Pages

Friday, December 7, 2018

"ಆನೋಭದ್ರಾಃ ಕ್ರತವೋಯಂತು ವಿಶ್ವತಃ"


ಸಂಘ ಪ್ರೇರಿತ ಗುರುಕುಲಗಳು  ಯಾವುದೋ ಪೂರ್ವಾಗ್ರಹಕ್ಕೆ ಕಟ್ಟು ಬಿದ್ದಿವೆಯೇ? ಈ ವಿಚಾರದಲ್ಲಿ ಸಂಘ ಪ್ರೇರಿತ ಗುರುಕುಲಗಳಾದ ಮೈತ್ರೇಯೀ, ಪ್ರಭೋಧಿನಿ ಮತ್ತು ವೇದವಿಜ್ಞಾನ ಗುರುಕುಲಗ ಬಗ್ಗೆ ಗುರುಕುಲಗಳ ಮಾರ್ಗದರ್ಶಕರಾದ  ಪ್ರೊ.ರಾಮಚಂದ್ರ ಭಟ್ಟರು ಬರೆಯುತ್ತಾರೆ,,,,,,

ನಮ್ಮೆದುರು ಹೊಸ ವಿಚಾರಗಳು ಬಂದಾಗ ನಾವು ಅದನ್ನು  ಸ್ವೀಕರಿಸಿ  ವಿಮರ್ಷೆ  ಮಾಡುತ್ತೇವೆ. ಅಹಂಕಾರದಿಂದ ತಿರಸ್ಕರಿಸುವುದಿಲ್ಲ. ವಿಮರ್ಷೆಮಾಡಿ ಅಗತ್ಯ ಕಂಡರೆ ಪರಿಷ್ಕಾರವನ್ನೂ ಮಾಡುತ್ತೇವೆ. ಹೀಗೆ ಯಾವುದೇ ಹೊಸ ವಿಷಯವನ್ನು  ಸ್ವೀಕಾರ ಮಾಡಿ , ಯಾವ ಪೂರ್ವಾಗ್ರಹವಿಲ್ಲದೆ ಪರಿಷ್ಕಾರ ಮಾಡುತ್ತೇವೆ. ಆಗ ನಿಜವಾದ ಆವಿಷ್ಕಾರ ವಾಗುತ್ತದೆ. ಆವಿಷ್ಕಾರದಿಂದ ಸಾಕ್ಷಾತ್ಕಾರವಾಗುತ್ತದೆ.

Friday, April 27, 2018

ಸ್ವಾಸ್ಥ್ಯಪೂರ್ಣ ಬದುಕು ಭಾಗ-1


ಮುಂಬೈ ನಗರದಲ್ಲಿ ಅರ್ಚನಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಆಚಾರ್ಯ ಬಾಲಕೃಷ್ಣರು ಮಾಡಿದ ಹಿಂದಿ ಉಪನ್ಯಾಸದ ಕನ್ನಡ ಅನುವಾದ.
-----------------------------------

ಸ್ವಾಸ್ಥ್ಯಪೂರ್ಣ ಬದುಕು ಭಾಗ-1

ಬದುಕನ್ನು ಸ್ವಸ್ಥವಾಗಿರಿಸುವಲ್ಲಿ ಸೇವೆಯೂಒಂದು ಪರಮ ಸಾಧನವಾಗಿದೆ.ಇದರ ಉದಾಹರಣೆಯಾಗಿ ಇಲ್ಲಿ ಕುಳಿತಿರುವ ಈ ತಾಯಿಯನ್ನು ನೋಡಿ.ಅವರಿಗೀಗತೊಂಭತ್ತು.ಅವರು ನೂರನ್ನುತಲುಪುವಲ್ಲಿ ಸಂದೇಹವಿಲ್ಲ. ನನಗನಿಸುತ್ತದೆ ನಿಮೆಲ್ಲರಿಗಿಂತ ಇವರು ಭಾಗ್ಯಶಾಲಿಗಳಾಗಿದ್ದಾರೆ. ನಾವು ನಮ್ಮ ಬದುಕನ್ನು ಸಮಗ್ರವಾಗಿ ಅರಿಯದೆ ಹೋದಲ್ಲಿ ನಮಗೆ ನಮ್ಮ ಬದುಕನ್ನು ನಿರ್ವಹಿಸುವ ರಹಸ್ಯವನ್ನು ತಿಳಿಯಲು ಸಾಧ್ಯವಿಲ್ಲ. ಇವತ್ತಿನ ಸಮಾಜ, ನಮ್ಮಕೌಟುಂಬಿಕ ಸ್ವರೂಪ, ರಾಷ್ಟ್ರೀಯ ವಿಚಾರಗಳು, ಜಾಗತೀಕರಣ, ನಮ್ಮಕಣ್ಣ ಮುಂದಿರುವ ಪ್ರಾಪಂಚಿಕ ಸ್ಥಿತಿಗತಿಗಳನ್ನು ಕಾಣುವಾಗ ಇಲ್ಲೆಲ್ಲ ಸರ್ವಾಂಗೀಣತೆಯ ಕೊರತೆ ಎದ್ದುಕಾಣುತ್ತಿದೆ. ಇಂದು ಒಂಟಿತನ ನಮ್ಮನ್ನುಕಾಡುತ್ತಿದೆ. ನಾವು ಏಕಪಕ್ಷೀಯವಾದಂತಹ ಬದುಕನ್ನು ಬಾಳುತ್ತಿದ್ದೇವೆ. ಒಂದೆಡೆ ಎಲ್ಲೋ ಸಾಧನೆಯ ಉತ್ತುಂಗಕ್ಕೇರಿದರೂ ಬದುಕಿನ ಉಳಿದೆಡೆ ನಮ್ಮ ಸಾಧನೆ ಶೂನ್ಯವಾಗಿದೆ.ಇಂತಹ ಒಂದು ಸ್ಥಿತಿಯನ್ನು ಹೋಗಲಾಡಿಸಿ ಬದುಕಿನಲ್ಲಿ ಸಮತೋಲನವನ್ನು ಹೊಂದುವುದರ ಮೂಲಕ ಸ್ವಸ್ಥಜೀವನದ ಪರಿಕಲ್ಪನೆಯನ್ನು ನಾವು ಸಾಕಾರಗೊಳಿಸಬಹುದಾಗಿದೆ ಮತ್ತು ಅದು ಇಂದು ತೀವ್ರ ಅವಶ್ಯವಾದ ವಿಚಾರವಾಗಿದೆ.
ಆಯುರ್ವೇದದಲ್ಲಿ ಹೇಳಲಾದ “ ಸಮದೋಷಃ ಸಮ ಅಗ್ನಿಶ್ಚ ಸಮಧಾತು ಮಲಪ್ರಿಯಃ ಪ್ರಸನ್ನಾತ್ಮಇಂದ್ರಿಯ ಮನಃ ಸ್ವಸ್ಥಇತ್ಯೇಭಿದೀಯತೆ’ ಇದರ ಪರಿಕಲ್ಪನೆಯನ್ನು ಅರ್ಥೈಸಿಕೊಂಡಾಗ ನಮಗೆ ಸ್ವಸ್ಥಜೀವನದ ಪರಿಕಲ್ಪನೆಯ ಅರಿವಾಗುತ್ತದೆ. ಸ್ವಾಸ್ಥ್ಯವೆಂದರೇನು?ಅದರ ಸ್ವರೂಪವೇನು?ಇವೆರಡರ ಸ್ವರೂಪವನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಎರಡು ಪ್ರಶ್ನೆಗಳಿಗೂ ಒಂದೇ ಉತ್ತರವಿದೆ, ಅದು ಸಮದೋಷ. ಆಯುರ್ವೇದದ ಪ್ರಕಾರ ನಮ್ಮ ಶರೀರದಲ್ಲಿರುವ ವಾತ, ಪಿತ್ತ, ಕಫಗಳನ್ನು ದೋಷವೆಂದುಕರೆಯಲಾಗಿದೆ. ’ತುತೀದುಗುಣಾತ್ದೋಷಃ’ ಇವುಗಳು ಉಲ್ಭಣಿಸಿದಾಗ ಶರೀರದಲ್ಲಿ ವಿಕೃತಿಗಳು ಕಂಡು ಬರುತ್ತವೆ. ಹೀಗಾಗಿ ಶರೀರಧಾರಣೆಯಲ್ಲಿ ವಾತ, ಪಿತ್ತ, ಕಫಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಧಾರಣಾದ್ಧಾತವಃ’ನಮ್ಮ ಶರೀರದಲ್ಲಿ ವಾತ ಪಿತ್ತ ಕಫಗಳು ಇಲ್ಲದೆ ಹೋದಲ್ಲಿ ಶರೀರದ ಅಸ್ಥಿತ್ವವೇಇರುವುದಿಲ್ಲ. ಆದರೆ ಶರೀರವನ್ನು ಸ್ವಸ್ಥವಾಗಿಡುವುದರಲ್ಲಿ ಈ ಮೂರು ಸಮತೋಲನದಿಂದಿರಬೇಕಾಗುತ್ತದೆ.ಕಫ ಅತಿಯಾದಾಗ ಕೆಮ್ಮು, ನೆಗಡಿಯುಂಟಾಗಬಹುದು.ವಾಯು ಅಧಿಕವಾದಾಗ ದೇಹ ಸ್ಥೂಲವಾಗಬಹುದು, ಅರ್ತ್ರೈಟೀಸ್ ಬರಬಹುದು, ಮೆದುಳಿನ ಕಾಯಿಲೆಗಳು, ಅನುವಂಶಿಯ ರೋಗಗಳು ಮರುಕಳಿಸಬಹುದು, ಪಿತ್ತದ ಅಸಮತೋಲವಾದಾಗ ಚರ್ಮ ರೋಗಗಳು. ಹೀಗೆ ವಾತ ಪಿತ್ತ ಕಫಗಳ ಇರುವಿಕೆಯಲ್ಲಿ ಅಸಮತೋಲನವಾದಾಗ ರೋಗಗಳು ಕಾಣಿಸಿಕೊಳ್ಳುತ್ತವೆ.
ನಾವೆಲ್ಲ ಮಾಯಾನಗರಿಗಳಲ್ಲಿದ್ದೇವೆ. ಮಾಯಾ ನಗರಿ ಎಂಬ ಶಬ್ದಕ್ಕೆ ಎರಡು ಅರ್ಥಗಳಿವೆ. ಒಂದು ಮಾಯೆಯೆಂದರೆಅರ್ಥ ಸಂಗ್ರಹ, ಇನ್ನೊಂದು, ಮಾಯೆಯೆಂದರೆ ಭ್ರಮೆ-ವಿಭ್ರಮೆಗಳು.ಇಂದು ನಾವೆಲ್ಲರೂ ಅರ್ಥದ ಸಂಪಾದನೆಯಲ್ಲಿನಿರತರಾಗಿದ್ದೇವೆ. ಆಯುರ್ವೇದಚಿಕಿತ್ಸಾ ಪದ್ಧತಿಯೂರೋಗ ತಪಾಸಣೆಯ ವಿಚಾರದಲ್ಲಿ ನಮ್ಮನ್ನು ಭಯ ಭೀತಗೊಳಿಸುವುದಿಲ್ಲ. ಆಯುರ್ವೇದಚಿಕಿತ್ಸೆ ಪ್ರಾರಂಭಗೊಂಡಾಗ ನಮ್ಮೊಳಗಿರುವ ಭೀತಿ ನಿವಾರಣೆಯಾಗುತ್ತದೆ.ಆದರೆಅಲೋಪತಿಯಲ್ಲಿಚಿಕಿತ್ಸೆ ಪ್ರಾರಂಭಗೊಂಡಾಗ ಭೀತಿಪ್ರಾರಂಭವಾಗುತ್ತದೆ.ನೀವು ನಿಮ್ಮ ಶರೀರ ಪರೀಕ್ಷೆಗಳನ್ನು ಮಾಡಿಸಿ ಒಬ್ಬಉತ್ತಮ ವೈದ್ಯರಲ್ಲಿ ಹೋಗುತ್ತೀರಿ.ಅಲ್ಲಿ ಅದರ ಫಲಿತಾಂಶದ ಮೇಲೆ ರೋಗ ನಿರ್ಧಾರ ಮಾಡಲಾಗುತ್ತದೆ.ಆಯುರ್ವೇದವು ಲಕ್ಷಣಗಳ ಆಧಾರದ ಮೇಲೆ ರೋಗವನ್ನು ಪತ್ತೆ ಹಚ್ಚುವುದಿಲ್ಲ. ನಮ್ಮಲ್ಲಿ ವಾತ ಕಫ ಪಿತ್ತಗಳ ಆಧಾರದಲ್ಲಿ ನಾಡಿ ಪರೀಕ್ಷೆಯ ಮೂಲಕ ಚಿಕಿತ್ಸೆಯಿದೆ. ಹೀಗಾಗಿ ಅಲೋಪತಿಯು ಲಕ್ಷಣಗಳ ಮೂಲಕ ಅಂಗವಿಶೇಷ ಚಿಕಿತ್ಸೆಯನ್ನುಗೈದುರೋಗ ನಿರ್ಧಾರಗೈದರೆ, ಆಯುರ್ವೇದವು ಶರೀರವನ್ನೇ ಸಮಗ್ರ ಅಂಗವಾಗಿಸಿ ರೋಗಕ್ಕೆ ಕಾರಣಗಳನ್ನು ಕಂಡು ಹುಡುಕುತ್ತದೆ. ಈ ವಿಚಾರದಲ್ಲಿಆಧುನಿಕ ವೈದ್ಯ ವಿಜ್ಞಾನದ ಶ್ರೇಷ್ಠ ವೈದ್ಯರುಕೂಡ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆಅನ್ನುವುದೆ ನಾನು ಖುಷಿ ಪಡುವ ವಿಚಾರವಾಗಿದೆ.

