Pages

Monday, December 8, 2014

SCIENTIFIC OBSERVATIONS IN THE ATIRATHRAM MAHAYAGNA (A MUST READ ARTICLE):-



A 4,000 year old fire ritual conducted in a remote village in Kerala in April,2011 has a positive impact on the atmosphere, soil and other environment effects, according to scientists who are now ready with their findings.

The “Athirathram” ritual held on April 4- 15, 2011 at Panjal village in Thrissur district was the focus of a detailed study by a team of scientists led by Prof V P N Nampoori, former director of the International School of Photonics, Cochin University of Science and Technology.

The scientists had focused on the fire ritual's scientific dimensions and impact on the atmosphere, soil and its micro-organisms and other potential environmental effects.

The yagna seems to have accelerated the process of seed germination and also the microbial presence in air, water and soil in and around the region of the fire ritual is vastly diminished, according to a statement released by the Varthathe Trust, who organised the ritual.

The team had planted three types of seeds – cowpea, green gram and Bengal gram – on four sides of the ritual venue at varying distances. They found that the growth was better in case of pots kept closer to the fire altar.

This effect, the study says, was more pronounced in the case of Bengal gram with growth about 2,000 times faster than in other places.
According to Nampoori, sound is a vibration and continuous positive vibrations through chanting, accelerates the process of germination.
“The findings would not only help dispel superstitious notions associated with Vedic rituals but also help in continuation of such tradition for the betterment of nature and the environment,” says Nampoori.


He added that further research on the phenomenon were on which could prove that some bio-amplifier generated in the atmosphere because of the ritual, had a selective effect on Bengal gram.

The study focused on counting bacterial colonies at three locations – within the yagnashala, 500 metres and 1.5 kilometres from the yagnasala. Microbial analysis made before, during and four days after the yagna revealed the air in the vicinity of the yagnashala was pure and had very low count of microbe colonies.

The research team also found that microbial activities in the soil and water around the yagnashala were remarkably less compared to normal ground.


The “Athirathram” ritual which literally means “building up of the fireplace and performed overnight” and usually held to propagate universal peace and harmony, was first documented 35 years ago by US-based Indologist Frits Staal.

Staal, currently Emeritus Professor of Philosophy and South and Southeast Asian Studies at the University of California, Berkeley had in 1975 organised and recorded the ritual in detail with the help of grants and donations from the Universities of Havard, Berkely and Finland's Helsinki University.

The research team conducted tests near the fire altars of the 1918 and 1956 Athirathram, still preserved in the backyards of Namboothiri homes, reveal that the bricks continue to be free of microbial presence.

“It's an indication that the effect of the ritual is long-lasting. Studies are on to find out if other positive changes on the atmosphere are transitional or permanent,” say researchers.

An analysis conducted on the dimensions of temperature from the flames of the pravargya by Prof A K Saxena, head of photonics division, Indian Institute of Astrophysics, Bangalore, found that the fire ball formed during the ritual had a particular wavelength with an unusually high intensity similar to what is observed in typical laser beams at about 3,870 degree centigrade.


It may be possible to have stimulated emission at this wavelength (700 nm) and gain from plasma recombination. It needs to be studied further, he says.


The members of the team of scientists' team at the Panjal Athirathram 2011 included experts from various disciplines and included Dr Rajalakshmy Subrahmanian (Cusat), Dr Parvathi Menon (M G College, Thiruvanathapuram), Dr Maya R Nair (Pattambi Government College), Prof Saxena ( Indian Institute of Astrophysics, Bangalore) and Prof. Rao (Andhra University).

The scientific team members were supported by Zarina (Research Scholar, CUSAT), Ramkumar (Biotechnologist), Asulabha (Biotechnologist) and a number of postgraduate, graduate and school students.

-Narasimha Swamy


ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು,


ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು,
ಅದರ ಹಂಚಿಕೆ ಸರಿಯಾಗಿ ಆಗಬೇಕು

ಸಾಮಾನ್ಯವಾಗಿ   ಬಳಕೆಯಲ್ಲಿರುವ  ಗಣೇಶ ಸೂಕ್ತದ ಎರಡು ಮಂತ್ರಗಳ ಬಗ್ಗೆ  ಇಂದು ವಿಚಾರ ಮಾಡೋಣ.

ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೭

ಉಪ ಕ್ರಮಸ್ವಾ ಭರ ಧೃಷತಾ ಧೃಷ್ಣೋ ಜನಾನಾಮ್ |
ಅದಾಶೂಷ್ಟರಸ್ಯ ವೇದಃ ||
 ಅರ್ಥ:-
ಜನಾನಾಮ್ ಧೃಷ್ಣೋ = ಮಾನವರ ವಶೀಕರ್ತನಾದವನೇ
ಧೃಷತಾ = ದಮನಬಲದಿಂದ
ಅದಾಶೂಷ್ಟರಸ್ಯ = ಕೊಡದವನ
ವೇದಃ = ಧನವನ್ನು
ಆಭರ = ತುಂಬಿಸಿಕೊಡು
ಉಪಕ್ರಮಸ್ವ = ಕಾರ್ಯ ನಿರತನಾಗು
ಭಾವಾರ್ಥ:-
ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ಆ ಹಣವು ಜನರ ಹಿತಕ್ಕಾಗಿ ಬಳಸಲ್ಪಡುವುದಿಲ್ಲ. ಆದ್ದರಿಂದ ಅಂತವರ ಧನವನ್ನು ಶಾಸಕನು ದಮನಶಕ್ತಿಯಿಂದ ಕಿತ್ತುಕೊಂಡು ಉದಾರಾತ್ಮರಿಗೆ ನೀಡಬೇಕು, ಅಂತೆಯೇ ಕ್ರಿಯಾಶೀಲರಾಗಬೇಕು.
ಸಾಮಾನ್ಯವಾಗಿ ವೇದಮಂತ್ರಗಳು ಕೇಳಲು -ಹೇಳಲು ಹಿತವಾಗಿರುತ್ತವೆ, ಹಾಗಾಗಿ ಬಹಳ ಜನರು ವೇದ ಮಂತ್ರವನ್ನು ಇಷ್ಟಪಡುತ್ತಾರೆ. ಆದರೆ ಅದರ ಅರ್ಥ ತಿಳಿದುಕೊಂಡರೆ ನಮಗೆ ಆಶ್ಚರ್ಯವಾಗದೇ ಇರದು. ನಾವು ಹೇಳುವ ಹಲವು ಮಂತ್ರಗಳು ನಮ್ಮ ಜೀವನಕ್ಕೆ ಮಾರ್ಗದರ್ಶೀ ಸೂತ್ರಗಳಷ್ಟೇ ಅಲ್ಲ, ಭಗವಂತನ  ಆದೇಶವಾಗಿರುತ್ತವೆ.
ಈ ಮಂತ್ರವಂತೂ ಗಟ್ಟಿಯ ಧ್ವನಿಯಲ್ಲಿ ಹೇಳುತ್ತದೆ ಸ್ವಾರ್ಥಿಗಳ ಐಶ್ವರ್ಯವು ವ್ಯರ್ಥವಾದುದು, ನಮ್ಮನ್ನಾಳುವ ರಾಜನು ಅಥವಾ ಸರ್ಕಾರ ತನ್ನ  ದಮನಶಕ್ತಿಯಿಂದ ಸ್ವಾರ್ಥಿಗಳ ಐಶ್ವರ್ಯವನ್ನು ಕಿತ್ತುಕೊಂಡು ಉದಾರಾತ್ಮರಿಗೆ ಹಂಚಬೇಕು
  ನಾವು ಈಗ ಹೇಳುತ್ತಿರುವ ಸರ್ವರಿಗೂ ಸಮಪಾಲು, ಸಮ ಬಾಳು ಈ ಎಲ್ಲವನ್ನೂ ವೇದವು ಅದಾಗಲೇ ಸಾವಿರಾರು ವರ್ಷಗಳ ಹಿಂದೆಯೇ ಹೇಳಿಯಾಗಿದೆ. ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ನಮಗೆ ಅದು ಸ್ಪಷ್ಟವಾಗದೇ ಇರದು. ವೇದಮಂತ್ರವು ಬಳಸಿರುವ ಪದದ ಗಟ್ಟಿತನವು ನಮಗೆ ಅರ್ಥವಾಗಬೇಕು. ಧೃಷತಾ ಎಂಬ ಪದದ ಬಳಕೆಯಾಗಿದೆ ಅಂದರೆ ದಮನಬಲದಿಂದ ಸ್ವಾರ್ಥಿಗಳ ಸಂಪತ್ತನ್ನು ಕಿತ್ತುಕೊಂಡು ಅಗತ್ಯವಿದ್ದ ಜನರಿಗೆ ಹಂಚು-ಎಂಬುದು ವೇದದ ಕರೆ. ಅಂದರೆ ಎಷ್ಟು ಸಮಾಜಮುಖಿಯಾಗಿ ಚಿಂತನೆ ನಡೆದಿದೆ! ಎಂಬುದು ನಮಗೆ ಅರ್ಥವಾಗಬೇಕು.
ಅದಾಶೂಷ್ಟರಸ್ಯ ವೇದಃ ಎಂಬ ಮಂತ್ರಭಾಗಕ್ಕೆ ಕೊಡದವನ ಸಂಪತ್ತನ್ನು ಎಂಬ ವಿವರಣೆಯನ್ನು ನೀಡಿದ್ದಾರೆ. ವೇದದಲ್ಲಿ ಒಂದೊಂದು ಪದಕ್ಕೂ ಸಂದರ್ಭಾನುಸಾರ ಮತ್ತು ಸ್ವರದ ಆಧಾರದಲ್ಲಿ ಹಲವಾರು ಅರ್ಥಗಳು. ಈ ಮಂತ್ರದಲ್ಲಿ ವೇದಃ ಎಂಬ ಪದಕ್ಕೆ ಧನವನ್ನು/ಸಂಪತ್ತನ್ನು ಎಂದು ಅರ್ಥೈಸಲಾಗಿದೆ.
ದೇಶದ ಹಣವನ್ನು ಲೂಟಿಮಾಡಿ ಕಪ್ಪುಹಣವನ್ನು ಹೊಂದಿರುವವರಿಗೆ ಈ ಮಾತು ನೇರವಾಗಿ ಅನ್ವಯವಾಗಲಾರದೆ? ಇಂತವರ ಹಣವನ್ನು ತನ್ನ ರಾಜಬಲದಿಂದ        ವಶಪಡಿಸಿಕೊಂಡು ದೇಶದ ಉತ್ತಮ ಕೆಲಸಗಳಿಗೆ ಸದ್ವಿನಿಯೋಗ ಮಾಡಬೇಕೆಂಬುದೇ ಈ ಮಂತ್ರದ ಕರೆ.
ಈ ಮಂತ್ರವನ್ನು ಬಹುಪಾಲು ಜನರು ನಿತ್ಯವೂ ಪಠಿಸುತ್ತಾರೆ. ಆದರೆ ಈ ಮಂತ್ರದ ಅರ್ಥ ಯಾರ ಕಿವಿಗೆ ಬೀಳಬೇಕೋ ಅವರ ಕಿವಿಗೆ ಬೀಳುತ್ತಿದೆಯೇ? ಇಂತಹ ವೇದದ ಆದೇಶವನ್ನು ಆಡಳಿತಮಾಡುವವರ ಕಿವಿಗೆ ಮುಟ್ಟಿಸುವುದು ವೇದ ವಿದ್ವಾಂಸರ ಕರ್ತವ್ಯವಲ್ಲವೇ?

