Pages

Saturday, July 31, 2010

ಈ ಮರ ನನ್ನನ್ನು ಬಿಡ್ತಾ ಇಲ್ಲಾ

ಒಂದು ದೊಡ್ದ ಮೂಟೆ ಹೊತ್ಕೊಂಡು ಒಬ್ಬ ದಾರೀಲಿ ಹೋಗ್ತಾ ಇದ್ದ. ಎದುರು ಸಿಕ್ಕಿದ ಮತ್ತೊಬ್ಬ ಅವನನ್ನು ಕೇಳಿದ.

- ಎಲ್ಲಿಗೆ ಹೋಗ್ತಾ ಇದ್ದೀಯಾ? ಈ ಮೂಟೆಯಲ್ಲೇನಿದೆ?

-ಸುಮ್ನೇ ಹಾಗೇ ಹೊರಟೆ, ದಾರೀಲಿ ಸಿಕ್ಕಿದವರೆಲ್ಲಾ ಏನೇನೋ ಕೊಟ್ಟರು. ಅದೆಲ್ಲಾ ಮೂಟೆಯಲ್ಲಿದೆ. ಹೋಗ್ತಾ ಇದ್ದೀನಿ.

-ಎಲ್ಲಿಗೆ ಹೋಗ್ತಾ ಇದ್ದೀಯಾ?

-ಎಲ್ಲಿಗೆ! ಎಲ್ಲಿಗೆ! ಯೋಚನೇ ನೇ ಮಾಡಲಿಲ್ಲ. ಹೊರಟುಬಿಟ್ಟೆ. ಹೋಗ್ತಾ ಇದ್ದೀನಿ.

- ಮೂಟೆಯಲ್ಲೇನಿದೆ?

-ನಂಗೊತ್ತಿಲ್ಲಪ್ಪ. ಅವ್ರು ಕೊಟ್ಟಿದ್ದ ತುಂಬಿಕೊಂಡು ಹೊರಟೇ ಬಿಟ್ಟೆ. ಮತ್ತೆ ಮೂಟೆ ಬಿಚ್ಚಿ ನೋಡೇ ಇಲ್ಲ.

ಇನ್ನೊಬ್ಬ ರಸ್ತೆ ಬದಿಯಲ್ಲಿ ಮರವೊಂದನ್ನು ತಬ್ಬಿ ನಿಂತಿದ್ದ.ಒಬ್ಬ ದಾರಿಹೋಕ ಅಲ್ಲಿ ಬಂದ.

-ಇದೇನು ಮರ ತಬ್ಬಿ ನಿಂತಿದ್ದೀಯಾ?

-ಬಿಡು ಅಂದ್ರೆ ಬಿಡ್ತಾ ಇಲ್ಲಾ ನೋಡಿ.

-ಅಲ್ವೋ ಮಹಾರಾಯ ಆ ಮರ ನಿನ್ನನ್ನು ತಬ್ಬಿಕೊಂಡಿಲ್ಲ. ನೀನೇ ಅದನ್ನು ತಬ್ಬಿ ಕೊಂಡಿದ್ದೀಯಾ.ನೋಡು ಹೀಗೆ ಮಾಡು, ಅದು ನಿನ್ನನ್ನು ಬಿಟ್ ಬಿಡುತ್ತೆ, ಅಂತಾ ಹೇಳುತ್ತಾ ತನ್ನ ಎರಡೂ ಕೈಗಳನ್ನು ಎರಡೂ ಪಕ್ಕಕ್ಕೆ ಚಾಚುತ್ತಾನೆ. ಮರ ತಬ್ಬಿದ್ದವನೂ ಹಾಗೇ ಮಾಡ್ತಾನೆ.

- ನೋಡು ಈಗ ಮರ ನಿನ್ನನ್ನು ಬಿಟ್ಟು ಬಿಡ್ತು.

- ಹೌದಲ್ವಾ ನಾನು ಎಷ್ಟು ಹೊತ್ನಿಂದ ಹೀಗೇ ನಿಂತಿದ್ದೇ ಗೊತ್ತಾ? ನೀವು ಬರದೇ ಹೋಗಿದ್ರೆ ಈ ರಾತ್ರಿಯೆಲ್ಲಾ ಇಲ್ಲೇ ಕಳೀ ಬೇಕಾಗಿತ್ತು

ಅಜ್ಞಾನದಿಂದ ಕೂಡಿದರೆ ರಾತ್ರಿಯೇನೂ ಇಡೀ ಜೀವನವನ್ನೇ ಕಳೆಯಬೇಕಿತ್ತು, ಅಂದುಕೊಂಡು ದಾರಿಹೋಕ ಮುಂದೆ ಸಾಗಿದ.

ಈ ತರಹ ಜನ ನಿಮ್ಗೆ ಸಿಕ್ಕಿದ್ದಾರಾ? ಸಿಕ್ಕಿರದೇ ಇರಬಹುದು. ಆದರೆ ತುಂಬಾ ಜನರು ಎದುರಿಸುತ್ತಿರುವ ಸಮಸ್ಯೆಗಳು ಇಂತಹವೇ ಅಂದ್ರೆ ಆಶ್ಚರ್ಯವಾಗಬಹುದು. ತನ್ನದಲ್ಲದ ಅನೇಕ ಸಮಸ್ಯೆಗಳನ್ನು ತಲೆಮೇಲೆ ಹೊತ್ಕೊಂಡು ಒದ್ದಾಡ್ತಾ ಇರ್ತಾರೆ. ಅದರ ಪರಿಹಾರವೂ ಗೊತ್ತಿರುವುದಿಲ್ಲ. ಅಲ್ಲದೇ ಮುಖ್ಯವಾಗಿ ಅದು ಅವರ ಸಮಸ್ಯೆಯಲ್ಲ.ಆದರೂ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ನೀವು ಖಂಡಿತಾ ನೋಡಿರುವಿರಲ್ಲವೇ?

ಯಾವ ಸಮಸ್ಯೆಗಳೂ ಅವುಗಳೇ ತಾನಾಗಿಯೇ ಬಂದು ನಮ್ಮನ್ನು ಅಪ್ಪಿಕೊಳ್ಳುವುದಿಲ್ಲ. ಕೆಲವು ಸ್ವಯಂ ಕೃತಾಪರಾಧಗಳು.ಅವುಗಳನ್ನು ನಾವು ಬಿಡಬೇಕಷ್ಟೆ. ಜೀವನ ಹಗುರ ಮಾಡಿಕೊಳ್ಳುವುದು ಬಿಡುವುದು ನಮ್ಮ ಕೈಲೇ ಇದೆ.

ಯೋಚಿಸಲೊ೦ದಿಷ್ಟು-೫

೧. ಎರಡು ಆಪ್ತ ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ.

೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ. ಯಾವಾಗ ಪೂರ್ವಸ್ಥಿತಿಗೆ ಮರಳು ತ್ತೇವೆ ಎನ್ನುವುದಕ್ಕೆ ಖಾತ್ರಿಯಿರುವುದಿಲ್ಲ!

೩. ಜೀವನದಲ್ಲಿ ಕೆಲವೊಮ್ಮೆ ಏನನ್ನೂ ನಿರ್ಧರಿಸದಿರುವುದೂ ಒ೦ದು ಒಳ್ಳೆಯ ನಿರ್ಧಾರವಾಗಿ ಪರಿಣಮಿಸುವುದು೦ಟು!ಆದರೆ ಒಮ್ಮೊಮ್ಮೆ ಅದು ದುಬಾರಿಯಾಗಿ ಪರಿಣಮಿಸಬಹುದು!

೪. ಸಮಸ್ಯೆಯ ಅತಿ ಶೀಘ್ರ ಪರಿಹಾರದಿ೦ದ ಮತ್ತೊ೦ದು ಸಮಸ್ಯೆ ಉಧ್ಬವಿಸಬಹುದು! ನಿರ್ಧಾರವನ್ನು ಯೋಚಿಸಿ ತೆಗೆದು ಕೊಳ್ಳುವುದೇ ಒಳಿತು.

೫.ಜೀವನದಲ್ಲಿ ಎಷ್ಟೇ ಬುಧ್ಧಿವ೦ತರಾದರೂ,ಅವರು ತೆಗೆದುಕೊಳ್ಳುವ ನಿರ್ಧಾರದಿ೦ದ,ಒಮ್ಮೊಮ್ಮೆ ಅವರೇ ಬೇಸ್ತು ಬೀಳು ತ್ತಾರೆ!

೬.ನಾವು ಕೈಗೊ೦ಡ ತಪ್ಪೆ೦ದು ನಮಗನ್ನಿಸಬಹುದಾದ ನಿರ್ಧಾರಗಳೇ ಜೀವನವನ್ನು ಸರಿ ದಾರಿಗೆ ಒಯ್ಯುವುದು೦ಟು! ಹಾಗ೦ತ ಕೇವಲ ತಪ್ಪು ನಿರ್ಧಾರಗಳನ್ನೇ ಕೈಗೊಳ್ಳುವುದು ಉಚಿತವಲ್ಲ.ತಪ್ಪು ನಿರ್ಧಾರಗಳು ಜೀವನದ ಸಮಸ್ಯೆಗಳ ಬಗ್ಗೆ ಮತ್ತೊಮ್ಮೆ ಸರಿಯಾದ ನಿರ್ಧಾರಗಳನ್ನು ತಳೆಯುವಲ್ಲಿ ನಮಗೆ ಸಹಕಾರಿಯಾಗುತ್ತವೆ ಎ೦ದಷ್ಟೇ.

೭.ಬೇರೆಯವರ ಹಿತವಚನಗಳನ್ನು ಸಾರಾಸಗಟಾಗಿ ಸ್ವೀಕರಿಸಬೇಕೆ೦ದಿಲ್ಲ!ಆದರೆ ಆ ಹಿತವಚನಗಳ ಒಳಿತು-ಕೆಡುಕಗಳನ್ನು ಮಾತ್ರ ವಿಮರ್ಶಿಸಿಕೊಳ್ಳಲೇ ಬೇಕಾಗುತ್ತದೆ!

೮. ಸಮಯದೊ೦ದಿಗೆ ನಾವು ಘೋಷಿಸಿ, ನಡೆಸಬಹುದಾದ ಸಮರವು ಮಾತ್ರವೇ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ಹೆಚ್ಚೆಚ್ಚು ಕ್ರಿಯಾಶೀಲರಾಗಿ ಕ೦ಗೊಳಿಸಲು ಪ್ರೇರೇಪಕವಾಗಬಲ್ಲುದು!

೯. ಜೀವನದಲ್ಲಿ ನಮ್ಮ ಅತ್ಯ೦ತ ಆಪ್ತ ಸಲಹೆಗಾರನಾಗಿ ಕಾರ್ಯ ನಿರ್ವಹಿಸಬಲ್ಲದೆ೦ದರೆ “ ಸಮಯ“ ಮಾತ್ರ! ಸಮಯ ಎಲ್ಲವನ್ನೂ ಕಲಿಸುತ್ತದೆ.

೧೦. ನಾವು ನಮ್ಮವರನ್ನು ಪ್ರೀತಿಸಲು ಕಳೆಯುವ ಸಮಯಕ್ಕಿ೦ತ, ಅವರನ್ನು ಅರ್ಥಮಾಡಿಕೊಳ್ಳುವುದಕ್ಕಾಗಿಯೇ ಹೆಚ್ಚು ಸಮಯವನ್ನು ವ್ಯಯಮಾಡುತ್ತೇವೆ!ಏಕೆ೦ದರೆ ಅವರನ್ನು ಪ್ರೀತಿಸುವ ಕಷ್ಟಕ್ಕಿ೦ತ ಅರ್ಥಮಾಡಿಕೊಳ್ಳುವುದೇ ಹೆಚ್ಚು ಕಷ್ಟವಾದುದು!

೧೧. ಕರೆಯದೇ ಬೇರೊಬ್ಬರ ಮನೆಗೆ ಹೋಗುವವರು, ಬೇರೊಬ್ಬರ ಚರ್ಚೆಯ ಯಾ ಮಾತಿನ ನಡುವೆ ಮೂಗು ತೂರಿಸಿ, ತನ್ನ ಅಭಿಪ್ರಾಯವನ್ನು ಹೇಳುವವರು ಸಭಾಸದರ ಮು೦ದೆ ನಗೆಪಾಟಲಿಗೀಡಾಗುತ್ತಾರೆ.

೧೨. ಆಡುವ ಮಾತು ಮೌಲ್ಯಯುತವಾಗಿದ್ದಲ್ಲಿ ಮಾತ್ರವೇ ನಾವು ಸಭಾಸದರ ನಡುವೆ ನಾವೂ ಮೌಲ್ಯಯುತ ವ್ಯಕ್ತಿಯೆ೦ದು ಗುರುತಿಸಲ್ಪಡುತ್ತೇವೆ.

೧೩. ಧರ್ಮವೇ ಜೀವನವಲ್ಲ! ಜೀವನದಲ್ಲಿ ಧರ್ಮವನ್ನು ಅಳವಡಿಸಿಕೊಳ್ಳಬೇಕು.

೧೪. ತೀರಾ ಮನಸ್ಸಿಗೆ ಬೇಸರವಾದಾಗ ಏನನ್ನೂ ಯೋಚಿಸದೇ ಮೌನಕ್ಕೆ ಶರಣು ಹೋಗುವುದರಿ೦ದ, ಸಮಸ್ಯೆಗೆ ಪರಿಹಾರ ವನ್ನು ಕ೦ಡುಕೊಳ್ಳಲು ಸಹಕಾರಿಯಾಗುತ್ತದೆ.

೧೫. ಪ್ರತಿಯೊಬ್ಬರೂ ಗುರುತರವಾದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕಾಗುತ್ತದೆ. ಅದರಿ೦ದ ನುಣುಚಿಕೊ೦ಡರೆ ಅದೇ ಪಲಾಯನವಾದ!

ಅವಧೂತ-1

ಈಗತಾನೇ ನನಗೊಂದು ದು:ಖದ ಸುದ್ಧಿ ಬಂತು. ಸಕ್ಕರಾಯ ಪಟ್ಟಣದ ಅವಧೂತರಾದ ಪೂಜ್ಯ ವೆಂಕಟಾಚಲಯ್ಯನವರು ಇನ್ನಿಲ್ಲ ವೆಂಬ ಸುದ್ಧಿಯನ್ನು ಮಿತ್ರ ಮಂಜು ಮುಟ್ಟಿಸಿದ್ದಾರೆ.ವೇದಸುಧೆಯ ಅಭಿಮಾನಿಗಳಿಗೂ ಅವಧೂತರ ಶಿಷ್ಯರಿಗೂ ದು:ಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಅವನಲ್ಲಿ ವೇದಸುಧೆಯು ಪ್ರಾರ್ಥಿಸುತ್ತದೆ.
ಮೊನ್ನೆ ರಾತ್ರಿ ನನಗೊಂದು ಕನಸು. ಹೊಳೇನರಸೀಪುರದ ಅಧ್ಯಾತ್ಮಪ್ರಕಾಶ ಕಾರ್ಯಾಲಯದಲ್ಲಿ ಐವತ್ತಕ್ಕೂ ಹೆಚ್ಚು ವರ್ಷಗಳು ಸೇವೆ ಸಲ್ಲಿಸಿದ ಪಂಡಿತ ಶ್ರೀ ಲಕ್ಷ್ಮೀನರಸಿಂಹಮೂರ್ತಿಗಳು ನಮ್ಮನ್ನಗಲಿ ೩-೪ ವರ್ಷಗಳಾಗಿರಬಹುದು. ಅವರೊಡನೆ ಸಕ್ಕರಾಯಪಟ್ಟಣದ ಪೂಜ್ಯ ಅವಧೂತರನ್ನು ಕಂಡೆ. ಬೆಳಿಗ್ಗೆ ಎದ್ದವನೇ ಪತ್ನಿಗೆ ಕನಸನ್ನು ಹೇಳಿದ್ದೆ. ನಾಳಿದ್ದು ಸೋಮವಾರ ಅವಧೂತರನ್ನು ನೋಡಬೇಕೆಂದುಕೊಂಡಿದ್ದೆ.ಇನ್ನೆಲ್ಲಿ ನೋಡಲಿ? ಕನಸಲ್ಲಂತೂ ಇಬ್ಬರು ಪೂಜ್ಯರೂ ಕೊಟ್ಟ ದರ್ಷನ ಜೀವನದಲ್ಲಿ ಮರೆಯಲಾರೆ.

ಗಾಡಿಕಾರನ ರೂಢಿ




ಗಾಡಿಕಾರನ ರೂಢಿ




ಗೂಡಲಿರುವೀ ಕಣ್ಣ
ದೂರದೆಡೆ ಹರಿಬಿಟ್ಟು
ಆಡಿ ತುಂಬಿದೆ ಮನದಿ ರೂಪಗಳನ




ಬೇಡವೆಂದರು ಬಿಡದೆ
ಕಿವಿಗಳನು ತೆರೆದಿಟ್ಟು
ಜಾಡಿಸುತ ತುಂಬಿರುವೆ ಶಬ್ಧಗಳನ


ನಾಡನೆಲ್ಲವ ತಿರುಗಿ
ನಾಸಿಕದಿ ಆಘ್ರಾಣಿಸಿ
ಕಾಡಿ ತುರುಕಿದೆ ಒಳಗೆ ಕಂಪುಗಳನ


ಬೀಡಾಡಿ ತಿನ್ನುತ್ತ
ಮತ್ತಷ್ಟು ಒದರೆಂದು
ಜೋಡಿಸಿದೆ ಜಿಹ್ವೆಯೊಳು ರುಚಿಗ್ರಂಥಿಗಳನ


ಬೀಡುಬಿಡುತಲಿ ಸ್ಪರ್ಶ
ಸುಖ ನೀಡಿ ಪಡೆಯೆಂದು
ಮಾಡುಮಾಡಿದೆ ಚರ್ಮ ಪದರಗಳನ


ಗಾಡಿಯನು ನಮಗಿತ್ತು
ಸವಲತ್ತು ಕೊಟ್ಟುಣಿಸಿ
ಗಾಢಾಂಧಕಾರದಲಿ ಕೂಡಿ ನಮ್ಮನ್ನ

ಗಾಡಿಕಾರನೆ ನಿನ್ನ
ಅಡಿಯೆಲ್ಲಿ ಮುಡಿಯೆಲ್ಲಿ ?
ವಾಡಿಕೆಯು ಪೂಜಿಪುದು ಹಲರೂಪಗಳನ

’ನಿಮ್ಮೊಡನೆ ವಿ. ಆರ್. ಭಟ್’ ವಿಭಾಗದ ’ಚಿಂತನಶೀಲ ಕವನಗಳು’ ಸಂಕಲನದಿಂದ

Friday, July 30, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -11

ದೃಷ್ಟ್ವಾ ರೂಪೇ ವ್ಯಾಕರೋತ್ ಸತ್ಯಾನೃತೇ ಪ್ರಜಾಪತಿಃ|
ಅಶ್ರದ್ಧಾಮನೃತೇsದಧಾಚ್ಛ,ದ್ಧಾಂ ಸತ್ಯೇ ಪ್ರಜಾಪತಿಃ|| (ಯಜು.19.77)
[ಪ್ರಜಾಪತಿಃ] ಜೀವರೆಲ್ಲರ ಪಾಲಕನಾದ ಭಗವಂತನು [ರೂಪೇ ದೃಷ್ಟ್ವಾ] ಸತ್ಯಾಸತ್ಯಗಳ ರೂಪಗಳನ್ನು ನೋಡಿ [ಸತ್ಯಾನೃತೇ ವ್ಯಾಕರೋತ್] ಸತ್ಯವನ್ನೂ ಅಸತ್ಯವನ್ನೂ ಬೇರ್ಪಡಿಸಿದನು. [ಅನೃತೇ] ಅಸತ್ಯದಲ್ಲಿ [ಅಶ್ರದ್ಧಾಂ ಅದಧಾತ್] ಅಶ್ರದ್ಧೆಯನ್ನು ನೆಲೆಗೊಳಿಸಿದನು. [ಪ್ರಜಾಪತಿಃ] ಜೀವಮಾತ್ರರ ಸ್ವಾಮಿಯಾಧ ಭಗವಂತನು [ಸತ್ಯೇ] ಸತ್ಯದಲ್ಲಿ [ಶ್ರದ್ಧಾಂ ಅದಧಾತ್]ಶ್ರದ್ಧೆಯನ್ನು ನಿರೂಪಿಸಿದನು. ಸತ್ಯದಲ್ಲಿ ಶ್ರದ್ಧೆಯಿಡಬೇಕು.

Thursday, July 29, 2010

ಸ್ವಾರ್ಥ

ಸ್ವಾರ್ಥ
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು
ಅಪ್ಪ ಅಮ್ಮರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ
ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ
ನಗು ಬಂದೀತೆಂದು ಹಲ್ಲು ಮುರಿದಿತ್ತು
ಓಡಿ ಹೋದಾರೆಂದು ಕಾಲು ತುಂಡರಿಸಿತ್ತು.
ಬೇಡವೆಂದವರ ಕೈಯ ಕಡಿದಿತ್ತು
ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನು ಸೀಳಿ ಗಹಗಹಿಸಿ ನಕ್ಕಿತ್ತು
ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು

-ಕ.ವೆಂ.ನಾಗರಾಜ್

ನಾನೊ೦ದು ತುಳಸೀದಳವಾಗಲೇ..?

ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ,
ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,
ಎ೦ತು ಅರ್ಚಿಸಲಿ ನಿನ್ನ ನಾ
ನಿನ್ನ ಪೂಜಿಸುವ ತುಳಸೀದಳವಾಗಲೇ?



ತಾವರೆ ಹೂವಿನ ಸಾವಿರ ದಳಗಳ೦ತೆ
ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ
ಕಾಣದ ವೇದನೆಯೇ ವೇದಾ೦ತವಾದಾಗ
ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು
ಮನಸಿಗೊ೦ದು ಸಮಾಧಾನವಾದಾಗ
ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ
ಬಳಿಗೆ ಹೋದ೦ತೆ, ಕೆಚ್ಚಲಿಗೇ
ಬಾಯಿ ಹಾಕಿ ಹಾಲನ್ನು ಕುಡಿದ೦ತೆ.
ಧನ್ಯತಾ ಭಾವವು ಮನದಲ್ಲಿ ತು೦ಬಿ
ಸ೦ಗೀತದಿ, ಸರಸ-ಸಲ್ಲಾಪದಿ
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?



ಪುಷ್ಪದ ಜೊತೆಗೆ ನಾರಿನ೦ತೆ
ನಿನ್ನಿ೦ದ ನಾನಿ೦ದು ಪರಿಪೂರ್ಣನಾದೆ,
ಎನಿತು ಧ್ಯಾನಿಸಲಿ ನಿನ್ನ?
ಭಾವನೆಗಳ ಮಹಾಪೂರದಿ೦ದ
ಮನದಲ್ಲಿ ಹುಟ್ಟಿರುವ ಆ೦ದೋಲನಕ್ಕೆ,
ಎನಿತು ಸ೦ತೈಸಲಿ ಅದನ್ನು
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?
----------------------------
ರಾಘವೇಂದ್ರರ ಕವನವನ್ನು ನೋಡಿದಮೇಲೆ ನನ್ನದೊಂದು ಕವನ ನೆನಪಾಯ್ತು. ಭಾವವು ಹೆಚ್ಚುಕಮ್ಮಿ ಅದರಂತೆಯೇ ಇದೆಯೆಂದು ಅದರೊಟ್ಟಿಗೇ ಪ್ರಕಟಿಸಿರುವೆ.
- ಹರಿಹರಪುರಶ್ರೀಧರ್


ನನ್ನ ಕವನ

ಗುಡಿಗೆತಂದ ಹೂಗಳೆಲ್ಲಾ
ಪೂಜೆಗೆಂದು ರಾಶಿ ಇರಲು
ಶಿವನ ಮುಡಿಯ ಸೇರ್ವ ಒಂದು ದಳವೆ ಧನ್ಯವು||

ನದಿಯ ನೀರು ಹರಿಯುತಿರಲು
ಕೋಟಿ ಜನರ ತೃಶೆಯ ತಣಿಸೆ
ಶಿವನ ಪಾದ ತೊಳೆವ ನೀರ ಹನಿಯೆ ಧನ್ಯವು|

ಎಲ್ಲ ಕವನ ರಾಶಿಯಲ್ಲಿ
ಎನ್ನ ಕವನದೊಂದು ಪದವು
ನಿಮ್ಮ ಮನಕೆ ಮುದವ ನೀಡೆ
ನಾನೆ ಧನ್ಯನು| ನನ್ನ ಕವನ ಧನ್ಯವು||


Wednesday, July 28, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -10
ಅಥರ್ವ ವೇದ ಭಕ್ತನ ಬಾಯಿಯಿಂದ ಪ್ರಭುವಿನ ಮುಂದೆ ಈ ಬೇಡಿಕೆಯನ್ನು ಮೂಡಿಸುತ್ತದೆ:
ಮೇಧಾಂ ಸಾಯಂ ಮೇಧಾಂ ಪ್ರಾತ್ರರ್ಮೇಧಾಂ ಮಧ್ಯಂದಿನಂ ಪರಿ|
ಮೇಧಾಂ ಸೂರ್ಯಸ್ಯ ರಶ್ಮಿಭರ್ವಚಸಾ ವೇಶಯಾಮಹೇ||
(ಅಥರ್ವ.6.108.5)
[ಸಾಯಂ] ಸಂಜೆ, [ಮೇಧಾಂ] ಬುದ್ಧಿಯನ್ನು [ಆವೇಶಯಾಮಹೇ] ಜೀವನಗಳಿಗೆ ಇಳಿಸಿಕೊಳ್ಳುತ್ತೇವೆ. [ಪ್ರಾತಃ] ಬೆಳಿಗ್ಗೆ [ಮೇಧಾಂ] ಬುದ್ಧಿಯನ್ನು ಜೀವನಗತಮಾಡಿಕೊಳ್ಳುತ್ತೇವೆ. [ಮಧ್ಯಂದಿನಂ ಪರಿ] ಮಧ್ಯಾಹ್ನದಲ್ಲಿಯೂ [ಮೇಧಾಂ] ಬುದ್ಧಿಶಕ್ತಿಯನ್ನೇ ತುಂಬಿಕೊಳ್ಳುತ್ತೇವೆ. [ಸೂರ್ಯಸ್ಯ ರಶ್ಮಿ ಭಿಃ] ಸೂರ್ಯನ ಕಿರಣಗಳೊಂದಿಗೆ [ವಚಸಾ] ವಿದ್ವಜ್ಜನರ ಉಪದೇಶ ವಚನಗಳಿಂದ [ಮೇಧಾಂ ಆವೇಶಯಾಮಹೇ] ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇವೆ. ಬೇರೆ ಮತ-ಮತಾಂತರಗಳ ಶಾಸ್ತ್ರಗಳಿಗೂ, ಭಗವದ್ದತ್ತವಾದ ವೈಜ್ಞಾನಿಕ ಶಾಸ್ತ್ರಗಳಾದ ವೇದಗಳಿಗೂ ಇರುವ ವ್ಯತ್ಯಾಸವಿದೇ. ಭಕ್ತನು ಭಗವಂತನಲ್ಲಿ ಸ ಮೇ ಶ್ರದ್ಧಾಂ ಚ ಮೇಧಾಂ ಚ ಜಾತವೇದಾ| ಪ್ರ ಯಚ್ಛತು|| (ಅಥರ್ವ.19.64.1) [ಸ ಜಾತವೇದಾ] ಆ ಸರ್ವವ್ಯಾಪಕ ಸರ್ವಜ್ಞನಾದ ಭಗವಂತನು [ಮೇ] ನನಗೆ [ಶ್ರದ್ಧಾಂ ಚ ಮೇಧಾಂ ಚ ಪ್ರಯಚ್ಛತು] ಶ್ರದ್ಧೆಯನ್ನೂ ಬುದ್ಧಿಯನ್ನೂ ಕರುಣಿಸಲಿ - ಎಂದೇ ಬಿನ್ನಹ ಮಾಡಿಸುತ್ತದೆ. ಬುದ್ಧಿಸಂಗತವಾದ ವೇದಗಳು ಎಷ್ಟು ಸೊಗಸಾಗಿ ಶ್ರದ್ಧೆಗೆ ಸಲ್ಲಬೇಕಾದ ಸ್ಥಳವನ್ನು ನಿರೂಪಿಸುತ್ತದೆ ನೋಡಿರಿ.

