Pages

Tuesday, July 31, 2012


ಯೋಚಿಸಲೊ೦ದಿಷ್ಟು...೫೪
೧. ನಾವು ದೇವರನ್ನು ನ೦ಬುವುದಕ್ಕಿ೦ತಲೂ ಹೆಚ್ಚಾಗಿ ಪುರೋಹಿತರನ್ನು ನ೦ಬುತ್ತೇವೆ!
೨. ಹಣ- ಅ೦ತಸ್ತುಗಳ ಹಿ೦ದೆ ಹೊರಟು ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ! ಮಾನವ ಸ೦ಬ೦ಧಗಳ ನಡುವೆ ಈ ದಿನಗಳಲ್ಲಿ ಅರ್ಥವಿಲ್ಲದ೦ತಾಗಿದೆ.
೩.  ಪರಸ್ಪರ ಪರಿಧಿಯನ್ನು ದಾಟದಿರುವುದು ಎಲ್ಲಾ ಸ೦ಬ೦ಧಗಳಲ್ಲಿಯೂ ಅತ್ಯವಶ್ಯ.
೪.  ಅಮೇಜಾನ್ ಕಣಿವೆಯಲ್ಲಿನ ಅರಣ್ಯದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡುವ ನಾವು ನಮ್ಮ ಮನೆಯ ಸುತ್ತಮುತ್ತಲಿನ ಮರ-ಗಿಡಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ!
೫. ನಮ್ಮ ವಿದ್ಯಾಭ್ಯಾಸ ಪದ್ಧತಿ ಕೇವಲ ಪದವಿ ಹಾಗೂ ಹಣವನ್ನು ಗಳಿಸಲು ಮಾತ್ರವೇ ಹೇಳಿಕೊಡುತ್ತದೆ. ಆದರೆ ಬದುಕುವುದು ಹೇಗೆ? ಎ೦ಬುದನ್ನು ತಿಳಿಸಿಕೊಡುವುದಿಲ್ಲ!
೬. ಪ್ರತಿದಿನವೂ ಈ ಭೂಮಿಯ ಮೇಲೆ ನಮ್ಮದೊ೦ದು ಮರುಹುಟ್ಟು. ಆದ್ದರಿ೦ದ ಪ್ರತಿದಿನವೂ ಎ೦ದಿನ೦ತೆಯೇ ಸ೦ತಸದಿ೦ದ –ಆಶಾವಾದದಿ೦ದ – ಹೊಸ ನಿರೀಕ್ಷೆಯಿ೦ದ ಆರ೦ಭಿಸೋಣ.
೭. ಎಲ್ಲರೂ ಒ೦ದೇ ರೀತಿಯಲ್ಲಿ ಚಿ೦ತಿಸಿದರೆ ಈ ಜಗತ್ತು ಎಷ್ಟು ಸು೦ದರವೆ೦ದು ನಾವು ಯೋಚಿಸಿದರೂ, ಪರಸ್ಪರ ಭಿನ್ನ ರೀತಿಯಲ್ಲಿ ಚಿ೦ತಿಸುವುದರಿ೦ದಲೇ ಇದು ಇಷ್ಟೊ೦ದು ಸು೦ದರವಾಗಿರುವುದು!
೮.   ಯಾರೂ ಸ೦ತಸವನ್ನು ಹೊತ್ತುಕೊ೦ಡು ಬ೦ದಿರುವುದಿಲ್ಲ. ಆದರೆ ನಾವೆಲ್ಲರೂ ಸ೦ತಸವನ್ನು ಗಳಿಸುವಷ್ಟು ಶಕ್ತರಾಗಿದ್ದೇವೆನ್ನುವುದು ಮಾತ್ರ ದಿಟ!
೯. ಒ೦ದು ಸಣ್ಣ ನಗು ಎ೦ಥ ಕಠಿಣ ಹೃದಯಿಯನ್ನೂ ಕ್ಷಣ ಕಾಲ ಬೆರಗಾಗಿಸುತ್ತದೆ!
೧೦. ಜೀವನವೊ೦ದು ಪಿಯಾನೋ ವಾದ್ಯವಿದ್ದ೦ತೆ.. ಅದರಲ್ಲಿನ ಕಪ್ಪು ನಡೆಗಳು ದು:ಖವನ್ನು ಧ್ವನಿಸಿದರೆ, ಬಿಳಿ ನಡೆಗಳು ಸುಖವನ್ನು ಧ್ವನಿಸುತ್ತವೆ! ಆದರೆ ಒ೦ದು ಮನಮೋಹಕ ರಾಗಕ್ಕಾಗಿ ಅವೆರಡೂ ನಡೆಗಳನ್ನು ಒಟ್ಟಿಗೇ ನುಡಿಸಬೇಕು!!
೧೧. ಸಮಸ್ಯೆಗಳು ಬ೦ದಾಗ ,ನಾವು ಸಮಸ್ಯೆಗಳ ಸ೦ಕೀರ್ಣತೆ ಯಾ ಸರಳತೆಯ ಬಗ್ಗೆ ಗಮನವನ್ನು ಹರಿಸುವುದಿಲ್ಲ.. ಬದಲಾಗಿ ಸಮಸ್ಯೆ ಉ೦ಟು ಮಾಡಿದವರ ಬಗ್ಗೆ ಯೋಚಿಸುತ್ತ ಕುಳಿತು ಬಿಡುತ್ತೇವೆ! ಇದು ಪರಿಹಾರವನ್ನು  ಕ೦ಡುಕೊಳ್ಳುವ  ಮಾರ್ಗವನ್ನು ಮತ್ತಷ್ಟು ಜಟಿಲಗೊಳಿಸುತ್ತದೆ!
೧೨. ಆಳುವವರು ಮತ್ತು ಆಳಿಸಿಕೊಳ್ಳುವವರಿಬ್ಬರೂ ಪರಸ್ಪರ ಒಳಿತನ್ನು ಚಿ೦ತಿಸಿ, ಅನುಷ್ಠಾನಗೈದರೆ ಮತ್ತಿನ್ಯಾವ ಸ್ವರ್ಗವನ್ನೂ ಭುವಿಗಿಳಿಸುವುದು ಬೇಡ!
೧೩. ಎಲ್ಲಾ ಮತ ಪುರೋಹಿತರೂ ಯಾವುದೇ ರಾಜಕೀಯ, ಆರ್ಥಿಕ ಹಾಗೂ ಲೈ೦ಗಿಕ ಹಿತಾಸಕ್ತಿಗಳೊ೦ದಿಗೆ ರಾಜಿ ಮಾಡಿಕೊಳ್ಳದೇ ಕಾರ್ಯ ನಿರ್ವಹಿಸಿದರೆ  ಲೋಕದಲ್ಲಿ ತನ್ನಿ೦ತಾನೇ ಧರ್ಮವು ಊರ್ಜಿತಗೊಳ್ಳುತ್ತದೆ!
೧೪.  ಈ ಲೋಕದಲ್ಲಿ ನಮ್ಮ ಆತ್ಮಕಥೆಯನ್ನು ನಾವೇ ಬರೆಯಬೇಕು. ಒ೦ದೇ ಪುಸ್ತಕದ ಮಾದರಿಯಲ್ಲಿ ಇಲ್ಲವೇ ಸತ್ಕರ್ಮಗಳ ಮಾದರಿಯಲ್ಲಿ! ಇಲ್ಲದಿದ್ದರೆ ನಾವು ಅಳಿದ ಮೇಲೆ ನಮ್ಮ ಬಗ್ಗೆ ಈ ಲೋಕವೇ ನೂರಾರು ಭಿನ್ನ ಕಥೆಗಳನ್ನು ಹೇಳುತ್ತದೆ!!
೧೫. ಒಮ್ಮೊಮ್ಮೆ ಹತ್ತು ಹಲವಾರು ಯೋಜನೆಗಳೊ೦ದಿಗೆ ಬದುಕುವುದಕ್ಕಿ೦ತ “ ದಿನಕ್ಕೊ೦ದು ಯೋಜನೆ- ಆ ದಿನದ ಬದುಕು “ ಎ೦ಬ ಲಹರಿಯ ಬದುಕೇ ಸೂಕ್ತವೆನಿಸುತ್ತದೆ!

ಒಳ್ಳೆಯದಾಗಲಿ, ಶುಭವಾಗಲಿ


ಭದ್ರಂ ಭದ್ರಮಿತಿ ಬ್ರೂಯಾತ್ ಭದ್ರಮಿತ್ಯೇವ  ವಾ ವದೇತ್ |
ಶುಷ್ಕವೈರಂ ವಿವಾದಂ ಚ ನ ಕುರ್ಯಾತ್ ಕೇನಚಿತ್ ಸಹ ||
ಒಳ್ಳೆಯದಾಗಲಿ, ಶುಭವಾಗಲಿ ಎಂದೇ ಯಾವಾಗಲೂ ಯಾವ ಸಂದರ್ಭದಲ್ಲಿಯೂ ಹೇಳುತ್ತಿರಬೇಕು. ಕಾರಣವಿಲ್ಲದೆ ಹಗೆತನವನ್ನೂ ಕೆಲಸಕ್ಕೆ ಬಾರದ ಚರ್ಚೆಯನ್ನೂ ಯಾರೊಡನೆಯೂ ಮಾಡಬಾರದು. 

-ಸದ್ಯೋಜಾತ 

Monday, July 30, 2012

ದೇವರಿಗೆ ಹರಕೆಹೊತ್ತರೆ ಕೆಲಸ ಆಗುತ್ತದೆಯೇ?

ದೇವಾಲಯಗಳ ಹಿನ್ನೆಲೆ

ನಮ್ಮ ದೇಶದಲ್ಲಿ ರಾಜ ಮಹಾರಾಜರ ಕಾಲದಿಂದಲೂ ದೇವಾಲಯಗಳನ್ನು ಕಟ್ಟುವುದು, ಕೆರೆ ಕಟ್ಟೆಗಳನ್ನು ನಿರ್ಮಿಸುವುದು, ಕೊಳಗಳನ್ನು ನಿರ್ಮಿಸುವುದು, ಅರಳೀಕಟ್ಟೆಗಳ ನಿರ್ಮಾಣ, ತೋಪು ಬೆಳೆಸುವುದು,ಗೋಮಾಳಗಳನ್ನು ಬಿಡುವುದು, ಸಾಲು ಮರಗಳನ್ನು ನೆಡುವುದು,ಛತ್ರಗಳನ್ನು ಸ್ಥಾಪಿಸುವುದು, ಮಠ ಮಂದಿರಗಳಿಗೆ ಪ್ರೋತ್ಸಾಹಿಸುವುದು...ಮುಂತಾದ ಹಲವು ಸತ್ಕಾರ್ಯಗಳನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ನನ್ನ ಸ್ವಂತ ಊರಾದ ಹರಿಹರಪುರವನ್ನು ಎರಡನೇ ಹರಿಹರಮಹಾರಾಜನು ಮಾಧವಾಧ್ವರಿ ಎಂಬ ವೇದ ವಿದ್ವಾಂಸನಿಗೆ ಅವನ ವೇದಜ್ಞಾನಕ್ಕೆ ಮನ್ನಣೆ ಕೊಟ್ಟು ದಾನವಾಗಿ ನೀಡಿದ್ದನು, ಎಂಬ ಶಾಸನ ಇದೆ.ಮಾಧವಾಧ್ವರಿ ಎಂಬ ವೇದವಿದ್ವಾಂಸನಿದ್ದ ಊರಿನಲ್ಲಿ ನಾನು ಜನಿಸಿದ್ದೇನೆ, ಎಂಬುದರಿಂದಲೇ ನನಗೆ ಸಂತೋಷವಿದೆ. ಆದರೆ ಮಾಧವಾಧ್ವರಿಯ ನಂತರ ನಮ್ಮೂರಿನಲ್ಲಿ ವೇದಜ್ಞಾನ ಯಾವ ಕಾರಣಕ್ಕೆ ಹಿನ್ನಡೆ ಪಡೆಯಿತು, ಎಂಬಬಗ್ಗೆ ಅರಿವಿಲ್ಲ, ಆದರೆ ನಿಜವಾದ ವೇದಜ್ಞಾನ ಮರೆಯಾಗುತ್ತಾ,ಪುರಾಣದ ಮೇಲುಗೈಯ್ಯಾದಂತೆ ತೋರುವುದು ಸತ್ಯ.ಏನೇ ಇರಲಿ, ದೇವಾಲಯಗಳ ಸ್ಥಾಪನೆಯ ಹಿಂದಿನ ಉದ್ಧೇಶವನ್ನು ಶ್ರೀ ಸುಧಾಕರಶರ್ಮರ ಮಾತುಗಲ್ಲಿ ಕೇಳೋಣ. ಅವರ ಮಾತುಗಳು ನಿಷ್ಟುರವಾಗಿರುತ್ತವೆ. ಕಹಿಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾದರೂ ನಿಜವನ್ನು ಅರಿತುಕೊಳ್ಳಲೇ ಬೇಕು.

ಒಂದು ವಿಭಿನ್ನವಾದ, ವಿಶಿಷ್ಟವಾದ ವೇದೋಕ್ತ ವಿವಾಹ




ವಿವಾಹ ಆಮಂತ್ರಣ ಓದಲು:
Right clik on invitation , open link in new window, clik on image,ಈಗ  ಅಕ್ಷರ ದೊಡ್ದದು ಮಾಡಿ ಓದಬಹುದು



ಈ ದಿನಗಳಲ್ಲಿ ಮದುವೆ ಎಂದಾಗ  ಕಲ್ಯಾಣ ಮಂಟಪದಲ್ಲಿ  ವಧು ವರರ ಬಂಧು ಮಿತ್ರರು ಅಪಾರ ಸಂಖ್ಯೆಯಲ್ಲಿ ಸೇರಿದಾಗ ವಿವಾಹ ಮಂಟ ಪದಲ್ಲಿ ನಡೆಯುವ ಕಲಾಪಗಳನ್ನು ನೋಡಲು ಹಲವರಿಗೆ ವ್ಯವಧಾನವೇ ಇರುವುದಿಲ್ಲ. ಅಪರೂಪಕ್ಕೆ ಸಿಕ್ಕ ಬಂಧುಮಿತ್ರರೊಡನೆ ಹರಟೆ ಹೊಡೆಯ ಬೇಡವೇ? ತಪ್ಪೇನಿಲ್ಲಾ ಬಿಡಿ. ಆದರೆ  ಈ ವಧುವರರಿಗೆ ಮಾತ್ರ ಜೀವನದಲ್ಲಿ  ಇದು  ಅತೀ ಮಹತ್ವದ ಸಂದರ್ಭ. ಇದರ ಔಚಿತ್ಯ ಹಲವರಿಗೆ ಅರ್ಥವಾಗುವುದೇ ಇಲ್ಲ. ಹರಟೆ ಹೊಡೆಯೋಕೆ ಮದುವೆ ಮಂತಪವೇ ಬೇಕಾ ? ನೀವೇ ಹೇಳಿ. ಇವೆಲ್ಲಾ ರೂಢಿಯಾಗಿ ಬಿಟ್ಟಿದೆ. ಪುರೋಹಿತರು ಮಂತ್ರ ಹೆಳ್ತಾರೆ  , " ಮಮ" ಅಂತ ಹೇಳಿ ಅಂತಾರೆ. ವರನ/ವಧುವಿನ/ತಂದೆಯ/ತಾಯಿ ಯಾರಿಗೆ ಮಂತ್ರ ಸಂಬಂಧಿಸಿರುತ್ತೋ ಅವರು "ಮಮ"  ಅಂತಾ ಅಂತಾರೆ, ಕಿವಿಗೆ ಬೀಳದಿದ್ದರೆ  ಪುರೋಹಿತರು " ಮಮ" ಅಂತಾ ಹೇಳಿ ವಿಧಿಯನ್ನು ಮುಗಿಸಿ ಬಿಡುತ್ತಾರೆ. ವೈದಿಕ  ವಿಧಿಗೆ ಹೊರತಾದ ಹಲವು ಕಾರ್ಯಕ್ರಮಗಳು ಮದುವೆ ಮಂಟಪದಲ್ಲಿ ನಡೆಯುತ್ತೆ. ವೀಡಿಯೋ ತೆಗೆಯುವವರು  ಎಲ್ಲವನ್ನೂ ಸೆರೆ ಹಿಡಿಯುತ್ತಾರೆ. ಮದುವೆ ಆದ ಮೇಲೆ ನಾಲ್ಕಾರು ದಿನ  ವೀಡಿಯೋ ವನ್ನು ಮತ್ತು ಆಲ್ಬಮ್ ನ್ನು  ನೋಡಿ ಆ ನಂತರ  ಬೇಸರ ವಾದರೆ ಅದರ ಜಾಗಕ್ಕೆ ಸೇರಿಸುತ್ತಾರೆ. ಅಲ್ಲಿಗೆ ಮದುವೆಯ ಆಟ  ಮುಗಿಯುತ್ತೆ.