ಇಂದುದೇಶ ವಿದೇಶಗಳಲ್ಲಿ ಆಧುನಿಕ ವೈದ್ಯ ವಿಜ್ಞಾನದಲ್ಲಾಗುತ್ತಿರುವ ಸಂಶೋಧನೆಗಳ ಬಗ್ಗೆ ಚರ್ಚೆಗಳಾಗುತ್ತಿವೆ. ಚರಕ ಸಂಹಿತೆಯಲ್ಲೂದೇಹವನ್ನೇಒಂದು ಸಮಗ್ರ ಅಂಗವಾಗಿಸಿ ಚಿಕಿತ್ಸೆಗಳನ್ನು ನೀಡಲಾಗುತ್ತದೆ.ಆದರೆಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಪ್ರತಿಯೊಂದು ಅಂಗವನ್ನು ವಿಶೇಷ ಘಟಕವೆಂದು ಪರಿಗಣಿಸಿ ಅವುಗಳ ಚಿಕಿತ್ಸೆಯ ಬಗ್ಗೆ ವಿಶೇಷ ಶಿಕ್ಷಣ ನೀಡಲಾಗುತ್ತದೆ.ಆದರೆಅಮೇರಿಕದಂತಹ ಮುಂದುವರಿದದೇಶದಲ್ಲಿ ನಮ್ಮ ಜ್ಞಾನಿಗಳಾದ ಋಷಿ ಮುನಿಗಳು ಕಂಡು ಹುಡುಕಿದ ಯಾವುದೇ ದೋಷಗಳಿರದ, ಬಹು ದೂರದೃಷ್ಟಿಯ ನಮ್ಮ ಪ್ರಾಚೀನ ಪದ್ಧತಿಯ ವೈದ್ಯಕೀಯಶಿಕ್ಷಣದ ಬಗ್ಗೆ ಆಸಕ್ತಿ ಮೂಡಿರುವುದು ನಮಗೆ ಕಂಡು ಬರುತ್ತಿದೆ.
ಆಯುರ್ವೇದದಲ್ಲಿ ವಾತ ಪಿತ್ತ ಕಫಗಳ ಸ್ಥಿತಿಗಳನ್ನು ಆಧಾರವಾಗಿಟ್ಟುಕೊಂಡು ಬಹಳ ಸರಳವಾದ ರೀತಿಲ್ಲಿ ತಿಳಿಯಪಡಿಸಿ ಪರಿಣಾಮಕಾರಿಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹೀಗಾಗಿ ಆಯರ್ವೇದಚಿಕಿತ್ಸಾ ಪದ್ಧತಿರೋಗಿಯನ್ನು ಭಯ ಭೀತಗೊಳಿಸುವುದಿಲ್ಲ. ಆದರೆಇಂದುಆಲೋಪತಿಯಲ್ಲಿವಿಧ ವಿಧದ ಪರೀಕ್ಷೆಗಳಿಗೊಳಗಾದಷ್ಟು ಉತ್ತಮ ಫಲಿತಾಂಶವೆನ್ನುವ ಮಾನಸಿಕ ಸ್ಥಿತಿಯನ್ನು ಜನರಲ್ಲಿ ಹುಟ್ಟುಹಾಕಲಾಗಿದೆ. ರಕ್ತದ ವಿವಿಧ ಪರೀಕ್ಷೆಗಳು, ದೇಹದ ಭಾಗಗಳ ವಿವಿಧ ಸ್ಕ್ಯಾನಿಂಗ್ಗಳಿಂದ ನಾವು ನಿಜವಾಗಿಯೂಗುಣಮುಖರಾಗುತ್ತೆವೇನು?
ಯಾಕೆರೋಗ ಪತ್ತೆಯನ್ನು ಮಾಡುವುದುಅವಶ್ಯಕವಲ್ಲವೇ ಎಂಬ ನಿಮ್ಮ ಪ್ರಶ್ನೆಯನ್ನು ನಾನು ಒಪ್ಪುವೆನಾದರೂಅದು ಸರಳವಾಗಿರಬೇಕು ಎಂಬುದು ಸೂಕ್ತವಲ್ಲವೇ?ಭೀತಿ ಹುಟ್ಟಿಸುವಂತಿರಬಾರದು ಎಂಬುದು ಅಷ್ಟೇ ಮುಖ್ಯ ವಿಚಾರವಾಗಿದೆ.ಅಲೋಪತಿಯಲ್ಲಿ ಪರೀಕ್ಷಾ ವಿಧಾನವು ಎಕ್ಸ್ರೇ,ಅಲ್ಲಿಂದ ಮುಂದೆಅಲ್ಟ್ರಾಸೌಂಡ್, ಸಿಟಿಸ್ಕ್ಯಾನ್, ಹಿಮೊಟಾಲಜಿ, ಬಯೋಟೆಸ್ಟ್ಸ್ನಂತರ ಎಂ.ಆರ್.ಐ, ಹೀಗೆ ರೋಗ ಪತ್ತೆಯ ವಿಚಾರದಲ್ಲಿ ತರತರದ ಪರೀಕ್ಷೆಗಳನ್ನು ಮಾಡಿಸಿ ಮನುಶ್ಯನನ್ನು ರೋಗಿ ಎಂದು ಶೃತಪಡಿಸಿ ನಾನು ಗುಣಮುಖನಾಗುತ್ತೇನೆ ಎಂಬ ನಂಬಿಕೆಯನ್ನುತರಲಾಗುತ್ತದೆ. ಆದರೆ ಆಯರ್ವೇದವು ಇವೆಲ್ಲವುಗಳನ್ನು ಬಿಟ್ಟುರೋಗ ಮೂಲದ ಅನ್ವೇಷಣೆಯನ್ನು ಮಾಡುತ್ತದೆ.
ನಿಮಗೆ ತಲೆ ನೋವೆಂದು ವೈದ್ಯರ ಬಳಿ ಹೋಗುತ್ತೀರಿ.ಅದು ಅವನಿಗೂ ತಿಳಿದಿರುತ್ತದೆ.ಇವೆಲ್ಲವುಗಳನ್ನು ತಿಳಿದುಕೊಂಡೂ ನಾವು ವೈದ್ಯರ ಬಳಿ ಹೋಗುತ್ತಿದ್ದೇವೆಂಬುದೇ ಅಚ್ಚರಿಯ ವಿಚಾರ. ಇದು ಮಾಯಾ ನಗರಿ.ಇಲ್ಲಿ ನಡೆಯುವುದೆಲ್ಲ ಅಚ್ಚರಿ ಪಡುವ ವಿಚಾರ.ನೀವಿಲ್ಲಿ ಅರ್ಚನಟ್ರಸ್ಟ್ ಬಗೆಗಿನ ವಿಚಾರ ಮಾತನಾಡುತ್ತಿದ್ದರೆ ಅದು ಖುಷಿ ಪಡುವ ವಿಚಾರ.ಆದರೆಇಲ್ಲಿ ಉದಾಹರಣೆಗೆ ನಿಮಗೆ ತಲೆ ನೋವಿತ್ತು.ನೀವು ಯಾವ ವೈದ್ಯರ ಬಳಿಗೆ ಹೋದಿರಿ ಎಂಬ ಪ್ರಶ್ನೆಎದುರಾದಾಗ ನೀವು ಸಹಜವಾಗಿಯೇ ನಗರದ ಶ್ರೇಷ್ಠ ದುಬಾರಿ ವೈದ್ಯರ ಹೆಸರು ಹೇಳಬೇಕಾಗುತ್ತದೆ, ಹೇಳುತ್ತೀರಿ.ಸಣ್ಣಪುಟ್ಟ ವೈದ್ಯರ ಬಗೆಗಿನ ಮಾತೇಇಲ್ಲ. ಅವರ ಬಳಿ ಹೋದಿರಿ, ಏನೇನಾಯಿತು?ಯಾವ ವೈದ್ಯರು?ಆಸ್ಪತ್ರೆಯ ಬಿಲ್ ಎಷ್ಟಾಯಿತು?ನೀವು ನೀಡುವ ಬಿಲ್ ಮೊತ್ತ ಮತ್ತು ಸ್ವಾಸ್ಥ್ಯಕ್ಕೇನಾದರೂ ಸಂಬಂಧವಿದೆಯೆ?ಈ ಎಲ್ಲ ಮಾತುಗಳಲ್ಲಿ ನಿಮ್ಮರೋಗ ನಿವಾರಣೆಯ ಪ್ರಸ್ತಾಪವೇಇಲ್ಲ.ಇಲ್ಲಿ ನಮ್ಮೊಳಗಿನ ಅಂಧಕಾರವೆಂಬ ಹೊಸದೊಂದುರೋಗ ಪ್ರಕಟವಾಯ್ತು.ಸೇವೆಯೂಕೂಡ ಜೀವನದಲ್ಲಿ ಸ್ವಸ್ಥತೆಯನ್ನು ನೀಡುವ ಸಾಧನವಾಗಬೇಕು.
ಇಂತಹ ವ್ಯವಸ್ಥೆಯನ್ನು ಸರಿ ಪಡಿಸುವ ಬದಲು ನಾವು ಅದರ ಸುತ್ತ ಸುತ್ತುತ್ತಲೇಇದ್ದೇವೆ. ರೋಗದ ಮೂಲ ವಾತ ಪಿತ್ತಕಫವೆಂದು ತಿಳಿದು ನಾವು ಸೂಕ್ತ ಚಿಕಿತ್ಸಾವಿಧಾನವನ್ನು ಪಡೆಯಲಿಲ್ಲ. ಪರಿಣಾಮ ಈ ತ್ರಿವಿಧ ದೋಷಗಳ ನಮ್ಮ ಮಸ್ತಿಷ್ಕವನ್ನು ಆಳಲು ಪ್ರಾರಂಭಿಸಿದವು.ಪರಿಣಾಮ ನಾವು ಸಹಜಚಿಕಿತ್ಸಾ ವಿಧಾನವನ್ನೇ ಮರೆತೆವು.ಒಂದು ಸೀನು ಬಂತೆಂದರೂ ನನಗೇನಾದರೂ ಡೆಂಗ್ಯೂ ಬಂದಿರಬಹುದೆ?ನೋಡಿಡಾಕ್ಟರ್ ನನಗೇನಾದರೂಕಾಯಿಲೆಯಿದೆಯೇ?ಯಾಕೆ ಈ ಪರಿಯ ಭೀತಿ?ನಾವಿಷ್ಟು ಅಂಜುಬುರುಕರೇಕೆ?ನಾವು ಅಸುರಕ್ಷಿತರು ಎಂಬ ಭಾವ ನಮ್ಮನ್ನೇಕೆಕಾಡುತ್ತಿದೆ? ನಾನೊಂದು ವಿಚಾರವನ್ನು ಹೇಳಲು ಇಷ್ಟ ಪಡುತ್ತೇನೆ. ವಿದೇಶಗಳಲ್ಲಿ ನಮ್ಮಲ್ಲಿರುವಂತೆ ಭೀತಗೊಳಿಸುವ ಚಿಕಿತ್ಸಾ ಪದ್ಧತಿಯಿಲ್ಲ. ನೀವು ಎದೆ ನೋವೆಂದು ಹೋದರುಅವರು ಮೊದಲು ಪರೀಕ್ಷೆ ಮಾಡುತ್ತಾರೆ ಅವಶ್ಯವೆನಿಸಿದರೆ ಆಂಜಿಯೋಗ್ರಫಿಯನ್ನುಹತ್ತು ದಿನಗಳ ಬಳಿಕ ಮಾಡುತ್ತಾರೆ. ಅವಶ್ಯವೆನಿಸಿದಲ್ಲಿ ಮಾತ್ರ ನಿಮ್ಮನ್ನು ಒಳರೋಗಿಯಾಗಿ ದಾಖಲು ಮಾಡುತ್ತಾರೆ.
ನಮ್ಮಲ್ಲಿ ಚಿಕಿತ್ಸೆಯಎಲ್ಲ ಪ್ರಕ್ರಿಯೆಗಳು ಭೀತಿ ಹುಟ್ಟಿಸುವಂತಿವೆ. ಮಗುವಿಗೆ ಸೀನು ಬಂತೆಂದರೆ ನಗರದಲ್ಲಿ ವಾಸಿಸುವ ತಾಯಿ ಗಾಬರಿಯಾಗುತ್ತಾಳೆ.ಭೂಮಿ ಆಕಾಶಗಳನ್ನು ಒಂದು ಮಾಡುತ್ತಾಳೆ.ಆದರೆಗ್ರಾಮೀಣ ಪ್ರದೇಶದತಾಯಿ ಬಂದಿರೋದು ಸೀನು ತಾನೆ? ಏನೂ ಆಗೊಲ್ಲ ಬಾ.., ಬಿಸಿ ಬಿಸಿ ಕಷಾಯಕುಡಿಎಲ್ಲ ಸರಿಹೋಗತ್ತೆ ಅನ್ನುತ್ತಾಳೆ.ಈ ವಿಚಾರ ನಮ್ಮಅಜ್ಜಿ ಮುತ್ತಜ್ಜಿಯರ ಕಾಲದಿಂದಲೇ ಬಂದಿದೆ.ಅವರೇಕುಟುಂಬದಅತ್ಯುತ್ತಮದಾದಿಯರು. ಅವರಚಿಕಿತ್ಸಾ ವಿಧಾನವೂಕೂಡ ವಾತ ಪಿತ್ತಕಫ ಈ ಮೂರು ತತ್ವಗಳಿಗನುಸಾರವಾಗಿರುವ ಆಯುರ್ವೇದದಿಂದ ಪ್ರೇರಿತವಾಗಿದೆ.
( ಇನ್ನೂ ಇದೆ)

