Pages

Wednesday, November 17, 2010

ಮಾನಸ ಪೂಜೆ



ಮಾನಸ ಪೂಜೆ

ಭಗವತ್ಪಾದ ಶ್ರೀ ಆದಿಶಂಕರರು ಪ್ರಕಾಂಡ ಪಂಡಿತರೂ ಉತ್ತಮ ಕವಿಗಳೂ ಆಗಿದ್ದರು. ಆ ದಾರ್ಶನಿಕರ ಬಗ್ಗೆ ಬರೆಯತೊಡಗಿ ಮಧ್ಯದಲ್ಲಿ ಅನಿವಾರ್ಯತೆಯಲ್ಲಿ ನಿಲ್ಲಿಸಿದ್ದೆ. ಮತ್ತೆ ಕೆಲದಿನಗಳಲ್ಲಿ ಅದನ್ನು ಆರಂಭಿಸುತ್ತಿದ್ದೇನೆ. ಮನುಷ್ಯ ಏನೂ ಇರಲಿ ಇಲ್ಲದಿರಲಿ ತನ್ನ ದೈನಂದಿನ ವ್ಯವಹಾರಗಳ ಮಧ್ಯೆ ಇದ್ದಲ್ಲೇ ಹೇಗೆ ದೈವಧ್ಯಾನ ಮಾಡಬಹುದು ಎಂಬುದನ್ನು ಅಂದೇ ಅವರು ಸೂಚಿಸಿದ್ದರು. ಪಾಂಡವರಲ್ಲಿ ಭೀಮ ಇಂತಹುದೇ ಉಪಾಸನೆಯನ್ನು ಮಾಡುತ್ತಿದ್ದ ಎಂಬುದೊಂದು ಐತಿಹ್ಯ. ಮನುಷ್ಯನ ಮನಸ್ಸೇ ಎಲ್ಲಕ್ಕೂ ಮೂಲ ಕೇಂದ್ರವಾಗಿರುವುದರಿಂದ ಅಲ್ಲೇ ಹೊರಜಗತ್ತಿನ ವೈಭವ-ವೈಭೋಗಗಳನ್ನು ಕಲ್ಪನೆಮಾಡಿಕೊಳ್ಳುತ್ತಾ ದೈವಕ್ಕೆ ಅವುಗಳಿಂದ ಮನಸಾ ಪೂಜಿಸುವುದು ಮಾನಸ ಪೂಜೆ ಎನಿಸಿದೆ. ಶುದ್ಧ ಮನಸ್ಸಿನಲ್ಲಿ ದೇವರನ್ನು ಆಹ್ವಾನಿಸಿ ನಡೆಸಬಹುದಾದ ಈ ಪೂಜೆಗೆ ಬೇಕಾಗುವ ಒಂದೇ ಪ್ರಮುಖ ವಸ್ತು--ಮನಸ್ಸು. ಶಂಕರರ ಅಡಿಗಳಿಗೆರಗುತ್ತ ಅವರು ರಚಿಸಿದ ಶಿವಮಾನಸ ಸ್ತೋತ್ರವನ್ನು ಕನ್ನಡೀಕರಿಸಲು ನನ್ನ ಶಬ್ದಗಳನ್ನೂ ಸೇರಿಸಿ ಹೀಗೆ ಪ್ರಯತ್ನಿಸಿದ್ದೇನೆ : ]

ಆಂತರ್ಯದಲಿ ಕುಳಿತು
ನನ್ನಾಳ್ವ ಓ ದೊರೆಯೇ
ಅರ್ಪಿಸುವೆ ನಿನಗಿದುವೇ
ನನ್ನ ಹಾಡು
ನಿತ್ಯವೂ ಬೆಳಗಿನಲಿ
ಮತ್ತದೇ ಬೈಗಿನಲಿ
ಸ್ವಸ್ತ ಚಿತ್ತವ ಕೊಡುವ
ಕೃಪೆಯ ಮಾಡು

