Pages

Friday, October 31, 2014






Acharya M. R. Rajesh





Tuesday, October 28, 2014

ಸಾಮೂಹಿಕ ಅಗ್ನಿಹೋತ್ರ

ಓಂ
ವೇದಭಾರತೀ, ಹಾಸನ

ಹುಬ್ಬಳ್ಳಿಯ ಆರ್ಶವಿದ್ಯಾಲಯದ 
ಪೂಜ್ಯ ಶ್ರೀ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ
 ದಿವ್ಯ ಸಾನ್ನಿಧ್ಯದಲ್ಲಿ

ಲೋಕ ಕಲ್ಯಾಣಾರ್ಥ
ಸಾಮೂಹಿಕ ಅಗ್ನಿಹೋತ್ರ
ಮತ್ತು
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು
ಸಂಗ್ರಹಿಸಿರುವ, ವೇದ ಮಂತ್ರಾಧಾರಿತ

ನೂರು ಹಿತನುಡಿಗಳು, ಭಾಗ-೨
 ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸ್ಥಳ:  ಶ್ರೀ ಕೇಶವ ದೇವಾಲಯ, ಹಾಸನ

ದಿನಾಂಕ: ೧೦.೧೧.೨೦೧೪ ಸೋಮವಾರ ಸಂಜೆ ೬.೦೦ ಕ್ಕೆ

ನೂರು ದಂಪತಿಗಳಿಗೆ ಪಾಲ್ಗೊಳ್ಳಲು ಅವಕಾಶ

ಈ ವಿಶೇಷ ಕಾರ್ಯಕ್ರಮದಲ್ಲಿ 
ನಮ್ಮೊಡನೆ
ಶ್ರೀ ಸು.ರಾಮಣ್ಣ
ಅಖಿಲಭಾರತ ಪ್ರಮುಖರು,ಕುಟುಂಬ ಪ್ರಭೋದನ್
ಇವರು ಉಪಸ್ಥಿತರಿದ್ದು 
ಹಿಂದೂ ಜೀವನ ಮೌಲ್ಯಗಳ ಬಗ್ಗೆ ಮಾರ್ಗದರ್ಶನ ಮಾಡುವರು

1.ದಂಪತಿ ಸಹಿತವಾಗಿ  ಪಾಲ್ಗೊಳ್ಳಬೇಕೆಂಬುದು ಅಪೇಕ್ಷೆ. ಅನಿವಾರ್ಯ ಸಂದರ್ಭದಲ್ಲಿ 
   ಪತಿ-ಪತ್ನಿಯರಲ್ಲಿ ಒಬ್ಬರು ಸಹ  ಪಾಲ್ಗೊಳ್ಳಬಹುದು
2.ಬ್ರಹ್ಮಚಾರಿಗಳೂ ಸಹ ಪಾಲ್ಗೊಳ್ಳಬಹುದು
3. ಅಗ್ನಿಹೋತ್ರಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ವೇದಭಾರತಿಯು ಮಾಡುವುದು. ಆದರೆ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳುವವರು ಒಂದು ಪಂಚಪಾತ್ರೆ-ಉದ್ಧರಣೆ [ಅಥವಾ ಒಂದು ಲೋಟ ಮತ್ತು ಚಮಚ] ಮತ್ತು ತುಪ್ಪ ಹಾಕಲು ಒಂದು ಬಟ್ಟಲು ಮತ್ತು ಚಮಚ  ತಂದಿರಬೇಕು.
4.ಅಗ್ನಿಹೋತ್ರವು ೬.೦೦ ಗಂಟೆಗೆ ಸರಿಯಾಗಿ ಓಂಕಾರದಿಂದ ಆರಂಭವಾಗುವುದರಿಂದ ಅರ್ಧ ಗಂಟೆ ಮುಂಚೆ ಕಾರ್ಯಕ್ರಮದ ಸ್ಥಳದಲ್ಲಿರಬೇಕು.
5.ಉಡುಪು: ಸ್ತ್ರೀಯರಿಗೆ ಸಾಂಪ್ರಾದಾಯಿಕ ಉಡುಗೆ. ಪುರುಷರಿಗೆ ಬಿಳಿ ಪಂಚೆ ಮತ್ತು ಶಲ್ಯ 
ಹತ್ತಿ ಬಟ್ಟೆ ಅಪೇಕ್ಷಣೀಯ.
6.ಇಡೀ ಕಾರ್ಯಕ್ರಮದಲ್ಲಿ ಮೊಬೈಲ್ ಸ್ವಿಚ್‌ಆಫ್ ಆಗಿರಬೇಕು.
7.ತುಂಬಾ ಪುಟ್ಟಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳಲು ದೊಡ್ದವರನ್ನು ಜೊತೆಗೆ ಕರೆ ತನ್ನಿ
8.ಅಗ್ನಿಹೋತ್ರದ ನಂತರ ಸಾಮೂಹಿಕ  ವೇದಭಜನೆ , ಉಪನ್ಯಾಸ ನಡೆಯಲಿದ್ದು ಉಪಹಾರವನ್ನು ಮುಗಿಸಿಕೊಂಡು ಮನೆಗೆ ತೆರಳಬಹುದು
9. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಂದಲೇ ಅಗ್ನಿಹೋತ್ರವನ್ನು ಮಾಡಿಸಲಾಗುವುದು.ಜೊತೆಯಲ್ಲಿ ವೇದಭಾರತಿಯ ಕಾರ್ಯಕರ್ತರಿದ್ದು ವಿದಿವಿಧಾನವನ್ನು ಸುಗಮಗೊಳಿಸಲು ಪೂರ್ಣ ನೆರವಾಗುವರು. 
10. ಇದೊಂದು ಅತ್ಯಂತ ರಳವಾದ ನಿತ್ಯವೂ ಎಲ್ಲರೂ ತಮ್ಮ ಮನೆಗಳಲ್ಲಿ ೨೦ ನಿಮಿಷಗಳಲ್ಲಿ  ಮಾಡಬಹುದಾದ  ಯಜ್ಞವಾಗಿದ್ದು, ಕಾರ್ಯಕ್ರಮದ ನಂತರವೂ ಹೊಯ್ಸಳನಗರದ ಈಶಾವಾಸ್ಯಮ್ ನಲ್ಲಿ  ಅಗ್ನಿಹೋತ್ರವನ್ನು ಕಲಿಸುವ ವ್ಯವಸ್ಥೆ ಇರುತ್ತದೆ. 
11. ಕಾರ್ಯಕ್ರಮ ಸ್ಥಳದಲ್ಲಿ ನೂರು ಹಿತನುಡಿಗಳು ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುವುದು.

