Pages

Saturday, September 29, 2012

‘ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತ’-ಮಾಧ್ಯಮ ಸಂವಾದದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರು


ಹಾಸನ, ಸೆ. ೨೯: ವೇದಗಳು ಹಳಸಲು ಎಂದಾಗಲಿ, ಕಾಲ ಮಿತಿಯುಳ್ಳ ಅಪ್ರಸ್ತುತ ವಿಷಯವೆಂದಾಗಲಿ ತಿಳಿಯುವುದೇ ಅಜ್ಞಾನ ಹಾಗೂ ತಪ್ಪು ಕಲ್ಪನೆಯಾಗಿದೆ; ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತವೇ ಆಗಿವೆ ಎಂದು ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರು  ಪ್ರತಿಪಾದಿಸಿದರು.

ಭಾನುವಾರ ವೇದಗಳ ಕುರಿತಾದ ಮುಕ್ತ ಸಂವಾದ ನಡೆಸಿಕೊಡಲಿಕ್ಕಾಗಿ ಇಂದು ನಗರಕ್ಕೆ ಭೇಟಿ ನೀಡಿದ್ದ ಅವರು, ಇಂದು ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಭಾಗವಹಿಸಿ ವೇದಗಳ ಕುರಿತಾದ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಮಾನವ ಜೀವಿಯ ಜತೆಯಾಗಿಯೇ ಇರುವ ಹಾಗೂ ಇರಬೇಕಾದ ಹಲವಾರು ಸತ್ಯ ಸಂಗತಿಗಳ ಕುರಿತು ತಿಳಿವಳಿಕೆ, ಜ್ಞಾನ ಹಾಗೂ ಮುನ್ನಡೆಯಲು ಮಾರ್ಗದರ್ಶನ ಮಾಡುವುದರಿಂದ ವೇದಗಳು ಎಂದೆಂದಿಗೂ ಪ್ರಸ್ತುತವೇ ಎಂದು ಹಲವು ನಿದರ್ಶನಗಳ ಸಹಿತ ತಿಳಿಸಿಕೊಟ್ಟ ಅವರು, ಮತ್ತೊಬ್ಬರನ್ನು ಹಾಳು ಮಾಡುವ ಗುಣ, ಹಿಂಸೆ, ತಾರತಮ್ಯ ಅಥವಾ ಭೇದ ಭಾವ ಇತ್ಯಾದಿ ಯಾವುದೇ ನಕಾರಾತ್ಮಕ ಅಂಶಗಳು ವೇದಗಳಲ್ಲಿಲ್ಲ ಎಂದು ತಿಳಿಸಿದರು. ಮನು ಸ್ಮೃತಿ ಸೇರಿದಂತೆ ಹಲವಾರು ಸ್ಮೃತಿಗಳು ಆಯಾ ಕಾಲ ಕಾಲಮಾನಗಳಿಗೆ ತಕ್ಕಂತೆ ರಚಿತವಾದ ನಿಯಮಗಳೇ ಹೊರತು ಅವು ಪ್ರಸ್ತುತವಾಗುವುದಿಲ್ಲ ಹಾಗೂ ಹಲವಾರು ಕಲಬೆರಕೆ ಅಂಶಗಳೂ ಸಹ ಸೇರಿರುವುದರಿಂದ ಅವು ಪರಮ ಪ್ರಮಾಣವೂ ಆಗುವುದಿಲ್ಲ; ಆದರೆ ಮೂಲ ವೇದಗಳು ಮಾತ್ರ ಎಲ್ಲ ವಿಷಯಗಳಿಗೂ ಪರಮ ಪ್ರಮಾಣವಾಗುತ್ತವೆ. ಏಕೆಂದರೆ ವೇದಗಳೊಂದಿಗೆ ವ್ಯಾಕರಣ, ಶಿಕ್ಷಾ, ಛಂದಸ್ಸು, ಜ್ಯೋತಿಷ (ಖಗೋಳ ವಿಜ್ಞಾನವೇ ಹೊರತು ಈಗಿನ ಫಲ ಜ್ಯೋತಿಷ್ಯ ಅಲ್ಲ), ನಿರುಕ್ತ ಮತ್ತು ಕಲ್ಪ ಎಂಬ ಈ ೬ ವೇದಾಂಗಗಳ ಚೌಕಟ್ಟಿನ ನಡುವೆ ವೇದಗಳು ಬಂಧಿಸಲ್ಪಟ್ಟಿರುವುದರಿಂದ ಅವು ಸುರಕ್ಷಿತವಾಗಿವೆ. ಯಾವುದೇ ಕಲಬೆರಕೆಯಾಗಲಿ; ತಿದ್ದುಪಡಿಯಾಗಲಿ; ಬದಲಾವಣೆಯಾಗಲಿ ಮಾಡಲು ಸಾಧ್ಯವಾಗಿಲ್ಲ; ಸಾಧ್ಯವಾಗುವುದೂ ಇಲ್ಲ. ಹೀಗಾಗಿ ಅವರು ಪರಮ ಪ್ರಮಾಣವೇ ಸರಿ; ಆದರೆ ಇದೇ ಮಾತನ್ನು ಇತರೆ ಪುರಾಣ ಪುಣ್ಯ ಕಥೆಗಳ ಬಗ್ಗೆ ಹೇಳುವಂತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಹಲವು ಸಮರ್ಥನೆಗೊಂದಿಗೆ ಉತ್ತರ ಬಿಡಿಸಿಟ್ಟರು.

       ಬ್ರೀಟೀಷರ  ಮೆಕಾಲೆ ಪ್ರಣೀತವಾದ ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಯಾರ ಉದ್ಧಾರವೂ ಸಾಧ್ಯವಿಲ್ಲ. ಈಗಿನ ಎಲ್.ಕೆ.ಜಿ.ಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಯಾವುದೇ ಸರ್ಟಿಫಿಕೇಟ್ ಆಧಾರಿತ ಶಿಕ್ಷಣದಲ್ಲಿ ಹೊರಗಿನ ವಿಷಯಗಳನ್ನು ಬಲವಂತವಾಗಿ ಮನುಷ್ಯನ ಮೆದುಳಿಗೆ ತುರುಕುವುದಾಗಿದೆ. ಆದ್ದರಿಂದ ಅದು ನಿಜವಾದ ಶಿಕ್ಷಣವೇ ಅಲ್ಲ. ಮನುಷ್ಯನೊಳಗಿನ ಪ್ರತಿಭೆ ಅಥವಾ ಶಕ್ತಿಯನ್ನು ಸಮಾಜದ ಉದ್ಧಾರಕ್ಕಾಗಿ ಹೊರಗೆ ಹಾಕುವುದೇ ನಿಜವಾದ ಶಿಕ್ಷಣ. ಆದರೆ ಅದು ನಡೆಯುತ್ತಿಲ್ಲ. ಈಗೆಲ್ಲಾ ಉಲ್ಟಾ ಶಿಕ್ಷಣವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ವಿಷಾದಿಸಿ, ಶಾಲೆಯ ಮೆಟ್ಟಿಲನ್ನೂ ಹತ್ತದವರು ಪ್ರತಿಭಾವಂತರಾಗಿ ಸಮಾಜ ಸುಧಾರಣೆ ಮಾಡಿದವರ ಪಟ್ಟಿಯನ್ನೇ ಮುಂದಿಟ್ಟರು!
            ವೇದಗಳು ಜಗತ್ತಿನ ಸರ್ವರಿಗಾಗಿಯೇ ಇವೆ; ವೇದ ಎಂದರೆ ಜ್ಞಾನ ಎಂದರ್ಥ. ಅವು ಎಲ್ಲೂ ಜಾತಿ ಪದ್ಧತಿ, ಲಿಂಗ ಭೇದ, ಮೂರ್ತಿ ಪೂಜೆಗಳನ್ನು ಹೇಳಿಲ್ಲ; ಅವೆಲ್ಲ ಶತಮಾನಗಳಿಂದೀಚೆಗೆ ಹುಟ್ಟಿಕೊಂಡ ಸ್ವಾರ್ಥ ಲಾಲಸೆಯ ಪಿಡುಗುಗಳಾಗಿವೆ. ವೇದಗಳು ವಾಸ್ತವವಾಗಿ ವೇದಗಳು ವರ್ಣಗಳ ಕುರಿತು ಹೇಳುತ್ತವೆ; ವರ್ಣ ಎಂದರೆ ಜಾತಿಯಲ್ಲ; ಅದು ‘ಆಯ್ಕೆ’ ಎಂದರ್ಥ. ಸಾಮಾಜಿಕ ಅನಿಷ್ಟಗಳಾದ ಅಜ್ಞಾನ, ಅನ್ಯಾಯ, ಅಭಾವ ಮತ್ತು ಆಲಸ್ಯಗಳ ವಿರುದ್ಧ ಹೋರಾಡಲು ಯಾರಿಗೆ ಯೋಗ್ಯತೆ ಇದೆಯೋ; ಯಾರು ಆ ರೀತಿ ಹೋರಾಟ ಮಾಡಲು ‘ಆಯ್ಕೆ’ ಮಾಡಿಕೊಳ್ಳುವರೋ ಅಂತಹವರಿಗೆ ಕ್ರಮವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ಹೆಸರು. ಅಂತಹ ಮನೋಭಾವ ಹುಟ್ಟಿನಿಂದಲೇ ಬರಬೇಕೆಂದೇನೂ ಇಲ್ಲ; ಯೋಗ್ಯತೆಯಿಂದ ಗಳಿಸಬೇಕು. ಈ ನಾಲ್ವರಲ್ಲಿ ಯಾರೂ ಜೇಷ್ಠರೂ ಅಲ್ಲ; ಕನಿಷ್ಠರೂ ಅಲ್ಲ. ಸಮಾಜೋದ್ಧಾರಕ್ಕೆ ಈ ಎಲ್ಲರೂ ಅಗತ್ಯವಾಗಿ ಬೇಕಾದವರೇ ಆಗಿದ್ದಾರೆ. ಹೀಗಾಗಿ ಈ ಅರ್ಥದಲ್ಲಿ ವರ್ಣಾಶ್ರಮಗಳು ಎಂದೆಂದಿಗೂ ಪ್ರಸ್ತುತ ಎಂದು ಶರ್ಮಾಜಿ ವ್ಯಾಖ್ಯಾನಿಸಿದರು.
           ಅರ್ಥಪೂರ್ಣವಾಗಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ‘ವೇದ ಭಾರತೀ’ ಸಂಚಾಲಕರುಗಳಾದ ಹರಿಹರಪುರ ಶ್ರೀಧರ್, ಕವಿ ನಾಗರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಪ್ರಭಾಕರ ಸ್ವಾಗತಿಸಿ, ವಂದಿಸಿದರು.

Thursday, September 27, 2012

ವೇದಾಧ್ಯಾಯೀ ಶ್ರೀ ಸುಧಾಕರಶರ್ಮ ಕಿರು ಪರಿಚಯ


     ಈಗ್ಗೆ ೧ ವರ್ಷದ ಹಿಂದೆ ‘ಖತಾರ್’ ಎಂಬ ಖಾಸಗಿ ಧಾರ್ಮಿಕ ಟಿ.ವಿ. ವಾಹಿನಿಯಲ್ಲಿ ವಿವಿಧ ಮತ ಧರ್ಮಗಳ ಗುರುಗಳ ನಡುವೆ ಧಾರ್ಮಿಕ ಚರ್ಚೆಯೊಂದು ನೇರ ಸಂವಾದ ರೂಪದಲ್ಲಿ ನಡೆದಿತ್ತು. ಆ ಗುರುಗಳ ನಡುವೆ ‘ಬದುಕುವ ಕಲೆ’ ಕಲಿಸುವ ಓರ್ವ ಗುರು ಭಾರತ ದೇಶವನ್ನು ಪ್ರತಿನಿಧಿಸಿದ್ದರು. ಆದರೆ ಪರಸ್ಪರ ವಾದ ವಿವಾದ ಸಾಗಿದಂತೆ ನಮ್ಮ ಗುರುಗಳಿಗೆ ಸೋಲುಂಟಾಯಿತು! ಈ ಮಹನೀಯರು ನಮ್ಮ ಮನುಕುಲದ ಜ್ಞಾನ ಭಂಡಾರವೆನಿಸಿದ ವೇದಗಳನ್ನು ಬದಿಗಿಟ್ಟು, ನಮ್ಮ ಪರಂಪರೆ ನಡುವೆ ಸಾಗಿ ಬಂದಿರುವ ಕೆಲಸಕ್ಕೆ ಬಾರದ ಪುರಾಣಗಳು-ಪುಣ್ಯ ಕಥೆಗಳನ್ನು ಆಧರಿಸಿ ತಮ್ಮ ವಾದ ಮಂಡಿಸಲು ಯತ್ನಿಸಿದ್ದೇ ಅವರ ಸೋಲಿಗೆ ಕಾರಣವಾಯಿತು. ಅವರ ಜಾಗದಲ್ಲಿ ಪಂಡಿತ್ ಸುಧಾಕರ ಚತುರ್ವೇದಿಗಳೋ ಅಥವಾ ಅವರ ಶಿಷ್ಯ ಸುಧಾಕರ ಶರ್ಮರೋ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು! ಅಂದಹಾಗೆ ಯಾರು ಈ ಸುಧಾಕರ ಶರ್ಮ?