ಅನುವಾದ : ದಿವಾಕರ ಡೋಂಗ್ರೆ

ಆಚಾರ್ಯರ ಬಾಲಕೃಷ್ಣಜೀಅವರ ಪರಿಚಯ

ಮುಂಬೈನ ಅರ್ಚನಾ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಆಚಾರ್ಯ ಬಾಲಕೃಷ್ಣಜಿ ಇತ್ತೀಚೆಗೆ ಮಾಡಿದ ಹಿಂದಿ ಉಪನ್ಯಾಸವನ್ನು ಹಿರಿಯ ಮಿತ್ರರಾದ ಶ್ರೀ ದಿವಾಕರ್ ಡೋಂಗ್ರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆರಂಭದಲ್ಲಿ ಟ್ರಸ್ಟ್ ವತಿಯಿಂದ ಪರಿಚಯ ಮಾಡಿಕೊಡಲಾಯ್ತು. 

 ಆಚಾರ್ಯರ ಬಾಲಕೃಷ್ಣಜೀಅವರ ಪರಿಚಯ :

                 ಯಾರ ನಾಮೋಚ್ಚಾರಣೆಯಿಂದ ಆಯುರ್ವೇದ ಪ್ರಪಂಚವು ಧನ್ಯತಾಭಾವವನ್ನು ಅನುಭವಿಸುತ್ತ್ತಿದೆಯೊ, ಯಾರ ಭೇಟಿಯು ನಮ್ಮ ಕನಸುಗಳು ನನಸಾಗುವಷ್ಟು ಶ್ರಮದಾಯಕವಾಗಿದೆಯೊ, ಯಾರಕೀರ್ತಿಯು ಸಮಗ್ರ ಭಾರತದಲ್ಲಿ ಜನಜನಿತವಾಗಿದೆಯೊ ಅಂತಹ, ಭಾರತದೇಶದ ವಿಶಿಷ್ಠ ಸಾಧಕರೋರ್ವರನ್ನುಈ ಕಾರ್ಯಕ್ರಮಕ್ಕೆ ಸ್ವಾಗತಿಸುವ, ಅವರನ್ನುನಿಮಗೆಲ್ಲ ಪರಿಚಯಿಸುವ ಸೌಭಾಗ್ಯ ನನಗೆ ಈ ವೇದಿಕೆಯಿಂದ ಲಭಿಸಿದೆ. ಸ್ವಯಂ ನಾನು, ನಮ್ಮ ಪುಟ್ಟ ಸಂಸ್ಥೆ ’ಅರ್ಚನಾಟ್ರಸ್ಟ್’ ನ ವತಿಯಿಂದ ಆಯುರ್ವೇದ ಮತ್ತು ಸಂಸ್ಕೃತ ವಾಙ್ಮಯದ ವಿದ್ವಾಂಸರಾದ ಪರಮ ಪೂಜನೀಯರಾದ ಆಚಾರ್ಯ ಬಾಲಕೃಷ್ಣಜೀಯವರನ್ನು ಅಭಿಮಾನಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಂದಿನ ಈ ಶುಭ ಸಂಜೆ ’ಸ್ವಸ್ಥಜೀವನಸೂತ್ರ’ ವೆಂಬಕಾರ್ಯಕ್ರಮದಲ್ಲಿ ನಾವೆಲ್ಲರೂ ಸ್ವಸ್ಥಜೀವನಸೂತ್ರವನ್ನುತಿಳಿದುಕೊಳ್ಳುವಲ್ಲಿ ಆಚಾರ್ಯ ಬಾಲಕೃಷ್ಣಜೀಯವರು ನಮಗೆ ಮಾರ್ಗದರ್ಶನನೀಡಲಿದ್ದಾರೆ. ಆಚಾರ್ಯರೇ, ತಾವು ವಿವಿಧ ಟಿ.ವಿ.ಚಾನೆಲ್ಗಳಲ್ಲಿ ಆಯುರ್ವೇದ ಪದ್ಧತಿಯಕುರಿತಾದ ಕಾರ್ಯಕ್ರಮಗಳನ್ನು ನೀಡಿ ಲಕ್ಷಾಂತರ ಶ್ರೋತೃ-ದರ್ಶಕರ ಮನ ಸೂರೆಗೈದಿದ್ದೀರಿ. ತಾವುತಮ್ಮಅತ್ಯಮೂಲ್ಯ ಸಮಯವನ್ನು ನಮ್ಮೊಂದಿಗೆ ಹಂಚಿಕೊಂಡಿರುವುದಕ್ಕಾಗಿ ನಾವೆಲ್ಲ ನಿಮಗೆ ಆಭಾರಿಗಳಾಗಿದ್ದೇವೆ. ಆಚಾರ್ಯ ಬಾಲಕೃಷ್ಣಜೀಯವರನ್ನು ಪರಿಚಯಿಸುವಅಗತ್ಯವಿಲ್ಲವಾದರೂ ಔಪಚಾರಿಕವಾಗಿ ನಾನು ಅವರ ಬಹುಮುಖಿ ಪ್ರತಿಭೆಯನ್ನು ನಿಮಗೆಲ್ಲ ಪರಿಚಯಿಸುತ್ತಿದ್ದೇನೆ. ಆಯುರ್ವೇದ ವೈದ್ಯ ಪದ್ಧತಿಯಗೌರವಾನ್ವಿತ ಸಾಧಕಆಚಾರ್ಯ ಬಾಲಕೃಷ್ಣಜೀಯವರ ಜನನ ೪, ಆಗಸ್ಟ್ ೧೯೫೬ರಲ್ಲಿ ಆಯಿತು.ಅವರುತಂದೆ ತಾಯಿಗಳ ಪ್ರೀತಿ ಮತ್ತು ತಮ್ಮ ಗುರುಗಳ ಸೂಕ್ತ ಮಾರ್ಗದರ್ಶನದಲ್ಲಿ ಆಯುರ್ವೇದ ಮತ್ತು ಸಂಸ್ಕೃತ ಭಾಷೆಯಅಧ್ಯಯನದಲ್ಲಿ ಅಪಾರ ಸಾಧನೆಗೈದರು.ಆಚಾರ್ಯರುತಮ್ಮ ಸತತಅಧ್ಯಯನ, ಪರಿಶ್ರಮಗಳಿಂದ ಹಿಮಾಲಯಕಡಿದಾದ ಪರ್ವತ ಶ್ರೇಣಿಗಳ ಕಣಿವೆಗಳು ಮತ್ತುಗಹನವಾದ ಅರಣ್ಯಗಳಲ್ಲಿ ಓಡಾಡಿ ಔಷಧಗಿಡ ಮೂಲಿಕೆಗಳ ಬಗ್ಗೆ ಸಂಶೋಧನೆಗೈದುಅಪಾರಜ್ಞಾನವನ್ನು ಸಂಪಾದಿಸಿದರು. ಆಯುರ್ವೇದ ಮತ್ತು ಸಂಸ್ಕೃತದಲ್ಲಿ ಆಚಾರ್ಯರದು ಅಪಾರವಾದ ಸಾಧನೆ ಮತ್ತುಜ್ಞಾನ ಸಿದ್ಧಿ. ಆಚಾರ್ಯ ಬಾಲಕೃಷ್ಣಜೀಯವರು ತಪಸ್ವಿಗಳು, ಬ್ರಹ್ಮಚರ್ಯವ್ರತ ಸಾಧಕರೂಆಗಿದ್ದಾರೆ.ಇವರ ದೂರದರ್ಶಿತ್ವದ ಫಲವಾಗಿಯೋಗ ಮಂದಿರ, ಪತಂಜಲಿ ಟ್ರಸ್ಟ್ನ ವತಿಯಿಂದ ವಿಶ್ವಆಯುರ್ವೇದಆಸ್ಪತ್ರೆ, ಯೋಗ ಕೇಂದ್ರಗಳು, ಪ್ರಯೋಗ ಶಾಲೆಗಳು, ವಿಶ್ವವಿದ್ಯಾಲಯ, ಪತಂಜಲಿಆಯುರ್ವೇದಕಾಲೇಜು, ಪತಂಜಲಿ ಶಿಕ್ಷಣ ಸಂಸ್ಥೆಯೂ ಸೇರಿದಂತೆ ಅನೇಕ ಸಂಸ್ಥೆಗಳು ಸ್ಥಾಪಿಸಲ್ಪಟ್ಟವು.ಆತ್ಮೋನ್ನತಿಯೊಂದಿಗೆರಾಷ್ಟ್ರ ಸೇವೆಯಲ್ಲೂತಮ್ಮನ್ನು ತೊಡಗಿಸಿಕೊಂಡವರು ಪೂಜನೀಯಆಚಾರ್ಯಜೀಯವರು.ಆಚಾರ್ಯ ಬಾಲಕೃಷ್ಣರು ವರ್ತಮಾನಕಾಲದ ಧನ್ವಂತರಿಯೆಂದೇ ಗುರುತಿಸಲ್ಪಡುತ್ತಾರೆ.ಆಚಾರ್ಯ ಬಾಲಕೃಷ್ಣ ಅವರ ಈ ಭವ್ಯ ದಿವ್ಯ ಸಾಧನೆಗಾಗಿ ಭಾರತದ ಹಿಂದಿನ ರಾಷ್ಟ್ರಪತಿ ಅಬ್ದುಲ್ಕಲಾಮ್ಅವರಿಂದ ಗೌರವ ಪುರಸ್ಕಾರ, ನೇಪಾಲದ ಮಹಾರಾಜರಿಂದ ಪುರಸ್ಕಾರ, ಕರ್ನಾಟಕ ಸರಕಾರದಿಂದ ನೀಡಲ್ಪಟ್ಟ ’ಸುಜ್ಞಾನಶ್ರೀ’ ಪುರಸ್ಕಾರಗಳು ಅವರ ಸಾಧನೆಗೆ ಸಂದ ಗೌರವಗಳಾಗಿವೆ. ಆಚಾರ್ಯರು ಸಾವಿರಾರುಜನರನ್ನುರೋಗಮುಕ್ತರನ್ನಾಗಿ ಮಾಡಿದ್ದಾರೆ. ಅವರು ಇದುವರೆವಿಗೂ ಹತ್ತು ಲಕ್ಷ್ಷಕ್ಕೂ ಮಿಕ್ಕಿ ರೋಗಿಗಳ ತಪಾಸಣೆಗೈದಿದ್ದಾರೆ. ಆಯುರ್ವೇದ ಚಿಕಿತ್ಸಾ ಪದ್ಧತಿಯು ಭಾರತೀಯಸಂಸ್ಕೃತಿ ಮತ್ತು ಪ್ರಕೃತಿಯೊಂದಿಗೆ ಸಮ್ಮಿಳಿತವಾದ ಚಿಕಿತ್ಸಾ ಪದ್ಧತಿಯಾಗಿದೆ. ಮನುಷ್ಯನುದೈಹಿಕವಾಗಿ ಸ್ವಸ್ಥನಾದಾಗ ಮಾತ್ರ ಅವನ ದೈನಂದಿನ ಕೆಲಸ ಕಾರ್ಯಗಳ ಜತೆಗೆ ಸಿದ್ಧಿ ಸಾಧನೆಗಳನ್ನು ಮಾಡಬಹುದಾಗಿದೆ. ಆಚಾರ್ಯರ ಸಂಗಡವಿದ್ದಾಗಪ್ರತಿಯೊಂದು ವ್ಯಾಧಿಗೂಒಂದುಪರಿಹಾರವಿದೆ, ಪ್ರತಿಯೊಂದು ನೋವಿಗೂ ಒಂದುಸಮಾಧಾನವಿದೆ. ಒಂದು ಮುಗುಳ್ನಗುವಿನ ಎದುರು ಮರಣವೂ ಸೋಲನ್ನೊಪ್ಪಿಕೊಳ್ಳಬಹುದು ಬದುಕು ಅಷ್ಟು ತ್ರಾಸದಾಯಕವೆನಿಸದಿರಬಹುದು. ಆಚಾರ್ಯಜೀ, ನಾವು ನಮ್ಮ ಶರೀರವನ್ನು ಎಷ್ಟು ಸ್ವಸ್ಥ ಮತ್ತು ನಿರೋಗಿಯನ್ನಾಗಿಡಬಹುದು, ನಮ್ಮಆಹಾರ ಪದ್ಧತಿ ಹೇಗಿರಬೇಕು, ಶರೀರಕ್ಕೆ ಬರಬಹುದಾದ ರೋಗಗಳ ಕುರಿತಂತೆ ಚಿಕಿತ್ಸೆ ಮತ್ತು ಅನುಪಾನ ಹೇಗಿರಬೇಕು ಇವೆಲ್ಲವುಗಳ ಕುರಿತು ನಮಗಿಂದು ನಿಮ್ಮ ಮಾರ್ಗದರ್ಶನದಅವಶ್ಯಕತೆಯಿದೆ.ನಾವೀಗ ಈ ಕುರಿತಂತೆ ಸೂಕ್ತ ಮಾರ್ಗದರ್ಶನವನ್ನು ನೀಡಲುಆಚಾರ್ಯಜೀಅವರನ್ನು ವೇದಿಕೆಗೆ ಸ್ವಾಗತಿಸೋಣ.