    ನಿಮಗೆ ಗೊತ್ತಿರಲಿ
1. ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳ ನಗರ,ಹಾಸನ- ಈ ವಿಳಾಸದಲ್ಲಿ ಪ್ರತಿದಿನ ಸಂಜೆ 6.00 ರಿಂದ  7.00  ರವರಗೆ ನಡೆಯುವ ಸತ್ಸಂಗದಲ್ಲಿ, ಅಗ್ನಿಹೋತ್ರ, ವೇದಾಭ್ಯಾಸ, ವೇದಪರಿಚಯ ಉಪನ್ಯಾಸ, ವೇದಭಜನ್ -ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಪ್ರವೇಶವು ಉಚಿತವಾಗಿದ್ದು  ಎಲ್ಲರಿಗೂ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶವಿದೆ.
2. ಹಾಸನದ ಸ್ಥಳೀಯ ಪತ್ರಿಕೆಗಳಾದ ಜನಮಿತ್ರ ಮತ್ತು ಜನಹಿತ ಪತ್ರಿಕೆ ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರತೀ ವಾರವೂ ಪ್ರಕಟವಾಗುತ್ತಿರುವ  ವೇದಾಧಾರಿತ ಲೇಖನಗಳನ್ನು ಓದಿ.
3. ನಮ್ಮ ಮೇಲ್ ವಿಳಾಸ : vedasudhe@gmail.com

Saturday, October 25, 2014

ಹಾಸನದಲ್ಲಿ ಸಾಮೂಹಿಕ ಅಗ್ನಿಹೋತ್ರ




ನಿಮ್ಮ ಮಾಹಿತಿ ನಮಗೆ ಕಳಿಸಿ


ವೇದಸುಧೆಯ ಅಭಿಮಾನಿಗಳೇ,

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಅನಾರೋಗ್ಯದ ವಿಚಾರದ ಮಾಹಿತಿಯನ್ನು ವೇದಸುಧೆಯ ಮೂಲಕ ತಿಳಿದ ಕೂಡಲೇ ಹಲವರು  ಶರ್ಮರ ಆರೋಗ್ಯ ಬೇಗ ಸುಧಾರಿಸಿ ಅವರಿಂದ ವೇದದ ಕೆಲಸ ಇನ್ನೂ ಹೆಚ್ಚು ಆಗಲಿ,  ಎಂಬ ಮಹದಾಶೆಯಿಂದ ತುಂಬುಹೃದಯದಿಂದ ನೆರವಿಗೆ ಕೈಜೋಡಿಸಿದ್ದಾರೆ. ಅಂತಹಾ ಎಲ್ಲಾ ಬಂಧುಗಳಿಗೂ ಧನ್ಯವಾದಗಳನ್ನು   ಹೇಳುತ್ತಾ ನಿಮ್ಮೆಲ್ಲರ ಹೆಸರು-ಊರು-ಮೊಬೈಲ್ ನಂಬರ್ ಇತ್ಯಾದಿ ಮಾಹಿತಿಗಳನ್ನು vedasudhe@gmail.com ಗೆ ಕಳಿಸಿಕೊಡಿರೆಂದು ವಿನಂತಿಸುವೆ. ಮುಂದೆ ನಡೆಯಲಿರುವ  ನಮ್ಮ ಎಲ್ಲಾ ಚಟುವಟಿಕೆಗಳನ್ನೂ  ನಿಮಗೆ ತಿಳಿಸಲು ಅದು ಅನುಕೂಲವಾಗುತ್ತೆ.ಅಲ್ಲದೆ ಶರ್ಮರ ಆರೋಗ್ಯ ಒಮ್ಮೆ ಸುದಾರಿಸಿದ ಕೂಡಲೇ ಅವರಿಂದ ಸಹಜವಾಗಿ  ವೇದದ ಕೆಲಸ ಹೆಚ್ಚು ವೇಗವನ್ನು ಪಡೆಯುತ್ತದೆ.