ರತ್ನ ಸಿಂಹಾಸನವ
ಕಲ್ಪಿಸುವೆ ಮನಸಿನಲಿ
ಪಟ್ಟೆ ಪೀತಾಂಬರವ
ಅಣಿಗೊಳಿಸುತಲ್ಲಿ
ಜಾತೀಯ ಪುಷ್ಪಗಳ
ಧೂಪದೀಪಗಳಿಟ್ಟು
ಪ್ರೀತಿಯಲಿ ಸ್ವಾಗತಿಸಿ
ಕುಳ್ಳಿರಿಸುತಲೀ

ಅರ್ಘ್ಯ ಪಾದ್ಯಾದಿಗಳು
ಸ್ನಾನ ಪಾನೀಯಗಳು
ಭೂಷಣಕೆ ಗಂಧ
ಮಾಲೆಗಳನ್ನು ಇಡುತ
ಭೇಷಾಯ್ತು ನಿನ್ನಿರವು
ನಾ ಸೋಲದಂತಿರಲು
ಕೇಶವನೇ ಶಿವನೇ ನೀ
ಪ್ರೀತಿಸೈ ಸತತ

ನವರತ್ನ ಖಚಿತ
ಬಂಗಾರದಾ ಪಾತ್ರೆಯಲಿ
ತುಪ್ಪ ಹಾಲ್ಮೊಸರು ಪಂಚ
ಭಕ್ಷ್ಯಾದಿಗಳನು
ಬಾಳೆ ಮಾವಿತ್ಯಾದಿ
ವಿಧದ ಹಣ್ಣಿನ ಜತೆಗೆ
ಪಾನಕ ತಾಂಬೂಲವಂ
ಕೊಡುತಲಿಹೆನು

ಅವಸರದ ಜೀವನದಿ
ಮರೆತಿರುವೆ ನಿನ್ನನ್ನೇ
ಭವಸಾಗರವು ಬಹಳ
ವಿಸ್ತಾರವಹುದು
ಕ್ಷಮಿಸೆನ್ನ ಮಂದಮತಿ
ಕರುಣಿಸುತ ಚಂದಗತಿ
ಮರುಳು ಮಾನವ ಜನ್ಮ
ಮುಸುಕು ಕವಿದಿಹುದು

ಕರಚರಣ ಕೃತಪಾಪ
ಕಾಯದಲಿ ಕರ್ಮದಲಿ
ಶ್ರವಣ ನಯನಗಳಲ್ಲಿ
ಜನಿಸಿದಪರಾಧ
ವಿಹಿತವೋ ಅವಿಹಿತವೋ
ಸರ್ವವನು ಕಡೆಗಣಿಸು
ಜಯಜಯವು ಜಯವೆನುತ
ದರ್ಶಿಸುವೆ ಪಾದ
--ವಿ. ಆರ್.ಭಟ್

ಶ್ರೀದುರ್ಗಾ ಕವಚ ಸ್ತೋತ್ರ: ಅರ್ಥಸಹಿತ ಭಾಗ-೨

ಶ್ವೇತರೂಪಧರಾ ದೇವೀ ಈಶ್ವರೀ ವೃಶವಾಹನಾ
ಬ್ರಾಹ್ಮೀ ಹ೦ಸ ಸಮಾರೂಢಾ ಸರ್ವಾಭರಣ ಭೂಷಿತಾ ||೧೧||

ಶ್ವೇತರೂಪಧಾರಿಯಾದ ಈಶ್ವರಿಯು ವೃಷವಾಹನಳಾಗಿ,ಸರ್ವಾಭರಣಭೂಷಿತೆಯಾದ ಬ್ರಾಹ್ಮೀ ದೇವಿಯು ಹ೦ಸವಾಹನ ಳಾಗಿ ನಮ್ಮ ನಿತ್ಯ ದೋಷಗಳನ್ನು ಪರಿಹರಿಸುವ೦ಥವಳು.ಜೀವನದಲ್ಲಿ ಯಾವ ನಾಮಸ್ಮರಣೆಯಿ೦ದ ಮೋಕ್ಷವನ್ನು ಪಡೆಯಬಹುದೋ ಅ೦ತಹ ನಾಮಸ್ಮರಣೆಯು ಅವಳದೇ ಆಗಿದೆ.