ಮತ್ತೊಂದು ಮಂತ್ರವು ಇನ್ನೂ ಅದ್ಭುತವಾಗಿ ಇದೇ ವಿಚಾರವನ್ನು ಹೇಳುತ್ತದೆ. . . . . . .
ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೮

ಇಂದ್ರ ಯ ಉ ನು ತೇ ಅಸ್ತಿ ವಾಜೋ ವಿಪ್ರೇಭಿಃ ಸನಿತ್ವಃ |
ಅಸ್ಮಾಭಿಃ ಸು ತಂ ಸನುಹಿ ||

ಅರ್ಥ:-
ಇಂದ್ರ = ಸರ್ವೇಶ್ವರನೇ
ತೇ = ನಿನ್ನ
ಯಃ = ಯಾವ
ಸನಿvಃ = ಹಂಚಿಕೊಳ್ಳಲರ್ಹವಾದ
ವಾಜಃ ಅಸ್ತಿ = ಸಂಪತ್ತಿದೆಯೋ
ತಮ್ = ಅದನ್ನು
ಅಸ್ಮಾಭಿಃ ವಿಪ್ರೇಭಿಃ =  ಮೇಧಾವಿಗಳಾದ ನಮ್ಮೊಂದಿಗೆ ಸೇರಿ
ಸು ಉ ನು ಸನುಹಿ = ಚೆನ್ನಾಗಿ ನಿಶ್ಚಯವಾಗಿ ಹಂಚಿಕೊಡು


ಭಾವಾರ್ಥ:-
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು, ಆ ಸಂಪತ್ತು ದಾನಮಾಡುವುದಕ್ಕಾಗಿಯೇ ಇದೆ ಹೊರತೂ ಸ್ವಾರ್ಥಕ್ಕಾಗಿ ಅಲ್ಲ,  ಆ ಸಂಪತ್ತನ್ನು ಭಗವಂತನ ಪ್ರೇರಣೆಯಿಂದ ಮೇಧಾವಿಗಳು ಪಾತ್ರರಿಗೆ ನೀಡಲಿ.
ನಿಜವಾದ ಕಮ್ಯೂನಿಸ್ಟ್ ವಿಚಾರಧಾರೆಯಲ್ಲವೇ, ಇದು! ಈಗಿನ ಕಮ್ಯೂನಿಸ್ಟ್ ವಿಚಾರವು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಆದರೆ ವೇದಮಂತ್ರವು ಸಾರುತ್ತದೆ                 ಜಗತ್ತಿನಲ್ಲಿರುವುದೆಲ್ಲವೂ ಪರಮಾತ್ಮನಿಗೆ ಸೇರಿದ್ದು. ಅದರ ಮೇಲೆ ನನ್ನ ಹಕ್ಕು ಏನೂ ಇಲ್ಲ. ನನಗೇನಾದರೂ ಒಂದಿಷ್ಟು ಸಂಪತ್ತು ಇದೆ ಎಂದಾದರೆ ನಾನು ಅದಕ್ಕೆ ಒಬ್ಬ ವಿಶ್ವಸ್ಥನೇ ಹೊರತೂ ಯಜಮಾನನಲ್ಲ.

