತ್ಯುತ್ತಮ ವಾಹನಗಳೆನಿಸಿದ ಬೆಂಜ್, ಸೀಮನ್ಸ್, ಬಿಎಂಡಬ್ಲ್ಯು, ಇತ್ಯಾದಿ ತಯಾರಾಗುತ್ತವೆ. ಆ ದೇಶದ ಒಂದು ಸಣ್ಣ ಹಳ್ಳಿಯಲ್ಲಿ ಅಣು ರಿಯಾಕ್ಟರ್ ಪಂಪು ಸಿದ್ಧವಾಗುತ್ತದೆ. ಅಂತಹ ಒಂದು ದೇಶದ ಜನರು ವೈಭವೋಪೇತವಾಗಿ ಜೀವಿಸುತ್ತಾರೆಂದು ಹೆಚ್ಚಿನವರು ಭಾವಿಸುತ್ತಾರೆ. ಪ್ರವಾಸದ ಮುನ್ನ ನಾನೂ ಹಾಗೆಯೇ ಭಾವಿಸಿದ್ದೆ. ನಾನು ಹ್ಯಾಂಬರ್ಗಿಗೆ ಬಂದಿಳಿದಾಗ ನನ್ನ ಅಲ್ಲಿನ ಸಹೋದ್ಯೋಗಿಗಳು ಒಂದು ರೆಸ್ಟೋರೆಂಟಿನಲ್ಲಿ ನಮಗೆ ಸ್ವಾಗತಕ್ಕೆ ಏರ್ಪಡಿಸಿದ್ದರು. ಹೋಟೆಲ್ಲಿನ ಬಹಳಷ್ಟು ಟೇಬಲ್ಲುಗಳು ಖಾಲಿಯಿದ್ದವು. ಒಂದು ಟೇಬಲ್ಲಿನಲ್ಲಿ ಯುವಜೋಡಿ ಊಟ ಮಾಡುತ್ತಿದ್ದರು. ಆ ಟೇಬಲ್ಲಿನ ಮೇಲೆ ಕೇವಲ ಎರಡು ಆಹಾರ ಖಾದ್ಯಗಳು ಮತ್ತು ಎರಡು ಕ್ಯಾನುಗಳು ಬೀರು ಮಾತ್ರ ಇತ್ತು. ನನಗೆ ಆ ಸರಳ ಆಹಾರ ರೋಚಕವಾಗಿರುತ್ತದೆಯೇ ಮತ್ತು ಆ ಹುಡುಗಿ ಆ ಜಿಪುಣನನ್ನು ಬಿಟ್ಟು ಹೋಗದಿರುತ್ತಾಳೆಯೇ ಎಂಬ ಅನುಮಾನವಾಯಿತು. ಇನ್ನೊಂದು ಟೇಬಲ್ಲಿನಲ್ಲಿ ಕೆಲವು ಮುದುಕಿಯರು ಊಟ ಮಾಡುತ್ತಿದ್ದರು. ಮಾಣಿ ಆಹಾರ ಪದಾರ್ಥ ತಂದು ಅವರಿಗೆ ಹಂಚಿಹಾಕಿದರೆ ಅವರು ಅವರ ತಟ್ಟೆಗಳಲ್ಲಿನ ಒಂದು ಅಗುಳನ್ನೂ ಬಿಡದಂತೆ ಮುಗಿಸುತ್ತಿದ್ದರು. ನಮಗೆ ಹಸಿವಾಗಿದ್ದರಿಂದ ನಮಗಾಗಿ ಹೆಚ್ಚಿನ ಆಹಾರಕ್ಕೆ ಬೇಡಿಕೆ ಇಡಲಾಗಿತ್ತು. ಬಹುಬೇಗನೇ ನಮಗೆ ಊಟ ಸರಬರಾಜಾಯಿತು. ನಮಗೆ ಬೇರೆ ಚಟುವಟಿಕೆಗಳಿದ್ದುದರಿಂದ ಊಟದಲ್ಲಿ ಹೆಚ್ಚು ಸಮಯ ಕಳೆಯದೆ ಮುಗಿಸಿ ಎದ್ದಾಗ ನಮ್ಮ ಟೇಬಲ್ಲಿನಲ್ಲಿ ಸುಮಾರು ಮೂರನೆ ಒಂದು ಭಾಗದಷ್ಟು ಆಹಾರ ಉಳಿದಿತ್ತು. ನಾವು ಹೋಟೆಲಿನಿಂದ ಹೊರಡುತ್ತಿದ್ದಾಗ ಯಾರೋ ನಮ್ಮನ್ನು ಕರೆದಂತಾಯಿತು. ಮುದುಕಿಯರು ನಮ್ಮ ಬಗ್ಗೆ ರೆಸ್ಟೋರೆಂಟಿನ ಮಾಲಿಕನಿಗೆ ದೂರುತ್ತಿದ್ದರು. ಅವರಿಗೆ ನಾವು ಆಹಾರವನ್ನು ಪೋಲು ಮಾಡಿದ್ದಕ್ಕೆ ಅಸಮಾಧಾನವಿತ್ತು. 'ನಮ್ಮ ಊಟಕ್ಕೆ ನಾವು ದುಡ್ಡು ಕೊಟ್ಟಿದ್ದೇವೆ. ನಾವು ಎಷ್ಟು ಉಳಿಸಿದೆವು ಅನ್ನುವ ವಿಷಯ ನಿಮಗೆ ಸಂಬಂಧಿಸಿದ್ದಲ್ಲ' ಎಂಬ ನನ್ನ ಸಹೋದ್ಯೋಗಿಯ ಮಾತಿನಿಂದ ಅವರಿಗೆ ಬಹಳ ಸಿಟ್ಟು ಬಂತು. ಒಬ್ಬಾಕೆ ಕೂಡಲೇ ತನ್ನ ಫೋನಿನಿಂದ ಯಾರಿಗೋ ಕರೆ ಮಾಡಿದಳು. ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಭದ್ರತಾ ಸಂಸ್ಥೆಯ ಯೂನಿಫಾರಂ ಧರಿಸಿದ್ದ ಒಬ್ಬ ಅಧಿಕಾರಿ ಹಾಜರಾಗಿ ವಿಷಯ ತಿಳಿದುಕೊಂಡು ನಮಗೆ ೫೦ ಮಾರ್ಕುಗಳ ದಂಡ ವಿಧಿಸಿದ. ನಾವು ಸುಮ್ಮನಿದ್ದೆವು. ಸ್ಥಳೀಯ ಸಹೋದ್ಯೋಗಿ ದಂಡ ಕಟ್ಟಿ, ಪದೇ ಪದೇ ಕ್ಷಮಾಪಣೆ ಕೋರಿದ. ಆ ಅಧಿಕಾರಿ ನಮಗೆ ಗಂಭೀರ ಧ್ವನಿಯಲ್ಲಿ ಹೇಳಿದ: 'ನೀವು ಎಷ್ಟು ತಿನ್ನುತ್ತೀರೋ ಅಷ್ಟು ಮಾತ್ರ ತರಿಸಿಕೊಳ್ಳಿ. ಹಣ ನಿಮ್ಮದು, ಆದರೆ ಸಂಪನ್ಮೂಲಗಳು ಸಮಾಜದ್ದು. ಪ್ರಪಂಚದಲ್ಲಿ ಆಹಾರ ಸಿಗದ ಎಷ್ಟೋ ಜನರಿದ್ದಾರೆ. ಅದನ್ನು ವ್ಯರ್ಥಗೊಳಿಸಲು ನಿಮಗೆ ಕಾರಣಗಳಿಲ್ಲ.'  ನಮ್ಮ ಮುಖಗಳು ಕೆಂಪಾದವು. ಈ ಶ್ರೀಮಂತ ದೇಶದ ಜನರ ಮನೋಭಾವ ನಮ್ಮನ್ನು ನಾಚಿಕೆಗೀಡುಮಾಡಿತು. ನಾವು ಅಷ್ಟೇನೂ ಶ್ರೀಮಂತವಲ್ಲದ ದೇಶದಿಂದ ಬಂದವರಾದರೂ ನಾವು ಇತರರನ್ನು ತೃಪ್ತಿಪಡಿಸಲು ಬಹಳಷ್ಟು ಆಹಾರವನ್ನು ಬಡಿಸಿ ವ್ಯರ್ಥ ಮಾಡುತ್ತಿದ್ದುದು ನೆನಪಾಯಿತು. ಈ ಘಟನೆ ನಮ್ಮ ಕೆಟ್ಟ ಅಭ್ಯಾಸಗಳನ್ನು ತಿದ್ದಿಕೊಳ್ಳಲು ಒಂದು ಪಾಠವಾಯಿತು."