Sunday, April 22, 2018

ಇನ್ನು ಮುಂದೆ ಪೂಜ್ಯ ಬಾಬಾರಾಮದೇವ್ ಜಿ, ಶ್ರದ್ಧೇಯ ಆಚಾರ್ಯ ಬಾಲಕೃಷ್ಣ, ಪೂಜ್ಯ ಪ್ರಧ್ಯುಮ್ನಜಿ ಮಹಾರಾಜ್ ಇವರ  ಹಿಂದಿ ಉಪನ್ಯಾಸಗಳನ್ನು ಕನ್ನಡಕ್ಕೆ  ಅನುವಾದಿಸಿ ಪ್ರಕಟಿಸಲು ಪ್ರಯತ್ನ ಮಾಡಲಾಗುವುದು.

ಸಾಧನಾ ಪಥ



 ವೇದಿಕ್ ಚಾನಲ್ ನೋಡ್ತಾ ಇದ್ದೆ. ಸಾಧ್ವಿ ದೇವಪ್ರಿಯ ( ಡಾ.ಸುಮನ್) ಅವರ ಮಾತುಗಳು ನನ್ನನ್ನು ಪ್ರಶ್ನೆ ಮಾಡಿಕೊಳ್ಳಲು ಪ್ರೇರೇಪಿಸಿತು.ಏನದು?

ಸಮಾಜದಲ್ಲಿ ಲಕ್ಷ ಲಕ್ಷ ಜನ ಸೇವಾ ಮೋಭಾವನೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಆದರೂ ಒಮ್ಮೆ ನಮಗೇ ನಾವು ಪ್ರಶ್ನೆ ಹಾಕಿಕೊಳ್ಳೋಣ " ನಾನು ಮಾಡುತ್ತಿರುವ ಕೆಲಸವನ್ನು ಎಷ್ಟು ಜನರು ಗುರುತಿಸಬಹುದು, ಎಷ್ಟು ಜನ ಮೆಚ್ಚ ಬಹುದು, ಎಷ್ಟು ಜನ ಭೇಶ್! ಅನ್ನ ಬಹುದು !! ಎಂದು ಯಾವಾಗಲೂ ನಮ್ಮ ಮನಸ್ಸು ಬಯಸಿಲ್ಲವೇ?

ಸಾವಿರಾರು ಜನರನ್ನು ಸಂಘಟಿಸಿ ಕಾರ್ಯಕ್ರಮ ಮಾಡುತ್ತಿದ್ದೇವೆ! ಕಾರ್ಯಕ್ರಮ ಅದ್ಭುತ ಯಶಸ್ಸು ಗಳಿಸಿತು!!
ಆದರೆ ನಮ್ಮ ಸೇವೆಯ ಬಗ್ಗೆ ಒಬ್ಬರೂ ಒಂದು ಮೆಚ್ಚುಗೆಯ ಮಾತನಾಡಲಿಲ್ಲ!!
ಎಂದು ಕೊಳ್ಳೋಣ!!
ಆಗಲೂ ನಮ್ಮ ಮನಸ್ಸು ಶಾಂತವಾಗಿ ಸಮಸ್ಥಿತಿಯಲ್ಲಿದೆಯೇ??
ಜನರು ಗೇಲಿಮಾಡಿದರೂ, ಹೀಯಾಳಿಸಿದರೂ ಸಹ ನಮ್ಮ ಮನಸ್ಸು ವಿಚಲಿತವಾಗಲಿಲ್ಲಾ ಎಂದಾದರೆ ನಾವು ಅಧ್ಯಾತ್ಮ ಸಾಧನಾ ಪಥದಲ್ಲಿದ್ದೇವೆ ಎಂದು ಅರ್ಥ.

Wednesday, March 21, 2018

ವೇದಭಾರತಿ ಬೇರೆ, ಪತಂಜಲಿ ಯೋಗಪೀಠದ ಕಾರ್ಯಚಟುವಟಿಕೆ ಬೇರೆ ಎನಿಸುವುದೇ ಇಲ್ಲ.

ನನಗೆ ವೇದಭಾರತಿ ಬೇರೆ, ಪತಂಜಲಿ ಯೋಗಪೀಠದ ಕಾರ್ಯಚಟುವಟಿಕೆ ಬೇರೆ ಎನಿಸುವುದೇ ಇಲ್ಲ. ಕಾರಣ ಪೂಜ್ಯ ಬಾಬಾ ರಾಮದೇವ್ ಜಿ ಆಶಯದಂತೆ ಮತ್ತೊಮ್ಮೆ ಋಷಿಸಂಸ್ಕೃತಿಯನ್ನು ಪುನರುತ್ಥಾನ ಗೊಳಿಸಬೇಕೆಂಬ ಪೂಜ್ಯ ಸ್ವಾಮೀಜಿಯವರ ಕನಸೇ ವೇದಭಾರತಿಯದೂ ಕೂಡ.
 ವೇದಭಾರತಿಯ ಕಾರ್ಯಾಲಯ ಈಶಾವಾಸ್ಯಮ್ ನಲ್ಲಿ ನಡೆಯುತ್ತಿರುವ ಯೋಗ ಕೇಂದ್ರದಲ್ಲಿ ನಿತ್ಯವೂ 15 ನಿಮಿಷಗಳು ಅಗ್ನಿಹೋತ್ರವನ್ನು  ಕೂಡ ಪ್ರಾಯೋಗಿಕವಾಗಿ ಕಳೆದ ಒಂದು ತಿಂಗಳಿನಿಂದ ನಡೆಸುತ್ತಿದ್ದು, ಯೋಗಾಭ್ಯಾಸಿಗಳು ಸಂತೋಷದಿಂದ ಅಗ್ನಿಹೋತ್ರದಲ್ಲೂ ಸಹ ಪಾಲ್ಗೊಳ್ಳುತ್ತಿದ್ದಾರೆ. ಮತ್ತೊಂದು ಕೇಂದ್ರವಾದ ಗಹನ ಯೋಗ ಕೇಂದ್ರದಲ್ಲಿ ವಾರಕ್ಕೊಮ್ಮೆ ಬುಧವಾರ ಅಗ್ನಿಹೋತ್ರವು ನಡೆಯುತ್ತಿದೆ.





Wednesday, February 28, 2018

ಜೀವರು ಮತ್ತು ದೇವರು [Jeevatma and Paramatma]