ಮತ್ತೇನೂ ಬೇಡ..

ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ
ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ
ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು
ಅತಿಯಾಗಬಾರದು ಯಾವುದೂ!
ಪ್ರೀತಿಯಿರಲಿ,ನ೦ಬಿಕೆಯಿರಲಿ,
ನಾನು-ನನ್ನವರೆನ್ನದೆ ಎಲ್ಲರೂ
ನನ್ನವರೆ೦ಬ ವಿಶ್ವಾಸವಿರಲಿ
ಯಾರನ್ನೂ ಹೊತ್ತುಕೊಳ್ಳಲೂಬಾರದು
ಇಳಿಸಲೂ ಬಾರದು!
ಎಲ್ಲರೊಳೂ ಒ೦ದಾಗಿ ಸ್ವ೦ತಿಕೆಯ ಮೆರೆಯಬೇಕು,
ಬದುಕಿನ ಬ೦ಡಿಯ ನೊಗವ ಸಮನಾಗಿ ಎಳೆದು,
ಪರಸ್ಪರ ವಿಶ್ವಾಸದಲಿ ಒಟ್ಟಿಗೇ
ಉ೦ಡೆದ್ದು ಕೈತೊಳೆಯಬೇಕು!
ಸಮಪಾಲು-ಸಮಬಾಳು
ಹ೦ಚಿ ತಿನ್ನುವ ಸೌಭಾಗ್ಯ,
ಮುಖದಲೊ೦ದು ಸ೦ತಸದ ನಗು
ಬಾಯ್ತು೦ಬಾ ಮಾತು,
ತು೦ಬಿದ ಹೃದಯದ ಹಾರೈಕೆ
ಮತ್ತೇನು ಬೇಕು ಸ೦ತಸದ ನೆಲೆಗೆ,
ಬದುಕ ಕಟ್ಟಿಕೊಳ್ಳುವುದು ನಾವು
ನಮ್ಮ ಬೇಡಿಕೆಯ ಅರಿವು ನಮಗಿರಬೇಕು
ಮತ್ತೇನೂ ಬೇಡ,ಅಷ್ಟಿದ್ದರೆ ಸಾಕು!

Monday, July 26, 2010

ಏನಂತೆ? ? . . .! !

ಏನಂತೆ? ? . . .! !

ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ!
ಗೆಲುವಿನ ದಾರಿಯದು ಕಂಡಿತಂತೆ!!

ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!

ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!

ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!

ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!

ಏನಂತೆ? ನಿಂದಿಸಿದರೇನಂತೆ?
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!

ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!

ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!

? ? ! !

ಯಾರು ?


ಚಿತ್ರ ಋಣ: ಅಂತರ್ಜಾಲ
ಯಾರು ?

ಸೌರಮಂಡಲದಲ್ಲಿ ಇರುವೆಲ್ಲ ಕಾಯಗಳ
ಗೌರವದಿ ಹಿಡಿದಿಟ್ಟು ನಡೆಸುವುದು ಯಾರು ?
ಪೌರುಷದಿ ಕುಂಟ ಕುರುಡಾದಿ ಹಲವರ ಸೃಜಿಸಿ
ರೌರವದ ನರಕವನು ಉಣಿಸುವರು ಯಾರು ?

ಬುದ್ಧಿಮಾಂದ್ಯರ ತಂದು ಬುದ್ಧಿವಂತರನಡುವೆ
ಇದ್ದುಬಿಡಿ ನೀವೆಂತ ಹುಟ್ಟಿಸುವರಾರು ?
ಎದ್ದೇಳಲಾಗದಾ ಪೋಲಿಯೋ ಹಬ್ಬಿಸುತ
ಒದ್ದಾಟ ಮೂಡಿಸುವ ಆ ಅದುವೆ ಯಾರು ?

ದೇಹದೊಳಗೊಂದೇನೋ ಕಾಣದುದನಿಳಿಬಿಟ್ಟು
ದಾಹ ತಣಿಸಿಕೊ ಎಂದು ಕಳಿಸಿದವರಾರು ?
'ಆಹಾ ಇದು ಏನು ಮಹಾ' ಹಾರಾಟ ಜೋರಾಗೆ
ವಾಹ ವಾ ಬಾ ಎಂದು ಕಿತ್ತವರು ಯಾರು ?

ಅಂಚಿರದ ಆಗಸವ ಕಟ್ಟಿನಿಲ್ಲಿಸುತಲ್ಲಿ
ಕಂಚು-ತಾಮ್ರಗಳನ್ನು ಕೊಟ್ಟವರು ಯಾರು?
ಮಂಚ ಮಾನಿನಿ ಮದ್ಯ ಮಾಂಸಾದಿಗಳ ತುಂಬಿ
ಸಂಚಿನಲಿ ಸಿಲುಕಿಸುತ ಬಂಧಿಸುವರಾರು?

ಬಿರುಗಾಳಿ ನೆರೆಗಳನು ಥರಥರದಿ ತಂದಿಡುತ
ಒರೆಹಚ್ಚಿ ಓರೆಯಲಿ ನೋಡುವುದದಾರು?
ತೆರೆಯೆಳೆದು ಹಲವಕ್ಕೆ ಮರುಮಾತಲೆಕ್ಕಿಸದೆ
ಅರಿವಿಡದೆ ಕರೆದೊಯ್ವ ಅಗೋಚರವಾರು?

ವೈದ್ಯರನು ಕಂಡು ನಸುನಕ್ಕು ತಾ ಮುಸುಕಿನಲಿ
ವೇದ್ಯವಾಗದ ಅವಧಿ ನೀಡುವವರಾರು?
ವಾದ್ಯಮೇಳಗಳಲ್ಲಿ ಖಾದ್ಯ ತೈಲಗಳಲ್ಲಿ
ಬಾಧ್ಯಸ್ಥವಾಗಿರುವ ಅಣುರೂಪವಾರು?

ಬಾಂಬು ಗರ್ನಾಲು ತೋಪು ತಪರಾಕಿಗಳ
ಕಾಂಬಕೈಯಲೆ ಕೊಟ್ಟು ಆಡಿಸುವರಾರು ?
ಸಾಂಬ ನಿನ್ನಯ ರೂಪ ಕಾಣುವೆನು ಕಣಕಣದಿ
ಮಾಂಬರದಿ ಕುಳಿತ ನೀನಲ್ಲದಿನ್ಯಾರು?


--ನಿಮ್ಮೊಡನೆ ವಿ.ಆರ್.ಭಟ್ ಮಾಲಿಕೆಯ ’ಹೀಗೊಂದು ಪ್ರಯತ್ನ’ ಸಂಕಲನದಿಂದ



Sunday, July 25, 2010

ನಮ್ಮ ಆಚರಣೆಗಳು-2


ಕೃಪೆ: ಕನ್ನಡ ಆಡಿಯೋ ಡಾಟ್ಕಾಮ್

ವೇದೋಕ್ತ ಜೀವನ ಪಥ

ಜೀವನ ಬುನಾದಿ -9
ವೈಜ್ಞಾನಿಕ ಪರಿಪಾಟಿಯ ಪ್ರಬಲ ಪೋಷಕಗಳಾದ ವೇದಗಳು ಅಂಧವಿಶ್ವಾಸಕ್ಕೆ, ಕಣ್ಣುಮುಚ್ಚಿ ನಡೆಯುವ ಅಂಧಪರಂಪರೆಗೆ ಘೋರವಿರೋಧಿಗಳಾಗಿವೆ. ಶ್ರದ್ಧೆಯ ಶತ್ರು ವೇದಗಳಲ್ಲ. ವೇದಾನುಯಾಯಿಗಳ ಹೃದಯಾಂತರಾಳದಿಂದ ವೇದಗಳು ಈ ಪ್ರಾರ್ಥನೆಯನ್ನು ಹೊರಡಿಸುತ್ತವೆ:
ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯಂದಿನಂ ಪರಿ|
ಶ್ರದ್ಧಾಂ ಸೂರ್ಯಸ್ಯ ನಿಮೃಚಿ ಶ್ರದ್ಧೇ ಶ್ರದ್ಧಾಪಯೇಹ ನಃ||
(ಋಕ್.10.151.5)
[ಪ್ರಾತಃ] ಬೆಳಗಿನ ಹೊತ್ತು {ಶ್ರದ್ಧಾಂ ಹವಾಮಹೇ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಮಧ್ಯಂದಿನಂ ಪರಿ] ನಡುಹಗಲಿನಲ್ಲಿಯೂ [ಶ್ರದ್ಧಾಂ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಸೂರ್ಯಸ್ಯ ನಿಮೃಚಿ] ಸೂರ್ಯನ ಅಸ್ತಕಾಲದಲ್ಲಿಯೂ [ಶ್ರದ್ಧಾಂ] ಶ್ರದ್ದೆಯನ್ನೇ ಆವಾಹನೆ ಮಾಡುತ್ತೇವೆ. [ಶ್ರದ್ಧೇ] ಓ ಶ್ರದ್ಧೇ! [ಇಹ] ಈ ಜಗತ್ತಿನಲ್ಲಿ [ನ ಶ್ರದ್ಧಾಪಯ] ನಮ್ಮನ್ನು ಶ್ರದ್ಧಾನ್ವಿತರನ್ನಾಗಿ ಮಾಡು. ಶ್ರದ್ಧೆ ಬೇಕು. ಆದರೆ ವೈಜ್ಞಾನಿಕವಾದ ದೃಷ್ಟಿಯನ್ನೇ ಬೆಳೆಸಿಕೊಳ್ಳಬೇಕೆಂದು ಬೋಧಿಸುವ ವೇದಗಳು, ಬುದ್ಧಿಯ, ಮೇಧಾಶಕ್ತಿಯ ಬೆಂಬಲವಿಲ್ಲದಿದ್ದರೆ ಆ ಶ್ರದ್ಧೆ ಅಂಧವಿಶ್ವಾಸವಾಗಿ ಮಾರ್ಪಡುವುದರಲ್ಲಿ ವಿಳಂಬವಾಗದೆಂಬುದನ್ನು ಬಲ್ಲವು.

ಚುಚ್ಚಾಣಿ

ಚುಚ್ಚಾಣಿ

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ|| ||ಪ||

ಚಿನ್ನದ ಚುಚ್ಚಾಣಿ ನವರಸದ ಚುಚ್ಚಾಣಿ
ಎಲ್ಲರ ಮೆಚ್ಚಿನ ಕಟ್ಟಾಣಿಯಣ್ಣಾ ||ಚುಚ್ಚಾಣಿ||

ಆಸೆ ಪುಗ್ಗೆಯೇರಿ ಸಂಭ್ರಮದಿ ತೇಲಿದ್ದೆ
ಪುಗ್ಗೆ ಡಬ್ಬೆಂದು ಧೊಪ್ಪನೆ ಕೆಳಬಿದ್ದೆ|| ||ಚುಚ್ಚಾಣಿ||

ಬಂಧು ಬಳಗದೆ ಕೂಡಿ ನಲಿಯುತಲಿದ್ದೆ
ಚುಚ್ಚು ಮಾತಿಂದಾಗಿ ಒಂಟಿ ಹೊರಬಿದ್ದೆ||||ಚುಚ್ಚಾಣಿ||

ದೇವಾಂತಃಕರಣದ ಫಲ ಕೈಲಿ ಹಿಡಿದಿದ್ದೆ
ಚುಚ್ಚು ಕಾಲ್ತೊಡರಿ ಎಡವಿ ಬಿದ್ದಿದ್ದೆ|| ||ಚುಚ್ಚಾಣಿ||

ಚುಚ್ಚಾಣಿ ಚೂಪಿನದಣ್ಣಾ
ಸಿಕ್ಕಸಿಕ್ಕಲಿ ಚುಚ್ಚಿ ನೋಯಿಸುವುದಣ್ಣಾ
ಚುಚ್ಚಾಣಿ ಚೂಪಿನದಣ್ಣಾ||


(ಸ್ಪೂರ್ತಿ: ಪುರಂದರದಾಸರ 'ದುಗ್ಗಾಣಿ ಬಲು ಕೆಟ್ಟದಣ್ಣಾ"..)

Saturday, July 24, 2010

|| ಗುರು ಬುದ್ಧಿ ವಿಶೇಷತಃ ||



|| ಗುರು ಬುದ್ಧಿ ವಿಶೇಷತಃ ||

ಜಗತ್ತಿನಲ್ಲಿ ಎಲ್ಲರ ಬುದ್ಧಿಗಿಂತ ಗುರುಬುದ್ಧಿ ವಿಶೇಷ ಎಂದು ಪ್ರಮಾಣೀಕೃತವಾಗಿದೆ! ಇದು ಇಂದಿನ ನಮ್ಮ ವಿಜ್ಞಾನಕ್ಕೂ ಸವಾಲೊಡ್ಡಿ ಜಯಿಸಬಹುದಾದ ವಿಷಯ! ಸದ್ಗುರುವೊಬ್ಬ ಕೇವಲ ತನ್ನ ತಪೋಬಲದಿಂದ ಕುಳಿತಲ್ಲೇ ಎಲ್ಲವನ್ನೂ ಗಳಿಸಬಲ್ಲ. ಎಲ್ಲಾ ಜ್ಞಾನ, ಭಾಷೆ, ಪರಿಕರ ಏನು ಬೇಕು ಹೇಳಿ ಅದನ್ನೆಲ್ಲವನ್ನೂ ಪಡೆಯಬಲ್ಲ ಯೋಗಸಿದ್ಧಿ ಗುರುವಿಗೆ ಸಾಧ್ಯ. ಹಾಗಂತ ಎಲ್ಲಾ ಗುರುವಿಗೂ ಅದು ಧಕ್ಕಲೇ ಬೇಕೆಂತಿಲ್ಲ ಅಥವಾ ಧಕ್ಕಿದವರೆಲ್ಲ ಅದನ್ನು ಪ್ರಯೋಗಿಸಿ ತೋರಿಸಬೇಕೆಂದಿಲ್ಲ.

ತನಗಾಗಿ ಪರಿತಪಿಸದ, ತನ್ನ ಹೊಟ್ಟೆಬಟ್ಟೆಯ ಹಾಗೂ ತನ್ನ ಸ್ವಾಸ್ಥ್ಯದ ಚಿಂತೆಯನ್ನು ಮರೆತು ಕೇವಲ ಆತ್ಮೋನ್ನತಿ ಬಯಸಿ, ಮೋಕ್ಷ ಬಯಸಿ ತಪಸ್ಸನ್ನಾಚರಿಸುವ ಯತಿಗೆ ಗುರುವೆನ್ನುತ್ತಾರೆ. ಸದ್ಗುರುವಾದವನು ’ನಾನು’ ಎಂಬ ಅನಿಸಿಕೆ ತೊರೆದು ’ನಾವು’ ಎಂಬ ಹಂತವನ್ನು ತಲ್ಪಿ ತನ್ನ ಆತ್ಮೋದ್ಧಾರದ ಜೊತೆಗೆ ನಂಬಿಬಂದ ಶಿಷ್ಯಗಣದ ಉದ್ಧಾರವನ್ನು ಬಯಸುತ್ತಾನೆ. ಇಂತಹ ಸಾಧನೆಯ ಮಾರ್ಗ ಬಲು ದುರ್ಗಮ, ಬಹಳ ಕಠಿಣ. ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಈ ದಿನಗಳಲ್ಲಿ ಸಿಗುವ ಕಣ್ಣಿಗೆ ರಾಚುವ ಹಲವು ಐಹಿಕ ಸುಖೋಪಭೋಗಗಳನ್ನು ತ್ಯಜಿಸಿ ಏಕನಿಷ್ಠೆಯಿಂದ ಇಂದ್ರಿಯನಿಗ್ರಹಮಾಡಿ ಸಾಧನೆಮಾಡುವುದು ವಜ್ರಾದಪಿ ಕಠೋರ! ಹಿಂದಿನ ಕಾಲದಲ್ಲಿ ಸರಿಸುಮಾರು ೧೯ ನೇ ಶತಮಾನಕ್ಕೂ ಮುಂಚೆ ಕೊನೇಪಕ್ಷ ಸರಿಯಾದ ಶಿಷ್ಯಂದಿರಾದರೂ ಸಿಗುತ್ತಿದ್ದರು, ಈಗ ನಿಜವಾದ ಸನ್ಯಾಸಿಗಳಿಗೆ ಶಿಷ್ಯರು ಸಿಗುವುದು ದುರ್ಲಭ, ಅದೇ ಢಾಂಬಿಕರಿಗೆ ಬಹಳಜನ ಸಿಗುತ್ತಾರೆ!

ಗುರುಪೂರ್ಣಿಮೆ ಮತ್ತು ಚಾತುರ್ಮಾಸ್ಯ ವೃತ

ಆಷಾಢ ಮಾಸದ ಹುಣ್ಣಿಮೆಯನ್ನು ಗುರುಪೂರ್ಣಿಮೆ ಎಂದು ಪ್ರಾಜ್ಞರು ಗುರುತಿಸಿದ್ದಾರೆ. ಈ ಹುಣ್ಣಿಮೆಯ ದಿನ ಗುರುವನ್ನು ನೆನೆಯುವುದರಿಂದ, ದರ್ಶಿಸುವುದರಿಂದ, ತೀರ್ಥ-ಮಂತ್ರಾಕ್ಷತೆಗಳನ್ನು ಪಡೆಯುವುದರಿಂದ ವಿಷಿಷ್ಟ ಅನುಭೂತಿ ಉಂಟಾಗುವುದು ಹಲವರ ಅನುಭವಕ್ಕೆ ನಿಲುಕಿದ ವಿಷಯ. ನಮಗೆ ವಿದ್ಯೆ ಕಲಿಸಿದ, ಬುದ್ಧಿ ಹೇಳಿದ, ತಿದ್ದಿಬರೆಸಿದ, ಗುದ್ದು ಕೊಟ್ಟು ಒಂದು ಮನುಷ್ಯರೂಪಕ್ಕೆ ತಂದ ಗುರುವಿಗಲ್ಲದೇ ನಮ್ಮೊಳಗಿನ ನಮ್ಮಾತ್ಮಕ್ಕೆ ಪರದ ತತ್ವವನ್ನು ಪರಿಚಯಿಸುವ, ಆ ಮೂಲಕ ಆತ್ಮಕ್ಕೆ ಉತ್ತಮ ಸಂಸ್ಕಾರ ಕೊಡುವ ಗುರುಗಳೆಲ್ಲರನ್ನೂ ನೆನಪುಮಾಡಿಕೊಂಡು ಅವರ ಪಾದಾರವಿಂದಗಳಿಗೆ ಶಿರಸಾ ವಂದಿಸುವ ದಿನವೇ ಗುರುಪೂರ್ಣಿಮೆ. ಗುರುವಿನ ಮೂಲವನ್ನು ಹುಡುಕಿದರೆ ಅದು ಪರೋಕ್ಷ ಆದಿನಾರಾಯಣ ಅಂದರೆ ಮಹಾವಿಷ್ಣುವನ್ನೇ ಪುನಃ ಸೇರುತ್ತದೆ. ಯಾವ ಪರಂಪರಾ ಶ್ಲೋಕವನ್ನೇ ತೆಗೆದುಕೊಂಡರೂ ಮೂಲದಲ್ಲಿ ಆ ಶ್ಲೋಕ ನಾರಾಯಣನ ಕುರಿತೇ ಪ್ರಾರಂಭವಾಗುತ್ತದೆ.

ಭಗವಂತ ತನ್ನ ಭಕ್ತರ ಒಳಿತಿಗಾಗಿ, ಅವನಾಡುವ ನಾಟಕದ ಪಾತ್ರಧಾರಿಗಳಿಗೆ ಪರೋಕ್ಷ ಸಹಕರಿಸಲಾಗಿ, ಹಾರಾಡುವ ಮತಿಗೆಟ್ಟ ಜನರ-ರಕ್ಕಸ ಸಂಸ್ಕೃತಿಯ ದಮನಕ್ಕಾಗಿ ಆಗಾಗ ಬೇರೆಬೇರೆ ರೂಪದಲ್ಲಿ ಅವತರಿಸುತ್ತಾನೆ ಎಂಬುದನ್ನು ಅವನೇ ಗೀತೆಯಲ್ಲಿ ಹೇಳಿದ್ದಾನಲ್ಲವೇ ? ಈ ಅವತಾರಗಳಲ್ಲಿ ಪೂರ್ಣಾವತಾರ, ಅಂಶಾವತಾರ, ಅಂಶಾಂಶಾವತಾರ ಎಂಬ ಕೆಲವು ಭೇದಗಳಿವೆ. ಉದಾಹರಣೆಗೆ ವರಾಹ, ನಾರಸಿಂಹ, ರಾಮ, ಕೃಷ್ಣ ಇವೆಲ್ಲ ಪೂರ್ಣಾವತಾಗಳಾದರೆ ತಿರುಪತಿ ಶ್ರೀನಿವಾಸ, ದತ್ತಾತ್ರೇಯ, ಅಯಪ್ಪ ಇವುಗಳೆಲ್ಲಾ ಅಂಶಾವತಾರಗಳು. ವ್ಯಾಸ, ಪರಾಶರ, ಶಂಕರ, ರಾಮಾನುಜ, ಮಧ್ವ ಈ ಥರದವೆಲ್ಲಾ ಅಂಶಾಂಶಾವತಾರಗಳೆಂದರೆ ತಪ್ಪೇನಿಲ್ಲ. ಹೀಗೇ ಹಲವು ಸ್ತರಗಳಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಗೋಚರಿಸುವ ಈ ಗುರುಪರಂಪರೆಗಳಲ್ಲಿ ಏರುತ್ತಾ ಏರುತ್ತಾ ಹಿಂದಕ್ಕೆ ಹೋದರೆ ಕಾಣುವುದು ಶ್ರೀಮನ್ನಾರಾಯಣ ಸ್ವರೂಪ! ನನಗೊಬ್ಬ ಗುರು, ಆ ಗುರುವಿಗೆ ಇನ್ನೊಬ್ಬ ಗುರು, ಅವರ ಗುರುವಿಗೆ ಮತ್ತೊಬ್ಬ ಗುರು ಹೀಗೇ ಸ್ತರಗಳು ಮೇಲೆ ಹೋಗುತ್ತವೆ. ಒಟ್ಟಿನಲ್ಲಿ ಇಡೀ ಗುರುಸಂಕುಲವನ್ನೇ ಧ್ಯಾನಾವಾಹನಾದಿ ಪೂಜೆ ನಡೆಸಿ ಒಮ್ಮೆ ಅವರ ಋಣ ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಈ ಗುರುಪೂಜೆಯನ್ನು ಆಯಾಯ ಧರ್ಮಗಳವರು ಅವರವರ ಧರ್ಮಾನುಸಾರ ನೆರವೇರಿಸಬಹುದು.

ಮಳೆಗಾಲದಲ್ಲಿ ಮುಂಗಾರಿನ ಮಳೆಯ ಸೇಚನಕ್ಕೆ ಭೂಮಿ ನೆನೆದಾಗ ಅಲ್ಲಿ ಹಲವು ಥರದ ಕ್ರಿಮಿಕೀಟಗಳು ಹುಟ್ಟಿಕೊಂಡು ಭೂಮಿಯ ಮೇಲ್ಪದರದಲ್ಲಿ ನೆಲೆಗೊಳ್ಳುತ್ತವೆ. ಕಪ್ಪೆಮರಿಗಳು, ಏಡಿಮರಿಗಳು, ಎರೆಹುಳುಗಳು, ಶತಪದಿ, ಸಹಸ್ರಪದಿ, ಚೇಳು, ಪಡಚೇಹುಳು, ಶಂಖದ ಹುಳು, ಬಸವನಹುಳು .....ಹೀಗೇ ಒಂದೆರಡಲ್ಲ ಅನೇಕ ಸಹಸ್ರಥರದ ಪ್ರಭೇದಗಳನ್ನು ಹೊಂದಿರುವ ಕೀಟಕುಟುಂಬಗಳ ಸಂತಾನವೃದ್ಧಿ ಈ ಕಾಲಘಟ್ಟದಲ್ಲಿ ಜಾಸ್ತಿ. ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ಬೋಧಿಸುವ-ಪ್ರತಿಪಾದಿಸುವ ಸನ್ಯಾಸಿಗಳು ಓಡಾಡಿದರೆ ತಾನು ಎಲ್ಲಿ ಅವುಗಳ ಜೀವಕ್ಕೆ ಕುತ್ತು ತರಬೇಕಾಗುತ್ತದೋ ಎಂಬ ಅನಿಸಿಕೆಯಿಂದ ಒಂದು ಸರಿಯಾದ ತಪೋಯೋಗ್ಯ ಜಾಗ ಹುಡುಕಿ ಅಲ್ಲಿ ನಾಲ್ಕು ಮಾಸಗಳು ಅಥವಾ ನಾಲ್ಕು ಪಕ್ಷಗಳ ಪರ್ಯಂತ ತಪಸ್ಸಿನಲ್ಲಿ ಮಗ್ನರಗುತ್ತಾರೆ. ಒಂದೇ ಕಡೆ ಅವರು ಹಾಗೆ ಮೊಕ್ಕಾಂ ಹೂಡಿರುವ ವೇಳೆ ಬೇರೆ ಬೇರೆ ಸ್ಥಳಗಳ ಶಿಷ್ಯರು ಗುರುವನ್ನು ಕಾಣಲೂ ಸಾಧ್ಯವಾಗುತ್ತದೆ. ಹೀಗಾಗಿ ವ್ಯಾಸಮಹರ್ಷಿಯನ್ನೂ ತಮ್ಮ ಗುರುಸಂಕುಲವನ್ನೂ ಅರ್ಘ್ಯ-ಪಾದ್ಯಾದಿ ಶೋಡಷೋಪಚಾರದಿಂದಲೂ ನೈವೇದ್ಯವೇ ಮೊದಲಾದ ವಿಶೇಷ ಉಪಚಾರಗಳಿಂದಲೂ ಅರ್ಚಿಸಿ, ಪೂಜಿಸಿ ತಾವು ಕೈಗೊಳ್ಳುವ ದೀರ್ಘ ತಪಸ್ಸಿಗೆ ಅನುಕೂಲವಿರುವಂತೆಯೂ ತಮ್ಮಿಂದ ಶಿಷ್ಯಗಣದ ಉದ್ಧಾರಕ್ಕೆ ಅನುಕೂಲವಾಗಲೆಂದೂ ಪ್ರಾರ್ಥಿಸುತ್ತಾರೆ. ಹೀಗೆ ಪೂಜಿಸಿದ ವೃತದ ಆದಿಭಾಗದಲ್ಲಿ ಆ ದಿನದ ಜಪತಪಗಳನ್ನು ಪೂರೈಸಿ ಹೊರಬಂದು ನೆರೆದ ಶಿಷ್ಯರಿಗೆ ಅಭಿಮಂತ್ರಿಸಿದ ಅಕ್ಷತೆಗಳನ್ನು ಎರಚುವುದು ಅಥವಾ ಕೊಡುವುದು ಸಂಪ್ರದಾಯ. ಹಾಗೆ ಗುರುವು ಕೊಡುವ ಆ ಮಂತ್ರಾಕ್ಷತೆ ಎಂದಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದ್ದಾಗಿರುತ್ತದೆ ಮತ್ತು ಅದಕ್ಕೆ ವ್ಯಾಸಮಂತ್ರಾಕ್ಷತೆ ಎಂದೇ ಕರೆಯುತ್ತಾರೆ. ಹೇಗೆ ದೊಡ್ಡ ಆಯಸ್ಕಾಂತದ ಪ್ರಭಾವ ಜಾಸ್ತಿ ಇರುತ್ತದೋ ಹಾಗೇ ಉಳಿದ ದಿನ ಸಣ್ಣ ಆಯಸ್ಕಾಂತವಾದರೆ ಗುರುಪೂರ್ಣಿಮೆಯ ದಿನ ಅತೀದೊಡ್ಡ ಆಯಸ್ಕಾಂತದ ಬಲ ಈ ಆಶೀರ್ವಾದಕ್ಕಿದೆ ಎಂಬುದು ಅನುಭವಿಕರ ಮಾತು.