  ವಿವಾಹ ಎಂಬುದು ಜೀವನದಲ್ಲಿ    ಎಂತಹ ಮಹತ್ವ ಪೂರ್ಣ ಘಟ್ಟ! ಅದಕ್ಕೆ ಕೊಡುತ್ತಿರುವ ಮಹತ್ವ?  ಒಂದು ಮದುವೆಯಲ್ಲಿ  ಅಕ್ಕಿಗೆ  ನಾಲ್ಕಾರು ರೀತಿಯ ಬಣ್ಣ ಹಾಕಿ ಅದನ್ನು ವಧು ವರರ ತಲೆಯ ಮೆಲೆ ಸುರಿಸಿದಾಗ ಅಲ್ಲಿ ಚೆಲ್ಲಾಡಿದ್ದ ಅಕ್ಕಿ     ಕಂಡು ಬೇಸರಗೊಂಡೆ. ಐದಾರು ಕೆ.ಜಿ.ಅಕ್ಕಿ! ಬಣ್ಣ  ಬಳಿದಿದೆ! ಹಕ್ಕಿ ತಿಂದರೂ ಸಾಯುತ್ತವೆ! ಎಲ್ಲವೂ ತಿಪ್ಪೆಯ ಪಾಲು! ಇದು ನಾವು  ಕಷ್ಟ  ಪಟ್ಟು  ಅನ್ನ ಬೆಳೆದ ರೈತನಿಗೆ ನಾವು ಕೊಡುವ ಬೆಲೆ!

ಈಗ ರೂಡಿಯಲ್ಲಿರುವ ವಿವಾಹದ ಹಲವು ಆಚರಣೆಗಳು ವೇದೋಕ್ತವಲ್ಲ! ಆದರೂ ನಮ್ಮ ಹಿಂದಿನವರು ಆಚರಿಸಿಕೊಂಡು ಬಂದರು, ನಾವೂ ಆಚರಿಸುತ್ತೇವೆ.ಆದರೆ ಇಲ್ಲೊಂದು ಮದುವೆಯ ಕರೆಯೋಲೆ ನನ್ನ ಕೈ ತಲುಪಿದೆ. ಎಲ್ಲವೂ ವೇದೋಕ್ತ. ವಿವಾಹವಾಗುತ್ತಿರುವ ವಧುವಿಗೆ ಶಾಸ್ತ್ರೋಕ್ತ ಉಪನಯನ ವಾಗಿದೆ. ವಧು ವರರು ವೇದೋಕ್ತವಾಗಿ ವಿವಾಹ ಸಂಸ್ಕಾರವನ್ನು ಪಡೆಯುತ್ತಿದ್ದಾರೆ. ಆಸಕ್ತರು "ವೇದೋಕ್ತವಿವಾಹವನ್ನು" ಬಂದು ವೀಕ್ಷಿಸಬಹುದು.
-ಹರಿಹರಪುರ ಶ್ರೀಧರ್.

Sunday, July 29, 2012

ವೇದದ ಮೂಲ

* ಯತಾರ್ಥ ಜ್ಞಾನ * ಇದ್ದದ್ದನ್ನು ಇದ್ದಹಾಗೆ ಕಂಡರೆ ಅದು ದರ್ಶನ * ಪೂರ್ವಾಗ್ರಹ ಇಲ್ಲದೆ ಕಂಡುಕೊಳ್ಳುವ ಜ್ಞಾನ * ವೈರಾಗ್ಯ ಎಂದರೇನು? * ಋತಂಭರ ಪ್ರಜ್ಞಾ

Saturday, July 28, 2012

ತಾನು ಮಾಡಿದ ಕರ್ಮದ ಫಲವನ್ನು ತಾನು ಅನುಭವಿಸಲೇ ಬೇಕು




* ಸಂಚಿತ,ಪ್ರಾರಬ್ಧ ಮತ್ತು ಆಗಾಮಿ ಕರ್ಮಗಳೆಂದರೇನು?

* ನಮ್ಮ ನಮ್ಮ ಯೋಗ್ಯತೆಗನುಗುಣವಾಗಿ ಮುಂದಿನ ಜನ್ಮ    

   ನಿರ್ಧಾರಿತವಾಗಲಿದೆಯೇ?

* ಸಾವಿಗೆ ಹೆದರ ಬೇಕೆ?

* ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?

* ಇನ್ನೂ ಹಲವು    ವಿಚಾರಗಳ    ಮೇಲೆ ಬೆಳಕು ಚೆಲ್ಲಿದ್ದಾರೆ

      ಶ್ರೀ ಸುಧಾಕರ ಶರ್ಮರು



ನಮ್ಮೊಡನೆ ಶ್ರೀ ಸುಧಾಕರಶರ್ಮರು



ವೇದಾಧ್ಯಾಯೀ ಶ್ರೀ  ಶ್ರೀ ಸುಧಾಕರಶರ್ಮರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ತೀವ್ರ ಬಳಲಿದ್ದರು. ಅವರ ಸ್ಥಿತಿಯನ್ನು  ಕಳೆದ ಹತ್ತು ತಿಂಗಳ ಹಿಂದೆ  ಪ್ರತ್ಯಕ್ಷ ನೋಡಿದ ನನ್ನ ತಂಗಿ ಹೇಳುತ್ತಾಳೆ " ಅವರ ಅಂದಿನ ಸ್ಥಿತಿಯಲ್ಲಿ ಅವರು ಬದುಕುಳಿಯುತ್ತಾರೆಂಬ ನಂಬಿಕೆ ನನಗಿರಲಿಲ್ಲ! ಶರ್ಮರ ಸಂದರ್ಶನ ಮಾಡಲು ಹೋಗುವೆನೆನ್ನುತ್ತೀಯಲ್ಲಾ!! ಅವರು ಮಾತನಾಡಬಲ್ಲರೇ?
ಅಬ್ಭಾ! ನನ್ನಂತವನಾಗಿದ್ದರೆ ನನ್ನ ಬದುಕಿನ ಆಸೆ ಮರೆಯುತ್ತಿದ್ದೆ. ಅಷ್ಟು ತೀವ್ರ ಸ್ಥಿತಿಯಿಂದ ಚೇತರಿಸಿಕೊಂಡು ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರಷ್ಟೇ ಅಲ್ಲಾ, ಈ ಸ್ಥಿತಿಯಲ್ಲೂ  ಚಂದನದಲ್ಲಿ ನಡೆಯುವ "ಹೊಸ ಬೆಳಕು" ದಾರವಾಹಿಗಾಗಿ  ಮುಂದಿನ ಹಲವು  ಎಪಿಸೋಡ್ ಗಳಿಗಾಗಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ, ಅಷ್ಟೇ ಅಲ್ಲಾ, ಮುಂದಿನ       5-8-2012 ರಂದು ಒಂದು ವೇದೋಕ್ತ ವಿವಾವಹವನ್ನು ಸ್ವತ: ಶರ್ಮರು ನಡೆಸಿಕೊಡಲಿದ್ದಾರೆ. ಮೊನ್ನೆ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ವೀಡಿಯೋ ತೆಗೆದೆ. ಇನ್ನು ಒಂದೊಂದಾಗಿ ಶರ್ಮರ  ಆಡಿಯೋ /ವೀಡಿಯೋ ಕ್ಲಿಪ್ ಗಳನ್ನು ಪ್ರಕಟಿಸಲಾಗುವುದು.  ನಮ್ಮ  ನೆಮ್ಮದಿಯ     ಬದುಕಿಗೆ  ಅಗತ್ಯವಾದ ಹಲವು ಅಂಶಗಳನ್ನು ಶ್ರೀ ಶರ್ಮರು ವೇದಸುಧೆಯ  ಓದುಗರೊಡನೆ ಹಂಚಿಕೊಂಡಿದ್ದಾರೆ. ವೇದಸುಧೆಯ ಅಭಿಮಾನಿಗಳು ಎಂದಿನಂತೆ  ಈ ವಿಚಾರಗಳನ್ನು ಕೇಳಿ  ನಿಮಗೆ ಉಂಟಾಗಬಹುದಾದ ಅನುಮಾನಗಳನ್ನು/ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು  ವೇದಸುಧೆಯಲ್ಲಿ ಹಂಚಿಕೊಂಡರೆ ಶ್ರೀ ಶರ್ಮರು ಉತ್ತರಿಸುವರು

Wednesday, July 25, 2012

"ಷಡ್ದರ್ಶನ"ಗಳು -ಮುನ್ನುಡಿ


ಶ್ರೀಯುತ ಶ್ರೀಧರ್ ಭಂಡ್ರಿ ಯವರು ಅಂತರ್ಜಾಲ ತಾಣದಲ್ಲಿ ಸಂಪದ, ಫೇಸ್ ಬುಕ್  ಮುಂತಾದೆಡೆ ಸದ್ವಿಚಾರಗಳನ್ನು ಸಮಾನ ಮಾನಸಿಕರಲ್ಲಿ ಹಂಚಿಕೊಳ್ಳುವ ಉತ್ತಮ ಚಿಂತಕರು. ವೇದಸುಧೆಗಾಗಿ ಶ್ರೀಯುತರು ಸ್ವಾಮಿ ಹರ್ಷಾ ನಂದರ  ಷಡ್ ದರ್ಶನ ಗ್ರಂಥವನ್ನು ಪರಿಚಿಸಲು ಆರಂಭಿಸಿದ್ದಾರೆ. ವೇದಸುಧೆಯ ಓದುಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೋರುವೆ. ವೇದಸುಧೆಯ ಪ್ರೇರಕರಾದ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ತಮ್ಮ ಅಭಿಪ್ರಾಯವನ್ನು ತಿಳಿಸಿದರೆ ಉತ್ತಮ.  ಓದುಗರು ಮತ್ತು ಲೇಖಕರೊಡನೆ     ಒಂದು ವಿಚಾರವನ್ನು ಇಲ್ಲಿ  ಹಂಚಿಕೊಳ್ಳಲು ಇಚ್ಚಿಸುವೆ.  ಈ ತಾಣದಲ್ಲಿ  ಲೇಖಕರು ತಮ್ಮ ತಮ್ಮ  ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊ ಬಹುದು. ಹಲವು ಭಾರಿ ಸುಧಾಕರ ಶರ್ಮರ ಚಿಂತನೆಗೂ ಉಳಿದವರ ಚಿಂತನೆಗೂ ಬೇಧ ಇರಲು ಸಾಧ್ಯತೆ ಗಳಿವೆ. ಚಿಂತೆ ಇಲ್ಲ. ಒಟ್ಟಿನಲ್ಲಿ ನಮ್ಮ ಚಿಂತನೆಗಳು ಸಮಾಜಮುಖಿಯಾಗಿದ್ದರೆ ಸಾಕು. 
-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ
---------------------------------------------------------------------------------
            "ಒಬ್ಬ ಹಿಂದೂ ಎಲ್ಲಾ ಕಾರ್ಯಗಳನ್ನೂ ಒಳ್ಳೆಯದಿರಲಿ ಅಥವಾ ಕೆಟ್ಟದ್ದಿರಲಿ ಅವನು ಅದನ್ನು ಧಾರ್ಮಿಕವಾಗಿಯೇ ಮಾಡುತ್ತಾನೆ!" ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಅಂದರೆ ಧರ್ಮವೆನ್ನುವುದು ಅವನ ರಕ್ತದಲ್ಲಿಯೇ ಇದೆ ಎನ್ನುವುದು ಇದರರ್ಥ.

            ಆದರೆ ಹಿಂದೂ ಧರ್ಮ ಎನ್ನುವುದು ಕೇವಲ ಕೆಲವೊಂದು ಪದ್ಧತಿ ಮತ್ತು ನಂಬಿಕೆಗಳ - ಬಾಹ್ಯಾಚರಣೆಯ ಗೊಡ್ಡು ಕಂತೆಯಲ್ಲ. ಪ್ರತಿಯೊಂದು ಆಚರಣೆಯ ಹಿನ್ನಲೆಯಲ್ಲಿಯೂ ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ಶ್ರುತಿ ಅಥವಾ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಗಹನವಾದ ತತ್ವಗಳ ಭದ್ರ ಬುನಾದಿಯಿದೆ.

            ಪ್ರತಿಯೊಬ್ಬ ಪೌರಾಣಿಕ ಋಷಿ ಹಾಗೂ ತತ್ವಶಾಸ್ತ್ರಜ್ಞನಾದವನು ಅದು ಗೌತಮ ಅಥವಾ ಕಪಿಲನಾಗಲಿ; ಅಥವಾ ಜೈಮಿನಿ ಇಲ್ಲಾ ಬಾದರಾಯಣ ವ್ಯಾಸನಿರಲಿ - ಇವರೆಲ್ಲರೂ ಕಠಿಣತಮ ತಪಗಳನ್ನಾಚರಿಸಿ ವೇದಗಳ ಆಧಾರದ ಮೇಲೆ ತನಗೆ "ದರ್ಶನ"ವಾದ ಅಥವಾ ಗೋಚರವಾದ ಸತ್ಯಗಳ ಕುರಿತು ತಮ್ಮ ತಮ್ಮ ತತ್ವಗಳನ್ನು ಭೋದಿಸಿದ್ದು. ಇವೇ ಹಿಂದೂಗಳೆಲ್ಲರಿಗೂ ಇಂದು ಪರಿಚಯವಿರುವ "ಷಡ್ದರ್ಶನ"ಗಳು ಅಥವಾ ಆರು ದರ್ಶನಗಳು.

            ಈ ಆರು ದರ್ಶನಗಳು ಸತ್ಯಾನ್ವೇಷಣೆಯ ವಿವಿಧ ಮಾರ್ಗಗಳನ್ನು ಅನುಸರಿಸಿದರೂ ಕೂಡ ಅವೆಲ್ಲವುಗಳಲ್ಲಿ ಒಂದು ಏಕತೆಯಿದೆ ಅದೇನೆಂದರೆ - ಮಾನವನ ಅಂತಿಮ ಗುರಿ ಏನು ಎಂಬುದರ ಕುರಿತಾಗಿ. ಅದು ಮಾನವನನ್ನು ದುಃಖ ಅಥವಾ ಯಾತನೆಯಿಂದ ಮುಕ್ತಗೊಳಿಸಬೇಕೆನ್ನುವುದು ಮತ್ತು ಅತ್ಯುನ್ನತ ಆನಂದವನ್ನು ಹೊಂದಬೇಕೆಂಬುದು ಹಾಗೂ ಅದನ್ನು ಹೇಗೆ ಪಡೆಯಬೇಕೆನ್ನುವ ವಿಧಾನವನ್ನು ಕುರಿತಾಗಿದೆ.  ಇದನ್ನೇ ಒಟ್ಟಾರೆಯಾಗಿ ಹೇಳಬೇಕೆಂದರೆ "ಅಂತಿಮ ಸತ್ಯದ ಜ್ಞಾನ" ಅಥವಾ "ತತ್ವಜ್ಞಾನ"ವನ್ನು ಪಡೆಯಬೇಕೆನ್ನುವುದೇ ಎಲ್ಲ ದರ್ಶನಗಳ ಅಂತಿಮ ಗುರಿಯಾಗಿತ್ತು. ಆದ್ದರಿಂದ ಈ ಅಂತಿಮ ಸತ್ಯದ ದರ್ಶನವೇ ಹಿಂದೂಗಳ ತತ್ವವೆಂದು ನಾವು ಹೇಳಬಹುದು ಮತ್ತು ಈ ಆರು ವಿಧಾನಗಳು ಅದನ್ನು ಹೊಂದುವ ವಿವಿಧ ಮಾರ್ಗಗಳು ಎನ್ನಬಹುದು. ಈ ವಿವಿಧ ಮಾರ್ಗಗಳನ್ನು ಮತ್ತು ಅವುಗಳು ಪ್ರತಿಪಾದಿಸಿದ ವಿಧಾನದ ಆಧಾರದಿಂದ ಅವನ್ನು "ನ್ಯಾಯ ದರ್ಶನ", "ಸಾಂಖ್ಯ ದರ್ಶನ" ಮುಂತಾದವುಗಳಾಗಿ ಕರೆಯಬಹುದು. 

            ಡಾ! ಸರ್ವೇಪಲ್ಲಿ ರಾಧಾಕೃಷ್ಣನ್, ಸುರೇಂದ್ರನಾಥ್ ದಾಸ್‍ಗುಪ್ತ ಮತ್ತು ಎಂ. ಹಿರಿಯಣ್ಣನಂತಹ ಹಲವಾರು ಮೇಧಾವಿಗಳು ಮತ್ತು ಹೆಚ್ಚು ಪರಿಚಿತರಲ್ಲದ ಆದರೆ ಪ್ರಬುದ್ಧರಾಗಿರುವ ಹಲವಾರು ಪಂಡಿತರು "ಷಡ್ದರ್ಶನ"ಗಳು ಅಥವಾ ಆರು ದರ್ಶನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಆದರೆ ಅವೆಲ್ಲವುಗಳೂ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ತತ್ವಶಾಸ್ತ್ರವನ್ನು ಆಳವಾಗಿ ತಿಳಿದುಕೊಳ್ಳಬೇಕೆನ್ನುವವರಾಗಿ ಮೀಸಲಾಗಿವೆ.

            ಈ ಕಿರುಹೊತ್ತಿಗೆಯು ಮೂಲಭೂತವಾಗಿ ಹೆಚ್ಚು ಓದಿಲ್ಲದ ಆದರೆ "ಷಡ್ದರ್ಶನ"ಗಳ ಕುರಿತಾಗಿ ಸಾಮಾನ್ಯ ತಿಳುವಳಿಕೆಯನ್ನು ಹೊಂದಲು ಬಯಸುವ ಜನಸಾಮನ್ಯನಿಗಾಗಿ ಬರೆಯಲ್ಪಟ್ಟಿದೆ. ಅವನಿಗೆ ಈ ಪುಸ್ತಕ ಹಿಡಿಸಿದರೆ ನಾವು ಕೃತಾರ್ಥರಾದಂತೆ.

