Pages

Showing posts with label ವಾರ್ಷಿಕೋತ್ಸವ. Show all posts
Showing posts with label ವಾರ್ಷಿಕೋತ್ಸವ. Show all posts

Tuesday, September 2, 2014

ಸಮಾಜದ ಸಾಮರಸ್ಯ - ವೇದಭಾರತಿಯ ಉದ್ದಿಶ್ಯ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || 
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
"ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ."
     ಹಾಸನದ ವೇದಭಾರತಿ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೇದ ಅರ್ಥಾತ್ ಜ್ಞಾನ ಸಮಾಜದ ಎಲ್ಲ ಆಸಕ್ತರಿಗೂ ತಲುಪಲಿ ಎಂಬ ಸದಾಶಯದಿಂದ 'ಎಲ್ಲರಿಗಾಗಿ ವೇದ' ಎಂಬ ಘೋಷ ವಾಕ್ಯದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯನ್ನು ಪ್ರಾರಂಭದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ಪೋಷಿಸಿ ಬೆಳೆಸಿದವರು ಹರಿಹರಪುರ ಶ್ರೀಧರ್ ಮತ್ತು ಕವಿನಾಗರಾಜರು. ನಂತರದಲ್ಲಿ ಹಲವಾರು ಸಮಾನಮನಸ್ಕರ ಬೆಂಬಲ, ಪ್ರೋತ್ಸಾಹಗಳೂ ಸಿಕ್ಕಿ ಇಂದು ಒಂದು ಗುರುತಿಸಲ್ಪಡುವ ಸಂಘಟನೆಯಾಗಿದೆ. ಶ್ರೀ ಸುಧಾಕರ ಶರ್ಮರವರು ವೇದದ ಬೆಳಕಿನಲ್ಲಿ ನೀಡಿದ ಹಲವು ಉಪನ್ಯಾಸಗಳಿಂದ ಪ್ರಭಾವಿತರಾಗಿ 'ವೇದಸುಧೆ' ಹೆಸರಿನಲ್ಲಿ ಒಂದು ಅಂತರ್ಜಾಲ ಬ್ಲಾಗ್ ಅನ್ನು ಅಕ್ಟೋಬರ್, ೨೦೧೦ರಲ್ಲಿ ಪ್ರಾರಂಭಿಸಲಾಯಿತು. ಈ ಬ್ಲಾಗ್ ಎಷ್ಟು ಜನಪ್ರಿಯವಾತೆಂದರೆ ಇದರಲ್ಲಿ ವೇದದ ಹಿನ್ನೆಲೆಯಲ್ಲಿನ ಹಲವಾರು ಬರಹಗಳಿಗೆ, ಚರ್ಚೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದವು. ಆರೋಗ್ಯಕರ ಚರ್ಚೆಗಳು ಜ್ಞಾನದ ಹರವನ್ನು ಹೆಚ್ಚಿಸಲು ಸಹಕಾರಿಯಾದವು. ಇದುವರೆಗೆ ೧೨೨೦ ಬರಹಗಳು ಈ ಬ್ಲಾಗಿನಲ್ಲಿ ಪ್ರಕಟವಾಗಿ ಇದುವರೆವಿಗೆ ಸುಮಾರು ೧,೨೫,೦೦೦ ಪುಟವೀಕ್ಷಣೆಗಳಾಗಿವೆ. ಬ್ಲಾಗ್ ಪ್ರಾರಂಭವಾದ ನಂತರದಲ್ಲಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕೋತ್ಸವ ಮಾಡಿ ಆ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿಚಾರಗೋಷ್ಠಿ , ಅಗ್ನಿಹೋತ್ರದ ಪ್ರಾತ್ಯಕ್ಷಿಕೆ, ವೇದದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಉಪನ್ಯಾಸ ಏರ್ಪಡಿಸಲಾಗಿತ್ತು. ೨೦೧೧ರಲ್ಲಿ ವೇದಸುಧೆ ಹೆಸರಿನಲ್ಲಿ ಒಂದು ವೆಬ್ ಸೈಟ್ ಅನ್ನು ಪ್ರಾರಂಭಿಸಲಾಯಿತು. ಈ ವೆಬ್ ಸೈಟಿನಲ್ಲಿ ಅನೇಕ ಪ್ರಬುದ್ಧ ವೈಚಾರಿಕ ಬರಹಗಳು, ಮಾಹಿತಿಗಳು, ವಿಡಿಯೋ, ಆಡಿಯೋಗಳು ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ. ಬ್ಲಾಗ್ ಮತ್ತು ವೆಬ್ ಸೈಟಿನ ವಿಳಾಸ: 
     ನಂತರದ ದಿನಗಳಲ್ಲಿ ಏರ್ಪಡಿಸಿದ್ದ ಶ್ರೀ ಸುಧಾಕರ ಶರ್ಮರಿಂದ ಒಂದು ವಾರದ ಕಾಲ ಉಪನ್ಯಾಸ ಮಾಲೆ, ಸಾರ್ವಜನಿಕರೊಡನೆ ಮುಕ್ತ ಸಂವಾದ ಜನಮನವನ್ನು ಸೆಳೆಯುವಲ್ಲಿ, ವೈಚಾರಿಕ ಚಿಂತನೆ ಉದ್ದೀಪಿಸುವಲ್ಲಿ ಯಶಸ್ವಿಯಾದವು. ಕಳೆದ ವರ್ಷ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ' ನಡೆಸಿದ್ದು ಆ ಶಿಬಿರದಲ್ಲಿ ಹಾಸನ ಜಿಲ್ಲೆಯ ೩೦ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ೪೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೂರದ ಪೂನಾದಿಂದಲೂ ಒಬ್ಬರು ಭಾಗವಹಿಸಿದ್ದರು. ಪ್ರತಿದಿನ ಸಾಯಂಕಾಲ ಸಾರ್ವಜನಿಕರಿಗೆ ಉಪನ್ಯಾಸ ಏರ್ಪಡಿಸಿತ್ತು. ಕೊನೆಯ ದಿನದಂದು ನಾಲ್ವರು ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡಿದ್ದು ಉಲ್ಲೇಖನೀಯ. ಇದು ಟಿವಿಯ ವಿವಿಧ ಚಾನೆಲ್ಲುಗಳ ಮೂಲಕ ಬಿತ್ತರವಾಗಿ ಗಮನ ಸೆಳೆದಿತ್ತು. ಸ್ವಾಮಿ ಚಿದ್ರೂಪಾನಂದಜಿಯವರಿಂದ ಒಂದು ವಾರದ ಕಾಲ 'ಗೀತಾಜ್ಞಾನಯಜ್ಞ' ನಡೆಸಲಾಯಿತು. ಕಳೆದ ವರ್ಷದಿಂದ ಮಕ್ಕಳಲ್ಲೂ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಬಾಲಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಈಗಲೂ ವೇದಮಂತ್ರಗಳನ್ನು ಹೇಳುತ್ತಿರುವುದು, ಕಲಿಕೆ ಮುಂದುವರೆಸುತ್ತಿರುವುದು ಮುದ ನೀಡುವ ಸಂಗತಿಯಾಗಿದೆ.