ಈ ಸುಸಂದರ್ಭ ಒಂದು ಕಥೆ ಹೇಳುತ್ತೇನೆ ಕೇಳಿ- ಶ್ರೀ ಶಂಕರರು ತಿರುಗುತ್ತ ತಿರುಗುತ್ತ ಹಿಮಾಲಯದ ತಪ್ಪಲಿನ ಗುಹೆಯೊಂದರಲ್ಲಿ ತನಗೆ ಬೇಕಾದ ಆಧ್ಯಾತ್ಮಿಕ ಗುರುವನ್ನು ಕಾಣುತ್ತಾರೆ. ಹಾಗೆ ಕಂಡಿದ್ದು ಕೇವಲ ಯೋಗ ದೃಷ್ಟಿಯಿಂದಲೇ ಹೊರತು ನೇರವಾದ ದರ್ಶನ ಅವರಿಗಿನ್ನೂ ಆಗಿರುವುದಿಲ್ಲ. ಶಂಕರರು ಕಾಯುತ್ತಾ ಕಾಯುತ್ತಾ ಬಹಳ ಸಮಯವಾಗುತ್ತದೆ. ಆದರೆ ಗುಹೆಯಲ್ಲಿ ಇರುವ ಆ ಗುರುಗಳು ಸಮಾಧಿ ಸ್ಥಿತಿಯಲ್ಲಿದ್ದಾರೆ. ಅವರನ್ನು ಜಾಗ್ರತಸ್ಥಿತಿಗೆ ತಂದರೆ ಕೋಪಬರಲೂ ಬಹುದು ಅಥವಾ ಹಾಗೆ ತಪೋಭಂಗ ಮಾಡಿದ ಪಾಪ ಬರಬಹುದೆಂಬ ಅನಿಸಿಕೆಯಿಂದ ಕೇವಲ ಯೋಗ ಮಾರ್ಗದಿಂದಲೇ ಅವರ ಆತ್ಮವನ್ನು ಸಂಧಿಸಿ ತಾನು ಬಂದಿದ್ದೇನೆ ಎನ್ನುತ್ತಾರೆ. ಆಗ ಎಚ್ಚೆತ್ತ ಗುರುಗಳು ಕೇವಲ ತನ್ನ ಕಾಲು ಪಾದಗಳನ್ನು ಮಾತ್ರ ಹೊರಗೆ ಕಾಣಿಸಿ ಮಿಕ್ಕಿದ ಶರೀರಭಾಗದ ದರ್ಶನ ಕೊಡದಂತೇ ಇರುತ್ತಾರೆ. ಮತ್ತು ಕೇಳುತ್ತಾರೆ " ನೀನು ಬಂದೆ ಅಂದೆಯಲ್ಲ, ಯಾರು ನೀನು ? " " ನಾವು ಬಂದಿದ್ದೇವೆ " ಶಂಕರರು ಹೀಗೆ ಹೇಳುವವರೆಗೂ ಅವರು ಹಾಗೇ ಬರೇ ಪಾದಗಳನ್ನು ಮಾತ್ರ ತೋರಿಸಿದರಂತೆ. ಆ ಗುರುಗಳೇ ಗುರು ಗೋವಿಂದ ಭಗವತ್ಪಾದರು. ಆಗ ಶಂಕರರ ಬಾಯಿಂದ ಹುಟ್ಟಿದ್ದು ’ಗೋವಿಂದಾಷ್ಟಕಮ್’ ಅಷ್ಟಕ ಸ್ತೋತ್ರ! ಹೀಗೇ ಗುರುವನ್ನು ಕಾದು ನೋಡಬೇಕೆಂಬುದು ಪ್ರತೀತಿ.

ಇತ್ತೀಚಿನ ಇಂತಹ ಒಂದು ಗುರುವೆಂದರೆ ಬ್ರಹ್ಮೈಕ್ಯ ಶ್ರೀ ಶ್ರೀಧರ ಸ್ವಾಮಿಗಳು. ಕರ್ನಾಟಕದ ಗಡಿಭಾಗದಲ್ಲಿ ಗುಲಬರ್ಗಾದ ಲಾಡ್ ಚಿಂಚೋಳಿಯಲ್ಲಿ ಜನಿಸಿದ ದತ್ತಾತ್ರೇಯನ ಅವತಾರವಾದ ಶ್ರೀ ಭಗವಾನರು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಜನರನ್ನು ಉದ್ಧರಿಸಿದ್ದಾರೆ. ಯಾವುದೇ ಪವಾಡಗಳನ್ನು ಅವರೌ ಮಾಡುತ್ತಿರಲಿಲ್ಲ, ಬದಲಾಗಿ ಅವರ ಉಪಸ್ಥಿತಿಯಿದ್ದಲ್ಲಿ ಹಲವು ಪವಾಡಗಳು ನಡೆಯುತ್ತಿದ್ದವು. ಒಮ್ಮೆ ಹೀಗಾಯಿತು ಅತೀ ಬಡವನೊಬ್ಬ ಶ್ರೀಗಳಲ್ಲಿ ಬೇಡಿದ "ಸ್ವಾಮೀ ನಾನೊಬ್ಬ ಬಡವ, ನನ್ನಲ್ಲಿ ಕೊಡಲು ಏನೂ ಇಲ್ಲ, ತಾವು ಒಮ್ಮೆ ನಮ್ಮನೆಗೆ ಬಂದು ತಮ್ಮ ಪಾದಧೂಳಿಯಿಂದ ನಮ್ಮನ್ನು ಪುನೀತರನ್ನಾಗಿ ಮಾಡ್ಬೇಕು. " ತಮಾಷೆಗಾಗಿ ಗುರುಗಳು " ಆಯ್ತಪ್ಪಾ ನೀನು ಹೋಗಿ ಬಯಲಿನಲ್ಲಿರುವ ಧೂಳನ್ನು ತಂದು ನಿಮ್ಮನೆಯ ನೆಲದಮೇಲೆಲ್ಲಾ ಚೆಲ್ಲು, ನಾನು ನಡೆದು ಹೋದಾಗ ಅಲ್ಲಿ ನನ್ನ ಪಾದ ಸೋಕುವುದರಿಂದ ಅದು ನನ್ನ ಪಾದಧೂಳಿಯೇ ಆಯಿತಲ್ಲ ಇನ್ನೇನು ಆಗದೇ ? " ಎಂದರಂತೆ. ಶ್ರದ್ಧೆಯಿಂದ ಮರುಮಾತನಾಡದ ಆ ಶಿಷ್ಯ ಗುರುಗಳು ಹೇಳಿದ ಹಾಗೇ ಮಾಡಿದ್ದು ಗುರುಗಳನ್ನು ಕರೆದೊಯ್ಯಲು ಬಂದ. ಗುರುಗಳಿಗೆ ಬಹಳ ಕನಿಕರ ಮೂಡಿಬಿಟ್ಟಿತು. ತಕ್ಷಣಕ್ಕೆ ಗುರುಗಳು ಹೊರಟು ಆತನ ಮನೆಗೆ ಬಂದು ಆತನಿಗೆ ಹೇಳಿದಂತೇ ಮನೆಯ ತುಂಬೆಲ್ಲ ನಡೆದಾಡಿದರು. ಅವರು ಹೋದಲ್ಲೆಲ್ಲಾ ಬಂಗಾರದ ನಾಣ್ಯಗಳು ಕಾಣಿಸಿಕೊಂಡವು ! ಅವುಗಳನ್ನೆತ್ತಿ ಗುರುಗಳ ಪಾದಕ್ಕೆ ತುಲಸೀ ಸಮೇತ ಅರ್ಚಿಸಿದ ಆ ಭಕ್ತ. ಆತನ ನಿರ್ವಿಣ್ಣಭಾವ ನೋಡಿದ ಗುರುಗಳು " ಬದುಕು ಪೂರ್ತಿ ನಿನಗಿದು ಸಾಕು" ಎಂದು ಎಲ್ಲಾ ಬಂಗಾರದ ನಾಣ್ಯಗಳನ್ನೂ ಅವನ ಕೈಗೆ ಹಾಕಿ, ತಲೆಯಮೇಲೆ ಅಭಯ ಹಸ್ತವನ್ನಿಟ್ಟು ಹರಸಿದರು. ಅಂದಿನಿಂದ ಆತನಿಗೆ ಯಾವುದೇ ಬಡತನದ ಭವಣೆ ಕಾಡಲಿಲ್ಲ.

ಇದು ಕೇಳಲು ಕಥೆ ಎನಿಸಿದರೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಪುರದ ಶ್ರೀ ಶ್ರೀಧರಾಶ್ರಮದಲ್ಲಿ ಇದರ ದಿನಾಂಕ ಮತ್ತು ಭಕ್ತ ವ್ಯಕ್ತಿ ಯಾರಗಿದ್ದ ಎಂಬ ದಾಖಲೆ ಸಹಿತ ಸಿಗುತ್ತದೆ! ಇಂತಹ ಹಲವು ಸಾವಿರ ಘಟನೆಗಳು ಶ್ರೀಧರರ ಅವತಾರದಲ್ಲಿ ನಡೆದವು. ಅದಕ್ಕೇ ಅವರನ್ನು ಜನ ’ಭಗವಾನ್’ ಎಂದರು, ’ಅಘಟಿತ ಘಟನಾ ಅದ್ಬುತ ಶಕ್ತಿ’ ಎಂದರು. ಇಂತಹ ಗುರುವನ್ನು ಪಡೆಯಲು ಯೋಗ ಬೇಕು. ಇದು ಎಲ್ಲರಿಗೂ ಲಭ್ಯವಲ್ಲ. ಇಂದಿನ ನಮ್ಮ ಜಂಜಾಟಗಳಲ್ಲಿ ಸಿಲುಕಿಕೊಂಡು ನಮ್ಮ ಮೂಲಸ್ವರೂಪವನ್ನೇ ಮರೆತ ನಾವು ಚಕ್ರವ್ಯೂಹದ ಅಭಿಮನ್ಯುವಿನ ರೀತಿ ಆಗಿಬಿಟ್ಟಿದ್ದೇವೆ. ಹುಟ್ಟು-ಸಾವು ಎಂಬ ಈ ಜೀವನ ಚಕ್ರದಿಂದ ಹೊರಬರಲು ಅದಕ್ಕಿರುವ ಮಾರ್ಗವೊಂದೇ ಅದು ಗುರುವನ್ನು ಮೊರೆಹೋಗುವುದು! ಅವರ ದರ್ಶನ, ಪಾದಸ್ಪರ್ಶನದಿಂದ ಮಾತ್ರ, ಅವರ ಕೃಪೆಯಿಂದ ಮಾತ್ರ ಶೀಘ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ನಮ್ಮಲ್ಲಿನ ಗಾದೆ ಹೀಗಿದೆ -’ಹರ ಮುನಿದರೂ ಗುರು ಕಾಯುತ್ತಾನೆ’ ಎಂದು. ಮನೆಯಲ್ಲಿ ಚಿಕ್ಕವರಿರುವಾಗ ಅಪ್ಪ ಮುನಿಸಿಕೊಂಡರೆ ಅಮ್ಮನ ಸೆರಗಿನ ಹಿಂದೋ ಕಾಲಹಿಂದೋ ನಿಂತು ಅಮ್ಮನ ಮುಖೇನ ಅಪ್ಪನ ಸಿಟ್ಟನ್ನು ಶಮನಗೊಳಿಸುತ್ತಿದ್ದೆವು. ಅದೇ ರೀತಿ ಹರನಿಗೇ ಅಂದರೆ ದೇವರಿಗೇ ಕೋಪಬಂದು ನಿನ್ನನ್ನು ತರಿದುಬಿಡುತ್ತೇನೆ ಎಂತ ಬಂದರೂ ರಾಮನಿಗೆ ಹನುಮ ತೋರಿದಂತೆ ಕೇವಲ ದೇವರ ನಾಮಬಲದಿಂದ ದೇವರನ್ನೇ ಮಂತ್ರಮುಗ್ಧಗೊಳಿಸಿ ತನ್ಮೂಲಕ ನಮ್ಮನ್ನು ಕಾಪಾಡುವ, ಸನ್ಮಾರ್ಗ ಬೋಧಿಸಿ ನಮ್ಮನ್ನು ಉದ್ಧರಿಸುವ ಸ್ಥಾನವೊಂದಿದ್ದರೆ ಅದು ’ಗುರು’ ಮಾತ್ರ. ಅಮ್ಮನ ಪ್ರೀತಿ, ಅಪ್ಪನ ವಾತ್ಸಲ್ಯ, ಸ್ನೇಹಿತನ ಹೆಗಲು, ಅಕ್ಕ-ತಂಗಿ-ಅಣ್ಣ-ತಮ್ಮ ಈ ಎಲ್ಲರ ಆಪ್ತತೆ ತೋರುವ ಸಕಲವೂ ಆಗಿ ಸಂಭಾಳಿಸುವ, ಸಂತೈಸುವ, ಆಲಿಸುವ, ಲಾಲಿಹಾಡುವ, ರಮಿಸುವ, ಎತ್ತಿ ಮುದ್ದಾಡುವ ಪರಾತ್ಪರ ಶಕ್ತಿಯಾದ ಇಂತಹ ಗುರುವನ್ನು ಸ್ಮರಿಸಲು ಬೇರೆ ಹಲವು ಲೌಕಿಕ ಕಾರಣಗಳು ಬೇಕಿಲ್ಲ. ಇಂತಹ ಗುರುರೂಪವನ್ನು ನೆನೆಯೋಣವೇ ?

ನೆನೆವೆ ಶ್ರೀಧರ ಸತತ ಗುರುವರ
ನಿನ್ನ ಅಡಿದಾವರೆಗಳ
ಮನವನಣಿಗೊಳಿಸುತ್ತ ಭವಹರ
ಕನವರಿಸುವೇ ಪದಗಳ

ದೇಗಲೂರಲಿ ಹುಟ್ಟಿಬೆಳೆಯುತ ದೇಗುಲವೆ ನೀನಾಗಿಹೆ
ಸಾಗಿ ದೂರದಿ ಉತ್ತರದಿ ನಿನ್ನ ಪಾದಪದ್ಮವನೂರಿದೆ
ಯಾಗಯಜ್ಞದ ತಿರುಳ ಅರುಹಿದೆ ಮಾರ್ದನಿಸಿ ಜನಕೂಗಿರೆ
ಸಾಗರದ ಪ್ರಾಂತದಲಿ ನೆಲೆಸಿದ ಯೋಗಿ ನಿನ್ನನು ಭಜಿಸುವೆ

ದತ್ತರೂಪನೆ ಕಮಲಾ ತನಯನೆ ವಿಮಲ ಕೋಮಲ ನೇತ್ರನೆ
ನೆತ್ತಿನೇವರಿಸುತ್ತ ಹರಸಿದೆ ಭಕ್ತಜನರನುರಾಗನೆ
ಒತ್ತಿ ಬೆರಳನು ಹರಿಸಿ ತೀರ್ಥವ ಕೊಟ್ಟೆ ನೀನೌಷಧವನು
ಎತ್ತುವೆನು ಮಂಗಳದ ಆರತಿ ಸೃಷ್ಟಿಗೊಡೆಯನೆ ನಮಿಪೆನು
----


ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್ ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತ-ದೇಶಕಾಲಕಲನಾ-ವೈಚಿತ್ರ್ಯ-ಚಿತ್ರೀಕೃತಂ|
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||


ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

-ವಿ.ಆರ್.ಭಟ್

ಯೋಚಿಸಲೊ೦ದಿಷ್ಟು-೪

೧. ಇನ್ನೊಬ್ಬರಿಗಾಗಿ ನಿಜವಾಗಿಯೂ ಮಿಡಿಯುವ ಹೃದಯಗಳು ಯಾವಾಗಲೂ ತಪ್ಪಾಗಿಯೇ ಅರ್ಥೈಸಲ್ಪಡುತ್ತವೆ ಹಾಗೂ ಮಿಡಿದ೦ತೆ ನಟಿಸುವ ಹೃದಯಗಳು ಹೊಗಳಲ್ಪಡುತ್ತವೆ!

೨. ಹೃದಯಗಳ ನಡುವಿನ ಬಾಯಿ ಮಾತಿನಲ್ಲಿ ಹೇಳಲಾಗದ ಒ೦ದು ಬಧ್ಧತೆಯೇ ಮಿತೃತ್ವ.ಈ ಬಧ್ಧತೆಯನ್ನು ಅಕ್ಷರಗಳಲ್ಲಿ ಬರೆದಿಡಲಾಗಲೀ ಯಾ ಒತ್ತಡದಿ೦ದ ನೀಡಲಾಗಲೀ ಆಗುವುದಿಲ್ಲ. ನಾವು ನಮ್ಮ ಮಿತ್ರರೊ೦ದಿಗೆ ಸ೦ಪರ್ಕದಲ್ಲಿರುವ ಪ್ರತಿನಿಮಿಷಕ್ಕೂ ಈ ಬಧ್ಧತೆ ಅಥವಾ ವಚನವು ನವೀಕರಣಗೊಳ್ಳುತ್ತಿರುತ್ತದೆ!

೩. ಶತ್ರುವನ್ನಾದರೂ ಜಯಿಸಬಹುದು. ಆದರೆ ಹಿತಶತ್ರುವನ್ನು ಜಯಿಸುವುದು ಸುಲಭಸಾಧ್ಯವಲ್ಲ! ಅವರು ನಿಮ್ಮೊ೦ದಿಗಿದ್ದ೦ತೆ ನಟಿಸಿದರೂ, ಮಾನಸಿಕವಾಗಿ ನಿಮ್ಮೊ೦ದಿಗಿರುವುದಿಲ್ಲ!

೪. ಹಿತಶತ್ರುಗಳೊ೦ದಿಗೆ ಬೆರೆಯುವಾಗ ಎಚ್ಚರಿಕೆ ಬೇಕೇ ಬೇಕು. ಅವರೊ೦ದಿಗಿನ ಒಡನಾಟವು ಕೆಸರಿನೊ೦ದಿಗಿನ ಒಡನಾಟದ೦ತೆ! ಕಾಲಲ್ಲಿ ತುಳಿದರೆ ಕಾಲನ್ನು ಮಾತ್ರ ತೊಳೆದರಾಯಿತು. ಆದರೆ ಮೈ ತು೦ಬಾ ಕೆಸರನ್ನು ಮೆತ್ತಿಕೊ೦ಡರೆ ಸ್ನಾನವನ್ನೇ ಮಾಡಬೇಕಾದೀತು!

೫. ನಾವು ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ.

೬. ನಮ್ಮ ಕಾರ್ಯನಿರ್ವಹಣೆ ಮತ್ತು ವ್ಯವಹಾರಗಳಲ್ಲಿ ತೋರಬೇಕಾದ ಪಾರದರ್ಶಕತೆಯನ್ನು ನಾವು ತೊಡುವ ಉಡುಗೆಗಳ ಮೂಲಕ ವ್ಯಕ್ತಪಡಿಸುತ್ತಿದ್ದೇವೆ!

೭. ಪ್ರಪ೦ಚದಲ್ಲಿ ಸ೦ಪೂರ್ಣ ಕೆಟ್ಟವರೆ೦ದು ಹಾಗೂ ಸ೦ಪೂರ್ಣ ಒಳ್ಳೆಯವರೆ೦ದು ಯಾರನ್ನೂ ವರ್ಗೀಕರಣ ಮಾಡಲಾಗುವುದಿಲ್ಲ. ಕೆಟ್ಟವರು ಕೆಲವರಿಗೆ ಒಳ್ಳೆಯವರೂ ಹಾಗೆಯೇ ಒಳ್ಳೆಯವರು ಕೆಲವರಿಗೆ ಕೆಟ್ಟವರೂ ಆಗಿರುತ್ತಾರೆ.

೮. ಕೆಡುಕು ಎ೦ಬುದು ಇರುವುದರಿ೦ದಲೇ ಒಳ್ಳೆಯತನವೆ೦ಬುದು ಮೌಲ್ಯವಾಗಿ ಗುರುತಿಸಲ್ಪಟ್ಟಿರುವುದು.

೯. ಪ್ರತಿಯೊಬ್ಬರೂ ಒಳಿತು ಕೆಡಕುಗಳ ಮಿಶ್ರಣವಾಗಿರುತ್ತಾರೆ. ಕೆಲವರ ಕೆಡುಕುಗಳು ಮಾತ್ರ ಬೆಳಕಿಗೆ ಬ೦ದರೆ ಮತ್ತೆ ಕೆಲವರ ಒಳ್ಳೆಯತನ ಮಾತ್ರ ಬೆಳಕಿಗೆ ಬರುತ್ತದೆ!

೧೦. ನಾವು ಜೊತೆಗಿದ್ದೂ, ನಮ್ಮ ಗೆಳೆಯನ ಮನಸ್ಸಿನಲ್ಲಿ “ ತಾನು ಒ೦ಟಿ“ ಎ೦ಬ ಭಾವನೆ ಮೂಡಿದರೆ, ನಮ್ಮ ಮಿತೃತ್ವವು ವಿದಾಯದ ಘಳಿಗೆಗಳನ್ನು ಎದುರಿಸುತ್ತಿದೆ ಎ೦ದರ್ಥ!

೧೧. ತಪ್ಪು ಮಾಡಿದವರನ್ನು ಹೀಯಾಳಿಸಿ, ಅವರ ಮನ ನೋಯಿಸುವುದಕ್ಕಿ೦ತ, ಅವರ ತಪ್ಪನ್ನು ತಿಳಿಸಿ, ಮನ ಪರಿವರ್ತನೆ ಮಾಡುವುದು ಉತ್ತಮ.

೧೨. ಅರಿತುಕೊಳ್ಳದವರ ಮು೦ದೆ ಭಾಷಣ ಮಾಡುವುದಕ್ಕಿ೦ತ,ಅರಿತುಕೊ೦ಡವರೊ೦ದಿಗೆ ಚರ್ಚೆ ಮಾಡುವುದು ಸಮಯದ ಸದುಪಯೋಗವೇ.

೧೩. ಜೀವನದ ವಿಪರ್ಯಾಸವೆ೦ದರೆ, ಬುಧ್ಧಿವ೦ತ ಬಹು ಬೇಗ ಮೂರ್ಖನಾಗುವುದು ಹಾಗೂ ಮೂರ್ಖ ನಿಧಾನವಾಗಿ ಬುಧ್ಧಿವ೦ತನಾಗುವುದು!

೧೪. ವೇಶ್ಯೆಯೊ೦ದಿಗೆ ಮಧುಚ೦ದ್ರವನ್ನು ಆಚರಿಸುವುದಕ್ಕಿ೦ತ ಹೆ೦ಡತಿಯೊಡನೆ ಜಗಳ ಮಾಡುವುದು ಲೇಸು.

೧೫. ಮಿತೃತ್ವದ ನಡುವಿನ ಒ೦ದೇ ಒ೦ದು ತಪ್ಪು ತಿಳುವಳಿಕೆಯ ಕ್ಷಣ ಎಷ್ಟು ವಿಷಕಾರಿಯಾಗಿರುತ್ತದೆ೦ದರೆ, ಅದು ನಾವು ಪರಸ್ಪರ ಕಳೆದ ನೂರಾರು ಸ೦ತಸದ ಕ್ಷಣಗಳನ್ನು ಒ೦ದೇ ಕ್ಷಣದಲ್ಲಿ ನಾಶಮಾಡುತ್ತದೆ.

ಭಾವಸಂಗಮ

ವೇದಸುಧೆಯ ಮಿತ್ರರೇ,
ಮಿತ್ರರಾದ ಸರ್ವಶ್ರೀ ನಾಗರಾಜ್, ವಿ.ಆರ್.ಭಟ್, ರಾಘವೇಂದ್ರನಾವಡ, ಹಂಸಾನಂದಿ, ಡಾ||ಜ್ಞಾನದೇವ್, ಸುಧಾಕರಶರ್ಮರು......ಹೀಗೆ ಹಲವರು ಉತ್ತಮವಾದ ಕವನಗಳನ್ನು ಬರೆಯುತ್ತಾರೆ. ಇಂದಿನ ದಿನಗಳಲ್ಲಿ ಬಹುಪಾಲು ಕವಿಗಳ ಕವನದ ವಸ್ತು ಯುವಕ-ಯುವತಿಯರ ನಡುವಿನ ಪ್ರೀತಿ-ಪ್ರೇಮ ,ಇದು ಸರ್ವೇ ಸಾಮಾನ್ಯ. ಆದರೆ ಅದಕ್ಕೂ ಮೀರಿ ನಮ್ಮ ಚಿಂತನೆ ಸಾಗಬಹುದೆಂಬುದಕ್ಕೆ ವೇದಸುಧೆಯಲ್ಲಿ ಈಗಾಗಲೇ ಪ್ರಕಟವಾಗಿರುವ ಕೆಲವು ಉತ್ತಮ ಕವನಗಳು ನಿದರ್ಶನಗಳಾಗಿವೆ. ಅವುಗಳನ್ನು ಭಾವಗೀತೆ ಎನ್ನಬಹುದು, ಅಧ್ಯಾತ್ಮ ಚಿಂತನೆಯೆ ನುಡಿಮುತ್ತುಗಳೆನ್ನಬಹುದು. ಈಗಾಗಲೇ ಭಟ್ಟರ "ಜಗದಮಿತ್ರ" ಕವಿನಾಗರಾಜರ "ಮೂಢ ಉವಾಚ" ಸಾಕಷ್ಟು ಜನರ ಮೆಚ್ಚುಗೆ ಪಡೆದಿವೆ. ಹೀಗೆ ಬರೆಯುವ ಎಲ್ಲಾ ಕವನಗಳನ್ನು ಇನ್ನು ಮುಂದೆ ಒಂದು ಲೇಬಲ್ ಅಡಿಯಲ್ಲಿ ಅವರವರ ಹೆಸರಲ್ಲಿ ಬರೆಯೋಣ. ಮುಂದೆ ಭಗವಂತನ ಕೃಪೆ ಇದ್ದರೆ ಒಂದು ಪುಸ್ತಕ ಹೊರತರಬಹುದಲ್ಲವೇ? ಅಂತೂ ಕವನಗಳೆಲ್ಲಾ ಒಂದೆಡೆ :"ಭಾವಸಂಗಮ" ಲೇಬಲ್ ಅಡಿಯಲ್ಲಿ ಇರಲಿ, ಅಲ್ಲವೇ?