ಇಂದಿನ ಸರ್ಕಾರದ ನೀತಿಯಲ್ಲೂ ಸಹ ಇಲ್ಲದವನಿಗೆ ಸರಕಾರ ಸವಲತ್ತನ್ನು ಒದಗಿಸುವುದೇ ಆಗಿದೆ. ಆದರೆ ಯಾರು ರಾಜಕಾರಣಿಗಳ ಹಿಂಬಾಲಕರಿರುತ್ತಾರೋ ಅವರಿಗೆ ಸರ್ಕಾರದ ಸವಲತ್ತುಗಳು ಸೇರುತ್ತವೆ. ನಿಜವಾದ ಬಡವನು ಎಲ್ಲಾ ಸೌಕರ್ಯಗಳಿಂದಲೂ ವಂಚಿತನಾಗುತ್ತಾನೆ. ಈ ವಿಚಾರದಲ್ಲಿ ವೇದವು ಸ್ಪಷ್ಟ ಆದೇಶವನ್ನು ಕೊಡುತ್ತದೆ ಮೇಧಾವಿಗಳೊಂದಿಗೆ, ಚಿಂತಕರೊಂದಿಗೆ ಸೇರಿ ಸಮಾಲೋಚನೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸವಲತ್ತುಗಳನ್ನು ನೀಡಿ
ಆದರೆ ಈಗ ನಡೆದಿರುವುದೇನು? ಎಲ್ಲವೂ ವೇದಕ್ಕೆ ವಿರೋಧವಾಗಿಯೇ. ಅಂದರೆ ಸತ್ಯಕ್ಕೆ ವಿರೋಧವಾಗಿಯೇ. ಅಸತ್ಯ, ಅಧರ್ಮ,ಅನ್ಯಾಯವನ್ನು ಕೇಳುವಷ್ಟು ಗುಂಡಿಗೆ ಜನರಲ್ಲಿಲ್ಲ. ಮತ್ತೊಂದು ಮಂತ್ರದ ಬಗ್ಗೆ ತಿಳಿಯೋಣ

ಸದ್ಯೋಜುವಸ್ತೇ ವಾಜಾ ಅಸ್ಮಭ್ಯಂ ವಿಶ್ವಶ್ಚಂದ್ರಾಃ |
ವಶೈಶ್ಚ ಮಕ್ಷೂ ಜರಂತೇ || [ ಋಗ್ವೇದ ಮಂಡಲ-೮,ಸೂಕ್ತ-೮೧, ಮಂತ್ರ-೯]

ಅರ್ಥ
ಸರ್ವೇಶ್ವರನೇ
ತೇ ವಾಜಾಃ = ನಿನ್ನ ಸಂಪತ್ತು
ವಿಶ್ವಶ್ಚಂದ್ರಾಃ = ಎಲ್ಲರಿಗೂ ಆಹ್ಲಾದವನ್ನು ಕೊಡತಕ್ಕದ್ದು
ಅಸ್ಮಭ್ಯಂ = ನಮಗೆ
ಸದ್ಯೋಜುವಃ = ಬೇಗನೇ ಪ್ರಾಪ್ತವಾಗಲಿ
ವಶೈಃ  ಚ =ಕಾಮನೆಗಳಿಂದ
ಮಕ್ಷೋ = ಬಾರಿಬಾರಿ
ಜರಂತೇ = ಜನರು ಅರ್ಚಿಸುತ್ತಾರೆ

ಭಾವಾರ್ಥ
ಭಗವಂತನ ಐಶ್ವರ್ಯವು ಎಲ್ಲರಿಗೂ ಆಹ್ಲಾದವನ್ನು ಉಂಟುಮಾಡುವಂತಹದಾಗಿದೆ. ಅಂತಹ ಐಶ್ವರ್ಯವು ಎಲ್ಲರಿಗೂ ಶೀಘ್ರವಾಗಿ ದೊರಕಲಿ. ಆಗ ಅನೇಕವಿಧವಾದ ಕಾಮನೆಗಳಿಂದ ಕೂಡಿದ ಜನರು ಭಗವಂತನನ್ನು ಸ್ತುತಿಸುತ್ತಾರೆ.
ಜಗತ್ತಿನಲ್ಲಿರುವ ಐಶ್ವರ್ಯವೆಲ್ಲವೂ ಪರಮಾತ್ಮನಿಗೆ ಸೇರಿದ್ದು ಎಂಬುದನ್ನು ಈ ಹಿಂದಿನ ಮಂತ್ರವು ತಿಳಿಸಿದರೆ ಈ ಮಂತ್ರವಾದರೂ ಅದರ ಉಪಯೋಗ ಮತ್ತು ಹಂಚಿಕೆಯ ಬಗ್ಗೆ ತಿಳಿಸುತ್ತದೆ. ನಮ್ಮನ್ನು ಆಳುವವರಿಗೆ ಸರಿಯಾದ ಮಾರ್ಗದರ್ಶನವಲ್ಲವೇ ಈ ಮಂತ್ರ?  ಜನರಿಗೆ ಹಲವು ಕಾಮನೆಗಳಿರುತ್ತವೆ, ಅಲ್ಲವೇ! ಅದನ್ನು ಭಗವಂತನೇ ನೇರವಾಗಿ ಪೂರೈಸಲು ಸಾಧ್ಯವೇನು? ಪ್ರಜೆಗಳ ಅವಶ್ಯಕತೆಗೆ ಮತ್ತು ಅರ್ಹತೆಗೆ ತಕ್ಕಂತೆ ದೇಶದ ಸಂಪತ್ತು ಅವರಿಗೆ ಪ್ರಾಪ್ತವಾಗುವಂತೆ ಸರ್ಕಾರ ನೋಡಿಕೊಳ್ಳಬೇಕೆಂಬುದು ವೇದದ ಆದೇಶ.
ಗಣೆಶಸೂಕ್ತಗಳನ್ನು ಗಟ್ಟಿಯಾಗಿ ನಮ್ಮ ಸಂತೋಶಕ್ಕೆ ಹೇಳಿದರೆ ಸಾಲದು. ಅದರ ಅರ್ಥವನ್ನು   ತಿಳಿದುಕೊಂಡು ಅದರಂತೆ ನಡೆದಾಗ ಸಾರ್ಥಕವಾಗುತ್ತದೆ.

ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಆಗಿದ್ದಾರೆ


ಇಂದು ನಾವು ಕಾಣುತ್ತಿರುವ ಜಾತಿಯ ತಾರತಮ್ಯವು ವೇದದಲ್ಲಿ ಕಾಣಬರುವುದಿಲ್ಲ. ಮಾನವರೆಲ್ಲರೂ ಒಂದೇ ಎಂಬುದನ್ನು ವೇದವು ಗಟ್ಟಿಯಾಗಿ ಸಾರುತ್ತದೆ. ಮಧ್ಯಕಾಲದಲ್ಲಿ ಆಚರಣೆಗೆ ಬಂದು  ಹಿಂದುಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವ ಜಾತಿವ್ಯವಸ್ಥೆಯ ಹೊಣೆಯನ್ನು ವೇದದ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂಬುದು ವೇದದ ಸ್ವಲ್ಪ ಪರಿಚಯ ಮಾಡಿಕೊಂಡರೂ ನಮ್ಮ ಅರಿವಿಗೆ ಬರುತ್ತದೆ. ಮನುಕುಲದ ಅಭ್ಯುದಯಕ್ಕಾಗಿ ನಮ್ಮ ಋಷಿಪುಂಗವರು ತಮ್ಮ ನೂರಾರು ವರ್ಷದ ತಪಸ್ಸಿನ ಸಾಧನೆಯಿಂದ ಕಂಡು ಕೊಂಡ  ಸತ್ಯವೇ ವೇದ. ಇದು ಕೇವಲ ಹಿಂದುಸಮಾಜಕ್ಕಾಗಿ, ಅದರಲ್ಲೂ ಕೇವಲ ಬ್ರಾಹ್ಮಣ  ವರ್ಗಕ್ಕಾಗಿ ಇದೆ ಎಂಬ ತಪ್ಪು ಕಲ್ಪನೆಯು ಬೆಳೆದುಕೊಂಡು ಬಂದಿದೆ. ಸಾವಿರಾರು ವರ್ಷಗಳಿಂದ ಮುಂದುವರೆದುಕೊಂಡು ಬಂದಿರುವ ಈ ತಪ್ಪು ಕಲ್ಪನೆಯನ್ನು ದೂರಮಾಡುವುದು ಅಷ್ಟು ಸುಲಭವಲ್ಲ. ಶ್ರೀ ಶಂಕರಾಚಾರ್ಯರು ವೇದದ ಪುನರುತ್ಥಾನಕ್ಕಾಗಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರೂ ಸಹ  ವೇದದ ಅಪಪ್ರಚಾರವನ್ನು ಪೂರ್ಣವಾಗಿ ತಡೆಯಲಾಗಲಿಲ್ಲ. ೧೮೭೫ ರಲ್ಲಿ  ಸ್ವಾಮಿ ದಯಾನಂದ ಸರಸ್ವತಿಯವರು ಆರ್ಯಸಮಾಜವನ್ನು ಸ್ಥಾಪಿಸಿ ಜನರಲ್ಲಿ ವೇದದ ಸತ್ಯದ ಅರಿವು ಮೂಡಿಸಿ ಹಿಂದುಸಮಾಜದಲ್ಲಿನ ಜಾತಿಪದ್ದತಿಯನ್ನು ನಿರ್ಮೂಲಮಾಡಲು ಶ್ರಮಿಸಿದರೂ ಜಾತಿ ಪದ್ದತಿ ನಾಶವಾಗಿಲ್ಲ. ಇದೆಲ್ಲಾ ವಾಸ್ತವ ಸಂಗತಿಗಳ ಅರಿವಿದ್ದೂ ವೇದದ ಆಧಾರದಲ್ಲಿ ಒಂದಿಷ್ಟು ವಿಚಾರಮಾಡುವ ಪ್ರಯತ್ನವನ್ನು  ಈ ಲೇಖನದಲ್ಲಿ ಮಾಡುವೆ.
ಭಾರತದಲ್ಲಿ ಜಾತಿ ಪದ್ದತಿ ಬಲು ಗಟ್ಟಿಯಾಗಿ ಬೇರು ಬಿಟ್ಟಿರುವುದು ನಿಜ. ಮೇಲು-ಕೀಳು ಭಾವನೆಯು ಹಿಂದುಸಮಾಜದಲ್ಲಿ ದೊಡ್ದ ರಾದ್ಧಾಂತವನ್ನೇ ಮಾಡಿಬಿಟ್ಟಿದೆ. ಇದರಿಂದಾಗಿ ಹಿಂದುಸಮಾಜವು ನೂರಾರು ಜಾತಿಗಳಲ್ಲಿ ಹರಿದುಹಂಚಿಹೋಗಿರುವುದು ಸುಳ್ಳಲ್ಲ. ಜಾತಿ ವ್ಯವಸ್ಥೆ ಬಂದ ಪರಿಣಾಮ ಸ್ಪೃಶ್ಯ-ಅಸ್ಪೃಶ್ಯಭಾವನೆ, ನಡವಳಿಕೆ, ಆಹಾರಪದ್ದತಿ ಎಲ್ಲವೂ ವೆತ್ಯಾಸವಾಗಿ ವೇದಧರ್ಮವು ನಶಿಸಿರುವ ಚಿತ್ರಣ ನಮ್ಮ ಕಣ್ ಮುಂದಿದೆ. ಹಿಂದು ಸನಾಜದಲ್ಲಿ ಹಲವೆಡೆ ಇನ್ನೂ ಸ್ಪೃಶ್ಯ-ಅಸ್ಪೃಶ್ಯ ಭಾವನೆ ಇದೆ. ಈ ಎಲ್ಲಾ ಸತ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡೇ ನಿಜವಾದ ವೇದಧರ್ಮದ ಬಗ್ಗೆ ವಿಚಾರ ಮಾಡೋಣ. ವೇದದಲ್ಲಿ ಮಾನವರೆಲ್ಲರೂ ಸಮಾನರೆಂದು ಸಾರಿ ಸಾರಿ ಹೇಳಿದೆ. ಆ ಮಂತ್ರಗಳ ಬಗ್ಗೆಯೂ ವಿಚಾರ ಮಾಡೋಣ.ವರ್ಣಾಶ್ರಮದ ಬಗ್ಗೆ ವಿವರಿಸಲಾಗಿದೆ. ಅದರ ಬಗ್ಗೆಯೂ ವಿಚಾರ ಮಾಡೋಣ. ವರ್ಣಾಶ್ರಮವೆಂದೊಡನೆ ಬ್ರಾಹ್ಮಣ-ಶೂದ್ರ ಪದಗಳ ಪ್ರಯೋಗವನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರ್ವಾಗ್ರಹದಿಂದ ಯೋಚಿಸಬಾರದೆಂದು ಮನವಿ ಮಾಡುತ್ತಾ ಶ್ರೀ ದಯಾನಂದ ಸರಸ್ವತಿಗಳು ಬರೆದಿರುವ ವೇದಭಾಷ್ಯದ ಆಧಾರದಲ್ಲಿ ಇನ್ನು ಮುಂದೆ ಕೆಲವು ವಿಚಾರಗಳನ್ನು ಹೇಳುತ್ತಾ ಮುಂದುವರೆಯುವೆ.

