Pages

Saturday, October 18, 2014

ವ್ರತ ಎಂತರೇನು? - ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಪ್ರವಚನ

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಅನಾರೋಗ್ಯ ಸ್ಥಿತಿಯಲ್ಲೂ ನಮ್ಮಂತವರು ಹೋದರೆ ಮಾತನಾಡಿಸದೇ ಸುಮ್ಮನಿರಲು ಅವರಿಂದ ಸಾಧ್ಯವಿಲ್ಲ. ಮೊನ್ನೆ ಶರ್ಮರನ್ನು  ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಹಾಸನದ ವೇದಭಾರತಿಯ ಚಟುವಟಿಕೆಗಳು, ವೇದದ ಬಗ್ಗೆ  ನನ್ನ ಪತ್ರಿಕಾ ಅಂಕಣಗಳು, ವೇದಭಾರತಿಯು ಸಹಕಾರದೊಡನೆ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿ ಮಲಗುಂದದಲ್ಲಿ  ಹಮ್ಮಿಕೊಂಡಿರುವ ಸಾವಿರ ದಂಪತಿಗಳ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮದ ಬಗ್ಗೆ ವಿವರ ತಿಳಿದುಕೊಂಡರು. ಹಲವಾರು ತಿಂಗಳುಗಳಿಂದ ಶರ್ಮರ ಮಾತನ್ನು ನಮ್ಮ ವೇದಸುಧೆಯ ಅಭಿಮಾನಿಗಳಿಗೆ ಕೇಳಿಸಲಾಗಿಲ್ಲವಲ್ಲಾ! ಎಂಬ ನೋವು ನನ್ನನ್ನು ಕಾಡಿತ್ತು. ಒಂದೈದು ನಿಮಿಷದ ಆಡಿಯೋ ಆದರೂ ರೆಕಾರ್ಡ್ ಮಾಡಿಕೊಳ್ಳಲು ನಿರ್ಧರಿಸಿದೆ. ಬರೋಬ್ಬರಿ ಇಪ್ಪತ್ತು ನಿಮಿಷಗಳ ಕಾಲ ಕ್ಷೀಣ ಧ್ವನಿಯಲ್ಲಿ  ವೇದದ ಗಟ್ಟಿ ವಿಚಾರ ತಿಳಿಸಿದರು. ರೆಕಾರ್ಡ್ ಮಾಡಿಕೊಂಡೆ. ಅದರ ಮಾರನೇ ದಿನವೇ ಆರೋಗ್ಯ ಬಿಗಡಾಯಿಸಿ ಮತ್ತೆ ದಿಢೀರನೆ ಒಂದು ದಿನ ವೈದ್ಯರ ಮೇಲ್ವಿಚಾರಣೆಯಲ್ಲಿರಬೇಕಾದ ಸ್ಥಿತಿ! ಭಗವಂತನು ಶರ್ಮರ ಆರೋಗ್ಯ ಸುಧಾರಿಸಬೇಕು.ಅವರಿಂದ ವೇದದ ಕೆಲಸ ಸಾಕಷ್ಟು ಆಗಬೇಕಿದೆ..ಅವರ ಈ ಆಡಿಯೋ ಕೇಳಿ.



- ನಿತ್ಯನಿರಂತರ ಆಚರಣೆ
- ವ್ರತಗಳು ಐದು
- ಅಹಿಂಸೆ : ಯಾರಿಗೂ ನೋವಾಗದಂತಹ ನಮ್ಮ ವರ್ತನೆ
- ಸತ್ಯ : ಇದ್ದದ್ದನ್ನು ಇದ್ದಹಾಗೆ ಅರ್ಥಮಾಡಿಕೊಂಡು ಅದರಂತೆ ನಡೆಯುವುದು
- ಅಸ್ತೇಯ : ಕದಿಯದಿರುವುದು
- ಬ್ರಹ್ಮಚರ್ಯ :  ಜ್ಞಾನ ಸಂಪಾದನೆ
- ಅಪರಿಗ್ರಹ : ಅನವಶ್ಯಕವಾಗಿ ಇನ್ನೊಬ್ಬರಿಂದ  ದಾನ ಸ್ವೀಕರಿಸದಿರುವುದು