ಅಮೃತಾತ್ಮನು ನೀನು

ಈ ದೇಹ ನೀನೆಂದು ತಿಳಿದಿರುವೆ ನೀನು|
ನಿಜತಿಳಿಯಬೇಕೇನು? ದೇಹವಲ್ಲವು ನೀನು||

ಶಿಶುವಾಗಿ
ಜನಿಸಿ, ಬೆಳೆದು ಯೌವ್ವನ ಪಡೆದು|
ವೃದ್ಧಾಪ್ಯದೆಡೆಗೆ, ದಿನದಿನವು ಸಾಗಿ
ಮುಪ್ಪು, ಮರಣವು ಬರಲು ನಿನಗೇಕೆ ಚಿಂತೆ?
ಹುಟ್ಟಿದಾ ದೇಹಕೆ ಅಂತ್ಯವಿದೆಯಂತೆ||

ಮೊದಲು
ಬಾಲ್ಯದ ಆಟ, ನಡುನಡುವೆ ಹುಡುಗಾಟ
ಯೌವ್ವನವು ಕಾಲಿಡಲು, ಸಂಸಾರದಾಟ|
ಆಡಿದವನಾರು? ಆಡಿಸಿದವನಾರು?
ಆಡುವಾ ದೇಹದೊಳು ಇರುವ ನೀನಾರು?||

ನೀ ಹುಟ್ಟಲಿಲ್ಲ,ತಾರುಣ್ಯ ನಿನದಲ್ಲ
ವೃದ್ಧಾಪ್ಯ ಬರಲಿಲ್ಲ
, ಸಾವೆಂಬ ಸುಳಿವಿಲ್ಲ|
ಅಂಗಿ ಬದಲಿಸಿದಂತೆ ದೇಹ ಬದಲಿಸಿದೆ ನೀನು
ಚೈತನ್ಯವೇ ನೀನು, ಅಮೃತಾತ್ಮನು ನೀನು||

Friday, July 23, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -8
ವೇದ ಮತ್ತೆ ಮತ್ತೆ ಸಾರುತ್ತಲಿದೆ:
ಗೂಹತಾ ಗುಹ್ಯಂ ತಮೋ ವಿ ಯಾತ ವಿಶ್ವಮತ್ರಿಣಮ್ ಜ್ಯೋತಿಷ್ಕರ್ತಾ ಯದುಶ್ಮಸಿ (ಋಕ್.1.86.10)"ಮಾ ನೋ ದೀರ್ಘಾ ಅಭ ಸಹಸ್ತಮಿಸ್ರಾಃ" (ಋಕ್.2.27.14) -ಪ್ರಭೋ, ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ- ಎಂದೇ. ಭಕ್ತನ ಭಾವನಾಭರಿತ ಹೃದಯದ ಮೇಲೆ ಅಂಕಿತಗೊಳಿಸುವುದಾದರೂ - "ಜ್ಯೋತಿರ್ವೃಣೀತ ತಮಸೋ ವಿಜಾಸನ್""ಆರ್ಯಾ ಜ್ಯೋತಿಷಗ್ರಾಃ" (ಋಕ್.7.33.7)- ಜ್ಯೋತಿಯನ್ನು ಮುಂದಿಟ್ಟುಕೊಂಡು ಮುನ್ನಡೆಯುವವರೇ ಆರ್ಯರು- ಎಂಬ ಶಬ್ದಗಳಿಂದಲೇ. ವೇದಗಳ ಈ ಜ್ಯೋತಿ ಬೆಂಕಿಯಲ್ಲ, ಸೂರ್ಯನೂ ಅಲ್ಲ, ನಿಷ್ಕಲ್ಮಶವಾದ,ಪರಮ ಪರಿಷ್ಕೃತವಾದ ದಿವ್ಯಜ್ಞಾನ. (ಋಕ್.3.39.7) - ಅಂಧಕಾರದಿಂದ ದೂರಸರಿದು ಜ್ಯೋತಿಯನ್ನು ತುಂಬಿಕೊಳ್ಳಬೇಕು- ಎಂಬ ಪುನೀತ ಭಾವನೆಯನ್ನೇ. ಹೆಚ್ಚೇನು? ಆರ್ಯರ - ಶ್ರೇಷ್ಠರ ಸ್ಫುಟ ಚಿತ್ರವನ್ನು ಚಿತ್ರಿಸುವುದಾದರೂ

ಎಂತು ಅರ್ಚಿಸಲಿ?

ಎಂತು ಅರ್ಚಿಸಲಿ?

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು|
ಘಂಟಾನಾದವ ಮಾಡಿ ಬಾ ಎನ್ನಲೇನು?||

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು|
ಕಿರುಪೀಠವ ತೋರಿ ಕುಳ್ಳಿರಿಸಲೇನು?||

ದಿವ್ಯ ಚೇತನ ಪರಿಶುದ್ಧ ಪರಮಾತ್ಮ ನೀನು|
ಅಭಿಷೇಕವ ಮಾಡಿ ಕೊಳೆ ತೊಳೆಯಲೇನು?||

ಸಕಲ ಚರಾಚರ ಸೃಷ್ಟಿಕರ್ತ ನೀನಲ್ಲವೇನು?|
ನಿನ್ನ ಸೃಷ್ಟಿಯ ಹೂವ ನಿನಗೆಂತು ಕೊಟ್ಟೇನು?||

ಅನೂಹ್ಯ ಅನಂತ ಅಭೋಕ್ತ ಅಚ್ಯುತನು ನೀನು|
ನಿನಗೆ ನೈವೇದ್ಯವೆನೆ ಕೊಡಬಹುದು ನಾನೇನು?||

ಸಕಲ ಜೀವರಿಗೆ ನೆಲೆ ಕೊಟ್ಟ ಧೀಮಂತ ನೀನು|
ನಿನಗೊಂದು ಗುಡಿ ಕಟ್ಟಿ ನೆಲೆಗೊಳಿಸಲೇನು?||

ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ಹೊರಬರುವ ದಾರಿಯನು ತೋರುವೆಯ ನೀನು?||

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

-ಕವಿ ನಾಗರಾಜ್
-

ನಮ್ಮ ಆಚರಣೆಗಳು-೧

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳನ್ನು ಇಂದಿನಿಂದ ವೇದಸುಧೆಯು ಪ್ರಕಟಿಸುತ್ತದೆ. ನಮ್ಮ ಆಚರಣೆಗಳು ಎಷ್ಟು ವೈಜ್ಞಾನಿಕ! ಎಂದುದನ್ನು ಆಚಾರ್ಯರ ಸರಳ ಸ್ಪಷ್ಟ ಮಾತುಗಳಲ್ಲಿ ಕೇಳಿ. ಪ್ರತಿಕ್ರಿಯಿಸಲು ಮರೆಯದಿರಿ



ಕೃಪೆ: ಕನ್ನಡ ಆಡಿಯೋ ಡಾಟ್ಕಾಮ್

Thursday, July 22, 2010

ದೇವರು ಹೇಳಿದ ಸುಪ್ರಭಾತ

ಮುಂಜಾನೆ ನೀನೆದ್ದೆ - ನಾನು ಕಾದಿದ್ದೆ
ನಿನ್ನೆರಡು ಮಾತಿಗೆ, ಮುಗುಳ್ನಗೆಗೆ;
ನಿನಗೆ ಪುರುಸೊತ್ತಿಲ್ಲ !

ಗಡಿಬಿಡಿಯಲಿ ನೀ ನಿತ್ಯಕರ್ಮ ಮುಗಿಸಿದೆ
ನಿನ್ನ ನಿರೀಕ್ಷಣೆಯಲ್ಲೇ ನಾನಿದ್ದೆ;
ಯಾವ ಬಟ್ಟೆ ಧರಿಸಲಿ
ಎಂಬ ಗುಂಗಿನಲ್ಲಿ ನೀನಿದ್ದೆ;
ನಿನಗೆ ಸಮಯವಿಲ್ಲ !

ತಿಂಡಿ ತಿನ್ನುವಾಗೊಮ್ಮೆಯಾದರೂ
ನೀ ನೋಡುವಿಯೆಂದುಕೊಂಡಿದ್ದೆ;
ಇಂದೇನು ಮಾಡಬೇಕೆಂಬ
ಚಿಂತೆಯಲಿ ನೀನಿದ್ದೆ;
ನಿನಗೆ ಸಮಯವಿಲ್ಲ !

ಮನೆಯಿಂದ ಹೊರಟಾಗಲೊಮ್ಮೆ
ಕೈಬೀಸಿ ವಿದಾಯ ನುಡಿಯಲೂ
ನಿನಗಾಗಲಿಲ್ಲ ! ಅಷ್ಟು ಆತುರ ನಿನಗೆ;
ನಿನಗೆ ಸಮಯವಿಲ್ಲ !

ದಿನವಿಡೀ ನಾಕಾದೆ - ನಿನ್ನ ಗಮನಿಸಿದೆ
ನಿನ್ನ ಕೆಲಸದ ಒತ್ತಡದಿ
ನನ್ನ ನೆನಪು ನಿನಗಾಗದಿರಬಹುದು;
ನಿನಗೆ ಸಮಯವಿಲ್ಲ !

ಮಧ್ಯಾಹ್ನದೂಟ ಮಾಡುವ ಮುನ್ನ
ಅರೆಘಳಿಗೆ ನೀ ಸುಮ್ಮನೆ ಇದ್ದಾಗ
ಮಾತಾಡಬಹುದೇನೋ ಅನ್ನಿಸಿತು;
ನಾನು ಕಾದಿದ್ದೇ ಬಂತು;
ನಿನಗೆ ಗೊತ್ತೇ ಆಗಲಿಲ್ಲ;
ನಿನಗೆ ಸಮಯವಿಲ್ಲ !

ಯಾಂತ್ರಿಕವಾಗಿ ಟಿವಿ ನೋಡಿ
ಮಡದಿ ಮಕ್ಕಳೊಂದಿಗೆ ಊಟ ಮಾಡಿ
ಸುಸ್ತಾಗಿ ಮಲಗುವ ಮುನ್ನ
ನನ್ನೊಡನೆ ದಿನದ ಕಷ್ಟ ಸುಖ
ಹಂಚಿಕೊಳ್ಳಬಹುದೆಂದು ನಾನು ಕಾದಿದ್ದೆ;
ನಿದ್ರೆಗೆ ನೀನು ಜಾರಿದೆ;
ನಿನಗೆ ಸಮಯವಿಲ್ಲ !

ದಿನಚರಿ ಹೀಗೇ ಸಾಗುವುದು
ಬೆಳಗಾಗುವುದು, ರಾತ್ರಿಯಾಗುವುದು;
ನಾನು ಕಾಯುತ್ತಿರುವೆ, ಪ್ರೀತಿಯಿಂದ
ನಿನಗೆ ಸಮಯ ಸಿಗಬಹುದೆಂದು;
ನಿನಗೆ ಶುಭವಾಗಲಿ !

-ಕವಿ ನಾಗರಾಜ್
-

Wednesday, July 21, 2010

ವೇದೋಕ್ತ ಜೀವನ ಪಥ

ವೇದೋಕ್ತ ಜೀವನ ಪಥ
ಜೀವನ ಬುನಾದಿ - 7

ಶಾಸ್ತ್ರೀಯ ಔದಾರ್ಯ ಇದಕ್ಕಿಂತ ಮುಂದೆ ಹೋಗಲಾರದು. ವೇದಗಳು ಜ್ಞಾನಮಯ ತಾನೇ? ಜ್ಞಾನಮಾರ್ಗದಲ್ಲಿ ಅಂಧವಿಶ್ವಾಸಕ್ಕೆ, ಕುರುಡು ನಂಬಿಕೆಗೆ ಎಡೆಯೆಲ್ಲಿ? ಸತ್ಯವೇ ನಿಮ್ಮ ಶಕ್ತಿ, ಅದರ ನೆರವಿಂದಲೇ ಸತ್ಯಾನ್ವೇಷಣಕ್ಕೆ ಮುಂದಣ ಹೆಜ್ಜೆಯಿಡಿರ ಎಂದು ಕರೆ ಕೊಡುತ್ತದೆ ಋಗ್ವೇದ:
ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷಃ|| (ಋಕ್.1.86.9)
[ಸತ್ಯಶವಸಃ] ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ! ಸತ್ಯವಾದ ಶಕ್ತಿಯಿಂದಲೇ ವಿರಾಜಿಸುವ ಧನ್ಯ ಜೀವರೇ! [ಯೂಯಂ] ನೀವು, [ಮಹಿತ್ವನಾ] ನಿಮ್ಮ ಸ್ವಂತ ಮಹಿಮೆಯಿಂದಲೇ [ತತ್ ಆವಿಷ್ಕರ್ತ] ಆ ಸತ್ಯವನ್ನು ಆವಿಷ್ಕರಿಸಿರಿ, ಬೆಳಕಿಗೆ ತನ್ನಿರಿ. [ರಕ್ಷಃ] ದುಷ್ಕಾಮನೆಯನ್ನು [ವಿದ್ಯುತಾ] ನಿಮ್ಮ ಜ್ಞಾನಜ್ಯೋತಿಯಿಂದ [ವಿಧ್ಯತ] ಸೀಳಿಹಾಕಿರಿ. ಒಂದೊಂದು ಮಾತಿನಲ್ಲಿಯೂ ಸ್ಫೂರ್ತಿ ಉಕ್ಕಿ ಬರುತ್ತದೆ. ಹೌದು, ಅಜ್ಞಾನದ ಅಂಧಕಾರ ಕವಿದಿರುವವರೆಗೆ, ಆತ್ಮವನ್ನು ಕುಕ್ಕಿ ತಿನ್ನುವ ರಾಕ್ಷಸೀ ಭಾವನೆ ದೂರವಾಗಲಾರದು.

ಸಾಧನೆಯ ಹಾದಿಯಲ್ಲಿ.....

ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತು!
ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು!

ಒಮ್ಮೆ ಜಾರಿ ಬಿದ್ದರೇನು?
ನಡೆಯಲಿ ಹತ್ತಾರು ಬಾರಿ ಮೇಲೇಳಲು ಪ್ರಯತ್ನ!

ನಿಮ್ಮ ಸಮಯ ನಿಮ್ಮಲ್ಲಿಯೇ ಇದೆ!
ಸಮಯವಿದೆಯೆ೦ದು ಮಾಡಿದರೆ ನಿಧಾನ!
ಆಗುವುದು ಬಾಳೂ ಸಾವಧಾನ!

ಸೋಮಾರಿತನವೆ೦ಬುದು ಶಾಪ !
ಇರಲಿ ಚುರುಕು- ನೆನಪಿರಲಿ,
ಅತಿವೇಗವೇ ಅಪಘಾತಕ್ಕೆ ಕಾರಣ!

ನಿಮ್ಮದೇ ದಾರಿ ಬೇರೆ೦ಬ ಗೊ೦ದಲ ಬೇಡ!
ಬಿದ್ದರೆ ಮೇಲೆತ್ತಲಾರೂ ಇಲ್ಲವೆ೦ಬ ಅನುಮಾನವೂ ಬೇಡ!
ನಿಮ್ಮ ಬೆನ್ನ ಹಿ೦ದಿದೆ ನಿಮ್ಮ ಪ್ರಯತ್ನದ ಜೇಡ!

ಬಿದ್ದರೆ ನೀವೇ ಏಳುವಿರಿ! ಮೇಲೆದ್ದು ಮತ್ತೆ ನಡೆಯುವಿರಿ!
ಅ೦ಜಿಕೆ ಬೇಡ. ಸಾಧನೆಯ ಹಾದಿಯಲ್ಲೆ೦ದಿಗೂ
ಉಲ್ಲಾಸದ ಹೆಜ್ಜೆಗಳಿರಲಿ! ಆಪತ್ತು ಬರದಿರದು!
ಅದನೆದುರಿಸುವ ಸ್ಥೈರ್ಯವೊ೦ದಿರಲಿ!

ಕಾಲ ನಡೆಸುತ್ತದೆ ನಿಮ್ಮನ್ನು!
ಹೆಚ್ಚೆಚ್ಚು ಅನುಭವಗಳ ಬುತ್ತಿಯೊ೦ದಿಗೆ!
ಸಾಧಿಸಿದ ನ೦ತರದ ದಿನವೆಲ್ಲಾ ನಗುವಿನ ಬುಗ್ಗೆಯೊ೦ದಿಗೆ!

Tuesday, July 20, 2010

ಸುಧಾಕರಶರ್ಮರು ಬರೆಯಲಿರುವರು

ವೇದಸುಧೆಯ ಅಭಿಮಾನಿಗಳೇ, ನಮಸ್ಕಾರ.
ವೇದಾಧ್ಯಾಯೀ ಸುಧಾಕರಶರ್ಮರು ಸತ್ಯಾನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕ್ರಿಯಾಶೀಲ ವ್ಯಕ್ತಿ. ಅವರಿಂದ ರಾಜ್ಯದಾದ್ಯಂತ ಉಪನ್ಯಾಸಗಳು, ಗುಂಪುಚರ್ಚೆಗಳು, ಸತ್ಸಂಗಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಅವರಿಗೆ ಸಮಯದ ಅಭಾವವು ತುಂಬಾ. ವೇದಸುಧೆಯ ಮೂಲಕ ಅವರಿಗೆ ನಿಷ್ಟುರ ಪ್ರಶ್ನೆಗಳನ್ನು ಕೇಳಲಾಗಿತ್ತು. ಅವರಿಂದ ಉತ್ತರವು ತಡವಾದ್ದರಿಂದ ಶರ್ಮರಿಗೆ ಬೇಸರವಾಗಿರಬಹುದೆಂಬ ಅನುಮಾನಕ್ಕೆ ಕಾರಣವಾಗಿ ಅವರಿಗೆ ವೈಯಕ್ತಿಕವಾಗಿ ಮೇಲ್ ಮಾಡಿದ್ದೆ. ಆದರೆ ಸಮಯದ ಕೊರತೆಯೇ ವೇದಸುಧೆಯಲ್ಲಿ ಬರೆಯದಿರಲು ಕಾರಣವೆಂಬ ಸ್ಪಷ್ಟೀಕರಣ ನೀಡಿ ನನಗೆ ಸುಧೀರ್ಘ ಪತ್ರವನ್ನು ಬರೆದಿದ್ದಾರೆ. ಆದ್ದರಿಂದ ಮುಂದೆ ಅವರ ವಿಚಾರಗಳನ್ನು ಅವರಿಗಾಗಿಯೇ ಇರುವ ಪ್ರತ್ಯೇಕ ಪುಟದಲ್ಲಿ ನಿರೀಕ್ಷಿಸಬಹುದು.
-ಹರಿಹರಪುರಶ್ರೀಧರ್

ಅಧಿಕಮಾಸದ ಹಿನ್ನೆಲೆ

ವೇದಸುಧೆ ಬಳಗದ ಶ್ರೀ ಹಂಸಾನಂದಿಯವರು ಉತ್ತಮ ಬರಹಗಾರರು.ಹಾಸನದವರಾದ ಇವರು ಸಧ್ಯ ಕ್ಯಾಲಿಫೋರ್ನಿಯಾದಲ್ಲಿದ್ದಾರೆ. ಶ್ರೀಯುತರ ಈ ಲೇಖನ ಓದಿ.
-ಶ್ರೀಧರ್

’ದುರ್ಭಿಕ್ಷದಲ್ಲಿ ಅಧಿಕ ಮಾಸ’ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ’ಮೊದಲೇ ಕೊಳೆ ಅದರ ಮೇಲೆ ಮಳೆ’ ಅನ್ನೋ ಗಾದೆಗೂ ಇದೇ ಅರ್ಥ. ಮೊದಲೇ ಕಷ್ಟಗಳು ಇದ್ದಾಗ, ಅದರ ಮೇಲೆ ಇನ್ನಷ್ಟು ಕಷ್ಟಗಳನ್ನು ಬರುವುದನ್ನು ಸೂಚಿಸುತ್ತವೆ ಹೀಗೆ...’ದುರ್ಭಿಕ್ಷದಲ್ಲಿ ಅಧಿಕ ಮಾಸ’ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ’ಮೊದಲೇ ಕೊಳೆ ಅದರ ಮೇಲೆ ಮಳೆ’ ಅನ್ನೋ ಗಾದೆಗೂ ಇದೇ ಅರ್ಥ. ಮೊದಲೇ ಕಷ್ಟಗಳು ಇದ್ದಾಗ, ಅದರ ಮೇಲೆ ಇನ್ನಷ್ಟು ಕಷ್ಟಗಳನ್ನು ಬರುವುದನ್ನು ಸೂಚಿಸುತ್ತವೆ ಹೀಗೆ ದುರ್ಭಿಕ್ಷದಲ್ಲಿ ಅಧಿಕಮಾಸ ಅಂತ ಗಾದೆ ಯಾಕೆ ಬಂದಿದೆ ಗೊತ್ತಾ? ಇದ್ದಕ್ಕಿದ್ದ ಹಾಗೆ ಒಂದು ತಿಂಗಳು ಹೆಚ್ಚಾಗಿ ಹೇಗೆ ಬರುತ್ತೇ ಅಂತೀರಾ?

ಈ ಮಾಸ ಅನ್ನೋ ಪದ ಮಾ ಅನ್ನೋ ಮೂಲದಿಂದ ಬಂದಿದೆ. ಪೂರ್ಣಿ’ಮಾ’, ಅ’ಮಾ’ವಾಸ್ಯೆ ಗಳಲ್ಲಿರುವ ಮಾ ಇದೇನೆ. ಕನ್ನಡದಲ್ಲಿ ಚಂದ್ರ ಅನ್ನೋ ಅರ್ಥ ಬರುವ ತಿಂಗಳು ಎನ್ನುವ ಪದವನ್ನೇ ನಾವು ಮಾಸ ಅನ್ನೋ ಅರ್ಥದಲ್ಲೇ ಬಳಸ್ತೀವೆ. ಈ ಓವರ್‌ಲೋಡೆಡ್ ಪದ ಎಷ್ಟು ಸರ್ವೇಸಾಮಾನ್ಯ ಆಗಿಹೋಗಿದೆ ಅಂದರೆ, ತಿಂಗಳು ಎಂದರೆ ಚಂದ್ರ ಅನ್ನೋದೇ ನಮ್ಮಲ್ಲಿ ಹಲವರಿಗೆ ಮರೆತುಹೋಗಿದೆ. ಆದಿರಲಿ. ತಿಂಗಳು, ಅಥವಾ ಮಾಸ, ಎಂದರೆ, ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಯವರೆಗಿರುವ ಅವಧಿ. ಇದು ಸುಮಾರಾಗಿ ಇಪ್ಪತ್ತೊಂಬತ್ತೂವರೆ ದಿನ, ಅಥವಾ ಸುಲಭವಾಗಿ ಮೂವತ್ತು ದಿನ ಅಂತ ಇಟ್ಟುಕೊಳ್ಳಬಹುದು.

ಕರ್ನಾಟಕದಲ್ಲಿ ನಮಗೆ ವರ್ಷದ ಮೊದಲ ಹಬ್ಬ ಯುಗಾದಿ. ಕರಾವಳಿಯಲ್ಲಿ ಬಿಟ್ಟರೆ, ಉಳಿದವರೆಲ್ಲ ಚಾಂದ್ರಮಾನ ಯುಗಾದಿಯನ್ನೇ ಆಚರಿಸುವುದು ಪದ್ಧತಿ. ಯುಗಾದಿ ಬರುವುದು ಚೈತ್ರದ ಮೊದಲ ದಿನ. ಅಂದ ಹಾಗೆ, ತಿಂಗಳುಗಳಿಗೆ ಚೈತ್ರ, ವೈಶಾಖ ಅಂತಲೇ ಹೆಸರೇಕೆ ಬಂತು ಗೊತ್ತಾ? ಇದೂ ನೂರಾರು ವರ್ಷ ಆಕಾಶವನ್ನು ನೋಡ್ತಾ ಬಂದ ನಮ್ಮ ಪೂರ್ವಿಕರ ಗಮನದ ಹರಹನ್ನು ತೋರಿಸುತ್ತೆ. ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಗೆ ಸುಮಾರು ಮೂವತ್ತು ದಿನ ಬೇಕಾಗಿದ್ದರೂ, ಚಂದ್ರ ಆಕಾಶದಲ್ಲಿ ಒಂದು ಸುತ್ತು ಸುತ್ತೋದಕ್ಕೆ ಇಪ್ಪತ್ತೇಳು-ಇಪ್ಪತ್ತೆಂಟು ದಿನ ಸಾಕು ಅನ್ನೋದು ಅವರಿಗೆ ಗೊತ್ತಾಗಿತ್ತು. ಹೇಗೆ ಅದು? ಈಗಿನ ತರಹ ಆಗ ಲೈಟ್ ಪಲ್ಯೂಷನ್ ಇರಲಿಲ್ಲ ಬಿಡಿ ಆಗ :-) ರಾತ್ರಿ ನಕ್ಷತ್ರಗಳು ಚೆನ್ನಾಗಿ ಕಾಣೋವು. ಹಾಗಾಗೇ, ಚಂದ್ರ ಯಾವಾಗಲೂ ಆಕಾಶದಲ್ಲಿ ಒಂದೇ ದಾರಿಯಲ್ಲೇ ಹೋಗ್ತಾನೆ ಅಂತ ಅವರಿಗೆ ತಿಳಿದಿತ್ತು.
ಹೀಗೆ ಚಂದ್ರ ಹೋಗೋವಾಗ ಕೆಲವು ನಕ್ಷತ್ರಗಳಿಗೆ ಅವನು ಕೆಲವು ದಿನ ಹತ್ತಿರವಾಗಿ ಕಾಣ್ತಾನೆ ಅನ್ನೋದನ್ನೂ ಅವರು ಕಂಡುಕೊಂಡರು. ಚಂದ್ರ ಆಕಾಶದಲ್ಲಿ ಹೊರಟ ಜಾಗಕ್ಕೇ ಮತ್ತೆ ಸುಮಾರು ೨೭-೨೮ ದಿನಗಳಲ್ಲಿ ಬರೋದ್ರಿಂದ, ಪ್ರತಿ ರಾತ್ರಿಯೂ ಅವನ ದಾರಿಯಲ್ಲಿ ಹತ್ತಿರವಾಗಿರೋ ಒಂದು ನಕ್ಷತ್ರವನ್ನು ಗುರುತಿಟ್ಟುಕೊಂಡು, ಅದರಿಂದ ದಿವಸದ ಲೆಕ್ಕಾಚಾರ ಹಾಕೋಕ್ಕೆ ಆರಂಭಿಸಿದರು. ಇವೇ ೨೭ ನಕ್ಷತ್ರಗಳು. ಅವುಗಳಿಗೇ ಅಶ್ವಿನಿ-ಭರಣಿ-ಕೃತಿಕಾ -... ರೇವತಿ ಅಂತ ಹೆಸರು. ಇದೇ ಆಕಾಶವನ್ನು ಸೂರ್ಯ ಒಂದು ವರ್ಷದಲ್ಲಿ ಸುತ್ತೋದ್ರಿಂದ, ಹೀಗೆ ಆಕಾಶವನ್ನ ಪಟ್ಟಿಹಾಕಿ ಅಳತ್ ಮಾಡಿಟ್ಟಿದ್ದು, ಸೂರ್ಯ ಎಲ್ಲಿದ್ದಾನೆ, ಚಂದ್ರ ಎಲ್ಲಿದ್ದಾನೆ ಅನ್ನೋದನ್ನ ಹೇಳೋದಕ್ಕೆ ಅನುಕೂಲ ಆಯ್ತು. ಅಂದರೆ, ಆಕಾಶವನ್ನು ೨೭ ಕಿತ್ತಳೆ ತೊಳೆಗಳ ತರಹ ವಿಂಗಡಿಸಿ, ಒಂದೊಂದಕ್ಕೂ ಒಂದು ನಕ್ಷತ್ರದ ಜಾಗ ಅಂದ್ರೆ, ಸರಿಯಾದ ಹೋಲಿಕೆ ಆಗುತ್ತೆ.

ಇವನ್ನೆಲ್ಲ ಯಾವುದೋ ಪೂಜೆ ಪುನಸ್ಕಾರ ಮಾಡೋ ಮಂತ್ರ ಹೇಳೋ ಗೊಡ್ಡು ಜನಗಳು ಮಾತ್ರ ತಿಳ್ಕೋತಿದ್ರು ಅನ್ನಬೇಡ್ರೀ! ಹಳ್ಳಿ ಹಳ್ಳೀಲಿ ಹೋಗಿ ಕೇಳಿ - ಯಾವ ಮಳೆ ಬಂದರೆ ಏನು ಅನುಕೂಲ ಅಂತ, ಹೇಳಿಯಾರು. ಹೀಗೆ ಅಶ್ವಿನಿ ಮಳೆ ಅಂದರೆ, ಸೂರ್ಯ ಅಶ್ವಿನಿಯ ಭಾಗದಲ್ಲಿ ಇರುವಾಗ ಬೀಳೋ ಮಳೆ ಅಂತ ಅರ್ಥ ಮಾಡಿಕೋಬೇಕು.

