Pages

Wednesday, March 12, 2014

ಶರ್ಮರಿಗೊಂದು ಪತ್ರ


ವೇದಧ್ಯಾಯಿ ಶ್ರೀಸುಧಾಕರ ಶರ್ಮ ರವರಿಗೆ ವಂದನೆಗಳು. 
ತಮ್ಮ ವೇದೋಕ್ತವಾದ ನುಡಿಗಳಿಂದ ನಮ್ಮೆಲ್ಲರಿಗೂ ವೇದತತ್ವಗಳನ್ನ ಬೋಧಿಸುತ್ತಿದ್ದೀರಿ. ಅದಕ್ಕಾಗಿ ಅಭಿನಂದನೆಗಳು-ಧನ್ಯವಾದಗಳು.   ಹಾಗುಬ್ಲಾಗ್.ವೇದಸುಧೆ.ಕೊಂ  ನ  ಗೌರವ ಸಂಪಾದಕರು: ಶ್ರೀ ಕವಿ ನಾಗರಾಜ್|ನಿರ್ವಾಹಕ ಸಂಪಾದಕರು:ಶ್ರೀ ಪ್ರಸನ್ನ.ಎಸ್.ಪಿ|ಸಂಪಾದಕರು:ಹರಿಹರಪುರಶ್ರೀಧರ್ ಇವರಿಗೂ 

ಅಭಿನಂದನೆಗಳು-ಧನ್ಯವಾದಗಳು.

ಮಹರ್ಷಿ ದಯಾನಂದ ಸರಸ್ವತಿ ಯವರ ಜೀವನಕಥೆಯನ್ನು ಮತ್ತು ಅವರು ರಚಿಸಿದ  "ಸತ್ಯಾರ್ಥಪ್ರಕಾಶ" ಗ್ರಂಥವನ್ನು ಓದಿದ್ದೇನೆ.   ವೇದಸುಧೆ / ಚಂದನ ಟಿವಿ / ಶಂಕರ ಟಿವಿ ಮೂಲಕ ಹಲವು ವರ್ಷಗಳಿಂದ ನಿಮ್ಮ ಪ್ರವಚನಗಳನ್ನು ಆಲಿಸಿದ್ದೇನೆ.  ನನ್ನ ಎಲ್ಲಾತಳಮಳಗಳಿಗೂ ನಿಮ್ಮ ವೇದೋಕ್ತವಾದ ನುಡಿಗಳಿಂದ ಪರಿಹಾರ ಸಿಕ್ಕಿದೆ.


ಆದರೂ ಎರಡು ಪ್ರಶ್ನೆಗಳನ್ನು ಈ ಮೂಲಕ ಕೇಳುತ್ತಿದ್ದೇನೆ. ದಯವಿಟ್ಟು ಉತ್ತರಿಸಿ.

1.   ನಮ್ಮ ಮನೆ ಗುಡ್ಡಗಾಡು ಸ್ಥಳದಲ್ಲಿರುವುದರಿಂದ ವಿಷಜಂತುಗಳು ಸಾಮಾನ್ಯವಾಗಿ ಬರುತ್ತಿರುತ್ತವೆ.  ನಾಗರಹಾವನ್ನು ಬಿಟ್ಟು ಬೇರೆ ವಿಷವುಳ್ಳ ಹಾವುಗಳನ್ನು ನಮ್ಮ ಊರಿನಲ್ಲಿ ಕೊಲ್ಲುವ ಕ್ರಿಯೆ ನಡೆಯುತ್ತದೆ.  ಭಗವಂತನ ಈ ಅದ್ಭುತ ಸೃಷ್ಟಿಯಲ್ಲಿ ಅವುಗಳಿಗೂ ಬದುಕುವ ಹಕ್ಕಿಲ್ಲವೇ? ಎಂದನಿಸುತ್ತಿದೆ.  ತಮ್ಮ ಅಭಿಪ್ರಾಯವೇನು?

2.   ಹೆಣ್ಣು ಮಕ್ಕಳ ತಲೆಗೂದಲು ಬಾಚುವಾಗ, ಹೇನುಗಳು ಸಿಗುತ್ತವೆ ಸಹಜ.  ಸಾಮಾನ್ಯವಾಗಿ ಸಿಕ್ಕಿದ ಹೇನುಗಳನ್ನು ಕೊಲ್ಲುವ ಪದ್ದತ್ತಿಯನ್ನು ರೂಢಿಸಿಕೊಂಡಿದ್ದೇವೆ. ಇದು ಸರಿಯೇ?

ದಯವಿಟ್ಟು ಉತ್ತರಿಸುವಿರಾ?

ಧನ್ಯವಾದಗಳೊಂದಿಗೆ,

ಸುರೇಂದ್ರ ಶೆಟ್ಟಿಗಾರ್

ಕೋಟ್ನಾಕಟ್ಟೆ, ಹಿರಿಯಡಕ, ಉಡುಪಿ.   Mobile: 9483931868


----------------------------------------------------------------


ಶ್ರೀಯುತ ಸುರೇಂದ್ರರೇ,

ನಮಸ್ತೆ. ಶ್ರೀ ಶರ್ಮರ ಆರೋಗ್ಯವು ಸ್ವಲ್ಪ ಸುಧಾರಿಸಬೇಕಾಗಿದೆ. ಹಾಗಾಗಿ ಉತ್ತರವು ತಡವಾಗಬಹುದು.

-ಹರಿಹರಪುರಶ್ರೀಧರ್