     ಅಧ್ಯಯನ ಪ್ರವಾಸಕ್ಕೆ ಹೋಗಿದ್ದವರಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ಇದು ಪಾಠವಾಗಬೇಕು. ಯಾವುದಾದರೂ ಮದುವೆಯೋ, ಸಮಾರಂಭವೋ ನಡೆದರೆ ಅಲ್ಲಿ ಊಟ ಮಾಡಿದ ನಂತರ ಉಂಡವರು ಎಲೆಯಲ್ಲಿ ಉಳಿಸಿಹೋದ ಆಹಾರದ ಪ್ರಮಾಣ ನೂರಾರು ಜನರ ಹಸಿವನ್ನು ಇಂಗಿಸುವಷ್ಟು ಇರುತ್ತದೆ. ಮೇಲ್ಪಂಕ್ತಿ ಹಾಕಬೇಕಾದ ಸರ್ಕಾರದ ವತಿಯಿಂದ ನಡೆಯುವ ಸಮಾರಂಭಗಳಲ್ಲೇ, ಗಣ್ಯಾತಿಗಣ್ಯರುಗಳು ಭಾಗವಹಿಸುವ ಮೇಜುವಾನಿಗಳಲ್ಲೂ ಸಹ ಈ ರೀತಿ ಆಹಾರವನ್ನು ವ್ಯರ್ಥ ಮಾಡಲಾಗುತ್ತದೆ. ಹಸಿವಿನಿಂದ ಸುಮಾರು ೫ ಮಿಲಿಯನ್ ಮಕ್ಕಳು ಪ್ರಪಂಚದಲ್ಲಿ ಪ್ರತಿವರ್ಷ ಹಸಿವಿನಿಂದ ಸಾಯುತ್ತಾರೆಂದು ಒಂದು ಅಂದಾಜಿದೆ. ಆಫ್ರಿಕಾ, ಭಾರತ, ಪಾಕಿಸ್ತಾನದಂತಹ ದೇಶಗಳ ಮಕ್ಕಳೂ ಇದರಲ್ಲಿ ಸೇರಿದ್ದಾರೆ. ಪೂರ್ಣ ತಿನ್ನದೆ ಎಂಜಲು ಮಾಡಿ ತಿಪ್ಪೆಗೆ ಚೆಲ್ಲುವ ಹೆಚ್ಚಿನ ಪದಾರ್ಥಗಳು ಉಪಯೋಗಿಸಲು ಯೋಗ್ಯವಾದ ಪದಾರ್ಥಗಳೇ ಆಗಿರುತ್ತದೆ ಎಂಬುದು ಕಠಿಣ ಸತ್ಯವಾಗಿದೆ. ಹೋಟೆಲ್ಲಿನಲ್ಲಿ ತರಿಸಿಕೊಳ್ಳುವ ತಿಂಡಿಯನ್ನು ಪೂರ್ಣ ತಿನ್ನುವವರನ್ನು ಜುಗ್ಗ, ಕಂಜೂಸ್ ಎಂಬಂತೆ ನೋಡುವುದಲ್ಲದೆ, ಶಾಸ್ತ್ರಕ್ಕೆ ತಿಂದಂತೆ ಮಾಡಿ ಉಳಿಸುವುದನ್ನೇ ದೊಡ್ಡಸ್ತಿಕೆ ಎಂದು ಭಾವಿಸುವವರ ಸಂಖ್ಯೆಗೆ ಕಡಿಮೆಯೇನಿಲ್ಲ. ಪ್ರಾಣಿಗಳು ಹಸಿವಾದಾಗ ಮಾತ್ರ ತಿನ್ನುತ್ತವೆ, ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನುತ್ತವೆ. ಮನುಷ್ಯರೆನಿಸಿಕೊಂಡವರು ಪ್ರಾಣಿಗಳಿಗಿಂತ ಕಡೆಯಾಗಬಾರದಲ್ಲವೇ? ಉಳಿಸಿ ಚೆಲ್ಲುವುದಕ್ಕಿಂತ ಎಷ್ಟು ಬೇಕೋ ಅಷ್ಟು ಪಡೆದು ತಿನ್ನುವುದು ಒಳ್ಳೆಯದು. ಹಣ ಗಳಿಸಬಹುದು, ಆದರೆ ಪೋಲಾದ ಆಹಾರವನ್ನು ಮತ್ತೆ ತಯಾರಿಸಲು ಸಾಧ್ಯವೇ? ಒಂದು ಅನ್ನದ ಅಗುಳಿನಲ್ಲಿ ಎಷ್ಟು ಜನರ ಶ್ರಮ ಇರುತ್ತದೆ, ಅದು ಅಕ್ಕಿಯಾಗಲು, ಅನ್ನವಾಗಲು ಎಷ್ಟು ಸಮಯ ಬೇಕು ಎಂಬುದನ್ನು ನಾವು ಯಾರಾದರೂ ಚಿಂತಿಸುತ್ತೇವೆಯೇ? ಆದರೆ ಅದನ್ನು ವ್ಯರ್ಥ ಮಾಡಲು ಸಮಯವೇ ಬೇಕಿಲ್ಲ. ಇದು ತುತ್ತು ಅನ್ನಕ್ಕೂ ಪರದಾಡುವ ಲಕ್ಷಾಂತರ ಜನರಿಗೆ ಬಗೆಯುವ ದ್ರೋಹವಲ್ಲದೆ ಮತ್ತೇನು? ಈ ರೀತಿ ವ್ಯರ್ಥವಾಗುವ ಆಹಾರದಿಂದ ಪ್ರತಿವರ್ಷ ಸುಮಾರು ೫೦೦ ಮಿಲಿಯನ್ ಜನರ ಹಸಿವನ್ನು ಇಂಗಿಸಲು ಶಕ್ಯವಿದೆ!
     ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು ೫೮೦೦೦ ಕೋಟಿ ರೂಗಳಷ್ಟು ಆಹಾರ ಪದಾರ್ಥಗಳು ಮತ್ತು ಸುಮಾರು ೪೪೦೦೦ ಕೋಟಿ ರೂ.ಗಳಷ್ಟು ತರಕಾರಿ ಮತ್ತು ಹಣ್ಣುಗಳು ಹಾಳಾಗುತ್ತಿವೆ. ಆಸ್ಟ್ರೇಲಿಯಾದಲ್ಲಿ ಬೆಳೆಯುವ ಪ್ರಮಾಣದಷ್ಟು ಗೋಧಿ ಭಾರತದಲ್ಲಿ ಹಾಳಾಗುತ್ತಿದೆಯಂತೆ! ಅವೈಜ್ಞಾನಿಕ ವ್ಯವಸಾಯ ಕ್ರಮ, ಹವಾಮಾನ ವೈಪರೀತ್ಯ, ಸಾಗಾಣಿಕೆ, ದಾಸ್ತಾನು ಮಾಡುವ ರೀತಿಗಳಿಂದ ದವಸಗಳು ಹಾಳಾಗುತ್ತಿವೆ. ಅದರ ಜೊತೆಗೆ ಮೇಲೆ ತಿಳಿಸಿದ ಅಪೂರ್ಣ ಬಳಕೆಯ ಕಾರಣದಿಂದಲೂ ಅಪಾರ ಹಾನಿಯಾಗುತ್ತಿದೆ. ಖಾಸಗಿ ಗೋಡೌನುಗಳಿರಲಿ, ಸರ್ಕಾರದ ಗೋಡೌನುಗಳಲ್ಲಿಯೇ ಲಕ್ಷಾಂತರ ಟನ್ನುಗಳಷ್ಟು ದವಸ ಧಾನ್ಯಗಳು ಕೊಳೆತುಹೋಗುತ್ತವೆ. ಲಾಭ ಪಡೆಯುವ ಸಲುವಾಗಿ ದವಸ ಧಾನ್ಯಗಳನ್ನು ಅಕ್ರಮವಾಗಿ ಕಳ್ಳ ದಾಸ್ತಾನು ಶೇಖರಿಸಿಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಅನುಸರಿಸಬೇಕಿದೆ. ಇನ್ನೇನು ಹಾಳಾಗುತ್ತದೆ ಎಂಬ ಹಂತದಲ್ಲಿ ಮಾತ್ರ ಅವು ಹೊರಗೆ ಬರುತ್ತವೆ. ಆಹಾರ ಪದಾರ್ಥಗಳ ನಷ್ಟದ ಕಾರಣದಿಂದಲೇ ದೇಶ ಮತ್ತು ಸಮಾಜ ದೊಡ್ಡ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಆಹಾರ ಪದಾರ್ಥಗಳ ನಷ್ಟ ತಡೆಯುವಲ್ಲಿ ಜಪಾನ್ ಉತ್ತಮ ಆಡಳಿತಾತ್ಮಕ ಕ್ರಮ ಕೈಗೊಂಡಿದೆಯೆನ್ನಬಹುದು. ಕಂಟೈನರುಗಳು, ಪ್ಯಾಕೇಜುಗಳ ಬಗ್ಗೆ, ಆಹಾರದ ತ್ಯಾಜ್ಯದ ಮರುಬಳಕೆ ಬಗ್ಗೆ, ಆಹಾರದ ನಷ್ಟ ತಡೆಯವ ದಿಸೆಯಲ್ಲಿನ ಹಲವಾರು ಸಂಗತಿಗಳ ಬಗ್ಗೆ ಅಲ್ಲಿ ಕಾಯದೆ, ಕಾನೂನುಗಳು ಇವೆ. ಜೊತೆಗೆ ಅಲ್ಲಿನ ನಾಗರಿಕರೂ ತಮ್ಮ ನಾಗರಿಕ ಪ್ರಜ್ಞೆಯಿಂದ ಈ ದಿಸೆಯಲ್ಲಿ ನೆರವಾಗಿದ್ದಾರೆ. ನಮ್ಮಲ್ಲೂ ಈ ಬಗ್ಗೆ ಜನಜಾಗೃತಿ ಮೂಡಿಸಬೇಕು. ನಷ್ಟ ತಡೆಯುವುದರೊಂದಿಗೆ ಮರುಬಳಕೆಗೆ ಮತ್ತು ಪರಿಸರ ಸ್ನೇಹಿ ಬಳಕೆಗೆ ತ್ಯಾಜ್ಯಗಳನ್ನು ಬಳಸುವ ಬಗ್ಗೆ ಕಾನೂನು-ಕಟ್ಟಳೆಗಳನ್ನು ಮಾಡಿ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳು, ತರಕಾರಿಗಳು ಕೆಡದಂತೆ ದಾಸ್ತಾನು ಇಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆಹಾರದ ಸದ್ಬಳಕೆ ಮತ್ತು ಪೋಲು ಮಾಡದಿರುವ ಕುರಿತು ಶಾಲಾ ಪಠ್ಯಪುಸ್ತಕಗಳಲ್ಲಿ ಮಕ್ಕಳಿಗೆ ತಿಳುವಳಿಕೆ ನೀಡುವ ವಿಷಯ ಅಳವಡಿಸಬೇಕು.