     ಪ್ರಳಯದ ಭೀತಿ, ವಾಸ್ತು, ಜ್ಯೋತಿಷ್ಯ, ವ್ರತಾಚರಣೆ, ವಿಶೇಷ ಪೂಜೆ ಅವುಗಳಿಂದ ಸಿಗುತ್ತದೆನ್ನುವ ಪ್ರತಿಫಲ ಇತ್ಯಾದಿ ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಕಾತರರಾಗುವ ನಾವು ಟಿ.ವಿ. ಮುಂದೆ ಕುಳಿತು ಅಂತಹ ಕಾರ್ಯಕ್ರಮಗಳನ್ನು ಎವೆಯಿಕ್ಕದೆ ವೀಕ್ಷಿಸುತ್ತೇವೆ. ಇಂತಹ ಅಸಂಬದ್ಧ ಪುರಾಣಗಳು, ಪುಣ್ಯ ಕಥೆಗಳು, ಪೂಜೆ, ಪುನಸ್ಕಾರದಂತಹ ವಿಷಯಗಳಾವುವೂ ವೇದದಲ್ಲಿಲ್ಲ; ಜಗತ್ತಿನಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಬೋಧಿಸುವ ‘ಮನುಕುಲದ ಸಂವಿಧಾನ’ವೇ ವೇದ ಎಂಬ ಸತ್ಯ ಸಂಗತಿಗಳನ್ನು ವೇದ ಮಂತ್ರಗಳ ನಿಜವಾದ ಅರ್ಥ ಬಿಡಿಸಿಟ್ಟು ತಿಳಿಸಿಕೊಡುವ ದಾರ್ಶನಿಕರೇ ವೇದಾಧ್ಯಾಯಿ ಸುಧಾಕರಶರ್ಮ! ‘ಚಂದನ’ ವಾಹಿನಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ ೯-೩೦ ರಿಂದ ಪ್ರಸಾರವಾಗುತ್ತಿರುವ ‘ಹೊಸ ಬೆಳಕು’ ಧಾರಾವಾಹಿಯ ಕೇಂದ್ರ ಬಿಂದು- ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವೇದ, ವಿಜ್ಞಾನ ಹಾಗೂ ವೈಚಾರಿಕತೆ- ಈ ಮೂರನ್ನೂ ಮೇಳೈಸಿಕೊಂಡಿರುವ ಅಪರೂಪದ ವಿಶಿಷ್ಟ ಬಹುಮುಖ ವ್ಯಕ್ತಿತ್ವದ ಜ್ಞಾನ ವೃದ್ಧ ಈ ವ್ಯಕ್ತಿ!!
     ಪ್ರಸ್ತುತ ಭಾರತ ದೇಶ ಸಾಗುತ್ತಿರುವ ಹಾದಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ವೇದಗಳ ಕುರಿತು ಚರ್ಚಿಸಲು ಹೊರಟಾಗ ಯಾರಾದರೂ ಮೂಗು ಮುರಿದರೆ ಅಥವಾ ‘ಅನಿಷ್ಟಕ್ಕೆಲ್ಲ ಶನೇಶ್ವರ ಹೊಣೆ’ ಎಂಬಂತೆ ವೇದಗಳನ್ನು ದೂಷಿಸಿದರೆ ಅದು ಸಹಜ ಹಾಗೂ ತಪ್ಪು ಅವರದಲ್ಲ! ಏಕೆಂದರೆ ವೇದಗಳ ಕುರಿತು ಶತ ಶತಮಾನಗಳಿಂದಲೂ ಹರಿದುಬಂದ ತಪ್ಪು ಕಲ್ಪನೆಗಳು, ಪ್ರಕ್ಷಿಪ್ತಗಳು, ಅರೆಬೆಂದ ಎರವಲು ಜ್ಞಾನ, ಗೊಡ್ಡು ಸಂಪ್ರದಾಯಗಳು, ವಿಚಾರವಿಲ್ಲದ ಆಚರಣೆಗಳು, ಜೀವನ ಶೈಲಿ ಇತ್ಯಾದಿ ಅನಿಷ್ಟ ಕಲಸು ಮೇಲೋಗರಗಳ ನಡುವೆ ಭಾರತೀಯರು ಬೆಳೆದು ಬಂದಿರುವ ಬಗೆಯೇ ಇದಕ್ಕೆ ಕಾರಣ. ವೇದಗಳು ವಜ್ರವಿದ್ದಂತೆ; ಆದರೆ ಅಜ್ಞಾನದಿಂದಾಗಿ ವಜ್ರವನ್ನು ತಿಪ್ಪೆಗೆ ಎಸೆಯಲಾಗಿದೆ; ಅದು ವಜ್ರದ ತಪ್ಪಲ್ಲವಲ್ಲ!? ಜಗತ್ತಿಗೇ ಶಾಂತಿ ಪಾಠ ಹೇಳಿದ ನಮ್ಮ ದೇಶದ ಸದ್ಯದ ಪರಿಸ್ಥಿತಿಗೆ ಕೈಗನ್ನಡಿಯಾಗಿ ಖತಾರ್ ಟಿ.ವಿ. ಪ್ರಕರಣ ರೂಪದಲ್ಲಿ ಇನ್ನೊಂದು ವಿಪರ್ಯಾಸ ಸೇರ್ಪಡೆಯಾಯಿತಷ್ಟೆ.
   ವೇದಾಧ್ಯಾಯಿ ಎಂದ ಕೂಡಲೇ ಸಂತನೋ, ಮುನಿಯೋ ಅಥವಾ ಯಾವುದೋ ಮಠದ ಸ್ವಾಮೀಜಿಯೋ ಎಂದೇನೂ ಭಾವಿಸಬೇಕಾಗಿಲ್ಲ. ಬಹುಮುಖ ವಿದ್ಯಾರ್ಹತೆ- ಅಂದರೆ ವಿಜ್ಞಾನ. ಸಂಸ್ಕೃತ ಹಾಗೂ ಲೆಕ್ಕ ಶಾಸ್ತ್ರ (ಐ.ಸಿಡಬ್ಲ್ಯುಎ) ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ವೇದಾಧ್ಯಾಯಿಯೂ ಆಗಿದ್ದು ಸಾಮಾನ್ಯರಲ್ಲಿ ಅಸಾಮಾನ್ಯ ಎಂದು ಧಾರಾಳವಾಗಿ ಹೇಳಬಹುದು! ಈ ಹಿಂದೆ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿದ್ದ ದಿ. ಎನ್. ಶ್ರೀಕಂಠಯ್ಯ ಅವರ ಪುತ್ರರಾದ ಶ್ರೀಯುತರು, ಮಹಾತ್ಮ ಗಾಂಧಿಯವರ ನಿಕಟವರ್ತಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಚತುರ್ವೇದಗಳ ಪಂಡಿತ ಸುಧಾಕರ ಚತುರ್ವೇದಿ ಅವರ ಶಿಷ್ಯರಾಗಿದ್ದಾರೆ. ಇವರ ಇಡೀ ಸುಖೀ ಕುಟುಂಬವೇ ವೇದೋಕ್ತ!
     ೧೯೭೩ ರಿಂದಲೂ ಬೆಂಗಳೂರು ಆಕಾಶವಾಣಿಯ ನಾಟಕ ಕಲಾವಿದರೂ, ಹಲವು ಮಹತ್ವದ ಕೃತಿಗಳ ರಚನಾಕಾರರೂ ಆಗಿರುವ ಶರ್ಮ ಅವರು ನಮ್ಮ ಪರಂಪರೆಯಲ್ಲಿ ಸಾಗಿಬಂದಿರುವ ಅನಿಷ್ಟ ಆಚರಣೆಗಳು, ಗೊಡ್ಡು ಸಂಪ್ರದಾಯಗಳ ಕಟ್ಟಾ ವಿರೋಧಿಯಾಗಿರುವುದರಿಂದ ‘ಖಂಡಿತವಾದಿ ಲೋಕ ವಿರೋಧಿ’ ಎಂಬಂತೆ ಸಂಪ್ರದಾಯಸ್ಥ ವೈದಿಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ‘ಮದುವೆ-ಏಕೆ-ಯಾವಾಗ-ಹೇಗೆ?’, ‘ಮೃತ್ಯುವೇ ನಮಸ್ಕಾರ’, ‘ಜ್ಯೋತಿಷಿಗಳೇ ಸತ್ಯದ ಕೊಲೆ ಮಾಡಬೇಡಿ!’, ‘ವಾಸ್ತು ಬೀಳದಿರಿ ಬೇಸ್ತು!"; ‘ಜನಿವಾರದಲ್ಲಿ ಬ್ರಾಹ್ಮಣ್ಯವಿಲ್ಲ’ ಇತ್ಯಾದಿ ಮಹತ್ವದ ಕೃತಿಗಳ ರಚನಾಕಾರರಾದ ಇವರು ಕರ್ನಾಟಕದಾದ್ಯಂತ ಹಾಗೂ ಪಕ್ಕದ ಆಂಧ್ರ ಪ್ರದೇಶದಲ್ಲೂ ವೇದಗಳ ಕುರಿತು ನಿರಂತರ ಉಪನ್ಯಾಸ ಹಾಗೂ ಪ್ರವಚನಗಳನ್ನು ನೀಡುತ್ತಿದ್ದಾರೆ.
     ವೇದಗಳ ಕುರಿತಾದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಹತ್ವಪೂರ್ಣ ಪ್ರಬಂಧಗಳನ್ನು ಮಂಡಿಸಿರುವ ಶರ್ಮಾಜಿ, ವೇದ ಮಂತ್ರಾರ್ಥಗಳ ವಿವರಣೆ ಸಹಿತವಾಗಿ ಬ್ರಾಹ್ಮಣೇತರರು, ಮಹಿಳೆಯರು ಹಾಗೂ ಬಾಲಕಿಯರಿಗೂ ಸಹ ಉಪನಯನ ಸಂಸ್ಕಾರ ಮಾಡಿಸಿದ್ದಾರೆ; ಮಾಡಿಸುತ್ತಾರೆ! ವ್ಯಕ್ತಿತ್ವ ವಿಕಸನ, ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕೌನ್ಸಿಲಿಂಗ್ (ಸಮಾಲೋಚನೆ) ಮಾಡುವ ಶ್ರೀಯುತರನ್ನು, ರಾಜ್ಯದ ಅನೇಕ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ಟಿ.ವಿ. ಮಾಧ್ಯಮಗಳು ಹಲವು ಕಾರ್ಯಕ್ರಮಗಳ ಮೂಲಕ ಪರಿಚಯಿಸಿವೆ; ಅವರ ಲೇಖನಗಳನ್ನು ಪ್ರಕಟಿಸುತ್ತಿವೆ ಹಾಗೂ ತಮ್ಮ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿವೆ.
     ಬೆಂಗಳೂರು ನಿವಾಸಿಗಳಾಗಿರುವ ಶ್ರೀಯುತರು, ತಮ್ಮ ಮಕ್ಕಳನ್ನು ಹೊರಗಿನ ಯಾವುದೇ ಶಾಲೆಗಳಿಗೂ ಕಳುಹಿಸದೆ ಮನೆಯಲ್ಲೇ ಗುರುಕುಲ ಮಾದರಿ ವೇದ ಶಿಕ್ಷಣ ಕೊಡಿಸಿದ್ದು, ಯಾವ ಪದವೀಧರರಿಗಿಂತಲೂ ಕಡಿಮೆಯಿಲ್ಲದೆ ಒಂದು ಕೈ ಹೆಚ್ಚಾಗಿಯೇ ಬುದ್ಧಿವಂತರನ್ನಾಗಿ ಬೆಳೆಸಿದ್ದಾರೆಂದರೆ ಅಚ್ಚರಿಯೇ ಸರಿ!
-ಎಚ್.ಎಸ್. ಪ್ರಭಾಕರ, ಹಿರಿಯ ಪತ್ರಕರ್ತರು,
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪತ್ರಕರ್ತರ ಸಂಘ,
ಎಚ್.ಆರ್.ಎಸ್. ಕಾಂಪೌಂಡ್, ೬ನೇ ಕ್ರಾಸ್,
ಕೆ.ಆರ್. ಪುರಂ, ಹಾಸನ-೫೭೩ ೨೦೧