     ಸ್ವಾರಸ್ಯಕರವಾದ ದೃಷ್ಯಕಾವ್ಯದ ರೀತಿಯಲ್ಲಿ ಈ ವೇದಮಂತ್ರ ಜೀವಿಗಳು ಮತ್ತು ದೇವರ ನಡುವಣ ಸಂಬಂಧವನ್ನು ಚಿತ್ರಿಸಿದೆ:
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ| ತಯೋರನ್ಯಃ ಪಿಪ್ಪಲಂ ಸ್ವಾದ್ವತ್ಯನಶ್ನನ್ನನ್ಯೋ ಅಭಿ ಚಾಕಶೀತಿ|| (ಋಕ್.೧.೧೬೪.೨೦)
     ಯಾವಾಗಲೂ ಜೊತೆಯಾಗಿರುವ, ಸ್ನೇಹಿತರಾದ (ಅಥವಾ ಆತ್ಮ ಎಂಬ ಸಮಾನ ವ್ಯಾಖ್ಯೆಗೊಳಪಟ್ಟ) ಎರಡು ಸುಂದರವಾದ ರೆಕ್ಕೆಗಳನ್ನುಳ್ಳ ಹಕ್ಕಿಗಳು (ಅಥವಾ ಸೊಗಸಾದ ಗತಿಯನ್ನುಳ್ಳ ಇಬ್ಬರು ಆತ್ಮರು) ಒಂದೇ ಮರವನ್ನು (ಅಥವಾ ಪ್ರಾಕೃತಿಕ ಜಗತ್ತನ್ನು) ಆಶ್ರಯಿಸಿದ್ದಾರೆ. ಅವರಲ್ಲಿ ಒಬ್ಬನು (ಜೀವಾತ್ಮನು) ಮಧುರವಾದ ಫಲವನ್ನು ಸವಿಯುತ್ತಿದ್ದಾನೆ. ಮತ್ತೊಬ್ಬನು ಏನನ್ನೂ ಸೇವಿಸದೆ ಸಾಕ್ಷಿರೂಪನಾಗಿ ವಿರಾಜಿಸುತ್ತಿದ್ದಾನೆ. ಸರಳಗನ್ನಡದಲ್ಲಿ ಇದರ ಭಾವಾರ್ಥವನ್ನು ಹೀಗೆ ಹೇಳಬಹುದೇನೋ!
ಒಂದನೊಂದನಗಲಿರದ ಸೊಗದ ಹಕ್ಕಿಗಳೆರಡು
ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು |
ಫಲ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ
ಜೀವಾತ್ಮ ಪರಮಾತ್ಮರವರಲ್ತೆ ಮೂಢ ||
     ಅನಾದಿ ಕಾಲದಿಂದಲೂ ಜಿಜ್ಞಾಸುಗಳನ್ನು ಬಹಳವಾಗಿ ಕಾಡಿರುವ, ಕಾಡುತ್ತಿರುವ ಮತ್ತು ಮುಂದೆಯೂ ಕಾಡಲಿರುವ ಮೂರು ಕುತೂಹಲದ ಸಂಗತಿಗಳೆಂದರೆ, ಜಗತ್ತು, ದೇವರು ಮತ್ತು ಜೀವರು! ಅನೇಕ ಧರ್ಮಗ್ರಂಥಗಳು, ಪುರಾಣಗಳು, ಪುಣ್ಯಕಥೆಗಳು ಈ ಮೂರರ ಸಂಗತಿಗಳ ಕುರಿತೇ ಸುತ್ತುತ್ತವೆ. ಮೇಲೆ ಹೇಳಿದ ವೇದಮಂತ್ರ ಜೀವರು ಮತ್ತು ದೇವರ ನಡುವಣ ಸಂಬಂಧ ಹೇಗಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದೆ. ಜೀವಿಗಳಿಗೂ, ದೇವರಿಗೂ ಅವಿನಾಭಾವ ಸಂಬಂಧವಿದೆ. ಒಂದನ್ನು ಮತ್ತೊಂದು ಸದಾ ಆಶ್ರಯಿಸಿರುತ್ತದೆ. ಜೀವಿಗಳು ಜಗತ್ತಿನ ಸುಖ, ಸೌಲಭ್ಯಗಳನ್ನು ಅನುಭವಿಸುತ್ತಾ ಇದ್ದರೆ ಪರಮಾತ್ಮ ಜೀವಿಗಳ ಕ್ರಿಯೆಗಳನ್ನು ಕೇವಲ ಸಾಕ್ಷಿರೂಪವಾಗಿ ನೋಡುತ್ತಿರುತ್ತಾನೆ ಎಂದು ಹೇಳುವ ಈ ಮಂತ್ರ ನಮ್ಮಲ್ಲಿ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. 
     ಪರಮಾತ್ಮ ಸರ್ವಶಕ್ತ, ಸರ್ವತೃಪ್ತ, ಸರ್ವವ್ಯಾಪಕ, ನಿರ್ವಿಕಾರಿ, ನಿರಾಕಾರಿಯಾಗಿರುವುದರಿಂದ ಆತನಿಗೆ ಯಾವುದೇ ಸಂಗತಿಯ ಅವಶ್ಯಕತೆ ಇರುವುದಿಲ್ಲ. ಯಾವುದಾದರೂ ಸಂಗತಿ ಬೇಕು, ಯಾವುದಾದರೂ ಅಗತ್ಯ ಅವನಿಗೆ ಇದೆ ಎಂದರೆ ಆತ ಪರಮಾತ್ಮ ಹೇಗಾದಾನು? ಆಕಾರಿಯಾಗಿದ್ದರೆ, ಆತ ಸರ್ವವ್ಯಾಪಕನಾಗಿರಲಾರ, ಆದ್ದರಿಂದ ಆತ ನಿರಾಕಾರಿಯೇ ಸರಿ. ಆತನನ್ನು ಹೋಲಿಸಬಹುದಾದ ಯಾವುದಾದರೂ ಒಂದು ಸಂಗತಿ ಇದ್ದರೆ, ಅದು ಬಹುಷಃ ಎಲ್ಲೆಲ್ಲೂ ವ್ಯಾಪಿಸಿರುವ, ಅದು ಇಲ್ಲದ ಸ್ಥಳವೇ ಇರದ, ಜಗತ್ತನ್ನು ಸ್ಥಿತಿಯಲ್ಲಿ ಇರಿಸಲು ಸಹಾಯಕಾರಿಯಾಗಿರುವ, ಇದ್ದರೂ ತನ್ನ ಇರುವನ್ನು ತೋರಿಸಿಕೊಳ್ಳದ, ಯಾವುದಕ್ಕೂ ಅಡ್ಡಿಪಡಿಸದ, ಸುಡಲಾರದ, ಕತ್ತರಿಸಲಾಗದ, ತೋಯಿಸಲಾಗದ, ಆಕಾರವಿರದ, ಜಗದ ಯಾವುದೇ ಚಟುವಟಿಕೆಗಳಿಗೆ ಸಾಕ್ಷಿಯಾಗುವ, ನಿರ್ಲಿಪ್ತವಾಗಿರುವ ಆಕಾಶವೇ ಆಗಿದೆ.
      ದೇವರು ಸರ್ವಶಕ್ತ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಅವನು ಜೀವಿಗಳ ಕಾರ್ಯಗಳನ್ನು ಕೇವಲ ಸಾಕ್ಷಿಯಾಗಿ ನೋಡುತ್ತಿರುತ್ತಾನೆ ಅಂದರೆ ಸರಿಯೇ? ಯಾರೋ ಇನ್ಯಾರನ್ನೋ ಕೊಲೆ ಮಾಡಿದರೂ ನೋಡಿಕೊಂಡು ಸುಮ್ಮನಿರುತ್ತಾನೆ ಎಂದರೆ, ಕೊಲೆಯಾದವನು ಯಾರಿಗೂ ತೊಂದರೆ ಕೊಡದ ಸಜ್ಜನನಾಗಿದ್ದರೂ ಅವನ ರಕ್ಷಣೆಗೆ ಬರುವುದಿಲ್ಲವೆಂದರೆ ಅವನು ಎಂತಹ ದೇವರು ಎಂದು ಅನ್ನಿಸುವುದಿಲ್ಲವೇ? ಏಕೆ ಹೀಗೆ? ಭಗವದ್ಗೀತೆಯಲ್ಲಿ ಹೇಳಿದಂತೆ ಧರ್ಮರಕ್ಷಣೆಗಾಗಿ, ದುಷ್ಟರ ಶಿಕ್ಷೆಗಾಗಿ, ಶಿಷ್ಟರ ರಕ್ಷಣೆಗಾಗಿ ಅವತರಿಸಿ ಬರುತ್ತೇನೆ ಎಂದು ಹೇಳಿದ ಮಾತು ಸುಳ್ಳಾಗುವುದಿಲ್ಲವೇ? ಈ ವಿಷಯದಲ್ಲಿ ಆಳವಾಗಿ ಜಿಜ್ಞಾಸೆ ಮಾಡಿದಲ್ಲದೆ ಇದರಲ್ಲಿನ ಹೊಳಹು ಗೋಚರವಾಗುವುದಿಲ್ಲ. ಕೆಲವರು ಹೇಳುತ್ತಾರೆ, ನಮ್ಮ ಕೈಯಲ್ಲಿ ಏನಿದೆ? ನಾವೆಲ್ಲಾ ಅವನು ಆಡಿಸಿದಂತೆ ಆಡುವ ಸೂತ್ರದ ಗೊಂಬೆಗಳು! ಇದನ್ನು ಒಪ್ಪುವುದಾದರೆ, ನಾವು ಯಾರದಾದರೂ ತಲೆಯನ್ನು ಒಡೆದರೆ ಅದು ದೇವರೇ ಮಾಡಿಸಿದ್ದು, ನಮ್ಮ ತಪ್ಪಲ್ಲ ಎಂದಾಗುವುದಿಲ್ಲವೇ? ಹಾಗಾದರೆ ತಲೆ ಒಡೆದ ತಪ್ಪಿಗೆ ಶಿಕ್ಷೆ ಯಾರಿಗೆ ಕೊಡಬೇಕು? 
     ಎಲ್ಲಾ ನಮ್ಮ ಹಣೆಬರಹ, ನಾವೇನು ಮಾಡಕ್ಕೆ ಆಗುತ್ತೆ? ಎಂಬ ಮಾತನ್ನು ಕೇಳುತ್ತಿರುತ್ತೇವೆ. 'ಮಾಡಿದ್ದುಣ್ಣೋ ಮಹರಾಯ' ಎಂಬ ಪ್ರಸಿದ್ಧ ನಾಣ್ನುಡಿಯೂ ಕಿವಿಗೆ ಬೀಳುತ್ತಿರುತ್ತದೆ. ಈ ಮಾತುಗಳಲ್ಲಿ ನಾವು ಏನು ಮಾಡಿದರೂ ದೇವರು ಏಕೆ ಸುಮ್ಮನಿರುತ್ತಾನೆ ಎಂಬುದಕ್ಕೆ ಸೂಕ್ಷ್ಮವಾಗಿ ಉತ್ತರ ಕಾಣುತ್ತದೆ. ಅದೆಂದರೆ, ಕರ್ಮಕ್ಕೆ ತಕ್ಕ ಫಲ ಅನಿವಾರ್ಯ ಎಂಬುದು! ದೇವರು ಒಂದು ಸರಳ ನಿಯಮವನ್ನು ಮಾಡಿಟ್ಟುಬಿಟ್ಟಿದ್ದಾನೆ. 'ನೀನು ಏನು ಮಾಡುತ್ತೀಯೋ ಅದಕ್ಕೆ ನೀನೇ ಹೊಣೆ. ತಪ್ಪು ಮಾಡಿದರೂ ಸರಿ, ಒಳ್ಳೆಯದು ಮಾಡಿದರೂ ಸರಿ. ಅದಕ್ಕೆ ತಕ್ಕಂತೆ ಫಲವನ್ನು ನೀನು ಅನುಭವಿಸಲೇಬೇಕು' ಎಂಬುದೇ ಆ ನಿಯಮ. 'ಈ ಮಾತಿನಲ್ಲಿ ಸತ್ಯವಿಲ್ಲ. ಅನ್ಯಾಯ ಮಾಡಿದವರು, ದರೋಡೆ ಮಾಡುವವರು ಸುಖವಾಗಿಲ್ಲವೇ? ನ್ಯಾಯ, ನೀತಿ, ಧರ್ಮ ಅನ್ನುವವರೇಕೆ ಕಷ್ಟಪಡುತ್ತಿದ್ದಾರೆ?' ಎಂಬ ಮಾತೂ ಬರುತ್ತದೆ. ಆದರೆ ಅನ್ಯಾಯ ಮಾಡಿದವರು ಎಷ್ಟು ಸುಖಿಗಳಾಗಿದ್ದಾರೆ ಎಂಬುದು ಅವರಿಗೇ ಗೊತ್ತು. ಅಲ್ಲದೆ,  ಸುಖ ಮತ್ತು ದುಃಖಗಳು ಮಾನಸಿಕ ಸ್ಥಿತಿಗಳಷ್ಟೇ ಹೊರತು ಭೌತಿಕ ಸಂಪತ್ತು, ವಿಚಾರಗಳಲ್ಲಿ ಇಲ್ಲ. ವೇದಗಳು ಪುನರ್ಜನ್ಮವನ್ನು ಪ್ರತಿಪಾದಿಸುತ್ತಿದ್ದು, ಹಿಂದಿನ ಕರ್ಮಗಳಿಗನುಸಾರವಾಗಿ ಮುಂದೆ ಪಡೆಯುವ ಜನ್ಮ ಲಭ್ಯವಾಗುತ್ತದೆ ಎನ್ನುತ್ತದೆ. ಅನೇಕರು ಹುಟ್ಟುವಾಗಲೇ ಅಂಗವಿಕಲರಾಗಿ, ರೋಗಿಷ್ಟರಾಗಿ, ಬಡವರಾಗಿ, ಶ್ರೀಮಂತರಾಗಿ, ಬಲಶಾಲಿಗಳಾಗಿ, ಪ್ರಾಣಿ-ಪಕ್ಷಿಗಳಾಗಿ, ಕ್ರಿಮಿ-ಕೀಟಗಳಾಗಿ ಹೀಗೆ ವಿವಿಧ ರೀತಿಯಲ್ಲಿ ಹುಟ್ಟಲು ಈ ಕಾರಣವಲ್ಲದೆ ಬೇರೆ ಕಾರಣಗಳು ಇರಲಾರವು. ಬೇರೆ ಯಾವುದೇ ಕಾರಣವಿಲ್ಲದೆ ಹೀಗೆ ಹುಟ್ಟುವುದಾದರೆ ದೇವರು ಪಕ್ಷಪಾತಿ ಎನ್ನಿಸಿಕೊಳ್ಳುತ್ತಾನೆ. ಆಸ್ತಿಕ ಮನಸ್ಸುಗಳನ್ನು ದೇವರು ಪಕ್ಷಪಾತಿ ಎಂಬುದನ್ನು ಒಪ್ಪುವುದಿಲ್ಲ. ಈ ವಿಷಯ ಸಂಕ್ಷಿಪ್ತವಾಗಿ ಚರ್ಚಿಸಬಹುದಾದ ವಿಷಯವಲ್ಲವಾದುದರಿಂದ ಇಲ್ಲಿಗೇ ಮೊಟಕುಗೊಳಿಸಿ ಮೂಲ ವಿಷಯಕ್ಕೆ ಮತ್ತೆ ಬರೋಣ.  
     ಒಂದು ಲಘುವಾದರೂ ಅರ್ಥವತ್ತಾದ ಉದಾಹರಣೆ ನೋಡೋಣ. ಅವರಿಬ್ಬರೂ ನೆರೆಹೊರೆಯವರು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ, ಇಬ್ಬರೂ ಒಬ್ಬನೇ ದೇವರ ಭಕ್ತರು. ಒಬ್ಬ ಪ್ರಾರ್ಥಿಸುತ್ತಾನೆ, 'ದೇವರೇ, ಪಕ್ಕದ ಮನೆಯವನು ದುಷ್ಟ. ನನಗೆ ಬಹಳ ತೊಂದರೆ ಕೊಡುತ್ತಾನೆ. ಅವನ ಎರಡು ಕಣ್ಣುಗಳನ್ನೂ ಇಂಗಿಸಿಬಿಡು'. ಇನ್ನೊಬ್ಬನೂ ಕೋರುತ್ತಾನೆ, 'ದೇವರೇ, ಅವನ ಕಾಟ ಸಹಿಸಲಾಗುತ್ತಿಲ್ಲ. ಅವನಿಗೆ ಲಕ್ವ ಹೊಡೆಯಲಿ'. ದೇವರು ಯಾರ ಮಾತು ಕೇಳಬೇಕು? ಇಬ್ಬರೂ ಭಕ್ತರೇ, ಇಬ್ಬರೂ ದೇವರ ಮಕ್ಕಳೇ. ಇಬ್ಬರ ಬೇಡಿಕೆಯನ್ನೂ ಈಡೇರಿಸಿದರೂ ಅವನ ಭಕ್ತರಿಗೇ ತೊಂದರೆ. ಆಗ ಮತ್ತೆ ಪ್ರಾರ್ಥಿಸಿ ಸರಿಪಡಿಸುವಂತೆ ಗೋಳಾಡುತ್ತಾರೆ, ಸುಮ್ಮನಿರುವುದೇ ಲೇಸು ಎಂದು ಸುಮ್ಮನಾಗಿಬಿಡುತ್ತಾನೆ.
     ಮಾನವನ ಬದುಕಿನಲ್ಲಿ ದೇವರ ಪಾತ್ರ ಹೇಗಿರುತ್ತದೆಂಬುದಕ್ಕೆ ಇನ್ನೊಂದು ಸಣ್ಣ ಉದಾಹರಣೆಯಾಗಿ ಚದುರಂಗದ ಆಟವನ್ನೇ ತೆಗೆದುಕೊಳ್ಳೋಣ. ಈ ಆಟಕ್ಕೆ ನಿಯಮವಿದೆ. ನಿಯಮಗಳ ಅನುಸಾರವಾಗಿ ಚದುರಂಗದ ಕಾಯಿಗಳನ್ನು ಆಟಗಾರ ನಡೆಸಬೇಕು. ನಿಯಮಗಳ ಅನುಸಾರವಾಗಿ ಆಟಗಾರ ಬುದ್ಧಿಮತ್ತೆಯನ್ನು ಉಪಯೋಗಿಸಿ ಕಾಯಿಗಳ ಚಲನೆ ಮಾಡಿದರೆ ಎದುರಾಳಿಯನ್ನು ಸೋಲಿಸಬಹುದು. ತಪ್ಪು ನಡೆಗಳನ್ನು ಮಾಡಿದರೆ ಸೋಲುತ್ತಾನೆ. ಈ ಆಟವನ್ನು ಗಮನಿಸಲು ಒಬ್ಬ ರೆಫರಿ ಇದ್ದು ಆತ ಪಂದ್ಯದ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಮಾತ್ರ ಗಮನಿಸುತ್ತಿರುತ್ತಾನೆ. ಕೊನೆಯಲ್ಲಿ ಫಲಿತಾಂಶ ನಿರ್ಧರಿಸುತ್ತಾನೆ. ಆತನ ಪಾತ್ರ ಅಷ್ಟಕ್ಕೇ ಸೀಮಿತ. ಆತ ಯಾವುದೇ ಆಟಗಾರನಿಗೆ ಹೀಗೆ ಆಡು, ಹಾಗೆ ಆಡು ಎಂದು ಹೇಳುವುದಿಲ್ಲ. ರೆಫರಿ/ಅಂಪೈರ್ ನನಗೆ ಸಹಾಯ ಮಾಡಲಿಲ್ಲ ಎಂದು ಯಾರಾದರೂ ದೂರುತ್ತಾರೆಯೇ? ಇಲ್ಲ. ದೇವರ ಕೆಲಸವೂ ಅಷ್ಟೇ. ಆತ ಕೇವಲ ಸಾಕ್ಷಿಯಾಗಿ ನಮ್ಮ ಚಟುವಟಿಕೆಗಳನ್ನು, ಕ್ರಿಯೆಗಳನ್ನು ನೋಡುತ್ತಿರುತ್ತಾನೆಯೇ ಹೊರತು, ಆತ ಸಹಾಯವನ್ನಾಗಲೀ, ಅಡ್ಡಿಯನ್ನಾಗಲೀ ಮಾಡುವುದಿಲ್ಲ. ಜೀವನವೆಂಬ ಆಟದಲ್ಲಿ ನಾವು ಪ್ರತಿಯೊಬ್ಬರೂ ಸ್ವತಂತ್ರ ಆಟಗಾರರೇ. ಮೊದಲೇ ಹೇಳಿದ್ದಂತೆ ಪ್ರತಿಯೊಂದೂ ನಿಯಮಾನುಸಾರವೇ ನಡೆಯುತ್ತದೆ. ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬುದು ನಿರ್ಧರವಾಗಿರುತ್ತದೆ. ನಮ್ಮ ಬದುಕು ಎಚ್ಚರಿಕೆಯಿಂದ ಸಾಗಿದರೆ, ವಿವೇಚನಾಶಕ್ತಿ ಬಳಸಿ ನಡೆದರೆ ನಮಗೆ ಯಶಸ್ಸು ಸಿಕ್ಕೇಸಿಗುತ್ತದೆ. ಇಲ್ಲದಿದ್ದರೆ ಇಲ್ಲ. ಬದುಕೆಂಬ ಆಟವನ್ನು ಸುಂದರವಾಗಿ, ಎಚ್ಚರಿಕೆಯಿಂದ, ಸಂತೋಷದಿಂದ ಅನುಭವಿಸುತ್ತಾ ಆಡೋಣ, ಗೆಲ್ಲೋಣ, ಮುಂದುವರೆಯೋಣ!
-ಕ.ವೆಂ.ನಾಗರಾಜ್.