     ಆಹಾರವನ್ನು ವ್ಯರ್ಥ ಮಾಡುವುದು ತರವಲ್ಲ. ವ್ಯರ್ಥ ಮಾಡುವುದು ಒತ್ತಟ್ಟಿಗಿರಲಿ, ಆಹಾರವನ್ನು ಪಡೆಯಲೂ ಅರ್ಹತೆ ಇರಬೇಕು. ಈ ವೇದಮಂತ್ರ ಹೇಳುತ್ತದೆ:
ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |
ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)
     'ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ' ಎಂಬುದು ಈ ಮಂತ್ರ ಅರ್ಥ. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದರು: "ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ." ಎಂತಹ ದಿವ್ಯ ಸಂದೇಶ. ಊಟ ಮಾಡುವುದಕ್ಕೂ ಅರ್ಹತೆ ಇರಬೇಕು. ಅಂತಹುದರಲ್ಲಿ ತಿನ್ನುವ ಆಹಾರವನ್ನೇ ವ್ಯರ್ಥ ಮಾಡುವುದು ಮಹಾಪಾಪ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಇದೇ ಸಾಮಾಜಿಕ ಪ್ರಜ್ಞೆ.
      ಮದುವೆ ಮೊದಲಾದ ಸಂದರ್ಭಗಳಲ್ಲಿ ಆಹ್ವಾನಿಸಿದಷ್ಟು ಸಂಖ್ಯೆಯಲ್ಲಿ ಜನರು ಬರದಿದ್ದಾಗ ತಯಾರಾದ ಆಹಾರ ಪದಾರ್ಥಗಳು ಉಳಿದುಬಿಡುತ್ತವೆ. ಇಂತಹ ಸಂದರ್ಭಗಳಲ್ಲಿ ಅದು ವ್ಯರ್ಥವಾಗದಂತೆ ನೋಡಿಕೊಂಡಲ್ಲಿ ಅದು ಸಾಧನೆಯೇ ಸರಿ. ಅದನ್ನು ತ್ವರಿತವಾಗಿ ಅಂದೇ ವಿಲೇವಾರಿ ಮಾಡದಿದ್ದಲ್ಲಿ ತಿಪ್ಪೆಗೆ ಸೇರಿ ಸಾಮಾಜಿಕ ನಷ್ಟವಾಗುತ್ತದೆ. ನಗರಗಳಲ್ಲಿ ಸ್ವಯಂಸೇವಾಸಂಸ್ಥೆಗಳು ಕಲ್ಯಾಣ ಮಂಟಪಗಳು, ಪಾರ್ಟಿ ಹಾಲುಗಳಲ್ಲಿ ಉಳಿಯುವ ಇಂತಹ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸ ಮಾಡಬಹುದು, ಅರ್ಥಾತ್ ಬಡವರು ಮತ್ತು ಅಗತ್ಯವಿರುವವರಿಗಾಗಿ ಒಂದು ಆಹಾರ ಬ್ಯಾಂಕ್ ಸ್ಥಾಪಿಸುವ ಯೋಜನೆ ಮಾಡಬಹುದು. ಕನಿಷ್ಠ ಪಕ್ಷ ಒಂದು ಸಂಚಾರಿ ಕ್ಯಾಂಟೀನ್ ಇಟ್ಟು ರಿಯಾಯಿತಿ ದರಗಳಲ್ಲಿ ಮಾರಿದರೂ ತಪ್ಪಾಗುವುದಿಲ್ಲ. ಸೌದಿಯಲ್ಲಿ ಒಬ್ಬ ಸಹೃದಯಿ ತನ್ನ ಮನೆ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಒಂದು ದೊಡ್ಡ ರೆಫ್ರಿಜರೇಟರ್ ಇಟ್ಟು ಅದರಲ್ಲಿ ಉಪಯೋಗಿಸಿ ಉಳಿದ ಆಹಾರ ಪದಾರ್ಥಗಳನ್ನು ಆತ ಮತ್ತು ಆತನ ಸ್ನೇಹಿತರು ಇಡುತ್ತಾರಂತೆ. ಅಗತ್ಯವಿರುವವರು ಯಾರು ಬೇಕಾದರೂ ನೇರವಾಗಿ ಇದನ್ನು ತೆಗೆದುಕೊಳ್ಳಬಹುದಂತೆ. ಭಿಕ್ಷೆ ಬೇಡುವ ಹೀನಾಯ ಸ್ಥಿತಿಯಿಂದ ತಪ್ಪಿಸುವ ಈ ಕೆಲಸ ಅಭಿನಂದನೀಯವಾಗಿದೆ ಮತ್ತು ಅನುಕರಣೀಯವಾಗಿದೆ. ಸಮಾರಂಭಗಳಲ್ಲಿ ಊಟಕ್ಕೆ ಹಾಕಿಸಿಕೊಂಡು ಉಳಿಸುವ ಆಹಾರ ಪದಾರ್ಥಗಳನ್ನು ತಿಪ್ಪೆಗೆ ಸುರಿದಾಗ ಭಿಕ್ಷುಕರು, ನಾಯಿಗಳು ಅದಕ್ಕಾಗಿ ಕಿತ್ತಾಡುವ ದೃಷ್ಯ ನೋಡಿಯಾದರೂ ನಾವು ಬದಲಾಗಬೇಕು. ತಿನ್ನೋಣ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಾಕಿಸಿಕೊಂಡು ತಿನ್ನೋಣ. ಉಳಿದರೆ ಅದು ಇನ್ನೊಬ್ಬರ ಹಸಿವು ಹಿಂಗಿಸಲು ಸಹಕಾರಿ ಆಗುತ್ತದೆ ಎಂಬುದನ್ನು ಮರೆಯದಿರೋಣ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ ಎಂದು ಬೊಬ್ಬಿರಿಯುವ ನಾವು ಅದೇ ಆಹಾರ ಪದಾರ್ಥಗಳನ್ನು ಹೀಗೆ ಬೇಕಾಬಿಟ್ಟಿ ವ್ಯರ್ಥ ಮಾಡದಿದ್ದರೆ ಸಹಜವಾಗಿ ಅದು ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಬೆಲೆ ಏರಿಕೆ ಮತ್ತಷ್ಟು ಜನರನ್ನು ಬಡತನಕ್ಕೆ ದೂಡುತ್ತದೆ ಎಂಬುದನ್ನು ಮರೆಯದಿರೋಣ. ನೆರೆಯ ಚೀನಾದಲ್ಲಿ ಅಂತರ್ಜಾಲಿಗರು ಒಂದು ಆಂದೋಳನ ಪ್ರಾರಂಭಿಸಿದ್ದಾರೆ, ಅದೆಂದರೆ ಸಮಾರಂಭಗಳಲ್ಲಿ, ಹೋಟೆಲುಗಳಲ್ಲಿ ತಿನ್ನದೆ ಉಳಿಸುವ ಆಹಾರವನ್ನು ಮನೆಗೆ ಕೊಂಡೊಯ್ದು ಉಪಯೋಗಿಸಲು ಪ್ರೇರಿಸುವುದು. ಇಲ್ಲೂ ಸಹ ಇಂತಹ ಆಂದೋಳನದ ಅಗತ್ಯವಿದೆ.
