Pages

Tuesday, June 12, 2012

ಯೋಗಗುರು ನಾಗರಾಜರಾಯರೊಂದಿಗೆ ಪ್ರಶ್ನೋತ್ತರ




Podcast Powered By Podbean

ಆಡಿಯೋ ಡೌನ್ ಲೋಡ್ ಮಾಡಲು ಕೊಂಡಿ
http://hariharapurasridhar.podbean.com/


ರುಚಿಗಾಗಿ ತಿಂದರೆ ಭೋಗ,ಹಸಿವಿಗಾಗಿ ತಿಂದರೆ ಯೋಗ

ತುಮಕೂರಿನವರಾದ  ಶ್ರೀ ನಾಗರಾಜ ರಾವ್, ಕೆಂದ್ರ  ಸರ್ಕಾರದ  ಮಾನವ ಸಂಪನ್ಮೂಲ   ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಪಡೆದವರು, ಆರ್ಶ  ಪರಂಪರೆಯಲ್ಲಿ  ಯೋಗ ಅಧ್ಯಯನಮಾಡಿ, ವೇದವನ್ನು ಅನುಷ್ಟಾನಾದಲ್ಲಿಟ್ಟು ಕೊಂಡಿರುವವರು ,ಪ್ರಸ್ತುತ  ಶೃಂಗೇರಿ ಶಾರದಾ ಪೀಠದ  ಗುರುಪರಂಪರೆಯಲ್ಲಿ ಈ ಜ್ಞಾನವನ್ನು ತಿಳಿಸಿಕೊಡುವ ಕೆಲಸವನ್ನು ಮಾಡುತ್ತ ,ಹಲವಾರು ಶಿಬಿರಗಳನ್ನು ನಡೆಸಿರುತ್ತಾರೆ.ವೇದದ ಹಿನ್ನೆಲೆಯಲ್ಲಿ ಯೋಗವನ್ನು ನಿತ್ಯಾನುಷ್ಟಾನದಲ್ಲಿ ಇಟ್ಟುಕೊ ಳ್ಳುವ ಬಗ್ಗೆ ಹಾಸನದ ಶ್ರೀ ಶಂಕರಮಠದಲ್ಲಿ ನಡೆದ ಶಿಬಿರದಲ್ಲಿ ಮಾಡಿದ ಪ್ರವಚನವನ್ನು ನೀವಿಲ್ಲಿ ಕೇಳಬಹುದು.

ನನ್ನ ಮನವಿ:  ಸರಳ ಸಜ್ಜನರಾದ  ಶ್ರೀ ನಾಗರಾಜರಾಯರ ಮಾತುಗಳನ್ನು ಕೇಳುತ್ತಾ ಹೋದಂತೆ  ನಮ್ಮ ಜೀವನದಲ್ಲಿ ಒಂದು ಭರವಸೆ ಮೂಡಿ ಒಂದು   ದೃಷ್ಟಿಕೋಣ  ಮೂಡುವುದರಲ್ಲಿ ಸಂಶಯವಿಲ್ಲ.  ಈ ಆಡಿಯೋ ಕೇಳಿ  ಅದನ್ನು ಅಕ್ಷರ ರೂಪಕ್ಕೆ ತಂದು ಪ್ರಕಟಿಸಿದರೆ ಹಲವರಿಗೆ ಉಪಯೋಗವಾಗುತ್ತದೆ ,ಆದರೆ ನನ್ನ ಸಮಯದ ಅಭಾವದಿಂದ ಶ್ರೀ ನಾಗರಾಜರಾಯರು ಮಾಡಿದ ಪ್ರವಚನವನ್ನು ಎಡಿಟ್  ಮಾಡಿ ಪ್ರಕಟಿಸಲು ಮಾತ್ರ ಸಾಧ್ಯವಾಗಿದೆ. ವೇದಸುಧೆಯ ಸಹೃದಯರು ಯಾರಾದರೂ ಮುಂದೆ ಬಂದು ಈ ಆಡಿಯೋ ಕೇಳಿ ಅದನ್ನು ಬರಹ ರೂಪಕ್ಕೆ ತಂದು  ಲೇಖನ ಒಂದನ್ನು ಸಿದ್ಧ  ಪಡಿಸಿ   ವೇದಸುಧೆ ಗೆ ಕಳಿಸಿಕೊಟ್ಟರೆ  ಅದನ್ನು ಅನ್ಯಾನ್ಯ ತಾಣಗಳಲ್ಲೂ ಪ್ರಕಟಿಸಲಾಗುವುದು. ಓದುಗರ ಸಹಕಾರ ಕೋರುವೆ.
-ಹರಿಹರಪುರಶ್ರಿಧರ್ 
ಸಂಪಾದಕ 

[ಪ್ಲೆಯರ್ ನಲ್ಲಿ ದೋಷ ಕಂಡುಬಂದಿರುವುದರಿಂದ ಸರಿಪಡಿಸಿ ಆಡಿಯೋ ಕ್ಲಿಪ್ ಪ್ರಕಟಿಸಲಾಗಿದೆ, ಆಡಿಯೋ ಕೇಳದಿದ್ದಲ್ಲಿ ದಯಮಾಡಿ ಕಾಮೆಂಟ್ ಕಾಲಮ್ ನಲ್ಲಿ ಬರೆದರೆ ವೇದಸುಧೆಯ ಗಮನಕ್ಕೆ ಬಂದು ಸರಿಪಡಿಸಲು ಅನುಕೂಲವಾಗುತ್ತದೆ]