Wednesday, February 21, 2018

ಅಗ್ನಿಹೋತ್ರ ಕಲಿಕೆ


Living By Pranayama & Sunlight - Speech by Prof Dr. BM Hegde - happy Omyoga

Dr.BM Hegde | Wellness Concept | Yoga

ವ್ಯಾಯಾಮ ಯಾವ ಸಮಯದಲ್ಲಿ ಮಾಡಬೇಕು by BM Hegde I Saral Jeevan I

Senior Students of Patanjali Yogpeeth Speaking Why To Opt Adhyatm Life

An advanced state-of-the-art 'gurukul' of Baba Ramdev in Haridwar

दैनिक अग्निहोत्र - योगऋषि स्वामी रामदेवजी महाराज

Vedic Samdhya and Agnihotra : Swami Ramdev | Acharyakulam, Haridwar | 11...

Vedic Samdhya and Agnihotra : Swami Ramdev | Acharyakulam, Haridwar | 11...

ಮಿತ್ರರೇ, ಹರಿದ್ವಾರದ ಆಚಾರ್ಯಕುಲಮ್ ನಲ್ಲಿ ನಡೆಯುವ ಅಗ್ನಿಹೋತ್ರದ ವೀಡಿಯೋ ಇಲ್ಲಿದೆ. ಇಲ್ಲಿ ಸಂಧ್ಯಾವಂದನೆ, ಈಶ್ವರಸ್ತುತಿ ಪ್ರಾರ್ಥನಾ , ಅಗ್ನಿಹೋತ್ರ ಮತ್ತು ಕೆಲವು ವಿಶೇಷ ಆಹುತಿಗಳನ್ನು ಕೊಡುವ ಮಂತ್ರಗಳಿವೆ. ನಾವು ಹಾಸನದಲ್ಲಿ ವೇದಭಾರತಿಯ ಸಹಕಾರದೊಡನೆ ಎಲ್ಲಾ ಯೋಗ ಕೇಂದ್ರಗಳಲ್ಲೂ ಆಗ್ಗಾಗ್ಗೆ ಅಗ್ನಿಹೋತ್ರವನ್ನು " ರಾಷ್ಟ್ರಯಜ್ಞ" ದ ಹೆಸರಲ್ಲಿ ಮಾಡುತ್ತಿದ್ದೇವೆ. ಹರಿದ್ವಾರದ ಆಚಾರ್ಯ ಕುಲಮ್ ನಂತೆಯೇ ನಾವೂ ಕೂಡ ಅಗ್ನಿಹೋತ್ರವನ್ನು ಕಲಿತಿರುವುದು ನಮ್ಮ ಸೌಭಾಗ್ಯ. ಪತಂಜಲಿ ಯೋಗ ಸಮಿತಿಯಿಂದ ಹಾಸನಕ್ಕೆ ಸಮೀಪವಾಗುವ ಯಾವುದೇ ಜಿಲ್ಲೆಯಿಂದ ಆಹ್ವಾನಿಸಿದರೂ ವೇದಭಾರತಿಯ ಸದಸ್ಯರೊಡನೆ ನಾವು ಬಂದು ರಾಷ್ಟ್ರಯಜ್ಞವನ್ನು ನಡೆಸಿಕೊಡಬಲ್ಲೆವು. ಹಾಸನದ "ಈಶಾವಾಸ್ಯಮ್ ಯೋಗ ಕೇಂದ್ರದಲ್ಲಿ ಪ್ರತಿ ದಿನ ಬೆಳಿಗ್ಗೆ 5.15 ರಿಂದ 6.45 ರ ವರಗೆ ಯೋಗಾಭ್ಯಾಸ ನಂತರ ಅಗ್ನಿಹೋತ್ರವು ನಡೆಯುತ್ತದೆ.