-ಸ್ವಾಮಿ ಹರ್ಷಾನಂದ
-ಶ್ರೀಧರ್ ಭಂಡ್ರಿ

ಅಕ್ಷರಾಭ್ಯಾಸ





ನನ್ನ ಅದೃಷ್ಟವೋ ಅವಕಾಶವೋ ನಾನರಿಯೆ. ತುಂಬಾ ಉತ್ತಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಲಭ್ಯವಾಗುತ್ತಿರುತ್ತದೆ. ಇಂದು ಅಂತಹ ಒಂದು ಉತ್ತಮ ಅನುಕರಣೀಯ ಕಾರ್ಯಕ್ರಮ ಮುಗಿಸಿ ಈಗ ತಾನೇ ಬಂದೆ. ನನ್ನ ಭಾವನೆಯನ್ನು ಹಂಚಿಕೊಳ್ಳೋಣ ವೆನಿಸಿ ಈ ಬರಹ ಆರಂಭಿಸಿದೆ. ಹಾಸನದಲ್ಲಿ ವಾಸವಿ ವಿದ್ಯಾಸಂಸ್ಥೆಯ ಹೆಸರಿನ ಒಂದು ಶಾಲೆ.ಆಧುನಿಕವಾದ ಕಂಪ್ಯೂಟರ್ ಸಹಿತ ಎಲ್ಲಾ ಸೌಲಭ್ಯಗಳಿವೆ.ಅಷ್ಟು ಮಾತ್ರ ವಾಗಿದ್ದರೆ ಈ ಲೇಖನ ಬರೆಯ ಬೇಕಾಗಿರಲಿಲ್ಲ. ಅಲ್ಲಿನ ವಿಶೇಷ ಏನೆಂದರೆ ಕಳೆದ ಮೂರು ವರ್ಷಗಳಿಂದ ವರ್ಷಾರಂಭದಲ್ಲಿ ಒಂದು ಕಾರ್ಯಕ್ರಮ ಮಾಡುತ್ತಾರೆ. ಶಾಲೆಗೆ ಎಲ್.ಕೆ.ಜಿ/ಯು.ಕೆ.ಜಿ ಗೆ ಹೊಸದಾಗಿ ಸೇರಿದ ಮಕ್ಕಳೊಡನೆ ಅವರ ಪೋಷಕರನ್ನೂ ಕರೆಸುತ್ತಾರೆ. ಶಾರದೆಯ ಪೂಜೆ ಆರಂಭವಾಗುತ್ತೆ. ಎಲ್ಲ ಮಕ್ಕಳೊಡನೆ ಅವರ ಪೋಷಕರು, ಶಾಲೆಯ ವ್ಯವಸ್ಥಾಪಕ ವೃಂದ, ಟೀಚರ್ ಗಳು ಎಲ್ಲರೂ ಉಪಸ್ಥಿತರಿರುತ್ತಾರೆ. ಅರ್ಚಕರು ವಿಧಿವತ್ತಾಗಿ ಪೂಜೆ ಮಾಡುತ್ತಾರೆ. ಎಲ್ಲಾ ಮಕ್ಕಳನ್ನೂ ಅವರ ಪೋಷಕರು ತೊಡೆಯ ಮೆಲೆ ಕುಳ್ಳಿರಿಸಿಕೊಳ್ಳುತ್ತಾರೆ. ಒಂದು ತಟ್ಟೆಯಲ್ಲಿ ಅಕ್ಕಿ ಮತ್ತು ಒಂದು ಅರಿಶಿನದ ಕೊನೆಯನ್ನು ಇರಿಸಿ ಪೋಷಕರಿಗೆಕೊಡುತ್ತಾರೆ. ಆಚಾರ್ಯರು ಎಲ್ಲರಿಂದ ಸಂಕಲ್ಪ ಮಾಡಿಸುತ್ತಾರೆ.ನಂತರ ಓಂಕಾರ ತಿದ್ದಿಸುವ ಮೂಲಕ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ಹಿಂದಿನ ಗುರುಕುಲವನ್ನು ಹೋಲುವ ಈ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಪೋಷಕರಿಗೆ ಹಿತನುಡಿಗಳನ್ನು ಹೇಳಲಾಗುತ್ತದೆ. ಪೋಷಕರಿಗೆ ನಾಲ್ಕು ಮಾತುಗಳನ್ನು ಹೇಳಿ, ಎಂದು ನನಗೆ ಸೂಚಿಸಿದ್ದರು. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ನನಗೂ ಸಂತಸದ ಸಂಗತಿಯೇ ಹೌದು.ಭಗವತ್ ಪ್ರೇರಣೆಯಿಂದ ಆಡಿಸಿದ ನಾಲ್ಕು ಮಾತುಗಳ ಕ್ಲಿಪ್ ಇಲ್ಲಿದೆ.

.

Tuesday, July 24, 2012

ಭಗವಾನ್ ರಮಣ ಮಹರ್ಷಿಗಳು

ದಿನಾಂಕ 22.07.2012 ರಂದು ಹಾಸನದಲ್ಲಿ ನಡೆದ ಚಿನ್ಮಯ ಸತ್ಸಂಗದಲ್ಲಿ ತಿಪಟೂರು ಚಿನ್ಮಯ ಕೇಂದ್ರದ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ರಮಣ ಮಹರ್ಶಿಗಳ ಬಗ್ಗೆ ಪ್ರವಚನ ಮಾಡಿದರು. ಪ್ರವಚನದ, ಭಜನೆಯ ಮತ್ತು ಪ್ರವಚನಕ್ಕೆ ಪೂರಕವಾದ ಶ್ರೀ ಶಂಕರಾಚಾರ್ಯ ವಿರಚಿತ ನಿರ್ವಾಣಷಟ್ಕದ ಆಡಿಯೋ ಕ್ಲಿಪ್ ಗಳನ್ನು ಈ ಕೆಳಗೆ ನೀಡಲಾಗಿದೆ.




Monday, July 23, 2012

ವಿಶೇಷ ರೀತಿಯ ಹುಟ್ಟುಹಬ್ಬ!

ದಿನಾಂಕ 22.7.2012 ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಪಾಲ್ಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ ಆರಂಭವಾದ ಚಿನ್ಮಯ ಸತ್ಸಂಗದ ಎರಡನೇ ತಿಂಗಳ ಕಾರ್ಯಕ್ರಮ ಒಂದಾದರೆ, ಎರಡನೆಯದು ಬೆಂಗಳೂರಿನಲ್ಲಿರುವ ಮಗುವಿನ ಹುಟ್ಟುಹಬ್ಬವನ್ನು   ಹಾಸನದ ವೃದ್ಧಾಶ್ರಮದಲ್ಲಿ  ಆಚರಿಸಿದ್ದುದು!! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರದ್ದು ಯಾವಾಗಲೂ ವಿಶಿಷ್ಟವಾದ ಚಿಂತನೆ. ಬೆಂಗಳೂರಿನಲ್ಲಿರುವ ಮಗಳು ಬಿಂದು ಅಪ್ಪನಿಗೆ ಹೇಳಿದಳು "ಅಕ್ಷಯಳ ಹುಟ್ಟುಹಬ್ಬಕ್ಕೆ ಏನಾದರೂ ಒಂದಿಷ್ಟು ದಾನ ಕೊಡಬೇಕು, ಯಾವುದಾದರೂ ದೇವಸ್ಥಾನಕ್ಕೆ ಹಣ ಕೊಡೋಣ"
ನಾಗರಾಜ್ ಹೇಳಿದರು, "ನೋಡಮ್ಮಾ  ಜೀವಂತ ದೇವರಿಗೆ ಕೊಟ್ಟರೆ ಸಾರ್ಥಕ ವಾಗುತ್ತೆ!"
"ಏನು ಹಾಗಂದ್ರೆ?" ಮಗಳು ಕೇಳಿದಳು.
"ನೋಡು ಬಿಂದು, ಈ ಸಮಾಜದಲ್ಲಿ ಜನರು ಒಳ್ಳೆಯ ರೀತಿಯಲ್ಲಿಯಲ್ಲಾಗಲೀ, ಕೆಟ್ಟ ರೀತಿಯಲ್ಲಾಗಲೀ  ಬೇಕಾದಷ್ಟು ಹಣ ಮಾಡ್ತಾರೆ, ಸಾಮಾನ್ಯವಾಗಿ ತಾವು ಮಾಡಿದ ಪಾಪ ಹೋಗಿಬಿಡುತ್ತೆ, ಅನ್ನೋ ಭ್ರಮೆಯಲ್ಲಿ ದೇವಸ್ಥಾನಗಳಿಗೆ ಸಾಕಷ್ಟು ಹಣ ಕೊಡ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹಣ ಕೊಡುವ ಜನರು ಸಮಾಜದಲ್ಲಿ ಸಾಕಷ್ಟು ಇದ್ದಾರೆ. ಅದರ ಬದಲು  ನಿನ್ನ ಮಗಳ ಹುಟ್ಟುಹಬ್ಬವನ್ನು ಯಾವುದಾದರೂ  ಅನಾಥಾಶ್ರಮದಲ್ಲೋ, ಅಥವಾ ವೃದ್ಧಾಶ್ರಮದಲ್ಲೋ  ಮಾಡೋಣ. ಅಲ್ಲಿನ ನಿವಾಸಿಗಳೊಡನೆ ಸಂತೋಷ ಹಂಚಿಕೊಳ್ಳೋಣ. ಅವರೆಲ್ಲಾ ಜೀವಂತ ದೇವರುಗಳು. ಈ ದೇವರುಗಳ ಮನಸ್ಸನ್ನು ಸ್ವಲ್ಪ ಸಂತೋಷ ಪಡಿಸಿದರೆ ಭಗವಂತ ಮೆಚ್ಚುತ್ತಾನೆ."
ತಂದೆಯ ಮಾತಿಗೆ ಮಗಳು,ಅಳಿಯ ಒಪ್ಪಿದರು. "ನೀವೇ ಏನು ಬೇಕಾದರೂ ಪ್ಲಾನ್ ಮಾಡಿ, ಹಣ  ನಮ್ಮದು, ಪ್ಲಾನ್ ನಿಮ್ಮದು" ಎಂದರು. ಸರಿ. ಯೋಜನೆ ರೂಪಿಸಿದ್ದಾಯ್ತು. ಹೇಗೂ   ನಮಗೆಲ್ಲಾ ಪರಿಚಿತರಾದ  ಡಾ. ಹೆಬ್ಬಾರ್  ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ, ಮಳೆಗಾಲ ಬೇರೆ!  ಅಲ್ಲಿನ ನಿವಾಸಿಗಳಿಗೆ  ಬೆಚ್ಚಗಿನ ಸ್ವೆಟರ್ ಮತ್ತು ಟವೆಲುಗಳನ್ನು ಕೊಡಲು ತೀರ್ಮಾನಿಸಿ ಕಾರ್ಯಕ್ರಮ ನಿಶ್ಚಯ ಗೊಳಿಸಿದ್ದಾಯ್ತು. ದಿನಾಂಕ 22.7.2012 ರಂದು ಸತ್ಸಂಗ ನಡೆಸಲು ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಬರುತ್ತಾರೆ, ಅವರಿಂದ ಅಲ್ಲೂ ಒಂದು ಸತ್ಸಂಗ ಮಾಡಿ  ಸ್ವೆಟರ್ ವಿತರಿಸಿ, ಎಲ್ಲರೊಡನೆ ಸಿಹಿ ಊಟಮಾಡಿಬರಲು ತೀರ್ಮಾನಿಸಿದೆವು.
    ಈಶಾವಾಸ್ಯಮ್ ನಲ್ಲಿ ಸಂಜೆ 6.00 ರಿಂದ 7.00 ರವರಗೆ ಸತ್ಸಂಗ ನಡೆದ ಕೂಡಲೇ ನಾಲ್ಕು ಕಾರುಗಳು ವೃದ್ಧಾಶ್ರಮತ್ತ ಹೊರಟವು. ವೃದ್ಧಾಶ್ರಮದಲ್ಲಿ ಕೆಲವು ಮಕ್ಕಳಿಗೂ  ಆಶ್ರಯ ಕೊಟ್ಟಿದ್ದಾರೆ. ಆ  ಮಕ್ಕಳಂತೂ ಕುಳಿದು ಕುಪ್ಪಳಿಸಿದವು. ಸುಧರ್ಮ ಚೈತನ್ಯರ ಸವಿಯಾದ ಮಾತುಗಳು, ಭಜನೆ, ಮಕ್ಕಳ ಒಡನಾಟದಿಂದ ಎಲ್ಲರೂ ಆನಂದ ಸಾಗರದಲ್ಲಿ ತೇಲಿದೆವು.  'ಅಕ್ಷಯಾ,  ನೀನು ನೂರ್ಕಾಲ ಬಾಳಮ್ಮಾ' ಎಂದು ಎಲ್ಲರೂ ಹರಸುತ್ತಾ ಬಿಂದು ಮತ್ತು  ಅವರ ಪತಿ ರಘು ಅವರ ಉದಾರತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಗವಂತನು  ಅವರ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲೆಂದು ಹರಸಿದೆವು. ಅಂತೂ  ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ಕೀರ್ತಿ ಕವಿನಾಗರಾಜರಿಗೂ ಮತ್ತು ಅವರ  ಪತ್ನಿ ಶ್ರೀಮತಿ ಭಾರತಿಯವರಿಗೂ ಸಲ್ಲುತ್ತದೆ. ವೇದಸುಧೆಯ ಓದುಗ ಮಿತ್ರರೂ ಕೂಡ  ತಮ್ಮ ಮನೆಯ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಈ ಆಶ್ರಮದಲ್ಲಿ ಆಚರಿಸಬಹುದೆಂದು ತಿಳಿಸುತ್ತಾ ಹೀಗೆ ಮುಂದೆ  ಬರುವ ಎಲ್ಲರಿಗೂ ತನ್ನ ಎಲ್ಲಾ ಸಹಕಾರವನ್ನೂ ನೀಡಲು ವೇದಸುಧೆ ಬಳಗ ಮತ್ತು ಹಾಸನದ ಚಿನ್ಮಯ ಸತ್ಸಂಗವು ಸಿದ್ಧವಿದೆ ಎಂದು ತಿಳಿಸಲು ಸಂತೋಷಿಸುತ್ತೇವೆ.

                    ವೃದ್ಧಾಶ್ರಮದಲ್ಲಿ ಒಟ್ಟು ಸುಮಾರು ಅರವತ್ತು ಜನ ನಿವಾಸಿಗಳಿದ್ದು  ಒಂದು ದಿನದ ಊಟೋಪಚಾರಕ್ಕೆ ಐದು ಸಾವಿರ ರೂಗಳನ್ನು ನಿಗದಿಪಡಿಸಿರುತ್ತಾರೆ. 


ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ಅಜ್ಜಿ ನೀವು ಬೆಚ್ಚಗಿರಬೇಕು

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ಬೆಂಗಳೂರಿನಲ್ಲಿರುವ ಮೊಮ್ಮಗಳ ಹುಟ್ಟುಹಬ್ಬವನ್ನು 
 ಹಾಸನದ ವೃದ್ಧಾಶ್ರಮದಲ್ಲಿ ಆಚರಿಸುವಾಗ 
 ಕವಿ ನಾಗರಾಜ್  ತಮ್ಮನ್ನು ತಾವು ಮರೆತಿದ್ದರು.

ವೃದ್ಧಾಶ್ರಮದ ಮಕ್ಕಳೊಡನೆ ಹೆಚ್.ಎಸ್.ರಮೇಶ್








ಅನರ್ಘ್ಯ ರತ್ನಗಳು





ಸೂಫಿ ಸಾಧಕರಲ್ಲಿ ಹಲವಾರು ಮಹಿಳೆರದೂ   ಪಾತ್ರವಿದೆ.  ಅವರಲ್ಲಿ ಆರನೇ ಶತಮಾನದಲ್ಲಿ ಇದ್ದ ರಬಿಯಾ ಒಬ್ಬ ಮಹಾನ್ ಸಾಧಕಿ.  ಆಕೆಗೆ ಭಗವಂತನಲ್ಲಿ ಅಪಾರವಾದ ನಂಬುಗೆ ಮತ್ತು ಶರಣಾಗತಿ.  ಈಕೆಯ ಜೀವನದಲ್ಲಿ ನಡೆದ ಒಂದು ಘಟನೆ ಇವಳ ಸಂಪೂರ್ಣ  ಶರಣಾಗತಿಯನ್ನು ಸಾದರ ಪಡಿಸುತ್ತದೆ.