     ವೇದ ಎಂದರೆ ಕೇವಲ ಪೂಜಾ ಮಂತ್ರಪಾಠಗಳಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ಈ ಜ್ಞಾನ ಸಂಪತ್ತು ಸಮಸ್ತ ಮಾನವಕುಲದ ಆಸ್ತಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಲು ಅರ್ಹರು. ವೇದಗಳಲ್ಲಿ ಎಲ್ಲೂ ಅಸಮಾನತೆಯ ಸೋಂಕಿಲ್ಲ, ಬದಲಾಗಿ ಸಮಸ್ತ ಜೀವರಾಶಿಯ ಶ್ರೇಯೋಭಿವೃದ್ಧಿ ಬಯಸುವ ಸಂದೇಶಗಳಿವೆ. ವೇದಗಳನ್ನು ಪುರಾಣಗಳು ಮತ್ತು ಕಟ್ಟುಕಥೆಗಳೊಂದಿಗೆ ಸೇರಿಸಿ ಅಥವ ಸಮೀಕರಿಸಿ ವಿಶ್ಲೇಷಿಸುವುದು ವೇದಕ್ಕೆ ಬಗೆಯುವ ಅಪಚಾರವಾಗುತ್ತದೆ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ.  ಈ ನಿಟ್ಟಿನಲ್ಲಿ ಜನಜಾಗೃತಿ ಮಾಡಲು ವೇದಭಾರತಿ ಎರಡು ವರ್ಷಗಳ ಹಿಂದೆ ಯಾವುದೇ ಜಾತಿ, ಮತ, ಪಂಗಡ, ಲಿಂಗ, ವಯಸ್ಸಿನ ತಾರತಮ್ಯವಿಲ್ಲದೆ ಆಸಕ್ತ ಎಲ್ಲರಿಗೂ ವೇದಮಂತ್ರಗಳನ್ನು ಅಭ್ಯಸಿಸುವ ಅವಕಾಶ ಕಲ್ಪಿಸಿ ಸಾಪ್ತಾಹಿಕ ವೇದಾಭ್ಯಾಸ ತರಗತಿ ಪ್ರಾರಂಭಿಸಿತು. ಒಂದೆರಡು ತಿಂಗಳ ನಂತರ ಇದು ಪ್ರತಿನಿತ್ಯದ ತರಗತಿಯಾಗಿ ಮಾರ್ಪಟ್ಟಿದೆ.  ಕಳೆದ ಏಳೆಂಟು ತಿಂಗಳುಗಳಿಂದ ನಿತ್ಯ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಅಗ್ನಿಹೋತ್ರದ ಮಹತ್ವ, ಮಂತ್ರಗಳ ಅರ್ಥವನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಹಂಪಾಪುರ, ಅರಸಿಕೆರೆ ಮುಂತಾದೆಡೆಯಲ್ಲೂ ಈ ಪರಿಚಯ ಕಾರ್ಯ, ಜಾಗೃತಿ ಮೂಡಿಸುವ ಕೆಲಸಗಳಾಗಿವೆ. 
     ಪ್ರತಿನಿತ್ಯ ಹಾಸನದ ಹೊಯ್ಸಳನಗರದ 'ಈಶಾವಾಸ್ಯಮ್'ನಲ್ಲಿ ಸಾಯಂಕಾಲ ೬ರಿಂದ೭ರವರೆಗೆ ನಡೆಯುವ ವೇದಾಭ್ಯಾಸ ಸತ್ಸಂಗದ ಸ್ವರೂಪ ಪಡೆದುಕೊಂಡಿದೆ. ಪರಮಾತ್ಮಸ್ತುತಿ, ಅಗ್ನಿಹೋತ್ರ, ನಂತರ ವೇದಮಂತ್ರಗಳ ಸಾರವೆಂಬಂತಿರುವ ಎರಡು ಭಜನೆಗಳು, ವೇದಮಂತ್ರಗಳ ಅಭ್ಯಾಸ ನಡೆಯುತ್ತದೆ. ವೇದಮಂತ್ರಗಳ ಅರ್ಥ ತಿಳಿಸುವುದರೊಂದಿಗೆ ಆರೋಗ್ಯಕರ ಚರ್ಚೆಗೂ ಅವಕಾಶವಿರುತ್ತದೆ. ಆಗಾಗ್ಯೆ ಸಾಧು-ಸಂತರ, ಜ್ಞಾನವೃದ್ಧರ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತದೆ. ಪ್ರತಿನಿತ್ಯ ಸುಮಾರು ೨೦ರಿಂದ೩೦ ಆಸಕ್ತರು ಪಾಲುಗೊಳ್ಳುತ್ತಿದ್ದಾರೆ. ಆಸಕ್ತಿ ಇರುವ ಯಾರಿಗೇ ಆಗಲಿ, ಇಲ್ಲಿ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇವಲ ಸ್ವಂತದ ಅಭಿವೃದ್ಧಿಗಾಗಿ ಬಯಸುವುದಲ್ಲ, ಸಮಾಜಮುಖಿಯಾಗಿ ನಮ್ಮ ನಡವಳಿಕೆಗಳು, ಮನೋಭಾವ ವೃದ್ಧಿಸಲಿ ಎಂಬ ಸದುದ್ದೇಶದ ಚಟುವಟಿಕೆಗಳನ್ನು ನಡೆಸುವುದು, ಸಜ್ಜನ ಶಕ್ತಿಯ ಜಾಗರಣೆಗೆ ತನ್ನದೇ ಆದ ರೀತಿಯಲ್ಲಿ ಮುಂದುವರೆಯುವುದು ವೇದಭಾರತಿಯ ಧ್ಯೇಯವಾಗಿದೆ. ವೇದದ ಈ ಕರೆಯನ್ನು ಸಾಕಾರಗೊಳಿಸುವತ್ತ ಸಜ್ಜನರು ಕೈಗೂಡಿಸಲಿ ಎಂದು ಆಶಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
"ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ."
-ಕ.ವೆಂ.ನಾಗರಾಜ್.
***************
     ದಿನಾಂಕ 16 ಮತ್ತು 17.8.2014ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಹೊಸದಿಗಂತ, ಜನಮಿತ್ರ ಮತ್ತು ಜನಹಿತ ಪತ್ರಿಕೆಗಳು ವಿಶೇಷ ಪುಟಗಳನ್ನು ಪ್ರಕಟಿಸಿ ವೇದಪ್ರಚಾರ ಕಾರ್ಯದಲ್ಲಿ ಕೈಜೋಡಿಸಿದ್ದು ವಿಶೇಷ. ಆ ವಿಶೇಷ ಪುಟಗಳಲ್ಲಿ ನನ್ನ ಮತ್ತು ಹರಿಹರಪುರ ಶ್ರೀಧರರ ಲೇಖನಗಳು ಪ್ರಕಟಗೊಂಡಿದ್ದವು.

