Pages

Tuesday, September 29, 2015

ಅಗ್ನಿಹೋತ್ರ ಕಲಿಸಿ- ಮುಸ್ಲಿಮ್ ಸೋದರಿಯ ಕೋರಿಕೆ

ಒಬ್ಬ ಮುಸ್ಲಿಮ್ ಸೋದರಿ ನನಗೆ ಬರೆದಿರುವ ಪತ್ರ ನೋಡಿ. ಪತ್ರದಲ್ಲಿನ ಅಕ್ಷರಗಳ ತಪ್ಪನ್ನು ನೋಡಬೇಡಿ. ಭಾವನೆಯನ್ನು ನೋಡಿ.
---------------------------
ಧನ್ಯವಾದಗಳು ಸರ್, ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನಲ್ಲಿ ನಿಮ್ಮಿಂದ ಅಗ್ನಿಹೋತ್ರ ಹೋಮವನ್ನು ಅಪೇಕ್ಷಿಸುತ್ತೇನೆ. ಅಗ್ನಿಹೋತ್ರದಿಂದ ಆಗುವ ಉಪಯೋಗವನ್ನು ಜನಸಾಮ್ಯರಿಗೂ ಅರಿವಾಗಬೇಕಾಗಿದೆ.
- Reehana Firdose 
     --------------------------------------------
ನಮಸ್ತೆ,
ಹಾಸನ ವೇದಭಾರತೀ ಟೀಮ್ ಸಾಗರಕ್ಕೂ ಬಂದು ಅಗ್ನಿಹೋತ್ರಮಾಡಿಸಿ ಅದರ ಪರಿಚಯ ಮಾಡಿಸಲು ತೊಂದರೆಯೇನಿಲ್ಲ. ಅಲ್ಲಿ ಆರ್ಗನೈಸ್ ಮಾಡುವ ವ್ಯಕ್ತಿಗಳು ಬೇಕು. ನಿಮ್ಮಿಂದ ಸಾಧ್ಯವೇ ತಿಳಿಸಿ. ಅದಕ್ಕೆ ನೀವು ವೇದಭಾರತಿ ಕಾರ್ಯಕರ್ತರಿಗೆ ಯಾವ ಶುಲ್ಕ ಕೊಡಬೇಕಾಗಿಲ್ಲ. ಅಗ್ನಿಹೋತ್ರದ ಪೂರ್ಣ ವ್ಯವಸ್ಥೆ ನಾವೇ ಉಚಿತಮಾಡುತ್ತೇವೆ. ಜನರನ್ನು ಸೇರಿಸುವ ಜವಾಬ್ದಾರಿ ಸ್ಥಳೀಯರದ್ದು
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ​
------------------------------------------------
ನಮಸ್ತೆ ಸರ್,
ನಾನು ಒಬ್ಬ ಮುಸ್ಲಿಂ ಹುಡಗಿಯಾಗಿದ್ದು, ಪ್ರಸ್ತುತವಾಗಿ ಸಾಗರದಲ್ಲಿ ಕಂಪ್ಯೂಟರ್ ಆಫ್ ರೇಟರ್ ಆಗಿ ಕೆಲಸ ಮಾಡುತ್ತಿದ್ದೆನೇ ಬಿ.ಎ. ಡಿಗ್ರಿ ಆಗಿದೆ. ನನ್ನಗೆ ಹಿಂದೂ ಧರ್ಮದ ಮೇಲೆ ಅಪಾರವಾದ ಪ್ರೀತಿ ಹಾಗೂ ಅಭಿಮಾನವಿದೆ. ಹಾಗಾಗಿ ಅನೇಹ ಪುಸ್ತಕಗಳನ್ನು ಓದುತ್ತಿರುತ್ತೇನೆ. ಹಿಂದಿನ ಸಂಪ್ರಧಾಯಗಳು ನಮಗೆ ಎಷ್ಟು ಆರೋಗ್ಯ ಹಾಗೂ ಒಳೆಯ ಜೀವನವನ್ನು ನೀಡುತ್ತವೆ ಎಂಬ ಬಗ್ಗೆ ಸ್ವಲ್ಪಮಟ್ಟಿಗೆ ಅರಿತಿರುತ್ತೇನೆ. ಇಗಿನ ಕಾಲದಲ್ಲಿ ಆನೇಕರು ಆನರೋಗ್ಯದಿಂದ ಬಳಲುತ್ತಿರುತ್ತಾರೆ. ವಿವಿಧ ವಿವಿಧವಾದ ಕಾಯಿಲೆಗಳು, ಮಾನಸಿಕ ನೆಮ್ಮದಿ ಇಲ್ಲದೇ ಮನ್ಸ್ ಶಾಂತಿಯಿಲ್ಲದೆ ಸುಂದರವಾದ ಜೀವನವನ್ನು ಅನುಭವಿಸುವುದು ಜೀವನವನ್ನು ಕಳೆಯುವುದು ಕಷ್ಟಸಾಧ್ಯವಾಗಿದೆ. ನಾನು ಒಬ್ಬ ಸಾಮನ್ಯ ಹೆಣ್ಣಾಗಿರುವ ಕಾರಣ ನನ್ನಿಂದ ನಮ್ಮ ಜನರಿಗೆ ಏನು ಸಹಾಯ ಮಾಡಲು ಆಗದೆ ಇರುವುದರಿಂದ ನಿಮ್ಮಿಂದ ಏನಾದರು ನಮ್ಮ ಊರಿನ ಜನರಿಗೂ ಉಪಯೋಗವಗಬಹುದೇನೋ? ಎಂಬ ವಿಶ್ವಾಸದಿಂದ ನಿಮ್ಮಲ್ಲಿ ಮನವಿ ಮಾಡಿರುತ್ತೇನೆ. 

ಇಂತಿ ನಿಮ್ಮ ವಿಶ್ವಾಸಿ,

ರಿಹಾನ ಫೀರ್ಧೋಸ್,
ಸಾಗರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ.
------------------------------------------------------
 ನಮಸ್ತೆ,
ಸಾಗರದಲ್ಲಿನ ಯಾರಾದರೂ ಮಿತ್ರರ ಸಹಕಾರ ಪಡೆದು ಅಗ್ನಿಹೋತ್ರ ಶಿಬಿರ ಒಂದನ್ನು ನಡೆಸೋಣ ಭಗಿನೀ. ನಿಮ್ಮ ಆಪೇಕ್ಷೆಗೆ ಬಹಳ ಸಂತೋಷವಾಗಿದೆ. ನಿಜವಾಗಿ ಅಗ್ನಿಹೋತ್ರವು ಮಾನವೆಲ್ಲರೂ   ಮಾಡಬೇಕಾದ ದೈನಂದಿನ ವಿಧಿ
-ಹರಿಹರಪುರಶ್ರೀಧರ್

Sunday, September 27, 2015

ಚನ್ನರಾಯಪಟ್ಣದ ಸಾರ್ವಜನಿಕ ಗಣೇಶೋತ್ಸವದಲ್ಲಿ ಅಗ್ನಿಹೋತ್ರ ಪ್ರಾತ್ಯಕ್ಷಿಕೆ

 ವೇದಭಾರತಿಯ ಅಗ್ನಿಹೋತ್ರ ಆಂದೋಳನಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಪತಂಜಲಿ ಯೋಗ ಕೇಂದ್ರದ ಶ್ರೀ ಶೇಷಪ್ಪನವರು ಕಳೆದ ಹತ್ತು ದಿನಗಳಿಂದ  ಚನ್ನರಾಯಪಟ್ಟಣದಲ್ಲಿ ನಡೆಸುತ್ತಿರುವ ಯೋಗ ಶಿಬಿರದಲ್ಲಿ ಇಂದು ಆರು ಕುಂಡಗಳಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ವೇದಭಾರತಿಯ ಸಹಪಾರದೊಡನೆ ಆಯೋಜಿಸಲಾಗಿತ್ತು. ಪರಿಸರವಾದಿ ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಅವರ ನೇತೃತ್ವದಲ್ಲಿ ನಡೆದ ಈ ಅದ್ಭುತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಭಾವವಶರಾದರು.
ಆರಂಭದಲ್ಲಿ "ಎಲ್ಲರಿಗಾಗಿ ವೇದ" ಮತ್ತು  ಅಗ್ನಿಹೋತ್ರ ಮಹತ್ವವನ್ನು ಕುರಿತು ನನ್ನ ಮಾತುಗಳು. ನಂತರ ನಡೆದ ಅಗ್ನಿಹೋತ್ರವು ಎಲ್ಲರನ್ನೂ ಆಕರ್ಶಿಸಿ ಕಾರ್ಯಕ್ರಮವು ಸಾರ್ಥಕವೆನಿಸಿತು.

