ಸಿರ್ಸಿಯ ವೇದಾಧ್ಯಾಯೀ ಶ್ರೀ ಪರಮೇಶ್ವರ್ ಅವರ ಬಿಚ್ಚು ಮಾತುಗಳು



ವೇದಸುಧೆಯ ಅಭಿಮಾನಿಗಳಾದ ಸಿರ್ಸಿಯ ವೇದಾಧ್ಯಾಯೀ ಶ್ರೀ ಪರಮೇಶ್ವರ್  ಇವರು ಸಂಸ್ಕೃತ MA ಪದವೀದರರು. ಸಿರ್ಸಿಯಲ್ಲಿ ವೈದಿಕ ವೃತ್ತಿ ಮಾಡುತ್ತಿರುವ ಶ್ರೀಯುತರು ದಿನದಲ್ಲಿ ಬಹುಭಾಗವನ್ನು ಅಧ್ಯಯನಕ್ಕಾಗಿ ಮೀಸಲಿಟ್ಟಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಶ್ರೀಯುತರೊಡನೆ ಅಂತರ್ಜಾಲದಲ್ಲಿ ಕರೆಮಾಡಿ ನಮ್ಮ ಸಂಭಾಷಣೆಯನ್ನು ಅವರ ಅನುಮತಿ ಪಡೆದು ರೆಕಾರ್ಡ್ ಮಾಡಿರುವೆ. ಇಲ್ಲಿ ಪ್ರಕಟಿಸುವುದಾಗಿ ನಾನು ಶ್ರೀಯುತರ ಗಮನಕ್ಕೆ ತಂದಿಲ್ಲವಾದರೂ ವೇದಸುಧೆಯೊಡನೆ ಮಾಡಿದ ಸಂವಾದ ನಿಮಗಾಗಿ ತಾನೇ.  ಶ್ರೀಯುತರು ಈ ಮೇಲ್ ಮೂಲಕ ವ್ಯಕ್ತಪಡಿಸಿದ ಅವರ ಅಭಿಪ್ರಾಯಗಳ ಜೊತೆಗೆ ಸಂಭಾಷಣೆಯ ಆಡಿಯೋ ಇಲ್ಲಿದೆ.
ಶ್ರಿಧರರೆ,
ವೈದಿಕರ (ಪುರೋಹಿತರ) ಇಂದಿನ ಪರಿಸ್ಥಿತಿಗೆ ನಾಕಂಡಂತೆ ಮುಖ್ಯವೆನಿಸುವ ಕಾರಣಗಳು...
     ೧ ಅತೃಪ್ತಿ.
        ಸಾಮಾಜಿಕ ಏರು ಪೇರುಗಳಿಗೆ ನೇರವಾಗಿ ಬಲಿಯಾದ ಪುರೋಹಿತರು ಅತೃಪ್ತರಾಗಿದ್ದಾರೆ. ಗೌರವಮಾತ್ರದಿಂದ ಜೀವನ ನಿರ್ವಹಣೆ ಕಷ್ಟಸಾಧ್ಯ! ಪೌರೋಹಿತ್ಯವನ್ನು ಉದ್ಯೋಗ ಎನ್ನಲು ಸಾಧ್ಯವಾಗುತ್ತಿಲ್ಲಾ! ಹಾಗಂತ ಇವರು ನಿರುದ್ಯೋಗಿಗಳೂ ಅಲ್ಲ!
    ೨ ವಿದ್ಯಾರ್ಹತೆ ಕೊರತೆ.
      ಎಲ್ಲೂ ಸಲ್ಲದವ ಇಲ್ಲಿ ಸಲ್ಲುತ್ತಾನೆ! ಇಲ್ಲಿ ಯಾರೂ ಪ್ರಶ್ನಿಸುವುದಿಲ್ಲಾ ಎಂಬ ವಿಶ್ವಾಸ. ಅಲ್ಲದೆ ಇಲ್ಲಿ ಓದಿದವನೂ-ಓದದವನೂ ಸಮಾನ ಸಂಮಾನಕ್ಕೆ ಒಳಗಾಗುತ್ತಾನೆ. ಸ್ವತಃ ಯಜಮಾನನಿಗೂ ವೈದಿಕದ ಜ್ಞಾನವಿಲ್ಲದಿರುವುದು. ಹೀಗೆ ಇಬ್ಬರಲ್ಲೂ ಅರ್ಹತೆ ಪ್ರಶ್ನಾತೀತವಾಗಿದೆ!!!
    ೩ ಅನಧಿಕೃತ ಸ್ಥಿತಿ.
       ಈ ಸಮಾಜದಲ್ಲಿ ಪುರೋಹಿತನ ನಿಲುವು ಅಧಿಕೃತವಾಗಿಲ್ಲ. ಎಲ್ಲಕಡೆಯಿಂದ ಮುಚ್ಚುಮರೆ ತುಂಬಿದೆ. (ಜಾತಿ-ಮತ-ಪಂಥ-ಮಡಿ-ಮೈಲಿಗೆ-ಬುಧ್ಧಿವಾದ-ಬುಧ್ಧಿಜೀವಿಗಳವಾದ-ಶ್ರದ್ಧೆ-ನಂಬಿಕೆ ಇತ್ಯಾದಿ)
    ೪ ಭವಿಷ್ಯವಾದಿಗಳ ಅಟ್ಟಹಾಸ.
       ಇಂದು ಭವಿಷ್ಯವಾದಿಗಳು ವೈದ್ಯರಂತೆಯೂ, ವೈದಿಕರು ಔಷಧಿವಿತರಕರಂತೆಯೂ ಆಗಿದ್ದಾರೆ. ಸಂಸ್ಕಾರವೋ, ಚಿತ್ತಶುದ್ಧಿಯೋ ಮೂಲವಾಗಬೇಕಿದ್ದ ಕರ್ಮ, ಇಂದು ಸ್ವಾರ್ಥ ಸಾಧನೆಗೆ ಹೆಚ್ಚು ಬಳಕೆಯಾಗುತ್ತಿದೆ.
     ೫ ಆಡಂಬರ ಮತ್ತು ಸಾಂಪ್ರದಾಯಿಕತೆ.
       ಆಡಂಬರ ಮುಖ್ಯವಾಗಿ ಸಂಸ್ಕಾರಕರ್ಮಗಳು ಅರ್ಥಹೀನವಾಗಿವೆ. ಮತ್ತು ಸಾಂಪ್ರದಾಯಿಕ ಆಚರಣೆ ಜನಜನಿತವಾಗಿ, ಅಲ್ಲಲ್ಲಿ ಹೊಸ ಹೊಸ ಸಂಪ್ರದಾಯಗಳು ಎದ್ದು, ಕರ್ಮವನ್ನೇ ತಿಂದುಹಾಕಿವೆ.
ಇನ್ನು ವೇದೋಕ್ತ ಕರ್ಮಗಳು ಎಂಬ ವಿಷಯವಾಗಿ...
ಶ್ರುತಿವಿಹಿತ ಕರ್ಮಗಳನ್ನು ಶ್ರೌತಕರ್ಮಗಳೆಂದೂ, ಸ್ಮೃತಿವಿಹಿತಕರ್ಮಗಳನ್ನು ಸ್ಮಾರ್ತಕರ್ಮಗಳೆಂದೂ ವಿಂಗಡಿಸಿದ್ದಾರೆ. ಹೆಚ್ಚಾಗಿ ನಮ್ಮ ಆಚರಣೆ ಸ್ಮಾರ್ತವೇ ಆಗಿದೆ. ಹೀಗೆ ಹಿನ್ನೆಲೆಯಿರುವ ಕರ್ಮ ಮುನ್ನೆಡೆಗೆ ಕಾರಣ ಎಂಬಲ್ಲಿ ಸಂಶಯವಿಲ್ಲಾ!
ಶ್ರುತಿ - ಸ್ಮೃತಿ - ಸೂತ್ರ - ಕಾರಿಕಾ - ಪ್ರಯೋಗ ಈ ಕ್ರಮದಲ್ಲಿ ಕರ್ಮಕ್ಕೆ ಹತ್ತಿರವಾದದ್ದು ಪ್ರಯೋಗ. ಸೂತ್ರಾದಿಯಾಗಿ ಪ್ರಯೋಗಾಂತ ಗ್ರಂಥಗಳು ಕಲ್ಪಗ್ರಂಥಗಳು. ಈ ಕಲ್ಪಗಳನ್ನು ಆಧರಿಸಿಬಂದ ಕರ್ಮಗಳನ್ನು ಮಾನ್ಯವೆಂದೂ, ಕಪೋಲ ಕಲ್ಪಿತ ಕರ್ಮಗಳನ್ನು ಅಮಾನ್ಯವೆಂದೂ ನಿರ್ಧರಿಸೋಣ ಅಲ್ಲವೇ!!!???

Sunday, September 23, 2012

ನಮ್ಮ ಆಚರಣೆಗಳು, ಸಂಪ್ರದಾಯಗಳು ವೇದೋಕ್ತವೇ?

'ವೇದಸುಧೆ'ಯ ಓದುಗರಿಗೆ ಹಾಗೂ ಎಲ್ಲಾ ವೇದಾಭ್ಯಾಸಿಗಳಿಗೆ
ನಮಸ್ಕಾರಗಳು.
ದಿನಾಂಕ 30-09-2012ರಂದು ಹಾಸನದಲ್ಲಿ ಒಂದು ಒಳ್ಳೆಯ ವಿಚಾರ ಪ್ರಚೋದಕ ಕಾರ್ಯಕ್ರಮವಿದೆ. ಆಹ್ವಾನ ಪತ್ರಿಕೆ ಇದೋ ಇಲ್ಲಿದೆ. ಬಿಡುವು ಮಾಡಿಕೊಂಡು ಭಾಗವಹಿಸಿ. ಬರುವ ಕುರಿತು ಪೂರ್ವಭಾವಿಯಾಗಿ ತಿಳಿಸಬಹುದೇ?






ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಲು ಸಂಪರ್ಕಿಸಿ: ಹರಿಹರಪುರಶ್ರೀಧರ್: 9663572406 ಕವಿ ನಾಗರಾಜ್:9448501804 ಈ ಮೇಲ್: vedasudhe@gmail.com

ಉಪದೇಶದಿಂದ ಸ್ವಭಾವ ಬದಲಾಯಿಸುವುದು ಸಾಧ್ಯವಿಲ್ಲ

ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ ।
ಸುತಪ್ತಮಪಿ ಪಾನೀಯಂ ಪುನರ್ಗಚ್ಚತಿ ಶೀತತಾಮ್ ॥

ಉಪದೇಶ ಮಾಡುವುದರಿಂದ ಒಬ್ಬನ ಸ್ವಭಾವವನ್ನು ಬದಲಾಯಿಸುವುದು ಸಾಧ್ಯವಿಲ್ಲ ನೀರನ್ನು ಚೆನ್ನಾಗಿ ಕುದಿಸಿದರೂ ಕೂಡಾ ಮತ್ತೆ ಅದು ತಣ್ಣಗೇ ಆಗುತ್ತದೆ. 



Saturday, September 22, 2012

ಅಂತರ್ಜಾಲದಲ್ಲಿ ವೇದಪಾಠದ ಬಗ್ಗೆ ಅಭಿಮಾನಿಗಳ ಅನಿಸಿಕೆಗಳು

Rudresh
August 27, 2012 at 10:23 pm 
ನಮಸ್ತೆ
ನಿಜವಾಗಿಯು ನಾವೆಲ್ಲರೂ ಅರಿಯುವ, ಅರಿತುಕೊಳ್ಳಬೇಕಾದ ವೇದಗಳ ಬಗೆಗಿನ ಕುರಿತ ಪಾಠದ ಅಗತ್ಯತೆ ಇದೆ ಎಂದು ನನಗೆ ಅನ್ನಿಸಿದೆ, ನನಗೆ ಪಾಠದ ಆಡಿಯೋ ಕ್ಲಿಪ್ ಗಳ ಅವಶ್ಯಕತೆ ಇದೆ. ದಯವಿಟ್ಟು ನನ್ನ ಇ-ಮೇಲ್ ವಿಳಾಸಕ್ಕೆ ಸನ್ಮಾನ್ಯರು ಕಳುಹಿಸಿಕೊಂಡುವಿರೆಂದು ನಂಬಿರುತ್ತೇನೆ
ನಮಸ್ಕಾರಗಳೊಂದಿಗೆ
-------------------------------------------------------
Suresh N Ranganath
Great idea… please send it to ennarsuresh@gmail.com Thank you.
------------------------------------------------------------
ಪ್ರೀತಿಯ ಶ್ರೀಧರ್,
ನಮನಗಳು, ಕಳೆದ ಸುಮಾರು ಒಂದು ವರ್ಷಕ್ಕೂ ಮೀರಿ ನಿಮ್ಮನ್ನು ಸಂಪರ್ಕಿಸಲಾಗಲಿಲ್ಲ,
ಕ್ಷಮಿಸಿ. ಜೀವನದ ಅನೇಕ ಸಂಗತಿಗಳು,ಸಂಭಂದಗಳು, ನನ್ನನ್ನು ಅನೇಕ ಒಳ್ಳೆಯ ಸಂಗತಿ ಗಳಿಂದಲೂ ವಿಮುಖ ಗೊಳಿಸಿತು, ಹಾಗಾಗಿ ನನಗೆ ನಾನೇ ಒಂಟಿ ಆದೆ. ನನಗೆ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ನೀಡುತ್ತಿರುವ ವೇದಪಾಠವನ್ನು ( ಆಡಿಯೋ -ಧ್ವನಿ ಶ್ರಾವ್ಯ) ವನ್ನು ದಯವಿಟ್ಟು ಕಳುಹಿಸಿ, ಖಂಡಿತಾ ವೇದಪಾಠದ ಎಲ್ಲಾ ಆಡಿಯೋ ಗಳನ್ನೂ, ಮುಂದೂ ಕಳುಹಿಸುತ್ತಿರಿ.
ವಂದನೆಗಳೊಂದಿಗೆ,
ಬಿ. ಎಸ್ಸ್. ಲಕ್ಷ್ಮೀ ನಾರಾಯಣ ರಾವ್.
ಮೈಸೂರು
--------------------------------------------------------------------
Dayananda
August 21, 2012 at 8:46 pm 
ವೇದ ಪಾಠ ಕೇಳಿ ಜನ್ಮ ಸಾರ್ಥಕ ಮಾಡಿಕೊಳ್ಳುವುದಕ್ಕೆ ಸದಾವಾಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು
----------------------------------------------------------
– ಹೌದು, ಶರ್ಮರು ಹೇಳಿಕೊಡುತ್ತಿರುವ ಪಾಠವನ್ನು ಪ್ರತೀ ವಾರ ಇಲ್ಲಿ ಪ್ರಕಟಿಸಿದರೆ ಒಳ್ಳೇದು.
-Santhosh Sharma
------------------------------------------------------------------------
manjunath g s
August 20, 2012 at 11:35 pm
ಒಳ್ಳೆಯ ಶ್ಲಾಘನೀಯ ಪ್ರಯತ್ನ. ಮುಂದುವರೆಯಲಿ. ಪ್ರಖರ ಪ್ರಸರಣವೇ ಆಗಬೇಕಿದೆ. ಅಪ್ಲೋಡ್ ಮಾಡುತ್ತಿರಿ. ಶರ್ಮರ ಧ್ವನಿ, ವಿಚಾರ ಎರಡೂ ಸ್ಪಷ್ಟವಿದೆ. ಮತ್ತಷ್ಟು ಜನರಿಗೆ ಈ ಮೂಲಕವೇ ಹಂಚೋಣ.
------------------------------------------------------------------------
I am thrilled to see vedasudhe.I would like to subscribe and receive all lessons please.
Please enroll me as a member
RAMESH RAO
Bangalore
------------------------------------------------------------------------------
sudha
August 24, 2012 at 4:11 pm 
ನನಗೆ ಒಳ್ಳೆಯದಾಗಲಿ ಎಂದು ಮಹಾತ್ಮ ರೊಬ್ಬರು ಇದನ್ನು ಹೇಳಿಕೊಟ್ಟರು .ನಾನು ದಿನವೂ ಹೇಳಿಕೊಳ್ಳುತ್ತೇನೆ .ಇದರ ಅರ್ಥ ಏನು ಎಂದು ಕೇಳಲು ಹೋಗಲಿಲ್ಲ ಅವರನ್ನು . ಇಲ್ಲಿ ಹೇಗೆ ಹೇಳುವುದು ,ಏನು ಅರ್ಥ ಎಂದು ತಿಳಿದು ಸಂತೋಷವಾಯ್ತು .
ಧನ್ಯವಾದಗಳು .
------------------------------------------------------------------------
ನಿಮ್ಮ ಪ್ರಯತ್ನ ಶ್ಲಾಘನೀಯವಾದದ್ದು. ನಾನು ಬೆಂಗಳೂರಿನಲ್ಲಿರುವುದರಿಂದ ವೇದಪಾಠಕ್ಕೆ ಹಾಜರಾಗಲು ಆಗುತ್ತಿಲ್ಲ. ದಯಮಾಡಿ ನನಗೆ ಇ-ಮೆಯಿಲ್ ಮೂಲಕ ಪಾಠ ಗಳನ್ನು ಕಳಿಸಬೇಕೆಂದು ಕೇಳಿಕೊಳ್ಳುತ್ತೇನೆ.
ತಮ್ಮ ವಿಶ್ವಾಸಿ,

ರಮೇಶ್ ಮಾವಿನಕುರ್ವೆ
----------------------------------------------------------
Sir ,
I am interested in learning the Vedas . I request you to kindly mail
me the Veda pathas from the beginning .

