Pages

Tuesday, August 27, 2013

ಹಾಸನದಲ್ಲಿ ನಡೆದ ವೇದೋಕ್ತ ಜೀವನ ಶಿಬಿರ

ಶಿಬಿರ ಯಶಸ್ಸು ಕಂಡಿದೆ.ವರದಿ ಮಾಡುವುದು ತಡವಾಗಬಹುದು.ವೀಡಿಯೋ/ಆಡಿಯೋ ಎಡಿಟ್ ಆಗಬೇಕಿದೆ. ಫೋಟೋಗಳೇ ವಿಚಾರ ತಿಳಿಸಬಹುದು.ವಿವರಗಳನ್ನು ಪ್ರಕಟಿಸಲು ಸ್ವಲ್ಪಸಮಯ ಕೊಡಿ.ಶಿಬಿರಾರ್ಥಿಗಳು ತಮ್ಮ ಅನುಭವ/ಸಲಹೆಯನ್ನು vedasudhe@gmail.com ಗೆ ಮೇಲ್ ಮಾಡಿದರೆ ಪ್ರಕಟಿಸಲಾಗುವುದು.

RSS ನ ದಕ್ಷಿಣ ಕ್ಷೇತ್ರೀಯ  ಸಂಪರ್ಕ ಪ್ರಮುಖರಾದ ಡಾ|| ಕೆ.ಪ್ರಭಾಕರ ಭಟ್ ಅವರಿಂದ ಶಿಬಿರ ಉದ್ಘಾಟನೆ,ಮುಖ್ಯ ಅತಿಥಿಯಾಗಿ ಸ್ಥಳೀಯ ಪತ್ರಿಕೆ ಜನಮಿತ್ರ ಪ್ರಧಾನ ಸಂಪಾದಕರಾದ ಶ್ರೀ ಕೆ.ಪಿ.ಎಸ್.ಪ್ರಮೋದ್ ,ಮಾರ್ಗದರ್ಶನ: ವೇದಾಧ್ಯಾಯೀ ಶ್ರೀ ಸುಧಾಕರಶರ್ಮ

IMG_0012
IMG_0083.IMG_0072
IMG_0024


IMG_0030

IMG_0027IMG_0195IMG_0186IMG_0167IMG_0132IMG_0130IMG_0121IMG_0106IMG_0090IMG_0048IMG_0053
IMG_0073

IMG_0103

IMG_0111

IMG_0123

IMG_0131

IMG_0153

IMG_0182


IMG_0035

IMG_0200 IMG_0203


ಶಿಬಿರಾರ್ಥಿಗಳ ಅನಿಸಿಕೆಗಳು:-

//dhiyoo yoo  na prachodayaath//

   JAI HO  VEEDABHARATHI   JAI HO SRIDHARA  JAI HO VISWANATHA.

shisthu, bhaddathe, mathhu  achhukattu shibirakke  karanaradha abhinava  VISHNUGUPTHA(sudhakara Sharma) mathu hariharapura Sridhara ravarige  hruthpoorvaka  ABHINANDHANEGALU.  nijavaagiyu saarthaka shibhiravaagithhu. 3 dina naanu  horaprapanchavanne  kaledukondiddde.

   Mukya athithigalaagi veedaparangatharannu  ahwanisiddare, innasttu  meragu  barabahudithhu.   Nava bharathada seetheya saangathyadalliruva  SHARMARU nijavaagiyu  DHANYARU.


-ಡಾ||ಕೆ.ಜಿ.ಕಾರ್ನಾಡ್, ತುಮಕೂರು
-------------------------------------------------------------------------------
ಶಿಬಿರ ಸಮಾರೋಪದ ದಿನ ಬೆಳಿಗ್ಗೆ 8.30 ಕ್ಕೆ ಶುರುವಾದ ಸುಧಾಕರಶರ್ಮರ ಮಾತು ಮುಗಿದದ್ದು ರಾತ್ರಿ 11.30 ಕ್ಕೆ. ಶಿಬಿರ ಮುಗಿಸಿ ಈಶಾವಾಸ್ಯಮ್ ಗೆ ಬಂದ ನಂತರ ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಶ್ರೀ ಶ್ರೀನಿವಾಸ್ ಮತ್ತು ಸ್ಥಳೀಯ ಪತ್ರಿಕೆ ಜನಮಿತ್ರ ಪ್ರಧಾನ ಸಂಪಾದಕರಾದ ಶ್ರೀ ಕೆ.ಪಿ.ಎಸ್.ಪ್ರಮೋದ್ ಅವರು ಈಶಾವಾಸ್ಯಮ್ ನಲ್ಲೇ ಸಂದರ್ಶನ ನಡೆಸಿದರು. ಅದರ ವರದಿಯನ್ನು ಪ್ರಕಟಿಸಲಾಗುವುದು.