Saturday, September 26, 2015

RSS ನ ಗ್ರಾಮವಿಕಾಸ ಯೋಜನಾ ಕಾರ್ಯಕರ್ತರ ರಾಜ್ಯ ಮಟ್ಟದ ಶಿಬಿರದಲ್ಲಿ ಸಾಮೂಹಿಕ ಅಗ್ನಿಹೋತ್ರ

ಬೇಲೂರಿನಲ್ಲಿ  ದಿನಾಂಕ 25.9.2015 ರಂದು ಆಯೋಜಿಸಿದ್ದ  RSS ನ  ಗ್ರಾಮವಿಕಾಸ ಯೋಜನಾ ಕಾರ್ಯಕರ್ತರ ರಾಜ್ಯ ಮಟ್ಟದ ಶಿಬಿರದಲ್ಲಿ ಹಾಸನದ ವೇದಭಾರತೀ ಸದಸ್ಯರ  ಮಾರ್ಗದರ್ಶನದಲ್ಲಿ ನಡೆದ  ಸಾಮೂಹಿಕ ಅಗ್ನಿಹೋತ್ರ. 640 ಹಳ್ಳಿಗಳಲ್ಲಿ ಕೆಲಸ ಮಾಡುವ 80 ಪ್ರತಿನಿಧಿಗಳು ಭಾಗವಹಿಸಿದ್ದರು. ಗ್ರಾಮಗಳಲ್ಲಿ ಸಾಮರಸ್ಯ ವೃದ್ಧಿಸಲು  ಅಗ್ನಿಹೋತ್ರವು ಹೇಗೆ ನೆರವಾಗಬಲ್ಲದೆಂದು ತಿಳಿಸುವ ಹೊಣೆ ನನ್ನದಾಗಿತ್ತು. ಒಂದು ಉತ್ತಮ ಪ್ರಯೋಗ ನಡೆಯಲು ಅವಕಾಶ ಮಾಡಿದ ಗ್ರಾಮವಿಕಾಸದ ಪ್ರಾಂತ ಪ್ರಮುಖರಿಗೆ ವೇದಭಾರತಿಯು ಆಭಾರಿ.








Friday, September 25, 2015

RSS ನ ಪೂಜ್ಯ ಸರಸಂಘಚಾಲಕರು " ವೇದದ ಅರಿವು ಪಡೆಯಲು ಸಂಘದ ಶಾಖೆಗಳಿಗೆ ಬನ್ನಿ" ಎಂದು ಕೊಟ್ಟಿರುವ ಕರೆಗೆ ಮಿತ್ರರೊಬ್ಬರು ಹೀಗೆ ಪ್ರತಿಕ್ರಿಯಿಸಿದ್ದಾರೆ. " ಮೋಹನ್ ಜಿ ಭಾಗವತ್ ಅವರ ವೇದದ ಕಲ್ಪನೆ ಎಂದರೆ ವಿಗ್ರಹಾರಾಧನೆಗೆ ಮಹತ್ವ ಕೊಡುವುದು" ಎಂದು. ಆದರೆ ಹಾಗೆ ಹೇಳಿಲ್ಲ. ಜನರಿಗೆ ವೇದದ ನಿಜವಾದ ಅರಿವು ಮೂಡಿದರೆ ಇಡೀ ವಿಶ್ವ ನೆಮ್ಮದಿಯಿಂದ ಬದುಕ ಬಹುದು.ಅಷ್ಟು ಉತ್ಕೃಷ್ಠವಾಗಿದೆ. ವೇದವೆಂದರೆ ಕೇವಲ ಪೂಜಾ ಪುನಸ್ಕಾರದ ಅಥವಾ ಶ್ರಾದ್ಧ ಕರ್ಮಗಳ ಮಂತ್ರವಲ್ಲ. ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಬದುಕಿನ ಮಾರ್ಗದರ್ಶನ ವೇದದಲ್ಲಿದೆ. ಅದರ ಪರಿಚಯಆಗಬೇಕೆಂಬುದು ಸನ್ಮಾನ್ಯ ಶ್ರೀ ಮೋಹನ್ ಜಿ ಭಾಗವತ್ ಅವರ ಅಪೇಕ್ಷೆ. ವೇದಭಾರತಿಯು ಅದೇ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಈಗ ಸರಸಂಘಚಾಲಕರ ಮಾತು ನಮ್ಮ ಕೆಲಸಕ್ಕೆ ಹೆಚ್ಚು ಉತ್ಸಾಹ ತುಂಬಿದೆ. ಸಂಘದ ಎಲ್ಲಾ ಕಾರ್ಯಕರ್ತರು ಎಷ್ಟು ಬೇಗ ಸರಸಂಘಚಾಲಕರ ಮಾತನ್ನು ಅರ್ಥಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ಇದಕ್ಕೆ ಪೂರಕವಾಗಿ ಬಾಬಾ ರಾಮ್ ದೇವ್ ಅವರು ನಡೆಸುವ ಯೋಗಶಿಬಿರಗಳಲ್ಲಿ ವೇದದ ಅರಿವು ಮೂಡಿಸಲಾಗುತ್ತಿದೆ.ಅಗ್ನಿಹೋತ್ರವನ್ನು ಸಾರ್ವತ್ರೀಕರಣ ಗೊಳಿಸಲಾಗಿದೆ. ಅಗ್ನಿಹೋತ್ರದ ಬಗ್ಗೆ ಒಂದು ಮಾತು ಸ್ನೇಹಿತರ ಗಮನಕ್ಕೆ ತರುವುದು ಅವಶ್ಯಕವಾಗಿದೆ. ಅಗ್ನಿಹೋತ್ರದಿಂದ ಹಲವು ಖಾಯಿಲೆಗಳು ದೂರವಾಗುತ್ತದೆಂಬುದು ನಿಜ. ಆ ಕಾರಣ ದಿಂದ ಪಾಶ್ಚಿಮಾತ್ಯರೆಲ್ಲಾ ಅಗ್ನಿಹೋತ್ರ ಮಾಡುವುದನ್ನು ಆರಂಭಿಸಿದ್ದಾರೆ. ಅವರೆಲ್ಲಾ ಅಗ್ನಿಹೋತ್ರ ಮಾಡುವುದು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಓಂ ಸೂರ್ಯಾಯ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ| ಮಂತ್ರಗಳನ್ನು ಸೂರ್ಯೋದಯದಲ್ಲೂ , ಅಗ್ನಯೇ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ ಮಂತ್ರಗಳನ್ನು ಸೂರ್ಯಾಸ್ತದಲ್ಲೂ ಹೇಳುತ್ತಾ ಅಗ್ನಿಹೋತ್ರ ಮಾಡುತ್ತಾರೆ. ಆದರೆ ಮಹರ್ಷಿ ದಯಾನಂದ ಸರಸ್ವತೀ ಅವರು ರಚಿಸಿರುವ ಅಗ್ನಿಹೋತ್ರ ವಿಧಿಯು ಬಲು ಸೊಗಸಾಗಿದೆ. ಸುಮಾರು 15 ನಿಮಿಷಗಳ ವಿಧಿ. ಅದಕ್ಕೆ ಪೂರ್ವದಲ್ಲಿ ಈಶ್ವರಸ್ತುತಿ ಹಾಗೂ ಶಾಂತಿಮಂತ್ರಗಳ ಪಠಣ. ಇದು ಅದ್ಭುತ. ವೇದಭಾರತಿಯು ಮಹರ್ಷಿ ದಯಾನಂದ ಸರಸ್ವತೀ ರೂಪಿಸಿರುವಂತೆ ಅಗ್ನಿಹೋತ್ರವನ್ನು ನಿತ್ಯವೂ ನಡೆಸುತ್ತಿದೆ. ಮಂತ್ರಗಳನ್ನು ಶೃಂಗೇರಿ ಪರಂಪರೆಯಂತೆ ಸ್ವರಬದ್ಧವಾಗಿ ಪಠಿಸುವಾಗ ಆನಂದವಾಗುತ್ತದೆ. ಯಾವ ಜಾತಿ-ಮತ-ಲಿಂಗ ವಯಸ್ಸಿನ ಭೇದವಿಲ್ಲದೆ ನಡೆಯುತ್ತಿರುವ ವೇದಭಾರತಿಯ ಅಗ್ನಿಹೋತ್ರ ಸತ್ಸಂಗದಲ್ಲಿ ಸುಮಾರು ಐವತ್ತು ಜನರು ನಿತ್ಯವೂ ಭಾಗವಹಿಸುತ್ತಾರೆ. ಅಲ್ಲದೆ ಹಾಸನದ ಪತಂಜಲಿ ಯೋಗ ಕೇಂದ್ರಗಳಲ್ಲಿ ಆಗಿಂದಾಗ್ಗೆ ಅಗ್ನಿಹೋತ್ರ ಮತ್ತು ವೇದದ ಪರಿಚಯ ನಡೆಯುತ್ತಿದೆ.
Vasudevarao Rao ಸಂಘದ ಶಾಖೆಗಳಲ್ಲಿ ವೇದದ ಬಗ್ಗೆ ಅರಿವು ಮೂಡಬೇಕಾದರೆ ವೇದದಲ್ಲಿ ಏನಿದೆ ಎನ್ನುವುದು ಮೊದಲು ತಿಳಿಯಬೇಕು. ಸಂಧ್ಯಾ ಮತ್ತು ಅಗ್ನಿಹೋತ್ರ ಮಿಗಿಲಾಗಿ ವೇದಗಳಲ್ಲಿ ಎಷ್ಟು ಉದಾತ್ತ ಮತ್ತು ನಿತ್ಯ ಪ್ರೇರಕ ವಿಷಯಗಳನ್ನು ತಿಳಿಯಲು ದಿ|| ಜಗದೀಶ್ವರಾನಂದ ಸರಸ್ವತಿಯವರು ಬರೆದ ವೈದಿಕ ಉದಾತ್ತ ಭಾವನೆಗಳು ಎಂಬ ಪುಸ್ತಕವನ್ನು ಒಂದು ಪಠ್ಯಪುಸ್ತಕವಾಗಿ ಮತ್ತು ಅದಕ್ಕೆ ಪೂರಕವಾಗಿ ಚತುರ್ವೇದಿಗಳು ಬರೆದ ವೇದೋಕ್ತ ಜೀವನ ಪಥ ಪುಸ್ತಕವನ್ನು ಕಡ್ಡಾಯವಾಗಿ ಇಡಬೇಕು ವೈದಿಕ ಉದಾತ್ತ ಭಾವನೆಗಳು ಪುಸ್ತಕದಲ್ಲಿ 52 ವಿಷಯಗಳ ಬಗ್ಗೆ ವೇದಗಳ ವಿಚಾರವನ್ನು ಪ್ರಸ್ತುತ ಪಡಿಸುತ್ತದೆ. ಉದಾ, ಸ್ವಾವಲಂಬನೆ, ದೇಶ ಪ್ರೇಮ, ಸಾಹಸ, ಭ್ರಾತೃಪ್ರೇಮ, ಸಂಸಾರದಲ್ಲಿ ಯಶಸ್ಸು, ವೀರತೆಯ ತರಂಗ, ಇತ್ಯಾದಿ ವಿಷಯಗಳು ಸದಾ ಪ್ರೇರಕವಾಗಿವೆ. ಇದನ್ನು ಓದಿದ ಯಾವುದೇ ವಿಚಾರವಾದಿಯು ವೇದಗಳನ್ನು ಶ್ಲಾಘಿಸದೇ ಇರಲಾರ. ಅಂದ ಹಾಗೆ ಈ ಪುಸ್ತಕ ಕನ್ನಡಕ್ಕೆ ಕೃಷ್ಣ ಮೂರ್ತಿಯವರು ಅನುವಾದಿಸಿದ್ದು ಇದನ್ನು ಆರ್ಯಸಮಾಜ 1995 ರಲ್ಲಿಯೇ ಪ್ರಕಟಮಾಡಿತು. ಸದ್ಯ ಇದರ ಪ್ರತಿಗಳು ಅಲಭ್ಯ. ಸಂಘವು ಈ ಪುಸ್ತಕವನ್ನು ಮತ್ತು ಚತುರ್ವೇದಿಗಳ ಪುಸ್ತಕಗಳನ್ನು ಮರು ಪ್ರಕಟಣೆ ಮಾಡಿ, ಇದನ್ನು ಎಲ್ಲಾ ಶಾಖೆಗಳಿಗೆ ಹಂಚಬೇಕು. ನನಗೆ ಗೊತ್ತಿರುವಂತೆ ಬಹುಪಾಲು ಪ್ರಚಾರಕರಕರಿಗೂ ವೇದಗಳ ಬಗ್ಗೆ ಇರುವ ಜ್ಞಾನ ತುಂಬಾ ಸೀಮಿತವಾದದ್ದು. ಮತ್ತು ಅದೂ ಸಹ ಪೌರಾಣಿಕ ಜಗತ್ತಿನ ಹಿನ್ನೆಲೆಯಿಂದ ಕೂಡಿದ್ದು. ವೇದಗಳು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವಭೌಮ ಸಾಹಿತ್ಯವಾಗಲು ಕ್ಷಮತೆಯಿದ್ದು ಈ ನಿಟ್ಟಿನಲ್ಲಿ ಮುಂದುವರೆದರೆ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಉಪಕಾರವಾದೀತು. ಸೆಕ್ಯುಲರ್ ಬುದ್ಧಿ ಜೀವಿಗಳು ಸಹ ಆಕ್ಷೇಪ ವೆತ್ತುವ ಪ್ರಸಂಗವೇ ಒದಗಿಬರದು.