Tuesday, February 20, 2018

Sunday, February 18, 2018

ಕರ್ನಾಟಕದಲ್ಲೊಂದು ಕಾಶಿಪುರವಿತ್ತು

ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 1
ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 2
ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 3
ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 4
ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 6

ಅಡಗೂರಿನಲ್ಲಿ ಅರ್ಥಪೂರ್ಣ ಶಿವರಾತ್ರಿಯ ಜಾಗರಣೆ


     ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೇ ಶಿವರಾತ್ರಿ. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಕೇವಲ ನಿದ್ರೆ ಮಾಡದಿರುವುದಲ್ಲ, ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ಅರ್ಥ. ನಾವು ಜಾಗೃತರಾಗುವುದಲ್ಲದೆ, ಇತರರನ್ನೂ ಜಾಗೃತಗೊಳಿಸುವ ವಿಶೇಷ ಜಾಗರಣೆಯ ಕಾರ್ಯ 13-02-2018ರ ಶಿವರಾತ್ರಿಯಂದು ನಡೆದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಆಸಕ್ತರ ಅವಗಾಹನೆಗಾಗಿ ನೀಡುತ್ತಿರುವೆ. 



     ಹಾಸನದಿಂದ ಹಳೇಬೀಡಿಗೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿ.ಮೀ. ದೂರದಲ್ಲಿರುವ ಗ್ರಾಮ ಅಡಗೂರು. ಬೇಲೂರು ತಾಲ್ಲೂಕಿಗೆ ಸೇರಿದ ಅಡಗೂರಿನಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಕಾಶಿಪುರ ಎಂಬ ಜನವಸತಿ ಇರದ ಬೇಚರಾಕ್ ಗ್ರಾಮವಿದೆ. ಅಲ್ಲಿ ಒಂದು ಪುರಾತನವಾದ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದುದಲ್ಲದೆ ದೇವಸ್ಥಾನದ ಕಲ್ಲುಗಳನ್ನು ಅವರಿವರು ಸಾಗಿಸಿದ್ದು ಅಳಿದುಳಿದ ಭಾಗ ಮಾತ್ರ ಉಳಿದಿದೆ. ಈ ದೇವಸ್ಥಾನದ ಅಸ್ತಿತ್ವವೇ ಮರೆತು ಹೋದಂತಾಗಿದ್ದು, ಜನವಸತಿ ಇರದ ಗ್ರಾಮವಾಗಿದ್ದು, ಸುತ್ತಮುತ್ತಲೂ ಜಮೀನುಗಳು ಇರುವುದರಿಂದ ಹತ್ತಿರದ ಅಡಗೂರಿನವರಿಗೇ ಗೊತ್ತಿಲ್ಲವೇನೋ ಎಂಬಂತಾಗಿತ್ತು. ಅಲ್ಲಿ ಒಂದು ದೇವಸ್ಥಾನದ ಸಮುಚ್ಛಯವೇ ಇದ್ದುದು ಅವಶೇಷಗಳಿಂದ ತಿಳಿದುಬರುತ್ತದೆ. ಪ್ರವೇಶ ಮಂಟಪ, ಸುತ್ತಲೂ ಆವರಣ, ಒಳಭಾಗದಲ್ಲಿ ಮಂಟಪಗಳು, ಅಶ್ವಲಾಯ, ಗಜಲಾಯಗಳು, ಬಂದುಹೋಗುವವರಿಗೆ ಉಳಿದುಕೊಳ್ಳಬಹುದಾದ ಕೊಠಡಿಗಳು, ಶಿವ ಮತ್ತು ವಿಷ್ಣುವಿನ ದೇವಾಲಯಗಳಿದ್ದುದು ತಿಳಿದುಬರುತ್ತದೆ. ನಿಧಿಯ ಆಸೆಗಾಗಿ ಸುಮಾರು ಮೂರು ಅಡಿ ಎತ್ತರದ ಲಿಂಗವನ್ನು ನೆಲದಿಂದ ಕಿತ್ತು ಹೊರತೆಗೆದಿರುವುದು ಕಾಣುತ್ತದೆ. ಪಕ್ಕದಲ್ಲಿ ಜಯ ವಿಜಯರ ವಿಗ್ರಹವಿರುವ ದ್ವಾರವಿದ್ದು ವಿಷ್ಣುವಿನ ದೇವಸ್ಥಾನವೂ ಅಲ್ಲಿದ್ದುದು ತಿಳಿಯುತ್ತದೆ. ವಿಗ್ರಹ ಕಳುವಾಗಿದೆ ಅಥವ ಬೇರೆಲ್ಲೋ ಸಾಗಿಸಿರುವ ಸಾಧ್ಯತೆಯಿದೆ. ಈ ದೇವಸ್ಥಾನ ಸಮುಚ್ಛಯ ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿದ್ದು ಅಕ್ಕಪಕ್ಕದ ಆವರಣ ಒತ್ತುವರಿ ಆಗಿರುವ ಸಾಧ್ಯತೆಯಿದೆ. ದೇವಸ್ಥಾನ ಸಮುಚ್ಛಯವಿರುವ ಭಾಗವನ್ನು ಪುನರುಜ್ಜೀವನಗೊಳಿಸಿ ಉಳಿಸಿಕೊಳ್ಳಬೇಕಾದ ಅಗತ್ಯತೆಯಿದೆ. ಜಿಲ್ಲಾಡಳಿತ, ಕಂದಾಯ, ಮೋಜಣಿ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ, ಮುಜರಾಯಿ ಇಲಾಖೆಗಳು, ಜಿಲ್ಲಾ ಪಂಚಾಯಿತಿ, ಇತ್ಯಾದಿಗಳ ಗಮನ ಇತ್ತ ಕಡೆ ಹರಿಯಬೇಕಿದೆ.




     ಕೆಲವು ತಿಂಗಳುಗಳ ಹಿಂದೆ ಮಿತ್ರ ಹರಿಹರಪುರ ಶ್ರೀಧರ ಕಾಶಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಾಲಿಡಲು ಅವಕಾಶವಿಲ್ಲದಂತೆ ಕುರುಚಲು ಗಿಡಗಳು, ಮುಳ್ಳುಕಂಟಿಗಳು ಬೆಳೆದಿದ್ದವು. ಹಿಂದೆ ಯಾವಾಗಲೋ ಇನ್ನೊಬ್ಬ ಮಿತ್ರ ದಿ. ದಾಸೇಗೌಡರು ಆವರನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋಗಿ ಇದರ ಪುನರುತ್ಥಾನಕ್ಕೆ ಏನಾದರೂ ಮಾಡಬೇಕಲ್ಲಾ ಎಂದು ಹೇಳಿದ್ದ ಮಾತು ನೆನಪಿನಲ್ಲಿ ಉಳಿದಿದ್ದುದೂ ಅವರ ಕಾಶಿಪುರ ಭೇಟಿಗೆ ಕಾರಣವಾಗಿತ್ತಂತೆ. ಆದರೆ ಅದಕ್ಕೆ ತಕ್ಕ ಮುಹೂರ್ತ ಬರಬೇಕಿತ್ತಷ್ಟೆ. ಮಿತ್ರ ಶ್ರೀಧರ್ ದೇವಸ್ಥಾನದ ಆಗಿನ ಸ್ಥಿತಿಯನ್ನು ಫೇಸ್ ಬುಕ್ಕಿನ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಸಹಿತ ಪ್ರಕಟಿಸಿದಾಗ ರಾಜ್ಯದಾದ್ಯಂತ ಮತ್ತು ಹಾಸನ ಜಿಲ್ಲೆಯವರ ಗಮನ ಸೆಳೆಯಿತು. ಪರಿಣಾಮವಾಗಿ ಹಾಸನದ ವೇದಭಾರತಿ, ಪತಂಜಲಿ ಯೋಗ ಸಮಿತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರುಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಹೀಗೆ ಹತ್ತು ಹಲವಾರು ಸಂಘಟನೆಗಳು ಕೈಜೋಡಿಸಿದವು. ಹಲವಾರು ದಿನಗಳವರೆಗೆ ಶ್ರಮದಾನ ನಡೆದು ದೇವಸ್ಥಾನದ ಆವರಣದಲ್ಲಿ ಓಡಾಡಲು ಸಾಧ್ಯವಾಗುವಂತಹ ಸ್ಥಿತಿ ಏರ್ಪಟ್ಟಿತು. ಸ್ಕೌಟ್ಸ್ ಮತ್ತು ಗೈಡ್ಸ್‌ನವರ ಕಾರ್ಯ ವಿಶೇಷ ಗಮನ ಸೆಳೆಯಿತು. ಬೆಂಗಳೂರಿನ ತರುಣರೂ ಈ ಕೆಲಸದಲ್ಲಿ ಆಸಕ್ತಿ ವಹಿಸಿದರು. ರಿಕ್ಲೈಮ್ ಟೆಂಪಲ್ಸ್ ಆಂದೋಲನದ ಕಾರ್ಯಕರ್ತರು ಶ್ರೀ ಗಿರೀಶ್ ಭಾರಧ್ವಾಜರ ನೇತೃತ್ವದಲ್ಲಿ ಸಹಕಾರ ನೀಡಲು ಮುಂದೆ ಬಂದರು. ಹರಿಹರಪುರ ಶ್ರೀಧರ್, ಕವಿ ನಾಗರಾಜ್  ನೇತೃತ್ವದಲ್ಲಿ ಎರಡು ಮೂರು ಸಲ ಗ್ರಾಮಸ್ಥರ ಸಭೆಗಳೂ ನಡೆದು ಗ್ರಾಮಸ್ಥರ ಸಹಕಾರವನ್ನೂ ಕೋರಲಾಯಿತು.



      ಹಿರಿಯರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ಕಾರ್ಯಗಳಿಗೆ ಒತ್ತಾಸೆ ನೀಡಿ ಬೆಂಬಲಿಸಿದರು. ಅವರ ಬೆಂಗಳೂರು ನಿವಾಸದಲ್ಲಿ ಮತ್ತು ರಾಜಾಜಿನಗರದ ರಸಧ್ವನಿ ಕಲಾಕೇಂದ್ರದಲ್ಲಿ ಬೆಂಗಳೂರಿನ ಆಸಕ್ತರ ಸಭೆ ಕರೆದು ಚರ್ಚಿಸಲಾಯಿತು. ದೇವಸ್ಥಾನ ಸಮುಚ್ಛಯದ ಪುನರುತ್ಥಾನಕ್ಕಾಗಿ ಜಾಗೃತಿ ಉಂಟುಮಾಡುವ ಸಲುವಾಗಿ ಒಂದು ರಾಜ್ಯಮಟ್ಟದ ಸಮಿತಿ ರಚಿಸಿ ಅದಕ್ಕೆ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ಅಧ್ಯಕ್ಷರು, ಶ್ರೀ ಕವಿ ನಾಗರಾಜ್ ಉಪಾಧ್ಯಕ್ಷರು, ಶ್ರೀ ಹರಿಹರಪುರ ಶ್ರೀಧರ್ ಪ್ರಧಾನ ಸಂಚಾಲಕರು, ಶ್ರೀ ಶ್ರೀಕಾಂತ್ ಕಾರ್ಯದರ್ಶಿ, ಶ್ರೀ ನರೇಂದ್ರ ಕೋಶಾಧಿಕಾರಿ ಎಂದು ತೀರ್ಮಾನವಾಯಿತು. ಶ್ರೀಯುತರಾದ ಸುನೀಲ್, ಸದ್ಯೋಜಾತ ಭಟ್ಟರು ಸೇರಿದಂತೆ ಹಲವರನ್ನು ಜೋಡಿಸಿಕೊಳ್ಳಲಾಯಿತು. ಶಿವರಾತ್ರಿ ದಿನದಂದು ಕಾಶಿಪುರ ಉತ್ಸವ ನಡೆಸುವ ಮೂಲಕ ಅಡಗೂರು ಮತ್ತು ಸುತ್ತಮುತ್ತಲ ಗ್ರಾಮದವರನ್ನು ಜಾಗೃತಗೊಳಿಸಿ ಮುಂದಿನ ಪುನರುತ್ಥಾನದ ಕೆಲಸಗಳಿಗೆ ಅವರನ್ನು ಪ್ರೇರೇಪಿಸುವ ಕೆಲಸ ಮಾಡಬೇಕೆಂದು ನಿರ್ಧರಿಸಲಾಯಿತು. ಕಾರ್ಯಕ್ರಮದ ವ್ಯವಸ್ಥೆ, ರೂಪುರೇಷೆಗಳ ತಯಾರಿ, ಇತ್ಯಾದಿಗಳ ಹೊಣೆಯನ್ನು ಮಿತ್ರ ಶ್ರೀಧರ್ ಸ್ವತಃ ಹೊತ್ತುಕೊಂಡು ಅದಕ್ಕಾಗಿ ಪೂರ್ಣವಾಗಿ ತೊಡಗಿಕೊಂಡರು. ಅವರಿಗೆ ಮಿತ್ರರ ಸಹಕಾರವೂ ಸಿಕ್ಕಿತು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಂಕಲ್ಪ ಯಜ್ಞಗಳು, ಬೈಠಕ್ಕುಗಳು, ಹಣಕಾಸಿನ ವ್ಯವಸ್ಥೆಗಾಗಿ ಸಂಪರ್ಕ, ನಡೆಸಬೇಕಾದ ಕಾರ್ಯಕ್ರಮಗಳ ವ್ಯವಸ್ಥೆ, ಇತ್ಯಾದಿ ನಡೆದು ಕಾರ್ಯಕ್ರಮ ಯಶಸ್ಸು ಕಾಣುವ ಲಕ್ಷಣಗಳು ಸ್ಫುಟವಾಗಿ ಗೋಚರವಾಯಿತು. ಕಾರ್ಯಕ್ರಮ ನಡೆಯಲು ಎರಡು-ಮೂರು ದಿನಗಳಿದ್ದಂತೆ ಶ್ರಮದಾನದಿಂದ ನೋಡುವಂತಾಗಿದ್ದ ಕಾಶಿಪುರ ದೇವಸ್ಥಾನ ಸಮುಚ್ಚಯದ ಸ್ಥಳವನ್ನು ಜೆಸಿಬಿ ಸಹಾಯದಿಂದ ಸಮತಟ್ಟುಗೊಳಿಸಿ ಸಿದ್ಧಪಡಿಸಲಾಯಿತು. ಹಿಂದೆ ಆ ಸ್ಥಳ ಹೇಗಿದ್ದಿರಬಹುದು ಎಂಬ ಕಲ್ಪನೆಯೊಂದಿಗೆ ಅಚ್ಚರಿ ಮತ್ತು ಈಗಿನ ಸ್ಥಿತಿಯೊಂದಿಗೆ ವಿಷಾದ ಎರಡೂ ಭಾವಗಳು ನೋಡುಗರಿಗೆ ಉಂಟಾಗುತ್ತಿತ್ತು.