     ೧೯೭೩ರಲ್ಲಿ ಬರ ಪರಿಸ್ಥಿತಿ ಎದುರಾದಾಗ ಕರ್ನಾಟಕದ ಹಲವೆಡೆ ಜನರು ಆಹಾರಕ್ಕಾಗಿ ಹಪಹಪಿಸಿ ಅಂಗಡಿ, ಸೊಸೈಟಿಗಳನ್ನು ಲೂಟಿ ಮಾಡಿ ದವಸ ಧಾನ್ಯಗಳನ್ನು ಹೊತ್ತೊಯ್ದಿದ್ದರು. ದೇಶದ ಜನಸಂಖ್ಯೆ ಏರುತ್ತಲೇ ಇದೆ. ಆಹಾರದ ಅಗತ್ಯತೆ ಕೂಡಾ ಹೆಚ್ಚುತ್ತಿದೆ. ಆದರೆ ಆಹಾರ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ಜಮೀನುಗಳಲ್ಲಿ ಕಟ್ಟಡಗಳು ತಲೆಯೆತ್ತುತ್ತಿವೆ. ಈ ಅಸಮತೋಲನದಿಂದ ಮುಂದೊಮ್ಮೆ ವಿಪ್ಲವ ಜರುಗಿದರೂ ಆಶ್ಚರ್ಯವಿಲ್ಲ. ಇದರ ಮುನ್ನರಿವಿನಿಂದ ಸರ್ಕಾರ ಮತ್ತು ಜನಗಳು ಎಚ್ಚೆತ್ತುಕೊಂಡು ಸಮತೋಲನ ಕಾಯ್ದುಕೊಳ್ಳಲಾದರೂ ಆಹಾರದ ದುರ್ಬಳಕೆ, ದುರ್ವಿನಿಯೋಗ ಮತ್ತು ಹಾಳಾಗುವುದನ್ನು ತಡೆಯಲು ಮನಸ್ಸು ಮಾಡಬೇಕಿದೆ. ಅದೃಷ್ಟವಶಾತ್ ಭಾರತದಲ್ಲಿ ಕೆಲವು ಯೂರೋಪಿಯನ್ ಮತ್ತು ಅಮೆರಿಕಾ ದೇಶಗಳಲ್ಲಿಯಷ್ಟು ಪ್ರಮಾಣದಲ್ಲಿ ಹಾಳು ಮಾಡುತ್ತಿಲ್ಲ. ಆ ದೇಶಗಳಲ್ಲಿ ತರಕಾರಿ ಅಥವ ಹಣ್ಣು ಸರಿಯಾದ ಆಕಾರ ಅಥವ ಬಣ್ಣ ಇಲ್ಲವೆಂದು ಕಂಡರೆ ಎಸೆದುಬಿಡುತ್ತಾರಂತೆ. ಅಲ್ಲಿ ಹಾಳಾದ ಆಹಾರಪದಾರ್ಥಗಳ ಬೆಟ್ಟವೇ ಕಾಣಸಿಗುತ್ತದೆ.
     ಭೂಮಿಯನ್ನು ಜೀವಿಸಲು ಉತ್ತಮ ಸ್ಥಳವೆಂದು ಅನ್ನಿಸಲು ಆಹಾರದ ಸದ್ಬಳಕೆ ಅನಿವಾರ್ಯವಾಗಿದೆ. ಹೆಚ್ಚು ವಿಸ್ತರಿಸದೆ ಮುಗಿಸಿಬಿಡೋಣ. ಏಕೆಂದರೆ ಅಹಾರ ವ್ಯರ್ಥ ಮಾಡುವುದರಿಂದ ಆಗುವ ಕೆಡುಕುಗಳ ಬಗ್ಗೆ ಹೇಳಿಯಾಗಿದೆ. ಬೇರೆಯವರು ಏನು ಮಾಡುತ್ತಾರೆ, ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳದೆ ಉತ್ತಮ ನಾಗರಿಕರಾಗಿ ವೈಯುಕ್ತಿಕವಾಗಿ ನಾವು ಮೊದಲು ಈ ದಿಸೆಯಲ್ಲಿ ಮುಂದುವರೆಯಬೇಕಿದೆ. 'ಕೊಳ್ಳೋಣ, ತಿನ್ನೋಣ ಮತ್ತು ವ್ಯರ್ಥ ಮಾಡೋಣ' ಎಂಬ ನಮ್ಮ ರೂಢಿಗತ ಪ್ರವೃತ್ತಿಯನ್ನು  'ಅಗತ್ಯವಿರುವಷ್ಟು ಮಾತ್ರ ಕೊಳ್ಳೋಣ ಮತ್ತು ಅಗತ್ಯವಿರುವಷ್ಟೇ ತಿನ್ನೋಣ' ಎಂಬುದಕ್ಕೆ ಬದಲಾಯಿಸಿಕೊಳ್ಳಬೇಕಿದೆ.
-ಕ.ವೆಂ.ನಾಗರಾಜ್.
***************
ಪೂರಕ ವಿಶೇಷ ಮಾಹಿತಿ:
'ಅನ್ನಭಾಗ್ಯ' ಯೋಜನೆಗಾಗಿ ಕರ್ನಾಟಕ ಸರ್ಕಾರ ನವೆಂಬರ್, 2013ರಿಂದ ಫೆಬ್ರವರಿ, 2014ರವರೆಗಿನ 4 ತಿಂಗಳ ಅವಧಿಯಲ್ಲಿ ಮಿಲ್ಲುಗಳ ಮಾಲಿಕರಿಂದ ಒತ್ತಾಯವಾಗಿ 1.61 ಲಕ್ಷ ಟನ್ ಅಕ್ಕಿಯನ್ನು ಸಂಗ್ರಹಿಸಿತು. ಇದರಲ್ಲಿ ಬಹುತೇಕ ಅಕ್ಕಿ ಹಾಳಾದ ಸ್ಥಿತಿಯಲ್ಲಿತ್ತು. ಅದರಲ್ಲೇ 93000 ಟನ್ ಅಕ್ಕಿಯನ್ನು ಜನರಿಗೆ ವಿತರಣೆ ಮಾಡಲಾಯಿತು. ವಿತರಿಸಲು ಸಾಧ್ಯವೇ ಇಲ್ಲದಷ್ಟು ಹಾಳಾದ 63000 ಟನ್ ಅಕ್ಕಿಯನ್ನು ವಿತರಿಸಲಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ, ಅಂದರೆ ಸಾರ್ವಜನಿಕರಿಗೆ ಸೇರಿದ, ಸುಮಾರು 200 ಕೋಟಿ ರೂ. ಹಣ ನಷ್ಟವಾಯಿತು. ವಿಪರ್ಯಾಸವೆಂದರೆ ಸರ್ಕಾರ ಮಿಲ್ ಮಾಲಿಕರಿಗೆ ಪೂರ್ಣ ಹಣ ಪಾವತಿಸಿತು. ಈ ನಷ್ಟದ ವಿರುದ್ಧ ಸರ್ಕಾರವಾಗಲೀ, ವಿರೋಧ ಪಕ್ಷವಾಗಲೀ, ಮಾಧ್ಯಮಗಳಾಗಲೀ ತಲೆ ಕೆಡಿಸಿಕೊಳ್ಳಲಿಲ್ಲ.  ಮಾಧ್ಯಮಗಳಂತೂ ಮೈತ್ರೇಯಿಗೌಡ, ಕಾರ್ತಿಕ್ ಗೌಡ, ನಯನಕೃಷ್ಣ, ಬಿಗ್ ಬಾಸುಗಳ ವಿಷಯಗಳೇ ಮಹತ್ವದ ವಿಷಯಗಳೆಂಬಂತೆ ದಿನಗಟ್ಟಲೆ, ವಾರಗಟ್ಟಲೆ ಸುದ್ದಿ, ಚರ್ಚೆಗಳನ್ನು ಬಿತ್ತರಿಸುತ್ತಲೇ ಇವೆ. ಇದು ಅವುಗಳಿಗೆ ಮಹತ್ವದ ಸಂಗತಿಯೇ ಆಗಲಿಲ್ಲ.
-ಕ.ವೆಂ.ನಾ.
*********
ಚಿತ್ರಕೃಪೆ: http://www.eco-business.com/news/save-food-campaign-asia-pacific-kicked/