I thank you in advance

Milan Mahale
------------------------------------------------------------
ನಮಸ್ಕಾರಗಳು,

ನಾನು ಬೆಂಗಳೂರಿನಲ್ಲಿರುವುದರಿಂದ ಈ ವೇದ ಪಾಠದಲ್ಲಿ ಭಾಗವಹಿಸಲಾಗುವುದಿಲ್ಲ. ದಯವಿಟ್ಟು ನನಗೂ ಸಹಾ ಈ ಮೈಲ್ ಮೂಲಕ ಪಾಠವನ್ನು ಕಳುಹಿಸಿ.

ಧನ್ಯವಾದಗಳು,
ಗಿರೀಶ್ ನಾಗಭೂಷಣ
(gireeshdn@live.com)
-----------------------------------------------------------------
ಶ್ರೀಯುತ ಶ್ರೀಧರ್ ಅವರಿಗೆ ನನ್ನ ನಮಸ್ಕಾರಗಳು. ವೇದ ಪಾಠವನ್ನು ಕಲಿಸಲು ನವ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಇಂದೇ ನಾನು ಈ ವೆಬ್ ಸೈಟ್ ನೋಡಿದ್ದು. ನನಗೆ ಇದನ್ನು ಅತ್ಯಂತ ಖುಷಿ ಆಗುತ್ತಿದ್ದೆ. ವೇದವನ್ನು ನಿಜವಾದ ಅರ್ಥದಲ್ಲಿ ತಿಳಿಯಲು ನಾನು ಉತ್ಸುಕನಾಗಿದ್ದೇನೆ. ದಯವಿಟ್ಟು ವೇದ ಪಾಠದ ಮೊದಲ ಕಂತಿನಿಂದ ಇಲ್ಲಿಯವರೆಗಿನ ಎಲ್ಲ ಪಾಠಗಳನ್ನು ದಯವಿಟ್ಟು ಕಳುಹಿಸಿಕೊಡಿ ಎಂದು ತಮ್ಮಲ್ಲಿ ಕೋರುತ್ತಿದ್ದೇನೆ.
ಅನಂತ ಧನ್ಯವಾದಗಳೊಂದಿಗೆ
ಮನೋಜ್ ಬಿ ಎ
-------------------------------------------------------------
ಶ್ರೀಯುತ ಶ್ರೀಧರ್ ರವರಿಗೆ ಮಾಡುವ ವ೦ದನೆಗಳು.

ನೀವು  ಹಿ೦ದೂ ಧರ್ಮದ ಬಗ್ಗೆ ವಹಿಸುವ ಕಾಳಜಿ ನನಗೆ ಅತ್ಯಾನ೦ದ ಹಾಗೂ ಆಶ್ಯರ್ಯವನ್ನು ಉ೦ಟು ಮಾಡುತ್ತದೆ.

ಕಾರಣ ನಾನು ರಿಟೈರ್ ಆಗಿದ್ದರೂ ಸಮಯ ಹೊ೦ದಿಸಿಕೊಳ್ಳಲು ಚಡಪಡಿಸಿಕೊಳ್ಳೂತ್ತಾ ಇದ್ದೇನೆ. ಹಾಗೂ ನಿಮ್ಮ


ವೇದ ಸುಧೆಯ ನ್ನು ತೀರ್ಥ, ಪ್ರಸಾದದ ಹಾಗೆ ಸವಿಯುತ್ತಿದ್ದು ಅದನ್ನು ಊಟ(ಭೋಜನ)ದ ಹಾಗೆ ಸವಿಯಲು

ಸಮಯವಿಲ್ಲವೆ೦ದು ನ೦ತರ ವೆ-೦ದು ಪೋಸ್ಟ್ ಪೋನ್ ಮಾಡುತ್ತಿದ್ದಾ ಇದ್ದೇನೆ. ಕಾರಣ ಗಳು ಹಲವಾರು.

ಒಮ್ಮೆ ನಿಮ್ಮನ್ನು ಮುಖತಾ ಭೇಟಿಯಾಗುವೆ.

ಧನ್ಯವಾದಗಳು.

ಮಾಳ ಮುಕು೦ದ ಚಿಪಳೂಣಕರ್.
--------------------------------------------------------------------
 i am one of your recipient of your vedaptha & i following your blog , web site since one year. good going.

 My name : k venugopal bellary.
----------------------------------------------------------------
Gurugale!
Nimma ee prayatna safalavaagali endu devaralli prarthane.EE deshadalle idu prathama endu nanna bhavaane

Vandanegalu
SHivaprasad
----------------------------------------------------------------
ಹರೇ ರಾಮ್,

ಆತ್ಮಿಯ ಶ್ರೀಧರ್ ಅವರೇ,

ನಿಮ್ಮ ಅಂತರ್ಜಾಲದ ವೇದ ಉಪನ್ಯಾಸ ವ್ಯೆವಸ್ಥೆಯಿಂದ ದೂರದಲ್ಲಿ ಇರುವ ನಮ್ಮಂತಹ ಕನ್ನಡಿಗರಿಗೆ ತುಂಬಾ ಅನುಕೂಲವಾಗಿದೆ. ಇದಕ್ಕಾಗಿ ನಾವು ನಿಮಗೆ ಚಿರಋಣಿ.
ಇ-ಮೇಲ್ ಮುಖಾಂತರ ವೇದ ಪಾಠ ಸಿಗುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ. ನಾವು ವೇದಗಳ ಬಗ್ಗೆ ತಿಳಿಯಲು ಉತ್ಸುಕರಾಗಿದ್ದೇವೆ.
ದಯವಿಟ್ಟು ವೇದಪಾಠವನ್ನು ಈ ನಮ್ಮ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಿ.

alavandimath@gmail.com
pradeep.hedge@gmail.com

ಧನ್ಯವಾದಗಳೊಂದಿಗೆ,
ಶಿವರಾಜ್ ಆಳವಂಡಿಮಠ
ಪ್ರದೀಪ್ ಹೆಗಡೆ

London, UK
-------------------------------------------------------------------------
ನಮಸ್ತೆ ಶ್ರೀ ಶ್ರೀಧರ್ ರವರಿಗೆ. ಈಗಷ್ಟೇ ವೇದಸುಧೆಯ ತಾಣವನ್ನು ನೋಡಿ ನಿಮಗೆ ಕೋರಿಕೆ ಕಳುಹಿಸುತ್ತಿದ್ದೇನೆ. ವೇದಪಾಠವನ್ನು ಹೀಗೂ ತಿಳಿಯಬಹುದೆ೦ಬ ಕಲ್ಪನೆಯೂ ಇರಲಿಲ್ಲ. ವೇದವೆ೦ದರೆ ಸ೦ಸ್ಕೃತ ಬಲ್ಲವರಿಗೆ ಮಾತ್ರ ಎ೦ದು ತಿಳಿದಿದ್ದೆ. "ಶ್ರೀ ಸುಧಾಕರ ಶರ್ಮರ " ವೇದವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎ೦ಬ ನಿಮ್ಮ ಲೇಖನವನ್ನು ಓದಿ , ಎಲ್ಲರೂ ವೇದಗಳನ್ನು ತಿಳಿಯಬಹುದು ಎ೦ಬ ಆಶಯ ಮೂಡಿದೆ. ಬಹಳ ಉತ್ತಮವಾದ ಕಾರ್ಯ ಸರ್. ಶುಭವಾಗಲಿ.

ದಯವಿಟ್ಟು ನನಗೆ ವೇದಪಾಠದ ಮೊದಲ ಕ೦ತುಗಳಿ೦ದ ಇಲ್ಲಿಯವರೆಗೆ ನಡೆದ ಕ೦ತುಗಳನ್ನು ಮೈಲ್ ಮಾಡಿ ಎ೦ದು ಕೋರಿಕೊಳ್ಳುತ್ತಿದ್ದೇನೆ. ಹಾಗೂ ವೇದಪಾಠಕ್ಕೆ ಈ-ಚ೦ದಾದಾರನಾಗಲು ಬಯಸಿದ್ದೇನೆ.

ಪ್ರಣಾಮಗಳೊ೦ದಿಗೆ,
ರವಿಶಂಕರ್
--------------------------------------------------------------------
ಶ್ರೀಯುತ ಹರಿಹರಪುರಶ್ರೀಧರ್ ಅವರಿಗೆ ನಮಸ್ಕಾರಗಳು,

ವೆಧಸುಧೆ ತಾಣವನ್ನು ನಾನು ಬಹಳ ಗಂಭಿರವಾಗಿ ಮತ್ತು ಸಂತೋಷದಿಂದ ಹಿಂಬಾಲಿಸುತಿದ್ದೇನೆ. ಈಗಷ್ಟೇ ಶುರುವಾಗಿರುವ ವೇದ ಪಾಠ (ವೇದ ಪಾಠ - ೩) ಕೇಳಿದೆ. ಆದರೆ ಕೊಟ್ಟಿರುವ ೩ ಕೊಂಡಿಗಳು ಪೂರ್ಣ ಆವೃತ್ತಿಯನ್ನು ಒಳಗೊಂಡಿಲ್ಲ. ದಯವಿಟ್ಟು ಎಲ್ಲ ಪಾಟಗಳನ್ನು ಅಂತರ್ಜಾಲದ ಮೂಲಕ ನಾವು ಪೂರ್ತಿಯಾಗಿ ಕೇಳುವ / ಕಲಿಯುವ ಅವಕಾಶ ಮಾಡಿಕೊಡಿ.

ಅನಂತ ಪ್ರನಾಮಗಳೊಂದಿಗೆ,
ಭಾರತ್
ಬೆಂಗಳೂರು

Friday, September 21, 2012


ವೇದಸುಧೆಯ ಅಭಿಮಾನಿಗಳೇ,
ಕಳೆದ ಎರಡು ದಿನಗಳಿಂದ  ನನ್ನ ಅಂತರ್ಜಾಲ ಸಂಪರ್ಕ ವ್ಯತ್ಯಯವಾಗಿದೆ.ಇದೇ ೨೩.೦೯.೧೨ ಭಾನುವಾರ ಬೆಳಿಗ್ಗೆ ೧೦.೩೦ ಕ್ಕೆ ವೇದಾಧ್ಯಾಯೀ ವಿಶ್ವನಾಥ ಶರ್ಮರಿಂದ ಸಾಪ್ತಾಹಿಕ ವೇದಪಾಠ ನಡೆಯಲಿದೆ. ೩೦.೦೯.೧೨ ರಂದು ಶ್ರೀ ಸುಧಾಕರ ಶರ್ಮರೊಡನೆ ಮುಕ್ತಸಂವಾದ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆದಿದೆ.ವಿವರವನ್ನು ಮತ್ತು ವೇದಪಾಠವನ್ನು ೨೪.೦೯.೧೨ ರಂದು ಸೋಮವಾರ ಪ್ರಕಟಿಸಲಾಗುವುದು.
-ಶ್ರೀಧರ್