ತನಗೆ ಇದ್ದ ಪ್ರಾಯದ ಅವಳಿ  ಗಂಡು ಮಕ್ಕಳು ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ಅಸು ನೀಗುತ್ತಾರೆ.   ಇವರ ಪಾರ್ಥಿವ ಶರೀರವನ್ನು ಮನೆಗೆ ತಂದ ಸುತ್ತಮುತ್ತಲಿನವರು ರಬಿಯಾಗೆ ಎಲ್ಲವನ್ನು ವಿವರಿಸುತ್ತಾರೆ. ತನಗಾದ ದುಃಖವನ್ನು ಕ್ಷಣಮಾತ್ರದಲ್ಲಿ ಸಾವರಿಸಿಕೊಂಡು, ಆ ಮಕ್ಕಳ ಪಾರ್ಥಿವ ಶರೀರವನ್ನು ಒಂದು ಕೋಣೆಯಲ್ಲಿ ಇರಿಸಿಕೊಂಡಳು.   ತನ್ನನ್ನು ಸಂತೈಸಲು ಬಂದವರಿಗೆ " ದಯಮಾಡಿ ನೀವೆಲ್ಲ ಈಗ ಇಲ್ಲಿಂದ ಹೋಗಿ.  ನನ್ನ ಯಜಮಾನರು ಬರುವ ಸಮಯ.  ಅವರಿಗೆ ಒಮ್ಮೆಲೇ ಈ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ.  ಅವರನ್ನು ಸಂತೈಸಿ ನಂತರ   ಹೇಳುತ್ತೇನೆ " ಎಂದು ಎಲ್ಲರನ್ನು ಬೀಳ್ಕೊಟ್ಟಳು.

ಸ್ವಲ್ಪ ಸಮಯದಲ್ಲೇ ಬಂದ ಗಂಡನಿಗೆ ಎಂದಿನಂತೆ ಉಣ್ಣಲು ಬಡಿಸಿ, ನಂತರದಲ್ಲಿ ನಿಧಾನವಾಗಿ ಮಾತಿಗೆ ಎಳೆಯುತ್ತ  " ನಾನು ನಿಮ್ಮಲ್ಲಿ ಒಂದು ವಿಚಾರವನ್ನು ಹಲವಾರು ವರ್ಷಗಳಿಂದ ಹೇಳದೆ ರಹಸ್ಯವಾಗಿ ಇಟ್ಟಿರುವೆ. ಇದಕ್ಕಾಗಿ ನೀವು ನನ್ನನ್ನು ಕ್ಷಮಿಸಬೇಕು.  ಇಂದು ಆ ವಿಚಾರವನ್ನು ಹೇಳಲೇ ಬೇಕಾದ ಸಮಯ ಬಂದಿದೆ. " ಎಂದು ಪೀಟಿಕೆ ಹಾಕಿದಳು.  ರಬಿಯಾಲನ್ನು  ಅಪಾರ ಗೌರವದಿಂದ ನೋಡುತ್ತಿದ್ದ  ಗಂಡ ಕಾತರದಿಂದ "ಅದೇನು?" ಎಂದು ಕೇಳಿದ.  " ಬಹಳ ವರ್ಷಗಳ ಹಿಂದೆ ನಮ್ಮ ಮನೆಗೆ ಬಂದ ಒಬ್ಬ ಸಾಧು ಪುರುಷರು ನನ್ನಲ್ಲಿ ಎರಡು ಅನರ್ಘ್ಯ ರತ್ನಗಳನ್ನು ಕೊಟ್ಟು, ಇದನ್ನು ಜೋಪಾನವಾಗಿ   ಕಾಪಾಡು, ನಾನು ಬೇಕಾದಾಗ ಬಂದು ವಾಪಾಸು ಪಡೆಯುತ್ತೇನೆ. ಎಂದು ಹೇಳಿ ಹೋದವರು ವರ್ಷಗಳು ಕಳೆದರು ಬರಲೇ ಇಲ್ಲ.  ನಾನು ಆ ರತ್ನಗಳನ್ನು ನನ್ನವೇ ಎಂದು ಅದರ ಮೇಲೆ ಮೋಹ ಬೆಳೆಸಿಕೊಂಡು ಬಿಟ್ಟೆ.  ಆದರೆ, ಅವರು ಈಗ ಬಂದು ಅವರ  ರತ್ನಗಳನ್ನು ವಾಪಾಸು ಕೇಳುತ್ತಿದ್ದಾರೆ.  ದಿಕ್ಕೇ ತೋಚದೆ ನಿಮ್ಮನ್ನು ಕೇಳಿ ಕೊಡುವೆನೆಂದು ಹೇಳಿ ಕಳುಹಿದೆ.  ಈ ಗ ಹೇಳಿ ನಾನೇನು ಮಾಡಲಿ? "  ಎಂದು ಖಿನ್ನಳಾಗಿ ಹೇಳಿದಳು.   ಸಾವಕಾಶವಾಗಿ ಎಲ್ಲವನ್ನು ಕೇಳಿದ ಗಂಡ " ರಬಿಯ, ನಿನಗೆ ಹೇಳುವುದೇನಿದೆ?  ಪರರ ವಸ್ತುವನ್ನು ಎಂದೂ ನೀನು ಇಟ್ಟುಕೊಂಡವಳಲ್ಲ.  ಈಗ ಯಾಕೆ ಆ ಚಿಂತೆ? ಅವರ ರತ್ನಗಳನ್ನು ಅವರಿಗೆ ವಾಪಾಸು ಕೊಟ್ಟುಬಿಡು." ಎಂದು ಸ್ಪಷ್ಟವಾಗಿ ಹೇಳಿದ.

ಈ ಮಾತು ಕೇಳಿದ ನಂತರ ರಬಿಯ ತನ್ನ ಗಂಡನ ಕೈ ಹಿಡಿದುಕೊಂಡು  ಮಕ್ಕಳ ಶವ ಇರಿಸಿದ್ದ ಕೋಣೆಗೆ ಕರೆದೊಯ್ದಳು.  ಮಕ್ಕಳ ಶವ ನೋಡಿದ ಗಂಡ ಪ್ರಜ್ಞೆ ತಪ್ಪಿದ.   ಸಾವರಿಸಿಕೊಂಡ ನಂತರ, ರಬಿಯ ಸಮಾಧಾನದಿಂದ ಹೇಳಿದಳು, " ಇವೆ, ಆ ಅನರ್ಘ್ಯ ರತ್ನಗಳು.  ಭಗವಂತ ನಮ್ಮಲಿ ಜೋಪಾನವಾಗಿ ಇಡಬೇಕೆಂದು ಹೇಳಿ ಕಳುಹಿಸಿದ್ದ.  ಇಂದು ಅವನು ವಾಪಾಸು ಕೇಳಿದ. ಆತನ ರತ್ನಗಳನ್ನು ಇಲ್ಲಿಯವರೆಗೆ ಜೋಪಾನ ಮಾಡಿದ್ದೇವೆ .  ಈಗ ಕೊಡಬೇಕಲ್ಲವೇ?  ಬನ್ನಿ ಅವನ ರತ್ನಗಳನ್ನು ಸಂತೋಷದಿಂದ ಹಿಂತಿರುಗಿಸೋಣ."  ಎಂದು ಇಬ್ಬರು ಸೇರಿ ಶವ ಸಂಸ್ಕಾರ ನೆರೆವೇರಿಸಿದರು.

ರಬಿಯಾಲ ಜೀವನದಲ್ಲಿ ಇದೊಂದು ಬಹು ದೊಡ್ಡ ಪರೀಕ್ಷೆಯಾಗಿತ್ತು.  ಆ ಸಮಯದಲ್ಲೂ ತನ್ನ ಚಿತ್ತವನ್ನು ಕಳೆದುಕೊಳ್ಳದೆ ಸಮಚಿತ್ತದಿಂದ ಸಂಪೂರ್ಣವಾಗಿ ಭಗವಂತನಲ್ಲಿ ಶರಣಾಗತಿ ಹೊಂದಿದಳು. ಇವಳ ಜೀವನದ  ಆದರ್ಶಗಳು ಇಂದಿಗೂ ಜನಮಾನಸದಲ್ಲಿ   ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.


ಹೇ ವಿನಾಯಕ ಆಲಿಸೆನ್ನಯ ಪ್ರಾರ್ಥನೆ







ಹೇ ವಿನಾಯಕ ಸುಖ ಪ್ರದಾಯಕ
ಆಲಿಸೆನ್ನಯ ಪ್ರಾರ್ಥನೆ|
ಕಾಲಚಕ್ರದ  ಆಹುತಿಗೆ ಸಿಲುಕಿದೆನು
ಸಲಹೈ ದೇವನೇ..ದೇವನೇ....||

ಸತ್ಯವೆನ್ನುವ   ಸೊಲ್ಲು ಅಡಗಿದೆ
ಸಿರಿಯು ಗರ್ವದಿ ಮೆರೆದಿದೆ|
ಹಣವು ಉಳ್ಳವ ಗೆಲ್ಲ ಬಲವಿದೆ|
ಅವಗೆ ಜಗ ಶಿರ ಬಾಗಿದೆ||

ದುಡಿಮೆ ಪ್ರಾಮಾಣಿಕತೆ ಇಂದು
ಕಾಣದಾಗಿದೆ ಜಗದಲಿ|
ಜನರ ವಂಚಿಪ ಸ್ವಾರ್ಥ ಸಾಧಿಪ|
ಲೋಕ ಬದುಕಿದೆ ಸೊಗದಲಿ||


ಶಾಲೆಯ ಶಿಕ್ಷಕರ ಜಿಲಾಮಟ್ತದ ಒಂದು ಸಭೆ. ಆ ಸಭೆಗೆ ನಾನು ಆಹ್ವಾನಿಸಲಪಟ್ಟಿದ್ದೆ. ಕಾರ್ಯಕ್ರಮದ ಆರಂಭದಲ್ಲಿ ಒಬ್ಬ ಟೀಚರ್ ಆಕೆಯ ಅಣ್ಣ ರಚಿಸಿದ್ದ  ಈ ಹಾಡು ಹಾಡಿದರು. ನಾನು ತಲೆ ದೂಗಿದೆ. ಆದರೆ ಒಬ್ಬ ಹಿರಿಯರು ತಮ್ಮ ಆಕ್ಷೇಪ ಎತ್ತಿದರು. ಏನು ಈ ಹಾಡು  ನಿರಾಸಾದಾಯಕವಾಗಿದೆಯಲ್ಲಾ! ಅವರ ಆಕ್ಷೇಪದ ಮಾತು.


ನನ್ನ ಅಭಿಪ್ರಾಯದಲ್ಲಿ  ಒಬ್ಬ ಕವಿ  ತನ್ನ ಭಾವನೆಗೆ ಅಕ್ಷರವನ್ನು ಕೊಡುತ್ತಾನೆ. ಅದು  ಆಶಾದಾಯಕ ವಾಗಿರುತ್ತದೋ , ನಿರಾಶೆಯಿಂದ ತುಂಬಿರುತ್ತದೋ, ಏನೋ ಒಂದು ಭಾವ ಹೊತ್ತು ಹಾಡು ಮೂಡಿ ಬಂದಿರುತ್ತದೆ.  ಇಲ್ಲಿ ಕವಿಯು ತೋಡಿ ಕೊಂಡಿರುವ ಭಾವನೆ ಸುಳ್ಳೇ?  ವಾಸ್ತವ ವಲ್ಲವೇ?  ನಿರಾಶೆಯಿಂದ ತುಂಬಿದೆ ಎಂದರೆ  ಇಲ್ಲಿ ಕವಿಯು ಎತ್ತಿರುವ  ಪ್ರಶ್ನೆಗಳಿಗೆ      ಆಶಾದಾಯಕವಾಗಿ  ಸೂತ್ರ ರೂಪಿಸಬೇಕಾದ ಜವಾಬ್ದಾರಿ ಆಕ್ಷೇಪ ಮಾಡುವವರದ್ದು ತಾನೇ?  ನೀವೇನು ಅನ್ನುವಿರಿ?  ನಿಮ್ಮ  ಪ್ರತಿಕ್ರಿಯೆ ನಿರೀಕ್ಷಿಸುವೆ.






Friday, July 20, 2012

ಮಕ್ಕಳ ಕನಸು



ಸಾಮಾನ್ಯವಾಗಿ ಎಲ್ಲಾ ತಂದೆತಾಯಿಯರು ತಮ್ಮ ಮಕ್ಕಳ ಬಗ್ಗೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ತಮ್ಮ ಮಕ್ಕಳು ಹೀಗಾಗಬೇಕು,  ಹಾಗಾಗಬೇಕು ಎಂಬ ಹಲವಾರು ಆಸೆ ಆಕಾಂಕ್ಷೆಗಳನ್ನು ಇರಿಸಿಕೊಂಡು ತಮ್ಮ ಮಕ್ಕಳನ್ನು ಆ ದಿಸೆಯಲ್ಲಿ ನಡೆಸಲು ಶ್ರಮ ಹಾಕುತ್ತಾರೆ.  ತಮ್ಮ ಮಕ್ಕಳು  ತಮಗಿಂತ ಹೆಚ್ಚು ಪುರೋಭಿವೃದ್ಧಿಗೆ  ಬರಬೇಕೆಂದು ತಮ್ಮ ಅಮೂಲ್ಯವಾದ ಸಮಯವನ್ನು ತೊಡಗಿಸಿಕೊಂಡು ಮಕ್ಕಳಿಗೆ ಶಿಕ್ಷಣವನ್ನು ಹಲವಾರು ಪ್ರಾಕಾರಗಳಲ್ಲಿ ಕೊಡಿಸುತ್ತಾರೆ, ಕೊಡುತ್ತಾರೆ. ತಮ್ಮ ಮಕ್ಕಳ ಸ್ವಲ್ಪ ಯಶಸ್ಸು ಕೂಡಾ,  ಅಪ್ಪ ಅಮ್ಮರಿಗೆ ಅಪಾರ ಸುಖವನ್ನು ನೀಡುತ್ತದೆ.  ಆದರೆ, ಕೆಲವೊಮ್ಮೆ ಮಕ್ಕಳ ಮನಸ್ಸು ಬೇರೆಡೆಗೆ ಹೋದಾಗ, ಅಥವಾ ತಂದೆತಾಯಿಯರ ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾದಾಗ, ಅಥವಾ ತಮ್ಮ ಕನಸುಗಳು ವಿಭಿನ್ನವಾದಾಗ, ಇನ್ನಿತರ ಯಾವುದೋ ಕಾರಣದಿಂದ ನಿರೀಕ್ಷಿತ ಫಲಿತಾಂಶ ಸಿಗದಾದಾಗ ಮಕ್ಕಳ ಮೇಲೆ ಅಪ್ಪ ಅಮ್ಮರ ನಿರಾಸೆ ಹೆಚ್ಚಾಗುತ್ತದೆ.  ಕೆಲವೊಮ್ಮೆ ಅಸಡ್ಡೆ, ತಿರಸ್ಕಾರ ಮತ್ತು ಸಿಟ್ಟು ಇವುಗಳು ಮಕ್ಕಳ ಮೇಲೆ ದುಬಾರಿಯಾದ ಪರಿಣಾಮ ಬೀರುತ್ತವೆ.     ಇಂತಹ ಜಟಿಲವಾದ  ಸಮಸ್ಯೆಗಳು ಬರುವ ಮುಂಚೆ ಮಕ್ಕಳ ಮನಸನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ.  ಮಕ್ಕಳ ಕನಸು, ವಿಚಾರ ಮತ್ತು ಆಸೆಗಳು ತೀರಾ ಬಾಲಿಶವಾಗಿದೆಯೆಂದು ನಮಗೆ ಅನ್ನಿಸಬಹುದು,  ಆದರೆ,ಆ ಚಿಂತನೆಯಲ್ಲೂ  ಸರಿಯಾದ ದಿಕ್ಕು ಇರುತ್ತೆ  ಎಂಬುದನ್ನು   ತಂದೆ ತಾಯಿಯರು ಮರೆಯಬಾರದು.