ಹೊಸದಿಗಂತ:

ಜನಹಿತ:

ಜನಮಿತ್ರ
 



Thursday, August 21, 2014

ಹಾಸನದಲ್ಲಿ ವೇದಭಾರತಿಯಿಂದ ಗೀತಾಜ್ಞಾನ ಯಜ್ಞದ ಯಶಸ್ವೀ ಆರಂಭ

ಹಾಸನದಲ್ಲಿ ವೇದಭಾರತಿಯಿಂದ ನಡೆಯುತ್ತಿರುವ  ಗೀತಾಜ್ಞಾನ ಯಜ್ಞದಲ್ಲಿ   ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮಿಗಳು ಬೆಳಿಗ್ಗೆ ಈಶಾವಾಸ್ಯಮ್ ನಲ್ಲಿ ಉಪನಿಷತ್ ಪಾಠವನ್ನೂ ಸಂಜೆ ಶ್ರೀ ಆದಿಚುಂಚನಗಿರಿ ಮಠದಲ್ಲಿ ಭಗವದ್ಗೀತೆಯ ಬಗ್ಗೆ ಉಪನ್ಯಾಸವನ್ನೂ ಮಾಡುತ್ತಿದ್ದಾರೆ. ದಿನಾಂಕ 20.8.2014 ರಂದು ಆರಂಭವಾದ ಈ ಕಾರ್ಯಕ್ರಮವು ದಿನಾಂಕ 24.8.2014 ರವರಗೆ ನಡೆಯುತ್ತದೆ.




















Tuesday, August 19, 2014

ವೇದಭಾರತೀ ದ್ವಿತೀಯ ವಾರ್ಷಿಕೋತ್ಸವದ ಕೆಲವು ದೃಶ್ಯಗಳು

ವೇದತರಂಗ ಸಂಪಾದಕರಾದ ಶ್ರೀ ಶ್ರುತಿಪ್ರಿಯರಿಗೆ ಶ್ರೀ ಜ.ಹೋ.ನಾರಾಯಣ ಸ್ವಾಮಿಯವರಿಂದ ಮಾಲಾರ್ಪಣೆ



ಸಾಮಾಜಿಕ ಸಾಮರಸ್ಯ ಮತ್ತು ವೇದ ಘೋಷ್ಠಿಯನ್ನು ನಿರ್ವಹಿಸುತ್ತಿರುವ ಶ್ರೀ ಬೈರಪ್ಪ

ಸಾಮಾಜಿಕ ಸಾಮರಸ್ಯ ಮತ್ತು ವೇದ ಘೋಷ್ಠಿಯಲ್ಲಿ ಶ್ರೀ ಶಂಕರಪ್ಪನವರು

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಏಕಲ್ ಕಾರ್ಯದರ್ಶಿ ಶ್ರೀ ನಂದಕುಮಾರ್,ಅಧ್ಯಕ್ಷರಾದ ಶ್ರೀ ರಾಕೇಶ್ ಮತ್ತು ವೇದಭಾರತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಶ್ರೀ ಸು.ರಾಮಣ್ಣನವರು

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಏ॑ಕಲ್ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ರಾಕೇಶ್

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಏ॑ಕಲ್ ವಿದ್ಯಾಲಯದ ಕಾರ್ಯದರ್ಶಿ ನಂದಕುಮಾರ್

ಸಮಾಜ ಮತ್ತು ನಾನು ಘೋಷ್ಠಿಯ ನಿರ್ವಹಣೆ ಶ್ರೀಮತಿ ಪ್ರೇಮಾಭಗಿನಿಯವರಿಂದ

ಸಮಾಜ ಮತ್ತು ನಾನು ಘೋಷ್ಠಿಯಲ್ಲಿ ಶ್ರೀ ಸು.ರಾಮಣ್ಣ ಮತ್ತು ಶ್ರೀಮತಿ ಲೀಲಾವತಿ


ಮಹಿಳೆ ಮತ್ತು ವೇದ ಘೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ವಿಜಯಕುಮಾರಿ ಶ್ರೀ ಕುಶಲ ಮತ್ತು ಶ್ರೀಮತಿ ರೇಣುಕಾ ಪ್ರಭು