ಇತ್ಯೇತಾ ಮಾತರಸ್ಸರ್ವಾ: ಸರ್ವಯೋಗ ಸಮನ್ವಿತಾ: |
ನಾನಾಭರಣಶೋಭಾಢ್ಯಾ ನಾನಾರತ್ನೋಪಶೋಭಿತಾ: | 
ದೃಶ್ಯ೦ತೇ ರಥಮಾರೂಢಾ ದೇವ್ಯ: ಕ್ರೋಧಸಮಾಕುಲಾ: ||೧೨||

ಸರ್ವಯೋಗಗಳ ಸಮನ್ವಿತೆಯಾದ ದೇವಿಯ ಅವತಾರದ ಫಲವನ್ನು ಬ್ರಾಹ್ಮೀ ರೂಪವು ತೋರಿಸಿದೆ.ಸರ್ವಾಭರಣ ಭೂಷಿತೆ ಯು, ನಾನಾ ರತ್ನ ಶೋಭಿತೆಯೂ ಆಗಿರುವ ತಾಯಿಯು ರಥಾರೂಢೆಯೂ ಆಗಿದ್ದಾಳೆ.


ಶ೦ಖ೦ ಚಕ್ರ೦ ಗದಾ ಶಕ್ತಿ ಹಲ೦ ಚ ಮುಸಲಾಯುಧ೦
ಖೇಟಕ೦ ತೋಮರ೦ ಚೈವ ಪರಶು೦ ಪಾಶಮೇವ ಚ ||೧೩||

ಹೀಗೆ ರಥಾರೂಢೆಯಾಗಿರುವ ತಾಯಿಯು ಶ೦ಖ,ಚಕ್ರ, ಗದೆ,ನೇಗಿಲು,ಮುಸಲಗಳನ್ನು ತನ್ನ ಆಯುಧಗಳನ್ನಾಗಿ ಹಿಡಿದಿದ್ದಾಳೆ. ಅ೦ದರೆ ಇದರ ಅರ್ಥ ಸಕಲ ದೇವತೆಗಳನ್ನೂ, ಸಕಲ ಜೀವಿಗಳನ್ನೂ ಸ೦ರಕ್ಷಿಸುವ ಏಕ ಮಾತ್ರಳಾಗಿದ್ದಾಳೆ ಎ೦ದು.


ಕು೦ತಾಯುಧ೦ ತ್ರಿಶೂಲ೦ ಚ ಶಾರ್ನ್ಗಮಾಯುಧಮುತ್ತಮ೦|
ದೈತ್ಯಾನಾ೦ ದೇಹನಾಶಾಯ ಭಕ್ತನಾಮಭಯಾಯ ಚ |
ಧಾರಯ೦ತ್ಯಾಯುಧಾನೀತ್ಥ೦ ದೇವಾನಾ೦ ಚ ಹಿತಾಯ ವೈ || ೧೪||

ತ್ರಿಶೂಲ,ಕು೦ತಾಯುಧ,ಪರಶು,ಪಾಶ,ಗದೆ, ಶ೦ಖ, ಚಕ್ರ ಮು೦ತಾದ ಹಲವಾರು ಆಯುಧಗಳನ್ನು ಹಿಡಿದಿರುವ ಮಹಾತಾಯಿ ಯು ದೈತ್ಯರನ್ನು ಶಿಕ್ಷಿಸುತ್ತಾ, ದೇವತೆಗಳ, ಧರ್ಮದ ರಕ್ಷಣೆಯನ್ನು ಕೋರುತ್ತಿದ್ದಾಳೆ.


ನಮಸ್ತೇಸ್ತು ಮಹಾರೌದ್ರೇ ಮಹಾಘೋರಪರಾಕ್ರಮೇ|
ಮಹಾಬಲೇ ಮಹೋತ್ಸಾಹೇ ಮಹಾಭಯವಿನಾಶಿನಿ |
ತ್ರಾಹಿ ಮಾ೦ ದೇವಿ ದುಷ್ಪ್ರೇಕ್ಷ್ಯೆ ಶತ್ರೂಣಾ೦ ಭಯವರ್ಧಿನಿ ||೧೫||


ಮಹಾರೌದ್ರೆಯೂ ಘೋರ ಪರಾಕ್ರಮಿಯೂ,ಮಹಾಬಲೆಯೂ,ಮಹಾ ಉತ್ಸಾಹಿತಳೂ,ಎಲ್ಲಾ ಭಯಗಳನ್ನೂ ನಾಶ ಮಾಡು ವ೦ಥವಳಾಗಿರುವ ಎಲೈ ದೇವಿಯೇ, ಕೆಟ್ಟ ಜನರ ದೃಷ್ಟಿಯಿ೦ದ ನನ್ನನ್ನು ಕಾಪಾಡುವ೦ಥವಳಾಗು.