['ಸಂಪದ'ದಲ್ಲಿ ಸಹ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಲೇಖನ ಅಲ್ಲಿ ಪ್ರಕಟಿಸಿದ ನನ್ನ 500ನೆಯ ಲೇಖನವಾಗಿದೆ.]

ದಿ.18.8.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:



Tuesday, September 2, 2014

ಸಮಾಜದ ಸಾಮರಸ್ಯ - ವೇದಭಾರತಿಯ ಉದ್ದಿಶ್ಯ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || 
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
"ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ."
     ಹಾಸನದ ವೇದಭಾರತಿ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೇದ ಅರ್ಥಾತ್ ಜ್ಞಾನ ಸಮಾಜದ ಎಲ್ಲ ಆಸಕ್ತರಿಗೂ ತಲುಪಲಿ ಎಂಬ ಸದಾಶಯದಿಂದ 'ಎಲ್ಲರಿಗಾಗಿ ವೇದ' ಎಂಬ ಘೋಷ ವಾಕ್ಯದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯನ್ನು ಪ್ರಾರಂಭದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ಪೋಷಿಸಿ ಬೆಳೆಸಿದವರು ಹರಿಹರಪುರ ಶ್ರೀಧರ್ ಮತ್ತು ಕವಿನಾಗರಾಜರು. ನಂತರದಲ್ಲಿ ಹಲವಾರು ಸಮಾನಮನಸ್ಕರ ಬೆಂಬಲ, ಪ್ರೋತ್ಸಾಹಗಳೂ ಸಿಕ್ಕಿ ಇಂದು ಒಂದು ಗುರುತಿಸಲ್ಪಡುವ ಸಂಘಟನೆಯಾಗಿದೆ. ಶ್ರೀ ಸುಧಾಕರ ಶರ್ಮರವರು ವೇದದ ಬೆಳಕಿನಲ್ಲಿ ನೀಡಿದ ಹಲವು ಉಪನ್ಯಾಸಗಳಿಂದ ಪ್ರಭಾವಿತರಾಗಿ 'ವೇದಸುಧೆ' ಹೆಸರಿನಲ್ಲಿ ಒಂದು ಅಂತರ್ಜಾಲ ಬ್ಲಾಗ್ ಅನ್ನು ಅಕ್ಟೋಬರ್, ೨೦೧೦ರಲ್ಲಿ ಪ್ರಾರಂಭಿಸಲಾಯಿತು. ಈ ಬ್ಲಾಗ್ ಎಷ್ಟು ಜನಪ್ರಿಯವಾತೆಂದರೆ ಇದರಲ್ಲಿ ವೇದದ ಹಿನ್ನೆಲೆಯಲ್ಲಿನ ಹಲವಾರು ಬರಹಗಳಿಗೆ, ಚರ್ಚೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದವು. ಆರೋಗ್ಯಕರ ಚರ್ಚೆಗಳು ಜ್ಞಾನದ ಹರವನ್ನು ಹೆಚ್ಚಿಸಲು ಸಹಕಾರಿಯಾದವು. ಇದುವರೆಗೆ ೧೨೨೦ ಬರಹಗಳು ಈ ಬ್ಲಾಗಿನಲ್ಲಿ ಪ್ರಕಟವಾಗಿ ಇದುವರೆವಿಗೆ ಸುಮಾರು ೧,೨೫,೦೦೦ ಪುಟವೀಕ್ಷಣೆಗಳಾಗಿವೆ. ಬ್ಲಾಗ್ ಪ್ರಾರಂಭವಾದ ನಂತರದಲ್ಲಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕೋತ್ಸವ ಮಾಡಿ ಆ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿಚಾರಗೋಷ್ಠಿ , ಅಗ್ನಿಹೋತ್ರದ ಪ್ರಾತ್ಯಕ್ಷಿಕೆ, ವೇದದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಉಪನ್ಯಾಸ ಏರ್ಪಡಿಸಲಾಗಿತ್ತು. ೨೦೧೧ರಲ್ಲಿ ವೇದಸುಧೆ ಹೆಸರಿನಲ್ಲಿ ಒಂದು ವೆಬ್ ಸೈಟ್ ಅನ್ನು ಪ್ರಾರಂಭಿಸಲಾಯಿತು. ಈ ವೆಬ್ ಸೈಟಿನಲ್ಲಿ ಅನೇಕ ಪ್ರಬುದ್ಧ ವೈಚಾರಿಕ ಬರಹಗಳು, ಮಾಹಿತಿಗಳು, ವಿಡಿಯೋ, ಆಡಿಯೋಗಳು ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ. ಬ್ಲಾಗ್ ಮತ್ತು ವೆಬ್ ಸೈಟಿನ ವಿಳಾಸ: 
     ನಂತರದ ದಿನಗಳಲ್ಲಿ ಏರ್ಪಡಿಸಿದ್ದ ಶ್ರೀ ಸುಧಾಕರ ಶರ್ಮರಿಂದ ಒಂದು ವಾರದ ಕಾಲ ಉಪನ್ಯಾಸ ಮಾಲೆ, ಸಾರ್ವಜನಿಕರೊಡನೆ ಮುಕ್ತ ಸಂವಾದ ಜನಮನವನ್ನು ಸೆಳೆಯುವಲ್ಲಿ, ವೈಚಾರಿಕ ಚಿಂತನೆ ಉದ್ದೀಪಿಸುವಲ್ಲಿ ಯಶಸ್ವಿಯಾದವು. ಕಳೆದ ವರ್ಷ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ' ನಡೆಸಿದ್ದು ಆ ಶಿಬಿರದಲ್ಲಿ ಹಾಸನ ಜಿಲ್ಲೆಯ ೩೦ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ೪೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೂರದ ಪೂನಾದಿಂದಲೂ ಒಬ್ಬರು ಭಾಗವಹಿಸಿದ್ದರು. ಪ್ರತಿದಿನ ಸಾಯಂಕಾಲ ಸಾರ್ವಜನಿಕರಿಗೆ ಉಪನ್ಯಾಸ ಏರ್ಪಡಿಸಿತ್ತು. ಕೊನೆಯ ದಿನದಂದು ನಾಲ್ವರು ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡಿದ್ದು ಉಲ್ಲೇಖನೀಯ. ಇದು ಟಿವಿಯ ವಿವಿಧ ಚಾನೆಲ್ಲುಗಳ ಮೂಲಕ ಬಿತ್ತರವಾಗಿ ಗಮನ ಸೆಳೆದಿತ್ತು. ಸ್ವಾಮಿ ಚಿದ್ರೂಪಾನಂದಜಿಯವರಿಂದ ಒಂದು ವಾರದ ಕಾಲ 'ಗೀತಾಜ್ಞಾನಯಜ್ಞ' ನಡೆಸಲಾಯಿತು. ಕಳೆದ ವರ್ಷದಿಂದ ಮಕ್ಕಳಲ್ಲೂ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಬಾಲಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಈಗಲೂ ವೇದಮಂತ್ರಗಳನ್ನು ಹೇಳುತ್ತಿರುವುದು, ಕಲಿಕೆ ಮುಂದುವರೆಸುತ್ತಿರುವುದು ಮುದ ನೀಡುವ ಸಂಗತಿಯಾಗಿದೆ.