ವೇದ ಸುಧೆ Vasudevarao Rao ಸಂಘವು ಈ ಸುಧೀರ್ಘ ಪಯಣದಲ್ಲಿ ಹಿಂದು ಸಮಾಜವನ್ನು ಗಟ್ಟಿ ಮಾಡಲು ಯಾವ ಆಚರಣೆಗಳನ್ನೂ ವಿರೋಧಿಸದೇ ಅವರಲ್ಲಿ ಹಿಂದುತ್ವ ಮತ್ತು ರಾಷ್ಟ್ರಭಕ್ತಿಯನ್ನು ತುಂಬುತ್ತಿದೆ. ವಿಗ್ರಹಾರಾಧನೆ ವಿರೋಧ ಮುಂತಾದ ಕೆಲವು ನಂಬಿಕೆಗಳನ್ನು ವಿರೋಧಿಸುವ ವಿಚಾರಗಳು ಚತುರ್ವೇದಿಗಳ ಸಾಹಿತ್ಯದಲ್ಲಿ ಮ್ರಮುಖ ಸ್ಥಾನ ಪಡೆಯುತ್ತವೆ. ಶತಶತಮಾನಗಳ ನಂಬಿಕೆಗಳನ್ನು ಹೋಗಲಾಡಿಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿಯೇ RSS ಆರ್ಯಸಮಾಜದ ಹಾದಿಯಲ್ಲಿ ಸಾಗುವುದಿಲ್ಲ. ಆದರೆ ಇಂದಲ್ಲಾ ನಾಳೆ ವೇದದ ಆಧಾರದಲ್ಲಿಯೇ ಸಮಾಜವು ನಡೆಯುವಂತೆ ಮಾಡುವ ಶಕ್ತಿ ಸಂಘಕ್ಕೆ ಇದೆ. ಆದರೆ ಸಂಘವು ಬಹಳ ಪ್ರಬುದ್ಧವಾಗಿ ಚಿಂತನೆ ನಡೆಸಿ ಒಂದೊಂದೇ ಹೆಜ್ಜೆ ಇಡುತ್ತಾ ಹೋಗುತ್ತದೆ. ಸಂಘವನ್ನು ಹತ್ತಿರದಲ್ಲಿ ಗಮನಿಸಿದವರಿಗೆ ಇದು ಗೊತ್ತಾಗುತ್ತದೆ.