ನರೇಂದ್ರ ಚಿಕ್ಕ ಹುಡುಗನಾಗಿದ್ದಾಗ ತನ್ನ ತಂದೆ ತಾಯಿಯ ಜೊತೆ ಎರಡು ಕುದುರೆಗಳ ಸಾರೋಟಿನ ಪ್ರಯಾಣವನ್ನು ಬಹಳ ಇಷ್ಟ ಪಡುತ್ತಿದ್ದ.  ಕಲ್ಕೊತ್ತ ನಗರ ಸಂಚಾರ ಮಾಡುವಾಗ ಕುದುರೆಯ ಕಾಲಿನ ಟಕ್ ಟಕ್ ಸದ್ದು, ಕಟ್ಟಿದ ಗೆಜ್ಜೆಯ ನಿನಾದ, ತಂಪಾದ ಗಾಳಿ ಇವೆಲ್ಲವೂ ನರೆಂದ್ರನಿಗೆ ಬಹಳ ಆಪ್ಯಾಯಮಾನವಾಗಿತ್ತು.  ಇಂತಹ ನಗರ ಪ್ರದಕ್ಷಿಣೆ ಮುಗಿಸಿ ಬಂದ ನರೇಂದ್ರನ ತಂದೆ " ನೀನು ದೊಡ್ಡವನಾದ ಮೇಲೆ ಏನು ಆಗಲು ಬಯಸುತ್ತೀ? " ಎಂದು ಪ್ರಶ್ನೆ ಹಾಕಿದರು.  ನರೇಂದ್ರ ಕ್ಷಣ ಮಾತ್ರವೂ ತಡಮಾಡದೆ " ನಾನು ಜೋಡಿ ಕುದರೆಯ ಸಾರೋಟಿನ ಸವಾರನಾಗುತ್ತೀನಿ " ಎಂದು ಉತ್ತರಿಸಿದ.  ಈ ಮಾತು ನರೇಂದ್ರನ ತಂದೆಗೆ ಅತ್ಯಂತ ಸಿಟ್ಟು ಮತ್ತು ನಿರಾಸೆ ಒಮ್ಮೆಲೇ ಆಯಿತು.  ಇದನ್ನು ಗಮನಿಸಿದ ತಾಯಿ ನರೇಂದ್ರನ ಕೈ ಹಿಡಿದುಕೊಂಡು ನೇರಾ ದೇವರಮನೆಗೆ ಕರೆದುಕೊಂಡು ಹೋಗಿ ದೇವರಮುಂದೆ ನಿಲ್ಲಿಸಿ ಅಲ್ಲಿ ಇರಿಸಲಾಗಿದ್ದ ಶ್ರೀ ಕೃಷ್ಣನ ಭಗವದ್ಗೀತಾ ಉಪದೇಶದ ಫೋಟೋ ತೋರಿಸುತ್ತ " ಈ ರೀತಿಯ ಸವಾರನಾಗಲು ಬಯಸಿರುವೆ ಅಲ್ಲವೇ? " ಎಂದು ಕೇಳಿದರು.  ನರೇಂದ್ರನ ಬಾಯಿಂದ ಮಾತು ಬರಲಿಲ್ಲ.  " ನೀನು ಜೋಡಿ ಕುದುರೆಗಳ ಸಾರೋಟಿನ ಸವಾರನೇ ಆಗುವುದಾದರೆ ಶ್ರೀಕೃಷ್ಣನ ತರಹ ಜಗತ್ತಿಗೆ ಬೆಳಕು ಕೊಡುವ ಸವಾರನಾಗು." ಎಂದು ಹುರಿದುಂಬಿಸಿದರು.  ಮುಂದೆ ಆ ಪುಟ್ಟ ನರೇಂದ್ರನೆ,   ಸ್ವಾಮಿ   ವಿವೇಕಾನಂದನಾಗಿ ಜಗತ್ತಿಗೆ ಬೆಳಕು ತೋರಿದ ಸವಾರನಷ್ಟೇ ಅಲ್ಲ ಸರದಾರನು   ಆದರು.

ಮಕ್ಕಳ ಮನಸಿನಲ್ಲಿ ಇರುವ ಆಸೆಗಳು ಅಸ್ಪಷ್ಟವಾಗಿರಬಹುದು, ಕನಸುಗಳು ಬಾಲಿಶ ಎನಿಸಬಹುದು, ವಿಚಾರಗಳು ಅಸಂಬದ್ಧ ಎನಿಸಬಹುದು.  ಆದರೆ ಸ್ವಲ್ಪ ತಾಳ್ಮೆ ವಹಿಸಿ, ಮಕ್ಕಳ ಕನಸಿಗೆ, ಆಸೆಗಳಿಗೆ, ವಿಚಾರಗಳಿಗೆ ಹೇಗೆ ನೀರೆರೆದು ಪೋಷಿಸಿ ಬೆಳೆಸೆಬಹುದು ಎಂಬುದರ ಬಗ್ಗೆ ಚಿಂತಿಸಿದರೆ ಸಾಕು ಮಕ್ಕಳು ಹೆಚ್ಚು ಸಬಲರಾಗುತ್ತಾರೆ.  ತಮ್ಮ  ಮಕ್ಕಳು ಪ್ರತಿಭಾಶಾಲಿಗಳು ಆಗಬೇಕೆಂಬುದು ಪ್ರತಿ ತಂದೆತಾಯರ ಉದ್ದೇಶವು ಅದೇ ತಾನೇ!  ಇದಕ್ಕೆ ನೀವೇನು ಹೇಳುವಿರಿ?

ಹೆಚ್ ಏನ್ ಪ್ರಕಾಶ್

ಓ ದೇವರೇ, ನೀನೆಲ್ಲಿರುವೆ?


ಓ ದೇವರೇ, ನೀನೆಲ್ಲಿರುವೆ?

ಇಲ್ಲಿ, ಭೂಲೋಕದಲ್ಲಿ ನಿನ್ನ ಬಗ್ಗೆ

ಅದೆಷ್ಟು  ಚರ್ಚೆಗಳು! ಅದೆಷ್ಟು ವಾದಗಳು!

ಎಲ್ಲವೂ ನಿನ್ನ ಗಮನಕ್ಕೆ ಬಂತೇ?


ಗುಡಿಯಲ್ಲಿ ಬಂಧಿಸುವವರು ನಿನ್ನ  ಕೆಲವರು|

ಅಷ್ಟೇ ಸಾಲದೆಂಬಂತೆ ನಿನಗೆ

ಸ್ನಾನ ಮಾಡಿಸುವವರೆಷ್ಟು ಮಂದಿ!

ಬೆಳಕು ತೋರುವವರೆಷ್ಟು ಮಂದಿ!

ಉಣ   ಬಡಿಸುವವರೆಷ್ಟು ಮಂದಿ!


ಇದ ನೋಡಿದ ಕೆಲವರು ನಕ್ಕು

ಸುಮ್ಮನಾಗಿದ್ದರೆ ಪರವಾಗಿರಲಿಲ್ಲ|

ನಿನಗೆ ಉಣಿಸಿದರನ್ನೇ [!!] ಗೇಲಿ ಮಾಡುವರು

ನಿನ್ನ ಆಕಾರವ ನೋಡಿ ಕೇಕೆ ಹಾಕುವರು||


ದ್ವೈತ/ಅದ್ವೈತ/ವಿಶಿಷ್ಟಾದ್ವೈತ ವಂತೆ

ನಿನ್ನ ನೋಡಲು ಹಲವು ದಾರಿಗಳ೦ತೆ!

ಹವನ ಹೋಮ ಗಳಂತೆ! ವ್ರತ ಕತೆಗಳಂತೆ!!

ನಿನಗೆ ಇವೆಲ್ಲಾ ಲಂಚ ವಂತೆ!!


ಹೇ ಭಗವಾನ್,

ನಿನ್ನನ್ನೂ ಬ್ರಷ್ಟ ನನ್ನಾಗಿ ಮಾಡಿದ

ಶ್ರೇಷ್ಠರು ಇಲ್ಲಿದ್ದಾರೆ!

ನಿನಗೆ ಕಾಣದಿದ್ದರೆ ನಿನ್ನ ಕಣ್ಣು ಕುರುಡೇ?


ಸರ್ವ ಶಕ್ತನಾದ ನಿನಗೆ

ಈ ರಂಪಾಟದ ಅರಿವಾಗಿಲ್ಲವೇ?

ಅರರೆ ನಾನಾರಿಗೆ ಹೇಳುತ್ತಿರುವೆ?

ಸರ್ವಶಕ್ತನಿಗೆ ನಾನು ಹೇಳಿದ ಮೇಲೆ  ತಿಳಿಯಬೇಕೇ?


ಅಂತೂ ನನ್ನ ದೃಷ್ಟಿಯಲ್ಲಿ

ನೀನೊಂದು ಶಕ್ತಿ ಅಷ್ಟೇ|.

ಹೌದು, ನನ್ನ ಊಹೆಗೂ ಮೀರಿದ ಶಕ್ತಿ!

ಎಲ್ಲವನೂ ಅಟ್ಟಾಡಿಸುವ ಶಕ್ತಿ!


ನನ್ನೊಳಗೆ, ಇವನೊಳಗೆ ಎಲ್ಲರೊಳಗೆ|

ಎಲ್ಲೆಲ್ಲೂ, ಎಂದೆಂದೂ, ಕಣ್ ಮಿಟುಕಿಸದೆ

ಕಾಯುತ್ತಿರುವ ನೀ ಅನಂತ ಶಕ್ತಿ|

ನಿನ್ನ ನಂಬುವುದೊಂದೇ ಯುಕ್ತಿ||


ನಿನ್ನ ಹೆಸರಲಿ ಬಡಿದಾಡುವ

ಬ್ಲಾಕ್ ಮೇಲ್ ಮಾಡುವ

ಜನರದು ಕುಯುಕ್ತಿ

ಅವರಿಗಿಲ್ಲ ಶ್ರದ್ಧಾ ಭಕ್ತಿ||

ಯೋಚಿಸಲೊ೦ದಿಷ್ಟು...೫೩



೧.  ಶುದ್ಧವಾದ ಹೃದಯವೇ ಜಗತ್ತಿನ ಅತ್ಯುತ್ತಮ ದೇಗುಲ! ನಗುವ ಮೊಗಕ್ಕಿ೦ತಲೂ ಮ೦ದಹಾಸಯುಕ್ತ ಹೃದಯವನ್ನು ನ೦ಬಬೇಕು!
೨.  ಜೀವನವೆ೦ಬ ಪ್ರಯೋಗಶಾಲೆಯಲ್ಲಿ ಭೂತಕಾಲದ ಅನುಭವದೊ೦ದಿಗೆ ವರ್ತಮಾನದ ಪ್ರಯೋಗವನ್ನು ಉತ್ತಮ ಭವಿಷ್ಯದ ನಿರೀಕ್ಷೆಯಿ೦ದ ಕೈಗೊಳ್ಳಬೇಕು!
೩. ಒ೦ದು ಯಶಸ್ವೀ ಗೆಳೆತನ ಪರಸ್ಪರ ಎಷ್ಟು ಅರ್ಥೈಸಿಕೊ೦ಡಿದ್ದೇವೆ ಎ೦ಬುದರಲ್ಲಿಲ್ಲ ಬದಲಾಗಿ ಪರಸ್ಪರ ತಪ್ಪು ತಿಳುವಳಿಕೆ ಹೊ೦ದುವುದನ್ನು ಎಷ್ಟು ಬಾರಿ ತಡೆದಿದ್ದೇವೆ ಎನ್ನುವುದರ ಮೇಲೆ ನಿ೦ತಿದೆ!
೪.  ಜೀವನವೆ೦ಬುದು ಒ೦ದು ರಹಸ್ಯ ಕಾದ೦ಬರಿ೦ಯ೦ತೆ! ಕಾದ೦ಬರಿಯ ಪುಟಗಳನ್ನು ಮಗುಚುತ್ತ ಓದುತ್ತಿದ್ದ೦ತೆ, ರಹಸ್ಯ ಅನಾವರಣಗೊಳ್ಳುತ್ತಾ ಹೋಗುತ್ತದೆ!!
೫. ನೇರ ವೈರಿಯನ್ನು ನ೦ಬಬಹುದು ಆದರೆ ಸ೦ಶಯೀ ಮಿತ್ರನನ್ನು ನ೦ಬಲಿಕ್ಕಾಗದು!
೬.   ಇನ್ನು ಹೆಚ್ಚು ಕಲಿಯಲಾಗದು.. ಕಲಿತದ್ದು ಸಾಕು! ಎ೦ದು ನಾವು ನಿರ್ಧರಿಸಿದ  ಕ್ಷಣದಿ೦ದಲೇ ಬದುಕು ಮಹಾ ಬೋರೆನ್ನಿಸತೊಡಗಿ, ಬದುಕಿನಲ್ಲಿನ ಆಸಕ್ತಿಯನ್ನು ಕಳೆದುಕೊ೦ಡು ಬಿಡುತ್ತೇವೆ!
೭. ಹೆಚ್ಚೆಚ್ಚು ಸ್ನೇಹಿತರನ್ನು ಮಾಡಿಕೊಳ್ಳಲು ಹೋದರೆ ಯಾರನ್ನೂ ಉಳಿಸಿಕೊಳ್ಳಲಾಗದು!
೮. ಯಾವಾಗ ನಾವು ದುಷ್ಟಕೂಟದಲ್ಲಿ ಬ೦ಧಿಯಾಗುತ್ತೇವೆಯೋ ಆಗ ನಮ್ಮನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯಲು ಆ ದೇವರೂ  ಅಸಹಾಯಕನಾಗುತ್ತಾನೆ!
೯. ದೇವರನ್ನು ಬೇಡದೇ, ಅವನನ್ನು ಸ್ಮರಿಸದಿದ್ದ ಮೇಲೆ, ನಮ್ಮ ಬದುಕಿನ ಮಿಶ್ರ ಫಲಿತಾ೦ಶಗಳ ಬಗ್ಗೆ ಅವನನ್ನು ಟೀಕಿಸಿ ಏನೂ ಪ್ರಯೋಜನವಿಲ್ಲ!
೧೦. ಮೌನವು ಅತ್ಯುತ್ತಮ ಸ೦ವಹನ ಮಾಧ್ಯಮವೆ೦ದು ಒಪ್ಪಿಕೊ೦ಡವರೇ ನಮ್ಮ ಮೌನವನ್ನು ಟೀಕಿಸುತ್ತಾರೆ!
೧೧. ನಾವು ನಮ್ಮ ವಿಚಾರವನ್ನು ವ್ಯಕ್ತಪಡಿಸುವಾಗ ತೋರುವ ತಾಳ್ಮೆಯನ್ನು ಮತ್ತೊಬ್ಬರ ವಿಚಾರವನ್ನು ಕೇಳುವಾಗ ತೋರುವುದಿಲ್ಲ!
೧೨. ಧನಾತ್ಮಕ ಚಿ೦ತನೆಯು  ಕೇವಲ ನಮ್ಮಲ್ಲಿನ ನಿರಾಶೆಯನ್ನು ಹತ್ತಿಕ್ಕಿಕೊಳ್ಳಲು ಮಾತ್ರವೇ ಅಲ್ಲ ಬದಲಾಗಿ ಮು೦ಬರುವ ಸಮಸ್ಯೆಗಳನ್ನು ಎದುರಿಸಲು ಬೇಕಾಗುವ ನೈತಿಕ ಶಕ್ತಿಯನ್ನೂ   ಪ್ರಚೋದಿಸುತ್ತದೆ!
೧೩.  ನೆಲದ ಮೇಲೆ ನಿ೦ತು, ಮತ್ತೊಬ್ಬರ ಎತ್ತರವನ್ನು ಗಮನಿಸುತ್ತಾ ಇರುವ ಬದಲು, ನಾವೇ ಎತ್ತರದಲ್ಲಿದ್ದುಕೊ೦ಡು, ಉಳಿದವರು ನಮ್ಮ ಎತ್ತರವನ್ನು ಗಮನಿಸುವ೦ತೆ ಮಾಡಬೇಕು!!
೧೪. ಒಬ್ಬ ಉತ್ತಮ ಸ್ನೇಹಿತನನ್ನು ಹೊ೦ದುವದು ಎಷ್ಟು ಕಷ್ಟವೋ ಹಾಗೆಯೇ ನಾವು ಮತ್ತೊಬ್ಬರಿಗೆ ಉತ್ತಮ ಸ್ನೇಹಿತರಾಗುವುದೂ ಸಹ ಕಷ್ಟವೇ!
೧೫. ಕೆಳಕ್ಕೆ ಗಮನಿಸುತ್ತಾ ಮೇಲಕ್ಕೇರಿದಲ್ಲಿ, ಮೇಲೇರಿದ ನ೦ತರ , ನಮ್ಮ ಕಾಲಡಿಯು ನಮಗೆ ಬೇರೆ ಎನಿಸುವುದಿಲ್ಲ!

Wednesday, July 18, 2012

ಯಥಾ ಚಿತ್ತಂ ತಥಾ ವಾಚಃ


ಯಥಾ ಚಿತ್ತಂ ತಥಾ ವಾಚಃ ಯಥಾವಾಚಸ್ತಥಾ ಕ್ರಿಯಾಃ |
ಚಿತ್ತೆ  ವಾಚೆ    ಕ್ರಿಯಾಯಾಂ ಚ ಸಾಧೂನಾಂ ಏಕ ರೂಪತಾ ||

ಮನಸ್ಸಿನಲ್ಲಿರುವಂತೆಯೇ ಮಾತನಾಡುತ್ತಾರೆ, ಮಾತಿನಂತೆಯೇ ನಡೆದುಕೊಳ್ಳುತ್ತಾರೆ, ಮನಸ್ಸು ಮತ್ತು ಮಾತು, ಕ್ರಿಯೆಗಳಲ್ಲಿ ಸತ್ಪುರುಶರಾದವರು ಒಂದೇ ರೀತಿಯಾಗಿರುತ್ತಾರೆ,

-Sadyojatabhatta


Tuesday, July 17, 2012

ಅವನ ನಂಬು, ಭಯವ ಬಿಡು


ನಾಲ್ಕು ವೇದದ ಸಾರ
ಗೀತೋಪನಿಷತ್ತುಗಳ ಸಾರ
ಭಯವ ಬಿಡದಿರೆ
ಬದುಕು ಬಲು ಬಾರ||

ಅಮ್ಮನ ಮಡಿಲಲಿ ಕಂದನಿಗೆಲ್ಲಿ ಭಯ?
ಅವನ ನಂಬಿದರೆ ನಮಗಿಲ್ಲ ಭಯ||

"ಸ್ಪೀಕಿಂಗ್ ಟ್ರೀ "  ತಾಣದಲ್ಲಿ ಪ್ರಕಟವಾಗಿರುವ ಈ ಬರಹ  ಸೊಗಸಾಗಿದೆ. ನೀವೂ ಓದಿ, ಯುವ ಮಿತ್ರರೂ    ಓದುವಂತೆ ಮಾಡಿ
-ಶ್ರೀಧರ್

“Every day individuals use faith to overcome fear. As polar opposites, fear and faith cannot exist at the same time. Fear involves a tightening of the senses whereas faith requires a complete release of control. Take these steps to learn your core fears and how to replace them with faith.”