ತಿಂಗಳನ್ನು ಮಾಡಲು ಚಂದ್ರನನ್ನಿಟ್ಟವರು, ಮಳೆಗೆ ಮಾತ್ರ ರವಿಯ ಮೊರೆ ಹೋದರೇಕೆ? ಅದು ಸ್ವಾರಸ್ಯವಾದ ವಿಷಯವೇ. ಬೇಸಿಗೆ-ಮಳೆ-ಚಳಿಗಾಲಗಳು ಸೂರ್ಯ ಆಗಸದಲ್ಲಿ ನಕ್ಷತ್ರಗಳ ಹಾಸಿನಲ್ಲಿ ಎಲ್ಲಿದ್ದಾನೆ ಎಂಬುದರ ಮೇಲೆ ಹೊಂದಿಕೊಂಡಿದೆ ಅನ್ನೋದನ್ನು ಅವರು ಅನುಭವದಿಂದ ಅರಿತರು. ಸುಮಾರು ಸರಾಸರಿ ೩೬೦ ದಿನಗಳಲ್ಲಿ ಕಾಲಗಳು ಮತ್ತೆ ಮತ್ತೆ ಬರುತ್ತವೆ ಅಂಬೋದೂ ಅವರಿಗೆ ಗೊತ್ತಾಯ್ತು. ಬಹಳ ವರ್ಷಗಳು ಇದನ್ನೇ ನೋಡಿ, ಒಂದು ವರ್ಷಕ್ಕೆ ೩೬೫ ದಿನಗಳು ಅನ್ನೋದನ್ನು ತಿಳಿದುಕೊಂಡಿದ್ದರು.
ಆದರೆ, ದಿನ-ನಿತ್ಯದ ಕ್ಯಾಲೆಂಡರ್ ಬಳಕೆಗೆ ಸೂರ್ಯನನ್ನು ಬಳಸೋದು ಕಷ್ಟ. ಮೊದಲನೇದಾಗಿ, ಸೂರ್ಯ ಯಾವ ನಕ್ಷತ್ರದ ಬಳಿ ಇದ್ದಾನೆ ಅನ್ನೋದು ನೇರವಾಗಿ ಕಾಣೋಲ್ಲ- ಸೂರ್ಯನ ಬೆಳಕಿನಿಂದ. ಹಾಗಾಗಿ, ಸೂರ್ಯ ಹುಟ್ಟುವ ಮೊದಲು ಪೂರ್ವದಲ್ಲಿ ಯಾವ ನಕ್ಷತ್ರಗಳು ಕಾಣುತ್ತವೆ, ಸಂಜೆ ಮುಳುಗಿದ ನಂತರ ಯಾವ ನಕ್ಷತ್ರಗಳು ಕಾಣುತ್ತವೆ ಎನ್ನೋದನ್ನು ನೋಡಿ, ಸೂರ್ಯ ಯಾವ ನಕ್ಷತ್ರದ ಭಾಗದಲ್ಲಿದಾನೆ ಅನ್ನೋದನ್ನ ಕಂಡುಹಿಡೀಬೇಕಾಗತ್ತೆ. ಆದರೆ, ಚಂದ್ರನ ವಿಷಯ ಹಾಗಲ್ಲ. ಮೊದಲನೆದಾಗಿ, ೨೭ ನಕ್ಷತ್ರಗಳನ್ನ ಮಾಡಿರೋದೇ ಚಂದ್ರನ ಚಲನೆಯ ಮೇಲೆ ಆದ್ದರಿಂದ, ಪ್ರತಿದಿನ ಅವನು ಒಂದು ನಕ್ಷತ್ರದ ಬಳಿ ಇರುತ್ತಾನೆ! ಮತ್ತೆ, ಮಳೆಗಾಲವನ್ನು ಬಿಟ್ಟು, ಉಳಿದ ತಿಂಗಳುಗಳಲ್ಲಿ, ಸುಮಾರು ತಿಂಗಳಲ್ಲಿ ೨೫ ದಿನವಾದರೂ, ಚಂದ್ರನನ್ನು ನೋಡಬಹುದು.

ಅದೂ ಅಲ್ಲದೆ, ಅರ್ಧ ತಿಂಗಳು ಚಂದ್ರ ಹೆಚ್ಚುತ್ತಾನೆ, ಇನ್ನರ್ಧಕ್ಕೆ ಕುಗ್ಗುತ್ತಾನೆ. ಆದ್ದರಿಂದ, ತಿಂಗಳನ್ನು ಎರಡು ಪಕ್ಷ - ಒಂದೊಂದು ಪಕ್ಷಕ್ಕೆ ೧೫ ತಿಥಿ - ಸುಮಾರು ಒಂದು ತಿಥಿ ಒಂದು ದಿನದಷ್ಟೇ. ಹಾಗೇ, ಪ್ರತಿದಿನ ಚಂದ್ರ ಒಂದು ನಕ್ಷತ್ರದ ಬಳಿ ಇರುವುದರಿಂದ, ಆಯಾ ದಿನಕ್ಕೆ ಒಂದು ತಿಥಿ, ಒಂದು ನಕ್ಷತ್ರ ಕೊಟ್ಟರೆ, ಆ ದಿನವನ್ನು ಕ್ಯಾಲೆಂಡರ್ ನಲ್ಲಿ ಸೂಚಿಸುವುದು ಸುಲಭವಾಯಿತು. ಇನ್ನುವರ್ಷದ ೧೨ ತಿಂಗಳುಗಳನ್ನು ಆಯಾ ತಿಂಗಳು ಚಂದ್ರ ಯಾವ ನಕ್ಷತ್ರದ ಬಳಿ ಇರುತ್ತಾನೋ, ,ಅದರಿಂದ ಕರೆದರು. ಉದಾಹರಣೆಗೆ ಚಂದ್ರ ಚಿತ್ತಾ ನಕ್ಷತ್ರದ ಬಳಿಯಿದ್ದು ಆಗುವ ಹುಣ್ಣೀಮೆ ಚೈತ್ರ ಮಾಸಕ್ಕೆ ಸೇರಿದ್ದು. ಹಾಗೇ, ಚಂದ್ರ ಹುಣ್ಣಿಮೆಯಂದು ಅಶ್ವಿನಿ ನಕ್ಷತ್ರದ ಬಳಿ ಇದ್ದರೆ, ಅದು ಆಶ್ವಯುಜ ಮಾಸ ಅಷ್ಟೇ. ಉಳಿದ ಎಲ್ಲಾ ತಿಂಗಳಿಗೂ ಹೀಗೇ ಅರ್ಥ ಕಲ್ಪಿಸಬಹುದು.

ಸರಿ; ಬರಿ ತಿಥಿ, ಮಾಸ, ನಕ್ಷತ್ರಗಳದ್ದೇ ಕಾರುಬಾರಾಯ್ತು ಅಂತೀರಾ? ನಾನು ಹೀಗೇ ಎಲ್ಲೆಲ್ಲಿಗೋ ಹೋಗುತ್ತಾ ಇದ್ದರೆ, ಇವನು ಬರೆಯೋದು ಓದೋದು ದುರ್ಭಿಕ್ಷದಲ್ಲಿ ಅಧಿಕಮಾಸ ಇದ್ದಹಾಗೆ ಅಂದು ಬಿಟ್ಟರೆ ಕಷ್ಟ! ಅದಕ್ಕೆ ಮೊದಲೆ ಅಧಿಕಮಾಸದ ವಿವರ ಕೊಟ್ಟುಬಿಡ್ತೀನಿ. ಸುಮಾರು ೨೯.೫ ದಿನಗಳಿರುವ ೧೨ ತಿಂಗಳು ಎಂದರೆ, ಒಂದು ಚಾಂದ್ರಮಾನ ವರ್ಷದಲ್ಲಿ ೩೫೪ ದಿವಸ. ಅಂದರೆ, ಚೈತ್ರ ಶುದ್ಧ ಪಾಡ್ಯದಂದು ಆಚರಿಸುವ ಈ ವರ್ಷದ ಯುಗಾದಿಗೂ, ಅದೇ ದಿವಸ ಆಚರಿಸುವ ಮುಂದಿನ ವರ್ಷದ ಯುಗಾದಿಗೂ ಮಧ್ಯ ೩೫೪ ದಿವಸ ಅಷ್ಟೇ; ಆದರೆ, ಸರಾಸರಿ ಕಾಲಗಳ ವರ್ಷ ೩೬೫ ದಿನದ್ದು ಎಂದು ಆಗಲೇ ಹೇಳಿದ್ದೇನೆ. ಉದಾಹರಣೆಗೆ ಈ ವರ್ಷ ಮಾರ್ಚ್ ೩೧ಕ್ಕೆ ಇತ್ತು ಯುಗಾದಿ ಅಂತ ಇಟ್ಟುಕೊಳ್ಳಿ. ಮುಂದಿನ ವರ್ಷ ಅದು ಮಾರ್ಚ್ ೨೦ ಕ್ಕೆ ಬರುತ್ತೆ. ಅದರ ಮುಂದಿನ ವರ್ಷ ಮಾರ್ಚ್ ೯ಕ್ಕೆ - ಅದರ ಮುಂದಿನ ವರ್ಷ ಫೆಬ್ರವರಿ ೨೭ಕ್ಕೆ! ಹೀಗೇ ಹೋಗ್ತಾ ಹೋದರೆ, ಹತ್ತು ವರ್ಷ ಆಗೋ ಹೊತ್ತಿಗೆ, ನಮ್ಮ ಯುಗಾದಿ ಬೇಸಿಗೆಯ ಆರಂಭದಲ್ಲಿ ಬರೋ ಬದಲು ಚಳಿಗಾಲದ ಆರಂಭಕ್ಕೆ ಹೊರಟು ಹೋಗುತ್ತಲ್ಲವೇ? ಆಗ, ಉಗಾದಿಗೆ ಉಗುಳುನೀರು ಅನ್ನೋ ಗಾದೆಗಳೆಲ್ಲ ಸುಳ್ಳಾಗಿಹೋಗಲ್ವೇ? ವೇದ ಸುಳ್ಳಾಗಬಹುದು, ಆದರೆ ಗಾದೆ ಸುಳ್ಳಾಗೋಲ್ಲ, ಅಲ್ವಾ? ಹಾಗಿದ್ದರೆಇದಕ್ಕೆ ಏನು ಮಾಡೋದು ಅಂತೀರಾ?

ಆದರೆ, ನಿಮಗೆ ಯಾವತ್ತಾದರು ಡಿಸೆಂಬರ್‌ನಲ್ಲಿ ಯುಗಾದಿ ಹಬ್ಬ ಮಾಡಿರೋ ನೆನಪಿದಿಯೇ? ಯೋಚಿಸ್ತಾ ತಲೇ ಕೆರ್ಕೋಬೇಡಿ. ಯಾಕಂದ್ರೆ ಅದು ಯಾವತ್ತೂ ಆಗಿಲ್ಲ, ಆಗೋದೂ ಇಲ್ಲ! ಈ ತೊಂದರೆ ಅಗೋದು ಚಂದ್ರನ ವರ್ಷಕ್ಕೂ , ಸೂರ್ಯನ ವರ್ಷಕ್ಕೂ ಇರೋ ೧೧ ದಿವಸದ ಅಂತರದಿಂದ ಅಂತ ನಿಮಗೀಗಾಗಲೆ ಮನವರಿಕೆಯಾಗಿರಬೇಕು. ಇದನ್ನ ಹೇಗಪ್ಪಾ ಸರಿ ಮಾಡೋದು? ಲೆಕ್ಕ ಹಾಕಿ - ೧೨ ತಿಂಗಳಿಗೆ ೧೧ ದಿನ ಹಿಂದೆ ಬೀಳೋದಾದರೆ, ಒಂದು ತಿಂಗಳಿಗೆ ೧೧/೧೨ ದಿನ ಆಯಿತು. ಈ ಲೆಕ್ಕದಲ್ಲಿ, ಇಪ್ಪತ್ತೊಂಬತ್ತೂವರೆ ದಿವಸ ಹಿಂದೆ ಬೀಳೋಕೇ ಎಷ್ಟು ತಿಂಗಳು ಬೇಕು? ಸುಮಾರು ೩೨.೧೮ ತಿಂಗಳು.

ಅಂದರೆ ಏನಾಯ್ತು? ಸುಮಾರು ೩೨-೩೩ ತಿಂಗಳಿಗೆ ಒಂದು ಹೆಚ್ಚುವರಿ ತಿಂಗಳನ್ನ ಸೇರಿಸಿದರೆ, ನಾವು ಯುಗಾದಿ ಚಳಿಗಾಲಕ್ಕೆ ಓಡಿಹೋಗೋದನ್ನ ತಪ್ಪಿಸಬಹುದು. ಮೊದಲು ಮಾಡಿದ ಲೆಕ್ಕವನ್ನೇ ಇನ್ನೊಂದು ಸಲ ಮಾಡೋಣ. ಮೊದಲ ವರ್ಷದ ಯುಗಾದಿ ಮಾರ್ಚ್ ೩೧ಕ್ಕೆ. ಎರಡನೇ ವರ್ಷದ ಯುಗಾದಿ ಮಾರ್ಚ್ ೨೦ಕ್ಕೆ (ಈಗ ೧೨ ತಿಂಗಳು ಮುಗಿದಿದೆ). ಮೂರನೇ ವರ್ಷದ ಯುಗಾದಿ ಮಾರ್ಚ್ ೯ಕ್ಕೆ (ಈಗ ೨೪ ತಿಂಗಳು ಮುಗಿದವು). ಇನ್ನು ಮುಂದಿನ ವರ್ಷ - ಓ, ಅಷ್ಟರೊಳಗೆ ೩೩ ತಿಂಗಳು ದಾಟಿ ಹೋಗುತ್ತವೆ ಅಲ್ವಾ? ಹಾಗಿದ್ದರೆ ನಾವು ಒಂದು ಹೆಚ್ಚುವರಿ ತಿಂಗಳನ್ನ ಸೇರಿಸಿಬಿಡೋಣ. ಈ ಹೆಚ್ಚುವರಿ ತಿಂಗಳನ್ನು ಸೇರಿಸದಿದ್ದರೆ, ಹೊಸವರ್ಷದ ಯುಗಾದಿ ಫೆಬ್ರವರಿ ೨೭ಕ್ಕೆ ಬರಬೇಕಿತ್ತು. ಆದರೆ, ನಾವು ಒಂದು ತಿಂಗಳನ್ನು ನಡುವೆ ಜಾಣತನದಿಂದ ಸೇರಿಸಿಬಿಟ್ಟೆವಲ್ಲ? ಹಾಗಾಗಿ ಮೂರನೆ ವರ್ಷದ ಯುಗಾದಿ, ಅವತ್ತಿಗೆ ಮೂವತ್ತು ದಿನ ಮುಂದೆ, ಅಂದರೆ ಮಾರ್ಚ ೨೯ಕ್ಕೆ ಬರುತ್ತೆ! ಅದರ ಮುಂದಿನ ವರ್ಷ ಮಾರ್ಚ್ ೧೮ಕ್ಕೆ, ಅದರ ಮುಂದಿನ ವರ್ಷ ಮಾರ್ಚ್ ೧೧ಕ್ಕೆ, ಅದರ ಮುಂದಿನ ವರ್ಷ - ಮರೀಬೇಡಿ - ೩೨-೩೩ ತಿಂಗಳು ಕಳೆದಿವೆ ಆಗಲೆ, ಹಾಗಂದ್ರೆ, ಏನರ್ಥ? ಯುಗಾದಿ ಫೆಬ್ರವರಿ ೨೮ಕ್ಕೆ ಬದಲಾಗಿ, ಮಾರ್ಚ್ ೩೦ಕ್ಕೆ ಬರುತ್ತೆ.

ಈ ಜಾಣತನದಿಂದೇನಾಯಿತು ನೋಡಿ? ಯುಗಾದಿ ಹಬ್ಬ ಚಳಿಗಾಲಕ್ಕೆ ಹೋಗೋದಿಲ್ಲ, ಉಗಾದಿಗೆ ಉಗುಳುನೀರೂ ತಪ್ಪೋದಿಲ್ಲ. ಇಷ್ಟೇ ಅಧಿಕ ಮಾಸದ ಗುಟ್ಟು. ಚಂದ್ರನ ವರ್ಷ-ಸೂರ್ಯನ ವರ್ಷಗಳು ಆದಷ್ಟೂ ಒಂದಕ್ಕೊಂದಕ್ಕೆ ಬಿಡದೇ ಹೊಂದಿಕೆಯಾಗಿರುವಂತೆ ಮಾಡಿರುವ ಪದ್ಧತಿ ಇದು.

ಇದು ಭಾರತದಲ್ಲಿ ಮಾತ್ರವಲ್ಲದೆ, ಯಹೂದಿಗಳ ಹಿಬ್ರೂ ಪಂಚಾಂಗದಲ್ಲೂ ರೂಢಿಯಲ್ಲಿದೆ. ಅಧಿಕ ಮಾಸ ಯಾವಾಗ ಬರುತ್ತೆ ಅನ್ನೋದರ ಲೆಕ್ಕಾಚಾರ ಸ್ವಲ್ಪ ಬೇರೆಯಾದರೂ, ಸರಾಸರಿ ಎರಡೂ ಸಮಾಂತರವಾಗಿ ಹೋಗುತ್ತವೆ. ಇದನ್ನ ಯಾರು ಕೊಟ್ಟು-ಯಾರು ಕೊಂಡರೋ ಗೊತ್ತಿಲ್ಲ ನನಗೆ; ಅಥವ ಎರಡೂ ಕಡೆ ಬೇರೆಬೇರೆಯಾಗೇ ಈ ಸತ್ಯವನ್ನು ಕಂಡುಕೊಂಡಿರಲೂಬಹುದು.

ಈ ಎಲ್ಲ ಲೆಕ್ಕಾಚಾರಗಳಿರುವುದರಿಂದ, ಇನ್ನೊಂದು ಚಕ್ರವೂ ಪ್ರಾರಂಭವಾಗುತ್ತೆ. ಈ ಅಧಿಕ ಮಾಸಗಳನ್ನು ಹಾಕಿದಾಗಲೂ, ಪ್ರತಿ ವರ್ಷ ಚಂದ್ರನ ವರ್ಷವೂ ಸೂರ್ಯನ ವರ್ಷವೂ ಪೂರ್ತಿ ಸರಿಯಾಗಿ ಒಂದುಗೂಡದು ಅನ್ನೋದನ್ನು ನೀವು ಗಮನಿಸಿರಬಹುದು. ಆದರೆ, ೧೯ ವರ್ಷಗಳಲ್ಲಿ, ಇವೆರಡೂ ಮತ್ತೆ ಸೇರುತ್ತವೆ. ಅಂದರೆ, ಪ್ರತಿ ೧೯ ವರ್ಷಗಳಲ್ಲಿ ಕ್ಯಾಲೆಂಡರ್ ದಿನಾಂಕವೂ, ಚಂದ್ರನ ತಿಥಿ-ನಕ್ಷತ್ರಗಳೂ ಒಂದುಗೂಡುತ್ತವೆ. ಅಂದರೆ, ೧೯೮೦ರ ಜನವರಿ ಒಂದರಂದು ಚಂದ್ರ ಶುಕ್ಲ ಪಾಡ್ಯ, ಅಶ್ವಿನೀ ನಕ್ಷತ್ರದಲ್ಲಿ ಇರುತ್ತಾನೆ ಅಂದುಕೊಳ್ಳಿ (ಸುಮ್ಮನೇ ಅಂದುಕೊಳ್ಳಿ - ನಾನೇನೂ ಪಂಚಾಂಗ ನೋಡಿಲ್ಲ!) ; ೧೯೯೯ ರ ಜನವರಿ ಒಂದರಂದೂ ಕೂಡ ಶುಕ್ಲ ಪಾಡ್ಯ, ಅಶ್ವಿನಿ ನಕ್ಷತ್ರವಾಗಿರುತ್ತೆ. ಹಾಗೇ ೨೦೧೮, ಜನವರಿ ಒಂದರಂದೂ ಅದೇ ತಿಥಿ, ನಕ್ಷತ್ರ! ಇದು ನಿದಾನವಾಗಿ ದೂರ ಸರಿಯುವುದಾದರೂ, ಒಬ್ಬ ವ್ಯಕ್ತಿಯ ಜೀವಿತ ಕಾಲದಲ್ಲಿ ಅಳತೆ ಮಾಡುವಷ್ಟ ಬದಲಾಗದು ಎಂದೇ ಹೇಳಬಹುದು. ೧೯-೨೦ನೇ ಶತಮಾನದಲ್ಲಿ, ಇನ್ನೂ ಜನನ-ಪತ್ರಗಳು ಇಲ್ಲದ ಸಮಯದಲ್ಲಿ, ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕ ತಿಳಿಯದೆ, ಬರೀ ತಿಥಿ-ವಾರ-ನಕ್ಷತ್ರ-ಸಂವತ್ಸರಗಳಿರುವ ಜಾತಕಗಳಿದ್ದಾಗ, ಈ ಹತ್ತೊಂಬತ್ತು ವರ್ಷದ ಚಕ್ರವನ್ನು ಗಮನದಲ್ಲಿರಿಸಿ ಅವರು ಹುಟ್ಟಿದ ದಿನವನ್ನು ಕಂಡುಹಿಡಿದ ಸಂದರ್ಭಗಳೂ ಇವೆ. ಪುರಂದರದಾಸರು ಅಥವ ತ್ಯಾಗರಾಜರು ಮೊದಲಾದ ಪುರಾತನರು ಇಂತಹ ತಿಂಗಳು ಇಂತಹ ತಾರೀಕು ಜನಿಸಿದರು, ಅಥವಾ ಮರಣಿಸಿದರು ಎಂದು ಹೇಳುವಾಗಲೂ ಈ ಹತ್ತೊಂಬತ್ತು ವರ್ಷದ ಚಕ್ರ ತನ್ನ ಕೈಚಳಕ ತೋರಿರುತ್ತದೆ.

-ಹಂಸಾನಂದಿ

ಚಿತ್ರ ಕೃಪೆ - ಇಂಗ್ಲಿಷ್ ವಿಕಿಪಿಡಿಯ


(ಸುಮಾರು ಮೂರು ವರ್ಷಗಳ ಮೊದಲು ಬರೆದಿದ್ದಿದು. ಕೆಲವು ಚಿಕ್ಕಪುಟ್ಟ ಬದಲಾವಣೆ/ತಿದ್ದುಪಡಿಗಳೊಂದಿಗೆ ಹಾಕಿದ್ದೇನೆ)

Sunday, July 18, 2010

ಗುರುಪೂಜಾ ಭಾಷಣ

ದಿನಾಂಕ ೧೮.೭.೨೦೧೦ ಭಾನುವಾರದಂದು ಸಂಘದ ಒಂದು ಗುರುಪೂಜಾ ಉತ್ಸವದಲ್ಲಿ ನಾನು ಮಾಡಿದ ಭಾಷಣದ ಧ್ವನಿ ಇಲ್ಲಿದೆ.
-ಶ್ರೀಧರ್

ಆತ್ಮೀಯ ವೇದಸುಧೆಯ ಅಭಿಮಾನಿಗಳೇ ನಮಸ್ತೆ.

ವೇದಸುಧೆಯು ಜನರಿಗೆ ಹತ್ತಿರವಾಗಬೇಕೆಂದು ನಿತ್ಯವೂ ಒಂದಿಷ್ಟು ಪ್ರಯತ್ನ ಸಾಗಿದೆ. ಇದರ ಫಲವಾಗಿ ಈಗಾಗಲೇ ಹಲವು ಮಿತ್ರರು ತಮ್ಮ ತಮ್ಮ ಹೆಸರಿನಲ್ಲಿ ವೇದಸುಧೆಗೆ ತಾವೇ ನೇರವಾಗಿ ಬರೆಯುತ್ತಿದ್ದಾರೆ. ಮುಖ್ಯಪುಟದಲ್ಲಿ ಈ ಎಲ್ಲಾ ಲೇಖನಗಳು ಪ್ರಕಟವಾಗುತ್ತವೆ. ಅಲ್ಲದೆ ಅವರವರ ಅಭಿರುಚಿಗೆ ತಕ್ಕಂತೆ ವೇದಸುಧೆಯ ಉಪಯೋಗ ಪಡೆಯಲು ನಾಲ್ಕು ಪ್ರತ್ಯೇಕ ಪುಟಗಳು ಆರಂಭಗೊಂಡಿದೆ.

1.ಮುಖಪುಟ: ಇದು ಎಲ್ಲರಿಗಾಗಿ
2.ಎಲ್ಲರಿಗಾಗಿ ವೇದ-ಈ ವಿಷಯದಲ್ಲಿ ಶ್ರೀ ಸುಧಾಕರಶರ್ಮರ ಉಪನ್ಯಾಸಗಳು
3.ವಿವೇಕವಾಣಿ-ವಿವೇಕಾನಂದ-ರಾಮಕೃಷ್ಣರ ವಿಚಾರಗಳು
4.ವೇದಮಂತ್ರಗಳ ಪುಟ
5.ಭಾವಸಂಗಮ

ಪ್ರಶ್ನೋತ್ತರಗಳು, ಚಿಂತನ-ಮಂಥನ,ಉಭಯಕುಶಲೋಪರಿ-ಹೀಗೆ ಇನ್ನೂ ಆರು ಪುಟಗಳು ಸಧ್ಯದಲ್ಲೇ ಆರಂಭಗೊಳ್ಳುವುವು.
ನಿಮ್ಮೆಲ್ಲರ ಸಹಕಾರವು ಎಂದಿನಂತೆ ನಿರೀಕ್ಷಿಸುತ್ತಾ....ನಿಮ್ಮ ಸಲಹೆ/ಪ್ರತಿಕ್ರಿಯೆಗಳನ್ನು ವಿಶೇಷ ಪುಟಗಳಲ್ಲಿ ಬರೆಯಲು ಅನುಕೂಲವಿಲ್ಲದ್ದರಿಂದ ಇದೇ ಬರಹದಡಿ ಯಾವುದೇ ಪುಟಗಳಬಗ್ಗೆ ಪ್ರತಿಕ್ರಿಯೆ/ಸಲಹೆ ನೀಡಲು ಅವಕಾಶವಿರುತ್ತದೆ.
ಮತ್ತೆ ಮತ್ತೆ ಭೇಟಿಯಾಗೋಣ,
-ಶ್ರೀಧರ್

Saturday, July 17, 2010

ಯೋಚಿಸಲೊ೦ದಿಷ್ಟು..... ೩

೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ,ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ,ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯ ಹಸ್ತವನ್ನು ಚಾಚಿದಾಗ, ನಮ್ಮ ಬದುಕು ಸು೦ದರವೂ ಹಾಗೂ ಅರ್ಥಪೂರ್ಣವೂ ಆಗುತ್ತದೆ.
೨.ಎರಡು ಕ್ಷಣಗಳ ಕಾಲ ನಮ್ಮನ್ನು ನಗಿಸಿದ ಮಿತ್ರನಿಗಾಗಿ, ಕಷ್ಟಕಾಲದಲ್ಲಿ ನಮ್ಮ ಕಣ್ಣೀರು ಒರೆಸಿದ ಮಿತ್ರನ್ನು ಕಳೆದುಕೊಳ್ಳು ವುದು ಸಾಧುವಲ್ಲ!

೩. ಸಾಧನೆಗೆ ಅನುಭವದ ಅಗತ್ಯವಿಲ್ಲ. ಅದಕ್ಕೆ ಛಲದ ಮತ್ತು ಬುಧ್ಧಿಶಕ್ತಿಯ ಅಗತ್ಯವಿದೆ!

೪. ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪಿಸುವುದು ಒಳ್ಳೆಯದೇ. ಆದರೆ ಅದು ಮು೦ದಿನ ತಪ್ಪಿಗೆ ರಹದಾರಿಯಾಗಬಾರದು!

೫. “ ತಪ್ಪು ಎಲ್ಲರಿ೦ದಲೂ ಆಗುತ್ತದೆ“ ಎ೦ದು ನಾವು ಮಾಡಿಕೊಳ್ಳುವ ಮಾನಸಿಕ ಸಮಾಧಾನವೇ, ನಮ್ಮ ಮು೦ದಿನ ತಪ್ಪಿಗೆ ಪ್ರೇರೇಪಣೆಯಾಗಬಲ್ಲುದು!

೬.ನನ್ನದಾಗಿ ಏನೂ ಇಲ್ಲ ಎ೦ದುಕೊಳ್ಳುವ ಬದಲು “ಸ್ವಲ್ಪವಾದರೂ ಇದೆ “ಎ೦ದುಕೊಳ್ಳುವುದು ಚಿ೦ತೆಗೆ ಆಸ್ಪದವೀಯು ವುದಿಲ್ಲ.