ಸಂಘದ ಶಾಖೆಗಳಲ್ಲಿ ವೇದದ ಪರಿಚಯ

RSS ನ ಪೂಜ್ಯ ಸರಸಂಘಚಾಲಕರು " ವೇದದ ಅರಿವು ಪಡೆಯಲು ಸಂಘದ ಶಾಖೆಗಳಿಗೆ ಬನ್ನಿ" ಎಂದು ಕೊಟ್ಟಿರುವ ಕರೆಗೆ ಮಿತ್ರರೊಬ್ಬರು ಹೀಗೆ ಪ್ರತಿಕ್ರಿಯಿಸಿದ್ದಾರೆ. " ಮೋಹನ್ ಜಿ ಭಾಗವತ್ ಅವರ ವೇದದ ಕಲ್ಪನೆ ಎಂದರೆ ವಿಗ್ರಹಾರಾಧನೆಗೆ ಮಹತ್ವ ಕೊಡುವುದು" ಎಂದು. ಆದರೆ ಹಾಗೆ ಹೇಳಿಲ್ಲ. ಜನರಿಗೆ ವೇದದ ನಿಜವಾದ ಅರಿವು ಮೂಡಿದರೆ ಇಡೀ ವಿಶ್ವ ನೆಮ್ಮದಿಯಿಂದ ಬದುಕ ಬಹುದು.ಅಷ್ಟು ಉತ್ಕೃಷ್ಠವಾಗಿದೆ. ವೇದವೆಂದರೆ ಕೇವಲ ಪೂಜಾ ಪುನಸ್ಕಾರದ ಅಥವಾ ಶ್ರಾದ್ಧ ಕರ್ಮಗಳ ಮಂತ್ರವಲ್ಲ. ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಬದುಕಿನ ಮಾರ್ಗದರ್ಶನ ವೇದದಲ್ಲಿದೆ. ಅದರ ಪರಿಚಯಆಗಬೇಕೆಂಬುದು ಸನ್ಮಾನ್ಯ ಶ್ರೀ  ಮೋಹನ್ ಜಿ ಭಾಗವತ್  ಅವರ ಅಪೇಕ್ಷೆ. ವೇದಭಾರತಿಯು ಅದೇ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಈಗ ಸರಸಂಘಚಾಲಕರ ಮಾತು ನಮ್ಮ ಕೆಲಸಕ್ಕೆ ಹೆಚ್ಚು ಉತ್ಸಾಹ ತುಂಬಿದೆ. ಸಂಘದ  ಎಲ್ಲಾ  ಕಾರ್ಯಕರ್ತರು ಎಷ್ಟು ಬೇಗ ಸರಸಂಘಚಾಲಕರ ಮಾತನ್ನು ಅರ್ಥಮಾಡಿಕೊಳ್ಳುತ್ತಾರೋ ಅಷ್ಟು ಒಳ್ಳೆಯದು. ಇದಕ್ಕೆ ಪೂರಕವಾಗಿ ಬಾಬಾ ರಾಮ್ ದೇವ್  ಅವರು ನಡೆಸುವ ಯೋಗಶಿಬಿರಗಳಲ್ಲಿ ವೇದದ ಅರಿವು ಮೂಡಿಸಲಾಗುತ್ತಿದೆ.ಅಗ್ನಿಹೋತ್ರವನ್ನು ಸಾರ್ವತ್ರೀಕರಣ ಗೊಳಿಸಲಾಗಿದೆ. ಅಗ್ನಿಹೋತ್ರದ ಬಗ್ಗೆ ಒಂದು ಮಾತು ಸ್ನೇಹಿತರ ಗಮನಕ್ಕೆ ತರುವುದು ಅವಶ್ಯಕವಾಗಿದೆ. ಅಗ್ನಿಹೋತ್ರದಿಂದ ಹಲವು ಖಾಯಿಲೆಗಳು ದೂರವಾಗುತ್ತದೆಂಬುದು ನಿಜ. ಆ ಕಾರಣ ದಿಂದ ಪಾಶ್ಚಿಮಾತ್ಯರೆಲ್ಲಾ  ಅಗ್ನಿಹೋತ್ರ ಮಾಡುವುದನ್ನು ಆರಂಭಿಸಿದ್ದಾರೆ. ಅವರೆಲ್ಲಾ ಅಗ್ನಿಹೋತ್ರ ಮಾಡುವುದು ಕೇವಲ ಐದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಓಂ ಸೂರ್ಯಾಯ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ| ಮಂತ್ರಗಳನ್ನು ಸೂರ್ಯೋದಯದಲ್ಲೂ ,  ಅಗ್ನಯೇ ಸ್ವಾಹಾ| ಓಂ ಪ್ರಜಾಪತಯೇ ಸ್ವಾಹಾ ಮಂತ್ರಗಳನ್ನು ಸೂರ್ಯಾಸ್ತದಲ್ಲೂ ಹೇಳುತ್ತಾ ಅಗ್ನಿಹೋತ್ರ ಮಾಡುತ್ತಾರೆ. ಆದರೆ ಮಹರ್ಷಿ ದಯಾನಂದ ಸರಸ್ವತೀ ಅವರು ರಚಿಸಿರುವ ಅಗ್ನಿಹೋತ್ರ ವಿಧಿಯು ಬಲು ಸೊಗಸಾಗಿದೆ. ಸುಮಾರು 15 ನಿಮಿಷಗಳ ವಿಧಿ. ಅದಕ್ಕೆ ಪೂರ್ವದಲ್ಲಿ ಈಶ್ವರಸ್ತುತಿ ಹಾಗೂ ಶಾಂತಿಮಂತ್ರಗಳ  ಪಠಣ. ಇದು ಅದ್ಭುತ. ವೇದಭಾರತಿಯು  ಮಹರ್ಷಿ ದಯಾನಂದ ಸರಸ್ವತೀ ರೂಪಿಸಿರುವಂತೆ ಅಗ್ನಿಹೋತ್ರವನ್ನು ನಿತ್ಯವೂ ನಡೆಸುತ್ತಿದೆ. ಮಂತ್ರಗಳನ್ನು ಶೃಂಗೇರಿ ಪರಂಪರೆಯಂತೆ ಸ್ವರಬದ್ಧವಾಗಿ ಪಠಿಸುವಾಗ  ಆನಂದವಾಗುತ್ತದೆ. ಯಾವ ಜಾತಿ-ಮತ-ಲಿಂಗ ವಯಸ್ಸಿನ ಭೇದವಿಲ್ಲದೆ ನಡೆಯುತ್ತಿರುವ ವೇದಭಾರತಿಯ ಅಗ್ನಿಹೋತ್ರ ಸತ್ಸಂಗದಲ್ಲಿ ಸುಮಾರು ಐವತ್ತು ಜನರು ನಿತ್ಯವೂ ಭಾಗವಹಿಸುತ್ತಾರೆ. ಅಲ್ಲದೆ ಹಾಸನದ ಪತಂಜಲಿ  ಯೋಗ ಕೇಂದ್ರಗಳಲ್ಲಿ ಆಗಿಂದಾಗ್ಗೆ ಅಗ್ನಿಹೋತ್ರ ಮತ್ತು ವೇದದ ಪರಿಚಯ ನಡೆಯುತ್ತಿದೆ.



Thursday, September 24, 2015

Attend Sangh Shakhas to attain Vedic knowledge- RSS Chief

ನನಗಂತೂ ಅತ್ಯಂತ ಸಂತೋಷ ಆಗ್ತಾ ಇದೆ. ನಾವೇನು ಈಗಾಗಲೇ ಮಾಡುತ್ತಿದ್ದೀವೋ   ನಮ್ಮ ಪೂಜ್ಯ ಸರಸಂಘ ಚಾಲಕರು ಅದನ್ನೇ ಒತ್ತಿ ಹೇಳಿದ್ದಾರೆ.ಸಂಘದ ಶಾಖೆಗಳಿಗೆ ಬಂದು ವೇದದ ಅರಿವು ಮೂಡಿಸಿಕೊಳ್ಳಲೂ ಸಹ ಜನರಿಗೆ ಕರೆ ನೀಡಿದ್ದಾರೆ.[The RSS Chief asked people to attend Sangh Shakhas to attain Vedic knowledge.]ಈಗ ಸಂಘದ ಸಾಮಾನ್ಯ ಕಾರ್ಯಕರ್ತರ ಅಂಗಳದಲ್ಲಿದೆ ಚೆಂಡು.
-------------------------------------------------------------------------------------------

Nobody can imagine India without its culture, philosophy and the Vedas as these make up the soul of the country, RSS Chief Mohan Bhagwat said here today.

"Late Swami Vivekanand had said that so long as religion is alive even in one particle, eliminating India cannot be possible," he said while inaugurating a Ved Vidyalaya at Vrindavan.

"Efforts made to eliminate the country's culture for over 200 years could not succeed as it is deeply-rooted," he said.

Comparing the Vedas with science, Bhagwat said that while the latter has its limitations, the former had none.

Bhagwat suggested that acharyas, saints and academicians should interpret Vedas in a way which would be relevant in different times, situations and places so that "the secret of the welfare of humanity, that India has in the Vedas, could be spread throughout the world".

The RSS Chief asked people to attend Sangh Shakhas to attain Vedic knowledge.

Meanwhile, when people requested Bhagwat for selfies at the event, he said it was okay to take pictures but, "don't share them on the social media".

"Post photos of our great leaders instead," he said.

Punjab and Haryana Governor Kaptan Singh Solanki, who also attended the programme, emphasised the importance of Vedas.

"If India has to lead the world in the 21st Century, character building that comes through Vedas is a must," he added.

Founder of Bharat Mata Mandir Hardwar, Mahamandaleshwar Swami Satyamitranand Giri, Maluk Peethdheeshwar Rajendra Das and the founder of Veda School in Vrindaban, Govind Deo Giri, were among those present at the event.

