Pages

Thursday, April 12, 2012

          ಈಗಾಗಲೇ ರಾತ್ರಿ ಗಂಟೆ  ಎಂಟು ಮುಕ್ಕಾಲು . ನನಗೆ ಆಶ್ಚರ್ಯವಾಗ್ತಿದೆ, ವೇದಸುಧೆಯಲ್ಲಿ ಇಂದು ಯಾರೂ ಏನೂ  ಬರೆದಿಲ್ಲ. ಆದರೆ ಈವರಗೆ ಇಂದು ಒಂದುನೂರ ಇಪ್ಪತ್ತೊಂದು     ಜನ ವೇದಸುಧೆಯನ್ನು ವೀಕ್ಷಿಸಿದ್ದಾರೆ. ಈಗ ಏಳು ಜನರು ವೀಕ್ಷಿಸುತ್ತಾ ಇದ್ದಾರೆ. ನನಗೆ ಇನ್ನು ಸಾಮಾನ್ಯವಾಗಿ ಒಂದು ತಿಂಗಳು ಪುರಸೊತ್ತು ಇರುವುದಿಲ್ಲ. ಮಗನ ಮದುವೆ  ಒತ್ತಡಗಳು. ಏನಾದರೂ ಶೆಡ್ಯೂಲ್ ಮಾಡೋಣ ಎಂದರೆ ಆ ಸೌಕರ್ಯ ಬ್ಲಾಗಿಗಿಲ್ಲ.  ವೇದಸುಧೆ  ವೆಬ್ ಸೈಟ್ ನಲ್ಲಾದರೂ  ಕಗ್ಗದ ಒಂದೊಂದು ಮುಕ್ತಕಗಳನ್ನಾದರೂ ಕೇಳಿಸುವ ಅವಕಾಶ ಮಾಡಿದ್ದೇನೆ. ಅದಕ್ಕಾಗಿ  ಯಾವ  ದೊಡ್ಡ  ಪ್ರಯತ್ನ ಮಾಡಬೇಕಾಗಿರಲಿಲ್ಲ.  ಮೂರು ನಾಲ್ಕು ನಿಮಿಷಗಳ ಆಡಿಯೋ ಆದರೂ ಕೂಡ ಅಗತ್ಯವಾಗಿ ಕೇಳಲೇ ಬೇಕಾಗಿರುವ  ಆಡಿಯೋ ಗಳನ್ನೂ  ವೇದಸುಧೆ ಡಾಟ್ ಕಾಂ ನಲ್ಲಿ  ಶೆಡ್ಯೂಲ್ ಮಾಡಿರುವೆ.  ಇಲ್ಲಿ  ನನ್ನಿಂದ  ಇನ್ನು ಒಂದು ತಿಂಗಳು ಅಪರೂಪಕ್ಕೆ  ಒಂದೊಂದು ಪೋಸ್ಟ್  ಪ್ರಕಟವಾಗಬಹುದು. ಇನ್ನುಳಿದ ಲೇಖಕರು ಮನಸ್ಸು ಮಾಡಿದರೆ ಅವರ ಲೇಖನಗಳು ಪ್ರಕಟವಾಗಬಹುದು. ಆದರೂ ಆಸಕ್ತಿಯಿಂದ ವೀಕ್ಷಿಸುತ್ತಿರುವ  ವೇದಸುಧೆಯ  ಹಿತೈಷಿಗಳಿಗೆ  ಈ ಒಂದು ತಿಂಗಳು ನನ್ನಿಂದ ಅಷ್ಟಾಗಿ  ನೀಡಲು ಸಾಧ್ಯವಾಗಲಾರದು. ಆದಕ್ಕಾಗಿ ನಿಮ್ಮಲ್ಲಿ ಕ್ಷಮೆ ಕೋರುತ್ತಾ, ನಿಮ್ಮ ಸಹಕಾರ ಎಂದಿನಂತಿರಲಿ, ಎಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ.
-ಹರಿಹರಪುರಶ್ರೀಧರ್
ಸಂಪಾದಕ