Tuesday, September 18, 2012

ಎಲ್ಲರಿಗೂ ಗೌರಿ-ಗಣೇಶನ ಹಬ್ಬದ ಶುಭಾಶಯಗಳು



ಸ್ನೇಹಿತರೇ,

ಎಲ್ಲರಿಗೂ ಗೌರಿ-ಗಣೇಶನ ಹಬ್ಬದ ಶುಭಾಶಯಗಳು.ವೇದ ಪಾಠದ ಆರಂಭದ ಉಪನ್ಯಾಸಗಳನ್ನು ಕೇಳಿದ ಒಬ್ಬ ಸನ್ಮಿತ್ರರು ನನಗೆ ದೂರವಾಣಿ ಕರೆಮಾಡಿ " ನನಗೆ ಎಲ್ಲಾ ಕನ್ ಫ್ಯೂಸ್ ಆಗಿಬಿಟ್ಟಿದೆ, ಗಣೇಶನ ವ್ರತವನ್ನು ಮಾಡಬೇಕೋ ? ಬೇಡವೋ? ಎಂದು ಕೇಳಿದರು.ಅವರ ಪ್ರಶ್ನೆಗಷ್ಟೇ ಅಲ್ಲ, ಎಲ್ಲರಿಗೂ ನನ್ನ ಮನವಿ ಏನೆಂದರೆ " ನಾನು ಗಣೇಶನ ಪೂಜೆ ಮಾಡುತ್ತೇನೆ. ಮನೆಮಂದಿಯೊಡನೆ ಸಂತೋಷವಾಗಿ ಅಂದು ಕಾಲ ಕಳೆಯುತ್ತೇನೆ. ಆದರೆ ಮನೆಯಲ್ಲಿರುವವರಿಗೆ ಸಂತೋಷವಾಗುವಂತೆ ಅಗ್ನಿಹೋತ್ರ ಒಂದನ್ನು ವಿಶೇಷವಾಗಿ ಮಾಡಿ ಅದರ ವಿಶೇಷತೆಯನ್ನು ತಿಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಅಗ್ನಿಹೋತ್ರದ ಬಗ್ಗೆ ಹಲವರಿಗೆ ಗೊತ್ತಿಲ್ಲ. ಮುಂದೆ ಅಗ್ನಿಹೋತ್ರವನ್ನೂ ವೇದ ಪಾಠದಲ್ಲಿ ಕಲಿಸಲಾಗುತ್ತದೆ.  ವೇದಪಾಠದ ಪರಿಚಯದ ಉಪನ್ಯಾಸಗಳಿಂದ  ನಿಮ್ಮ ಮನದಲ್ಲಿ ಸಂದೇಹಗಳು ಮೂಡಿದ್ದರೆ ದಯಮಾಡಿ ನಿಮ್ಮ  ಸಂದೇಹವನ್ನು ನೇರವಾಗಿ ವೇದಸುಧೆಗೆ ಬರೆಯಿರಿ.ವೇದಾಧ್ಯಾಯೀ ವಿಶ್ವನಾಥಶರ್ಮರು ಮತ್ತು ವೇದಾಧ್ಯಾಯೀ ಸುಧಾಕರಶರ್ಮರು ಸಂದೇಹವನ್ನು ಪರಿಹರಿಸುವ ಪ್ರಯತ್ನವನ್ನು ಮಾಡುತ್ತಾರೆ. ಸಾಪ್ತಾಹಿಕ  ವೇದ ಪಾಠವು ಆರಂಭವಾಗಿ ಒಂದು ತಿಂಗಳಾಯ್ತು.ಐದು ಭಾನುವಾರಗಳು. ಜೊತೆಯಲ್ಲಿ ಇನ್ನೆರಡು ತರಗತಿಗಳು ವಾರದ ಮಧ್ಯೆ ನಡೆದಿವೆ. ಇಷ್ಟಾದರೂ ಎರಡು ಮಂತ್ರ ಪಾಠ ಮಾತ್ರ ಆಗಿದೆ. ಪ್ರತ್ಯಕ್ಷ ತರಗತಿಯಲ್ಲಿ ವೈಯುಕ್ತಿಕವಾಗಿ  ವಿದ್ಯಾರ್ಥಿಗಳಿಂದ ಹೇಳಿಸುವಾಗ ಆಗಿರುವ ಅನುಭವವೆಂದರೆ ಇನ್ನೂ ಈ ಎರಡು ಚಿಕ್ಕ ಮಂತ್ರಗಳನ್ನೇ ಇನ್ನೂ ಸ್ವರಬದ್ಧವಾಗಿ ಪಠಿಸಲು ಸಮರ್ಥರಿಲ್ಲ. ಆದ್ದರಿಂದ ನಾವೆಲ್ಲರೂ ಸ್ವರ ಸಹಿತವಾಗಿ ಮಂತ್ರವನ್ನು ಅಭ್ಯಾಸ ಮಾಡುವುದು ಅಗತ್ಯವಾಗಿದೆ. ಹಿಂದಿನ  ಪಾಠಗಳಲ್ಲಿ ಮಾಡಿರುವ ಮಂತ್ರಾಭ್ಯಾಸ ಆಡಿಯೋ ವನ್ನು ಪ್ರತಿನಿತ್ಯವೂ ಕೇಳುತ್ತಾ,ಜೊತೆಯಲ್ಲಿ ಹೇಳುತ್ತಾ ಅಭ್ಯಾಸ ಮುಂದುವರೆಸುವುದು ಸೂಕ್ತ. ಮೇಲ್ ಮೂಲಕ ಅಭ್ಯಾಸ ಮಾಡುತ್ತಿರುವವರಲ್ಲಿ ಬಹುಪಾಲು ಜನರು ಬೆಂಗಳೂರಿನಲ್ಲಿದ್ದೀರಿ. ದೂರದ ದೇಶಗಳಲ್ಲಿರುವವರೂ ಮೇಲ್ ಮೂಲಕ ಅಭ್ಯಾಸವನ್ನು ಮಾಡುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿರುವವರಿಗೆ ಮುಕ್ತವಾಗಿ ಭೇಟಿಯಾಗಲು ಎರಡು ಅವಕಾಶಗಳು ಹತ್ತಿರದಲ್ಲಿದೆ. ಮೊದಲನೆಯದು ದಿನಾಂಕ 30.9.2012 ರಂದು ಹಾಸನದಲ್ಲಿ ಆಯೋಜಿಸಿರುವ ಶ್ರೀಸುಧಾಕರಶರ್ಮರೊಡನೆ ಮುಕ್ತ ಸಂವಾದ,ಎರಡನೆಯದು ಬೆಂಗಳೂರಿನಲ್ಲಿ  ಬಸವನಗುಡಿ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣಾಶ್ರಮದ ಹತ್ತಿರ ದಿನಾಂಕ 7.10.2012 ಭಾನುವಾರ ಮತ್ತೊಂದು ಕಾರ್ಯಕ್ರಮ "ಹೊಸ ಬೆಳಕು"ಪುಸ್ತಕ ಬಿಡುಗಡೆ. ಅದರ ವಿವರವನ್ನು ಮೇಲ್ ಮಾಡಲಾಗುವುದು. ಈ ಎರಡೂ ಕಾರ್ಯಕ್ರಮಗಳಿಗೂ ನಿಮಗೆ ಸ್ವಾಗತವಿದೆ. ಇವೆರಡರಲ್ಲಿ ಯಾವ ಕಾರ್ಯಕ್ರಮಕ್ಕೆ ನೀವು ಬರಬಹುದೆಂದು ವೇದಸುಧೆಗೆ ದಯಮಾಡಿ ತಿಳಿಸಿ. ಎರಡೂ ಕಾರ್ಯಕ್ರಮಕ್ಕೂ ಬಂದರೆ ಸಂತೋಷ. ಇಲ್ಲದಿದ್ದರೂ ಒಂದು ಕಾರ್ಯಕ್ರಮಕ್ಕೆ ಸಮಯಾವಕಾಶವನ್ನು ಮಾಡಿಕೊಳ್ಳುತ್ತೀವೆಂದರೂ ಆ ಸಂದರ್ಭದಲ್ಲಿ ವೇದ ಪಾಠದ ವಿದ್ಯಾರ್ಥಿಗಳು ಶ್ರೀ ವಿಶ್ವನಾಥ ಶರ್ಮರೊಡನೆ ಒಂದೆರಡು ಗಂಟೆಗಲ ಕಾಲ ಮಾತುಕತೆ ನಡೆಸಲು ಅವಕಾಶವನ್ನು ಮಾಡಿಕೊಳ್ಳಲಾಗುವುದು. ಈ ಸಂದೇಶವನ್ನು ಮೇಲ್ ಮೂಲಕ ಪಾಠವನ್ನು ತರಿಸಿಕೊಳ್ಳುವ ಎಲ್ಲರಿಗೂ ಮೇಲ್ ಮಾಡಲಾಗಿದೆ. ಮೇಲ್ ಸ್ವೀಕರಿಸಿರುವವರಿಂದ ಮುಂದಿನ ಪಾಠ ಕಳಿಸುವ ಉದ್ಧೇಶದಿಂದ ಸಾಲುತ್ತರ  ಅಪೇಕ್ಷಣೀಯ.

ಬನ್ನಿ ,ಪರಸ್ಪರ ಪರಿಚಯ ಮಾಡಿಕೊಳ್ಳೋಣ. ವೇದ ಕೆಲಸದಲ್ಲಿ ಕೈ ಜೋಡಿಸೋಣ.


ವಂದನೆಗಳು

-ಹರಿಹರಪುರಶ್ರೀಧರ್

ಸಂಪಾದಕ, ವೇದಸುಧೆ.

Monday, September 17, 2012

ಯೋಚಿಸಲೊ೦ದಿಷ್ಟು... ೬೦ -


ಅರವತ್ತರ ಸೊಬಗು!!
- ಒ೦ದು-

೧. ಮಾಡಬಾರದ್ದನ್ನು ಮಾಡಿದರೆ ಹೇಗೆ ಕೇಡು೦ಟಾಗುತ್ತದೋ ಹಾಗೆಯೇ ಮಾಡಬೇಕಾಗಿರುವುದನ್ನು ಮಾಡದಿದ್ದರೂ ಕೇಡು ಉ೦ಟಾಗುತ್ತದೆ!!

೨. ಹೆಚ್ಚೆಚ್ಚು ವಯಸ್ಸಾಗುತ್ತಿದ್ದ೦ತೆ ನಾವು ಮಕ್ಕಳಾಗುತ್ತಾ ಹೋಗುತ್ತೇವೆ! ಮತ್ತೊಬ್ಬರ ಆರೈಕೆಯನ್ನು ಮನಸ್ಸು ಬೇಡತೊಡಗುತ್ತದೆ!

೩. . ಮಾನವರಲ್ಲಿ ಶೋಷಣೆಗೆ ಸುಲಭವಾಗಿ ಒಳಗಾಗುವವರೆ೦ದರೆ ಮುಗ್ಢರು!
೪. ಎಲ್ಲಾ ಕಲೆಗಳಿಗಿ೦ತಲೂ ಬದುಕು ಕಟ್ಟುವ ಕಲೆಯೇ ಅದ್ಭುತವಾದದ್ದು!

೫. ಭಕ್ತಿಯಲ್ಲಿ ಬೇಡಿಕೆ ಇರುವುದಿಲ್ಲ.. ಬದಲಾಗಿ ಅರ್ಪಣೆ ಇರುತ್ತದೆ!

೬. ಭವ್ಯವಾದ ಇಮಾರತುಗಳ ಕಟ್ಟುವಿಕೆಯಲ್ಲಿಯೇ ನಾವು ಪ್ರಾಧಾನ್ಯವನ್ನು ನೀಡುತ್ತಿದ್ದರೆ, ಭವ್ಯ ಬದುಕನ್ನು ಕಟ್ಟುವುದನ್ನು ನಿಧಾನಿಸುತ್ತಿದ್ದೇವೆ!

೭ . ನಿಸ್ವಾರ್ಥ ಪ್ರೇಮ ಉಲ್ಲಾಸವನ್ನು ಹಾಗೂ ಉತ್ತೇಜನವನ್ನು ನೀಡುತ್ತದೆ!

೮.  ಇತರರಿಗೆ ಸಹಕರಿಸದಿದ್ದರೂ ಪರವಾಗಿಲ್ಲ.. ಆದರೆ ಉಪದ್ರವವನ್ನು ನೀಡಬಾರದು!

೯ . ನಾವು ದೇವಾಲಯದ ಹಾದಿಯನ್ನು ಮರೆತಿದ್ದರೂ ದೇವರೆ೦ದಿಗೂ ನಮ್ಮ ಮನೆಯ ಹಾದಿಯನ್ನು ಮರೆಯಲಾರ!

೧೦.  ನಮ್ಮನ್ನು ನಾವು ಕ೦ಡುಕೊಳ್ಳುವ ಅತ್ಯುತ್ತಮ ವಿಧಾನವೆ೦ದರೆ ಇತರರ ಸೇವೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವುದು- ಗಾ೦ಧೀಜಿ


 -ಎರಡು-

೧. ಮರಣ ಅತ್ಯ೦ತ ದು:ಖಕರವಲ್ಲ! ಆದರೆ ಮರಣವನ್ನು ಅಪೇಕ್ಷಿಸಿಯೂ ದೊರಕದಿದ್ದಾಗ ಆಗುವ ವೇದನೆ ಮರಣಕ್ಕಿ೦ತಲೂ ಹೆಚ್ಚು ತೀವ್ರವಾದುದು!- ಸಾಪೋಕ್ಲಿಸ್

೨. ಕಾಗೆಯ ಹಿ೦ದೆ ಹೋದರೆ ಕೊಟ್ಟಿಗೆ ಸೇರುತ್ತೇವೆ. ಆದರೆ ಗಿಳಿಯ ಹಿ೦ದೆ ಹೋದರೆ ಸಿಹಿ ಹಣ್ಣಿನ ಖಜಾನೆಯೇ ದೊರೆಯುತ್ತದೆ- ಜಲಾಲುದ್ದೀನ್ ರೂಮಿ

೩. ಸ್ವಾರ್ಥವನ್ನು ಗೆದ್ದವನು ಹಾಗೂ ಶಾ೦ತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ಪರಮ ಸುಖಿ- ಗೌತಮ ಬುಧ್ಢ

೪. ನಾಳೆ ಎ೦ಬುದು ನಿನ್ನಿನ ಮನಸಾದರೆ ಮು೦ದೆ ಎ೦ಬುವುದು ಇ೦ದಿನ ಕನಸು- ದ.ರಾ.ಬೇ೦ದ್ರೆ

೫.  ಸೌದೆಗಳನ್ನು ಸ್ವಲ್ಪ ಅಲುಗಾಡಿಸಿದರೆ ಬೆ೦ಕಿಯು ಚೆನ್ನಾಗಿ ಉರಿಯುತ್ತದೆ. ತುಳಿದರೆ ಅಥವಾ ಹೆದರಿಸಿದರೆ ಹಾವು ಹೆಡೆಯನ್ನು ಬಿಚ್ಚುತ್ತದೆ! ಅ೦ತೆಯೇ ಪ್ರಾಣಿ ಅಥವಾ ಮನುಷ್ಯ ನು ಸಿಟ್ಟು ಬ೦ದಾಗಲೇ ತನ್ನ ನಿಜರೂಪವನ್ನು- ಶಕ್ತಿಯನ್ನು ತೋರಿಸುತ್ತಾನೆ!- ಕಾಳಿದಾಸ

೬. ಆಸೆಯೊ೦ದರಿ೦ದ ಬಿಡಲ್ಪಟ್ಟರೆ ಬಡವನಾರು? ಒಡೆಯನಾರು? ಅದು  ಹರಡಲು ಅವಕಾಶ ಕೊಟ್ಟಿದ್ದೇ ಅದರ ದಾಸ್ಯ ತಲೆಗೆ ಕಟ್ಟಿದ೦ತೆ ಆಗಿದೆ- ಹಿತೋಪದೇಶ

೭.. ಯಾರೂ ಪಾಪಿಗಳಲ್ಲ. ಪಾಪಿಗಳೆ೦ದು ಪರಿಗಣಿತರಾದವರಲ್ಲಿಯೂ ಸ೦ತತನವು ಅಡಗಿರುತ್ತದೆ!- ಸ್ವಾಮಿ ವಿವೇಕಾನ೦ದರು

೮. ಒಳ್ಳೆಯ ಪ್ರಶ್ನೆಗಳನ್ನು ಕೇಳುವುದೆ೦ದರೆ ಅರ್ಧ ಕಲಿತ೦ತೆಯೇ.-  ಮುಹಮ್ಮದ್ ಪೈಗ೦ಬರ್

೯. ಶೌರ್ಯವಿಲ್ಲದ ಪ್ರಾಮಾಣಿಕತೆಯಿ೦ದ ಪ್ರಯೋಜನವಿಲ್ಲ. ಅದು ನಮ್ಮನ್ನು ಹೇಡಿಯನ್ನಾಗಿ ಮಾಡುತ್ತದೆ!- ಪ್ಲೇಟೋ

೧೦. ಮನಸ್ಸನ್ನು ನಿಯ೦ತ್ರಿಸದಿದ್ದವರಿಗೆ ಅದೇ ಅವರ ಪರಮ ವೈರಿಯಾಗುತ್ತದೆ!- ಭಗವದ್ಗೀತೆ

-  ಮೂರು-


೧. ನಾವು ಸೌ೦ದರ್ಯ ಹಾಗೂ ಹಣವನ್ನು  ಹೊ೦ದಿದ ವ್ಯಕ್ತಿಯೊಬ್ಬನನ್ನು ಒಪ್ಪಿಕೊ೦ಡರೂ,  ಒಳ್ಳೆಯ ಗುಣವಿರುವವರನ್ನು ಮಾತ್ರವೇ ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ!

೨. ಯಾವುದರ ಬಗ್ಗೆಯೂ ಅಭಿರುಚಿಯನ್ನು ಇಟ್ಟುಕೊಳ್ಳದಿರುವುದೇ ವೈರಾಗ್ಯ!