ಪೂಜ್ಯ ದಯಾನಂದ ಸರಸ್ವತೀ ಸ್ವಾಮೀಜಿ ಬ್ರಹ್ಮೈಕ್ಯ


ಆರ್ಷವಿದ್ಯಾ ಗುರುಕುಲದ ಪೂಜ್ಯ ದಯಾನಂದ ಸರಸ್ವತಿ ಸರಸ್ವತೀ ಸ್ವಾಮೀಜಿ ಭಗವಂತನಲ್ಲಿ  ಐಕ್ಯ.
ಒಂದೇ ಒಂದು ಅವಕಾಶ ನಮಗೆ ಲಭ್ಯವಾಗಿತ್ತು. ಅದೂ ಫಲಪ್ರದವಾಗಲಿಲ್ಲ. ನನ್ನ Facebook ವಾಲ್ ನಲ್ಲಿರುವ ಚಿತ್ರವು ಸ್ವಾಮಿ ಚಿದ್ರೂಪಾನಂದರ  ಹುಬ್ಬಳ್ಳಿ ಸಮೀಪದ ಮಲಗುಂದ ಆಶ್ರಮದಲ್ಲಿ ವೇದಭಾರತಿಯು ನಡೆಸಿಕೊಟ್ಟ  ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮದ್ದು. ಆ ಒಂದು ಕಾರ್ಯಕ್ರಮಕ್ಕೆ ಪೂಜ್ಯ ದಯಾನಂದರು ಬರುತ್ತಾರೆಂದು ಎಲ್ಲಾ ಏರ್ಪಾಡುಗಳೂ ಆಗಿದ್ದವು. ಆದರೆ ಆಗಲೇ ಅವರ ಆರೋಗ್ಯ ಕ್ಷೀಣಿಸಿತ್ತು.ಬರಲಿಲ್ಲ. ಪೂಜ್ಯ ಚಿದ್ರೂಪಾನಂದರಲ್ಲೇ ಸ್ವಾಮೀಜಿಯವರನ್ನು ಇನ್ನುಮುಂದೆ ಕಾಣಬೇಕಾಗಿದೆ. ವೇದಭಾರತಿಯು ಸ್ವಾಮೀಜಿಯವರ ಪಾದಾರವಿಂದಗಳಲ್ಲಿ ಸಾಸ್ಟಾಂಗವೆರಗುತ್ತದೆ.

The Swami was admitted to the hospital 10 days back. His condition kept fluctuating all these days.

Swami Dayananda Saraswati passed away at his ashram in Rishikesh on Wednesday night. He was 85. He had been ailing for quite sometime.

Born in 1930 in Manjakudi, Natarajan, as the Swami was known in his pre-monastic days, was drawn to Indian philosophy, particularly the Advaita school, listening to Swami Chinmayananda. During the late 1950s and early 1960s, his association with Swami Chinmayananda grew closer as he began taking Vedanta lessons. In 1962, he took ‘Sanyas’ to become Swami Dayananda Saraswati.

He continued his association with Swami Chinmayananda for a long time and the two set up Sandipani Sadhanalaya in the then Bombay to train people in Vedanta.

His contribution there and subsequently with Arsha Vidya Gurukulam saw hundreds of people learn Vedanta, take up renunciation and spread the Vedic message.

Creating teachers in Vedanta along with setting up schools for under privileged under the Aim for Seva Movement were some of his important contributions, says Swami Samananda, one of his disciples from Madurai.

Swami Dayananda Saraswati set up the Acharya Sabha, bringing pontiffs from all over the country on a common platform to take up the cause of Hinduism and debate the challenges it faced. He was also a vocal opponent of religious conversion, calling it assault on faith.

Supported Odhuvars

The Swami also took up the cause of Odhuvars. He was also credited with playing an important role in the refurbishment and re-run of the Thiruvidaimaruthur temple car. He had also penned a few verses that have become popular devotional songs.

The Swami was admitted to the hospital 10 days back. His condition kept fluctuating all these days and was finally brought back to his ashram. .

Mr. Modi called on the Swami at his Ashram to enquire about his health on September 11.

(With additional inputs from PTI)



Wednesday, September 23, 2015

ಮಿತ್ರರೊಬ್ಬರ ಪತ್ರ

ಎಷ್ಟಾದರೂ ಶ್ರಮವಾಗಲಿ, ನಮ್ಮ ಶ್ರಮದಿಂದ ಇಂತಾ ಒಬ್ಬರಿಗೆ ಉಪಕಾರವಾಗಿದ್ದರೆ ನಿಜವಾಗಿ ನಮ್ಮ ಶ್ರಮ ಸಾರ್ಥಕವಲ್ಲವೇ? ನೋಡಿ ಮಿತ್ರ ಹರೀಶ್ ಬಂಡ್ಸಾಲೆ ಯವರ ಸಂದೇಶ.


ನಮಸ್ತೆ... ನಾನು ಕಳೆದ ಕೆಲವು ವರ್ಷಗಳಿಂದ ವೇದಸುಧೆ blog ನ್ನು ಓದುತ್ತಿದ್ದೆನೆ. ನಿಮ್ಮ ಹಾಗೂ ಶರ್ಮರ ಮಾತುಗಳು ಬಹಳ ಚೆನ್ನಾಗಿ ಇರುತ್ತದೆ.

ಅನೇಕ ಸಂದರ್ಭಗಳಲ್ಲಿ ಬದುಕಿನ ಜಂಜಾಟಗಳಿಂದ ಪಾರಾಗಲು, ಜೀವನವನ್ನು ಒಳ್ಳೆಯ ತೆರನಾಗಿ ಬದುಕಲು ನಿಮ್ಮ ಮಾತುಗಳು ನನಗೆ ಸಹಕಾರಿ ಯಾಗದೆ.

Infact, the talks and articles posted at your blog has helped me to think from most straight point than from left wing or right wing assumptions. Veda has enlightened my vision towards our relegion and rich heritage .. thank you for that

