Pages

Friday, August 6, 2010

ಗುರು ಚಿಂತನ




ನಿನ್ನೆ ಗುರುವಾರ ಹಾಸನಜಿಲ್ಲೆಯ ಚನ್ನರಾಯಪಟ್ಟಣದಲ್ಲಿ "ಗುರು ಚಿಂತನ " ಎಂಬ ಒಂದು ವಿನೂತನ ಕಾರ್ಯಕ್ರಮ. ಬೆಂಗಳೂರಿನ ಸಪ್ತಮಿ ಟ್ರಸ್ಟ್ ನವರು ಭವತಾರಿಣಿ ಆಶ್ರಮದ ಪೂಜ್ಯ ಮಾತಾಜಿ ವಿವೇಕಮಯೀ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಹಲವೆಡೆ ನಡೆಸುವ ಈ ಕಾರ್ಯಕ್ರಮದಲ್ಲಿ ಒಂದೆರಡು ಭಾರಿ ನಾನು ಭಾಗವಹಿಸಿರುವೆ. ಇಂದಿನ ಶಾಲಾ ಶಿಕ್ಷಕರ ಚೈತನ್ಯವನ್ನು ಜಾಗೃತಮಾಡುವ ಈ ಕಾರ್ಯಕ್ರಮಗಳು ಶಿಕ್ಷಕ ಸಮುದಾಯದ ಮೆಚ್ಚುಗೆ ಪಡೆದಿವೆ. ಶಿಕ್ಷಕರುಗಳಿಗಾಗಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಮಾತಾಜಿ ವಿವೇಕಮಯಿಯವರು ಆಡಿರುವ ಮಾತುಗಳು ನಮಗೂ ಪ್ರೇರಣಾದಾಯಕವೇ ಆಗಿವೆ.