Thursday, August 22, 2013

ಯೋಚಿಸಲೊ೦ದಿಷ್ಟು... ೬೬


೧.  ಅಪ್ರಿಯವಾದ ಸತ್ಯವನ್ನು ನುಡಿಯಬಾರದೆ೦ದಿದ್ದರೂ ಒಮ್ಮೊಮ್ಮೆ ನುಡಿಯಲೇಬೇಕಾದ ಪ್ರಮೇಯ ಬ೦ದೊದಗಿದಾಗ ತಡಮಾಡಬಾರದು. ಸತ್ಯವನ್ನು ಹೊರಹಾಕಲೇ ಬೇಕು. ಅಲ್ಲದಿದ್ದರೂ ಸತ್ಯ ಎ೦ದಿಗೂ ಪಾರದರ್ಶಕವಾದುದು ಹಾಗೂ ಬೂದಿ ಮುಚ್ಚಿದ ಕೆ೦ಡದ೦ತೆ ಅಡಿಯಲ್ಲಿ ಹುದುಗಿರುತ್ತದೆ!
೨. ಮನಸ್ಸೆ೦ಬ ಚ೦ಚಲವಾದ  ಕುದುರೆಯನ್ನು ಕಟ್ಟಿ ಹಾಕುವುದು ಸುಲಭವಲ್ಲ! ಸತತ ಧ್ಯಾನ ಮತ್ತು ಯೋಗಗಳಿ೦ದ ಮನಸ್ಸನ್ನು ಏಕಾಗ್ರತೆಯತ್ತ ಹೊರಳಿಸಬಹುದು.
೩. ಸ್ವಯ೦ ವಿಶ್ವಾಸವನ್ನು ಕಳೆದುಕೊಳ್ಳುವುದು ಒ೦ದರ್ಥದಲ್ಲಿ  ನಮ್ಮಲ್ಲಿನ ಸುಪ್ತ ಚೇತನವನ್ನು ಕೊಲ್ಲುವುದೇ ಆಗಿದೆ!
೪. ತಾಯಿ ಹಾಗೂ ತಾಯ್ನಾಡಿಗಿ೦ತ ಮಿಗಿಲಾದ ದೇವರಿಲ್ಲ!
೫. ಮಾತೃಭಾಷೆಯ ಉಧ್ಧಾರವೂ ದೇಶೋಧ್ಧಾರವೇ.
೬.  ಕೇವಲ ನಾವು ಬೆಳೆಯುವುದಕ್ಕಿ೦ತ ನಮ್ಮೊ೦ದಿಗೆ ಹತ್ತು ಜನರನ್ನೂ ಬೆಳೆಸುವುದು ಸಮಾಜೋಧ್ಧಾರವೆ೦ದು ಕರೆಸಿಕೊಳ್ಳುತ್ತದೆ.
೭. ಆರ್ಥಿಕ ಸ೦ಪತ್ತಿನಿ೦ದೇನೂ ಪ್ರಯೋಜನವಿಲ್ಲ! ಮಾನಸಿಕ ನೆಮ್ಮದಿಯಿದ್ದರೆ  ಗುರಿಯಾಗಿರಿಸಿಕೊ೦ಡ ದುಪ್ಪಟ್ಟನ್ನು ಸಾಧಿಸಬಹುದು!
೮. ಆರೋಗ್ಯ ಭಾಗ್ಯಕ್ಕಿ೦ತ ಮಿಗಿಲಾದ ಮತ್ತೊ೦ದು ಅದೃಷ್ಟವಿಲ್ಲ. ಸತತವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯೋಗವನ್ನು ಮಾಡಿದ೦ತೆಯೇ!
೯. ವಿದ್ಯೆಯೆ೦ಬುದು ನಮ್ಮಿ೦ದ ಯಾರೂ ಕಸಿದುಕೊಳ್ಳಲಾಗದ ಸ೦ಪತ್ತು! ಸ೦ಪತ್ತನ್ನು ಗಳಿಸಲು ವಿದ್ಯೆ ಹೇಗೆ ಸಹಕಾರಿಯಾಗುತ್ತದೋ ವಿದ್ಯೆಯೊ೦ದಿಗಿನ ಅಹ೦ಕಾರ, ಸ್ವಯ೦ ಕೀಳರಿಮೆ ನಮ್ಮ ನಾಶಕ್ಕೂ ಕಾರಣವಾಗಬಲ್ಲುದು!
೧೦. ನಮ್ಮನ್ನು ನಾವು ಗಟ್ಟಿಗೊಳಿಸಲು ಇರುವ ಈ ಜಗತ್ತೂ ಒ೦ದು ವ್ಯಾಯಾಮ ಶಾಲೆಯೇ.- ಸ್ವಾಮಿ ವಿವೇಕಾನ೦ದರು
೧೧. ಸದಾ ಹಸನ್ಮುಖತೆಯೇ ಅಧ್ಯಾತ್ಮಿಕ ಹಾಗೂ ಧಾರ್ಮಿಕ ಪ್ರಗತಿಯ ಮೊದಲ ಗುರುತು .- ಸ್ವಾಮಿ ವಿವೇಕಾನ೦ದರು
೧೨. ಶಿಕ್ಷಣಕ್ಕಿ೦ತಲೂ ಶೀಲವೇ ಮುಖ್ಯವಾದುದು- ಸ್ಪೆನ್ಸರ್
೧೩. ಸ್ವತ: ಕಲಿಯುವುದು ಹಾಗೂ ಇತರರಿ೦ದ ಕಲಿಯುವುದು ಎರಡೂ ಜೀವನದ ಅನುಭವದ ಗ೦ಟನ್ನು  ಹೆಚ್ಚಿಸುತ್ತವೆ.
೧೪.  ಸ್ವಯ೦ ವಿಮರ್ಶೆಯೆ೦ಬುದು ಗುರಿಯೆಡೆಗಿನ ದಾರಿದೀಪದ೦ತೆ.
೧೫. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಹ೦ತಕ್ಕೆ ತಲುಪುವಾಗಲೆಲ್ಲಾ ಅದನ್ನು ದೂರೀಕರಿಸಲೆ೦ಬ೦ತೆ ಭಯೋತ್ಪಾದಕ ದಾಳಿಗಳು ನಡೆಯುತ್ತಿರುತ್ತವೆ!