ಹೃದಯ ಹೃದಯಗಳ ಬೆಸೆಯೋಣ

RSS ಸರಸಂಘಚಾಲಕರು ಏನು ಹೇಳಿದರೆಂಬುದು ನಮ್ಮ ಮುಖ್ಯ ಮಂತ್ರಿಗಳಿಗೆ ಅರ್ಥವಾಗಲಿಲ್ಲವೇ? ಅಥವಾ ಅದರಲ್ಲೂ ರಾಜಕೀಯವೇ? ಎಷ್ಟುದಿನ ನೀವು ಒಂದು ವರ್ಗವನ್ನು ಪ್ರತ್ಯೇಕವಾಗಿಟ್ಟುಕೊಂಡೇ ರಾಜಕಾರಣ  ಮಾಡಲು ಬಯಸುತ್ತೀರಿ ರಾಜಕೀಯ ಮುಖಂಡರೇ? ಸಾಮಾಜಿಕವಾಗಿ ಹಿಂದುಳಿದಿದ್ದ ವ್ಯಕ್ತಿಯನ್ನು ಮೇಲೇಳಲು ಬಿಡುವುದೇ ಇಲ್ಲವಲ್ಲಾ ನೀವು! ಇಷ್ಟಕ್ಕೂ  RSS ಸರಸಂಘಚಾಲಕರು ಹೇಳಿದ್ದೇನು?  ಒಂದು ವರ್ಗಕ್ಕೆ  ಶಾಶ್ವತವಾಗಿ ಮೀಸಲಾತಿಯನ್ನು ಕೊಡುತ್ತಾ ಆ ವರ್ಗವನ್ನು ಪ್ರತ್ಯೇಕವಾಗಿಟ್ಟು  ರಾಜಕಾರಣ ಮಾಡಬೇಕೋ, ಅಥವಾ ಮುಖ್ಯವಾಹಿನಿಯಲ್ಲಿ ಒಂದಾಗುವಂತೆ  ಸ್ವಾಭಿಮಾನದಿಂದ ಗೌರವದಿಂದ ಬಾಳುವಂತೆ ಮಾಡಬೇಕೋ? ಒಂದು ಕಡೆ ಮೀಸಲಾತಿಯ ಕೂಗು! ಮತ್ತೊಂದೆಡೆ ಅದನ್ನು  ವೈಭವೀಕರಿಸುತ್ತಾ ಹಿಂದುಳಿದ ವರ್ಗಕ್ಕೆ ಮಾಡುವ ಅವಮಾನ! ಮೀಸಲಾತಿ ಯಿಂದ ಶಿಕ್ಷಣ  ಪಡೆದು ಸರ್ಕಾರದಲ್ಲಿ ಒಂದು ಉನ್ನತ ಹುದ್ಧೆಯನ್ನು ಪಡೆದು ವೈದ್ಯನೋ, ಇಂಜಿನಿಯರೋ ಆದ ಮೇಲೆ ಆಕುಟುಂಬ ಸ್ವಾಭಿಮಾನದಿಂದ ಬಾಳುತ್ತಾ ಮೀಸಲಾತಿಯಿಂದ ಹೊರಬರಬಾರದೇ? ಕೇವಲ ಆ ಒಂದು ಜಾತಿಯಲ್ಲಿ ಹುಟ್ಟಿದನೆಂಬ ಕಾರಣಕ್ಕೆ ಶ್ರೀಮಂತಿಕೆ ಬಂದಮೇಲೂ ಮೀಸಲಾತಿ ಇರಲಿ, ಎಂಬುದು ಆ ವ್ಯಕ್ತಿಗೆ ಮಾಡುವ ಅವಮಾನ.ಅಷ್ಟೇ ಅಲ್ಲ  ಸರ್ಕಾರದಿಂದ ಸವಲತ್ತು ಸಿಗುತ್ತದೆಂದಾದರೆ ಎಂತಾ ಶ್ರೀಮಂತನೂ "ಬರುವುದು ಬರಲಿ" ಎನ್ನುವ ಸ್ವಭಾವ ಹೊಂದಿರುತ್ತಾನೆ. ಆದರೆ ನಾನೊಬ್ಬ ಈ ದೇಶದ ಮತ್ತು ಈ ಸಮಾಜದ ಜವಾಬ್ದಾರಿಯುತ ಪ್ರಜೆ ಎಂಬ ಭಾವನೆಯನ್ನು ಬೆಳೆಸುವುದು ಯಾವಾಗ?
ಈಗಲಾದರೂ ಮೀಸಲಾತಿಯ ಬಗ್ಗೆ ಒಂದು ಅಧ್ಯಯನ ಯಾಕೆ ನಡೆಯ ಬಾರದು? ಮೀಸಲಾತಿಯಿಂದ ಒಂದು ಉತ್ತಮ ಹುದ್ಧೆ ಪಡೆದಿರುವವರ ಶೇಕಡಾ ಎಷ್ಟು ಮಂದಿ  ಎಂಬ ಅಂಕಿ ಅಂಶ ಸಿಗಬಾರದೇ? ಹಾಗೆಯೇ ಇನ್ನೂ ಎಷ್ಟು  ಜನ ಹಿಂದುಳಿದ ಸ್ಥಿತಿಯಲ್ಲೇ ಇದ್ದಾರೆ? ಯಾಕೆ ಮುಂದುವರೆಯಲಿಲ್ಲ? ಅದಕ್ಕೆ ಕಾರಣವೇನು? ನಿಜವಾಗಿ ಮೀಸಲಾತಿಯ ಸೌಲಭ್ಯ ಎಷ್ಟು ಪಡೆದರು? ಅಥವಾ ಮೀಸಲಾತಿಯ ಹೆಸರಲ್ಲಿ ಬೇರೆ ಉಳ್ಳವರು ಸೌಲಭ್ಯ ಲಪಟಾಯಿಸಿದರೇ? ಒಂದು ಅಧ್ಯಯನ ಆಗಬಾರದೇ?
ಅಂತೆಯೇ ಮುಂದುವರೆದ ಜಾತಿಯಲ್ಲಿ ಹುಟ್ಟಿದವರಾದ ಮಾತ್ರಕ್ಕೆ ನರಕದಲ್ಲಿ ನೆರಳಬೇಕೆ? ಅವರ ಆರ್ಥಿಕ ಸ್ಥಿತಿಯ ನೈಜ ಅಧ್ಯಯನ ಆಗಬಾರದೇ?
ಸರಸಂಘಚಾಲಕರ ಮಾತಿನಲ್ಲಿ ಇದಕ್ಕಿಂತ ಹೆಚ್ಚು ಹೃದಯದ ಭಾವನೆಗಳಿದೆ. ಈ ದೇಶದ ಕಟ್ಟ ಕಡೆಯ ವ್ಯಕ್ತಿಯ  ಬದುಕಿನ ಮಟ್ಟ ಸುಧಾರಿಸಬೇಕೆಂಬ ಕಾಳಜಿ ಇದೆ. ಅದೇಕೆ ನಮ್ಮ ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ?
ಬೇಕಾಗಿರುವುದು ಹೃದಯ ಹೃದಯಗಳ ಸಂಬಂಧ! ಸಾಮಾಜಿಕ ಸಾಮರಸ್ಯ! ಕೇವಲ ಸಂಘರ್ಷವಲ್ಲ. ಬಲವಂತದಿಂದ ಕಸಿದುಕೊಳ್ಳುವ ಪ್ರವೃತ್ತಿಯಿಂದ ಸಮಾಜದಲ್ಲಿ ಶಾಶ್ವತವಾಗಿ ವೈರತ್ವ ಉಳಿಯುತ್ತದೆ. ಆದರೆ ಹೃದಯ ಪರಿವರ್ತನೆ ಮಾಡಿ ಸಮಾನ ಬದುಕು ಎಲ್ಲರಿಗೂ ಸಿಗುವಂತಾಗಬೇಕು. ಎಲ್ಲಾ ಸಾಮಾಜಿಕ ಸಂಘಟನೆಗಳೂ ಹೃದಯವಂತಿಕೆಗೆ ಗಮನ ಕೊಟ್ಟಿದ್ದೇ ಆದರೆ ಇಂದಲ್ಲಾ ಇನ್ನು ಹತ್ತು ವರ್ಷದಲ್ಲಾದರೂ ಭಾರತದ ಎಲ್ಲರೂ ಗೌರವದಿಂದ ಬದುಕು ನಡೆಸುವಂತಾಗುತ್ತದೆ. ಇಲ್ಲವಾದರೆ  ಮೇಲು-ಕೀಳನ್ನು ಶಾಶ್ವತವಾಗಿ ಸಮಾಜದಿಂದ ದೂರಮಾಡುವುದು ಮರೀಚಿಕೆಯಾಗುತ್ತದೆ.

Those values that do not conform to scientific standards should be given up-RSS Chief



ಸಂಘದ ಸ್ವಯಂ ಸೇವಕರದು ಪ್ರಾಂಜಲ ಮನೋಭಾವ. ಹೃದಯದಲ್ಲಿರುವುದು ಮಾತಿನಲ್ಲಿ, ಮಾತಿನಂತೆ ನಡೆ. ಇದು ಸಂಘದ ಸ್ವಯಂ ಸೇವಕನ ಸಾಮಾನ್ಯ ಮನೋಭಾವ. ಯಾರೋ ಸಂಘವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳದ ವ್ಯಕ್ತಿಯ ಮಾತನ್ನು ಹಿಡಿದು ಕೋಲಾಹಲ ಮಾಡುವುದು ನಮ್ಮ ಮಾಧ್ಯಮಗಳ ಸ್ವಭಾವ. ಆದರೆ ಸಂಘದ ಅಗ್ರ ನಾಯಕರ ಅತ್ಯಂತ ಮುಖ್ಯವಾದ ಹೇಳಿಕೆಗಳಿಗೆ ಮಹತ್ವವನ್ನೇ ಕೊಡುವುದಿಲ್ಲ. ಕಳೆದ ನಾಲ್ಕಾರು ವರ್ಷಗಳಿಂದ ವೇದಭಾರತಿಯು ಯಾವ ದಿಕ್ಕಿನಲ್ಲಿ ಕೆಲಸಮಾಡುತ್ತಿದೆಯೋ ಅದನ್ನೇ ಸಂಘದ ಪೂಜ್ಯ ಸರಸಂಘಚಾಲಕರು ಒತ್ತಿ ಹೇಳಿದ್ದಾರೆ. ಸಂಘದ ನಿಷ್ಠಾವಂತ ಸ್ವಯಂ ಸೇವಕರೆಲ್ಲರ ಮನೋಭೂಮಿಕೆಯೂ ಇದೇ ಆಗಿದೆ. ಮಾನ್ಯ ಮೋಹನ್ ಜಿ ಭಾಗವತ್ ಅವರ ಮಾತನ್ನು ನೇರವಾಗಿ ನೀವೇ ಓದಿ..
RSS Chief Mohan Bhagwat (PTI Photo) RSS sarsanghachalak Mohan Bhagwat on Sunday called for a reassessment of Hindu religious values, saying that values that did not conform to scientific bases should be given up. Bhagwat, who was here to participate in a columnists’ conference on “Indian perspectives on women’s issues”, said, “There is a need to assess the prevalent Hindu religion along scientific lines. Those values that do not conform to scientific standards should be given up.” Indian society, he said, had maintained a tradition of rejecting redundant traditions and accepting “good things from all over the world” based on eternal life values. All issues and problems should be viewed through the Hindu life philosophy, Bhagwat also said. “The Hindu life view looks at men and women as two expressions of a single element. It therefore lays stress on unity instead of equality.” The values and significance of the Indian family system, Bhagwat said, stood strong despite numerous challenges, which was a testimony to the power of the Hindu society. “Recognising our roots and strengthening them will empower the society to combat westernisation and numerous such attacks,” Bhagwat said. The RSS chief said only the Hindu religion had the ability to move “creation” forward in a balanced way. Bhagwat is on a nine-day tour of the desert state. The two-day columnists’ conference, that concluded on Sunday, was part of his Jaipur itinerary. He will now head to Jodhpur for the remainder of his tour, participating in Sangh meetings till September 20. - See more at: http://indianexpress.com/article/india/gujarat/hindu-values-that-have-no-scientific-bases-should-be-given-up-rss-chief-mohan-bhagwat/#sthash.C9iykhng.Yniwbsnz.dpuf