ಪ್ರಾಚ್ಯಾ೦ ರಕ್ಷತು ಮಾಮೈ೦ದ್ರೀ ಆಗ್ನೇಯ್ಯಾಮಗ್ನಿ ದೇವತಾ | 
ದಕ್ಷಿಣೇವತು ವಾರಾಹೀ ನೈಋ೯ತ್ಯಾ೦ ಖಡ್ಗಧಾರಿಣೀ ||೧೬||

ಎಲೈ ಮಾತೆಯೇ ಪೂರ್ವ ದಿಕ್ಕಿನಲ್ಲಿ ಐ೦ದ್ರೀ ರೂಪದಲ್ಲಿಯೂ, ಆಗ್ನೇಯ ದಿಕ್ಕಿನಲ್ಲಿ ಅಗ್ನಿದೇವತೆಯಾಗಿಯೂ, ದಕ್ಷಿಣ ದಿಕ್ಕಿನಲ್ಲಿ ವಾರಾಹಿಯಾಗಿಯೂ, ನೈಋತ್ಯ ದಿಕ್ಕಿನಲ್ಲಿ ಖಡ್ಗಧಾರಿಣಿಯಾಗಿ ನನ್ನನ್ನು ಕಾಪಾಡುವ೦ಥವಳಾಗು.

ಪ್ರತೀಚ್ಯಾ೦ ವಾರುಣೀ ರಕ್ಷೇದ್ವಾಯುವ್ಯಾ೦ ಮೃಗಾವಾಹಿನೀ
ಉದೀಚ್ಯಾ೦ ಪಾತು ಕೌಬೇರೀ ಈಶಾನ್ಯಾ೦ ಶೂಲಧಾರಿಣೀ ||೧೭||

ಎಲೈ ತಾಯಿಯೇ ಪಶ್ಚಿಮ ದಿಕ್ಕಿನಲ್ಲಿ ವಾರುಣಿಯಾಗಿಯೂ,ವಾಯುವ್ಯ ದಿಕ್ಕಿನಲ್ಲಿ ಮೃಗವಾಹಿನಿಯಾಗಿಯೂ, ಉತ್ತರ ದಿಕ್ಕಿನಲ್ಲಿ ಕೌಬೇರಿಯಾಗಿಯೂ ಈಶಾನ್ಯ ದಿಕ್ಕಿನಲ್ಲಿ ಶೂಲಧಾರಿಣಿಯಾಗಿ ನನ್ನನ್ನು ಸಕಲ ದುಷ್ಟ ಶಕ್ತಿಗಳಿ೦ದ ಕಾಪಾಡುವ೦ಥವಳಾಗು.


ಊರ್ಧ್ವ೦ ಬ್ರಹ್ಮಾಣಿ ಮೇ ರಕ್ಷೇದಧಸ್ತಾದ್ವೈಷ್ಣವೀ ತಥಾ |
ಏವ೦ ದಶ ದಿಶೋ ರಕ್ಷೇ ಚ್ಛಾಮು೦ಡಾ ಶವವಾಹನಾ ||೧೮||

ಊರ್ಧ್ವ ಭಾಗದಲ್ಲಿ ಬ್ರಹ್ಮಿಣಿಯಾಗಿಯೂ,ಅಧೋ ಬಾಗದಲ್ಲಿ ವೈಷ್ಣವಿಯಾಗಿಯೂ,ನನ್ನನ್ನು ಕಾಪಾಡು.ಹೀಗೆ ಹತ್ತೂ ದಿಕ್ಕುಗಳಲ್ಲಿ ಯೂ ಶವವಾಹನಳಾಗಿ,ಚಾಮು೦ಡಿಯಾಗಿ ನನ್ನನ್ನು ರಕ್ಷಿಸುವವಳಾಗು.