Perhaps you are reading this blog because you know that fears keeps you stuck in at least part of your life, part of the time. From my personal life experience I can say that fear is responsible for much, if not most, frustration and failure. When we learn to work with and overcome our fears and anxiety, we step into a world of virtually unlimited possibility and satisfaction. It is imperative to recognize the differences between fear and faith. Fear is a learned response whereas faith is instinctual. What do you need in order to overcome the fear? Simple child-like faith and trust in God, which enables you to make a leap of faith despite your fear. Faith starts with a belief God will take care of us. We ought to have faith. Call on whatever form of Higher Power you believe in, asking for insight, support, and grace to overcome your fears and anxiety.

                                           Of all base passions, fear is the most accursed.
                                                                               --William Shakespeare

Fear is the most common negative emotion. It is universal. It drains away our physical and mental energy. Fear is a great stumbling block to progress. The origin, type and intensity of fear vary from person to person. Nevertheless, fear haunts us all. It is a great shame that despite our inherent divinity, we continue to be held hostage by the psychosis of fear.

Fear begets anxiety. Anxiety together with doubt and indecisiveness plays havoc with our physical and mental health. Fear hampers initiative, suppresses skill, strangles ingenuity and in the process curbs our natural instinct of marching towards higher level of consciousness. The science of introversion says that so long as we continue to identify ourselves with gross body and subtle mind and intellect, fear will keep chasing us like a shadow.

“Nothing in life is to be feared. It is only to be understood.” –Marie Curie

Fear keeps us in constant state of agitation and turmoil. Fear gives birth to mental weakness which results in constant stress and strain. It brings misery and misfortune. Weakness is death. Cowards die many times before death. Weakness emanating from fear makes us live life under delusion. Delusion limits us to the body-mind complex. Deluded, we continue to suffer in the cauldron of fear and weakness. The moment a person becomes aware of his true divine nature it would instantly dawn on him that there is nothing in this world that he really need to fear.
Fear of failure is the shortest route to defeat and ultimately how we think determines what we do. In every walk of life, only if we channelise our energy positively and shun negativity can we can achieve our full potential. Believe me only good train of thoughts will take you to great destination. In life, as in game of chess, one needs forethoughts to win. Fear is simply lack of faith. It doesn’t mean you do not have faith in God. It means you lack faith in what God can do for you.

 “I have often been afraid, but I wouldn’t give in to it. I made myself act as though I was not afraid, and gradually my fear disappeared.”                      � �                --- Theodore Roosevelt

Fear is one of the greatest problems in life. A mind that is caught in fear lives in confusion, in conflict, and therefore must be violent, distorted, and aggressive. Fear is the root cause of all misery in the world which devours our strength. We do all sorts of silly things because we have accepted to be weak and pliable. In other words, weakness is both the cause and the effect of fear. So it is important to overcome weakness and embrace courage and strength. Do not blame others for your misery and misfortune. The circumstances in which one is placed are of one's own making. You are what you have made yourself. You alone can undo it. None will do it for you. Grumbling and brooding over failures and weaknesses will not help. Do not think you are helpless, bound and shackled by karma. So what, if you have done some wrong in the past — it is never too late to right them and become stronger. Strength has to come from within you. You are an integral constituent of the Infinite Spirit.

 One of the major causes of fear is that we do not want to face ourselves as we are.  We often fear the criticism of others and when it does happen, we take it to heart. For this reason, even into adulthood, we're often waiting for someone to tell us it's OK to "cross the street" to our God-given purpose because we are afraid that if we blow it we'll look like an idiot. No matter who you are, or what you want to accomplish, the only leader you need to move toward your purpose is the Holy Spirit. If God is for you, who can be against you?  Which also begs the question, "Why do we fear criticism?"
Just as peas and carrots, rice and beans, and peanut butter and jelly go together, the fear of criticism and self-protection are also a pair. If you fear criticism—guaranteed—you're also self-protective. But there is a high price to pay for allowing the fear of criticism and self-protection to have their way in our lives and to get hold of our minds.
Can you imagine what Christ's life on earth would have been like if He had been self-protective and feared criticism?

When we fear criticism and are overly self-protective, we miss out on being a gift to others. You see, your purpose is not just about you; it's about many people that God wants to influence and help through you. So if you struggle with criticism and self-protection, get alone with God and ask Him to give you the strength you need to move forward in your purpose in faith. And remember, you are living your life for the approval of just One.

 “You gain strength, courage, and confidence by every experience in which you really stop to look fear in the face.”   ---Eleanor Roosevelt

Believe me: There is no satisfaction in this world quite like overcoming fear. If you prepare for a frontal assault by thinking, believing and praying, you have all the ingredients to conquer and overcome fear in your mind and in your heart.
Here are three suggestions to help you to overcome fear:-

1.  We become what we think. Start thinking courage:  There is a law of attraction in this world where like responds to like. If you send out thoughts of fear, what are you going to get back? Fear only.  But, on the contrary, if you think thoughts of courage, then courage will flow to you. The more courageous your thinking, the greater the results will be.

2. Cancel out fear by faith:  Take large “doses” of faith into your mind. Work at it zealously and constantly, with the de­finite purpose of saturating your very consciousness with faith. Search the Scriptures for passages that express the greatest faith men have ever had. Commit these to memory. Say them over and over, until they take hold of you, as they will, until ­finally they completely dominate your thinking. In my school “Bishop Cotton”, Simla, I learnt to bear in mind :  “I sought the Lord, and He heard me, and delivered me from all my fears” (Bible: Psalm 34:4). Another is: I will fear no evil: for thou art with me” (Bible: Psalm 23:4).

3. Pray for courage: I believe a person should pray for courage as he prays for his daily bread. God will give it to you, because He will give you Himself.

Most of us have faith in something: In ourselves, someone, a religion, philosophy or science. Without ‘Faith’ we tend to question everything, wasting energy and memory space. Faith provides stability and security to us   and helps us to move forward, providing purpose and meaning to lives. Deep ‘Faith’ can remove fear completely. ‘Faith’ is indeed a great enabling force. This force should be harnessed for making ourselves the better human beings.


I conclude with this verse: Dear Lord, “My fear has trapped and consumed me. But I am tired of living under the weight of my fears. This verse reassures me of your presence and confirms that you are able to deliver me from my trouble. Please give me your love and your power to replace these fears. Your perfect love casts out my fear. I thank you for promising to give me the peace that only you can give. I receive that peace now as I ask you to still my troubled heart. Because you are with me, I don't have to be afraid”.  Amen.
Source : From Quest for Inspiration : authored by Col Gurnam Singh

"Thanks to Speaking Tree"

Monday, July 16, 2012

ಓದುವ ವಿಧ್ಯಾರ್ಥಿಗಳಿಗೆ ಸಹಾಯ ಮಾಡಿ, ಅದು ಅವರಿಗೆ ಜೀವನ ಕೊಡುತ್ತೆ



ನಾನು S S L C  ಓದುತ್ತಿದ್ದ ಸಮಯದಲ್ಲಿ ನಮ್ಮ ಮನೆಗೆ ಒಬ್ಬ ವಿಧ್ಯಾರ್ಥಿ ವಾರಾನ್ನಕಾಗಿ ಬರುತ್ತಿದ್ದ.. ವಾರಾನ್ನ ಎಂದರೆ ವಾರದ ಒಂದು ದಿನ, ಒಂದು ಹೊತ್ತಿನ ಅಥವಾ ಎರಡು ಹೊತ್ತಿನ ಊಟವನ್ನು ಮಾಡಿಕೊಂಡು ಹೋಗುವುದು. ಆ ದಿನಗಳಲ್ಲಿ ಹಳ್ಳಿಯಿಂದ   ಬರುವ ಬಡ ಕುಟುಂಬದ ವಿಧ್ಯಾರ್ಥಿಗಳಿಗೆ ವಾಸಮಾಡಲು ಅನಾಥಾಲಯಗಳಲ್ಲಿ ಜಾಗ ಸಿಗುತ್ತಿತ್ತು. ಆದರೆ, ಊಟಕ್ಕೆ ಈ ರೀತಿಯಾಗಿ ತಮ್ಮದೇ ವರ್ಗದ ಮನೆಗಳಲ್ಲಿ ಉಚಿತವಾಗಿ ವಾರದ ಒಂದು ದಿನ ಅಥವಾ ಅರ್ಧ ದಿನದ ಊಟದ ವ್ಯವಸ್ಥೆ ಕೇಳಿಕೊಂಡು ಬರುತ್ತಿದ್ದರು. ಅಂದಿನ ದಿನಗಳಲ್ಲಿ ಹೋಟೆಲ್ಲಿಗೆ ಅಥವಾ ಮೆಸ್ಸಿಗೆ ಹೋಗುವಷ್ಟು ಅನುಕೂಲ ಹೆಚ್ಚಿನವರಲ್ಲಿ ಇರುತ್ತಿರಲಿಲ್ಲ.  ಹೀಗೆ ಕೇಳಿಕೊಂಡು ಬಂದ ವಿಧ್ಯಾರ್ಥಿಗಳ ಕುಲ ಗೋತ್ರ ವಿಚಾರಿಸಿಕೊಂಡು ಯಥಾನುಶಕ್ತಿ ವಿದ್ಯಾರ್ಥಿಗಳಿಗೆ ವಾರನ್ನಕ್ಕೆ ಒಪ್ಪಿಗೆ ನೀಡುತ್ತಿದ್ದರು.  ಆ ವಿಧ್ಯಾರ್ಥಿ ನಿಗದಿತ ವಾರದ ದಿನದಂದು ಬಂದು ಊಟ, ತಿಂಡಿ ಮುಗಿಸಿ ಹೋಗುತ್ತಿದ್ದ.  ಪ್ರತಿ ವಿಧ್ಯಾರ್ಥಿ ಹೀಗೆ ಹತ್ತಾರು ಮನೆಗಳ ವ್ಯವಸ್ಥೆ ಮಾಡಿಕೊಂಡು ತಮ್ಮ ವಿಧ್ಯಾಭ್ಯಾಸ ಮುಗಿಸುತ್ತಿದ್ದರು.

ನಮ್ಮ ಮನೆಯಲ್ಲಿ ಕೂಡ ಮೂವರು ವಿಧ್ಯಾರ್ಥಿಗಳಿಗೆ ಈ ರೀತಿಯ ವಾರಾನ್ನದ ವ್ಯವಸ್ಥೆ ಇತ್ತು. ನಮ್ಮದು ಬಡ ಕುಟುಂಬವೇ.  ನಮ್ಮ ಮನೆಯಲ್ಲೂ ಆರು ಜನ ಮಕ್ಕಳೊಟ್ಟಿಗೆ ನಮ್ಮ ಅಪ್ಪ ಅಮ್ಮ ಸೇರಿ ಎಂಟು ಮಂದಿಯ ಜೊತೆಗೆ ವಾರಾನ್ನದ ವಿಧ್ಯಾರ್ಥಿಯ   ಊಟವು    ಸೇರುತ್ತಿತ್ತು .  ಇಷ್ಟು  ಜನಗಳ   ತುತ್ತಿನ  ಚೀಲ  ತುಂಬುವ   ಹೊಣೆ  ನನ್ನ  ತಂದೆಯ  ಏಕಮಾತ್ರ  ಆದಾಯದಿಂದ  ಸಾಗುತಿತ್ತು.   ಒಮ್ಮೆ ಕೂಡ ನನ್ನ ಅಪ್ಪ ತನಗಾಗುತ್ತಿದ್ದ ಹಣಕಾಸಿನ ಮುಗ್ಗಟ್ಟಿನ ಪರಿಸ್ಥಿಯನ್ನು  ನಮ್ಮೆದುರಿಗೆ ಎಂದಿಗೂ ಹೇಳಿಕೊಂಡವರಲ್ಲ.

ಒಂದು ದಿನ ರಾತ್ರಿ      ಎಲ್ಲ ಎಂಟು ಜನರು ಊಟಕ್ಕೆ ಕೂತಿದ್ದೆವು.  ನನ್ನ ಅಮ್ಮ ಎಲ್ಲರಿಗೂ ಅನ್ನ ಬಡಿಸಲು ಪ್ರಾರಂಭ ಮಾಡಿದರು.  ಅಂದು ಬೆಳಿಗ್ಗೆ ಮಾಡಿ ಉಳಿದ ಅನ್ನವನ್ನು ಸಂಜೆಗೆ ಬಡಿಸಲು ಇಟ್ಟಿದ್ದರು. ಬಿಸಿಬಿಸಿ  ಅನ್ನ ಬಡಿಸುವ  ಬದಲು ಬೆಳಗಿನ ತಂಗಳು ಅನ್ನವನ್ನು ವಾರಾನ್ನದ ಹುಡುಗನ  ಕಡೆಯಿಂದ ಬಡಿಸಲು ಅಮ್ಮ ಪ್ರಾರಂಭಿಸಿದರು.  ಅಮ್ಮನ ಉದ್ದೇಶ ತಣ್ಣನೆಯ ಅನ್ನ ಖಾಲಿಯಾದೊಡನೆ ಬಿಸಿ ಅನ್ನ ಬಡಿಸುವ ಯೋಚನೆ. ಆ ಹುಡುಗ ಮೊದಲಲ್ಲೇ ಕೂತ ಕಾರಣ ಆ ಅನ್ನ ಅವನ ತಟ್ಟೆಗೆ ಅಮ್ಮ ಬಡಿಸಿದರು. ಆಚೆ ಬದಿಯಲ್ಲಿ ಕೂತ ನನ್ನ ಅಪ್ಪ "ಆ ಹುಡುಗನಿಗೆ ಬಿಸಿ ಅನ್ನ ಬಡಿಸು, ಅವನಿಗೆ ತಂಗಳು ಅನ್ನ ಬೇಡ " ಎಂದರು   .  ತಕ್ಷಣ    ಆತನಿಗೆ    ಬಡಿಸಿದ    ತಂಗಳು ಅನ್ನ ತೆಗೆದು    ಬಿಸಿ ಅನ್ನ ಬಡಿಸಿದರು ಅಮ್ಮ.  ಅಮ್ಮನಿಗೆ  ಕೊಂಚ  ಬೇಸರ  ಹಾಗೂ  ಇರಿಸುಮುರುಸು ಆಯಿತು .   ಅವರ  ಮುಖದಲ್ಲಿ  ಆದ   ಬದಲಾವಣೆ  ಇತರರಿಗೆ     ಗೊತ್ತಾಗುತ್ತಿತು  .  ಇದನ್ನು   ಆ ಹುಡುಗನು   ಗಮನಿಸಿದ   ಆತನಿಗೂ   ತುಂಬಾ            ಕಷ್ಟ    ಎನಿಸಿತು   .  ತಕ್ಷಣ  ಆ ಹುಡುಗ "ಇಲ್ಲ,.....  ನನಗೂ ಬೆಳಗಿನ ಅನ್ನವನ್ನೇ  ಹಾಕಿ , ಬಿಸಿ ಅನ್ನ ಬೇಡ" ಎಂದು ಬೇಡಿಕೊಂಡ .   ಪಕ್ಕದಲ್ಲಿ  ಇದ್ದ  ನಮ್ಮೆಲ್ಲರಿಗೂ  ಅಪ್ಪನ  ಮಾತು  ಆ ಸಮಯದಲ್ಲಿ ಸರಿ  ಅನ್ನಿಸಲಿಲ್ಲ .   ಇದನ್ನೆಲ್ಲಾ  ಸೂಕ್ಹ್ಮವಾಗಿ  ಗಮನಿಸಿದ  ನನ್ನ ತಂದೆಯವರು,          " ನೀನು       ಬಿಸಿ ಅನ್ನವನ್ನೇ   ಊಟಮಾಡು .  ಪರೀಕ್ಷೆ   ಸಮಯ  . ನೀನು  ಹುಷಾರು  ತಪ್ಪಿ  ಮಲಗಿದರೆ  ನೋಡಲು   ಯಾರಿದ್ದಾರೆ   .  ಈ ಮಕ್ಕಳಿಗೆ   ನಾನಿದ್ದೇನೆ.   ನಿಂಗೆ  ಇಲ್ಲಿ  ಯಾರಿದ್ದಾರಪ್ಪ ?  ಊಟ ಮಾಡು , ಚನ್ನಾಗಿ  ಓದು "  ಎಂದು ಹೇಳಿದರು.  ಈ ಮಾತು  ಕೇಳಿದ  ಅಮ್ಮನ  ಮುಖದಲ್ಲಿ     ಒಂದು ರೀತಿಯ ಸಮಾಧಾನ  ಕಂಡಿತು ಎಲ್ಲರು  ಊಟ ಮುಗಿಸಿ ಎದ್ದರು  .