     ವೇದ ಎಂದರೆ ಕೇವಲ ಪೂಜಾ ಮಂತ್ರಪಾಠಗಳಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ಈ ಜ್ಞಾನ ಸಂಪತ್ತು ಸಮಸ್ತ ಮಾನವಕುಲದ ಆಸ್ತಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಲು ಅರ್ಹರು. ವೇದಗಳಲ್ಲಿ ಎಲ್ಲೂ ಅಸಮಾನತೆಯ ಸೋಂಕಿಲ್ಲ, ಬದಲಾಗಿ ಸಮಸ್ತ ಜೀವರಾಶಿಯ ಶ್ರೇಯೋಭಿವೃದ್ಧಿ ಬಯಸುವ ಸಂದೇಶಗಳಿವೆ. ವೇದಗಳನ್ನು ಪುರಾಣಗಳು ಮತ್ತು ಕಟ್ಟುಕಥೆಗಳೊಂದಿಗೆ ಸೇರಿಸಿ ಅಥವ ಸಮೀಕರಿಸಿ ವಿಶ್ಲೇಷಿಸುವುದು ವೇದಕ್ಕೆ ಬಗೆಯುವ ಅಪಚಾರವಾಗುತ್ತದೆ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ.  ಈ ನಿಟ್ಟಿನಲ್ಲಿ ಜನಜಾಗೃತಿ ಮಾಡಲು ವೇದಭಾರತಿ ಎರಡು ವರ್ಷಗಳ ಹಿಂದೆ ಯಾವುದೇ ಜಾತಿ, ಮತ, ಪಂಗಡ, ಲಿಂಗ, ವಯಸ್ಸಿನ ತಾರತಮ್ಯವಿಲ್ಲದೆ ಆಸಕ್ತ ಎಲ್ಲರಿಗೂ ವೇದಮಂತ್ರಗಳನ್ನು ಅಭ್ಯಸಿಸುವ ಅವಕಾಶ ಕಲ್ಪಿಸಿ ಸಾಪ್ತಾಹಿಕ ವೇದಾಭ್ಯಾಸ ತರಗತಿ ಪ್ರಾರಂಭಿಸಿತು. ಒಂದೆರಡು ತಿಂಗಳ ನಂತರ ಇದು ಪ್ರತಿನಿತ್ಯದ ತರಗತಿಯಾಗಿ ಮಾರ್ಪಟ್ಟಿದೆ.  ಕಳೆದ ಏಳೆಂಟು ತಿಂಗಳುಗಳಿಂದ ನಿತ್ಯ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಅಗ್ನಿಹೋತ್ರದ ಮಹತ್ವ, ಮಂತ್ರಗಳ ಅರ್ಥವನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಹಂಪಾಪುರ, ಅರಸಿಕೆರೆ ಮುಂತಾದೆಡೆಯಲ್ಲೂ ಈ ಪರಿಚಯ ಕಾರ್ಯ, ಜಾಗೃತಿ ಮೂಡಿಸುವ ಕೆಲಸಗಳಾಗಿವೆ. 
     ಪ್ರತಿನಿತ್ಯ ಹಾಸನದ ಹೊಯ್ಸಳನಗರದ 'ಈಶಾವಾಸ್ಯಮ್'ನಲ್ಲಿ ಸಾಯಂಕಾಲ ೬ರಿಂದ೭ರವರೆಗೆ ನಡೆಯುವ ವೇದಾಭ್ಯಾಸ ಸತ್ಸಂಗದ ಸ್ವರೂಪ ಪಡೆದುಕೊಂಡಿದೆ. ಪರಮಾತ್ಮಸ್ತುತಿ, ಅಗ್ನಿಹೋತ್ರ, ನಂತರ ವೇದಮಂತ್ರಗಳ ಸಾರವೆಂಬಂತಿರುವ ಎರಡು ಭಜನೆಗಳು, ವೇದಮಂತ್ರಗಳ ಅಭ್ಯಾಸ ನಡೆಯುತ್ತದೆ. ವೇದಮಂತ್ರಗಳ ಅರ್ಥ ತಿಳಿಸುವುದರೊಂದಿಗೆ ಆರೋಗ್ಯಕರ ಚರ್ಚೆಗೂ ಅವಕಾಶವಿರುತ್ತದೆ. ಆಗಾಗ್ಯೆ ಸಾಧು-ಸಂತರ, ಜ್ಞಾನವೃದ್ಧರ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತದೆ. ಪ್ರತಿನಿತ್ಯ ಸುಮಾರು ೨೦ರಿಂದ೩೦ ಆಸಕ್ತರು ಪಾಲುಗೊಳ್ಳುತ್ತಿದ್ದಾರೆ. ಆಸಕ್ತಿ ಇರುವ ಯಾರಿಗೇ ಆಗಲಿ, ಇಲ್ಲಿ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇವಲ ಸ್ವಂತದ ಅಭಿವೃದ್ಧಿಗಾಗಿ ಬಯಸುವುದಲ್ಲ, ಸಮಾಜಮುಖಿಯಾಗಿ ನಮ್ಮ ನಡವಳಿಕೆಗಳು, ಮನೋಭಾವ ವೃದ್ಧಿಸಲಿ ಎಂಬ ಸದುದ್ದೇಶದ ಚಟುವಟಿಕೆಗಳನ್ನು ನಡೆಸುವುದು, ಸಜ್ಜನ ಶಕ್ತಿಯ ಜಾಗರಣೆಗೆ ತನ್ನದೇ ಆದ ರೀತಿಯಲ್ಲಿ ಮುಂದುವರೆಯುವುದು ವೇದಭಾರತಿಯ ಧ್ಯೇಯವಾಗಿದೆ. ವೇದದ ಈ ಕರೆಯನ್ನು ಸಾಕಾರಗೊಳಿಸುವತ್ತ ಸಜ್ಜನರು ಕೈಗೂಡಿಸಲಿ ಎಂದು ಆಶಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
"ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ."
-ಕ.ವೆಂ.ನಾಗರಾಜ್.
***************
     ದಿನಾಂಕ 16 ಮತ್ತು 17.8.2014ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಹೊಸದಿಗಂತ, ಜನಮಿತ್ರ ಮತ್ತು ಜನಹಿತ ಪತ್ರಿಕೆಗಳು ವಿಶೇಷ ಪುಟಗಳನ್ನು ಪ್ರಕಟಿಸಿ ವೇದಪ್ರಚಾರ ಕಾರ್ಯದಲ್ಲಿ ಕೈಜೋಡಿಸಿದ್ದು ವಿಶೇಷ. ಆ ವಿಶೇಷ ಪುಟಗಳಲ್ಲಿ ನನ್ನ ಮತ್ತು ಹರಿಹರಪುರ ಶ್ರೀಧರರ ಲೇಖನಗಳು ಪ್ರಕಟಗೊಂಡಿದ್ದವು.