೩. ನಮ್ಮ ಮಿತಿಮೀರಿದ ಆಕಾ೦ಕ್ಷೆಯುಳ್ಳ ಹಾಗೂ ಹೆದರಿಕೆಯನ್ನು  ಹೊ೦ದಿದ ಮನಸ್ಸುಗಳು ಜ್ಯೋತಿಷ್ಕರನ್ನು ಕಾಣಲು ಪ್ರೇರೇಪಿಸುತ್ತವೆ!

೪. ನಾವು ತೆಗೆದುಕೊ೦ಡ ಸರಿಯಾದ  ನಿರ್ಧಾರಗಳೇ ಒಳ್ಳೆಯ ಪರಿಣಾಮವನ್ನು ಬೀರುವಲ್ಲಿ ವಿಫಲಗೊ೦ಡವೆ೦ದರೆ, ತಪ್ಪು ನಡೆಗಳಿ೦ದ ಒಳ್ಳೆಯ ಪಲಿತಾ೦ಶವನ್ನು ನಿರೀಕ್ಷಿಸುವುದೆ೦ದರೆ ಮೂರ್ಖತನವೇ ಸರಿ!!

೫.  ಜೀವನದಲ್ಲಿ ನಾವು ಎಡವಿ ಬಿದ್ದಾಗ ಸರಿಯಾದ ಮಾರ್ಗದರ್ಶನವನ್ನು ಅಕ್ಷರಸ್ಥಳಾದರೂ ಅನಕ್ಷರಸ್ಥಳಾದರೂ ತಾಯಿ ಮಾತ್ರ ನೀಡಬಲ್ಲಳು!

೬.  ಪ್ರಶ್ನಾತೀತವಾದುದ್ದು ಯಾವುದೂ ಇಲ್ಲ! ಒ೦ದು ಪ್ರ್ತಶ್ನೆಯ ಉತ್ತರವು ಮತ್ತೊ೦ದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ!

೭. ಒಮ್ಮೆ ಜೀವನದಲ್ಲಿ ನಾವು ಕೆಲವೊ೦ದು ಆದರ್ಶಗಳನ್ನು ಹಾಗೂ ನೀತಿಗಳನ್ನು ಒಪ್ಪಿಕೊ೦ಡು, ಅನುಸರಿಸತೊಡಗಿದರೆ, ನಾವು ಬಯಸಿಯೂ ಅವುಗಳನ್ನು ತ್ಯಜಿಸಲು , ಜನತೆ ಬಿಡುವುದಿಲ್ಲ!

೮. ಎಲ್ಲದರಲ್ಲಿಯೂ ನಮ್ಮತನವನ್ನು ವ್ಯಕ್ತಪಡಿಸುವುದು ಬಲು ಮುಖ್ಯ.. ನಮ್ಮ ವ್ಯಕ್ತಿತ್ವದ ಛಾಪನ್ನು ಬಿಟ್ಟು ಹೋಗಲು ಅದು ಅತ್ಯವಶ್ಯ! ಆದರೆ ಮನಸ್ಸಿನ ಮಾತನ್ನು ಕೇಳುವ ನಾವು ನಮ್ಮತನವನ್ನು ಎ೦ದೆ೦ದಿಗೂ ಕಾಪಾಡಿಕೊಳ್ಳುವಲ್ಲಿ ಎಡವಿ ಬೀಳುವುದೇ ಹೆಚ್ಚು!

೯. ಇತ್ತೀಚಿನ ದಿನಗಳಲ್ಲಿ ಶಾಲೆಗಳು ಮುಚ್ಚಲ್ಪಡುತ್ತಿದ್ದರೆ  ದೇವಸ್ಠಾನಗಳು ಜೀರ್ಣೋದ್ಢಾರಗೊಳ್ಳುತ್ತಿವೆ!

೧೦. ಸ೦ತೋಷದಿ೦ದ ಇರುವುದಕ್ಕೆ ಕಾರಣಗಳು ಬೇಕಿಲ್ಲ! ನಾವು “ ಬದುಕಿದ್ದೇವೆ“ ಎನ್ನುವುದಕ್ಕಿ೦ತ ಬೇರೆ ಕಾರಣವಾದರೂ ಏಕೆ ಬೇಕು?- ಓಶೋ

Sunday, September 16, 2012

ಬಡವ ಅಂದರೆ ಯಾರು?

ದಾರಿದ್ರ್ಯಾತ್ ಪುರುಷಸ್ಯ ಬಾಂಧವ ಜನೋ ವಾಕ್ಯೇ ನ ಸಂತಿಷ್ಠತೇ |
ಸತ್ತ್ವಂ ಹಾಸ್ಯಮುಪೈತಿ ಶೀಲಶಶಿನಃ ಕಾಂತಿಃ ಪರಿಮ್ಲಾಯತೇ |
ನಿರ್ವೈರಾ ವಿಮುಖೀ ಭವಂತಿ ಸುಹೃದಃ ಸ್ಫೀತಾ ಭವಂತ್ಯಾಪದಃ |
ಪಾಪಂ ಕರ್ಮ ಚ ಯತ್ ಪರೈರಪಿಕೃತಂ ತತ್ತಸ್ಯ ಸಂಭಾವ್ಯತೇ ||


ಬಡವನ ಮಾತಿಗೆ ನೆಂಟರು ಬೆಲೆ ಕೊಡುವುದಿಲ್ಲ, ಅವನ ಶಕ್ತಿ ಧೈರ್ಯಗಳು ಹಾಸ್ಯಕ್ಕೆ ಗುರಿಯಾಗುತ್ತವೆ.
ಚಂದ್ರನ ಕಾಂತಿಯು ಹಗಲಿನಲ್ಲಿ ಬಾಡುವಂತೆ ಅವನ ಒಳ್ಳೆಯತನವು ಮಸುಕಾಗುತ್ತವೆ.
ಹಗೆತನಕ್ಕೆ ಕಾರಣ ಇಲ್ಲದಿದ್ದರೂ ಮಿತ್ರರು ದೂರವಾಗುತ್ತಾರೆ. ಕಷ್ಟಗಳು ಹೆಚ್ಚುತ್ತವೆ. 
ಬೇರೆಯವರು ಮಾಡಿದ ಪಾಪದ ಕೆಲಸಗಳಿಗೂ ಇವನೇ ಹೊಣೆಗಾರನಾಗುತ್ತಾನೆ.

ನನ್ನ ಮಾತು:
ಏನು ಸೂಕ್ತಿ ಹೀಗೆ ಹೇಳುತ್ತದಲ್ಲಾ! ಬಡವನ ಬಗ್ಗೆ ತಾತ್ಸಾರವೇ? ಏನಿದರ ಅರ್ಥ? 
ಈಗ ಬಡವ ಅಂದರೆ ಯಾರು? ಬಡತನ   ಅಂದರೆ ಏನು?   ಇಲ್ಲಿನ  ಆಡಿಯೋ ಕೇಳಿ ಪುನ: ಈ ಬಗ್ಗೆ ಮಾತಾಡೋಣ.

ನಿಜವಾದ ಬಡವನಾರು? ನಿಜ ಶ್ರೀಮಂತ ಯಾರು?

Saturday, September 15, 2012

ಯಾವನು ಶುಚಿ ?

ಕಃ ಪಥ್ಯತರೋ ಧರ್ಮಃ ಕಃ ಶುಚಿರಿಹ ಯಸ್ಯ ಮಾನಸಂ ಶುದ್ಧಂ ।
ಕಃ ಪಂಡಿತೋ ವಿವೇಕೀ ಕಿಂ ವಿಷಮವಧೀರಣಾ ಗುರುಷು ॥

ಅತ್ಯಂತ ಹಿತಕರವಾಗಿರುವುದು ಯಾವುದು ? - ಆಚರಿಸತಕ್ಕ ಧರ್ಮ
ಯಾವನು ಶುಚಿ ? - ಯಾರ ಮನಸ್ಸು ಶುಚಿಯಾಗಿರುತ್ತದೋ ಅವನು
ಪಂಡಿತನು ಯಾರು ? - ನಿತ್ಯ - ಅನಿತ್ಯ (ಶಾಶ್ವತ ಮತ್ತು ನಶ್ವರ) ಗಳನ್ನು ವಿವೇಚಿಸಿ ತಿಳಿದವನು ಪಂಡಿತನು. ಯಾವುದು ವಿಷ ?- ಗುರುಗಳನ್ನು ಮತ್ತು ಹಿರಿಯರನ್ನು ನಿಂದೆ ಮಾಡುವುದೇ ವಿಷವು. 

Thursday, September 13, 2012

ನಾನು, ನನ್ನದು, ಎಂಬ ಅಭಿಮಾನ.....

ಅಹಂಮಮಾಭಿಮಾನೋತ್ಥೈಃ ಕಾಮಲೋಭಾದಿಭಿರ್ಮಲೈಃ ।
ವೀತಂ ಯದಾ ಮನಃ ಶುದ್ಧಮದುಃಖಮಸುಖಂ ಸಮಮ್ ॥

ನಾನು, ನನ್ನದು, ಎಂಬ ಅಭಿಮಾನದಿಂದ ಉಂಟಾದ, ಕಾಮ, ದುರಾಸೆ, ಮೊದಲಾದ ಕೊಳೆಗಳಿಂದ ಮನಸ್ಸು ಯಾವಾಗ ಬಿಡಲ್ಪಟ್ಟು ಶುದ್ಧವಾಗುತ್ತದೋ ಆಗ ಸುಖವಾಗಲೀ, ದುಃಖವಾಗಲೀ ಸಮವೆನಿಸುತ್ತದೆ.

Tuesday, September 11, 2012

ವೇದ ಪಾಠ-5


ಕಳೆದ ಭಾನುವಾರ ಶ್ರೀ ವಿಶ್ವನಾಥ ಶರ್ಮರು ಅನ್ಯ ಕಾರ್ಯಕ್ರಮದಲ್ಲಿದ್ದುದರಿಂದ ಶ್ರೀ ಪ್ರಸಾದ್ ಅವರು ಪಾಠವನ್ನು ನಡೆಸಿದ್ದು ಸರಿಯಷ್ಟೆ. ಇಂದು ಶ್ರೀ ವಿಶ್ವನಾಥ ಶರ್ಮರು ವಿಶೇಷ ತರಗತಿಯನ್ನು ನಡೆಸಿ ದರು.

ಇಂದಿನ ವೇದ ಪಾಠದಲ್ಲಿ ಬಂದ ವಿಷಯಗಳು

1.ಮಾತೃ ಭ್ಯೋನಮ:|ಪಿತೃಭ್ಯೋನಮ:|ಆಚಾರ್ಯೇಭ್ಯೋನಮ:|ಶ್ರೀ ಗುರುಭ್ಯೋನಮ:|

ಈ ಮಂತ್ರವನ್ನು ನಾವೆಲ್ಲಾ ಕೇಳಿದ್ದೇವೆ. ನಮಗೆ  ಈ ಮಂತ್ರಗಳು ಎಷ್ಟು ಅರ್ಥವಾಗಿವೆ?  ಅವುಗಳ ವಿವರಣೆ ಇಲ್ಲಿ ಕೇಳಿ

2. ಮಾತೃ ಭ್ಯೋನಮ:........ಇತ್ಯಾದಿ ಹೇಳುವಾಗ ನನ್ನ ಜವಾಬ್ದಾರಿ ಏನು?

3. ಜನಿವಾರ ಏನು ಸೂಚಿಸುತ್ತದೆ?

4. ಭಕ್ತ ಅಂದರೆ ಯಾರು?

5. ಪ್ರಣವ ಅಂದರೇನು?

6. ಓಂಕಾರ ಏಕೇ?

7. ಪೂಜೆ ಅಂದರೇನು?

ಈ ವಿವರಣೆಯ ಜೊತೆಗೆ  ಮಂತ್ರಪಾಠವಾಯ್ತು. ಹಿಂದಿನ ಪಾಠವನ್ನು ಪುನ: ಹೇಳಿಕೊಟ್ಟರು.  ಇಂದು ಹೇಳಿಕೊಟ್ಟಿರುವ ಗಣಾನಾಂ ತ್ವಾ...ಮಂತ್ರವನ್ನು  ಅನುಸರಿಸಲು ಕೋರುವೆ.
ವೇದಪಾಠಕ್ಕಾಗಿ ವೇದಸುಧೆಡಾಟ್ ಕಾಮ್ ಭೇಟಿಮಾಡಿ

ಮನುಷ್ಯನಿಗೆ ರಾಜನ ಸೇವೆ ಎನ್ನುವುದು ಸಿಂಹವನ್ನು ಅಪ್ಪಿಕೊಂಡಂತೆ


ರಾಜಸೇವಾ ಮನುಷ್ಯಾಣಾಂ ಅಸಿಧಾರಾವಲೇಹನಂ ।
ಪಂಚಾನನಪರಿಷ್ವಂಗೋ ವ್ಯಾಲೀವದನ ಚುಂಬನಮ್ ॥

ಮನುಷ್ಯನಿಗೆ ರಾಜನ ಸೇವೆ ಎನ್ನುವುದು ಕತ್ತಿಯ ಅಲಗನ್ನು ಚುಂಬಿಸಿದಂತೆ, ಸಿಂಹವನ್ನು ಅಪ್ಪಿಕೊಂಡಂತೆ, ಸರ್ಪದ ಮುಖವನ್ನು ಚುಂಬಿಸಿದಂತೆ. ಆದುದರಿಂದ ರಾಜನನ್ನು ಅಥವಾ ಪ್ರಸ್ತುತದಲ್ಲಿ ರಾಜಕಾರಣಿಗಳನ್ನು ದೂರವಿಡುವುದೆ ಒಳ್ಳೆಯದು.

Monday, September 10, 2012

ಯೋಚಿಸಲೊ೦ದಿಷ್ಟು... ೫೯



೧. ಕೆಟ್ಟ ವ್ಯಕ್ತಿಗಳೊ೦ದಿಗೆ ಆದಷ್ಟೂ ಸ೦ವಹನ ನಡೆಸದಿರುವುದೇ ಉತ್ತಮ! ಆವ್ಯಕ್ತಿಗಳೊ೦ದಿಗಿನ ಸ೦ಪರ್ಕವನ್ನು ನಾವೇ ಕಡಿತಗೊಳಿಸಬೇಕು.

೨. ನಿಸ್ವಾರ್ಥ ಪ್ರೇಮ ದೈವ ಸಾಕ್ಷಾತ್ಕಾರಕ್ಕೆ ದಾರಿ!