ಕು|| ಅಕ್ಷತಾ ರಾಮಕೃಷ್ಣ ರಿಂದ ಭರತನಾಟ್ಯ



ನಮ್ಮ ಮನೆ ಗೋಷ್ಠಿಯಲ್ಲಿ  ಶ್ರೀ ಜಜಗಧೀಶ್, ಶ್ರೀ ಸು.ರಾಮಣ್ಣ ಮತ್ತು ಶ್ರೀ ಕೆ.ಪಿ.ಎಸ್.ಪ್ರಮೋದ್



ಸತ್ಸಂಗ ಗೋಷ್ಠಿಯಲ್ಲಿ  ಶ್ರೀ ವೆಂಕಟೆಶಮೂರ್ತಿ. ಶ್ರೀ ವಿ.ನಾ.ಶರ್ಮ ಮತ್ತು ಶ್ರೀ ಪ್ರಕಾಶ್.ಎಸ್.ಯಾಜಿ


ಚಿಂತನ ಗೋಷ್ಠಿಯಲ್ಲಿ ಶ್ರೀ ಕವಿನಾಗರಾಜ್, ಶ್ರೀ ಶ್ರೀನಿವಾಸ, ಶ್ರೀ ವಸಂತ್ ಕುಮಾರ್ ಪೆರ್ಲಾ ಮತ್ತು ಶ್ರೀ ಅಶೋಕ್ ಕುಮಾರ್

ಕು|| ಸಹನಾ ವೃಂದದವರಿಂದ ವೀಣಾ-ವೇಣುವಾದನ ಕಛೇರಿ.


ಸಮಾರೋಪ ಸಮಾರಂಭದಲ್ಲಿ ಡಾ. ಪ್ರಸನ್ನ ಎನ್.ರಾವ್


ಸಮಾರೋಪ ಸಮಾರಂಭದಲ್ಲಿ ಶ್ರೀ ಸಿ.ಎಸ್.ಕೃಷ್ಣಸ್ವಾಮಿ


ನಾವೆಲ್ಲರೂ ಶ್ರೀ ಮನ್ನಾರಾಯಣರಾಗಿ ಹಿಂದು ಧರ್ಮದ ರಕ್ಷಣೆ ಮಾಡೋಣ.-ಶ್ರೀ ಶಂಕರಪ್ಪನವರ ಕರೆ


     

ಹಾಸನದಲ್ಲಿ ದಿನಾಂಕ 16.8.2014 ರಂದು ಉದ್ಘಾಟನೆಗೊಂಡ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಅಧ್ಯಕ್ಷರೂ, ವಿ.ಹಿಂ.ಪರಿಷತ್ತಿನ ರಾಜ್ಯ ಉಪಾಧ್ಯಕ್ಷರೂ ಆದ ಶ್ರೀ ಶಂಕರಪ್ಪನವರ ಹೃದಯಾಂತರಾಳದ ಮಾತುಗಳು ಇಲ್ಲಿವೆ. 
----------------------------------------------------------------------------
ಹಿಂದು ಧರ್ಮ ನನ್ನ ತಾಯಿ.ಹಿಂದೂ ಧರ್ಮವನ್ನು ನಾಶಪಡಿಸಲು ವೈರಿಗಳು ಕಾದಿದ್ದಾರೆ. ಪರಕೀಯರು ನಮ್ಮ ದೇಶವನ್ನು ಆಳಿದ ಕಾಲಕ್ಕಿಂತಲೂ ಇಂದು ಹಿಂದೂ ಧರ್ಮಕ್ಕೆ ಹೆಚ್ಚು ಗಂಡಾಂತರವಿದೆ. ನಮ್ಮ ನಮ್ಮಲ್ಲಿ ಶತೃತ್ವ ಬೆಳೆಸುತ್ತ  ತನ್ಮೂಲಕ ನಮ್ಮ ಧರ್ಮವನ್ನು ನಾಶಮಾಡುವ  ಶಡ್ಯಂತ್ರವನ್ನು ಅನ್ಯ ಮತೀಯರು ಹೆಣಿದಿದ್ದಾರೆ. ಆದ್ದರಿಂದ ಈಗ ಹಿಂದೆಂದಿಗಿಂತಲೂ ನಾವು ಎಚ್ಚರವಾಗಿರುವುದು ಅನಿವಾರ್ಯವಾಗಿದೆ.
          ಭಾರತಮಾತೆಯ ಮಕ್ಕಳಾದ ನಮ್ಮಲ್ಲಿ ಪರಸ್ಪರಾನ್ಯೋನ್ಯತೆ, ಸಾಮರಸ್ಯ, ಪ್ರೀತಿ ಉಳಿಯದಿದ್ದರೆ ಮುಂದಿನ ದಿನಗಳಲ್ಲಿ  ನಮ್ಮ ಧರ್ಮಕ್ಕೆ ದುರಂತ ಕಾದಿದೆ. ಈ ಧರ್ಮವನ್ನು ಉಳಿಸಲು  ರಾ.ಸ್ವ.ಸಂಘದ ಸಾವಿರಾರು ಕಾರ್ಯಕರ್ತರು ತಮ್ಮ ಜೀವನವನ್ನು  ಮುಡಿ[ಪಾಗಿಟ್ಟಿರುವುದು ನಿಜ. ಆದರೆ ಧರ್ಮರಕ್ಷಣೆಯ ಈ ಕೆಲಸದ ಪ್ರಮಾನ ಸಾಲದು. ಇನ್ನೂ ಹೆಚ್ಚು ರಬಸದಿಂದ ಧರ್ಮವನ್ನು ಉಳಿಸುವ ಕೆಲಸ ನಡೆಯಬೇಕಾಗಿದೆ. ಇಲ್ಲಿಯವರಗೆ ರಾ.ಸ್ವ.ಸಂಘದ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ದೇಶದ  ಜನರ  ಪ್ರತಿಶತ ಒಂದಕ್ಕಿಂತ ಕಮ್ಮಿ ಇರಬಹುದು.ಇನ್ನೂ ಪ್ರತಿಶತ 99 ಜನರಿಗೆ ಈ ಜ್ಞಾನವನ್ನು ಮುಟ್ಟಿಸಬೇಕಾಗಿದೆ. ಆದ್ದರಿಂದ ನಮ್ಮ ಸ್ವಂತ ಜೀವನದ ಜೊತೆಗೆ ಭಾರತಮಾತೆಗಾಗಿ ನಾವೆಲ್ಲರೂ ನಮ್ಮ ಸ್ವಲ್ಪ ಸಮಯವನ್ನು ಕೊಟ್ಟರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ.ನಾವು ಕುಳಿತಲ್ಲೇ  ದೇಶದ ಮಾತನಾಡಿದರೆ ಸಾಲದು, ಮಹಾಪುರುಷರನ್ನು ಹೊಗಳಿದರೆ ಸಾಲದು.
          ನಮಗೆ ಒಂದು ನಂಬಿಕೆ ಇದೆ. ಧರ್ಮದ ಅಧಃಪಥನವಾಗುವ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ಧರೆಗಿಳಿದುಬಂದು ಧರ್ಮದ ಪುನರುತ್ಥಾನ ಮಾಡುತ್ತಾನೆಂದು. ಆದರೆ ಪ್ರಪಂಚದಲ್ಲಿ ನಾವು 160 ಕೋಟಿಗಿಂತಲೂ ಹೆಚ್ಚು ಹಿಂದುಗಳಿದ್ದೇವೆ.ನಾವೆಲ್ಲಾ ಕಣ್ಮುಚ್ಚು ಕುಳಿತು ನಾರಾಯಣನನ್ನು ಎದುರು ನೋಡುತ್ತಿದ್ದೇವೆ. ಭಗವಂತನ ಅಂಶವೇ ಆದ ನಾವು  ನಾರಾಯಣನು ಮಾಡುವ ಕಾರ್ಯದಲ್ಲಿ ಪ್ರತಿಶತ ಒಂದನ್ನು ನಾವೆಲ್ಲಾ ಮಾಡಿದರೂ ಪ್ರತಿಶತ 160 ಕೋಟಿಗಿಂತಲೂ ಹೆಚ್ಚು ಕಾರ್ಯವನ್ನು ನಾವು ಮಾಡಲು ಸಾಧ್ಯವಿಲ್ಲವೇ?