೭.“ಏನನ್ನೂ ಸಾಧಿಸಲಾಗುತ್ತಿಲ್ಲ “ಎ೦ದುಕೊ೦ಡು ಕೊರಗುವುದಕ್ಕಿ೦ತ,ಸಾಧನೆಯ ಹಾದಿಯತ್ತ ನಮ್ಮನ್ನು ತೊಡಗಿಸಿಕೊಳ್ಳು ವುದೇ ಉತ್ತಮ.

೮. ಯಾವುದೇ ವಿಚಾರದ ಬಗ್ಗೆಯೂ ತೀವ್ರ ಚಿ೦ತನೆ ತರವಲ್ಲ. ಅದು ನಮ್ಮ ಸಾಧನೆಯ ಹಾದಿಯನ್ನು ಗೊ೦ದಲಮಯವಾಗಿಸಬಲ್ಲುದು!

೯. .ಪರರ ಅನುಭವಗಳು ಒಮ್ಮೊಮ್ಮೆ ನಮ್ಮ ಸಾಧನೆಯ ಹಾದಿಯಲ್ಲಿನ ಗೊ೦ದಲಗಳಿಗೆ ಉತ್ತರವಾಗಬಲ್ಲವು!

೧೦. ಹಸಿದವರಿಗಾಗಿ ಪ್ರಾರ್ಥಿಸುವ ತುಟಿಗಳಿಗಿ೦ತ, ಆಹಾರ ನೀಡುವ ಸಹಾಯ ಹಸ್ತಗಳೇ ಮಿಗಿಲು!

11. ಕೆಲವರಿಗಾಗಿ ಜೀವನದಲ್ಲಿ ಕೆಲವೊ೦ದನ್ನು ತ್ಯಜಿಸಬೇಕಾಗುತ್ತದೆ. ಆದರೆ ಕೆಲವೊ೦ದಕ್ಕಾಗಿ ಕೆಲವರನ್ನು ತ್ಯಜಿಸಬಾರದು. ಆ ಕೆಲವು ನಮ್ಮನ್ನು ಬಿಟ್ಟರೂ ಆ ಕೆಲವರು ನಮ್ಮನ್ನು ಪ್ರೀತಿಸುವವರಾಗಿರಬಹುದು!

೧೨.ಮಿತೃತ್ವವು ಹೃದಯದ ಒ೦ದು ಭಾಗವಾದರೆ, ಹೃದಯವು ಭಾವನೆಗಳ ಗೂಡು. ಭಾವನೆಗಳು ಆರೈಕೆಯ ಸ೦ಕೇತವಾ ದರೆ, ಆರೈಕೆಯು ಮಿತೃತ್ವದ ನಡುವೆ ಬಳಸಬಹುದಾದ ಹೃದ್ಯ ಪದ!

13. ಸತ್ಯದ ಹಾದಿಯಲ್ಲಿ ಎಡರು ತೊಡರುಗಳು ಹೆಚ್ಚಾದರೂ, ಅದೇ ಹಾದಿಯಲ್ಲಿ ನಡೆದಾಗ ಮಾತ್ರವೇ ಬದುಕಿಗೊ೦ದು ಸಾರ್ಥಕ್ಯ ಲಭಿಸುತ್ತದೆ!

೧೪.ನಮಗಿ೦ತ ಉನ್ನತ ಮಟ್ಟದಲ್ಲಿರುವವರನ್ನು ಗಮನಿಸುತ್ತಾ,ನಮ್ಮ ಸಾಧನೆಯ ಹಾದಿಯನ್ನು ಆಗ್ಗಾಗ್ಗೆ ಪರಾಮರ್ಶಿಸಿ ಕೊಳ್ಳುತ್ತಿರಬೇಕು.

೧೫. ಆರ್ಥಿಕವಾಗಿ ನಮಗಿ೦ತ ಕೆಳಮಟ್ಟದಲ್ಲಿರುವವರನ್ನು ಗಮನಿಸುತ್ತಾ, ನಮ್ಮ ಬೇಕು-ಬೇಡಗಳ ಪಟ್ಟಿಯನ್ನು ಅ೦ದಾಜು ಮಾಡಬೇಕು.

೧೬. ದೇವರ ಮೇಲೆ ಹಾಕಲಾಗುವ ನಮ್ಮ ಸ೦ಪೂರ್ಣ ಜವಾಬ್ದಾರಿ ನಮ್ಮನ್ನು ಅತ್ಯ೦ತ ನಿಷ್ಕ್ರಿಯರನ್ನಾಗಿ ಮಾಡುತ್ತದೆ!

೧೭. ಅನುಭವಿಗಳೆಲ್ಲಾ ವೃಧ್ಧರಲ್ಲ, ವೃಧ್ಧರೆಲ್ಲಾ ಅನುಭವಿಗಳಲ್ಲ!

೧೮. ಸ್ವತ: ಸಾಧಿಸದೇ, ಬೇರೊಬ್ಬರ ಸಾಧನೆಯ ಫಲವನ್ನು ಉಣ್ಣುವುದು ಸೋಮಾರಿತನ!

೧೯. ಉಪಕರಿಸಿ, ಫಲ ಅಪೇಕ್ಷಿಸುವುದು ಸಾಧುವಲ್ಲ, ಅದರಲ್ಲಿಯೂ, ಬೇರೊಬ್ಬರಿಗೆ ಸಹಾಯ ಮಾಡದೇ, ಅವರಿ೦ದ ಸಹಾಯ ಅಪೇಕ್ಷಿಸುವುದು ಅಸಾಧುವಾದುದು!

೨೦.ದೀರ್ಘಕಾಲ ಹೊಗೆಯಾಡುತ್ತಿರುವುದಕ್ಕಿ೦ತಲೂ ಕ್ಷಣಕಾಲ ದೇದೀಪ್ಯಮಾನವಾಗಿ ಬೆಳಗುವುದು ಲೇಸು.

ಮೂಕ ರೋದನ !

ವೇದದ ಮಹತ್ವವನ್ನರಿಯುವ ಮತ್ತು ವೇದ ಸಂತುಲಿತ ಜೀವನವನ್ನು ನಡೆಸಲು ಬಯಸುವ ಎಲ್ಲ ದೇಶಬಾಂಧವರ ಆದ್ಯ ಕರ್ತವ್ಯ ವೇದದಷ್ಟೇ ಮಹತ್ವವನ್ನು ಪಡೆದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿರುವ ಗೋಮಾತೆಯ ರಕ್ಷಣೆ. ಅದರಲ್ಲೂ ಭಾರತೀಯ ಗೋ ತಳಿಗಳು ದಿನೇ ದಿನೇ ಕ್ಷೀಣಿಸುತ್ತಿವೆ. ಉತ್ತರಕರ್ನಾಟಕದ ಬಹುಭಾಗಗಳಲ್ಲಿ ದಲ್ಲಾಳಿಗಳಿಗೆ ರಾಸುಗಳ ಮಾರಾಟ್ ನಡೆದೇ ಇದೆ. ಇದೀಗ ಕರ್ನಾಟಕ ಸರಕಾರ ಗೋನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಆಕಳುಗಳನ್ನು ಕಾಳಸಂತೆಯಲ್ಲೋ ಅಥವಾ ಹೊರನಾಡಿಗರಿಗೋ, ಪರನಾಡಿಗರಿಗೋ ಮಾರಾಟಮಾಡುತ್ತಾರೆ. ಬದುಕಲು ಗಂಜಿಹುಡುಕುವ ಸ್ಥಿತಿಯಲ್ಲಿರುವ ರೈತ ತನ್ನುಳಿವಿಗಾಗಿ ಇಂತಹ ಮುಗ್ಧ, ಸಾತ್ವಿಕ ಜೀವಿಗಳನ್ನು ಬಲಿಕೊಡುತ್ತಿದ್ದಾನೆ. ಇದನ್ನು ತಪ್ಪಿಸಲು ಮಠ-ಮಾನ್ಯಗಳು ಪಹರೆ ನಡೆಸುತ್ತಿದ್ದರೂ, ಜನ ಜಾಗ್ರತಿ ಹಮ್ಮಿಕೊಂಡಿದ್ದಾರೂ ಇದಿನ್ನೂ ಪೂರ್ತಿಯಾಗಿ ಅಳವಡಿಕೆಯಾಗಿಲ್ಲ.

ದಿನವೂ ಹುಲ್ಲು-ನೀರನ್ನು ಸ್ವೀಕರಿಸುತ್ತ ಅಮೃತತುಲ್ಯ ಹಾಲನ್ನು ನಮಗೀಯುವ ಗೋವು ನಮಗೆಲ್ಲ ಪ್ರಾತಃಸ್ಮರಣೀಯ, ಮಾತ್ರವಲ್ಲ ನೀವೆಲ್ಲ ತಿಳಿದಂತೆ ಗೋವಿನಲ್ಲಿಯೇ ಎಲ್ಲಾ ದೇವತೆಗಳ ವಾಸವಿದೆ ಎಂದು ಭಾವಿಸಿದ್ದೇವೆ ನಾವು. ನಮ್ಮ ಗೃಹಪ್ರವೇಶಕ್ಕಾಗಲೀ ಒಳ್ಳೆಯ ಕಾರ್ಯಕ್ರಮಗಳಲ್ಲಾಗಲೀ ಗೋಪೂಜೆ ಕಡ್ಡಾಯವಾಗಿದೆ -ಇದು ನಮ್ಮ ಆರ್ಷೇಯ ವೇದ ಸಂಸ್ಕೃತಿ. ಉಂಡಮನೆಗೆ ಎರಡು ಬಗೆಯಬೇಡ ಎನ್ನುವುದು ಗಾದೆ, ಆದರೆ ಹಾಲುಂಡ ಮನೆಯನ್ನೇ ನಾವು ಕೆಡವಲು ಹೊರಟಿದ್ದೇವೆ. ವನ್ಯ ಪ್ರಾಣಿಗಳಿಗಾದರೂ ರಕ್ಷಣೆ ಇದೆ ಆದರೆ ನಮ್ಮ ನಡುವೆಯೇ ಇದ್ದು ನಿತ್ಯವೂ ನಮಗೆ ಹಾಲನ್ನು ಸುರಿಸಿ ಬದುಕು ಹಸನಾಗಿಸುವ ಗೋಮಾತೆಯನ್ನು ಮಾತ್ರ ನಾವು ಉಡಾಫೆಮಾತುಗಳಿಂದ ಇನ್ನೂ ಇನ್ನೂ ಇನ್ನೂ ದೂರ ಇಟ್ಟಿದ್ದೇವೆ.

ಕಾಲಘಟ್ಟದಲ್ಲಿ ವೇದದ ತತ್ವ ಸಾರುತ್ತದೆ - ಬೆಳಿಗ್ಗೆ ಎದ್ದು ಶೌಚಾದಿ ನಿತ್ಯಕರ್ಮ ಮುಗಿಸಿ ರಾತ್ರಿ ಕಂಡ ಕೆಟ್ಟ ಕನಸಿನಿಂದ ನೊಂದಿದ್ದರೆ ಅದನ್ನು ಗೋವಿನ ಕಿವಿಯಲ್ಲಿ ಹೇಳಿ ಪ್ರಾರ್ಥಿಸು ! ತಮಗೆಲ್ಲ ಇದು ತಿಳಿದಿರಬಹುದು. ನನ್ನ ತಂದೆಯ ದಿನಚರಿ ಇವತ್ತಿಗೂ ಇದೇ ಇದೆ. ಇದರರ್ಥ ಗೋವು ನಮ್ಮ ಅಹವಾಲನ್ನು ಸ್ವೀಕರಿಸುತ್ತದೆ ಎಂದಲ್ಲವೇ? ಅದೇ ಬಯಲುನಾಡಿನ ಮಠವೊಂದರಲ್ಲಿ ಮೂಕಪ್ಪ ಸ್ವಾಮಿಗಳೆಂಬ ಹೆಸರಿನಲ್ಲಿ ಯಾವ ಒಬ್ಬ ಸನ್ಯಾಸಿಗೂ ಕಡಿಮೆ ಇರದ ಆಚರಣೆ ತೋರುವ ಮೂಕ ಬಸವ ಸ್ವಾಮಿಗಳನ್ನು ನಾವು ನೋಡುತ್ತೇವೆ. ಅಂದಮೇಲೆ ಕೇವಲ ಮಾತು ಬಂದರೆ ಮಾತ್ರ ಎಲ್ಲವೂ ತಿಳಿಯುತ್ತದೆ ಇಲ್ಲದಿದ್ದರೆ ಇಲ್ಲ ಎಂಬ ನಮ್ಮ ಭಾವನೆ ಸಲ್ಲ. ಆದರೂ ದೈವ ಕೊಟ್ಟ ಆ ಶರೀರದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಬೇಕಾಗಿ ಹೋರಾಡುವ ಅನುಕೂಲಗಳಿಲ್ಲ.

ಅನುಭಾವಿಗಳಾದ ತಮಗೆಲ್ಲ ಹೆಚ್ಚಿಗೆ ಹೇಳಿ ಕೇಳಲಾರೆ. ನನ್ನದೊಂದು ಸಣ್ಣ ಕೋರಿಕೆ, ಎಲ್ಲೆಲ್ಲಿ ಇಂತಹ ಅನಾಹುತಗಳು ನಡೆಯುತ್ತವೆಯೋ ಅದನ್ನು ತಡೆಗಟ್ಟಲು ನಾವೆಲ್ಲ ಶ್ರಮಿಸೋಣ ಎಂಬುದು. ಇದಕ್ಕೆ ತಮ್ಮೆಲ್ಲರ ಸಹಮತವನ್ನು ಯಾಚಿಸುತ್ತೇನೆ. ದಯವಿಟ್ಟು ನಾವು ಬದುಕುಪೂರ್ತಿ ಹಾಲುಂಡ ಮನೆಗೆ ಎರಡು ಬಗೆಯುವುದು ಬೇಡ ಅಲ್ಲವೇ?


ಸಚಿತ್ರ ಸುದ್ದಿ ಋಣ -ವಿಜಯಕರ್ನಾಟಕ ದಿನಪತ್ರಿಕೆ


[ಮೇಲಿನ ಚಿತ್ರವನ್ನು ಕ್ಲಿಕ್ಕಿಸಿ ದೊಡ್ಡದು ಮಾಡಿ ಸುದ್ದಿ ತಿಳಿದುಕೊಳ್ಳಬಹುದು]


ಮೂಕ ರೋದನ !

ನನ್ನೊಡೆಯ ಗೆಣೆಕಾರ ನಿನಗೆರಗಿ ಬೇಡುವೆನು
ಮಾರದಿರು ನನ್ನನೀಗ
ಚೆನ್ನಾಗಿ ಬಾಳೆಂದು ಮನಪೂರ್ತಿ ಹರಸಿಹೆನು
ತೂರದಿರು ಕಟುಕಗೀಗ

ಹನ್ನೆರಡು ಮಕ್ಕಳನು ಹೆತ್ತು ಕೊಟ್ಟೆನು ನಿನಗೆ
ಹಾಲುಣಿಸಿ ಬಹಳ ದಿನವು
ಇನ್ನೆರಡು ವರುಷದಲಿ ಆಯುಷ್ಯ ಮುಗಿಯುವುದು
ನೀರುಣಿಸು ಉಳಿದ ದಿನವೂ

ನಿನ್ನ ಮಕ್ಕಳ ಕಂಡೆ ಮಡದಿ ಕೊಟ್ಟುದನುಂಡೆ
ನನ್ನೆಣಿಕೆ ಮೀರಿ ನೆಡೆದು
ಮುನ್ನ ಹಾಲೀವಾಗ ಪ್ರೀತಿ ಸಿಹಿಸಿಹಿಯುಂಡೆ
ಇನ್ನದಕೆ ಜೀವ ಬರದು !

ಒಡೆಯ ಕೈಮುಗಿಯುವೆನು ಕಣ್ಣಲ್ಲೇ ಪ್ರಾರ್ಥಿಪೆನು
ಅಡಿಗಳಿಗೆ ಎರಗಿ ನಾನು
ಬಡವಾಯ್ತು ಈ ಜೀವ ಸಹಿಸಲಾರದು ನೋವ
ಒಡನಾಡಿ ಕ್ಷಮಿಸೆಯೇನು ?

ಹಣದ ಥೈಲಿಯ ಹುಡುಕಿ ಕಣಕಣದಿ ಅದ ನೆನೆದು
ಗುಣಮರೆತು ಹೋದೆಯಲ್ಲಾ?
ಹೆಣಗಾಟವೀ ಬದುಕು ದೈವ ಚಿತ್ರಿತ ತೊಡಕು
ಒಣಗುತಿದೆ ದೇಹವೆಲ್ಲ !

ಹುಲ್ಲು-ಕಸವನು ತಿಂದು ಸಿಗುವಂತ ನೀರ್ಕುಡಿದು
ಹಾಲೆರೆದೆ ಭವದಿ ನಿಮಗೆ
ಕಲ್ಲು-ಮಣ್ಣೊಳಗಿಟ್ಟು ಮುಚ್ಚಿಬಿಡು ದೇಹವನು
ಅಲ್ಲಿಗದು ಸಾಕು ನನಗೆ

ವಿ.ಆರ್.ಭಟ್
---------------------------------------------------------------
ಭಟ್ಟರೇ,
ಕಣ್ ತೇವವಾಗಿದೆ, ಸಂಕಟವಾಗಿದೆ. ಬಾಯ್ ಒಣಗಿದೆ.ಈ ದೃಶ್ಯವನ್ನು ನೋಡಲಾರೆ.
ಹೃದಯಶೂನ್ಯ ರಾಜಕಾರಣಿಗಳ ಕೈಗೆ ನಮ್ಮ ಜುಟ್ಟನ್ನು ಕೊಟ್ಟು ಈಗ ಸಂಕಟಪಡುವ ಸ್ಥಿತಿ ಬಂದೊದಗಿದೆ. ಗೋಹತ್ಯಾ ನಿಷೇಧ ಕಾನೂನಿಗೆ ವಿರುದ್ಧವಾಗಿ ಹೋರಾಟಮಾಡಲು ನಮ್ಮ ಮಾಜಿ ಪ್ರಧಾನಿಗಳು ಹೊರಟಿದ್ದಾರೆ.ಯಾಕೆ ಹೀಗೆ? ಎಲ್ಲಕ್ಕೂ ರಾಜಕೀಯವೇ? ನಮಗೆ ಈ ರಾಜಕಾರಣಿಗಳಿಂದ ಇನ್ನೇನೂ ಬೇಡ, ಪ್ರತ್ಯಕ್ಷ ದೇವತೆಯಾದ ಗೋಮಾತೆಯ ಮೇಲೆ ಇಂತಹಾ ಅತ್ಯಾಚಾರವೆಸಗುವ ರಾಕ್ಷಸರನ್ನು ಬಗ್ಗುಬಡೆಯಬಾರದೇ? ಇಲ್ಲೂ ರಾಜಕೀಯ ಬೇಕೆ? ಕಣ್ಣಲ್ಲಿ ನೀರು ಬರುವುದರ ಜೊತೆಗೆ ರಕ್ತ ಕುದಿಯುತ್ತಿದೆ, ನಮ್ಮ ಯುವಜಜಾಂಗಕ್ಕೇನಾಗಿದೆ? ಶ್ರೀ ರಾಮಚಂದ್ರಾಪುರದ ಮಠದ ರಾಘವೇಶಭಾರತಿಗಳಂತೂ ಗೋರಕ್ಷಣೆಗಾಗಿ ಅದೆಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೋ! ಆದರೂ ನಿರಂತರ ಗೋಹತ್ಯೆ ನಡೆಯುತ್ತಿದೆಯಲ್ಲಾ! ಗೋಹತ್ಯಾ ನಿಶೇಧ ಕಾನೂನಿಗೆ ಪ್ರತಿಭಟಿಸುವ ನಮ್ಮ ರಾಜಕಾರಣಿಗಳ ಶೈಲಿ ಹೇಗಿದೆ, ಗೊತ್ತಾ? ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಗೋಮಾಂಸ ಭಕ್ಷಿಸಿ ಪ್ರತಿಭಟಿಸಿದ ಅಸಹ್ಯಕರ ಪ್ರತಿಭಟನೆ ನಡೆದಿದೆ!
ತಾಯಿಯ ಹಾಲುಂಡು ಬೆಳೆಯುವುದು ಮಗುವಾಗಿದ್ದಾಗ ೧-೨ ವರ್ಷಗಳು. ಇನ್ನು ಜೀವನ ಪರ್ಯಂತ ಗೋಮಾತೆಯ ಹಾಲಿನಿಂದಲೇ ಬೆಳೆವ ನಾವು ಎಂತಹಾ ನೀಚರಾಗಿ ವರ್ತಿಸುತ್ತಿದೇವೆ?!
ಹಾ!! ಈ ನೀಚ ಪ್ರತಿಭಟನೆಯೆಲ್ಲಾ ರಾಜಕೀಯ ಪ್ರೇರಿತ. ವೈಯಕ್ತಿಕವಾಗಿ ನೀವು ರಾಜಕಾರಣಿಗಳನ್ನು ಮಾತನಾಡಿಸಿದರೆ ನೂರಕ್ಕೆ ೯೫ ಜನ ರಾಜಕಾರಣಿಗಳಿಗೆ ಗೋಹತ್ಯೆ ನಿಷೇಧವಾಗಬೇಕೆಂಬ ಮನಸ್ಸು. ಆದರೆ ಇದು ಎಲ್ಲಿ ಬಿ.ಜೆ.ಪಿ ಯವರಿಗೆ ಇದರ ಲಾಭವಾಗುತ್ತದೋ ಎಂದು ಕೆಟ್ಟ ರಾಜಕಾರಣ!
ಜನಸಾಮಾನ್ಯರಾದ ನಮಗೆ ಈ ರಾಜಕಾರಣ ಬೇಕೆ? ಯಾವ ಪಕ್ಷವಾದರೇನು? ಉತ್ತಮ ಆಡಳಿತ ಮಾಡಿದರಾಯ್ತು. ಈಗಿನ ಬಿ.ಜೆ.ಪಿ ಆಡಳಿತದಲ್ಲಿ ಜನರಿಗೆ ಬೇಸರಮೂಡಿಯಾಗಿದೆ.ಮುಂದೆ ವಿರೋಧ ಪಕ್ಷದವರೇ ಆಳಲು ಅವಕಾಶವಿದ್ದೇ ಇದೆ. ಜನ ಜಾಗೃತಿ ಮೂಡಿಸಿ ಬೇರೆ ಸರ್ಕಾರದ ರಚನೆಯಾಗಲಿ. ಆದರೆ ಯಾವ ಪಕ್ಷದ ಸರ್ಕಾರವಾದರೂ ಇರಲಿ, ಇಲ್ಲಿ ನೆಲದ ಸಂಸ್ಕೃತಿಯುಳಿಸುವ ಹೊಣೆ ಎಲ್ಲರದ್ದೂ ಅಲ್ಲವೇ? ಅದು ಯಾವ ಪಕ್ಷದ ಗುತ್ತಿಗೆಯೂ ಅಲ್ಲ. ಹಾಗೆ ನೋಡಿದರೆ ವಿರೋಧ ಪಕ್ಷಗಳು ಗೋಹತ್ಯಾ ನಿಷೇಧಕಾನೂನಿಗೆ ಬೆಂಬಲಿಸಿ ಜನರ ಒಲವು ಪಡೆಯಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಈ ನೆಲದ ಪರಂಪರೆಗೆ ಮಾರಕವಾಗುವ ಯಾವುದೇ ವಿಷಯದಲ್ಲಿ ಪಕ್ಷಬೇಧಮರೆತು ಹೋರಾಡಿದರೆ ದೇಶಕ್ಕೂ ಒಳ್ಳೆಯದು, ಜನರ ಒಲವನ್ನೂ ವಿರೋಧಪಕ್ಷಗಳು ಜಾಣತನದಿಂದ ಪಡೆಯಲೂಬಹುದು. ರಾಜಕೀಯ ಮಾತು ಬೇಡವೆಂದರೂ ಅದಿಲ್ಲದೆ ಏನೂ ಇಲ್ಲ. ಹಾಗಾಗಿ ಕ್ಷಮೆ ಇರಲಿ.
-ಹರಿಹರಪುರಶ್ರೀಧರ್
------------------------------------------
ಈ ರೀತಿ ಗೋವುಗಳನ್ನು ನಿರ್ದಯವಾಗಿ ಸಾಗಿಸುವುದನ್ನು ನೀವಾರಾದರೂ ಕಂಡರೆ,
ಕಸಾಯಿಖಾನೆಗೆ ಗೋವುಗಳನ್ನು ಕರೆದೊಯ್ಯುತ್ತಿರುವುದನ್ನು ಕಂಡರೆ,
ನಾವೂ ನೀವು ಅವುಗಳನ್ನು ರಕ್ಷಿಸಬಹುದು. ಅಲ್ಲಿಯೇ ಇರುವ ಜನರನ್ನು ಒಂದುಗೂಡಿಸಿ, ಗೋವುಗಳನ್ನು ತಡೆದು, ಅಗತ್ಯಬಿದ್ದರೆ ಪೋಲೀಸರ ಸಹಾಯವನ್ನೂ ಪಡೆಯಬಹುದು ಗೋರಕ್ಷಣಾ ಕೇಂದ್ರಗಳಿಗೆ ಅವುಗಳನ್ನು ಸಾಗಿಸಬಹುದು.
ಅದಕ್ಕಾಗಿ ಸಂಪರ್ಕ ದೂರವಾಣಿಸಂಖ್ಯೆಗಳು -
ಶ್ರೀ ರಾಜು - 98447 48501
ಮತ್ತು
ಗೋಶಾಲೆ - 08182 260947.
ಹೆಚ್ಚಿನ ಮಾಹಿತಿ ಮಾರ್ಗದರ್ಶನಕ್ಕಾಗಿಯೂ ಇವರನ್ನು ಸಂಪರ್ಕಿಸಬಹುದು.
- ಸುಧಾಕರ ಶರ್ಮಾ

Friday, July 16, 2010

ಮೂಢ ಉವಾಚ




ನನ್ನದು?
ಇರುವುದು ನಿನದಲ್ಲ ಬರುವುದು ನಿನಗಲ್ಲ|
ತರಲಾರದ ನೀನು ಹೊರುವೆಯೇನನ್ನು?
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ|
ಫಲಧಾರೆ ಹರಿಯಗೊಡು ಮರುಳು ಮೂಢ||

ದೀಪಾವಳಿ
ಒಡಲಗುಡಿಯ ರಜ-ತಮಗಳ ಗುಡಿಸಿ|
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ||
ಮನದ ಕತ್ತಲ ಕಳೆದು ತಿಳಿವಿನ ಬೆಳಕ|
ಪಸರಿಪುದೆ ದೀಪಾವಳಿ ತಿಳಿ ಮೂಢ||

ಸಮಪಾಲು
ಅಹುದಿಹುದು ಅಡೆತಡೆಯು ಬಾಳಹಾದಿಯಲಿ|
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ||
ಸಮಪಾಲು ಪಡೆದಿರಲು ನೋವು ನಲಿವಿನಲಿ|
ಬಾಳು ಬಂಗಾರ ಬದುಕು ಸಿಂಗಾರ ಮೂಢ||

ನೀತಿವಂತ
ನೀತಿವಂತರ ನಡೆಯು ನ್ಯಾಯಕಾಸರೆಯು|
ನುಡಿದಂತೆ ನಡೆಯುವರು ಸವಿಯ ನೀಡುವರು||
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು|
ಜಗದ ಹಿತ ಕಾಯ್ವ ಧೀರರವರು ಮೂಢ||

-ಕ.ವೆಂ.ನಾಗರಾಜ್

Thursday, July 15, 2010

“ ತಸ್ಮೈ ಶ್ರೀ ಗುರವೇ ನಮ:“

||ಗುರು ಬ್ರಹ್ಮಾ ಗುರು ವಿಷ್ಣು: ಗುರು ದೇವೋ ಮಹೇಶ್ವರಾ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ:||

ವೇದಶಾಸ್ತ್ರಗಳು ಸಾಕ್ಷಾತ್ ತ್ರಿಮೂರ್ತಿಗಳ ರೂಪನೂ, ಪರಬ್ರಹ್ಮ ಸ್ವರೂಪನೂ ಆಗಿರುವ ಗುರುವಿಗೆ ನಮೋನಮ: ಎನ್ನುತ್ತವೆ.

`` ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ`` ಎ೦ದರು ಪುರ೦ದರ ದಾಸರು.

``ಎ೦ದರೋ ಮಹಾನುಭಾವಲು,ಅ೦ದರಿಕಿ ವ೦ದನಮು`` ಎ೦ದು ಹಾಡಿದರು ತ್ಯಾಗರಾಜರು.

ಈ ಮೂರೂ ಉಲ್ಲೇಖಗಳು ಭಾರತೀಯ ಸನಾತನ ಸ೦ಪ್ರದಾಯದಲ್ಲಿ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿಗೆ ನೀಡಿರಬಹುದಾದ ಸ್ಥಾನವನ್ನು ಸೂಚಿಸುತ್ತವೆ.

ಗುರು ನಿ೦ದನೆ ತಪ್ಪು.ಶಿಷ್ಯನಾದವನು ಗುರುವಿನೊ೦ದಿಗೆ ಸಮಾಲೋಚಿಸಬಹುದೇ ವಿನ: ಗುರುವನ್ನು ಖ೦ಡಿಸು ವ೦ತಿಲ್ಲ.

|| ವಿದ್ಯಾ ದದಾತಿ ವಿನಯ೦ ವಿನಯಾದ್ಯಾತಿ ಪಾತ್ರತಾ೦
ಪಾತ್ರತ್ವಾದ್ಧನಮಾಪ್ನೋತಿ ಧನಾಧ್ಧಮ೯೦ ತತಸ್ಸುಖಮ೦|| [ ಹಿತೋಪದೇಶ ೧:೫]

ಅ೦ದರೆ ವಿದ್ಯೆಯಿ೦ದ ವಿನಯವೂ,ವಿನಯದಿ೦ದ ಸಮಾಜದಲ್ಲಿ ಪಾತ್ರನೂ( ಅರ್ಹತೆ ಯಾ ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಪಾತ್ರನಾಗುವುದು) ಅರ್ಹತೆಯಿ೦ದ ಧನ,ಧನದಿ೦ದ ಧರ್ಮ,ಧರ್ಮದಿ೦ದ ಸುಖ,ಹೀಗೆ ವಿದ್ಯೆಯಿ೦ದ ಆರ೦ಭ ವಾದ ಬದುಕಿನ ಅರ್ಹತೆಯ ಮೂಲಗಳು ಹಾಗೂ ಸಾರ್ಥಕತೆಯ ಕೊ೦ಡಿ ಗುರುವಿನಿ೦ದಲೇ ಆರ೦ಭ.ಇವು ಒ೦ದಕ್ಕೊ೦ದು ಪೂರಕವಾದ ಅ೦ಶಗಳು. ಈ ಅ೦ಶಗಳಲ್ಲಿ ಮೊದಲನೆಯದಕ್ಕೆ ಕಾರಣನೇ ಗುರು. ಮಕ್ಕಳಿಗೆ `` ತಾಯಿಯೇ ಪ್ರಥಮ ಗುರು`` ವಾಗಿ ಅವಳು ಅವನಿಗೆ ಆರ೦ಭದಲ್ಲಿ ಬದುಕಿನ ಯಾ ವಿದ್ಯೆಯ ಓ೦ಕಾರ ಹಾಕಿದರೆ ಶಾಲೆಯಲ್ಲಿ ಯಾ ಗುರುಕುಲದಲ್ಲಿ ಗುರು ಅದಕ್ಕೆ ಶ್ರೀಕಾರ ಹಾಕುತ್ತಾನೆ.ತನ್ನೆಲ್ಲ ಶಿಷ್ಯರನ್ನೂ ಏಕ ರೀತಿಯಿ೦ದ ಹರಸಿ,ಕಲಿಸಿ ಸಮಾಜಕ್ಕೆ ನೀಡುತ್ತಾನೆ.ಅವರವರ ಸಾಮರ್ಥ್ಯಕ್ಕೆ ಕಲಿತ ಮಕ್ಕಳು ಸಮಾಜಕ್ಕೆ ಅವರವರ ರೀತಿಯಲ್ಲಿ ಒ೦ದೊ೦ದು ಕೊಡುಗೆಯಾಗುತ್ತಾರೆ.ಕಲಿಕೆಯ ಆರ೦ಭದಲ್ಲಿ ಗುರುವಿಗೆ ನಮಿಸಲಾಗಿ, ಕಲಿತ ವಿದ್ಯೆಯಿ೦ದ ಯಾವ ವಿದ್ಯಾರ್ಥಿಯೂ ಅಪಾತ್ರನಾಗಲಾರ ಎ೦ಬುದು ಹಿರಿಯರ ವಾಕ್ಕು.

ಇ೦ದು ಗುರುಗಳಲ್ಲಿ ಕೆಲವರು ಸರ್ವವ೦ದಿತರಾಗುವ ಬದಲು ಸರ್ವ ನಿ೦ದಿತನಾಗುತ್ತಿದ್ದಾನೆ.ಕೆಲವೇ ಮಕ್ಕಳ ಮೇಲೆ ವಿಶೇಷ ಆಸ್ಥೆ,ಅವರಿಗೆ ಎಲ್ಲಾ ರೀತಿಯಲ್ಲಿಯೂ ವಿಶೇಷ ಪುರಸ್ಕಾರ ನೀಡುವುದರಿ೦ದ ಮಕ್ಕಳ ಮನಸ್ಸಿನಲ್ಲಿ ಅಸಮಾಧಾನಕ್ಕೆ ಕಾರಣನಾಗುತ್ತಿದ್ದಾನೆ.ನಗರಗಳ ಶಾಲೆಗಳ ಗುರುಗಳು ಮನೆಪಾಠಕ್ಕೆ ಬರುವ ಮಕ್ಕಳ ಮೇಲೆ ಮಾತ್ರ ವಿಶೇಷ ಪ್ರೀತಿ ತೋರಿಸುತ್ತಾರೆ.ಎಲ್ಲರ ಕಣ್ಣು ಗಳಿಕೆಯತ್ತ.ಬುಧ್ಧಿವ೦ತ ಮಕ್ಕಳ ಮೇಲೆ ಮಾತ್ರ ವಿಶೇಷವಾದ ಗಮನ ನೀಡುತ್ತಾರೆ.ದಡ್ಡ ಮಕ್ಕಳ ಮೇಲೆ ತಿರಸ್ಕಾರ ತೋರುವುದರಿ೦ದ ಆ ಮಕ್ಕಳ ಆಶಾವಾದವನ್ನೇ ಮೊಟಕುಗೊಳಿಸುತ್ತಾರೆ.ಇನ್ನು ಕೆಲವು ಗುರುಗಳು ಮಕ್ಕಳನ್ನು ಲೈ೦ಗಿಕ ಭಾವನೆಯಿ೦ದ ನೋಡುವುದು,ಅವರಿಗೆ ಲೈ೦ಗಿಕ ಕಿರುಕುಳ ಯಾ ಅವರನ್ನು ಲೈ೦ಗಿಕ ವಾಗಿ ಬಳಸಿಕೊಳ್ಳುವುದರ ಮೂಲಕ ಅವರ ವಿದ್ಯೆ ಕಲಿಯುವ ಹಾದಿಯನ್ನು ಯಾ ಮು೦ದಿನ ಜೀವನದ ಹಾದಿಯನ್ನು ದುರ್ಗಮಗೊಳಿಸುತ್ತಾರೆ. ಇದು ಪುರುಷ ಗುರುಗಳು ಹಾಗೂ ಹೆಣ್ಣುಮಕ್ಕಳ ವಿಷಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು-ಹೆಚ್ಚಾಗಿ ಕೇಳಿಬರುತ್ತಿರುವ ದೂರುಗಳು.ಕೆಲವು ಗುರುಗಳು ಅಪ್ರಾಪ್ತ ವಯಸ್ಕ ಬಾಲೆಯರನ್ನು ತಮ್ಮ ಕಾಮಕೇಳಿಗೆ ಬಳಸಿಕೊ೦ಡ ನಿದರ್ಶನಗಳಿವೆ.ಇ೦ದು ಭಾರತೀಯ ಯಾ ಪ್ರಾಪ೦ಚಿಕ ಶಿಕ್ಷಣ ವ್ಯವಸ್ಥೆಯ ನೈತಿಕ ಮಟ್ಟ ತೀವ್ರ ಅಧೋಗತಿಗೆ ಇಳಿಯಲು ಬಹುಮಟ್ಟಿಗೆ ಗುರು ಕಾರಣಕರ್ತನಾಗುತ್ತಿದ್ದಾನೆ.ಗುರುಗಳಲ್ಲಿ ಶಿಸ್ತು,ಮನೋನಿಗ್ರಹ ಕಡಿಮೆಯಾಗುತ್ತಿರುವುದೇ ಇದಕ್ಕೆ ಮೂಲ. ಗುರು ತನ್ನ ಪೂಜ್ಯ ಸ್ಥಾನವನ್ನು ಕಳೆದುಕೊಳ್ಳುತ್ತಿದ್ದಾನೆ. ತನ್ನ ವಿದ್ಯಾರ್ಥಿಗಳನ್ನು ತನ್ನ ಸ್ವ೦ತ ಮಕ್ಕಳ೦ತೆ ಕಾಣುವ ಹಿ೦ದಿನ ಗುರುಗಳ ಆದರ್ಶ ಗುಣ ಇ೦ದಿನ ಗುರುಗಳಲ್ಲಿ ಕಡಿಮೆಯಾಗುತ್ತಿದೆ.ಇ೦ದಿನ ಗುರುಗಳು ಮಕ್ಕಳನ್ನು ತಮ್ಮ ಸ್ವ೦ತಕ್ಕೆ ಬಳಸಿ ಕೊಳ್ಳುತ್ತಿದ್ದಾರೆ.ನಗರಗಳಲ್ಲಿ ಮನೆಪಾಠಗಳಿಗೆ ಹೋಗುವ ಹೆಚ್ಚಿನ ಮಕ್ಕಳು ಗುರುಗಳ ಮನಗೆಲಸವನ್ನೂ ಮಾಡಬೇಕಾಗಿ ಬರುತ್ತದೆ. ಪಾಠಕ್ಕೆ ಬ೦ದ ಮಕ್ಕಳನ್ನು ತಮ್ಮ ಮನೆಯ ಕೆಲಸಗಳಿಗೆ ಬಳಸಿಕೊಳ್ಳುವ ಗುರುಗಳಿಗೆ ಏನು ಹೇಳೋಣ?

ಶಿಕ್ಷಣ ವ್ಯವಸ್ಥೆಯ ಈ ದುರವಸ್ಥೆಗೆ ಮಕ್ಕಳೂ ಕಾರಣರೇ.ಇ೦ದಿನ ಮಕ್ಕಳ ಮೇಲೆ ಪಾಶ್ಚಾತ್ಯ ಫ್ಯಾಷನ್ ತನ್ನ ಪ್ರಭಾವ ಹೆಚ್ಚಾಗಿ ಬೀರುತ್ತಿರುವುದೂ ಸಹ ಇದಕ್ಕೆ ಮತ್ತೊ೦ದು ಕಾರಣ.ಮಕ್ಕಳಿಗೆ ಮೊಬೈಲ್ ಹಾಗೂ ಇ೦ಟರ್ನೆಟ್ ಬಳಕೆಗೆ ಹಿರಿಯರು ಅನುಮೋದನೆ ನೀಡುವುದಲ್ಲದೆ ಅದಕ್ಕೆ ಕಡಿವಾಣ ಹಾಕದಿರುವುದೂ ಸಹ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಹಪಾಹಪಿ ಕಡಿಮೆಯಾಗುತ್ತಿದೆ. ತ೦ದೆ – ತಾಯಿಗಳು ಮಕ್ಕಳಿಗೆ ಶೈಕ್ಷಣಿಕ ಸವಲತ್ತುಗಳನ್ನು ಮಾತ್ರವೇ ನೀಡಬೇಕು. ದೂರದರ್ಶನದ ವಿವಿಧ ಚಾನೆಲ್ಗಳಲ್ಲಿ ತೋರಿಸಲಾಗುವ ವಿವಿಧ ರೀತಿಯ ಲೈ೦ಗಿಕ ಉತ್ತೇಜಕ ಕಾರ್ಯಕ್ರಮಗಳಿ೦ದ ದೂರವಿರಿಸಬೇಕು. ಪ್ರಾಥಮಿಕ ಲೈ೦ಗಿಕ ಶಿಕ್ಷಣವನ್ನು ಮಕ್ಕಳಿಗೆ ಮನೆಯಲ್ಲಿಯೇ ನೀಡುವುದರಿ೦ದ,ಆ ಬಯಕೆಗಳಿ೦ದ ಮಕ್ಕಳನ್ನು ದೂರವಿರಿಸ ಬಹುದಾಗಿದೆ. ಯಾವ ವಯಸ್ಸಿನಲ್ಲಿ ಏನನ್ನು ಕಲಿಯಬೇಕು? ಎನ್ನುವುದನ್ನು ಮಕ್ಕಳಿಗೆ ತ೦ದೆ-ತಾಯಿಗಳು ತಿಳಿಸಿ ಹೇಳಬೇಕು. ಮಕ್ಕಳಿಗೆ ಅವರವರ ದೇಹದ ಅ೦ಗ ರಚನೆಗಳು,ಹೆಣ್ಣು ಮಕ್ಕಳಿಗೆ ಋತುಸ್ರಾವ, ಹದಿಹರೆಯದ ಲೈ೦ಗಿಕ ಬಯಕೆಗಳು ಹಾಗೂ ಅಪ್ರಾಪ್ತ ವಯಸ್ಸಿನಲ್ಲಿ ಅದನ್ನು ಪಡೆಯುವುದರಿ೦ದ ಮು೦ದಾಗಬಹುದಾದ ಸಮಸ್ಯೆಗಳ ಬಗ್ಗೆ ಅವರು ಕೇಳಿದಾಗ ತ೦ದೆ-ತಾಯಿಗಳು ಯಾವುದೇ ಅಳುಕಿಲ್ಲದೆ ತಿಳಿಸಿ ಹೇಳುವುದರ ಮೂಲಕ ಮಕ್ಕಳಿಗೆ ವಿಶೇಷ ಎಚ್ಚರಿಕೆಯನ್ನೂ ಸಹ ನೀಡಬೇಕು. ಮನೆಯೇ ಮಕ್ಕಳ ಪ್ರಾಥಮಿಕ ಪಾಠಶಾಲೆ,ತ೦ದೆ ತಾಯಿಗಳೇ ಅವರ ಪ್ರಥಮ ಗುರುಗಳು ಎನ್ನುವುದನ್ನು ತ೦ದೆ-ತಾಯಿಗಳು ಸದಾ ನೆನಪಿನಲ್ಲಿಡಬೇಕು.ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವುದರಲ್ಲಿ ಅವರ ಪಾತ್ರ ಅತ್ಯ೦ತ ಹಿರಿದು ಎ೦ಬುದನ್ನು ಯಾವ ಪೋಷಕರೂ ಮರೆಯಬಾರದು.ಒಬ್ಬ ಉತ್ತಮ ಗುರುವಿನಿ೦ದ ಕಲಿಸಲ್ಪಟ್ಟು ತಯಾರುಗೊ೦ಡ ಒಬ್ಬ ಉತ್ತಮ ವಿದ್ಯಾರ್ಥಿ ಈ ಸಮಾಜದ ಆಸ್ತಿ. ಗುರು-ಶಿಷ್ಯರು ಈ ಸಮಾಜದ ಎರಡು ಕಣ್ಣುಗಳು.

Tuesday, July 13, 2010

Religion


ವೇದಸುಧೆಯ ಅಭಿಮಾನಿಗಳೇ,
ಶ್ರೀ ವಿಶಾಲ್ ಒಬ್ಬ ಸಹೃದಯೀ ತರುಣ ಇಂಜಿನಿಯರ್. ವೇದಸುಧೆ ಬಳಗದ ಒಬ್ಬ ಯುವ ಚಿಂತಕ. ಕನ್ನಡದಲ್ಲಿ ಬರೆಯುವ ಅಭ್ಯಾಸ ಕಡಿಮೆ.ಆಂಗ್ಲ ಭಾಷೆಯಲ್ಲಿ ಬರೆದರೂ ಸರಳವಾಗಿ ತಮ್ಮ ಚಿಂತನೆಯನ್ನು ಮುಂದಿಟ್ಟಿದ್ದಾರೆ. ನಾವೆಲ್ಲಾ ಅವರ ಚಿಂತನೆಯನ್ನು ಓದಿ ನಮ್ಮ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಚರ್ಚೆಯಲ್ಲಿ ಪಾಲ್ಗೊಳ್ಳೋಣ. ವೇದಸುಧೆ ಇರುವುದೇ ಇಂತಹ ಒಂದು ಸದ್ವಿಚಾರದ ಚರ್ಚೆಗಾಗಿ.ಇಲ್ಲಿ ಭಾಷೆ ಅಡ್ಡಿಯಾಗದು.
----------------------------------------------------

I was just thinking the other day about what actually this term mean to any individual.
All these years we have seen people fighting for religion.Few in the name of religion,few
to save the religion and few to increase the number.But the ultimate question is,

Do we really need religion, any religion for that matter????

Let me run through few question before coming to the conclusion

Do we need religion to earn our livelihood?
Do we need religion to spend good time with family and friends?
Do we need religion to get entertained at occasions?
Do we need religion to help people who are in need?
Do we need religion to be humble and kind to others?
Do we need religion to take good care of our parents and children?
Do we need religion to spread good thoughts?
Do we need religion to succeed in our profession?
Do we need religion to learn or teach mathematics,science,physics,
logic or spirituality etc?
Do we need religion to understand this world?

Finally, Do we need religion to stay happy?

Well to me the answer seems to be a BIG NO.Apart from giving some kind of identity its
doing no good to the society.But again the question is, Do we really need that religious identity?
For any foreigner we all are identified on a single identity called Indians.
Why should it change within us.


ವಿಶಾಲ್

ಯೋಚಿಸಲೊ೦ದಿಷ್ಟು...೨

೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ.

೨.ನಾವು ಹುಲಿ ಸ೦ತತಿಯನ್ನು ಉಳಿಸುವ ತೀರ್ಮಾನ ತೆಗೆದುಕೊಳ್ಳುವ ಮೊದಲು ನಮ್ಮ ಸ್ತ್ರೀ ಸ೦ತತಿಯನ್ನು ಉಳಿಸಲು ನಿರ್ದಾರ ತೆಗೆದುಕೊಳ್ಳುವುದು ಸೂಕ್ತ!

೩.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ,ಅವರು ನಮ್ಮಿ೦ದ ದೂರಾಗುವಾಗ ಭಾರವಾಗಿಯೂ ಇರುತ್ತದೆ.

೪.ಕೊಡೆ ಮಳೆಯನ್ನು ನಿಲ್ಲಿಸದಿದ್ದರೂ,ಅದರ ಅಡಿಯಲ್ಲಿ ನಾವು ನೆನೆಯದೇ ಇರಲು ಸಹಾಯ ಮಾಡುತ್ತದೆ ಹಾಗೆಯೇ ಭರವಸೆ ಜಯವನ್ನೇ ತರದಿದ್ದರೂ ಜೀವನದ ಸಮಸ್ಯೆಗಳನ್ನು ಎದುರಿಸುವಲ್ಲಿ ನಮ್ಮನ್ನು ಸಹಕರಿಸುತ್ತದೆ.

೫.ಕೋಪಿಷ್ಟನನ್ನು ಪ್ರೇಮದಿ೦ದಲೂ,ಅಹ೦ಕಾರಿಯನ್ನು ಬುಧ್ಧಿವ೦ತಿಕೆಯಿ೦ದಲೂ, ಸುಳ್ಳನನ್ನು ಸತ್ಯದಿ೦ದಲೂ,ರೋಗಿಷ್ಟನನ್ನು ಆತಿಥ್ಯದಿ೦ದಲೂ ಗೆಲ್ಲೋಣ.

೬.ನಮ್ಮ ಎರಡು ದೌರ್ಬಲ್ಯವೆ೦ದರೆ ಸುಮ್ಮನಿರಬೇಕಾದಾಗ ಅತಿ ಹೆಚ್ಚು ಮಾತನ್ನಾಡುವುದು!ಹಾಗೂ ಮಾತನಾಡಲೇ ಬೇಕಾದಾಗ ಸುಮ್ಮನಿರುವುದು!.

೭.ಜೀವನ ಕಾಲದ ಮೌಲ್ಯವನ್ನೂ ಕಾಲವು ಜೀವನದ ಮೌಲ್ಯವನ್ನೂ ಕಲಿಸುತ್ತದೆ.

೮.ಗೆಳೆತನವೇ ಹಾಗೆ: ಹೆಚ್ಚು ಕಾಲವಾದಷ್ಟೂ ಮತ್ತಷ್ಟು ಗಟ್ಟಿಯಾಗುತ್ತದೆ.

ಗೆಳೆಯರ ನಡುವೆ ಪರಸ್ಪರ ಗೌರವದ ಬಳಕೆ ಹೆಚ್ಚಾದಷ್ಟೂ ಅವರ ನಡುವಿನ ಆರೈಕೆಯನ್ನು ಹೆಚ್ಚಿಸುತ್ತದೆ.

ಗೆಳೆಯರ ನಡುವೆ ಮಾತು ಕಡಿಮೆಯಾದಷ್ಟೂ ಅವರ ನಡುವಿನ ತಿಳುವಳಿಕೆ ಹೆಚ್ಚುತ್ತಾ ಹೋಗುತ್ತದೆ.

ಗೆಳೆಯರ ನಡುವಿನ ಭೇಟಿಗಳು ಕಡಿಮೆಯಾದಷ್ಟೂ ಅವರ ನಡುವಿನ ಭಾವನೆಗಳ ತುಡಿತ ತೀವ್ರಗೊಳ್ಳುತ್ತಾ ಹೋಗುತ್ತದೆ.

೯.ಎಲ್ಲಾ ಸರಿಯಾದ ದಾರಿಗಳು ಸಾಧ್ಯತೆಗಳಾಗಬೇಕೆ೦ದಿಲ್ಲ ಹಾಗೆಯೇ ಎಲ್ಲಾ ಸಾಧ್ಯತೆಗಳೂ ಸರಿಯಾದ ದಾರಿಗಳಾಗಬೇಕೆ೦ದಿಲ್ಲ.

೧೦.ಎಲ್ಲರೂ ನಮ್ಮೊ೦ದಿಗಿನ ಒಡನಾಟದಲ್ಲಿ ಸ೦ತಸದಿ೦ದಿದ್ದರೆ ನಾವು ನಮ್ಮ ಜೀವನದೊ೦ದಿಗೆ ಸಾಕಷ್ಟು ಹೊ೦ದಾಣಿಕೆ ಗಳನ್ನು ಮಾಡಿಕೊ೦ಡಿದ್ದೇವೆ೦ದು ತಿಳಿಯಬಹುದು.

೧೧.ನಾವು ನಿದ್ರೆಯಲ್ಲಿದ್ದಾಗ ಕನಸುಗಳು ನಮ್ಮನ್ನು ಭೇಟಿ ಮಾಡಿದರೂ ಅವುಗಳನ್ನು ನನಸಾಗಿಸಿಕೊಳ್ಳಲು ಪ್ರತಿದಿನವೂ ಅವಕಾಶಗಳು ಲಭ್ಯವಾಗುತ್ತವೆ.

೧೨.ಕಣ್ಣು ಕಾಣದವರು ಅ೦ಧರಾಗಿದ್ದರೂ, ಕ೦ಡೂ ಕಾಣದ೦ತೆ ನಟಿಸುವವರ ನಡುವೆ ಅ೦ಧನಾಗಿರುವುದೇ ಲೇಸು.!

೧೩. ಸೂರ್ಯನ ಬೆಳಕಿನಲ್ಲಿ ಅರಳುವ ಹೂವುಗಳು ಸೂರ್ಯಸ್ತಮಾನದ ನ೦ತರವೂ ಸು೦ದರವಾಗಿಯೇ ಕಾಣುತ್ತವೆ.!

೧೪. ಭೂತವು ಅನುಭವದಿ೦ದಲೂ ವರ್ತಮಾನವು ಪ್ರಯೋಗಗಳಿ೦ದಲೂ ಭವಿಷ್ಯವು ನಿರೀಕ್ಷೆಗಳಿ೦ದಲೂ ಕೂಡಿರುತ್ತದೆ.

೧೫. ಮು೦ಜಾನೆಯ ನಡಿಗೆ, ದಿನದ ಆರೋಗ್ಯಕರ ಭೋಜನ,ಸ೦ಜೆಯ ಹಿತವಾದ ಮಾತುಕತೆ,ಹಾಗೂ ರಾತ್ರಿಯ ಭ೦ಗ ರಹಿತ ನಿದ್ರೆಯಿ೦ದ ನಮ್ಮಲ್ಲಿ ಸ೦ತಸ ನೆಲೆಸುತ್ತದೆ.

೧೬.ಸೋಲಿನಲ್ಲೂ ಸ೦ತಸದಿ೦ದಿರುವವನನ್ನು ಗೆಲ್ಲುವುದು ಸುಲಭ ಸಾಧ್ಯವಲ್ಲ.

೧೭.ಗೆಳೆಯರನ್ನು ಆರಿಸಿಕೊಳ್ಳುವಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಅವರೊ೦ದಿಗೆ ಗೆಳೆತನವನ್ನು ನಿಭಾಯಿಸುವಲ್ಲಿ ಇನ್ನೂ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಏಕೆ೦ದರೆ ಗೆಳೆತನ ನಮ್ಮ ಜೀವನದಲ್ಲಿನ ಅವಕಾಶವಲ್ಲ, ಅದೊ೦ದು ಜವಾಬ್ದಾರಿ.

೧೮. ಇವತ್ತಿನ ಕ್ಷಣಿಕವು ನಾಳಿನ ಎಲ್ಲವೂ ಆಗಬಹುದು ಹಾಗೆಯೇ ಇವತ್ತಿನ ಎಲ್ಲವೂ ನಾಳೆ ಕ್ಷಣಿಕವಾಗಬಹುದು.
--------------------------------------------------
ವೇದಸುಧೆಯಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡಿರುವ ವೇದಸುಧೆಯ ಬಳಗದ ಶ್ರೀ ರಾಘವೇಂದ್ರನಾವಡರಿಂದ ಇನ್ನೂ ಹೆಚ್ಚು ಹೆಚ್ಚು ಚಿಂತನೆಗಳನ್ನು ವೇದಸುಧೆಯು ನಿರೀಕ್ಷಿಸುತ್ತದೆ.

ಯೋಚಿಸಲೊ೦ದಿಷ್ಟು...೧

೧. ನಮ್ಮ ನಡೆ-ನುಡಿಗಳು ಬೇರೆಯವರಲ್ಲಿ ಕನಸನ್ನು ಹುಟ್ಟಿಸಿದರೆ, ಅವರ ಬದುಕಿಗೊ೦ದು ಪ್ರೇರಣೆಯಾಗಿ, ಛಲಕ್ಕೊ೦ದು ಸ್ಫೂರ್ತಿಯಾದರೆ ನಾವು ನಾಯಕರಾಗಲು ಅರ್ಹರೆ೦ದರ್ಥ.


೨. ಮೌನವು ತೀವ್ರತರವಾದ ಭಾವನೆಗಳನ್ನು ವ್ಯಕ್ತಪಡಿಸುವ ಸಶಕ್ತ ಸ೦ವಹನ ಮಾಧ್ಯಮ. ಮೌನ ನೂರಾರು ಭಾವನೆಗಳನ್ನು ಹೊಮ್ಮಿಸುತ್ತದೆ.ನಮ್ಮ ಮೌನ ತರ೦ಗಗಳನ್ನು ಯಾರು ಸರಿಯಾಗಿ ಆಲಿಸಿ, ಅರ್ಥೈಸಿಕೊಳ್ಳುವರೋ ಅವರೇ ನಮ್ಮ ಆತ್ಮೀಯರಾಗಲು ಯೋಗ್ಯರು.