Monday, August 12, 2013

ವೇದೋಕ್ತ ಜೀವನ ಶಿಬಿರ



ವೇದಭಾರತೀ, ಹಾಸನ


ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಮಾರ್ಗದರ್ಶನದಲ್ಲಿ

ವೇದೋಕ್ತ ಜೀವನ ಶಿಬಿರ

ಸ್ಥಳ: ಸಹೃದಯ ಮಂದಿರ, ಶ್ರೀಶಂಕರಮಠದ ಆವರಣ,ಹಾಸನ

ದಿನಾಂಕ 23,24 ಮತ್ತು 25 ಆಗಸ್ಟ್ 2013

ಸಮಯ ಸಾರಿಣಿ

ಪ್ರಾತ:ಕಾಲ 
5:00 :ಉತ್ಥಾನ
5:00 ರಿಂದ 6:15 :ಶೌಚ-ಸ್ನಾನ-ಪಾನೀಯ
6:15 ರಿಂದ 7:00 :ಯೋಗ-ಪ್ರಾಣಾಯಾಮ
7:15 ರಿಂದ 8:00 :ಸಂಧ್ಯೋಪಾಸನೆ-ಅಗ್ನಿಹೋತ್ರ
8:00 ರಿಂದ 8.30 :ಉಪಹಾರ
8:45 ರಿಂದ 11:00 :ವೇದೋಕ್ತ ಜೀವನ ಕ್ರಮ,ಅವಧಿ-1 
11:00 ರಿಂದ 12:00 :ವೇದಾಭ್ಯಾಸ

ಮಧ್ಯಾಹ್ನ: 
12:15 ರಿಂದ 2:30 :ಭೋಜನ ವಿಶ್ರಾಂತಿ
2:45 ರಿಂದ 4:00 :ವೇದೋಕ್ತ ಜೀವನ ಕ್ರಮ,ಅವಧಿ-2 
4:00 ರಿಂದ 4:30 :ಪಾನೀಯ
4:30 ರಿಂದ 6:00 :ವೇದೋಕ್ತ ಜೀವನ ಕ್ರಮ ,ಅವಧಿ-3
6:00 ರಿಂದ 6:40 :ಸಂಧ್ಯೋಪಾಸನೆ-ಅಗ್ನಿಹೋತ್ರ