ಕ್ರೈಸ್ತ ಮತ್ತು ಮುಸಲ್ಮಾನರು ಅವರ ಧರ್ಮ ಉಳಿಸಲು ಬದುಕುತ್ತಾರೆ

ಆದರೆ ಕ್ರೈಸ್ತ ಮತ್ತು ಮುಸಲ್ಮಾನರ ಚಿಂತನೆ ಇದಕ್ಕೆ ವಿರುದ್ಧವಾದುದು. ಅವರಾದರೋ  ತಮ್ಮ ಧರ್ಮದ ರಕ್ಷಣೆಗಾಗಿಯೇ  ಏಸು ಅಥವಾ ಪಗಂಬರ್ ಈ ಭೂಮಿಗೆ ತಮ್ಮನ್ನು ಕಳಿಸಿಕೊಟ್ಟಿದ್ದಾರೆಂದು ಭಾವಿಸುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬರೂ ಅವರ ಧರ್ಮಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ಅವರ ಧರ್ಮದ ಉಳಿವಿಗಾಗಿ ಅವರು ಬದುಕುತ್ತಾರೆ. ಆದ್ದರಿಂದ ಅವರ ಧರ್ಮಗಳು ಬೆಳೆಯುತ್ತಿವೆ.
ನಾವೂ ಕೂಡ ನಮ್ಮ ಧರ್ಮಕ್ಕಾಗಿ ಬದುಕುವುದನ್ನು ಪರಧರ್ಮೀಯರಿಂದ ಕಲಿಯಬಾರದೇ?  ಹೀಗೆ ಮಾಡಿದರೆ ಪರ ಧರ್ಮೀಯರು ನಮ್ಮ ಮೇಲೆ ಅವರ ವಕ್ರ ದೃಷ್ಟಿ ಹರಿಸುವ ಧೈರ್ಯಮಾಡಿಯಾರೇ?

