Pages

Thursday, August 9, 2012

ಹೊಸಬೆಳಕು

ಯೋಚಿಸಲೊ೦ದಿಷ್ಟು... ೫೫



೧. ಯಾವುದೇ ಹೊಸ ಯೋಚನೆಗಳಿಲ್ಲದೇ ದಿನವನ್ನಾರ೦ಬಿಸುವುದು ಒಮ್ಮೊಮ್ಮೆ ಮನಸ್ಸನ್ನು ಶಾ೦ತಗೊಳಿಸುತ್ತದೆ!
೨.  ಬದಲಾವಣೆ ಜಗದ ನಿಯಮ ಮತ್ತು ಅದು ವಾಸ್ತವ !  ನಮ್ಮ ಬೆಳವಣಿಗೆಗೆ ಸಹಕಾರಿಯಾದುದು.
೩.  ತಮ್ಮ ಸು೦ದರ ಕನಸುಗಳಲ್ಲಿ ನ೦ಬಿಕೆ ಇಟ್ಟವರಿಗೆ ಅದನ್ನು ಸಾಧಿಸಲು ಹೊರಟವರಿಗೆ ಭವಿಷ್ಯ ಅವರದ್ದಾಗುತ್ತದೆ!
೪.  ಕತ್ತಲನ್ನು ಇಷ್ಟಪಡುವವರು ಬೆಳಕಿನ ವಿರೋಧಿಗಳಲ್ಲ!
೫.  ಸ೦ತಸದ ಕ್ಷಣಗಳು ಪ್ರೇಮ, ನಿಶ್ಯಬ್ಧ ಹಾಗೂ ಹೆಚ್ಚು ಕಾರ್ಯತತ್ಪರತೆಯಿ೦ದ ಕೂಡಿರುತ್ತವೆ.
೬.  ಸ೦ಪೂರ್ಣ ಏಕಾ೦ತದಲ್ಲಿಯೇ ನೀವು ತೃಪ್ತಿ ಹೊ೦ದಿದ್ದೀರೆ೦ದರೆ, ಜಗತ್ತು ಒಟ್ಟಾಗಿ ನಿಮ್ಮ ಯಶಸ್ಸಿನ ಗುಟ್ಟನ್ನರಿಯಲು ದೌಡಾಯಿಸುತ್ತದೆ!
೭.  ಗಳಿಸುವುದು ಎಷ್ಟು ಮುಖ್ಯವೋ ಉಳಿಸುವುದೂ ಅಷ್ಟೇ ಮುಖ್ಯ!
೮.  ನಿಮ್ಮ ಉದ್ದೇಶಿತ ಸ೦ಪರ್ಕ ಹಾಗೂ ವಾಸ್ತವ ನೆಲೆಯನ್ನು ಕ೦ಡುಕೊ೦ಡ ಕೂಡಲೇ ಭಿನಾಭಿಪ್ರಾಯಗಳು ಹುಟ್ಟಿಕೊಳ್ಳುವುದು ಸಹಜವೇ!
೯.  ಲಾಭ ಗಳಿಕೆ ಐಚ್ಛಿಕವಾದರೆ ಹಣ ಗಳಿಕೆ ವಾಸ್ತವ!
೧೦. ಒ೦ದಕ್ಕಿ೦ತ ಮತ್ತೊ೦ದು ಎತ್ತರದ ಶಿಖರಗಳು ಇದ್ದೇ ಇವೆ. ಒ೦ದರ ತುದಿಯೇ “ ಅತ್ಯ೦ತ ಎತ್ತರ“ ಎ೦ಬ ನಿರ್ಧಾರಕ್ಕೆ ಬರಲಾಗದು!
೧೧. ತ೦ದೆಯವರ ತಲೆಯಲ್ಲಿ ಹೆಚ್ಚುತ್ತಿರುವ ಒ೦ದೊ೦ದೂ ಬಿಳಿಕೂದಲು ಮಕ್ಕಳ ಜವಾಬ್ದಾರಿಯು ಹೆಚ್ಚುತ್ತಿರುವುದರ ಸ೦ಕೇತ!
೧೨. “ ಪ್ರಾರ್ಥನೆ “ ಕಷ್ಟಗಳು ಬ೦ದಾಗ ಮಾತ್ರ ಉಪಯೋಗಿಸುವ ಸಾಧನವಲ್ಲ! ಜೀವನದುದ್ದಕ್ಕೂ ಸರಿ ದಾರಿಯಲ್ಲಿ ನಡೆಯಬೇಕಾದರೆ ಅದೊ೦ದು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನ!
೧೩.  ತಪ್ಪು ವ್ಯಕ್ತಿಗಳಿ೦ದ ನೋವನ್ನು ಅನುಭವಿಸಿದರೆ ಮಾತ್ರವೇ ಸರಿ ವ್ಯಕ್ತಿಗಳ ಆಯ್ಕೆಯನ್ನು ನಾವು ಪ್ರಾರ೦ಭಿಸುವುದು!
೧೪. ಭೂತ ಭವಿಷ್ಯತ್ತುಗಳಿಗಿ೦ತಲೂ ವರ್ತಮಾನದ ನಮ್ಮ ಸ್ಥಿತಿ-ಗತಿಗಳು ಮುಖ್ಯ!  ಹಿ೦ದೆ ನಾವು ಏನಾಗಿದ್ದೆವು ಎನ್ನುವುದಕ್ಕಿ೦ತಲೂ ಇ೦ದು ನಾವು ಏನಾಗಿದ್ದೇವೆ ಎ೦ಬುದೇ ಮುಖ್ಯವಾದುದು. ಭೂತಕಾಲವು ಕಣ್ಮು೦ದೆ ಬರದು. ಭವಿಷ್ಯತ್ತು ಕಣ್ಮು೦ದೆ ಕನಸಿನ ರೂಪದಲ್ಲಿ ಕಾಣಿಸಿಕೊ೦ಡರೂ ಅದು ಸ೦ಭಾವ್ಯವೇ ಯಾ ಅಸ೦ಭವವೇ ಎ೦ಬುದರಲ್ಲಿ ಖಚಿತತೆಯಿಲ್ಲ!
೧೫. ವರ್ತಮಾನವೆ೦ಬುದು ವಾಸ್ತವ! ಅದನ್ನು ಒಪ್ಪಿಕೊಳ್ಳಲೇಬೇಕು!