ಹೊಸದಿಗಂತ:

ಜನಹಿತ:

ಜನಮಿತ್ರ
 



Monday, September 1, 2014

"ವೇದಜ್ಞಾನವೆಂದರೆ ಕೇವಲ ಮಂತ್ರಪಾಠವಷ್ಟೇ ಅಲ್ಲ"

             "ವೇದವೆಂದರೆ ಕಬ್ಬಿಣದ ಕಡಲೆ" ಎಂಬುದು ಹಲವರ ಅನಿಸಿಕೆ .ಅದಕ್ಕಾಗಿ ಅದರ ಸಹವಾಸ ನಮಗೆ ಬೇಡ,ಎಂದು ತೆಪ್ಪಗಿರುವವರು ಹಲವು ಮಂದಿ.  ವೇದದ ಅಧಿಕಾರ ಕೆಲವರಿಗೆ ಎನ್ನುವ ಮಾತೂ ಕೇಳಿದ್ದೇವೆ. ಅಂದರೆ ಯಾವುದಕ್ಕೂ ಒಂದು ಅರ್ಹತೆ ಬೇಕು. ನೇರವಾಗಿ MBBS ಬರೆಯಲು ಸಾಧ್ಯವೇ?  ಅದಕ್ಕೆ ಪೂರ್ವಭಾವಿಯಾಗಿ ಪ್ರಾಥಮಿಕ ಹಂತದ  ಶಾಲೆಗಳಲ್ಲಿ   ಓದಿ ನಂತರ CET ಬರೆದು ಅರ್ಹತೆ ಗಳಿಸಿದರೆ ಮಾತ್ರ MBBS ಓದಲು ಸಾಧ್ಯ.ಇದು ವಿವರಣೆ. ಹೌದು, ಇದನ್ನು ಒಪ್ಪ ಬೇಕು. ಆದರೆ ವೇದದ ವಿಚಾರ ಮಾಡುವಾಗ "ಅಧಿಕಾರ" ಪದದ ಹಿಡಿತದಿಂದ ಬಹುಪಾಲು ಜನರಿಗೆ ಯಾವ ಬದುಕಿನ ಜ್ಞಾನ ಸಿಗಬೇಕಾಗಿತ್ತೋ ಅದರಿಂದ  ವಂಚನೆಯಾಗಿರುವುದೂ ಸುಳ್ಳಲ್ಲ. 
                  ವೇದಜ್ಞಾನವೆಂದರೆ ಕೇವಲ "ಮಂತ್ರಪಾಠ" ಎಂದು ಕೊಂಡಾಗ ಹೌದು ಕಷ್ಠವಿದೆ.ಯಾವ ವಿದ್ಯೆಯೂ ಸುಲಭವಾಗಿ ದಕ್ಕುವುದಿಲ್ಲ.ಹಲವಾರು  ಶತಕಗಳಿಂದ ಗುರುಕುಲ ಪದ್ದತಿ ಹೋಗಿ ನಂತರದ ಕಾಲದಲ್ಲಿ  ಮೆಖಾಲೆ ಶಿಕ್ಷಣ ಪದ್ದತಿ ಬಂದಮೇಲೆ ನಾವೆಲ್ಲರೂ ವೇದಜ್ಞಾನದಿಂದ ವಂಚಿತರಾಗಿ ಈ ಸ್ಥಿತಿಯನ್ನು ತಲುಪಿಯಾಗಿದೆ. ಆದರೆ ಹಲವರ ಪ್ರಯತ್ನದಿಂದ ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿರುವ "ವೇದಗುರುಕುಲಗಳಲ್ಲಿ" ಕಲಿಯುತ್ತಿರುವ ಮಕ್ಕಳಿಗೆ ಸಂಪೂರ್ಣವಾಗಿ ಆರ್ಷಪದ್ದತಿಯಲ್ಲಿ  ವೇದಮಂತ್ರಪಾಠ ಕಲಿಯಲು ಈಗಲೂ ಅವಕಾಶ ಸಿಕ್ಕಿರುವುದು ನಮ್ಮ ಸುದೈವ. ಈ ಪದ್ದತಿ ಮತ್ತೆ ಬೆಳೆದು ವಿಸ್ತಾರವಾಗಲು ಇನ್ನೂ ಅನೇಕ ದಶಕಗಳೇ ಬೇಕು. ಆ ನಂಬಿಕೆ ನನಗಿದೆ. ಇಂದಲ್ಲಾ ನಾಳೆ  ವೇದಜ್ಞಾನವು ಎಲ್ಲರಿಗೂ ಆರ್ಷಪದ್ದತಿಯಲ್ಲಿಯೇ ಸಿಗಲು ಸಾಧ್ಯ. ಆದರೆ ಅಂತಹ ಉತ್ಕೃಷ್ಟ  ಜ್ಞಾನವು ಯಾವುದೋ ಕಾರಣದಿಂದ ಕೆಲವರಿಗೇ ಮಾತ್ರ ಸೀಮಿತವಾಗಿ ಪೂಜೆ ಪುನಸ್ಕಾರಗಳು, ಯಜ್ಞಯಾಗಾದಿಗಳಿಗೆ ಸೀಮಿತವಾಗಿದ್ದು ಸುಳ್ಳಲ್ಲ. ಅಲ್ಲವೇ?