೩. ಮನಸ್ಸೆ೦ದರೆ ಒ೦ದು ಮಗುವಿದ್ದ೦ತೆ! ಪ್ರತಿ ತಾಯಿಯು ತನ್ನ ಮಗುವನ್ನು ಹೇಗೆ  ಕೆಟ್ಟಬುಧ್ಧಿಯಿ೦ದ ಬಿಡಿಸಿ,ಒಳ್ಳೆಯದರ ಕಡೆಗೆ ತಿರುಗಿಸಿ, ಸತ್ಪ್ರಜೆಯನ್ನಾಗಿ ಮಾಡುತ್ತಾಳೋ ಹಾಗೆಯೇ ನಾವು ಪ್ರತಿಯೊಬ್ಬರೂ ನಮ್ಮ ಮಗುವಿನ೦ತಹ ಮನಸ್ಸನ್ನು ಆಡಿಸಿ, ಯುಕ್ತಿಯಿ೦ದ ಒಳ್ಳೆಯದ್ದರ ಕಡೆಗೆ ತಿರುಗಿಸಬೇಕು.

೪. ಆ ದೇವರು ದಯಾಮಯ.. ಬೇಡುವವನಿಗೂ ಕಾಡುವವನಿಗೂ ಇಬ್ಬರಿಗೂ ಸಿಗುತ್ತಾನೆ! ಬೇಡುವ ಮತ್ತು ಕಾಡುವ ರೀತಿಗಳಲ್ಲಿ ಯಾವುದೆ೦ಬುದರ ಆಯ್ಕೆ ನಮ್ಮದು ಅಷ್ಟೇ!

೫. ತ್ಯಾಗ , ಪ್ರೀತಿ, ಕರುಣೆ ಮತ್ತು ಪ್ರಾಮಾಣಿಕತೆಗಳೇ ನಿಜವಾದ ಶಿಕ್ಷಣ – ಸ್ವಾಮಿ ವಿವೇಕಾನ೦ದರು

೬.ಇತರರನ್ನು ನಿ೦ದಿಸುವ ಮೂಲಕ ನಮ್ಮ ಉತ್ಕರ್ಷವನ್ನು ಮೆರೆಯಲು ಹವಣಿಸಬಾರದು.

೭. ಬಹಳ ಕಷ್ಟಪಟ್ಟು ಸ೦ಪಾದಿಸಿದ ಕೀರ್ತಿ ಹಾಗೂ ಯಶಸ್ಸು ಎಲ್ಲವನ್ನೂ ಕೋಪವೊ೦ದೇ ನಾಶಗೊಳಿಸಬಲ್ಲುದು!

೮. ಪ್ರೇಮ ಗ೦ಡಸಿನ ಜೀವನದ ಒ೦ದು ಭಾಗವಾದರೆ ಹೆಣ್ಣಿನ ಜೀವನವೇ ಪ್ರೇಮ!

೯. ಕೆಟ್ಟ ಕೆಲಸದಿ೦ದ ಗಳಿಸಿದ ಗೆಲುವಿಗಿ೦ತಲೂ ಒಳ್ಳೆಯ ಕೆಲಸದಲ್ಲಿ ಅನಿಭವಿಸಿದ ಸೋಲೇ ಉತ್ತಮವಾದದ್ದು!

೧೦.ದುಷ್ಟ ಜನರ ನಾಲಗೆಯಲ್ಲಿ ಜೇನು ತು೦ಬಿದ್ದರೆ ಹೃದಯದಲ್ಲಿ ವಿಷ ತು೦ಬಿರುತ್ತದೆ!

೧೧. ಸೌ೦ದರ್ಯ ಕೂಡಿಟ್ಟುಕೊಳ್ಳುವ೦ಥದ್ದಲ್ಲ! ಅದು ಪ್ರಕೃತಿಯು ನಿರ್ಮಿಸಿದ ನಾಣ್ಯ. ಸದಾ ಬದಲಾಗುತ್ತಿರುತ್ತದೆ!

೧೨. ಮದುವೆ ಆದವನು ಒಳ್ಳೆಯದನ್ನು ಮಾಡಿದರೆ, ಮದುವೆ ಆಗದಿದ್ದವನು ಮತ್ತಷ್ಟು ಒಳ್ಳೆಯದನ್ನು ಮಾಡುತ್ತಾನೆ!

೧೩. ಪ್ರೇಮದ ಪ್ರಖರತೆಯನ್ನು ಮದುವೆ ಹತೋಟಿಗೆ ತರುತ್ತದೆ!

೧೪. ಸಿದ್ಢವಾದ ದಾರಿ ಎ೦ಬುದು ಯಾವುದೂ ಇಲ್ಲ! ನಮ್ಮ ದಾರಿಯನ್ನು ನಾವೇ ಕ೦ಡುಕೊಳ್ಳಬೇಕು- ಓಶೋ

೧೫. ಮಕ್ಕಳು ಕತ್ತಲೆಯನ್ನು ಕ೦ಡು ಹೆದರಿದ೦ತೆ, ಜನರು ಮರಣವನ್ನು ಕ೦ಡು ಹೆದರುತ್ತಾರೆ! - ಬೇಕನ್

Sunday, September 9, 2012

ವೇದಪಾಠ-4


ಇಂದು ನಡೆದ ವೇದ ಪಾಠದಲ್ಲಿ ಇಲ್ಲಿರುವ ಮಂತ್ರದ ಪೂರ್ವಾರ್ಧ ಭಾಗವನ್ನು ಮಾತ್ರ ಹೇಳಿಕೊಡಲಾಗಿದೆ. ವೇದ ಪಾಠದ ಆರಂಭದಲ್ಲಿ ರೆಕಾರ್ಡ್ ಮಾಡಿಲ್ಲವಾದ್ದರಿಂದ ಸ್ವರ ಪರಿಚಯ, ಹಾಗೂ ಪಾಠದ ಆರಂಭದ ಭಾಗವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಇದೇ ಪಾಠವನ್ನು ಪುನ: ಮಾಡ ಲಾಗುತ್ತದೆ. ಇಂದು ಗುರುಗಳಾದ ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಮಂಗಳೂರಿನಲ್ಲಿ ನಡೆಯುತ್ತಿರುವ ಒಂದು ವೇದ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಅವರ ಶಿಷ್ಯರಾದ ಚನ್ನರಾಯಪಟ್ಟಣದ ಶ್ರೀ ಪ್ರಸಾದ್ ಅವರು ವೇದ ಪಾಠವನ್ನು ಮಾಡಿರುತ್ತಾರೆ. ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ದಿನಾಂಕ 11.9.2012 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ವಿಶೇಷ ಪಾಠವನ್ನು ಮಾಡ ಲಿದ್ದಾರೆ. ಇಂದು ಹೇಳಿಕೊಟ್ಟಿರುವ ಮಂತ್ರದ ಅರ್ಥ-ವಿವರಣೆಯನ್ನು ಕೊಡಲಿದ್ದಾರೆ. ಅದರ ಆಡಿಯೋ ಕ್ಲಿಪ್ ಕೂಡ ಅಳವಡಿಸಲಾಗುವುದು. ಅಲ್ಲದೆ ಸ್ವರಬದ್ಧ ಉಚ್ಚಾರಣೆ ಬಗ್ಗೆಯೂ ತಿಳಿಸಲು ಕೋರಲಾಗುವುದು. ಈ ಮೇಲ್ ಮೂಲಕ ಪಾಠವನ್ನು ಪಡೆಯುತ್ತಿರುವ ಹಾಗೂ ಇದೇ ತಾಣದಮೂಲಕ ಅನುಸರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ವಿನಂತಿ ಏನೆಂದರೆ ನೀವು ಇಲ್ಲಿ ಹೇಳಿಕೊಡುತ್ತಿರುವ ಮಂತ್ರಗಳನ್ನು ಸ್ವರ ತಪ್ಪದಂತೆ ಕಂಠಪಾಠ ಮಾಡುವುದು ಅವಶ್ಯಕ. ಸ್ವರಬದ್ಧ ಉಚ್ಚಾರಣೆಗೆ ನಿತ್ಯ ಅಭ್ಯಾಸ ಅನಿವಾರ್ಯ. ಮಂತ್ರಗಳು ಚಿಕ್ಕದಾದ್ದರಿಂದ "ಏನು ಮಹಾ?" ಎಂಬ ಉದಾಸೀನ ಬೇಡ. ಅಭ್ಯಾಸ ಮಾಡಿದಮೇಲೆ ನಿಮ್ಮ ಧ್ವನಿಯಲ್ಲಿ ರೆಕಾರ್ಡ್ ಮಾಡಿ ಕೇಳಿ ಅಲ್ಲದೆ ಗುರುಗಳ ಪಾಠಕ್ಕೆ ತಾಳೆ ಮಾಡಿಕೊಂಡು ನೋಡಿ. ಶುದ್ಧ ಸ್ವರ ಕ್ಕೆ ಗಮನ ಈಗಲೇ ಕೊಟ್ಟರೆ ಮುಂದೆ ಸುಲಭವಾಗುವುದು. ಹೀಗೂ ಮಾಡಬಹುದು...ನಿಮ್ಮ ಧ್ವನಿಯಲ್ಲಿ ವಿಶ್ವಾನಿ ದೇವ...ಮಂತ್ರವನ್ನು ರೆಕಾರ್ಡ್ ಮಾಡಿ ವೇದಸುಧೆಗೆ ಮೇಲ್ ಮಾಡಿದರೆ ಗುರುಗಳ ಗಮನಕ್ಕೆ ತರಲಾಗುವುದು.
ವೇದಪಾಠ-4 ರ ಆಡಿಯೋ ಗಾಗಿ ಇಲ್ಲಿ  ನೇರವಾಗಿ vedasudhe.com  ಪ್ರವೇಶಿಸಿ.

Friday, September 7, 2012

ಪ್ರವರ

ಸಾಮಾನ್ಯವಾಗಿ ರೂಢಿಯಲ್ಲಿರುವ ಬ್ರಾಹ್ಮಣ ಕುಟುಂಬಗಳಲ್ಲಿ ಮಕ್ಕಳಿಗೆ ಉಪನಯನ ಮಾಡಿದಮೇಲೆ ಮನೆಗೆ ಯಾರೇ ಹಿರಿಯರು ಬಂದರೂ ಅಪ್ಪ-ಅಮ್ಮ ಮಕ್ಕಳಿಗೆ ತಪ್ಪದೆ ಹೇಳುವುದು" ಪ್ರವರ ಹೇಳಿ ನಮಸ್ಕಾರ ಮಾಡು". ಉಪನಯನವಾದಮೇಲೆ ಯಾವ ಮಂತ್ರ ಬಾರದಿದ್ದರೂ ಪ್ರವರವನ್ನು ಮಾತ್ರ ಕಂಠಪಾಠಮಾಡಿ ಬಂದಹಿರಿಯರಿಗೆಲ್ಲಾ ಪ್ರವರವನ್ನು ಒಪ್ಪಿಸಿ ಬಿಟ್ಟರೆ ಸಾಕು, ಅಪ್ಪ-ಅಮ್ಮನಿಗೆ ಬಲು ಸಂತೋಷ. ನನ್ನ ಮಗ ಎಷ್ಟು ಚೆನ್ನಾಗಿ ಪ್ರವರ ಹೇಳ್ತಾನೆ! ಗೊತ್ತಾ? ಎಲ್ಲರ ಮುಂದೂ ಹೇಳಿಸಿದ್ದೇ ಹೇಳಿಸಿದ್ದು. ಇತ್ತೀಚೆಗೆ ನನಗೆ ಬಲು ದ್ವಂದ್ವ ಕಂಡದ್ದು ಈ ಪ್ರವರದಲ್ಲಿ. ಆ ಬಗ್ಗೆ  ಸ್ವಲ್ಪ ಚಿಂತನ-ಮಂಥನ ನಡೆಸೋಣ.
ಪ್ರವರದಲ್ಲಿನ ಕೆಲವು ಸಾಲುಗಳ ನೆನಪು ಮಾಡುವೆ

ಚತುಸ್ಸಾಗರ ಪರ್ಯಂತಮ್ ಗೋ ಬ್ರಾಹ್ಮಣೇಭ್ಯ: ಶುಭಂ ಭವತು  ...................... ತ್ರಯಾ ಋಷೇಯ ಪ್ರವರಾನ್ವಿತ .................ಗೋತ್ರ: ..................... ಸೂತ್ರ: ...................ಶಾಖಾಧ್ಯಾಯೀ ..................ಶರ್ಮ ಅಹಂಭೋ ಅಭಿವಾದಯೇ

ಬ್ರಹ್ಮೋಪದೇಶ ಮಾಡುವಾಗ ಸತ್ಯವನ್ನೇ ಹೇಳುತ್ತೇನೆಂದು ಪ್ರಮಾಣ  ಮಾಡುವ  ವಟು ಪ್ರತಿನಿತ್ಯ ಪ್ರವರ ಹೇಳುವಾಗ  ತನಗರಿವೇ ಇಲ್ಲದೆ   ಎಷ್ಟೊಂದು ಸುಳ್ಳು ಹೇಳಬೇಕಾಗುತ್ತದೆ ! ಹಾಗೇ ಗಮನಿಸಿ
1. ಮೊದಲನೆಯದಾಗಿ  ನಮ್ಮ ಕುಟುಂಬದ ,ನಮ್ಮ ಬಂಧುಬಳಗದ ಹಿತವನ್ನೇ ಬಯಸದ ನಾವು    ನಿಜವಾಗಿ  ನಾಲ್ಕು ಸಾಗರಗಳ ಪರ್ಯಂತ ಇರುವ ಪ್ರದೇಶದಲ್ಲಿನ  ಗೋವುಗಳ ಮತ್ತು ಬ್ರಾಹ್ಮಣರ ಶುಭವನ್ನು ಬಯಸುತ್ತೇವೆಯೇ? [ ಎಲ್ಲಾ ಪ್ರಾಣಿಗಳ ಎನ್ನಲು     ಗೋ ಮತ್ತು ಎಲ್ಲಾ ಮಾನವರ  ಎನ್ನಲು   ಬ್ರಾಹ್ಮಣ ಪದ ಬಳಕೆಯಾಗಿದೆ] ಆದರೂ ನಾವು ಗೋ ಮತ್ತು ಬ್ರಾಹ್ಮಣ ಎಂದಷ್ಟೇ ಭಾವಿಸಿದರೂ ಕೂಡ ಅಷ್ಟು ವಿಶಾಲ ಚಿಂತನೆಯನ್ನು ನಾವು ಮಾಡುತ್ತೇವೆಯೇ? ಮಕ್ಕಳಿಗೆ ಕಲಿಸುಇತ್ತೇವೆಯೇ?
2. ಋಕ್/ಯಜು....ಮೊದಲಾದ ವೇದಶಾಖೆಯನ್ನು  ಅಧ್ಯಯನ ಮಾಡುತ್ತಿರುವ [ ಶಾಖಾಧ್ಯಾಯೀ]  ಇಂತವನಾದ ನಾನು ನಿಮಗೆ ನಮಸ್ಕರಿಸುವೆ. ಇಲ್ಲೂ ಗಮನಿಸ ಬೇಡವೇ? ಪ್ರವರ ಹೇಳುವವರಲ್ಲಿ  ಪ್ರತಿಶತ ಎಷ್ಟು ಜನ  ವೇದಾಧ್ಯಯನ ಮಾಡುತ್ತಾರೆ?  ಪ್ರತಿಶತ ಐದು ಇರಬಹುದೇ?  ಮಕ್ಕಳ ಬಾಯಲ್ಲಿ ಸುಳ್ಳನ್ನೇ  ಹೇಳಿಸುತ್ತೀವಲ್ಲವೇ? 