ರಾತ್ರಿ:
7:00 ರಿಂದ 8:00 :ಉಪನ್ಯಾಸ 
8:15 ರಿಂದ 9:00 :ಭೋಜನ 
9:00 ರಿಂದ 10:00 :ಅನೌಪಚಾರಿಕ
10:00-ದೀಪ ವಿಸರ್ಜನೆ

ವೇದೋಕ್ತ ಜೀವನ ಶಿಬಿರ- ಸೂಚನೆಗಳು:
1.ಶಿಬಿರಾರ್ಥಿಗಳು ದಿನಾಂಕ 22.8.2013 ರಾತ್ರಿ 9.00ಕ್ಕೆ ಮುಂಚೆ ಶಿಬಿರಸ್ಥಾನದಲ್ಲಿರಬೇಕು.ರಾತ್ರಿ ಊಟದ ವ್ಯವಸ್ಥೆ ಇರುತ್ತದೆ.
2.ಜಮಖಾನದ ವ್ಯವಸ್ಥೆ ಇರುತ್ತದೆ.ಹೊದಿಕೆಯಣ್ಣೂ ಶಿಬಿರಾರ್ಥಿಗಳೇ ತರಬೇಕು.
3.ಹಾಸನದ ಶಿಬಿರಾರ್ಥಿಗಳು ಶಿಬಿರದಲ್ಲಿ ರಾತ್ರಿಯ ಊಟ ಮುಗಿಸಿ ಮನೆಗೆ ತೆರಳಿ ಬೆಳಿಗ್ಗೆ6.00ಕ್ಕೆ ಶಿಬಿರಸ್ಥಾನದಲ್ಲಿ ಹಾಜರಿರಬೇಕು.
4.ಟಾರ್ಚ್ ಒಂದನ್ನು ಹೊಂದಿದ್ದರೆ ಉತ್ತಮ.
5.ಬರೆಯಲು ಪುಸ್ತಕ ಪೆನ್ ಶಿಬಿರದಲ್ಲಿ ಕೊಡಲಾಗುತ್ತದೆ.
6.ವೇದೋಕ್ತ ಜೀವನ ಪಥ, ನಿತ್ಯ ಸಂಧ್ಯಾಗ್ನಿಹೋತ್ರ, ನಿಜವ ತಿಳಿಯೋಣ ಸಿಡಿ, ಮತ್ತು ಉಪಯುಕ್ತ ಇತರೆ ಪುಸ್ತಕಗಳು ಶಿಬಿರದಲ್ಲಿ ಮಾರಾಟಕ್ಕೆ ಲಭ್ಯ.
7.ಶಿಬಿರದಲ್ಲಿ ಮುಕ್ತ ಸಂವಾದಕ್ಕೆ ಅವಕಾಶವಿರುತ್ತದೆ.
8.ಮಲಗಲು ಸ್ತ್ರೀ ಪುರುಷರಿಗೆ ಪ್ರತ್ಯೇಕ ಹಾಲ್ ವ್ಯವಸ್ಥೆ ಇರುತ್ತದೆ .ಪ್ರತ್ಯೇಕ ಕೊಠಡಿ ಗಳಿರುವುದಿಲ್ಲ
9.ಬೆಲೆಬಾಳುವ ಸಾಮಾನುಗಳನ್ನು ತರದಿರುವುದು ಉತ್ತಮ
10.ಶಿಬಿರದಲ್ಲಿನ ಎಲ್ಲಾ ಕಾರ್ಯಕ್ರಮಗಳೂ ರೆಕಾರ್ಡ್ ಆಗುತ್ತವೆ ಮತ್ತು ಅದರ ಆಡಿಯೋ/ವೀಡಿಯೋ/ ಫೋಟೋಗಳು ಇರುವ ಸಿ.ಡಿ/ಡಿ.ವಿ.ಡಿ ಯನ್ನು ಆಸಕ್ತರಿಗೆ ಶಿಬಿರ ಮುಗಿದ 15 ದಿನಗಳಲ್ಲಿ ಕಳಿಸಿಕೊಡ ಲಾಗುವುದು.ಆದ್ದರಿಂದ ಶಿಬಿರಾರ್ಥಿಗಳು ಬೆಲೆಬಾಳುವ ಕ್ಯಾಮರಾ, ಮೊಬೈಲ್ ಅಥವಾ ರೆಕಾರ್ಡಿಂಗ್ ಸಾಧನ ತರದಿರುವುದು ಉತ್ತಮ.ಒಂದು ವೇಳೆ ತಂದರೆ ಬೆಲೆಬಾಳುವ ಸಾಧಗಳ ಜವಾಬ್ದಾರಿ ಶಿಬಿರಾರ್ಥಿಗಳದ್ದೇ ಆಗಿರುತ್ತದೆ.
11.ವಿಶ್ರಾಂತಿ ಸಮಯದ ಹೊರತಾಗಿ ಶಿಬಿರದ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿರಬೇಕು.
12.ವೇದಸುಧೆ ತಾಣದಲ್ಲಿ ಶಿಬಿರಾರ್ಥಿಗಳ ಹೆಸರು ಪ್ರಕಟಿಸಲಾಗಿದೆ.ಒಂದುವೇಳೆ ಶಿಬಿರಶುಲ್ಕ 500.00 ರೂ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಅವರ ಹೆಸರು ಪ್ರಕಟವಾಗಿರದಿದ್ದರೆ vedasudhe@gmail.com ಗೆ ಹಣಪಾವತಿ ವಿವರವನ್ನು ಮೇಲ್ ಮಾಡಿ.
13.ದಿನಾಂಕ 25.8.2013 ಭಾನುವಾರ ಸಂಜೆ 5.00 ಗಂಟೆಗೆ ನಡೆಯುವ ಶಿಬಿರ ಸಮಾರೋಪ ಸಮಾರಂಭವನ್ನು ಮುಗಿಸಿಕೊಂಡು ಶಿರಾರ್ಥಿಗಳು ಹಿಂದಿರುಗಬಹುದು. ಹೊರ ಊರುಗಳಿಗೆ ಅಂದು ತೆರಳಲು ಅವಕಾಶವಿಲ್ಲದಿದ್ದವರಿಗೆ ರಾತ್ರಿ ಉಳಿಯಲು ಅವಕಾಶವಿರುತ್ತದೆ.
14.ಹೆಚ್ಚಿನ ಮಾಹಿತಿಗಾಗಿ ಕವಿನಾಗರಾಜ್: 9448504804,ಹರಿಹರಪುರಶ್ರೀಧರ್:9663572406, ಅಥವಾ ಶ್ರೀ ಚಿನ್ನಪ್ಪ: 9448653727ಇವರನ್ನು ಸಂಪರ್ಕಿಸಿ