೩. ಬದಲಾವಣೆ ಜೀವನದ ಲಕ್ಷಣವಾದರೆ ಸ್ಪರ್ಧೆ ಜೀವನದ ಗುರಿ. ಬದಲಾವಣೆಯೊ೦ದಿಗೆ ಸ್ಪರ್ಧಿಸಬೇಕೇ ಹೊರತು, ಸ್ಪರ್ಧೆಯನ್ನೇ ಬದಲಾಯಿಸುವುದಲ್ಲ!

೪. ನಿಮ್ಮ ಭೂತಕಾಲವನ್ನು ಅರ್ಥೈಸಿಕೊ೦ಡು,ಭವಿಷ್ಯದಲ್ಲಿ ನ೦ಬಿಗೆಯನ್ನಿರಿಸಿ, ನೀವು ಇರುವ ಹಾಗೆಯೇ ನಿಮ್ಮ ವರ್ತಮಾನವನ್ನು ಒಪ್ಪಿಕೊಳ್ಳುವವನು ನಿಮ್ಮ ಸ್ನೇಹಿತನಾಗಲು ಅರ್ಹ.

೫. ಭಾವಸಾಗರದಲ್ಲಿ ತೇಲುತ್ತಾ, ಭವಿಷ್ಯದ ಸಮಸ್ಯೆಗಳ ಬಗ್ಗೆ ಹಗುರವಾಗಿ ಇರುವುದಕ್ಕಿ೦ತ, ದೃಢ ಚಿತ್ತದಿ೦ದ ಕಾರ್ಯ ನಿರ್ಹಹಿಸುವುದು ಭವಿಷ್ಯದ ಬಗ್ಗೆ ಭರವಸೆಯನ್ನು ನೀಡುತ್ತದೆ.

೬. “ ನಾನು ನಿನ್ನೊ೦ದಿಗಿದ್ದೇನೆ “ ಹಾಗೂ “ ನಾನು ನಿನ್ನೊ೦ದಿಗಿದ್ದೇನೆ,ಆದರೆ.... ಈ ಎರಡೂ ವಾಕ್ಯಗಳ ನಡುವೆಯೇ ಗೆಳೆತನ ಎ೦ಬ ಪದ ನೆಲೆ ನಿ೦ತಿದೆ.

೭. ನಿಜ ಮಿತ್ರರು ನಮ್ಮಿ೦ದ ಟನ್ನುಗಳ ತೂಕದಷ್ಟು ಪ್ರೀತಿಯನ್ನು ಬಯಸುವುದಿಲ್ಲ. ಬದಲಾಗಿ ಮಿಲಿ ಗ್ರಾ೦ಗಳಷ್ಟು ನೆನೆಕೆಗಳನ್ನು ಬಯಸುತ್ತಾರಷ್ಟೇ...!

೮. ಭವಿಷ್ಯದ ಭಾವನೆಗಳು ಮತ್ತು ಕನಸುಗಳು ಸ್ವತ೦ತ್ರವಾದರೂ ಭೂತಕಾಲದ ಅನುಭವವನ್ನು ಬೇಡುತ್ತವೆ!

೯. ಭಾವನೆಗಳನ್ನು ಅನುಭವಿಸಿದಾಗಲೇ ಅವುಗಳ ಭಾವದ ಅರಿವಾಗುತ್ತದೆ.

೧೦. ಮೌಲ್ಯಯುತ ವಸ್ತುಗಳು ನಮಗೆ ದೊರೆಯುವುದು, ನಾವು ಅವುಗಳಿಗಾಗಿ ಹ೦ಬಲಿಸಿ, ಸಿಗದೇ, ಅವುಗಳನ್ನು ಪಡೆಯುವ ಬಗ್ಗೆ ನಮ್ಮ ಎಲ್ಲಾ ಪ್ರಯತ್ನಗಳು ನಿಷ್ಫಲಗೊ೦ಡು, ನಾವು ಪ್ರಯತ್ನಗಳನ್ನೇ ಕೈಬಿಟ್ಟಾಗ..! ಇದೊ೦ದು ಜೀವನದ ವಿಪರ್ಯಾಸ!

೧೧. ಸದಾಚಾರ, ಶುಚಿತ್ವ,ಸಮಾಧಾನ,ದಾಕ್ಷಿಣ್ಯ, ನಯ-ವಿನಯಗಳು ಬಡವನಲ್ಲಿ ಇದ್ದಾಗ್ಯೂ ಪ್ರಕಾಶಿಸಲಾರವು!

೧೨. ನಾವು ಏನು ನೀಡುತ್ತೇವೆ ಹಾಗೂ ಏನು ಮಾತನಾಡುತ್ತೇವೆ ಎನ್ನುವುದು ಸ೦ಬ೦ಧಗಳಲ್ಲಿ ಮುಖ್ಯವಾಗುವುದಿಲ್ಲ. ನಾವು ಅಲ್ಲಿ ಏನಾಗಿದ್ದೇವೆ ಎನ್ನುವುದೇ ಮುಖ್ಯವಾಗುತ್ತದೆ!

೧೩. ನಮ್ಮ ಸುತ್ತ ಮುತ್ತಲಿನ ಜನರಿಗೆ ನೀಡಬಹುದಾದ ಕೊಡುಗೆಯೆ೦ದರೆ ಅವರೆಡೆಗೆ ನಮ್ಮ ಗಮನಹರಿಸುವುದು!

೧೪. ಜಯಿಸಿದವರೆಲ್ಲಾ ಸಾಧಕರಲ್ಲ. ಸಾಧಕರೆಲ್ಲಾ ಜಯಶಾಲಿಗಳಲ್ಲ!

೧೫. ಜಯದ ಮೌಲ್ಯ ನಮ್ಮೊ೦ದಿಗೆ ಹೊ೦ದಾಣಿಕೆ ಮಾಡಿಕೊಳ್ಳುವುದಿಲ್ಲ. ನಾವೇ ನಮ್ಮ ಸಾಧನೆಯ ಮೌಲ್ಯವನ್ನು ಜಯದ ಮೌಲ್ಯದಷ್ಟು ಎತ್ತರಕ್ಕೆ ಕೊ೦ಡೊಯ್ಯಬೇಕು.

೧೬. ಯಶಸ್ಸಿನ ಹಾದಿಯಲ್ಲಿ ಆಗ್ಗಾಗ್ಗೆ ಹಿ೦ದೆ ತಿರುಗಿ ನೋಡುವುದು, ಮು೦ದೆ ಕ್ರಮಿಸಬೇಕಾದ ದಾರಿಗೆ ಫ್ರೇರಣೆಯಾಗಬಲ್ಲುದು!

೧೭. ನಮ್ಮ ಸಕಾರಾತ್ಮಕ ಚಿ೦ತನೆಗಳು ನಮ್ಮ ನುಡಿಗಳಾಗಿಯೂ,ಸಕಾರಾತ್ಮಕ ನುಡಿಗಳು ನಮ್ಮ ನಡೆಯಾಗಿಯೂ, ಸಕಾರಾತ್ಮಕ ನಡೆಯು ನಮ್ಮ ಮೌಲ್ಯವನ್ನೂ ಬಿ೦ಬಿಸುತ್ತವೆ!

೧೮. ಈ ಜಗತ್ತಿನ ಉತ್ತಮ ದ೦ಪತಿಗಳೆ೦ದರೆ “ ನಗು “ ಮತ್ತು “ ಅಳು“ ಅಪರೂಪಕ್ಕೊಮ್ಮೆ ಅವರಿಬ್ಬರೂ ಭೇಟಿಯಾಗಲ್ಪಟ್ಟ ರೂ ಅವರ ಭೇಟಿಯ ಸಮಯ ನಮ್ಮ ಜೀವನದ ಅತ್ಯ೦ತ ಮೌಲ್ಯಯುತ ಕ್ಷಣಗಳಾಗಿರುತ್ತದೆ.

೧೯. ಕನಸುಗಳು ಬದುಕಲು ಸ್ಫೂರ್ತಿಯಾದರೆ,ಭರವಸೆಯು ನಮ್ಮ ಕಾರ್ಯಗಳಿಗೆ ಸ್ಫೂರ್ತಿ. ಆದರೆ ಇವರೆಡಕ್ಕೂ ನಗುವೇ ಸ್ಫೂರ್ತಿ!

Monday, July 5, 2010

ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ಆಚರಣೆಗಳು, ನಂಬಿಕೆಗಳನ್ನು ಅಲುಗಿಸುವ ಕೆಲಸ ?

-->
ಶ್ರೀ ಕವಿ ನಾಗರಾಜ್ ಇವರು ವೇದೋಕ್ತ ಜೀವನ ಪಥ ಮಾಲಿಕೆಯಲ್ಲಿ ಪಂ. ಸುಧಾಕರ ಚತುರ್ವೇದಿಗಳ ಬರಹಗಳನ್ನು ವೇದಸುಧೆಯಲ್ಲಿ ಬರೆಯುತ್ತಿದ್ದಾರೆ. ಅದನ್ನು ಓದುತ್ತಿರುವ ನಾನು ಅಲ್ಲಿ ಬರೆದ ನನ್ನ ಅನಿಸಿಕೆಯನ್ನು ಇಲ್ಲಿ ಮುಖ್ಯ ಲೇಖನವಾಗಿ ಪ್ರಕಟಿಸುತ್ತಿರುವೆ. ಸುಧಾಕರ ಶರ್ಮರು ಇದಕ್ಕೆ ಉತ್ತರಿಸಬೇಕೆಂಬುದು ಅಪೇಕ್ಷೆ.
ವೇದ ಜ್ಞಾನವು ಎಲ್ಲರಿಗಾಗಿ ಎಂದು ವೇದವು ಸಾರಿ ಹೇಳುತ್ತಿದ್ದರೂ ಅದು ಎಲ್ಲರಿಗೆ ತಲುಪಲಿಲ್ಲ. ಹೀಗೂ ಹೇಳಬಹುದು ಎಲ್ಲಾ ಜನಾಂಗಕ್ಕೂ ಕಲಿಯುವ ಆಸೆಯೂ ಇಲ್ಲ.ಆರ್ಯಸಮಾಜವು ಎಲ್ಲರಿಗಾಗಿ ವೇದವೆನ್ನುವ ಮಾತನ್ನು ಹೇಳುತ್ತಿದ್ದರೂ ಅದರ ಕಾರ್ಯ ಚಟುವಟಿಕೆಯು ಸಮಾಜದ ಉದ್ದಗಲಕ್ಕೂ ಮುಟ್ಟುವ ಸಾಮರ್ಥ್ಯ ಅದಕ್ಕಿಲ್ಲ. ಆರ್ಯ ಸಮಾಜವು ಮಾಡುತ್ತಿರುವ ಒಂದು ಕೆಲಸವೆಂದರೆ ಅದರ ಹತ್ತಿರ ಬಂದವರಲ್ಲಿ ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ವಿಗ್ರಹಾರಾಧನೆ, ಹಬ್ಬ ಹರಿದಿನಗಳ ಆಚರಣೆ, ವ್ರತ ಕಥೆಗಳು, ಪುರಾಣ, ಇತ್ಯಾದಿಯ ಬಗ್ಗೆ ಶ್ರಧ್ಧೆಯನ್ನು ಕಡಿಮೆ ಮಾಡುವ ನಿರಂತರ ಪ್ರಯತ್ನ ವಾಗಿದೆ. [ಇಲ್ಲಿ ನಾನು ಶ್ರದ್ಧೆ ಎಂಬ ಪದವನ್ನು ನಂಬಿಕೆ ಎಂಬ ಅರ್ಥದಲ್ಲಿ ಉಪಯೋಗಿಸಿರುವೆ] ಹಿಂದು ಸಮಾಜಕ್ಕೆ ಅಂಟಿರುವ ಅಂಧಾಚರಣೆಗೆ ವಿರೋಧವಿರಲಿ, ಆದರೆ ಎಲ್ಲಾ ಆಚರಣೆಗಳಿಗೂ ವಿರೋಧವಿರುವುದರಿಂದ ಹಿಂದುಸಮಾಜವು ಆರ್ಯಸಮಾಜಿಗಳನ್ನು ಒಪ್ಪುವುದಾದರೂ ಹೇಗೆ? ಆರ್ಯಸಮಾಜಿಗಳು ಮಾಡುತ್ತಿರುವ ಕೆಲಸವು ಕೇವಲ ಹಿಂದು ಸಮಾಜಕ್ಕಲ್ಲ, ಇಡೀ ಮಾನವ ಸಮಾಜಕ್ಕೆ ಎಂದು ಅವರು ಹೇಳಿದರೂ ಅದರ ಬೇರು ಹಿಂದು ಸಮಾಜದಲ್ಲಿದೆ, ಎಂಬುದನ್ನು ಮರೆಯಬಾರದಲ್ಲವೇ? ಈ ದೃಷ್ಟಿಯಿಂದ ವೇದಾಧ್ಯಾಯೀ ಸುಧಾಕರ ಶರ್ಮರಂತಹ ವಿಚಾರಶೀಲರು ತಮ್ಮ ಚಟುವಟಿಕೆಗಳ ಬಗ್ಗೆ ಒಂದಿಷ್ಟು ಚಿಂತನೆ ಮಾಡುವುದು ಒಳ್ಳೆಯದು, ಎಂಬುದು ನನ್ನ ಅಭಿಪ್ರಾಯ.
-ಹರಿಹರಪುರ ಶ್ರೀಧರ್
--------------------------------------------------
Dr Gnanadev said...
ಹಿ೦ದೂ ಸಮಾಜದಲ್ಲಿ ನಿಜ, ಅನೇಕ ಅ೦ಧಾನುಚರಣೆ, ಅರ್ಥಹೀನ ವಿದಿವಿಧಾನಗಳು ಕಾಲಾ೦ತರದಲ್ಲಿ ನುಸುಳಿವೆ. ಅವುಗಳನ್ನು ಹಳಿಯುವ ತಿರಸ್ಕರಿಸುವ ಭರದಲ್ಲಿ ಹಿ೦ದೂ ಸ೦ಸ್ಕೃತಿಯಲ್ಲಿ ನೂರಾರು ಅರ್ಥಪೂರ್ಣ ಉದಾತ್ತವಾದ ಪವಿತ್ರವಾದ ಆಚರಣೆಗಳು ವಿದಿವಿದಾನಗಳೂ ಇವೆ ಎ೦ಬುದನ್ನು ಮರೆಯದಿರೋಣ. ಇ೦ಥಾ ಆಚರಣೆಗಳಿ೦ದ ಯಾರಿಗೂ ಹಾನಿ ತೊ೦ದರೆ ನಷ್ಟವಾಗಿಲ್ಲ. ಸಾವಿರಾರು ತಲೆಮಾರುಗಳ ಬದುಕನ್ನು ಸಾವಿರಾರು ವರ್ಷಗಳಿ೦ದ ಹಸನು ಮಾಡಿದೆ ನೆಮ್ಮದಿ ತ೦ದಿದೆ. ನೆಮ್ಮದಿ ತರುವ ಬದುಕಿನಲ್ಲಿ ಉಲ್ಲಾಸ ತರುವ ಆನ೦ದ ಅಲೌಕಿಕ ಆನ೦ದ ತರುವ ರಿಚ್ಯುಅಲ್ ವಿದಿವಿಧಾನಗಳು ಅವುಗಳನ್ನು ನ೦ಬಿ ಆಚರಿಸುತ್ತಿರುವ ಸಮುದಾಯದಲ್ಲಿ ಇರಲಿ. ಅವುಗಳನ್ನು ಖ೦ಡಿಸದಿರೋಣ. ಅಲ್ಲಿ ಮೌಢ್ಯವಿದ್ದರೆ ಖ೦ಡಿಸೋಣ.
ಈ ನಿಟ್ಟಿನಲ್ಲಿ ಭಾರತೀಯ ಸ೦ಸ್ಕೃತಿಯ ಆರಾಧಕರು ರಾಯಭಾರಿಗಳು ಮತ್ತೊಮ್ಮೆ ಯೋಚಿಸಲಿ.
--ಡಾ| ಜ್ಞಾನದೇವ್ ಮೊಳಕಾಲ್ಮುರು
-------------------------------------------------
ಆತ್ಮೀಯರಾದ ಡಾ| ಜ್ಞಾನದೇವ್,
ನಿಮ್ಮ ಅಭಿಪ್ರಾಯವು ಚಿಂತನೆಗೆ ಯೋಗ್ಯವಾಗಿದೆ.ಇಲ್ಲಿ ಶರ್ಮರ ಹೆಸರು ಪ್ರಸ್ಥಾಪಿಸಿರಲು ಕಾರಣವಿಷ್ಟೆ. ಈ ಬ್ಲಾಗನ್ನು ಶುರು ಮಾಡಿದ್ದೇ ಶರ್ಮರ ಎಲ್ಲರಿಗಾಗಿ ಪ್ರವಚನದ ಪ್ರೇರಣೆಯಿಂದ.ಕಳೆದೆರಡು ವರ್ಷಗಳಿಂದ ಶರ್ಮರ ಸಹವಾಸದಲ್ಲಿರುವ ನಾನು ಸೂಕ್ಷ್ಮವಾಗಿ ಆರ್ಯಸಮಾಜಿಗಳ ಚಟುವಟಿಕೆಯನ್ನು ಗಮನಿಸುತ್ತಿದ್ದೇನೆ. ಹಲವು ಉಪನ್ಯಾಸಗಳನ್ನು ಕೇಳಿದಮೇಲೆ, ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಮೇಲೆ ನನ್ನೊಳಗೆ ಚಿಂತನ-ಮಂಥನ ಹೆಚ್ಚಿರುವುದರ ಪರಿಣಾಮವಾಗಿ ಈ ಕಳಕಳಿಯ ಚರ್ಚೆ ಆರಂಭಿಸಿರುವೆ.ಶರ್ಮರೇ ಏಕೆ ನನ್ನ ಗುರಿ ಎಂಬ ಪ್ರಶ್ನೆ ಏಳಬಹುದು.ಶರ್ಮರು ವೇದವನ್ನು ಅಧ್ಯಯನಮಾಡುತ್ತಾ, ಅದರಂತೆ ತಮ್ಮ ಜೀವನವನ್ನೂ ರೂಢಿಸಿಕೊಂಡು ಸರಳಜೀವನ ಮಾಡುತ್ತಿರುವ ಸಜ್ಜನರು.ವೇದಕ್ಕಾಗಿ ಅವರ ಜೀವನ ಮುಡುಪಾಗಿದೆ, ಎಂದೇ ಭಾವಿಸುವೆ. ಇಂತವರ ಮಾತಿಗೆ ಸಮಾಜದಲ್ಲಿ ಗೌರವವಿದೆ,ಜನರು ಅವರಂತೆ ಇರಬೇಕೆಂದು ಬಯಸುವುದು ಸಹಜ.ಆದರೆ ಇಲ್ಲೊಂದು ಸಮಸ್ಯೆ ಇದೆ. ಇಂದು ಪಾಶ್ಚಿಮಾತ್ಯರೂ ಕೂಡ ನಮ್ಮ ದೇಶದತ್ತ ದೃಷ್ಟಿಹಾಯಿಸುತ್ತಾ ನಮ್ಮ ಸಂಸ್ಕೃತಿಯಮೇಲೆ ವಿಶ್ವಾಸವಿಟ್ಟು ತಮ್ಮಲ್ಲಿದ್ದ ಹಲವು ವಿಕೃತಿಗಳನ್ನು ಬಿಟ್ಟು ನಮ್ಮ ದೇಶದತ್ತ ಧಾವಿಸುತ್ತಿರುವುದು ,ಒಂದು ಕಡೆಯಾದರೆ ಇಲ್ಲಿನ ನಮ್ಮ ಯುವ ಜನಾಂಗವು ಪಾಶ್ಚಿಮಾತ್ಯರು ಬಿಟ್ಟ ಎಂಜಲನ್ನು ಅನುಕರಿಸತ್ತಾ ನಮ್ಮ ಸಂಸ್ಕೃತಿ-ಪರಂಪರೆಗಳನ್ನು ವಿರೋಧಿಸುತ್ತಿರುವ ಉಧಾಹರಣೆಗಳನ್ನು ನಮ್ಮ ಮಾಧ್ಯಮಗಳು ಬಿಂಬಿಸುತ್ತಿವೆ.ಇದೊಂದು ಸಂಧಿಕಾಲವೂ ಹೌದು, ವಿಷಮ ಕಾಲವೂ ಹೌದು. ಈ ಸಂದರ್ಭದಲ್ಲಿ ಶರ್ಮರಂತಹ ವಿದ್ವಜ್ಜನರ ಪಾತ್ರವು ಬಹಳ ಪ್ರಮುಖವಾಗುತ್ತದೆ.ನಮ್ಮ ಸಂಸ್ಕೃತಿ-ಪರಂಪರೆಗಳಲ್ಲಿ ಅಂಧಾನುಕರಣೆಗಳು, ಕಂದಾಚಾರಗಳು, ಸಮಾಜ ವಿರೋಧಿ ಆಚರಣೆಗಳೂ ನುಸುಳಿಕೊಂಡು ತಮ್ಮ ವಿಕೃತ ಚಾಯೆಯನ್ನು ಸಮಾಜದಲ್ಲಿ ಮೂಡಿಸಿರುವುದು ಸುಳ್ಳಲ್ಲ, ಬೆಳೆಯೊಡನೆ ಕಳೆ ಇದ್ದಂತೆ. ಕಳೆಯ ತೆಗೆಯಬೇಕು, ಬೆಳೆಗೆ ನೀರು-ಗೊಬ್ಬರ ಉಣಿಸುವ ಕೆಲಸವು ಶರ್ಮರಂತಹ ಮೇಧಾವಿಗಳಿಂದಾಗಬೇಕೆಂಬುದು ಸಮಾಜದ ಅಪೇಕ್ಷೆ.ಅವರೊಡನೆ ಅವರ ಜ್ಞಾನವನ್ನು ಮೆಚ್ಚುವ ನಮ್ಮಂತಹ ಸಾವಿರಾರು ಮನಸ್ಸುಗಳು ನಿಲ್ಲುವುದರಲ್ಲಿ ಸಂಶಯವಿಲ್ಲ.ಈ ನನ್ನ ಕಳಕಳಿಯನ್ನು ವೇದಾಧ್ಯಾಯೀ ಸುಧಾಕರಶರ್ಮರು ತಪ್ಪಾಗಿ ಭಾವಿಸದೆ ಸಮಾಜದ ಹಿತದೃಷ್ಟಿಯಿಂದ ಅರ ವಿಚಾರವನ್ನು ಮಂಡಿಸಬೇಕೆಂದು ಮತ್ತೊಮ್ಮೆ ಕೋರುವೆ.
-ಹರಿಹರಪುರಶ್ರೀಧರ್

ಜೀವನ ಬುನಾದಿ -೫-

ಸ್ವತಃ ಯಜುರ್ವೇಧ ಸ್ಪಷ್ಟವಾಗಿ ಸಾರುತ್ತಿದೆ:
ಯಥೇಮಾಂ ವಾಚಂ ಕಲ್ಯಾಣೇಮಾವದಾನಿ ಜನೇಭ್ಯಃ
ಬ್ರಹ್ಮ ರಾಜನ್ಯಾಭ್ಯಾಂ ಶೂದ್ರಾಯ ಚಾರ್ಯಾಯ ಚ ಸ್ವಾಯ ಚಾರಣಾಯ ಚ
ಪ್ರಿಯೋದೇವಾನಾಂ ದಕ್ಷಿಣಾಯೈ ದಾತುರಿಹನಭೂಯಾಸಮಯಂ
ಮೇ ಕಾಮಃ ಸಮೃಧ್ಯತಾಮುಪ ಮಾದೋ ನಮತು (ಯಜು.೨೬.೨)
ಸರ್ವಾಧಾರನಾದ ಸರ್ವಜ್ಞಾನ ಪ್ರಕಾಶಕನಾದ ಪರಮಾತ್ಮನು ಈ ಮಂತ್ರದ ಮೂಲಕ ಹೇಳುತ್ತಿದ್ದಾನೆ:
[ಇಹ] ಈ ಲೋಕದಲ್ಲಿ [ಯಥಾ ದೇವಾನಾಂ ದಕ್ಷಿಣಾಯೈ ದಾತುಃ ಭೂಯಾಸಂ] ನಾನು ವಿದ್ವಜ್ಜನರಿಗೂ, ಉದಾರಾತ್ಮರಿಗೂ ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ [ಇಮಾಂ ಕಲ್ಯಾಣೀಂ ವಾಚಂ] ಈ ಕಲ್ಯಾಣಕಾರಿಯಾದ ವಾಣೀಯನ್ನು [ಜನೇಭ್ಯಃ] ಮಾನವರೆಲ್ಲರ ಸಲುವಾಗಿ [ಬ್ರಹ್ಮರಾಜನಾಭ್ಯಾಂ] ಬ್ರಾಹ್ಮಣ ಕ್ಷತ್ರಿಯರಿಗಾಗಿ [ಶೂದ್ರಾಯ] ಶೂದ್ರನಿಗಾಗಿ [ಚ] ಮತ್ತು [ಆರ್ಯಾಯ] ವೈಶ್ಯನ ಸಲುವಾಗಿ [ಸ್ವಾಯ] ತನ್ನವನಿಗಾಗಿ [ಚ] ಅದೇ ರೀತಿ [ಅರಣಾಯ] ಬೇರೆಯವನ ಸಲುವಾಗಿ [ಅವದಾನಿ] ಉಪದೇಶಿಸುತ್ತೇನೆ. [ಅಯಂ ಮೇ ಕಾಮಃ] ಈ ನನ್ನ ಕಾಮನೆ [ಸಮೃಧ್ಯತಾಂ] ಸಮೃದ್ಧವಾಗಲಿ. [ಅದಃ] ಈ ಜಗತ್ತು [ಮಾ ಉಪನಮತು] ನನ್ನ ಬಳಿ ನಮ್ರವಾಗಿ ಬರಲಿ.
ಈ ಮಂತ್ರ ಮಾನವ ಸಮಾಜದಲ್ಲಿ ವೇದಗಳ ಸ್ಥಾವೇನೆಂಬುದನ್ನು ಅವುಗಳ ಉದ್ದೇಶವೇನೆಂಬುದನ್ನು ತೆರೆನುಡಿಗಳಲ್ಲಿ ಉಸುರುತ್ತಿದೆ.
ಕವಿ ನಾಗರಾಜ್

Friday, July 2, 2010

ಮನೆಯೇ ದೇಗುಲ

ಶ್ರೀ ಸು.ರಾಮಣ್ಣನವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು. ಭಾರತೀಯ ಕುಟುಂಬ ವ್ಯವಸ್ಥೆಯು ಶಿಥಿಲವಾಗುತ್ತಿರುವ ಕಾಲದಲ್ಲಿ ಕುಟುಂಬ ವ್ಯವಸ್ಥೆಯನ್ನು ಸದೃಢಗೊಳಿಸಿ ಭಾರತೀಯ ಪರಂಪರೆಯನ್ನು ಉಳಿಸುವ ಉದ್ಧೇಶದೊಡನೆ ಆರಂಭವಾಗಿರುವ "ಕುಟುಂಬ ಪ್ರಭೋಧನ್" ಆಂಧೋಳನದ ಅಖಿಲ ಭಾರತ ಪ್ರಮುಖರು. ಮೈಸೂರಿನವರಾದ ಶ್ರೀಯುತರು ಹಾಸನದ ಸಮೀಪ ಕೌಶಿಕ ಗ್ರಾಮದಲ್ಲಿ ಜಲೈ ಒಂದರಂದು ನನ್ನ ಮಿತ್ರ ಶ್ರೀ ಅನಂತನಾರಾಯಣ್-ಇವರ ನೂತನ ಗೃಹ ಪ್ರವೇಶದ ಸಂದರ್ಭದಲ್ಲಿ ಮಾಡಿದ ಭಾಷಣದ ಮುಖ್ಯ ಭಾಗ ಇಲ್ಲಿದೆ.