Pages

Monday, March 24, 2014

ಸಾರ್ಥಕ ಪ್ರವಾಸ

ಕಳೆದ ಒಂದು ತಿಂಗಳ ಹಿಂದೆ   ನಮ್ಮ ವೇದ ಸತ್ಸಂಗಕ್ಕೆ ಶ್ರೀಮತೀ ಶುಭಾಶ್ರೀಧರ್ ಎಂಬ ಸಾಧ್ವಿ  ಬರಲು ಶುರುಮಾಡಿದರು.   ಅವರಿಗೆ ವೇದಪಾಠ ಹೊಸದು.ಆದರೆ ಅವರಲ್ಲಿ ಒಂದು ಸಾತ್ವಿಕ ಕಳೆಯನ್ನು ನಾನು ಗಮನಿಸಿದ್ದೆ. ನಮ್ಮ ಸತಸಂಗಕ್ಕೆ ಬಂದ ಒಂದು ವಾರದಲ್ಲೇ "ಶ್ರೀ ಶಕ್ತಿದರ್ಶನ" ಎಂಬ  ಮಾಸಿಕ ಪತ್ರಿಕೆಯ ಕೆಲವು ಪ್ರತಿಗಳನ್ನು ಎಲ್ಲಾ ಸತ್ಸಂಗಿಗಳಿಗೂ ವಿತರಿಸಿದರು. ಆ ಬಗ್ಗೆ ವಿವರಣೆ ಕೊಅಡಲು ಅವರಿಗೆ ತಿಳಿಸಿದೆ. ಆಗ ಅವರಿಂದ ಕಿನ್ನಿಗೋಳಿಯ ಆಶ್ರಮದ ಬಗ್ಗೆ ಪರಿಚಯವಾಯ್ತು. ನಮ್ಮ ಗುರುಗಳನ್ನು ನೀವುಗಳು ಬಂದು ಒಮ್ಮೆ ನೋಡಿದರೆ ಅವರಿಂದ ನೀವು ನಾಕರ್ಶಿತರಾಗದೇ ಇರುವುದಿಲ್ಲ.ಒಮ್ಮೆ ಆಶ್ರಮಕ್ಕೆ ಹೋಗೋಣ ಬನ್ನಿ ಎಂದರು. ಸರಿ ನಿನ್ನೆಗೆ ಮುಹೂರ್ಥ ಫಿಕ್ಸ್ ಆಯ್ತು. ನಾವು  11 ಜನ ಸತ್ಸಂಗಿಗಳು ಒಂದು ಟೆಂಪೋ ಟ್ರಾವೆಲ್ಲರ್ ನಲ್ಲಿ ಹೊರಟೆವು. 4-5 ಗಂಟೆಗಳ ದಾರಿ ಸಾಗುವಾಗ ದಣಿವಾಗಿತ್ತು.ಆಶ್ರಮದ ಮಹಾದ್ವಾರದಲ್ಲೇ ಒಂದು ಒಂದು ವಿಶಿಷ್ಠವಾದ ಗೋವನ್ನು ಕಂದ ಕೂಡಲೇ ನಮ್ಮ ದಣಿವೆಲ್ಲಾ ಮಾಯವಾಯ್ತು. ಆಶ್ರಮದಲ್ಲಿ ಗುರೂಜಿಯವರನ್ನು ಭೇಟಿಯಾದೆವು. ಅವರ ಮಾತುಗಳನ್ನು ಒಂದೆರಡು ದಿನಗಳಲ್ಲಿ ಇಲ್ಲಿ ಹಾಕುವೆ.ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಒಬ್ಬ " ಸಾಧಕ". ಆಶ್ರಮದಲ್ಲಿ  ಧ್ಯಾನದ ತರಬೇತಿ ನೀಡಲಾಗುತ್ತೆ. ಸುಮಾರು 15 ಕಿ.ಮೀ. ದೂರದಲ್ಲಿರುವ ಗೋಶಾಲೆಯಲ್ಲಿ 300 ಕ್ಕೆಂತ ಹೆಚ್ಚು ಗೋವುಗಳಿವೆ. "ಗೋಸಂತತಿ ನಷ್ಟವಾಗುತ್ತಿರುವುದರ ಪರಿಣಾಮ ಮನುಷ್ಯನಲ್ಲಿ ಸಂತಾನೋತ್ಪಾನಾ ಶಕ್ತಿಯೇ ನಷ್ಟವಾಗುತ್ತಿದೆ"ಎಂದು ಅವರು ಹೇಳುವ ಮಾತುಗಳು ಒಮ್ಮೆ ನಮ್ಮಲ್ಲಿ ತಲ್ಲಣವನ್ನುಂಟು ಮಾಡದೇ ಇರದು.  ಧ್ಯಾನ,ಕ್ರಿಯಾಯೋಗ....ಮುಂತಾದ ಚಟುವಟಿಕೆಗಳಲ್ಲಿ ಮೌನ ಸಾಧನೆ ಮಾಡಿರುವ ಗುರೂಜಿ "ಗೋರಕ್ಷಣೆಗಾಗಿ" ಮೌನ ಮುರಿದು ಮಾತನಾಡುತ್ತಾರೆ. ಅವರ ಮಾತುಗಳನ್ನು ಕೇಳುವಾಗ ನಮ್ಮ ದಣಿವೆಲ್ಲಾ ಪೂರ್ಣ ಮಾಯವಾಗಿ ನಮ್ಮೊಳಗೆ ಒಂದು ಚೈತನ್ಯವು ತುಂಬಿತ್ತು. ಪ್ರವಾಸ ಸಾರ್ಥಕವಾಗಿತ್ತು.
ಗುರೂಜಿಯವರ ಮಾತುಗಳನ್ನು   ಕೇಳಲು ಆಡಿಯೋ ಕ್ಲಿಪ್ ಗಾಗಿ ಇಲ್ಲಿ ಕ್ಲಿಕ್ಕಿಸಿ