Sunday, August 11, 2013

ಸರಳ ವಾಸ್ತು ಹೋಮ

ನಿಮ್ಮ ಜೀವನ ವೇಸ್ಟ್!!!!!

-ನೀವು ಹೀಗೆ ಯಾವಾಗಲೂ ಏನಾದರೂ ಮಾಡ್ತಾ ಇರ್ತೀರಲ್ಲಾ,ನಿಮಗೆ ಅನುಷ್ಠಾನಕ್ಕೆ ಯಾವಾಗ ಸಮಯ ಸಿಗುತ್ತೇ?
........ಪ್ರಶ್ನೆ ಮಾಡಿದವರು ನನ್ನ ಆತ್ಮೀಯರೇ ಹೌದು. ನನ್ನ ಬಗ್ಗೆ ಅವರಿಗೆ ಹೆಚ್ಚು ಕಳಕಳಿ. ನಾನು ಕೆಳಿದೆ" ಅನುಷ್ಠಾನ ಎಂದರೆ ಏನು?
-ಏನು ಹೀಗೆ ಹೆಳ್ತೀರಲ್ಲಾ, ನಾಲ್ಕಾರು ವರ್ಷದಿಂದ ವೇದ ಪ್ರಸಾರಕ್ಕಾಗಿ ಕೆಲಸ ಮಾಡ್ತಾ ಇದ್ದೀರಿ, ಅನುಷ್ಠಾನ ಎಂದರೆ ನಿಮಗೆ ಗೊತ್ತಿಲ್ಲದಿದ್ದರೆ ಬೇರೆಯವರಿಗೆ ಏನು ಹೇಳ್ತೀರಿ?
-ನಿಮ್ಮ ಕೊನೆ ಪ್ರಶ್ನೆಗೆ ಮೊದಲು ಉತ್ತರ ಕೊಡ್ತೇನೆ." ನಾನು ಯಾರಿಗೂ ಏನೂ ಹೇಳಲು ಹೊರಟಿಲ್ಲ" ಈಗ ಅನುಷ್ಠಾನ ಅಂದರೆ ಏನು ಅಂತಾ ನೀವು ಹೇಳಿ.
-ನೋಡಿ, ಒಬ್ಬ ಬ್ರಾಹ್ಮಣ ನಾದವನು ತ್ರಿಕಾಲ ಸಂಧ್ಯಾವಂದನೆ ಮಾಡಬೇಕು. ದಿನದಲ್ಲಿ ನೂರಾದರೂ ಗಾಯತ್ರಿ ಜಪ ಮಾಡಲೇ ಬೇಕು. ಬಿಳಿಗ್ಗೆ ಮತ್ತು ಸಂಜೆ ದೇವರ ಪೂಜೆ ಮಾಡಬೇಕು.ವಿಷ್ಣು ಸಹಸ್ರನಾಮ,ಲಲಿತಾ ಸಹಸ್ರನಾಮ ಪಾರಾಯಣ ಮಾಡಬೇಕು.
-ಅದಕ್ಕೆಲ್ಲಾ ಎಷ್ಟು ಸಮಯಬೇಕು?
-ಮಾಡುವುದರ ಮೇಲೆ ಹೋಗುತ್ತೆ. ನನಗೆ ಇಷ್ಟಕ್ಕೆಲ್ಲಾ hardly one hour is enough. ನಿಮಗೆ ಅಭ್ಯಾಸ ಇಲ್ಲದಿದ್ದರೆ ಎರಡು ಮೂರು ಗಂಟೆ ಬೇಕಾಗಬಹುದು.
-ವೇದಾಧ್ಯಯನ ಸಮಯ ಅನುಷ್ಠಾನಕ್ಕೆ ಸೇರಿಕೊಳ್ಳುತ್ತಾ? ಅಥವಾ ಇಲ್ವಾ?
- ಏನ್ರೀ ಹೀಗೆ ಹೇಳ್ತೀರಾ? 
ಅಧ್ಯಯನಕ್ಕೂ ಅನುಷ್ಠಾನಕ್ಕೂ ವೆತ್ಯಾಸ ಗೊತ್ತಿಲ್ಲವಲ್ಲಾ, ನಿಮಗೆ!