ನಮ್ಮ ಮಠಾಧಿಪತಿಗಳು ಜನರನ್ನು ತಲುಪಬೇಕು
        ನಮ್ಮಲ್ಲಿ ಸಾವಿರಾರು ಮಠಾಧಿಪತಿಗಳು, ಸ್ವಾಮೀಜಿಗಳು ಇದ್ದಾರಲ್ಲವೇ? ಆದರೂ ನಮ್ಮ ಧರ್ಮ ನಶಿಸುತ್ತಿರುವುದೇಕೇ? ಎಲ್ಲೋ ಏನೋ ಲೋಪವಿರಬೇಕಲ್ಲವೇ! ಆದ್ದರಿಂದ ನನ್ನ ಕಳಕಳಿಯ ಮನವಿ ಏನೆಂದರೆ ಪೂಜ್ಯ ಸ್ವಾಮೀಜಿಗಳು ಜನರ ಹತ್ತಿರ ಬರಬೇಕು. ಅವರಲ್ಲಿ ಧರ್ಮ ಜಾಗೃತಿ ಉಂಟುಮಾಡಬೇಕು.ನನ್ನ ಸಮಾಜದ ಜನರನ್ನು ವೇದಭಾರತಿಯಂತಹ ಸಂಸ್ಥೆಗಳ ಹತ್ತಿರ ತರಲು ನಾನೂ ಸಹ ಸರ್ವ ಪ್ರಯತ್ನವನ್ನು ಮಾಡುತ್ತೇನೆ. ಈ ನನ್ನ ಪ್ರಯತ್ನವನ್ನು ನೋಡಿದ ನಮ್ಮ ಜನಾಂಗದ ಜನರು ನನ್ನನ್ನು ಠೀಕಿಸುತ್ತಿದ್ದಾರೆ.ಸಾವಿರಾರು ವರ್ಷಗಳು ನಮ್ಮ ಜನಾಂಗವನ್ನು ಮೂಲೆಗುಂಪು ಮಾಡಿದ್ದ ಜನರೊಡನೆ ಸೇರಿದ್ದೇನೆಂದು ನಮ್ಮ ಸಮಾಜದ ಬುದ್ಧಿಜೀವಿಗಳು ನನಗೆ ಕೇಳುತ್ತಿದ್ದಾರೆ. ಅವರಿಗೆ ನಾನು ಕೇಳುತ್ತಿದ್ದೇನೆ " ರಾ.ಸ್ವ.ಸಂಘವು ಈ ದೇಶದಲ್ಲಿ ಹಿಂದು ಧರ್ಮವನ್ನು ಉಳಿಸಲು ಕೆಲಸಮಾಡುತ್ತಿರುವ ಸಂಘಟನೆ. ನಾನು ಅವರೊಡನೆ ಹೋಗದೆ ಅಮೆರಿಕೆಯ ಒಬಾಮರ ಹತ್ತಿರ ಹೋಗಬೇಕೇ? ಸದ್ದಾಂ ಹುಸೇನನ ಹತ್ತಿರ ಹೋಗಬೇಕೇ?
       ನಾನೊಬ್ಬ ಹಿಂದುವಾಗಿ ಹಿಂದು ಸಂಘಟನೆಗಳ  ಜೊತೆ ಕೈ ಜೋಡಿಸದೆ ಮುಸಲ್ಮಾನ, ಕ್ರೈಸ್ತ ಸಂಘಟನೆಗಳ ಜೊತೆ ಕೈ  ಜೋಡಿಸಬೇಕೆ? ನಮ್ಮ ಪೂರ್ವಜರಲ್ಲಿ ಯಾರಿಂದಲೋ ಯಾವಾಗಲೋ  ತಪ್ಪಾಗಿದೆ ನಿಜ, ಆದರೆನಾವೀಗ ಬುದ್ಧಿವಂತರಾಗಿಲ್ಲವೇ? ನಾವು ತಪ್ಪನ್ನು ಸರಿಪಡಿಸಿಕೊಳ್ಳಬಾರದೇ?

ಹಿಂದಿನ ವರ್ಣಾಶ್ರಮ ಧರ್ಮ ಈಗ ಉಳಿದಿದೆಯೇ?

        ನಮ್ಮ ಸಮಾಜದವರ ಹತ್ತಿರ ನಾನು ಕೇಳುತ್ತಿದ್ದೇನೆ." ಹಿಂದಿನ ವರ್ಣಾಶ್ರಮದಂತೆ ಈಗ ಸಮಾಜ ಇದೆಯೇ? ನಾವು ಬುದ್ಧಿವಂತರಾಗಿ ಕ್ಷತ್ರಿಯರಂತೆ ದೇಶವಾಳುತ್ತಿಲ್ಲವೇ?  ವೈಶ್ಯರಂತೆ ವ್ಯಾಪಾರ ಮಾಡುತ್ತಿಲ್ಲವೇ? ಬ್ರಾಹ್ಮಣರಂತೆ ವಿದ್ಯೆ ಹೇಳಿಕೊಡುವ ಅಧ್ಯಾಪಕ ಕೆಲಸ ಮಾಡುತ್ತಿಲ್ಲವೇ?ಶೂದ್ರರಂತೆ ವ್ಯವಸಾಯ ಮಾಡುತ್ತಿಲ್ಲವೇ? ಇಂತಹ ಸಂದರ್ಭದಲ್ಲಿ ನಾವ್ಯಾಕೆ ಈಗಿನ ಬ್ರಾಹ್ಮಣ ಪಂಗಡದವರೊಡನೆ ಬೆರೆತು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಾರದು? ಅದರಿಂದ ನಮ್ಮ ಸಮಾಜ ಉದ್ಧಾರವಾಗುವುದಿಲ್ಲವೇ? ಹಾಗೆ ಮಾಡದೆ ನಾವು ಕ್ರೈಸ್ತರೊಡನೆಯೋ, ಮುಸಲ್ಮಾನರೊಡನೆಯೋ ಸೇರಿ ಪಾಪಿಗಳಾಗಿ ಬದುಕುವುದಕ್ಕಿಂತ ಸ್ವಧರ್ಮದಲ್ಲಿದ್ದುಕೊಂಡು ಅದನ್ನೂ ಶುದ್ಧಮಾಡುತ್ತಾ ನಾವು ಯಾಕೆ ಬಲಿಷ್ಠರಾಗಬಾರದು!" -ಈ ನನ್ನ ಮಾತಿನಿಂದ ಯಾರು ಕ್ರಿಶ್ಚಿಯನ್ ಮಿಶನರಿಗಳಿಂದ ಸಹಾಯ ಪಡೆಯುತ್ತಿದ್ದಾರೋ ಅವರು ನನ್ನನ್ನು ದ್ವೇಶಿಸುತ್ತಿದ್ದಾರೆ. ಆದ್ದರಿಂದ ನನ್ನ ಸಮಾಜದ ಮತ್ತು ಉಳಿದೆಲ್ಲಾ ಹಿಂದೂ ಮಠಾಧಿಪತಿಗಳನ್ನು ನಾನು ದಲಿತ ಕಾಲೊನಿಗಳಿಗೆ ಪದಾರ್ಪಣೆ ಮಾಡಿ ಅಲ್ಲಿ ಧ್ರಮ ಜಾಗೃತಿ ಮಾಡಬೇಕೆಂದು  ಪ್ರಾರ್ಥಿಸುತ್ತಿದ್ದೇನೆ. ಮಠಾಧಿಪತಿಗಳು ದಲಿತ ಕಾಲೊನಿಗಳಿಗೆ ಕಾಲಿಟ್ಟರೆ  ಅನ್ಯ ಮತೀಯರು ಅಲ್ಲಿ ಪ್ರವೇಶಿಸಿ ಮತಾಂತರ ಮಾಡಲು ಹೆದರುತ್ತಾರೆ.

