Pages

Friday, January 21, 2011

ವಾರ್ಷಿಕೋತ್ಸವ ಮಾಹಿತಿ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ವಾರ್ಷಿಕೋತ್ಸವ ದಿನವು ಸಮೀಪಿಸುತ್ತಿದ್ದಂತೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಹಾಸನಕ್ಕೆ ಬರಲು ಉತ್ಸುಕರಾಗಿರುವ ಅನೇಕರು ಮೇಲ್ ಮೂಲಕ ಹಾಗೂ  ದೂರವಾಣಿಯ ಮೂಲಕ ವೇದಸುಧೆಯ ಸಂಪರ್ಕದಲ್ಲಿದ್ದಾರೆ.ವಾರ್ಷಿಕೋತ್ಸವದ ಹಿಂದಿನ ದಿನ ಸಂಜೆ ಶ್ರೀ ಸುಧಾಕರಶರ್ಮರ ಉಪನ್ಯಾಸವೊಂದು ಯೋಜಿಸಲ್ಪಟ್ಟಿರುವುದರಿಂದ ಹಲವರು ಆಹೊತ್ತಿಗೇ ಬರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಿಂದ ನಲವತ್ತಕ್ಕೂ ಹೆಚ್ಚು ಅಭಿಮಾನಿಗಳು ಹೊರಟಿದ್ದರೂ ಬೇರೆ ಬೇರೆ ಸಮಯದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಹೊರಡುತ್ತಿರುವುದರಿಂದ ಒಟ್ಟಾಗಿ ಒಂದು ವಾಹದಲ್ಲಿ ಹೊರಡುವ ಚಿಂತನೆ ಕಾರ್ಯರೂಪಕ್ಕೆ ಬರುತ್ತದೋ ಇಲ್ಲವೋ ತಿಳಿಯದು.ಈ ಮಧ್ಯೆ  ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ದಮಗ್ಗೆ  ಸಮೀಪ ಒಂದು ಹಳ್ಳಿಯಲ್ಲಿ ಶ್ರೀ ಸುಧಾಕರಶರ್ಮರ ಮಾರ್ಗದರ್ಶನದಲ್ಲಿ ವೇದೋಕ್ತ ಜೀವನ ಕಾರ್ಯಾಗಾರ ಒಂದು ಇಂದು ರಾತ್ರಿ [21.01.2011] ಆರಂಭವಾಗಿ 25.01.2011 ರಂದು ಬೆಳಿಗ್ಗೆ ವರಗೆ ನಡೆಯಲಿದೆ.ಆ ಕಾರ್ಯಾಗಾರದಲ್ಲಿ ನಾನೂ ಕೂಡ ಪಾಲ್ಗೊಳ್ಳುತ್ತಿದ್ದೇನಾದ್ದರಿಂದ 
25.01.2011ರವರಗೆ ದೂರವಾಣಿಯಾಗಲೀ ಅಥವಾ ಅಂತರ್ಜಾಲ ಸಂಪರ್ಕವಾಗಲೀ ದೊರೆಯುವ ಅವಕಾಶಗಳು ಕಡಿಮೆ ಇರಬಹುದು. ಆದರೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ಅಂತರ್ಜಾಲ ಸಂಪರ್ಕಕ್ಕೂ ದೂರವಾಣಿ ಸಂಪರ್ಕಕ್ಕೂ ಲಭ್ಯವಿರುತ್ತಾರಾದ್ದರಿಂದ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಅವರನ್ನು ದಯಮಾಡಿ ಸಂಪರ್ಕಿಸಿ. 
kavinagaraj2010@gmail.com
Mo: 9448501804
29.01.2011 ರಂದು ರಾತ್ರಿ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಇರುವುದರಿಂದ ಶನಿವಾರ ಸಂಜೆ 6.00 ಗಂಟೆಯೊಳಗೆ  ಶರ್ಮರ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆಯೇ ಬರಲು ಕೋರುತ್ತೇನೆ.
-ಹರಿಹರಪುರ ಶ್ರೀಧರ್
ಸಂಪಾದಕ,
  ವೇದಸುಧೆ