          ಇಂತಹ ಸ್ಥಿತಿಯಲ್ಲಿ ಪಂಡಿತ್ ಶ್ರೀ ಸುಧಾಕರಚತುರ್ವೇದಿಯವರು ,ವೇದಾಧ್ಯಾಯೀ ಶ್ರೀಸುಧಾಕರಶರ್ಮ ಮುಂತಾದವರ ಅವಿರತ ಶ್ರಮದಿಂದಾಗಿ ವೇದಜ್ಞಾನವನ್ನು ಸರಳವಾಗಿ ಕನ್ನಡಿಗರಿಗೆ ತಲುಪಿಸುವ ಸಾಹಿತ್ಯವು ಇಂದು ಲಭ್ಯವಾಗಿದೆ. ಅಂತಹ ಸಾಹಿತ್ಯದಲ್ಲಿ ಪಂಡಿತ್ ಸುಧಾಕರ ಚತುರ್ವೇದಿಯವರ  "ವೇದೋಕ್ತ ಜೀವನ ಪಥ" ಕೂಡ ಒಂದು. "ವೇದತರಂಗ " ಮಾಸಪತ್ರಿಕೆಯಂತೂ  ವೇದದ ಅರಿವನ್ನು ಸಾಮಾನ್ಯರಲ್ಲಿ ಮೂಡಿಸಲು ತನ್ನೆಲ್ಲಾ ಪ್ರಯತ್ನವನ್ನೂ ಮಾಡುತ್ತಿದೆ. ವೇದಮಂತ್ರಪಾಠವನ್ನು ಕಲಿಯಲು  ನಮ್ಮಿಂದ ಸಾಧ್ಯವಿಲ್ಲ. ನಮಗೆ ಸ್ವರ ಹೊರಡುವುದೇ ಇಲ್ಲಾ    ಎಂದು ಭಾವಿಸುವವರೂ ಕೂಡ ವೇದಜ್ಞಾನದಿಂದ ವಂಚಿತರಾಗಬೇಕಿಲ್ಲ. "ವೇದಜ್ಞಾನವೆಂದರೆ  ಕೇವಲ    ಮಂತ್ರಪಾಠವಷ್ಟೇ ಅಲ್ಲ"  ಎಂಬುದನ್ನು ಅರಿತುಕೊಂಡರೆ ವೇದದ ಲಾಭ ಪಡೆಯಲು ಸುಲಭವಾಗುವುದು. ಶ್ರೀ ಸುಧಾಕರಶರ್ಮರು ಇನ್ನೂ ಮುಂದುವರೆದು ಒಂದು ಮಾತು ಹೇಳುತ್ತಾರೆ " ವೇದ ಎಂದರೆ ಅದು ಪುಸ್ತಕದಲ್ಲಿರುವ ಮಂತ್ರವಷ್ಟೇ ಎಂದು ಯಾಕೆ ಭಾವಿಸುತ್ತೀರಿ? "

         ಇಲ್ಲಿ ನಾನು ಒಂದು ಮಾತನ್ನು ಒತ್ತಿ ಹೇಳಲು ಇಚ್ಛಿಸುತ್ತೇನೆ.    ಹಾಸನದ " ವೇದಭಾರತಿಯು" ಈಗ್ಗೆ ಎರಡು ವರ್ಷದ ಮುಂಚೆ ಸಾಪ್ತಾಹಿಕ ವೇದಪಾಠವನ್ನು ಆರಂಭಿಸಿದಾಗ 80ಕ್ಕೂ ಹೆಚ್ಚು ಜನ ಆಸಕ್ತರು ಸಮಾಜದ ಎಲ್ಲಾ ವರ್ಗಗಳಿಂದಲೂ ಬರಲು ಆರಂಭಿಸಿದರು. ನಮ್ಮ ಗುರುಗಳು ಆರ್ಷಪದ್ದತಿಯಲ್ಲಿಯೇ ಪಾಠ ಆರಂಭಿಸಿದರು. ಓಂಕಾರದಿಂದ ಆರಂಭವಾಗಿ ಸ್ವರದ ಪರಿಚಯಿಸಲು ಒಂದೆರಡು ತಿಂಗಳಾದರೂ ಹಲವರಿಗೆ ಕಲಿಯುವುದು ಕಷ್ಟವಾಯ್ತು. ಸಂಖ್ಯೆ ಕಡಿಮೆಯಾಗುತ್ತಾ ಬಂತು. ಬದ್ಧತೆ ಇದ್ದವರು ಮಾತ್ರ ಸಹನೆ ಕಳೆದುಕೊಳ್ಳದೆ  ಉಳಿದರು. ದೂರದ   ಊರಿನಿಂದ ಬರಬೇಕಾಗಿದ್ದ ನಮ್ಮ ಗುರುಗಳು    ಆನಂತರದ ದಿನಗಳಲ್ಲಿ ಬರುವುದೂ ಸ್ವಲ್ಪ ಕಡಿಮೆಯಾಯ್ತು. ಈಗ ಎರಡು ವರ್ಷ ಕಳೆದಿದ್ದರೂ    ಮಂತ್ರಭಾಗ ಮುಂದುವರೆಸುವುದು ಕಷ್ಟವೆನಿಸಿದೆ. ಅಷ್ಟೇ ಅಲ್ಲ ಆರಂಭಿಕ ಮಂತ್ರಗಳ ಸ್ವರವನ್ನೇ ತಿದ್ದುವ ಕೆಲಸ ಮುಂದುವರೆದಿದೆ.  ಕಾರಣ ಪಾಠಕ್ಕೆ ಬರುವವರಲ್ಲಿ ಹಲವರು 50 ದಾಟಿದವರು. ಆದರೂ ಮಂತ್ರಪಾಠ ಮುಂದುವರೆದಿದೆ.

             ಆದರೆ  ಸಾಮಾನ್ಯರಿಗೆ ವೇದದ ಅರಿವು ಮೂಡಿಸುವ ನಿರಂತರ ಪ್ರಯತ್ನವನ್ನು ವೇದ ಭಾರತಿಯು ಮಾಡುತ್ತಲೇ ಇದೆ. ಹಾಸನದ ಎರಡು ಸ್ಥಳೀಯ ಪತ್ರಿಕೆಗಳಲ್ಲಿ ಮತ್ತು  ರಾಜ್ಯಮಟ್ಟದ   "ವಿಕ್ರಮ " ವಾರಪತ್ರಿಕೆಯಲ್ಲಿ ವೇದದ ಅಂಕಣವನ್ನು ಬರೆಯುವ ಮೂಲಕ ತನ್ನ ಶಕ್ತಿಮೀರಿ ವೇದಭಾರತಿಯು ಪ್ರಯತ್ನಿಸುತ್ತಿದೆ. ಅಲ್ಲದೆ ವೇದಸುಧೆ ಬ್ಲಾಗ್ ಮತ್ತು ವೆಬ್ ಸೈಟ್ ಮೂಲಕ ನಾಲ್ಕೈದು ವರ್ಷಗಳಿಂದ  ಪ್ರಮುಖವಾಗಿ ಶ್ರೀ ಸುಧಾಕರ ಶರ್ಮರ ಉಪನ್ಯಾಸದ ಆಡಿಯೋ ಕೇಳಿಸುವಲ್ಲಿ ಸಫಲವಾಗಿದೆ.

       ವೇದಭಾರತಿಯು ಹಲವಾರು ಉಪನ್ಯಾಸಗಳನ್ನು ಆಯೋಜಿಸುವುದರ ಮೂಲಕ ಸಾಮಾನ್ಯಜನರಿಗೂ ವೇದದ ಅರಿವು ಮೂಡಿಸುವ, ಸಮಾಜದಲ್ಲಿ ಸಾಮರಸ್ಯ ಉಳಿಸುವ  ಕೆಲಸವನ್ನು ನಿರಂತರ ವಾಗಿ ಮಾಡುತ್ತಾ ಬಂದಿದೆ. ಮುಂದೆಯೂ ಮಾಡುತ್ತದೆ. ನೆಮ್ಮದಿಯ  ಆರೋಗ್ಯಕರ ಬದುಕಿಗಾಗಿ ಅರಿವು ಮೂಡಿಸುವ ವೇದಮಂತ್ರಗಳ ಆಧಾರಿತ ಲೇಖನಗಳಿಗಾಗಿ  ವೇದತರಂಗದ ಜೊತೆಗೆ  ಈ ಕೆಲವು ಪತ್ರಿಕೆ ಹಾಗೂ ಬ್ಲಾಗ್ ಗಳನ್ನೂ ನೋಡಬಹುದು.

1. ವಿಕ್ರಮ -ವಾರಪತ್ರಿಕೆಯಲ್ಲಿ "ಜೀವನವೇದ" ಅಂಕಣ
2. ಹಾಸನ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ "ವೇದಪಥ"
3. ಹಾಸನ ಸ್ಥಳೀಯ ಪತ್ರಿಕೆ ಜನಹಿತದಲ್ಲಿ "ಸರ್ವಹಿತ ವೇದ"
4 Website:    http://www.vedasudhe.com/
5.Blog: http://blog.vedasudhe.com/
6.http://vedajeevana.blogspot.in/
7.http://vedabharatihassan.blogspot.in/