Pages

Sunday, June 13, 2010

ಭಾರತದ ಹಿರಿಮೆ

ವಿಜ್ಞಾನಿ ಡಾ. ಎಂ. ಗೋಪಾಲಕೃಷ್ಣರ ಮಾತುಗಳಲ್ಲಿ ಭಾರತದ ಹಿರಿಮೆ ಕೇಳಲು ಬಲು ಚೆಂದ.


ಮೂರ್ತಿಪೂಜಾ ಜಿಜ್ಞಾಸೆ?

ಪಂ.ಸುಧಾಕರ ಚತುರ್ವೇದಿಗಳ " ಮೂರ್ತಿಪೂಜಾ ಜಿಜ್ಞಾಸೆ? " ಕಿರುಹೊತ್ತಿಗೆಯಲ್ಲಿನ ಒಂದು ವೇದ ಮಂತ್ರ ಹೀಗಿದೆ.

ನ ತಂ ವಿದಾಥ ಯ ಇಮಾ ಜಜಾನಾSನ್ಮದ್ಯುಷ್ಮಾಕಮಂತರಂ ಬಭೂವ|
ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾSಸುತೃಪ ಉಕ್ಥಶಾಸಶ್ಚರಂತಿ||
[ಋಕ್.೧೦.೮೨.೭]
ಅರ್ಥ:
ಯಾವನು ಈ ಸೃಷ್ಟಿಯನ್ನು ರಚಿಸಿದ್ದಾನೋ ಮತ್ತು ಯಾವನು ನಿಮ್ಮ ಅಂತರಂಗದಲ್ಲಿಯೂ ವ್ಯಾಪಿಸಿದ್ದಾನೋ ಆ ಪರಮಾತ್ಮನನ್ನು ನೀವು ತಿಳಿದಿಲ್ಲ. ಅಜ್ಞಾನದ ಮೊಬ್ಬಿನಲ್ಲಿ ಮಾನವರು ವ್ಯರ್ಥವಾಗಿ ವಿತಂಡವಾದಮಾಡುತ್ತಾ ಕಟ್ಟುಕಳೆಗಳನ್ನು ನಿರ್ಮಿಸುತ್ತಾ ಓಡಾಡುತ್ತಾರೆ. ಸರ್ವಾಂತರ್ಯಾಮಿಯಾದ ಜಗದೀಶ್ವರನಿಗೆ ಆಕಾರ ಕಲ್ಪಿಸುವುದು ಬರಿಯದೊಂದು ಕಲ್ಪನೆ ಮಾತ್ರ.