Tuesday, September 22, 2015

ವೇದಭಾರತಿಯ ಚಟುವಟಿಕೆಗಳು ಜನರ ಪ್ರಶಂಸೆಗೆ ಪಾತ್ರವಾಗಿದೆ

ಸ್ನೇಹಿತರೇ,
ಹಲವು ದಿನಗಳಿಂದ ವೇದಸುಧೆಯಲ್ಲಿ ಬರೆಯಲಾಗಿರಲಿಲ್ಲ.ಕ್ಷಮೆ ಇರಲಿ. ಇತ್ತೀಚೆಗೆ ವೇದಭಾರತಿಯ ಚಟುವಟಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ವಿಶ್ವಹಿಂದು ಪರಿಷತ್ತಿನಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಸಾಮರಸ್ಯ ಪ್ರಮುಖ್ -ಹೊಣೆಯೂ      ನನ್ನ ಹೆಗಲಿಗೇರಿದೆ.
                   ನಾನು ವಿಶ್ವಹಿಂದು ಪರಿಷತ್ತಿನ ಚಟುವಟಿಕೆಗಳಿಗೆ ಮತ್ತೊಮ್ಮೆ ಕಾಲಿಟ್ಟಾಗ  " ವಿಶ್ವಹಿಂದು ಪರಿಷತ್ತಿನಲ್ಲಿ ವೇದಕ್ಕೆಲ್ಲಿ ಆಧ್ಯತೆ ಕೊಡುತ್ತಾರೆ! " ಎನ್ನುವ ಅನುಮಾನ ಮಿತ್ರರಾದ ವಾಸುದೇವರಾಯರಿಗೆ! ಅವರ ಮೂಲಕ ನಿಮಗೂ ಅನುಮಾನ ಪರಿಹರಿಸಬೇಕಾದ್ದು ನನ್ನ ಕರ್ತವ್ಯ ಅಲ್ಲವೇ? 
                 ಹಲವರಿಗೆ ನನ್ನ ಪೂರ್ವಾಪರ ಗೊತ್ತಿದೆ, ಎಂದು ಭಾವಿಸುವೆ. ಮೂಲತಃ RSS ಕಾರ್ಯಕರ್ತನಾದ ನಾನು ತಾರುಣ್ಯದಲ್ಲಿ ನೇರವಾಗಿ ಸಂಘಕಾರ್ಯದಲ್ಲಿ ತೊಡಗಿಸಿಕೊಂಡಿದ್ದವನು ನಂತರ ವಿಶ್ವಹಿಂದು ಪರಿಷತ್ತಿನ ಹಾಸನ ಜಿಲ್ಲಾ ಕಾರ್ಯದರ್ಶಿಯಾಗಿ ಐದಾರು ವರ್ಷಗಳು ಜವಾಬ್ದಾರಿ ನಿರ್ವಹಿಸಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಅಧ್ಯಾತ್ಮದತ್ತ ಒಲವು ಬಂದಿದ್ದರಿಂದ ರಾಮಕೃಷ್ಣಾಶ್ರಮ, ಚಿನ್ಮಯ ಮಿಷನ್ ಗೆ ಸೇರಿದ ಹಲವಾರು ಸ್ವಾಮೀಜಿಗಳಿಂದ ಆಗಿಂದಾಗ್ಗೆ ಉಪನ್ಯಾಸವನ್ನು ಏರ್ಪಾಡು ಮಾಡಿ ,ಈ ಕೆಲಸಗಳಲ್ಲಿ ನಾಲ್ಕಾರು ವರ್ಷ ಕಳೆಯುವಾಗ ಸಂಪರ್ಕಕ್ಕೆ ಬಂದವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು. ಅವರ ನೇರವಾದ ಮಾತು ನನ್ನನ್ನು ಕಟ್ಟಿ ಹಾಕಿದ್ದಾಯ್ತು. ಆದರೂ ಸಂಘದಲ್ಲಿ ಪಡೆದಿದ್ದ ಸಂಸ್ಕಾರದ ಫಲವಾಗಿ ಶರ್ಮರೊಡನೆ ಸಾಕಷ್ಟು ಚರ್ಚೆಮಾಡುತ್ತಿದ್ದರೂ ಗೊತ್ತಿಲ್ಲದೆ ಅವರನ್ನು ಅನುಸರಿಸಲು ಶುರುವಾದೆ. ಅವರ ವಿಚಾರಗಳ ಪ್ರಚಾರಕ್ಕೆಂದು ಶುರುಮಾಡಿದ್ದು "ವೇದಸುಧೆ"
                 ವೇದಸುಧೆಯಲ್ಲಿ ಶರ್ಮರ ವಿಚಾರದ ಜೊತೆಗೆ ನನ್ನ ಅಂತರಾಳದ ವಿಚಾರವನ್ನೂ ಬಿಚ್ಚಿಡುತ್ತಾ ಸಾಗಿದ್ದಾಯ್ತು. ನಂತರ "ಎಲ್ಲರಿಗಾಗಿ ವೇದ"  ಎಂಬ ಉದ್ದೇಶವನ್ನಿಟ್ಟುಕೊಂಡು ಆರಂಭವಾದದ್ದು "ವೇದಭಾರತೀ" ಅದರ ಚಟುವಟಿಕೆ ಹೆಚ್ಚಾದಾಗ ಸಹಜವಾಗಿ ಬ್ಲಾಗ್ ನಲ್ಲಿ ಬರೆಯಲು ಸಮಯವೇ ಸಿಗಲಿಲ್ಲ.
                   ಯಾವಾಗ ವೇದಭಾರತಿಯ ಚಟುವಟಿಕೆಗಳು ಹೆಚ್ಚಾಯ್ತು ಸಹಜವಾಗಿ RSS ಹಿರಿಯರಿಗೂ ವೇದಭಾರತಿಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿ ಹಿರಿಯರ ಗೌರವಕ್ಕೆ ಪಾತ್ರವಾಯ್ತು. ಯಾವಾಗಲೂ ಸಂಘದ ಸಂಪರ್ಕ ಬಿಡದ ನನ್ನನ್ನು ಒಂದಲ್ಲಾ ಒಂದು ಸಂಘದ ಕಾರ್ಯಕ್ರಮಗಳಲ್ಲಿ ಬೌದ್ಧಿಕ್ [ಭಾಷಣ] ಮಾಡಲು  ಕರೆಯುವುದು ಹೆಚ್ಚಾಯ್ತು.  ಸಂಘದ ಹಿರಿಯರ ಸಂಪರ್ಕ ಹೆಚ್ಚಾದ ಪರಿಣಾಮ ವಿ.ಹಿಂ.ಪ ದ ಹೆಚ್ಚಿನ ಹೊಣೆಯನ್ನು ನಿರ್ವಹಿಸಬೇಕೆಂಬ ಸಲಹೆ ಬಂದಾಗ ನಿರಾಕರಿಸಲಿಲ್ಲ.
ಯಾಕೆ ಗೊತ್ತಾ?
ಅದಾಗಲೇ ವಿ.ಹಿಂ.ಪ  ಪ್ರಾಂತ ಭೈಠಕ್ ಹಾಸನದಲ್ಲಾದಾಗ   ವೇದಭಾರತಿಯವರು ನಡೆಸಿಕೊಟ್ಟ ಅಗ್ನಿಹೋತ್ರದಿಂದ ಅದರ ಉದ್ಘಾಟನೆಯಾಯ್ತು. ಸಂಘದ ಜ್ಯೇಷ್ಠ ಪ್ರಚಾರಕರಾದ ಶ್ರೀ ಸು.ರಾಮಣ್ಣನವರಂತೂ "ಎಲ್ಲರಿಗಾಗಿ ವೇದ" ಎಂಬ ವೇದಭಾರತಿಯ ಫಲಕವನ್ನು ನೋಡಿ ಆನಂದ ಫುಲಕಿತರಾದರು. ಅವರ ಪ್ರವಾಸದಲ್ಲೆಲ್ಲಾ ವೇದಭಾರತಿಯ ಚಟುವಟಿಕೆಗಳನ್ನು ಹೆಮ್ಮೆಯಿಂದಲೇ ಹೇಳುತ್ತಾ ಹೋದರು.
               ಇದೆಲ್ಲಾ  ಚಟುವಟಿಕೆಗಳಿಂದ ವೈಯಕ್ತಿಕವಾಗಿ ನನಗೂ  "ಎಲ್ಲರಿಗಾಗಿ ವೇದ" ಎಂಬ ವೇದಭಾರತಿಯ ಉದ್ದೇಶವನ್ನು ವಿ.ಹಿಂ.ಪ ಮೂಲಕ ರಾಜ್ಯದಲ್ಲಿ ಪರಿಚಯಿಸಬೇಕೆಂಬ ಆಸೆ ಇತ್ತು. ಅದರಂತೆ ಕಳೆದ ತಿಂಗಳು ಶ್ರೀರಂಗಪಟ್ಟಣದಲ್ಲಿ ನಡೆದ  ರಾಜ್ಯಮಟ್ಟದ   ವಾನಪ್ರಸ್ಥೀ ಶಿಬಿರದಲ್ಲಿ  ಅಗ್ನಿಹೋತ್ರ ಮಾಡಿ ವೇದದ ಪರಿಚಯ ಮಾಡಿಕೊಟ್ಟಿದ್ದೇವೆ. ಬರುವ ಶುಕ್ರವಾರ ಬೇಲೂರಿನಲ್ಲಿ ನಡೆಯುವ " ಗ್ರಾಮ ವಿಕಾಸ ಕಾರ್ಯಕ್ರಮದ ರಾಜ್ಯ ಮಟ್ಟದ ಶಿಬಿರದಲ್ಲಿ ಸಾಮೂಹಿಕ ಅಗ್ನಿಹೋತ್ರ ಮಾಡುತ್ತಿದ್ದೇವೆ.
ಇಷ್ಟೆಲ್ಲಾ ಬರೆಯಲು ಕಾರಣವನ್ನು  ಮೊದಲೇ ತಿಳಿಸಿರುವೆ.
 ಹಿಂದೂಗಳನ್ನು ಸಂಘಟಿಸಲು ಹೊರಟಿರುವ  ವಿ.ಹಿಂ.ಪ ಸಹಜವಾಗಿ ನಮ್ಮ ಸಂಪ್ರದಾಯಗಳನ್ನು ಪೋಷಿಸಿಕೊಂಡೇ ನಡೆಯಬೇಕು. ಕೆಲವು ವೇದಕ್ಕೆ ಪೂರಕವಾದರೆ ಕೆಲವು ಪೂರಕವಲ್ಲ. ಆದರೂ ಮಾನವೀಯತೆಗೆ ಮಾರಕವಾಗದೆ ಸಮಾಜದಲ್ಲಿ ಸಾಮರಸ್ಯ ಉಳಿಸುವ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಾ   ಅಗ್ನಿಹೋತ್ರವನ್ನು ಹೆಚ್ಚು ಜನರು ಮಾಡುವಂತಾಗಬೇಕು, ವೇದದಲ್ಲಿನ ಮಾನವೀಯ ಮೌಲ್ಯಗಳಿಗೆ ಒತ್ತುಕೊಡುವ ಮಂತ್ರಗಳನ್ನು ಜನರಿಗೆ ಪರಿಚಯಿಸಬೇಕೆಂಬುದು ನನ್ನ ಅಂತರಾಳದ ಬಯಕೆ. ನನ್ನಾಸೆಗೆ ಭಗವಂತನ ಬೆಂಬಲವಿದೆ.ಅದರಿಂದಲೇ ವಿ.ಹಿಂ.ಪದಲ್ಲಿ ಹೆಚ್ಚಿನ ಹೊಣೆಯನ್ನು ಒಪ್ಪಿ ಕ್ರಿಯಾಶೀಲನಾಗಿರುವೆ.