-ತಿಳಿದವರು ನೀವು ಹೇಳಿದರಾಯ್ತು
-ನೋಡಿ, ಅಧ್ಯಯನ ಬೇರೆ, ಅನುಷ್ಠಾನ ಬೇರೆ. ಜ್ಞಾನವನ್ನು ಪಡೆಯುವುದಕ್ಕೆ ಮಾಡಬೇಕಾದುದು ಅಧ್ಯಯನ. ನೀವು ವೇದವನ್ನಾದರೂ ಅಧ್ಯಯನ ಮಾಡಿ, ಪುರಾಣವನ್ನಾದರೂ ಓದಿ,ಏನಾದರೂ ಓದಿ,ಅದು ಅನುಷ್ಠಾನಕ್ಕೆ ಬರುವುದಿಲ್ಲ. ಅನುಷ್ಠಾನ ಎಂಬುದು ಬ್ರಾಹ್ಮಣನ ಕರ್ತವ್ಯ. ತ್ರಿಕಾಲ ಸಂಧ್ಯಾ, ಎರಡು ಹೊತ್ತು ದೇವರಪೂಜೆ, ರುದ್ರಾಭಿಷೇಕ, ನಿತ್ಯವೂ ನೂರಾದರೂ ಗಾಯತ್ರಿ ಮಾಡಲೇಬೇಕು.
- ನೋಡಿ, ನಾನು ಬೆಳಿಗ್ಗೆ ಐದಕ್ಕೆ ಏಳ್ತೀನಿ, ಪ್ರಾಥ: ವಿಧಿಗಳನ್ನು ಮುಗಿಸಿಕೊಂಡುಸಂಧ್ಯೋಪಾಸನೆ ಮತ್ತು ಅಗ್ನಿಹೋತ್ರವನ್ನು ಅರ್ಧಗಂಟೆ ಮಾಡಿ ನಂತರ ವೇದಕ್ಕೆ ಸಂಬಂಧಿಸಿದ ಓದು, ಬರವಣಿಗೆ,ಕಾರ್ಯಕ್ರಮಗಳ ಯೋಜನೆ ಇವುಗಳಲ್ಲಿ ರಾತ್ರಿ ಹತ್ತಾಗುವುದು ಗೊತ್ತಾಗುವುದೇ ಇಲ್ಲ. ಕಣ್ಣಿಗೆ ನಿದ್ರೆ ಬರುತ್ತೆ ಮಲಗ್ತೀನಿ.
- ದೇವರ ಪೂಜೆ ಮಾಡಲ್ವಾ?
-ನಾನು ಮಾಡುವುದು ಈಗ ನಾನು ಹೇಳಿದಷ್ಟನ್ನೇ.
-ಹಾಗಾದರೆ ನಿಮಗೆ ಏನು ಸಾಧನೆ ಮಾಡಿದಂತಾಯ್ತು? ಬ್ರಾಹ್ಮಣನ ಮಿನಿಮಮ್ ಕರ್ತವ್ಯಗಳನ್ನೂ ನೀವು ಮಾಡುತ್ತಿಲ್ಲವಲ್ಲಾ! ನಿಮ್ಮ ಜೀವನ ವೇಸ್ಟ್!!!!!
-ನನ್ನ ಮಿತ್ರ ಒಬ್ಬ ಸ್ವಯಂ ನಿವೃತ್ತ ತಹಸಿಲ್ದಾರ್ ಇದಾರೆ. ಅವರೂ ಅಷ್ಟೇ ಮಾಡೋದು.ನಾನೂ ಎರಡು ವರ್ಷ ಮುಂಚೆ ಸ್ವಯಂ ನಿವೃತ್ತಿ ಪಡೆದು ಇಬ್ಬರೂ ಇದೇ ಕೆಲಸಾ ಮಾಡ್ತಾ ಇದ್ದೀವಿ. ಇಬ್ಬರ ಜೀವನವೂ ವೇಸ್ಟ್ ಅಂತೀರಾ?
-ಇನ್ನೇನು ಮತ್ತೇ?