ಜಯಾ ಮೇ ಚಾಗ್ರತ: ಪಾತು ವಿಜಯಾ ಪಾತು ಪೃಷ್ಠತ:
ಅಜಿತಾ ವಾಮ ಪಾರ್ಶ್ವೇಶ್ತು ದಕ್ಷಿಣೇ ಚಾಪರಾಜಿತಾ ||೧೯||


ಎಲೈ ತಾಯಿಯೇ ನನ್ನ ಮು೦ದೆ ಬ೦ದು ಸಕಲ ವಿಘ್ನಗಳನ್ನೂ ನಿವಾರಿಸುವ೦ಥವಳಾಗಿಯೂ, ನನ್ನ ಎಡ-ಬಲ ಪಾರ್ಶ್ವಗಳಲ್ಲಿ “ಅಜಿತಾ-ಅಪರಾಜಿತಾ“ ಎ೦ಬ ರೂಪದಲ್ಲಿಯೂ, ನನ್ನ ಬೆನ್ನಿನ ಹಿ೦ದೆ “ವಿಜಯಾ“ ಎ೦ಬ ರೂಪದಲ್ಲಿದ್ದು ನನ್ನನ್ನು ಕಾಪಾಡುವ೦ಥವಳಾಗು.


ಶಿಖಾಮುದ್ಯೋತಿನೀ ರಕ್ಷೇದುಮಾ ಮೂಧ್ನಿ೯ ವ್ಯವಸ್ಥಿತಾ |
ಮಾಲಾಧರೀ ಲಲಾಟೇ ಚ ಭ್ರುವೌ ರಕ್ಷೇದ್ಯಶಸ್ವಿನೀ ||೨೦||


ಎಲೈ ತಾಯಿಯೇ ನನ್ನ ಶಿಖಾ ಸ್ಥಾನವನ್ನು “ಉದ್ಯೋತಿನೀ“ ಎ೦ಬ ಹೆಸರಿನವಳಾಗಿಯೂ, ಮೂರ್ಧ್ನಿಯನ್ನು “ಉಮಾ“ ಎ೦ಬ ಹೆಸರಿನವಳಾಗಿಯೂ ಲಲಾಟವನ್ನು “ಮೂಲಾಧರಿ“ ಎ೦ಬ ಹೆಸರಿನವಳಾಗಿಯೂ, ಭ್ರುವಗಳನ್ನು “ಯಶಸ್ವಿನಿ“ ಎ೦ಬ ಹೆಸರಿನವಳಾಗಿಯೂ ಕಾಪಾಡುವ೦ಥವಳಾಗು.

ಮು೦ದುವರಿಯುವುದು...

APPLYING THE LAW OF PURE POTENTIALITY


      While applying the Law of Pure Potentiality in our daily life, we have to do the following resolutions by making a commitment to take steps.
1.      I will get in touch with the field of pure potentiality by taking time each day to be silent, to just Be. I will sit alone in silent meditation at least twice a day for approximately thirty minutes in the morning and evening. Through meditation I will experience the pure silence and pure awareness. I will get the infinite organizing power. I will experience the silence without faintest ripple of intention, and understand everything under the ground of universal consciousness.
2.      I will take each day to commune with nature and to silently witness the intelligence within everything. I will sit silently and watch a sunset, or listen to the sound of the ocean or a stream, or simply smell the scent of a flower. In the ecstasy of my own silence, and by communing with nature. I will enjoy the life throb of ages, the field of pure potentiality and unbounded creativity.
3.      I will practice non-judgment. I will begin my day with the statement, “Today, I shall judge nothing that occurs. I will simply accept it without murmur. I will not constantly evaluate about right or wrong, good or bad. Today I will not evaluate, classify, label, and analyze anything.
4.      I will not have any guilt feeling, or fear or insecurity over money or success or anything else. I will understand the true nature of Self. I will be free from EGO. I will go beyond the turbulence of my internal dialogue.
5.      I will combine movement and stillness to unleash my creativity in all directions-wherever the power of my attention takes me.

Source:                                                          
The seven spiritual laws of success.                                                         (See you next week)
H.N.Prakash,Hassan