     ಶಿವರಾತ್ರಿಯ ದಿನದಂದು ಹಾಸನದಿಂದ ಒಂದು ನೂರು ಕಾರ್ಯಕರ್ತರು ವಿಶೇಷ ಬಸ್ಸು ಮತ್ತು ಖಾಸಗಿ ವಾಹನಗಳ ಮೂಲಕ ಅಡಗೂರಿಗೆ ಬಂದಿಳಿದರು. ಅಡಗೂರಿನ ಗಣಪತಿ ದೇವಸ್ಥಾನದ ಮುಂಭಾಗದ ಬಯಲು ರಂಗಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳಿಗಾಗಿ ವೇದಿಕೆ ಸಿದ್ಧಪಡಿಸಲಾಯಿತು. ಊರಲ್ಲೆಲ್ಲಾ ಕೇಸರಿ ಧ್ವಜಗಳು ವಿಜೃಂಭಿಸಿದ್ದವು. ಕಾಶಿಪುರದಲ್ಲಿ, ಅಡಗೂರಿನಲ್ಲಿ ಭವ್ಯವಾದ ೨೦ ಮತ್ತು ೧೦ ಅಡಿಗಳ ಫ್ಲೆಕ್ಸ್‌ಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದವು. ಸಿದ್ಧಿ ಸಮಾಧಿ ಯೋಗದ ಭಜನಾ ತಂಡವೂ ಬಂದಿಳಿಯಿತು. ಮಧ್ಯಾಹ್ನ ನಾಲ್ಕು ಗಂಟೆಗೆ ಸರಿಯಾಗಿ ಅಡಗೂರಿನಿಂದ ಕಾಶಿಪುರದವರೆಗೆ ಪುಷ್ಪಗಿರಿ ಮಠದ ೧೧೦೮ನೇ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಭವ್ಯ ಶೋಭಾಯಾತ್ರೆ ಭಜನಾತಂಡಗಳಿಂದ ಭಜನೆ, ಘೋಷಣೆಗಳೊಂದಿಗೆ ನಡೆಯಿತು. ಅಡಗೂರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಉತ್ಸಾಹದಿಂದ ಪಾಲುಗೊಂಡಿದ್ದರು.





     ಕಾಶಿಪುರದ ದೇವಸ್ಥಾನದ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಗ್ರಾಮಸ್ಥರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ವೇದಭಾರತೀ ಕಾರ್ಯಕರ್ತರು ಅಗ್ನಿಹೋತ್ರ, ಸಂಕಲ್ಪ ಯಜ್ಞ ಮಾಡುವುದರ ಮೂಲಕ ಶತಮಾನಗಳ ನಂತರದಲ್ಲಿ ಆ ಸ್ಥಳದಲ್ಲಿ ಮತ್ತೊಮ್ಮೆ ಧಾರ್ಮಿಕ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿತು. 'ಓಂ ರಾಷ್ಟ್ರಾಯ ಸ್ವಾಹಾ| ಇದಂ ರಾಷ್ಟ್ರಾಯ ಇದಂ ನ ಮಮ||' (ಈ ಸಮರ್ಪಣೆ ರಾಷ್ಟ್ರದ ಸಲುವಾಗಿ, ರಾಷ್ಟ್ರಕ್ಕೆ ಸಮರ್ಪಿತ, ಇದು ನಮ್ಮ ಸ್ವಾರ್ಥಕ್ಕಲ್ಲ} ಎಂಬ ಮಂತ್ರವನ್ನೂ ಪಠಿಸಿ ಸಮಿತ್ತು ಅರ್ಪಿಸಲಾಯಿತು. ಪುಷ್ಪಗಿರಿ ಸ್ವಾಮೀಜಿಯವರು, ಹಾಸನದಿಂದ ಬಂದು ಈ ಕಾರ್ಯ ಮಾಡುತ್ತಿರುವುದು ವಿಶೇಷವಾಗಿದೆ. ಈ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯ. ಹೊಸ ಹೊಸ ದೇವಸ್ಥಾನಗಳನ್ನು ಕಟ್ಟುತ್ತಿರುವ ಈ ಕಾಲದಲ್ಲಿ ಹಳೆಯ ದೇವಸ್ಥಾನವನ್ನು ಪುನರುದ್ಧಾರ ಮಾಡುವ ದಿಸೆಯಲ್ಲಿ ವೇದಭಾರತಿಯವರು ಮತ್ತು ಇತರರ ಕಾರ್ಯ ಮೆಚ್ಚುವಂತಹುದು. ಅಡಗೂರಿನ ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು. ಹರಿಹರಪುರ ಶ್ರೀಧರ್ ಮಾತನಾಡಿ, ಈ ಕಾರ್ಯದ ಮಹತ್ವವನ್ನು ಗ್ರಾಮಸ್ಥರಿಗೆ ಮನಗಾಣಿಸಿದ್ದಾಗಿದೆ. ಮುಂದಿನ ಕೆಲಸಗಳನ್ನು ಸ್ವಾಮೀಜಿಯವರೊಂದಿಗೆ ಊರಿನವರು ಸೇರಿಕೊಂಡು ಮುಂದುವರೆಸಬೇಕು ಎಂದರು. ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ತುಂಬಿಹೋಗಿದ್ದರು. ಎಲ್ಲರಲ್ಲೂ ಉತ್ಸಾಹ ಮತ್ತು ಕೈಜೋಡಿಸುವ ಮನಸ್ಸು ಇದ್ದುದು ಕಾಣುತ್ತಿತ್ತು.  















     ಪುನಃ ಅಡಗೂರಿನ ಬಯಲು ರಂಗಮಂದಿರದಲ್ಲಿ ಎಲ್ಲರೂ ಒಟ್ಟುಗೂಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿನಾಗರಾಜ್ ವಹಿಸಿದ್ದು ಅಡಗೂರಿನ ಆನಂದ್, ವಿಶ್ವನಾಥ್, ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಹರಿಹರಪುರ ಶ್ರೀಧರ್, ಅಶೋಕಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಎಲ್ಲರೂ ಕಾಶಿಪುರ ದೇವಸ್ಥಾನದ ಪುನರುಜ್ಜೀವನಕ್ಕೆ ಮುಂದಾಗುವಂತೆ ಕರೆ ನೀಡಿದರು. ಹಾಸನದ ಸಿದ್ಧಿ ಸಮಾಧಿಯೋಗದ ತಂಡದವರಿಂದ ಭಜನೆ, ಬೆಂಗಳೂರಿನ ಕು|| ಅಕ್ಷತಾ ರಾಮಕೃಷ್ಣ ಮತ್ತು ಹಾಸನದ ಕು|| ವೈಷ್ಣವಿ ಜಯರಾಮರಿಂದ ಭರತನಾಟ್ಯ, ಶ್ರೀಮತಿ ಪಲ್ಲವಿ ಗಿರೀಶ್, ಕು|| ಶ್ರದ್ಧಾ, ತನ್ಮಯಿ, ಯಶಸ್, ಶ್ರೀಮತಿ ಕಲವಾತಿ ಮಧುಸೂದನ್ ಮತ್ತು ಇತರರಿಂದ ಭಕ್ತಿಗೀತೆಗಳು, ಕು|| ಅನೀಶ್ ಮತ್ತು ತಂಡದವರಿಂದ ಕೊಳಲು ವಾದನ, ಪತಂಜಲಿ ಯೋಗಕೇಂದ್ರಗಳವರಿಂದ ಯೋಗ ನೃತ್ಯಗಳು, ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನೆರೆದಿದ್ದ ಜನರ ಮನರಂಜಿಸುವಲ್ಲಿ ಯಶಸ್ವಿಯಾಯಿತು. ಒಟ್ಟಾರೆಯಾಗಿ ಹೇಳಬೇಕೆಂದರೆ ಅಡಗೂರಿನಲ್ಲಿ ನಡೆದ ಕಾರ್ಯಕ್ರಮ ನಭೂತೋ ಎಂಬಂತಿತ್ತು. ಹರಿಹರಪುರ ಶ್ರೀಧರ ಮತ್ತು ಮಿತ್ರರೆಲ್ಲರ ಶ್ರಮ, ಸಹಕಾರ, ಪಾಲುಗೊಳ್ಳುವಿಕೆ ಫಲ ನೀಡಿತ್ತು. 








     ಕಾರ್ಯಕ್ರಮದ ಪೂರ್ಣ ವ್ಯವಸ್ಥೆಯನ್ನು ಹಾಸನದ ಕಾರ್ಯಕರ್ತರೇ ಮಾಡಿದ್ದುದಲ್ಲದೆ, ಪ್ರಸಾದದ ವ್ಯವಸ್ಥೆ ಸಹ ಹಾಸನದಿಂದಲೇ ಆಗಿದ್ದು ಗಮನಾರ್ಹ. ಮುಂದಿನ ವರ್ಷದ ಕಾಶಿಪುರ ಉತ್ಸವವನ್ನು ಅಡಗೂರಿನವರೇ ಮಾಡಲು ಮುಂದೆ ಬರುತ್ತಾರೆ, ಹಾಸನ ಮತ್ತು ಪರ ಊರಿನವರು ಕೈಜೋಡಿಸುತ್ತಾರೆ ಎಂಬ ಆಶಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನಿಜವಾದ ಅರ್ಥದಲ್ಲಿ ಜಾಗರಣೆ ಅಡಗೂರಿನಲ್ಲಿ ಉಂಟಾಗಿತ್ತು. ಅದು ನಿರಂತರ ಮುಂದುವರೆಯಲಿ, ಯೋಜಿತ ಕಾರ್ಯ ಸಾಧಿತವಾಗಲಿ.
ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ 
ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)
ಅರ್ಥ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.
-ಕ.ವೆಂ. ನಾಗರಾಜ್.