ಋಗ್ವೇದದ ಒಂದು ಮಂತ್ರ ಹೀಗಿದೆ?

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋಮಧ್ಯಮಾಸೋ ಮಹಸಾ ವಿ ವಾವೃಧುಃ |
ಸುಜಾತಾಸೋ ಜನುಷಾ ಪೃಷ್ನಿಮಾತರೋ ದಿವೋ ಮರ್ಯಾ ಆ ನೋ ಅಚ್ಚಾ ಜಿಗಾತನ ||  [ಋಕ್ ೫.೫೯.೬]

ಅರ್ಥ:-
ಅಜ್ಯೇಷ್ಠಾಃ = ದೊಡ್ದವರೂ ಅಲ್ಲ
ಅಕನಿಷ್ಠಾಸ = ಚಿಕ್ಕವರೂ ಅಲ್ಲ
ಅದ್ಭಿದಃ = ಭೂಮಿಯನ್ನು ಸೀಳಿ ಮೇಲೆ ಬಂದವರು
ಅಮಧ್ಯಮಾಃ = ಮಧ್ಯಮರೂ ಅಲ್ಲ
ಜನುಷಾ = ಹುಟ್ಟಿದಾಗಿನಿಂದಲೂ
ಸುಜಾತಾಸಃ = ಉತ್ತಮರು
ಪೃಶ್ನೀಮಾತರಃ = ಭೂತಾಯಿಯ ಮಕ್ಕಳು
ದಿವಃ =ಇಚ್ಚೆ ಮಾಡುವವರೂ
ಮರ್ಯಾಃ = ಮನುಷ್ಯರು
ಸಹಸಾ = ಬಲದಿಂದ
ವಿ ವಾವೃಧುಃ= ಅತಿಶಯ ವೃದ್ಧಿಹೊಂದುವರು
ತೇ = ಅವರು
ಃ = ನಮ್ಮ 
ಅಚ್ಚಾ = ಉತ್ತಮರೀತಿಯಿಂದ
ಆ,  ಜಿಗಾತನ = ಗುಣಗಾನ ಮಾಡುವರು


ಭಾವಾರ್ಥ:-
ಮನುಷ್ಯರಲ್ಲಿ ಯಾರೂ ದೊಡ್ದವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ, ಮಧ್ಯಮರೂ ಅಲ್ಲ.ಹುಟ್ಟಿದಾಗಿನಿಂದ ಎಲ್ಲರೂ ಉತ್ತಮರು. ಭೂಮಿಯನ್ನು ಸೀಳಿ ಮೇಲೆ ಬಂದ ಇವರು  ಭೂತಾಯಿಯ ಮಕ್ಕಳು.ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು. 
ಈ ಮಂತ್ರದಲ್ಲಿ ವೇದವು ಎಲ್ಲಾ ಮನುಷ್ಯರನ್ನೂ ಸಮಾನರೆಂದು ಸ್ಪಷ್ಟವಾದ ಪದಗಳಲ್ಲಿ ಹೇಳಿದೆ “ ಎಲ್ಲರೂ ಅವರ ಗುಣ ಸ್ವಭಾವ, ನಡವಳಿಕೆಯಿಂದ ಏಳಿಗೆಹೊಂದಬಲ್ಲರು” ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಎಂದು ವೇದವು ಸಾರಿ ಹೇಳುತ್ತದೆ.

ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು

ವೇದದ ಈ ಸತ್ಯನುಡಿಯು ಎಷ್ಟು ಸತ್ಯವಾಗಿ ಗೋಚರಿಸುತ್ತಿದೆ, ಎಂಬುದು ನಮ್ಮ ಸಾಮಾಜಿಕ ಬದಲಾವಣೆಗಳಿಂದ ನಮಗೆ ಅರ್ಥವಾಗದೇ ಇರದು.  ನಮ್ಮ ಸಮಾಜದಲ್ಲಿ ಅಸ್ಪೃಶ್ಯರೆಂದು ಯಾರನ್ನು  ಈ ಸಮಾಜ ಗುರುತಿಸಿತ್ತೋ ಅಂತಹ ವರ್ಗದಲ್ಲಿ ಕಳೆದ ನಾಲ್ಕೈದು ದಶಕಗಳಲ್ಲಿ ವೈದ್ಯಕೀಯ, ಇಂಜಿನೀರಿಂಗ್,ಐ.ಏ.ಎಸ್,ಐ.ಪಿ.ಎಸ್ ಮುಂತಾದ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಅತ್ಯುತ್ತಮ, ವೈದ್ಯರೂ, ಇಂಜಿನಿಯರ್ ಗಳೂ, ಸರ್ಕಾರದಲ್ಲಿ ಉನ್ನತ ಅಧಿಕಾರಿಗಳೂ ಆಗಿ ಹೆಸರು ಮಾಡಿರುವ ಸಾವಿರಾರು ಜನರನ್ನು ನಾವು ಕಾಣಬಹುದಲ್ಲವೇ? ತಮ್ಮ ಅತಿಶಯ ಗುಣಸ್ವಭಾವದಿಂದ ವೃದ್ಧಿ ಹೊಂದುವರು ಎಂದು ವೇದವು ಸಾರಿದ್ದು ಇದನ್ನೇ ಅಲ್ಲವೇ?
ಮುಂದಿನ ಮಂತ್ರವನ್ನು ನೋಡೋಣ.  
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ|
ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ ||
[ಋಕ್ ೫.೬೦.೫]

ಅರ್ಥ:-
ಸ್ವಪಾಃ= ಶ್ರೇಷ್ಠ ಕರ್ಮಠನು
ಯುವಾ = ಯುವಕನು
ರುದ್ರಃ= ಅನ್ಯರನ್ನು ರೋದಿಸುವವನು
ಪಿತಾ = ಪಾಲನೆ ಮಾಡುವವನು
ಏಷಾಂ = ಈ ಎಲ್ಲರ
ಸುದುಘಾ = ಇಷ್ಟಾರ್ಥ ಪೂರ್ಣಗೊಳಿಸುವವಳು
ಸುದಿನಾ = ಉತ್ತಮ ದಿನದಿಂದ
ಪೃಶ್ನಿಃ = ವಿಶಾಲ ಬುದ್ಧಿಯ ಭೂಮಾತೆ
ಮರುದ್ಭ್ಯಃ = ಮನುಶ್ಯರು 
ಅಜ್ಯೇಷ್ಠಾಃ = ಯಾರೂ ದೊಡ್ಡವರಲ್ಲ
ಅಕನಿಷ್ಠಾಸಃ = ಯಾರೂ ಚಿಕ್ಕವರೂ ಅಲ್ಲ
ಏತೇ = ಇವರೆಲ್ಲರೂ
ಭ್ರಾತರಃ = ಸೋದರರು
ಸೌಭಗಾಯ = ಸೌಭಾಗ್ಯಪ್ರಾಪ್ತಿಗಾಗಿ
ಸಂ ವಾವೃಧುಃ = ಚೆನ್ನಾಗಿ ಪ್ರಯತ್ನಿಸುವರು 
ಭಾವಾರ್ಥ:-
ಯಾವ ಮನುಷ್ಯನು ಬಾಲ್ಯ ಮತ್ತು ಕೌಮಾರ್ಯಗಳಲ್ಲಿ ವಿದ್ಯಾರ್ಜನೆ ಮಾಡಿಕೊಂಡು ಉತ್ತಮ ಗುಣಕರ್ಮ ಸ್ವಭಾವವನ್ನು ಅಳವಡಿಸಿಕೊಂಡು ಉತ್ತಮ ಗುಣವತೀ ಕನ್ಯೆಯೊಡನೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಕರ್ಮಾನುಷ್ಠಾನದಲ್ಲಿ ತೊಡಗುತ್ತಾನೋ ಅವನು ಐಶ್ವರ್ಯವನ್ನೂ ಆನಂದವನ್ನೂ ಅನುಭವಿಸುತ್ತಾನೆ.ಇವರಲ್ಲಿ ದೊಡ್ದವ ಚಿಕ್ಕವ ಎಂಬ ಭೇದವಿಲ್ಲ, ಇವರೆಲ್ಲರೂ ಸೋದರರು.
 ಇವೆರಡೂ ಮಂತ್ರಗಳು ಒಂದು ವಿಚಾರವನ್ನಂತೂ ಸ್ಪಷ್ಟಪಡಿಸುತ್ತವೆ. . . . . . . ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಆಗಿದ್ದಾರೆ. ಎಲ್ಲರೂ   ಭೂತಾಯಿಯ ಮಕ್ಕಳಾದ ಮೇಲೆ, ಪರಸ್ಪರ ಸೋದರರು. ಯಾರೂ ದೊಡ್ಡವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ. ತಮ್ಮ ತಮ್ಮ ಗುಣಸ್ವಭಾವದಿಂದ ನಡವಳಿಕೆಯಿಂದ ಯಾರು ಬೇಕಾದರೂ ಏಳಿಗೆಯನ್ನು ಹೊಂದಬಹುದು.
 ವೇದದ ಕರೆ ಹೀಗಿರುವಾಗ  ಮನುಷ್ಯರಲ್ಲಿ ಮೇಲು-ಕೀಳು ಭಾವನೆಯು ವೇದ ವಿರೋಧಿಯಷ್ಟೇ ಅಲ್ಲ, ಅದು ಮನುಷ್ಯತ್ವದ ವಿರೋಧಿಯೂ ಕೂಡ.

