Pages

Monday, September 15, 2014

ನನ್ನ ಬಾಯಲ್ಲಿ ಮಧುರವಾದ ಮಾತುಗಳೇ ಹೊರಬರಲಿ

ಅಥರ್ವ ವೇದದದ ೧೨ನೇ ಕಾಂಡದ ಮೊದಲನೇ ಸೂಕ್ತದ ೫೮ನೇ ಮಂತ್ರದಲ್ಲಿ ಈ ಬಗ್ಗೆ ಏನು ಹೇಳಿದೆ, ವಿಚಾರ ಮಾಡೋಣ.

ಯದ್ ವದಾಮಿ ಮಧುಮತ್ ತದ್ ವದಾಮಿ ಯದೀಕ್ಷೇ ತದ್ ವನಂತಿ ಮಾ| ತ್ವಿಷೀಮಾನಸ್ಮಿ ಜೂತಿಮಾನವಾನ್ಯಾನ್ ಹನ್ಮಿ ದೋಧತಃ ||

ಅನ್ವಯ:
ಯದ್ ವದಾಮಿ = ಯಾವಾಗ ನುಡಿಯುತ್ತೀನೋ
ತತ್ ಮಧುವತ್ ವದಾಮಿ = ಆಗೆಲ್ಲಾ ಮಧುರವಾದ ಸುಂದರವಾದ ಮಾತನ್ನೇಆಡುತ್ತೇನೆ
ಯತ್ ಈಕ್ಷೇ = ಯಾವಾಗ ನೋಡುತ್ತೇನೋ
ತತ್ ಮಾ ವನಂತಿ = ಆಗೆಲ್ಲಾ ಜನರು ನನ್ನನ್ನು ಪ್ರೀತಿಯಿಂದಲೇ ಕಾಣಲಿ
ತ್ವಿಷೀಮಾನ್ = ಆಕರ್ಷಣೀಯನೂ
ಜೂತಿಮಾನ್ = ಪ್ರೀತನೂ
ಅಸ್ಮಿ = ಆಗಿದ್ದೇನೆ
ದೋಧತಃ ಅನ್ಯಾನ್ ಅವಹನ್ಮಿ = ನನ್ನನ್ನು ಪೀಡಿಸುವವರನ್ನು ನಾನು ಸೆದೆಬಡೆದುಹಾಕುತ್ತೇನೆ

ಭಾವಾರ್ಥ:
ನಾನು ಮಾತನಾಡುವಾಗಲೆಲ್ಲಾ ನನ್ನ ಬಾಯಲ್ಲಿ ಮಧುರವಾದ ಮಾತುಗಳೇ ಹೊರಬರಲಿ.ನಾನು ನೋಡುವಾಗಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದಲೇ ಕಾಣುವಂತಾಗಲಿ.ಎಲ್ಲರಿಗೂ ಆಕರ್ಷಣೀಯನೂ, ಪ್ರೀತನೂ ಆದ ನನ್ನನ್ನು ಪೀಡಿಸುವವರನ್ನು ನಾನು ಸದೆಬಡಿಯುವಂತಾಗಲಿ.

ವೇದಭಾರತಿಯ ವಿಶೇಷ ಸತ್ಸಂಗ