ಪ್ರವರ ಹೇಳಿಕೊಂಡು ನಮಸ್ಕರಿಸುವುದು ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ ನಾವು ಅದರಂತೆ ನಡೆಯುತ್ತೇವೆಯೇ? ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಡವೇ? 
ಇದೇ ರೀತಿ .....
ಸರ್ವೇ ಭವಂತು ಸುಖಿನ:....ಮಂತ್ರ ಹೇಳುವಾಗಲೂ ನನ್ನ ಮನದಲ್ಲಿ ಈ ದ್ವಂದ್ವ ನನ್ನನ್ನು ಚುಚ್ಚುತ್ತದೆ. ಅಷ್ಟೇ ಅಲ್ಲ , ನಾವು ಹೇಳುವ ಬಹುಪಾಲು ವೇದ ಮಂತ್ರಗಳಲ್ಲಿ "ಭಗವಂತನು ಒಬ್ಬನೇ" "ಅವನು ನಿರಾಕಾರ" ಎಂದೂ  " ಮಾನವ ಕುಲವೆಲ್ಲಾ  ಒಂದೇ. ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎನ್ನುವ ಮಾತುಗಳು  ಅದೆಷ್ಟು ಮಂತ್ರಗಳಲ್ಲಿ ಬರುತ್ತದೆಯೋ!  ವೇದಮಂತ್ರವನ್ನು ಗಟ್ಟಿಯಾಗಿ ಹೇಳುತ್ತಾ  ಸುತ್ತ ಮುತ್ತಲ ಜನರಿಗೆಲ್ಲಾ ಮಂತ್ರ  ಕೇಳಿದರೂ  ನಮ್ಮ ಮನಸ್ಸು ಹೃದಯಕ್ಕೇ  ಕೇಳಿರುವುದಿಲ್ಲ. ನಿಜವಾಗಿ ಕೇಳಿದ್ದರೆ ನಾವು ಭೇದ ಭಾವ ಮಾಡುತ್ತಿರಲಿಲ್ಲ.   ನಮಗೆ ತೋಚಿದಂತೆಲ್ಲಾ ಆಕಾರವನ್ನು     ಭಗವಂತನಿಗೆ ಕೊಡುತ್ತಿರಲಿಲ್ಲ. ಭಗವಂತನನ್ನು ದೇವಾಲದಲ್ಲಿ ಕೂಡಿಹಾಕುತ್ತಿರಲಿಲ್ಲ. ನಮ್ಮ ಬುಡದಲ್ಲೇ ಇರುವ ದೀನ-ದುರ್ಬಲರ ಹಸಿವಿನ ಮುಖವನ್ನು ನೋಡಿ ಕೊಂಡು ವಿಗ್ರಹದ ಮುಂದೆ ಹಣ್ಣು-ಕಾಯಿ ಇಟ್ಟು ನೈವೇದ್ಯವನ್ನೂ ಮಾಡುತ್ತಿರಲಿಲ್ಲ. 

ವೇದಾಧ್ಯಾಯೀ ಶ್ರೀಸುಧಾಕರ ಶರ್ಮ


 ಯಾರ ಪ್ರೇರಣೆಯಿಂದ ವೇದಸುಧೆಯು ಆರಂಭವಾಗಿದೆಯೋ ಅಂತಹವರ ಬಗ್ಗೆ  ನಮಗೆ ಸ್ವಲ್ಪ ತಿಳಿದಿರ ಬೇಕಲ್ಲವೇ?
ಇಲ್ಲಿದೆ ಅವರ ಪರಿಚಯ.



EDUCATIONAL QUALIFICATION: B.Sc. (Physics, Chemistry, Mathematics)
A.I.C.W.A.
M.A. (Sanskrit)
OCCUPATION Practicing Cost Accountant;
A guide to students appearing for I.C.W.A. C.A.
M.Com. M.B.A. M.C.A. C.S. courses etc.,
OTHER STUDIES: A student of Vedaas.
TEACHERS/MENTORS: Late.N.Srikantiah (Father), Journalist, Author,
Researcher.
Late.R.V.Krishnarao (Engineer by profession,
deciple of Late.Sir.M.Vishveshwaraiah)
Late.Dr.M.Gopalakrishna Rao (Ayurvedic Doctor,
Author, Social worker, Deciple of
Late.Pt.Taranath)
Late.Sahithya Shiromani A.Vasudeva Ballal
(Sanskrit Scholar)
Late.Pt.Ramarao.V.Nayak (Renowned Hindustani
Classical Musician)
Late.Pt.Vijyan Bhikshuji (Vedic and Sanskrit
Scholar)
Pt.Sudhakara Chaturvedi (Centenarian Vedic
Scholar, Freedom fighter, Close associate of
Mahathma Gandhiji)
OTHER INFORMATION: Married. Wife: Indumathi Sudhakara M.A.(Sanskrit)
Two children.
Daughter - Amruthavarshini
Vyakaranacharya
Son-in-law - Umesh Hegde (Sanskrit
Scholar)
Son - Brahmachari Bhrugu.S.Devaratha.
Children are not sent to any school. Trained
at home and under able teachers in Gurukula
system.
All the members of the family are into Vedic Studies.
OTHER ACTIVITIES: Writing and Publishing of small tracts - Vedic and
Humanitarian - and their distribution freely.
Some titles - Maduve Eke, Yaavaaga, Hege?
Mruthyuve Namaskara!
BIO-DATA
Jyothishigale Sathyada Kole Maadabedi!
Vaasthu, Beeladiri Besthu!
Janivaaradalli Brahmanyavilla!
Jeevanavinnoo Idhe
Pakvathege 16 Mettilugalu
Nooru Hithanudigalu,
I Trust you!,
Saptha Saamajika Paathakagalu, etc.,
Public lectures on topics related to Vedaas and
Humanity, Ethics, Administration, Personality
development, Psychology etc.,
Some regular places -
Vivekananda Yoga Training Center,
Jeevanbima Nagar;
Arya samaja,V.V.Puram; Bangalore
Arya Samaj, Mysore
House of Sri.Balakrishna Arya,
Kanakapura;
Bharathiya Vidya Bhavan, South Bangalore;
Veda Vijyana Gurukula, Chennenahalli,
Veda Bhashya Prakashana Samithi,
Basavanagudi, Bangalore,
BAIF Institute for Rural Development –
Karnataka, Tiptur
Theosophical Society, City lodge, Bangalore
Ragigudda Anjaneya Temple,
Eccumenical Christian Center, Whlitefield,
Siddha Samadhi Yoga of Rishi Prabhakar,
Doddamaralawadi,
Udaya Bhanu Kala Sangha, Gavipuram
Institute of Agricultural Technologists
Dignity Foundation, Jayanagar, Bangalore
Administrative Training Institute,
Mysore
Staff Training Institute of Comptroller
and Audit General of India, Bangalore
etc.,
And many platforms through out Karnataka
and some parts of Andhrapradesh.
Conducts Family Councelling, counselling on varied
issues such as family problems, personality
development, inspiration lectures for students, and
on several legal issues. Guides professionals in
solving intra-personal problems, inter personal
problems.
Conducts Vedic rituals strictly according to Vedic
guidance, explaining the meaning and significance of
the Manthras chanted. In particular Upanayanam.
This Samskara has been given to
so called non-Brahmins and Girls/Women too.
Has given several programmes in
* Doordarshana Chandana
- Samskrutha Sourabha, Maarga Darshana,
Jeevana Darshana. (Live Phone in
programme)
* All India Radio, Bangalore Drama Artist since
1973.
* Jnaanavani, FM Channel of IGNOU, Bangalore
* Udaya TV has covered the couple under
"Parichaya" programme.
* Shankara TV, Programme "Beyond"
Has presented papers on Vedas in
* International Conference held at Kangdi
Gurukula, Haridwar.
* National Conference held at Veda vijyana
Gurukula, Chennenahalli, Bangalore Rural
District.
Articles on topics in Veda, Vedic mathematics being
contributed to periodicals like Vedataranga
(Monthly), Vipravahini (Fortnightly), Vikrama
(Weekly), Aseema (Monthly), Vijaya Karnataka
(Daily), Sirisamaruddhi (Monthly), Hinduvaani
(Monthly), Prajavani (Daily) etc., and to several
special issues/souvinirs brought out by reputed
Organisations.
Has produced an Audio-visual digital documentary
on “Rain fed Sericulture” (22 Minutes) for an
N.G.O. BIRD-K of Tiptur.
Has brought out a few Audio Compact Disc.
1, A lecture on Marriage, the ritual and its
significance. (2 Hours and 10 Minutes)
2. Nijava Thiliyona, about methods of seeking Truth
(1 Hour and 30 Minutes)
CURRENTLY A T.V. SERIAL CALLED
"HOSABELAKU - SATHYA
SAMPRADAYATTA" IS BEING TELECAST IN
CHANDANA T.V. CHANNEL EVERY SUNDAY
BETWEEN 09.30 TO 10.00 A.M.

ಡಾ.ವಿ ಗಣಪತಿ ಸ್ಥಪತಿ

ಅಮೇರಿಕಾ ದೇಶದ ಡಾ.ಜೆಸ್ಸೀ ಅವರು ವೇದಸುಧೆಯ ಅಭಿಮಾನಿ. ಭಾರತೀಯ ವಾಸ್ತುವಿನ ಬಗ್ಗೆ ಅಮೆರಿಕೆಯಲ್ಲಿ ಅವರು ಒಂದು ವಾಸ್ತು ವಿಶ್ವವಿದ್ಯಾಲಯ ತೆರೆದು ಅದರ ಚಾನ್ಸಲ್ಲರ್ ಆಗಿರುವ ಡಾ.ಜೆಸ್ಸೀ ಅವರು ಅವರ ಗುರುಗಳಾದ ತಮಿಳುನಾಡಿನ ಡಾ.ವಿ ಗಣಪತಿಸ್ಥಪತಿ ಯವರ ಕುರಿತು ಕಳಿಸಿಕೊಟ್ಟಿರುವ ಒಂದು ವೀಡಿಯೋ ಇಲ್ಲಿ ಪ್ರಕಟಿಸಲಾಗಿದೆ. ಪಾಶ್ಚಾತ್ಯರಿಗೆ ಭಾರತೀಯರ ಬಗ್ಗೆ ಇರುವ ಮೆಚ್ಚುಗೆಯನ್ನು ನಾವು ಮೆಚ್ಚಬೇಡವೇ?

Thursday, September 6, 2012

ಹೊಸಬೆಳಕು



VAASTU BEELADIRI BESTU! NEXT EPISODE ON HOSABELAKU DISCUSSES THE SCIENTIFIC ASPECT OF VAASTU AND REMOVES THE MYTH AND SUPERSTITION. DONT MISS THIS SPECIAL EPISODE VAASTU - TRUTH VS MYTH AT 9.30 AM ON SUNDAY MORNING DD CHANDANA.

ಇದೇ ಭಾನುವಾರ ದಿನಾಂಕ 9.9.2012 ರಂದು ಬೆಳಿಗ್ಗೆ 9.30 ಕ್ಕೆ ಡಿ.ಡಿ.ಚಂದನದಲ್ಲಿ ತಪ್ಪದೆ ನೋಡಿ.


ಚಿತ್ರನೋಡಿ ನಿಮ್ಮ ವಿವರಣೆ ಬರೆಯಿರಿ

Photo: ಕೆಲವೊಮ್ಮೆ ನಮ್ಮ ಬದುಕಿನಲ್ಲೂ ಇಂತಹ ಸ್ಥಿತಿ ಬರುತ್ತದೆ!

ವೇದಸುಧೆಯ ಬಂಧುಗಳೇ,     ಇದೀಗ ನಿಮ್ಮ ಸರದಿ. ಚಿತ್ರನೋಡಿ ನಿಮ್ಮ  ವಿವರಣೆ ಬರೆಯಿರಿ. ಉತ್ತಮವಾದ ವಿವರಣೆಗೆ ಬಹುಮಾನವಿದೆ!




-----------------------------------------------
ಲೋಭದಿಂ  ಕಾಮದ ಮರವೇರಿದೆ ಜೀವ
ಕಾಲ ಕಡಿದಿದೆ ಎಲ್ಲ ಭಾವ

ಕಚ್ಚಲು ಬರುತಿದೆ ಮದವೆಂಬ ಸರ್ಪ
ಎಂದು ಬಿಡಿಸುವನಿಲ್ಲಿಂದ ಕಂದರ್ಪ ?

ಮದ ಬಿಟ್ಟರೆ ಮೋಹದ ಸೆಳವು
ಭಯಂಕರ ಮೊಸಳೆಗಳ ತಾವು

 ದಾಟಿ ದಡ ಸೇರಿದರೆ ಕ್ರೋಧದ ವಶ
ಜೀವ ಬಂಧ ಬಿಡಿಸಿಕೊಲ್ಲಳದೆಷ್ಟು ಪಾಶ ?

ಗುರುವೇ ,ನೀ ತೋರು ಮುಕ್ತನಾಗ್ವ ಪಥ
ನಿನ್ನೆಡೆಗೆ ಸಾಗಲೆಮ್ಮ ಬಾಳ ರಥ.

ವಂದನೆಗಳೊಂದಿಗೆ
ಸ್ವರ್ಣಾ
----------------------------------------------