ನದಿಗಳು ಸಾಗರಸೇರಿದಂತೆ ಎಲ್ಲಾ ಜಾತಿಗಳೂ ಹಿಂದೂ ಧರ್ಮದಲ್ಲಿ ಐಕ್ಯವಾಗಬೇಕು.
     ಮೇಲ್ಜಾತಿಯವರು ದಯಮಾಡಿ ಕೆಳ ಜಾತಿಯವರ ಸಮೀಪ ಬರುವ ಕೆಲಸ ಆಗಬೇಕು. ಹಾಗೆಯೇ ಕೆಳಜಾತಿಯವರೂ ಮೇಲ್ಜಾತಿಯವರ ಹತ್ತಿರ ಬರುವ ಪ್ರಯತ್ನ ಮಾಡಿ, ಬರುಬರುತ್ತಾ  ಎರಡೂ ಪಂಗಡಗಳ ನಡುವೆ ಅಂತರ ಕಡಿಮೆಯಾಗುತ್ತಾ ಬಂದರೆ ಒಂದು ದಿನ ಹಿಂದು ಸಮಾಜವು ಇನ್ನೂ ಸದೃಢವಾಗಿ ನಿಲ್ಲುವುದರಲ್ಲಿ ಸಂಶಯವಿಲ್ಲ.

ಧರ್ಮ ಜಾಗೃತಿಯ ಕೆಲಸ ಆರಂಭವಾದ ಮೇಲೆ ನಿಲ್ಲಬಾರದು. ನದಿಯಂತೆ ಹರಿಯುತ್ತಿರಬೇಕು
         ಮೈಸೂರಿನಲ್ಲಿ ಒಂದು ಪ್ರಯತ್ನ ನಡೆಯಿತು. ನಮ್ಮ ಸಮಾಜದ ಪೂಜ್ಯರಾದ ಮಾದಾರಚೆನ್ನಯ್ಯ ಸ್ವಾಮೀಜಿಯವರು ಒಂದು ದಿನ  ಬ್ರಾಹ್ಮಣ ಕೇರಿಯಲ್ಲಿ ಪಾದಯಾತ್ರೆ ಮಾಡಿದರು. ಉಡುಪಿಯ ಪೂಜ್ಯ ಪೇಜಾವರ ಶ್ರೀಗಳು ದಲಿತ ಕಾಲೊನಿಯಲ್ಲಿ ಒಂದು ದಿನ  ಪಾದಯಾತ್ರೆ ಮಾಡಿದರು.ಆದರೆ ಅದರ ಪರಿಣಾಮ ಹಿಂದು ಸಮಾಜಕ್ಕಿಂತಲೂ ಅನ್ಯ ಮತೀಯರ ಮೇಲೆ ಹೆಚ್ಚಾಯ್ತು. ಅವರು ಜಾಗೃತರಾದರು. ಅವರ ಕೆಲಸ ಇನ್ನೂ  ರಬಸಗೊಂಡಿತು.ಅನ್ಯಮತೀಯರು ದಲಿತರಿಗೆ ಹೆಚ್ಚು ಹೆಚ್ಚು ಆಮಿಶಗಳನ್ನು ತೋರಿಸಿ ಮತಾಂತರದ ಸಂಖ್ಯೆ ಹೆಚ್ಚು ಮಾಡಿದರು. ಕಾರಣ ಏನೆಂದರೆ ನಮ್ಮ ಸ್ವಾಮೀಜಿಗಳು ಒಂದು ದಿನ ದಲಿತ /ಬ್ರಾಹ್ಮನ ಕೇರಿಯಲ್ಲಿ ಪಾದಯಾತ್ರೆ ಮಾಡಿ ತಮ್ಮ ಈ ಕೆಲಸವನ್ನು ನಿಲ್ಲಿಸಿಬಿಟ್ಟರು.ಅದು ಮುಂದುವರೆದಿದ್ದರೆ ಅನ್ಯಮತೀಯರು ತಮ್ಮ ದುಸ್ಸಾಹಸಕ್ಕೆ ಕೈ ಹಾಕಲು ಹೆದರುತ್ತಿದ್ದರು.ಇಂತಹ ಧರ್ಮ ಜಾಗೃತಿಯ ಕೆಲಸ ಆರಂಭವಾದಮೆಲೆ ನಿಲ್ಲಬಾರದು. ನದಿಯಂತೆ ಹರುತ್ತಿರಬೇಕು.ಅದು ನಿಂತರೆ ಅನ್ಯಮತೀಯರಿಂದ ದಲಿತರಿಗೆ ಆಮಿಷ ತೋರಿಸಿ ಮತಾಂತರ ಮಾಡುವ ಕೆಲಸವು ನಡೆಯುತ್ತದೆ. ಆದ್ದರಿಂದ ನಮ್ಮ ಹಿಂದೂ ಧರ್ಮದ ಸ್ವಾಮೀಜಿಗಳು ದಿನದಲ್ಲಿ ಒಂದು ಗಂಟೆಯಾದರೂ ದಲಿತ ಕಾಲೊನಿಗಳಿಗೆ ಹೋಗಿ ಧರ್ಮ ಜಾಗೃತಿಯ ಪವಿತ್ರ ಕೆಲಸವನ್ನು ಮಾಡಬೇಕು- ಎಂಬುದು ಸ್ವಾಮೀಜಿಗಳಲ್ಲಿ ನನ್ನ ಕಳಕಳಿಯ ಮನವಿ.