ನಂತರದಲ್ಲಿ ನಮ್ಮನ್ನೆಲ್ಲ ಕೂರಿಸಿಕೊಂಡು ವಾರಾನ್ನಕ್ಕೆ ಬರುವ ಹುಡುಗರ ಕಷ್ಟಗಳು ಎಷ್ಟಿರುತ್ತದೆ? ಎಂಬುದನ್ನು ತಮ್ಮ ಜೀವನದಲ್ಲಿ ಆದ ಘಟನೆಗಳನ್ನು ವಿಸ್ತಾರವಾಗಿ ಹೇಳಿದರು. ನಮ್ಮೆಲ್ಲರಿಗೂ ಆಗ ಅಪ್ಪನ ಬಗ್ಗೆ ಹೆಮ್ಮೆ ಎನಿಸಿತು. ಈ ಘಟನೆ ಚಿಕ್ಕದಾಗಿ ಕಾಣಬಹುದು, ಆದರೆ ಇದು ನಮಗೆ ಹೇಳಿದ ಪಾಠ ಮಾತ್ರ ತುಂಬಾ ದೊಡ್ಡದಾಗಿತ್ತು. ಯಾವ ಬೀಜದ ಶಕ್ತಿ ಹೇಗೆ ಇರುತ್ತೆ ಎಂಬುದನ್ನು ಅರಿಯಲು ಕಾಯಬೇಕಾಗುತ್ತದೆ. ಒಮ್ಮೆಲೇ ತೀರ್ಮಾನಿಸಲು ಸಾಧ್ಯವಾಗದು.  ನಮ್ಮ ಮನೆಯಲ್ಲಿ ವಾರಾನ್ನ ಮಾಡಿದ ಒಬ್ಬ ವಿದ್ಯಾರ್ಥಿ ಉನ್ನತ ಹುದ್ದೆಗೆ ಸೇರಿಕೊಂಡಾಗ ನನ್ನ ಅಪ್ಪನ ಆಶೀರ್ವಾದ ಪಡೆದು ಹೋಗಲು ಬಂದಿದ್ದರು. ಆತ " ನಿಮ್ಮ ಉಪಕಾರ ಮರೆಯಲಾರೆ, ನಿಮ್ಮ ಋಣ ಹೇಗೆ ತೀರಿಸಲಿ? " ಎಂದು ಕೇಳಿದಾಗ ನನ್ನ ಅಪ್ಪ ಕೊಟ್ಟ ಉತ್ತರ " ನಿನ್ನಂತೆ ಇರಬಹುದಾದ ವಿದ್ಯಾರ್ಥಿಗೆ ಸರಿಯಾದ ಸಮಯದಲ್ಲಿ ಸಹಾಯ ಮಾಡು, ನಿನ್ನ ಋಣ ತೀರುತ್ತೆ " ಎಂದು ಆಶೀರ್ವಾದ ಮಾಡಿ ಕಳುಹಿಸಿ ಕೊಟ್ಟರು.

ನನ್ನ ಅಪ್ಪ  ನಮಗೂ ಪದೇ ಪದೇ ಹೇಳುತ್ತಿದ್ದರು. " ಓದುವ ವಿಧ್ಯಾರ್ಥಿಗಳಿಗೆ ಸಹಾಯ    ಮಾಡಿ, ಅದು ಅವರಿಗೆ ಜೀವನ ಕೊಡುತ್ತೆ  "  ಈ ಮಾತು ನಮಗೆ ಯಾವಾಗಲು ಜ್ಞಾಪಕಕ್ಕೆ ಬರುತ್ತದೆ.  ಪುಣ್ಯವಶಾತ್ ನಾನೂ ಕೂಡ ಒಂದು ವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಭಗವಂತ ಕರುಣಿಸಿದ ಕಾರಣ ಹಲವಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ  ನನ್ನದಾಗಿದೆ. ನನ್ನ ತಂದೆಯವರು  ನನಗೆ ವಿದ್ಯಾಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದು ಕೇಳಿಯೇ ತುಂಬಾ ಖುಷಿ ಪಟ್ಟು, "ಈ ಸದವಕಾಶವನ್ನು ಸರಿಯಾಗಿ ಬಳಸಿಕೋ" ಎಂದು ಹಲವಾರು ಬಾರಿ ನನಗೆ ಹೇಳಿದ್ದುಂಟು.


ಹೆಚ್ ಏನ್ ಪ್ರಕಾಶ್ 

ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್

ಇತ್ತೇಚೆಗೆ ಫೆಸ್ ಬುಕ್ ನ ವೇದಿಕೆಯೊಂದರಲ್ಲಿ ಕೆಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಚರ್ಚೆ ನಡೆಯುತ್ತಿತ್ತು. ಯಾರೋ ನನ್ನನ್ನು ಅಲ್ಲಿ ಎಳೆದುಕೊಂಡು ಹೋಗಿ ಸೇರಿಸಿದರು. ನನಗೆ ಅಂತಹ ಚರ್ಚೆಗಳು ಅನಾವಶ್ಯಕ ಅನಿಸಿದ್ದರಿಂದ ನಿರಾಸಕ್ತನಾಗಿದ್ದೆ. ಆದರೆ ಅಲ್ಲಿ ನಡೆಯುವ ಕೆಲ ಅಸಂಬದ್ಧ ವಿಷಯ ಮಂಡನೆಯನ್ನು ನೋಡಿ ಸಹಿಸಲಾಗದೇ ನಾನೂ ಚರ್ಚೆಯಲ್ಲಿ ಧುಮುಕಿದೆ. ಅನೇಕ ವಿಷಯಗಳ ಚರ್ಚೆಯಾದ ನಂತರ ಮತ್ತು ಇತ್ತೀಚಿನ ಕೆಲ ವಿದ್ವಾಂಸರ ಜನಪ್ರಿಯ ಪ್ರವಚನ ಮತ್ತು ಪುಸ್ತಕಗಳನ್ನು ಓದಿದಾಗ, ಹಾಗೂ ಬೆಂಗಳೂರಿನಂಥ ನಗರದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳ ಜನರ ಜೊತೆ ಕೆಲ ದಿನಗಳಿಂದ ಒಡನಾಡಿದ ನಂತರ ಗಮನಕ್ಕೆ ಬಂದ ವಿಷಯ ಏನೆಂದರೆ, ಭಾರತದ ಬಹುತೇಕ ಅಕ್ಷರಸ್ಥರು ವಿಚಾರವಂತರು ನಮ್ಮ ಭಾರತೀಯ ಧಾರ್ಮಿಕ ಆಚರಣೆಗಳ ಹಿಂದಿನ ಮರ್ಮಗಳನ್ನು ಅಥವಾ ಉದ್ದೇಶಗಳನ್ನು ತಿಳಿಯುವಲ್ಲಿ ಆಸಕ್ತರಾಗಿದ್ದಾರೆ. ನಗರಗಳಲ್ಲಿ ಅಂಥವರ ಸಂಖ್ಯೆ ತುಂಬಾ ಬೆಳೆಯುತ್ತಿದೆ. ಆದರೆ ಅಂಥವರಿಗೆ ಅವರಿಗೆ ಬೇಕಾದ ವಿಷಯಗಳನ್ನು ತಿಳಿಯುವ ಸರಿಯಾದ ''ದಾರಿ'' ಗೊತ್ತಿಲ್ಲದ ಕಾರಣ ದೇವಸ್ಥಾನಗಳ ಅರ್ಚಕರು ಹಾಗೂ ಟಿವಿ ಗಳಲ್ಲಿ ಬರುವ ಏನೂ ಓದಿಕೊಳ್ಳದ ನಿರ್ಲಜ್ಜ ಜ್ಯೋತಿಷಿಗಳನ್ನು ಆಶ್ರಯಿಸುತ್ತಿದ್ದಾರೆ. ಇಂತಹ ಜನ ಸಮೂಹದ ದೃಷ್ಟಿಯಲ್ಲಿ ಟಿವಿಗಳಲ್ಲಿ ಅಲ್ಪ-ಸ್ವಲ್ಪ ಚೆನ್ನಾಗಿ ಮಾತಾಡುವವರು ಕೂಡ ಮಹಾತ್ಮರಾಗಿ ಕಾಣುತ್ತಿದ್ದಾರೆ, ಹಾಗಾಗಿ ಜ್ಯೋತಿಷ್ಯದ ಕಾರ್ಯಕ್ರಮಗಳಿಗೆ ವಿಪರೀತ TRP ಬರುತ್ತಿದೆ ಮತ್ತು ಎಲ್ಲ ಚಾನೆಲ್ ಗಳು ಬೆಳಗಿನ ಹೊತ್ತು ಇಂತಹ ಕಾರ್ಯಕ್ರಮಗಳಿಗೆ ಮೀಸಲಾಗುತ್ತಿವೆ. ಇತ್ತೀಚಿನ ಶ್ರೀಮಂತ ಆಂಗ್ಲ ಶಾಲೆಗಳಲ್ಲಿ ಕೂಡ ಹಬ್ಬಗಳು ಯಾಕೆ ಮಾಡಬೇಕು ? ಮುಂತಾದ ವಿಷಯಗಳನ್ನು ಹಬ್ಬಗಳ ಮುನ್ನಾ ದಿನಗಳಲ್ಲಿ ಮಕ್ಕಳಿಗೆ ಹೇಳಿ ಕಳಿಸುತ್ತಿರುವುದು ಆಶ್ಚರ್ಯದ ವಿಚಾರ. ಇತ್ತೀಚೆಗೆ ನಾನು ಭೇಟಿಯಾದ ಮಹಿಳೆಯೊಬ್ಬರು ''ಈ ಯುಗಾದಿ ಹಬ್ಬದ ಬಗ್ಗೆ ನನಗಿಂತ ನನ್ನ ಆರು ವರ್ಷದ ಮಗುವಿಗೆ ಚೆನ್ನಾಗಿ ಗೊತ್ತಿದೆ'' ಎಂದು ಹೇಳಿಕೊಳ್ಳುವಾಗ ಆಕೆಯ ಮುಖದಲ್ಲಿ ಕೀಳರಿಮೆಯ ಜೊತೆಗೆ..''ನನ್ನ ಮಗನನ್ನು ಅಂತಹ ಉತ್ತಮ ಶಾಲೆಯಲ್ಲಿ ಒದಿಸುತ್ತಿದ್ದೇವೆ'' ಎಂಬ ಜಂಬ ಹೆಚ್ಚಾಗಿ ಕಾಣುತ್ತಿತ್ತು. ನಿಮ್ಮ ಮಕ್ಕಳಿಗೆ ಇಂಥದ್ದನ್ನೆಲ್ಲ ಕಲಿಸುತ್ತಿದ್ದೇವೆ ಎಂಬ ಪ್ರಲೋಭನೆಯೊಂದಿಗೆ ಹೆಚ್ಚಿನ ಡೊನೇಶನ್ ಪೀಕುತ್ತಿದ್ದೇವೆ ಎಂಬ ವಿಷವನ್ನು ಗಮನಕ್ಕೆ ಬಾರದ ಹಾಗೆ ಮಾಡುವ ಶಿಕ್ಷಣ ವ್ಯವಸ್ಥೆಯ ಹೊಸ ವ್ಯಾಪಾರ ತಂತ್ರ ಇದು ಎಂದು ಆಕೆಗೆ ಅರ್ಥವಾಗಿರಲಿಲ್ಲ. ಒಟ್ಟಿನಲ್ಲಿ ''ನೀನು ದುಡ್ಡು ಕೊಡು, ನಾವು ಎಲ್ಲ ನೀಡುತ್ತೇವೆ'' ಎನ್ನುವ ವ್ಯಾಪಾರ ತಂತ್ರ. ಮತ್ತು ''ನಾವು ದೊಡ್ದು ಕೊಡುತ್ತೇವೆ, ಹಾಗಾಗಿ ನಮ್ಮ ಜವಾಬ್ದಾರಿ ಎಲ್ಲ ಮುಗಿಯಿತು'' ಎನ್ನುವ ಪೋಷಕರ ಮನಸ್ಥಿತಿ- ಈ ಎರಡೂ ಒಟ್ಟೊಟ್ಟಿಗೆ ಕಂಡು ಬರುತ್ತಿವೆ. ಈ ಸ್ಥಿತಿ ಶಿಕ್ಷಣದಲ್ಲಿ ಮಾತ್ರ ಅಲ್ಲ, ಇಡಿಯಾದ ಮಾರುಕಟ್ಟೆ....ಇದೇ ದಾರಿಯಲ್ಲಿ ಮುನ್ನುಗ್ಗುತ್ತಿದೆ. ಭಾರತೀಯ ಧಾರ್ಮಿಕ ಆಚರಣೆಗಳ ವಿಷಯಕ್ಕೆ ಮತ್ತೆ ಬರುವುದಾದರೆ, ನಗರ ಜೀವನ ಹುಟ್ಟು ಹಾಕುವ ಅನೇಕ ಸಮಸ್ಯೆಗಳ ನಿವಾರಣೆ, ನಾಳಿನ ಬಗೆಗಿನ ಭಯ, ಜ್ಞಾನದ ಕೊರತೆ, ಅತಿ ಆಸೆ ಮುಂತಾದ ಅನೇಕ ಕಾರಣಗಳಿಗಾಗಿ ಜನ ಜ್ಯೋತಿಷಿಗಳ ಮತ್ತು ದೇವಸ್ಥಾನಗಳ ಮುಂದೆ ತಂಡೋಪ ತಂಡವಾಗಿ ಕಾಣಿಸುತ್ತಿದ್ದಾರೆ. ಮಂತ್ರಗಳ -ಸ್ತೋತ್ರಗಳ ಕಲಿಯುವುವಿಕೆ ಮುಂತಾದವುಗಳು ಹೆಚ್ಚುತ್ತಿವೆ. ಇನ್ನು ಅನೇಕರು ಪೂಜಾ-ಆಚರಣೆಗಳ ಹಿನ್ನೆಲೆಯನ್ನು ತಿಳಿಯುವ ನಿಟ್ಟಿನಲ್ಲಿ ಅತೀ ಉತ್ಸುಕರಾಗಿದ್ದಾರೆ. ಈ ಎಲ್ಲ ಆಚಾರ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆ ಹೊಂದಿವೆಯೇ ಇಲ್ಲವೇ ? ಎಂದು ತಿಳಿಯುವ ಕುತೂಹಲಿಗಳ ಸಂಖ್ಯೆಯೂ ದೊಡ್ಡದಿದೆ. ಈ ಉದ್ದೇಶದ ಹಿಂದೆ....ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರಣ ಇಲ್ಲ . ಶ್ರದ್ಧೆ ಮತ್ತು ಆಸಕ್ತಿ ಇದ್ಯಾವುದೂ ಇಲ್ಲ. ಒಂದು ದೊಡ್ಡ ಸಮುದಾಯವೇ ಸಂಪೂರ್ಣವಾಗಿ ಒಂದು ಸನ್ನಿಗೆ ಒಳಗಾಗಿದೆ .. ಅದೇನೆಂದರೆ ಭಾರತೀಯೇತರ ಧರ್ಮಗಳಲ್ಲಿ ಅಥವಾ ಹಿಂದೂಯೇತರ ಧರ್ಮಗಳಲ್ಲಿ ಎಲ್ಲ ಪಾರದರ್ಶಕವಾಗಿದೆ, ನೆರವಾಗಿದೆ.. ವೈಜ್ಞಾನಿಕವಾಗಿದೆ ಮತ್ತು ಎಲ್ಲ ಸರಿಯಾಗಿದೆ...ಎಂಬ ಭ್ರಮೆಯ ಜೊತೆಗೆ ಭಾರತೀಯ ಆಚರಣೆಗಳು ಕೂಡ ವೈಜ್ಞಾನಿಕ ಎಂದು ಸಾಬೀತು ಪಡಿಸುವ ಹುಕಿಗೆ ಬಿದ್ದು ಅವುಗಳ ಹಿನ್ನೆಲೆಯನ್ನು ತಿಳಿಯುವವರ ಸಂಖ್ಯೆ ಬೆಳೆಯುತ್ತಿದೆ. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸುವ ಜನರು ಹುಟ್ಟಿಕೊಂಡಿದ್ದಾರೆ. ಕಳೆದ ಕೆಲ ಶತಮಾನಗಳಲ್ಲಿ ರಾಜನೈತಿಕ ದಾಸ್ಯದ ಪರಿಣಾಮವಾಗಿ....ಬೌದ್ಧಿಕ ಮತ್ತು ವೈಚಾರಿಕವಾಗಿಯೂ ನಮ್ಮ ಮನಸುಗಲ್ಲಿ ದಾಸ್ಯ ಬೇರೂರಿದೆ. ದಾಸ್ಯ ಮನೋಭಾವದ ಪರಿಣಾಮವಾಗಿ ಪಶ್ಚಿಮ ದೇಶಗಳ ಎಲ್ಲವೂ ಸಾಮಾನ್ಯ ಭಾರತೀಯರ ಕಣ್ಣಿಗೆ sophisticated ಆಗಿ ಕಾಣಿಸುತ್ತದೆ. ನಮ್ಮ ಋಷಿಗಳು ಹೇಳಿದ ಮಾತುಗಳು ನಮಗೆ ಕಾಲ ಕಸವಾದರೆ..ಅದೇ ಮಾತುಗಳನ್ನು ಇಂಗ್ಲಿಷ್ ನಲ್ಲಿ ಹೇಳಿದ ಮ್ಯಾಕ್ಸ್ ಮುಲ್ಲರ್ ಮಾತನ್ನು ನಾವು ಹೆಮ್ಮೆಯಿಂದ ಕೊಟ್ ಮಾಡುತ್ತೇವೆ. ಕನ್ನಡದ ಒಳ್ಳೆ ಪುಸ್ತಕದ ಹೆಸರುಗಳು ಸರಿಯಾಗಿ ತಿಳಿಯದ ನಾವು ಇಂಗ್ಲಿಷ್ ನಲ್ಲಿ ಬರೆದ ತಲೆಹರಟೆ ಪುಸ್ತಕಗಳನ್ನು ದೊಡ್ಡ ಬುದ್ಧಿಜೀವಿಯಂತೆ ಪೋಸ್ ಕೊಟ್ಟುಕೊಂಡು ಓದುತ್ತೇವೆ. ''ನಾನು ಇಂಗ್ಲಿಷ್ ಪುಸ್ತಕ ಓದುತ್ತೇನೆ'' ಎನ್ನುವುದೇ ದೊಡ್ಡ ಹೆಮ್ಮೆ. ಅದರಲ್ಲಿ ಕಸ ತುಂಬಿದೆ ಎಂಬುದು ಅರ್ಥವಾಗುವುದಿಲ್ಲ. ಆದ್ದರಿಂದಲೇ...ಚೇತನ್ ಭಗತ್ ನನ್ನು ''ನೀವು ಭಾರತೀಯರಗಿದ್ದೂ ಕೂಡ ನೀವು ಹಿಂದಿಯಲ್ಲಿ ಯಾಕೆ ಬರೆಯುವುದಿಲ್ಲ''? ಎಂದು ಕೇಳಿದಾಗ ''it's not considered cool to pick up a Hindi book in India '' ಅಂತ ಹೇಳಿದ್ದ... ಅವನಿಗೆ ಮಾರ್ಕೆಟ್ phycology ಚೆನ್ನಾಗಿ ಗೊತ್ತು. ಕಸ ತುಂಬಿ ಕೊಟ್ಟರೂ ನಮ್ಮ ಜನ ಇಂಗ್ಲಿಷ್ ಪುಸ್ತಕ ಓದುತ್ತಾರೆ. ರಸದ ಬಗ್ಗೆ ಅವರಿಗೆ ಗೊತ್ತಿಲ್ಲ.
ಅದೇ ರೀತಿ ನಮ್ಮ ಈ ಧಾರ್ಮಿಕ ಆಚರಣೆಗಳು ಅವೈಜ್ಞಾನಿಕ, ಮತ್ತು ಮೂಢನಂಬಿಕೆಗಳಿಂದ ಕೂಡಿವೆ ಎಂದು ಬಲವಾಗಿ ನಂಬುವ ದಾಸ್ಯ ಮೊನೋಭಾವದ ಸಮೂಹ ಅವುಗಳ ಹಿನ್ನೆಲೆಯನ್ನು, ಮತ್ತು ವೈಜ್ನಾನಿಕತೆಯನ್ನು ತಿಳಿಯುವ ಮೂಲಕ ತಮ್ಮ ಕೀಳರಿಮೆಯನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರದ್ದೆಗೆ ಬದಲಾಗಿ ಕೀಳರಿಮೆ ಈ ಬೆಳವಣಿಗೆಗೆ ಕಾರಣವಾಗುತ್ತಿರುವುದು ನಾಚಿಕೆ ಪಡುವ ವಿಚಾರ. ''ಧರ್ಮ'' ಮತ್ತು ''ಆಧ್ಯಾತ್ಮ'' ಎಂಬ ಈ ಎರಡು ಶಬ್ದಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಪಾರ್ಥಕ್ಕೊಳಗಾದ ಹಾಗೂ ದುರುಪಯೋಗಕ್ಕೊಳಗಾದ ಶಬ್ದಗಳು. ಅವುಗಳ ನಿಜವಾದ ಅರ್ಥ ಸಾಮಾನ್ಯರಿಗೆ ತಿಳಿಸಬೇಕಾದ, ಆಧ್ಯಾತ್ಮ ಬೋಧಿಸಬೇಕಾದ ಪುರಾತನ ಗುರುಪೀಠಗಳು ಶುಲ್ಕ ವಿಧಿಸಿ ಪಾದಪೂಜೆ, ಅಭಿಷೇಕ, ಕುಂಕುಮಾರ್ಚನೆ, ಶ್ರಾದ್ಧ ಮುಂತಾದವುಗಳನ್ನು ಮಾಡಿಸುವ ಸೇವಾ ಕೌಂಟರ್ ಗಳಾಗಿ ಪರಿವರ್ತನೆಗೊಂಡಿವೆ. ರಾಜರ ಆಶ್ರಯದಲ್ಲಿ ಜ್ಞಾನ ಕೇಂದ್ರ ಗಳಾಗಿ ಕೆಲಸ ಮಾಡುತ್ತಿದ್ದ ದೇವಸ್ಥಾನಗಳು ಈಗಿಲ್ಲ. ಈಗ ಸರ್ಕಾರಗಳ ಕೈಯಲ್ಲಿರುವ ಹಾಗೂ ಶ್ರೀಮಂತರು ಮತ್ತು ಮಾಡಲು ಕೆಲಸವಿಲ್ಲದ ವೃದ್ಧ ಟ್ರಸ್ಟಿಗಳು ಕಟ್ಟಿಸುವ ದೇವಸ್ಥಾನಗಳಲ್ಲಿ ಅಜ್ಞಾನದ ಪೋಷಣೆ ನಡೆಯುತ್ತಿದೆಯೇ ಹೊರತು ಆಧ್ಯಾತ್ಮದ ಪರಿಚಯವೂ ಸಾಮಾನ್ಯರಿಗಾಗುತ್ತಿಲ್ಲ. ''ಧರ್ಮ'' ಎನ್ನುವ ಶಬ್ದ ಹಿಂದೂ-ಮುಸ್ಲಿಂ ಜಗಳಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು, ಆಧ್ಯಾತ್ಮ- ಧರ್ಮ ಬೊಧಿಸದೇ ಹೋದರೂ ಕೂಡ ಅವುಗಳ ಮುಸುಕಿನಲ್ಲಿ ಶಾರೀರಿಕ ಮತ್ತು ಮಾನಸಿಕ ರೋಗಗಳನ್ನು ನಿಯಂತ್ರಿಸುವ, ಯೋಗಾಸನ ಹೇಳಿಕೊಡುವ ಹಾಗೂ ಗಿಡಮೂಲಿಕೆ ಔಷಧಿ ಕೊಡುವ ಆಧುನಿಕ ಮಠಗಳು ಅಥವಾ ''ಮಲ್ಟಿ ಸ್ಪೆಷಾಲಿಟಿ ಆಶ್ರಮಗಳು'' ಶ್ರೀಮಂತರ ಜೇಬಿಗೆ ಮಾತ್ರ ನಿಲುಕುವಂಥವುಗಳು. ಈ ವಿಚಿತ್ರ ಸ್ಥಿತಿಯಲ್ಲಿರುವ ''ಜನಸಾಮಾನ್ಯ'' ಗಲಿಬಿಲಿಗೊಂಡು ಸಿಕ್ಕ ಸಿಕ್ಕವರನ್ನು ''ಗುರೂಜಿ'' ''ಸ್ವಾಮೀಜಿ'' ಎಂದು ಕರೆಯುತ್ತಿದ್ದಾನೆ. ದೇವಸ್ಥಾನದ ಹುಂಡಿಗೆ ದುಡ್ಡು ಹಾಕುವುದನ್ನೇ ''ಧಾರ್ಮಿಕತೆ'' ಮತ್ತು, ಹನುಮಾನ್ ಚಾಲೀಸಾ ಪಠಿಸುವುದನ್ನೇ ''ಆಧ್ಯಾತ್ಮಿಕತೆ'' ಎಂದು ತಿಳಿಯುತ್ತಿದ್ದಾನೆ. ಆದರೆ ಪ್ರಪಂಚದ ಎಲ್ಲ ಧರ್ಮಗಳಿಗಿಂತ ಭಾರತೀಯ ಸನಾತನ ಧರ್ಮ ಅತ್ಯಂತ ಪ್ರಾಚೀನವಾದದ್ದು. ಮತ್ತು ಅತೀ ಶ್ರೇಷ್ಠವಾದದ್ದು ಎಂದು ಭಾಷಣ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಂಥವರನ್ನು ಪಕ್ಕಕ್ಕೆ ಕರೆದು ''ಸ್ವಾಮೀ, ಧರ್ಮ ಎಂದರೇನು ? ಎಂದು ಕೇಳಿ ನೋಡಿ...'' ನಿಮಗೆ ಸರಿಯಾದ ಉತ್ತರೆ ಸಿಕ್ಕರೆ ಅದು ಈ ದಶಕದ ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್ . 