http://blog.vedasudhe.com/2010/11/blog-post_5166.html

Wednesday, August 7, 2013

ವೇದೋಕ್ತ ಜೀವನ ಶಿಬಿರ


ವೇದಭಾರತೀ, ಹಾಸನ


ವೇದೋಕ್ತ ಜೀವನ ಶಿಬಿರ
ಮಾರ್ಗದರ್ಶನ: ವೇದಾಧ್ಯಾಯೀ ಸುಧಾಕರಶರ್ಮ, ಬೆಂಗಳೂರು


ದಿನಾಂಕ:   ಆಗಸ್ಟ್ 23,24 ಮತ್ತು 25                     ಸ್ಥಳ: ಸಹೃದಯಮಂದಿರ. ಶ್ರೀ ಶಂಕರಮಠ, ಹಾಸನ

ಶಿಬಿರದ ಬಗ್ಗೆ ಕೆಲವು ಮಾಹಿತಿಗಳು:
1.ಬೆಳಿಗ್ಗೆ ಮತ್ತು ಸಂಜೆ  ಸಂಧ್ಯೋಪಾಸನೆ  ಮತ್ತು ಅಗ್ನಿಹೋತ್ರ ಅಭ್ಯಾಸ
2.ವೇದಮಂತ್ರಾಭ್ಯಾಸ
3.ವೇದೋಕ್ತ ಜೀವನದ ಬಗ್ಗೆ ಶರ್ಮರ ಮಾರ್ಗದರ್ಶನ[ ದಿನದಲ್ಲಿ ನಾಲ್ಕು   ಅವಧಿಗಳು]
4.ಪ್ರತಿದಿನ  ಸಂಜೆ ಶ್ರೀಸುಧಾಕರಶರ್ಮರ ಸಾರ್ವಜನಿಕ ಉಪನ್ಯಾಸ
5.ಮುಕ್ತ ಚರ್ಚೆಗೆ ಅವಕಾಶ
6.ಸರಳವಾದ ಊಟೋಪಚಾರ
7.ತಂಗಲು ವ್ಯವಸ್ಥೆ
8.ಶಿಬಿರಶುಲ್ಕ ರೂ: 500.00

 ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಶಿಬಿರಾರ್ಥಿಗಳು
1. ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2. ಸುಹಾಸ್ ದೇಶಪಾಂಡೆ,ಬೆಂಗಳೂರು
3. ಸುಬ್ರಹ್ಮಣ್ಯ, ಬೆಂಗಳೂರು
4. ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5. ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6. ಗಿರೀಶ್ ನಾಗಭೂಷಣ್, ಬೆಂಗಳೂರು
7. ವಿಶ್ವನಾಥ್ ಕಿಣಿ-ಪುಣೆ 
8. ಗುರುಪ್ರಸಾದ್, ಭದ್ರಾವತಿ
9.ಮಹೇಶ್, ಭದ್ರಾವತಿ
10. ಕೆ.ಜಿ.ಕಾರ್ನಾಡ್,ತುಮಕೂರು
11.ಮೋಹನ್ ಕುಮಾರ್, ನಂಜನಗೂಡು
12. ಕವಿ ನಾಗರಾಜ್,ಹಾಸನ
13. ಶ್ರೀನಿವಾಸ್, AIR,ಹಾಸನ
14. ಹರಿಹರಪುರಶ್ರೀಧರ್,ಹಾಸನ
15. ಪ್ರೇಮಾ ಭಗಿನಿ,ಹಾಸನ
16. ಚಿನ್ನಪ್ಪ,ಹಾಸನ
17. ಅಶೋಕ್,ಹಾಸನ
18.ಶ್ರೀಮತೀ ಶೈಲ,ಹಾಸನ
19.ಪಾಂಡುರಂಗ ,ಹಾಸನ      
20.ಸತೀಶ್,ಹಾಸನ
21.ಲೋಕೇಶ್,ಹಾಸನ
22.ಆದಿಶೇಷ್,ಹಾಸನ
23.ಕೇಶವಮೂರ್ತಿ,ಹಾಸನ
24.ಬೈರಪ್ಪಾಜಿ ,ಹಾಸನ
25.ನಿತೀಶ್ ಭಾರಧ್ವಾಜ್,ಹಾಸನ
26. ವಿನಯ್ ಕಾಶ್ಯಪ್,ಬೆಂಗಳೂರು.
27.ಶಿವಶಂಕರ್,ಬೆಂಗಳೂರು
ದೂರವಾಣಿಯ/ಮೇಲ್  ಮೂಲಕ ನೊಂದಾಯಿಸಿಕೊಂಡಿರುವವರು
[ಇವರುಗಳು ತಮ್ಮ ಭಾಗವಹಿಸುವಿಕೆಯನ್ನು vedasudhe@gmail.com ಗೆ ಮೇಲ್ ಮಾಡುವುದರ ಮೂಲಕ ತಮ್ಮ ಪಾಲ್ಗೊಳ್ಳುವಿಕೆಯನ್ನು  ದೃಢಪಡಿಸಲು ಕೋರಿದೆ]
1. ಶಿವಕುಮಾರ್, ಬೆಂಗಳೂರು
2. ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
3. ವಿನಯ್ ಕಾಶ್ಯಪ್, ಬೆಂಗಳೂರು
4 .ಶರಣಪ್ಪ, ಗದಗ್
5. ವಿಜಯ್ ಹೆರಗು, ಬೆಗಳೂರು
6. ಸುಬ್ರಹ್ಮಣ್ಯ ಹೆಚ್.ಎಸ್ , ಹಳೆಬೀಡು
7. ಶ್ರೀ ಹರ್ಷ,ಹಾಸನ
8. ನಟರಾಜ್ ಪಂಡಿತ್,ಹಾಸನ
9. ಶ್ರೀ ನಾಥ್,ಹಾಸನ
10. ಕೆ.ವಿ.ರಾಮಸ್ವಾಮಿ, ಹಾಸನ 

ಶಿಬಿರಶುಲ್ಕವನ್ನು ಈಗಾಗಲೇ ಪಾವತಿಸಿದ್ದು  ಶಿಬಿರಾರ್ಥಿಗಳ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 



ಶಿಬಿರಕ್ಕೆ ನೊಂದಾಯಿಸಿಕೊಳ್ಳಲು ಈಗಲೂ ಅವಕಾಶವಿದೆ. ಇಚ್ಛೆಯುಳ್ಳವರು vedasudhe@gmail.com ಗೆ ಮೇಲ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು.




-ಹರಿಹರಪುರಶ್ರೀಧರ್

ಸಂಯೋಜಕ
ವೇದಭಾರತೀ, ಹಾಸನ