ಮತ್ತೊಮ್ಮೆ ಭಾರತವು ಜಗದ್ಗುರುವಾಗಲು

ನೀವು ಬಲಪಂಥೀಯರಾದರೇನು, ಎಡಪಂಥೀಯರಾದರೇನು, ಮಧ್ಯ ಪಂಥೀಯರಾದರೇನು   ನಿಮಗೆ ಸಮಾಜದಲ್ಲಿ  ಸಮರಸತೆ ಬೇಕೋ ಅಥವಾ ನಿಮ್ಮ ಪಂಥ   ಬೆಳೆಯಬೇಕೋ?  ದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದಾಗ ಯಾರಿಗಾದರೂ ಹೀಗೆ ಅನ್ನಿಸದೇ ಇರದು.ದೇಶದಲ್ಲಿನ ಸಮಸ್ಯೆಗಳನ್ನು ಇನ್ನಷ್ಟು ಜಟಿಲಮಾಡಲು ಎಲ್ಲಾ ಪಂಥಗಳೂ ಸಾಕಷ್ಟು ಹೆಣಗುತ್ತಿವೆ. ಕಾರಣ ಮುಂದಿನ ಚುನಾವಣೆಯಲ್ಲಿ ಅದೇ ಸಮಸ್ಯೆಯೇ ಒಂದು ಪಕ್ಷಕ್ಕೆ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಯಾಗಬೇಕೆಂಬ ಇಚ್ಛೆ ಎಲ್ಲಾ ಪಕ್ಷಗಳಿಗೂ!  ಒಂದೊಂದು ಚಟುವಟಿಕೆಯ ಹಿಂದೆ ಒಂದೊಂದು ರಾಜಕಾರಣ!! ನಿಜವಾಗಿ ದೇಶದ ಜನರಲ್ಲಿ ಸಮರಸತೆಯನ್ನು ಬಯಸುವ ಜನರಿಗೆ ಕಿಮ್ಮತ್ತು ಸಿಗುವುದೇ ಇಲ್ಲ. ನಿಮ್ಮ ಪ್ರಾಮಾಣಿಕ ಸಮಾಜಸೇವೆ ಯಾರಿಗೆ ಬೇಕಿದೆ!!

            ರಾಷ್ಟ್ರದ ಸಮಗ್ರತೆಯ ಬಗ್ಗೆ , ಜನರ ಸಾಮರಸ್ಯದ ಬಗ್ಗೆ, ನೆಮ್ಮದಿಯ ಬಗ್ಗೆ ಕಿಂಚಿತ್ ಕಾಳಜಿಯಿಲ್ಲದ ಪಕ್ಷದ ಚಟುವಟಿಕೆಗಳ  ಬಗ್ಗೆ ಜನರು ಸೂಕ್ಷ್ಮವಾಗಿ ಗಮನಿಸಬೇಕು. ಜನರನ್ನು ಒಡೆದು ರಾಜಕಾರಣ ಮಾಡುತ್ತಾ ದೇಶವನ್ನಾಳುವ ಕನಸು ಕಾಣುವವರ ಬಗ್ಗೆ  ಜನರು ಎಚ್ಚರ ವಹಿಸಬೇಕು. ಭಾರತದಲ್ಲಿರುವ ಎಲ್ಲರೂ ಸೋದದರೆಂಬ ಭಾವನೆಗೆ ಇಂಬು ಕೊಡುವಂತಾಗಬೇಕು. ಈ ಮಣ್ಣಿನಲ್ಲಿ ಹುಟ್ಟಿ, ಇಲ್ಲಿಯ ನೀರು ಕುಡಿದು, ಇಲ್ಲಿಯೇ ಬದುಕಬೇಕಾಗಿರುವ ಎಲ್ಲರೂ ತಾಯಿ ಭಾರತಿಯ ಮಕ್ಕಳೆಂಬ ಒಂದೇ ಮಂತ್ರವನ್ನು ಹೃದಯಲ್ಲಿಟ್ಟುಕೊಂಡು, ಪರಸ್ಪರ ಸೌಹಾರ್ಧಯುತವಾಗಿ ಬಾಳಬೇಕು. ಇದಕ್ಕೆ ಬೇಕಾಗಿರುವುದು ಸ್ಥಳೀಯವಾಗಿ ಕುಳಿತು ಸೌಹಾರ್ಧತೆಯಿಂದ ಚರ್ಚಿಸಿ ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ನಡೆಯುವ ಸ್ವಭಾವ. ಜಗತ್ತು   ವಿಜ್ಞಾನದ ಯುಗದಲ್ಲಿ ದಾಪುಗಾಲು ಹಾಕುತ್ತಾ ಸಾಗಿದೆ.ಆದರೂ ಜನರ ನೆಮ್ಮದಿ ಹಾಳಾಗಿದೆ.  ಪ್ರಪಂಚವು ಭಾರತದತ್ತ ನೆಮ್ಮದಿಗಾಗಿ ನೋಡುತ್ತಿದೆ! ನಮ್ಮ ಋಷಿಮುನಿಗಳ ಮಾತಿಗೆ ಮಾನ್ಯತೆ ಸಿಗುತ್ತಿದೆ.

ನಾನು ಭಗವಂತನ ಸ್ವರೂಪ|
ನೀನೂ ಅದೇ ಆಗಿದ್ದೀಯೆ|

ಇದು ನಮ್ಮ ಋಷಿ ಮುನಿಗಳ ಮಹಾ ವಾಕ್ಯ. ಈ ಒಂದು ಸರಳ ಮಾತುಗಳು ಜೀವನದಲ್ಲಿ ಕಾರ್ಯರೂಪಕ್ಕೆ ಬಂದರೆ ಜಗತ್ತಿನಲ್ಲಿ  ಸಾಮರಸ್ಯದ   ಕ್ರಾಂತಿಯಾದೀತು!! ತಾಯಿ ಭಾರತಿಯ ಗೌರವವು ಜಗತ್ತಿನಲ್ಲಿ ಹೆಚ್ಚಿ ಮತ್ತೊಮ್ಮೆ ಭಾರತವು ಜಗದ್ಗುರುವಾಗಲು ಈ ಸರಳ ಮಾತುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಭೇದ ಭಾವಕ್ಕೆ ಆಸ್ಪದವೇ ಇಲ್ಲ...

ಸರ್ವೇ ಭವಂತು ಸುಖಿನಃ
ಸರ್ವೇ  ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖ ಭಾಗ್ಭವೇತ್ ||

ಓಂ ಶಾಂತಿಃ ಶಾಂತಿಃ ಶಾಂತಿಃ