ನಿಜವಾದ ಶ್ರಾದ್ಧ ಯಾವುದು?

ನಿಮಗೆ ಕೇವಲ ಮೂರು ನಿಮಿಷ ಬಿಡುವಿದೆಯೇ? ಈ ಆಡಿಯೋ ಕೇಳಿ. ಅನುಭವಿಗಳ ಎರಡು ಮಾತು ಸಾವಿರ ಪುಟದ ಗ್ರಂಥದ ಓದುವುದಕ್ಕಿಂತಲೂ ಮೇಲು.


ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ತಂದೆ ಶ್ರೀ ಚಂದ್ರಶೇಖರ ಶಾಸ್ತ್ರಿಗಳು.ಅವರು ಪ್ರಾಣ ಬಿಡುವಾಗ ಹೇಳಿದ ಮಾತನ್ನು ಶಾಸ್ತ್ರಿಗಳ ಬಾಯಿಯಿಂದಲೇ ಕೇಳಬೇಕು " ಇನ್ನು ಈ ಶರೀರದ ಕೆಲಸ ಮುಗೀತು. ತೆಗೆದುಕೊಂಡು ಹೋಗಿ ಸುಟ್ಟುಹಾಕು. ಸಾಲಮಾಡಿ ಶ್ರಾದ್ಧ ಮಾಡಬೇಡ .ಎರಡು ವರ್ಷ ನೀನು ನನ್ನ ಸೇವೆ ಮಾಡಿದ್ದೀಯಲ್ಲಾ! ನನ್ನ ಶ್ರಾದ್ಧ ಮಾಡಿದಂತಾಯ್ತು. ಇನ್ನು ತಾಯ್ನೆಲದ ಋಣ ತೀರಿಸಲು ಒಂದು ಶಾಲೆ ತೆರೆದು ಮಕ್ಕಳಿಗೆ ವಿದ್ಯೆ ಕೊಡು, ಜೊತೆಗೇ ಅನ್ನವನ್ನೂ ಹಾಕು"......... ನನಗೆ ನನ್ನ ತಂದೆಯ ಸಾವು ನೆನಪಾಯ್ತು. ಸಾಯುವ ಮುಂಚೆ ಅವರು ಹೇಳಿದ ಮಾತು" ಆ ಭಗವಂತ ನಿನಗೆ ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ... " ಈ ಮಾತುಗಳನ್ನು ಹೇಳುವಾಗಲೇ ಪ್ರಾಣಪಕ್ಷಿ ಹಾರಿಹೋಯ್ತು.

ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ

ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ
ಚೆಲುವೆ ಮಾಯವ್ವ ಎಂಥ ಮಕ್ಕಳ ಹೆತ್ತಿ | || ಪ || 


ಸುಖವು ಸಿಕ್ಕುವುದೆಂದು ಕುಣಿಸುವನು ಒಬ್ಬ
ವಿವೇಕವನೆ ಮರೆಸಿ ತುಳಿಯುವವನೊಬ್ಬ
ಕೂಡಿಡುವ ಕಟಪವನು ಕಲಿಸುವವನೊಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಹಾಳವ್ವ || ೧ ||


ನನದೆಂಬ ಭಾವವನು ಮೂಡಿಸುವನೊಬ್ಬ
ಸೊಕ್ಕಿನಿಂ ಮೆರೆಯೆನುತ ಉಬ್ಬಿಸುವನೊಬ್ಬ
ಉರಿವ ಒಡಲಿಗೆ ತುಪ್ಪ ಹಾಕುವನು ಒಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಗೋಳವ್ವ || ೨ ||


ಅರಿಗಳಾರೆನಿಸಿ ಜಗದಿ ಮೆರೆದಿಹರವ್ವ್ವ
ಒಬ್ಬರಿಗೆ ಒಬ್ಬರು ಜೊತೆಯಾಗಿ ಇಹರವ್ವ
ಶೂರಾಧಿಶೂರರೇ ಮಣ್ಣು ಮುಕ್ಕಿಹರವ್ವ
ಮೋಹಿನಿ ಮಾಯವ್ವ ನಿಷ್ಕರುಣಿ ನೀನವ್ವ || ೩ ||


ಕಾಮ ಕ್ರೋಧಗಳು ಹಾಳು ಮಾಡಿದವವ್ವ
ಮದ ಮಚ್ಚರಗಳು ಚೂರಿ ಹಾಕಿಹವವ್ವ
ಲೋಭ ಮೋಹಗಳು ತುಳಿದಿಹವು ಕಾಣವ್ವ 
ಎಷ್ಟು ಕಾಡುತಿಯವ್ವ ದೇವರೇ ದಿಕ್ಕವ್ವ || ೪ ||
*************
-.ಕವೆಂ.ನಾಗರಾಜ್.

ಪಂಪ ಭಾರತ



ಪಂಪ ತನ್ನ ಭಾರತ ಕಥೆಯಲ್ಲಿ ವರ್ಣಿಸುವ ರೀತಿ ಅದೆಷ್ಟು ಸುಂದರ ನೋಡಿ :

ಚಲದೊಳ್ ದುರ್ಯೋಧನಂ|
ನನ್ನಿಯೋಳ್ ಇನತನಯಂ|
ಗಂಡಿನೊಳ್ ಭೀಮ ಸೇನಂ |
ಬಳದೋಳ್ ಮದ್ರೆಶನ್|
ಅತ್ಯುನ್ನತಿಯೋಳ್ ಅಮರ ಸಿಂಧೂದ್ಭವಂ |
ಚಾಪವಿದ್ಯಾ ಬಳದೋಳ್ ಕುಮ್ಬ್ಹೊದ್ಭವಂ |
ಸಾಹಸದ ಮಹಿಮೆಯೋಳ್ ಫಲ್ಗುಣಂ|
ಧರ್ಮದೋಳ್ ನಿರ್ಮಲ ಚಿತ್ತಂ ಧರ್ಮಪುತ್ರಂ|
ಮಿಗಿಲ ಇರ್ಗಳನ್ ಈ ಭಾರತಮ್ ಲೋಕಪೂಜ್ಯಂ ||

ಎಂತಹ ನುಡಿ ಇದ್ದೀಯ ಮಹಾಭಾರತದ ಪಾತ್ರಗಳ ವರ್ಣನೆಯನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿರಿಸಿದ ಪಂಪನ ಸಾಮರ್ಥ್ಯ ಎಂತಹದ್ದಿರಬಹುದು

-ಸದ್ಯೋಜಾತ ಭಟ್ಟ

ತಕ್ಷಕಸ್ಯ ವಿಷಂ ದಂತೇ




ತಕ್ಷಕಸ್ಯ ವಿಷಂ ದಂತೇ ಮಕ್ಷಿಕಾಯಾಶ್ಚ ಮಸ್ತಕೆ |
ವ್ರಶ್ಚಿಕಸ್ಯ ವಿಷಂ ಪುಚ್ಚೇ ಸರ್ವಂಗೆ ದುರ್ಜನಸ್ಯ ತತ್ ||


ತಕ್ಷಕನಿಗೆ (ಹಾವಿಗೆ) ಹಲ್ಲಿನಲ್ಲಿ ವಿಷವಿರುತ್ತದೆ,  ಸೊಳ್ಳೆಗಳಿಗೆ ತಲೆಯಲ್ಲಿ ವಿಷವಿರುತ್ತದೆ, ಚೇಳುಗಳಿಗೆ ಬಾಲದಲ್ಲಿ ವಿಷವಿರುತ್ತದೆ ಆದರೆ ಕೆಟ್ಟ ಜನರಿಗೆ ಇಡಿ ದೇಹವೇ ವಿಷವಾಗಿರುತ್ತದೆ. ಆದುದರಿಂದ ಆದಷ್ಟು ಸಜ್ಜನರ ಸಂಗವೇ ಲೇಸು.
--
-ಸದ್ಯೋಜಾತಭಟ್ಟ

ಇಷ್ಟಿ ದಿನ ನೆಚ್ಚಿ ನಂಬಿ

ರಚನೆ: ಹರಿಹರಪುರಶ್ರೀಧರ್ ಗಾಯನ: ಶ್ರೀಮತಿ ಲಲಿತಾ ರಮೇಶ್

Sunday, July 15, 2012

ಪುನರ್ಜನ್ಮ-ಒಂದು ವಿವರಣೆ ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?



ವೇದ ಗೋಷ್ಠಿಯ ನೆನಪು

ಹಳೆಯ ನೆನಪುಗಳು
ಬೆಂಗಳೂರಿನಲ್ಲಿ ನಡೆದ ವೇದ ಗೋಷ್ಠಿಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಚನ್ನೇನಹಳ್ಳಿಯ ವೇದ ವಿಜ್ಞಾನ ಗುರುಕುಲದ ಶ್ರೀಮತಿ ಅಮೃತವರ್ಷಿಣಿ, ಶ್ರೀ ಮಹಿಮಾ ಪಟೇಲ್, ಶ್ರೀ ಹರಿಹರಪುರಶ್ರೀಧರ್, ಕಾರ್ಯಕ್ರಮದ ರೂವಾರಿ ಸುಧಾಕರಶರ್ಮ.