ಅನ್ಯಮತಕ್ಕೆ ಒಬ್ಬ ಮತಾಂತರನಾದನೆಂದರೆ ನಮ್ಮ ಮನೆಯೊಳಗೆ ಒಂದು ಹಾವು ಬಂದಂತೆ.
     ಅನ್ಯಮತಕ್ಕೆ ಒಬ್ಬ ಮತಾಂತರನಾದನೆಂದರೆ ನಮ್ಮ ಮನೆಯೊಳಗೆ ಒಂದು ಹಾವು ಬಂದಂತೆ.ಅದು ಕಚ್ಚುವುದು ಕಟ್ಟಿಟ್ಟಬುತ್ತಿ. ಆದ್ದರಿಂದ ಅದನ್ನು ಅಪಾಯವಿಲ್ಲದಂತೆ ಹಿಡಿದು ಕಾಡಿಗೆ ಬಿಡಬೇಕು ಅಥವಾ ಆಗದಿದ್ದರೆ ಕೊಲ್ಲಬೇಕು. ಇಲ್ಲದಿದ್ದರೆ ಅದು ನಮ್ಮನ್ನು ಕಚ್ಚಿ ಸಾಯಿಸುವುದು ಖಚಿತ. ವೇದದ  ಅರಿವಿನ     ಕೆಲಸವು ದಲಿತ ಕಾಲೊನಿಗಳಲ್ಲೂ ಆಗಬೇಕು. ಕ್ರೈಸ್ತರಲ್ಲಿ ಒಂದು ಯೋಜನೆ ಇದೆ. ಒಬ್ಬ ಕ್ರೈಸ್ತ ಒಂದು ತಿಂಗಳಲ್ಲಿ ಒಂದು ಹಿಂದು ಕುಟುಂಬವನ್ನು ತನ್ನ ಮತಕ್ಕೆ ಮತಾಂತರ ಮಾಡಲೇ ಬೇಕು.ಅಂದರೆ ಒಬ್ಬ ಕ್ರೈಸ್ತ ಒಂದು ವರ್ಷಕ್ಕೆ 12 ಹಿಂದು ಕುಟುಂಬಗಳನ್ನು ಮತಾಂತರ ಮಾಡಬೇಕು.ಗುಡ್ದಗಾಡು ಪ್ರದೇಶಗಳಲ್ಲಿ, ಅಲೆಮಾರಿ ಜನಾಂಗಗಳಲ್ಲಿ, ದಲಿತ ಕಾಲೊನಿಗಳಲ್ಲಿ ಈ ಮತಾ೦ತರದ ಕೆಲಸ ನಡೆಯುತ್ತಿದೆ. 

ದಲಿತರಿಗೆ ಸಾಮಾಜಿಕ ಭಹಿಷ್ಕಾರ ಹಾಕಿದ ಜಾಗದಲ್ಲೆಲ್ಲಾ ಮತಾಂತರ ಹೆಚ್ಚಾಗಿ ನಡೆದಿದೆ.
ಯಾವ ಯಾವ ಹಳ್ಳಿಗಳಲ್ಲಿ ಸಾರ್ವಜನಿಕ ಭಾವಿಗಳಲ್ಲಿ ನೀರು ಸೇದಲು ದಲಿತರನ್ನು ಬಿಡುವುದಿಲ್ಲವೋ, ಎಲ್ಲೆಲ್ಲಿ ದೇವಸ್ಥಾನಗಳಲ್ಲಿ ಪ್ರವೇಶವನ್ನು ನಿರಾಕರಿಸಲಾಗುತ್ತದೋ, ಎಲ್ಲೆಲ್ಲಿ  ದಲಿತರಿಗೆ ಕ್ಷೌರ ಮಾದಲು ನಿರಾಕರಿಸುತ್ತಾರೋ, ಅಲ್ಲೆಲ್ಲಾ ಮತಾಂತರದ ಚಟುವಟಿಕೆಗಳು ಹೆಚ್ಚಾಗಿವೆ, ಎಂಬುದನ್ನು ನಾವು ಮನಗಾಣಬೇಕು. ಯಾವ ಯಾವ ಊರುಗಳಲ್ಲಿ ದಲಿತರು ಸಾಮಾಜಿಕ ಭಹಿಷ್ಕಾರಕ್ಕೆ ಒಳಗಾಗಿದ್ದಾರೆ, ಅಲ್ಲೆಲ್ಲಾ ಅದರ ಮರುವರ್ಷವೇ ಪ್ರತಿಶತ 25 ಭಾಗ ದಲಿತರು ಅನ್ಯಮತಕ್ಕೆ ಮತಾಂತರವಾಗಿರುತ್ತಾರೆ!! ಎಂಬ ವಿಷಯವು ಎಲ್ಲರಿಗೂ ತಿಳಿಯುವುದಿಲ್ಲ. ನೀವೆಲ್ಲಾ ಪತ್ರಿಕೆಗಳಲ್ಲಿ ಅಂತಾ ಸುದ್ಧಿಯನ್ನು ಓದಿದರೆ ನಾನು ಅದೇ ಸಮಾಜದ ಮಧ್ಯ ಇದ್ದುಕೊಂಡು  ಪ್ರತ್ಯಕ್ಷ ನೋಡುತ್ತಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ  ದಲಿತರು ಯಾರ ಹತ್ತಿರ ಹೋಗಬೇಕು, ನೀವೇ ಹೇಳಿ. ನಾನು ನನ್ನ ಸಮಾಜದ ಸಂಕತವನ್ನು ಸಪಡಿಸಲು ಅನ್ಯಮತೀರನ್ನು ಕೇಳಬೇಕೋ, ಅಥವಾ ನಮ್ಮ ಧರ್ಮದ ಮೇಲ್ವರ್ಗದವರನ್ನು ಕೇಳಬೇಕೋ .ನೀವೇ ಹೇಳಿ.ನಾವೇ ಈ ಸಂಕಟವನ್ನು ಬರದಂತೆ ಎಚ್ಚರ ವಹಿಸಬೇಕು.ಇಲ್ಲದಿದ್ದರೆ ನಮ್ಮ ಹಿಂದು ಧರ್ಮಕ್ಕೆ  ದುರಂತ ತಪ್ಪಿದ್ದಲ್ಲ.

Monday, August 18, 2014

ಯಶಸ್ಸನ್ನು ಕಂಡ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ

ಭಜನ್-೧


ಭಜನ್-೨


ಶ್ರೀ ಸು.ರಾಮಣ್ಣನವರಿಂದ ಉದ್ಘಾಟನಾ ಭಾಷಣ