ಅಥರ್ವ ವೇದದ ಒಂದು ಮಂತ್ರವನ್ನು ನೋಡೋಣ.
ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹಚಿತ್ತಮೇಷಾಮ್
ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶಧ್ವಮ್ ||
[ಅಥರ್ವ ೬.೬೪.೨]
ಅರ್ಥ:-
ಮಂತ್ರಃ ಸಮಾನಃ = ಮಂತ್ರವು ಸಮಾನವಾಗಿರಲಿ
ಸಮಿತಿ ಸಮಾನೀ = ಸಮಿತಿಯು ಸಮಾನವಾಗಿರಲಿ
ವ್ರತಮ್ ಸಮಾನಮ್ = ವ್ರತವೂ ಸಮಾನವಾಗಿರಲಿ
ಏಷಾ ಚಿತ್ತಂ ಸಹ = ಇವರೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ
ವಃ = ನಿಮ್ಮೆಲ್ಲರಿಗೂ
ಸಮಾನೇನ ಹವಿಷಾ = ಸಮಾನವಾದ ಖಾದ್ಯ ಪೇಯಗಳನ್ನೇ
ಜುಹೋಮಿ = ದಾನಮಾಡುತ್ತೇನೆ
ಸಮಾನಂ ಚೇತಃ = ಸಮಾನವಾದ ಚೈತನ್ಯದಲ್ಲಿಯೇ 
ಅಭಿ ಸಂ ವಿಶಧ್ವಂ = ಎಲ್ಲೆಡೆಯಿಂದಲೂ ಪ್ರವೇಶಿಸಿರಿ 
ಭಾವಾರ್ಥ :-
ನಿಮ್ಮೆಲ್ಲರ ಮಂತ್ರವು ಸಮಾನವಾಗಿರಲಿ, ನಿಮ್ಮ ಸಮಿತಿಯು ಸಮಾನವಾಗಿರಲಿ, ವ್ರತವೂ ಸಮಾನವಾಗಿರಲಿ,ನಿಮ್ಮೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ, ನಿಮ್ಮೆಲ್ಲರಿಗೂ ಸಮಾನವಾದ ಖಾದ್ಯ ಪೇಯಗಳನ್ನೇ ದಾನಮಾಡುತ್ತೇನೆ.ಸಮಾನವಾದ ಚೈತನ್ಯದಿಂದ ಎಲ್ಲೆಡೆಯಿಂದಲೂ ಪ್ರವೇಶಿಸಿರಿ.ವೇದದಲ್ಲಿ ಪುನಃ ಪುನಃ ಹೇಳಿರುವ ಸಮಾನತೆಯ ಮಾತುಗಳನ್ನು ಗಮನಿಸಿದಾಗ ಭಗವಂತನೆದುರು ಎಲ್ಲರೂ ಸಮಾನರೆಂದು ಭಗವಂತನೇ ಸ್ವತಃ ಹೇಳಿದ್ದರೂ ಇತ್ತೀಚೆಗೆ ರೂಢಿಗೆ ಬಂದ ತಾರತಮ್ಯದಿಂದಾಗಿ  ವೇದವನ್ನು ತಿಳಿಯದ ವಿಚಾರವಾದಿಗಳೆನಿಸಿ   ಕೊಂಡವರು  ಸಮಾಜದಲ್ಲಿರುವ ತಾರತಮ್ಯಕ್ಕೆ ವೇದವನ್ನು ಹೊಣೆಮಾಡುವುದು ಅದೆಷ್ಟು ಸರಿ? ಎಂಬುದನ್ನು ಓದುಗರು ಗಮನಿಸಬೇಕು. ಈಗಲೂ ಸ್ಪೃಶ್ಯಾಸ್ಪೃಶ್ಯ, ಮೇಲು-ಕೀಳು ತಾರತಮ್ಯ ಮಾಡುವವರನ್ನು ವೇದ ವಿರೋಧಿಗಳೆಂದು ಹೇಳದೆ ವಿಧಿಯಿಲ್ಲ.