Friday, October 24, 2014

ಎಚ್ಚರ! ಎಚ್ಚರ!! ಎಚ್ಚರ!!!

ವೇದ,ಉಪನಿಷತ್ತು,ಭಗವದ್ಗೀತೆ - ಇವುಗಳು ಪವಿತ್ರ ಗ್ರಂಥಗಳೆಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಅವಕ್ಕೆ ಪೂಜ್ಯ ಸ್ಥಾನವನ್ನು ಕೊಟ್ಟು ದೂರವಿಡುತ್ತಾರೆ.ಇನ್ನು ಇಂದಿನ ಕಾಲದ ಯುವಕರಿಗೆ ಅಂತರ್ಜಾಲ, ದೂರದರ್ಶನಗಳಿಂದ  ಹಲವು ಆಕರ್ಷಣೆಗಳು! ಇವರೂ ಕೂಡ ಈ ಗ್ರಂಥಗಳನ್ನೆಲ್ಲಾ ವಿರೋಧಿಸದಿದ್ದರೂ ಅದು ನಮ್ಮ ಈ ವಯಸ್ಸಿಗಲ್ಲಾ!! ಎಂಬ ಭಾವನೆ!!

   ಯಾವ ಕೆಲವು ವಿದ್ಯಾವಂತ ಯುವಕರು ವೇದ-ಭಗವದ್ಗೀತೆ ಗ್ರಂಥಗಳ ಪುಟ ತೆರೆದು ನೋಡಲು  ನಮಗೆ ಇನ್ನೂ  "ಆ ಕಾಲ ಬಂದಿಲ್ಲ "  ಎಂಬ ದೋರಣೆಯ ಕಂಡು  ನನಗೆ ಅಚ್ಚರಿ ಮತ್ತು ಕರುಣೆ ಒಟ್ಟೊಟ್ಟಿಗೆ ಬರುತ್ತದೆ. ಯಾವಾಗಲೂ ಹಾಗೆಯೇ ಶರೀರ ರೋಗಗ್ರಸ್ತವಾಗುವವರೆಗೂ ಯೋಗದ ಮಹತ್ವ ತಿಳಿಯುವುದಿಲ್ಲ, ನಮ್ಮ ಪರಂಪರಾಗತವಾದ ಆಹಾರ ಪದ್ದತಿಯ ಮಹತ್ವ ತಿಳಿಯುವುದಿಲ್ಲ, ಅದಕ್ಕಿಂತ ಹೆಚ್ಚಾಗಿ ಈ ಗ್ರಂಥಗಳ ಮಹತ್ವ ತಿಳಿಯುವುದಿಲ್ಲ.

ನನ್ನ ಹಾಗೆ ವಯಸ್ಸು ಅರವತ್ತು ದಾಟುವಾಗ ಅಲ್ಪಸ್ವಲ್ಪ ಆಸಕ್ತಿ ಉಂಟಾದಾಗ " ಅಯ್ಯೋ ರಾಮ, ಇವೆಲ್ಲಾ ನಮಗೆ ಬಾಲ್ಯ-ಯೌವ್ವನದಲ್ಲೇ ತಿಳಿಯಬೇಕಾಗಿದ್ದ ಸಂಗತಿಗಳೆಂಬ ಅರಿವಾಗಿ ಪಶ್ಚಾತ್ತಾಪ ಪಡುವಂತಾಗುತ್ತದೆ.

ಇಪ್ಪತ್ತು-ನಲವತ್ತರ ನಡುವಿನ ಯುವಕ-ಯುವತಿಯರೇ , ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೆಂಬ ಆಸೆ ನಿಮಗಿದೆಯಲ್ಲವೇ? ಕೇವಲ ಇಂಗ್ಳೀಶ್ ಕಾನ್ವೆಂಟ್ ಶಿಕ್ಷಣದಿಂದ  ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆಂಬ ಭ್ರಮೆ ಬಿಡಿ.

ನಿಮ್ಮ ಮಕ್ಕಳು ಆರೋಗ್ಯವಂತರಾಗಿ, ದೃಢಕಾಯರಾಗಿ, ಗುಣವಂತರಾಗಿ, ಬುದ್ಧಿವಂತರಾಗಿ ಬೆಳೆಯಬೇಕೆಂದರೆ ಅದಕ್ಕೆ ಪೂರಕವಾದ ಹಲವಾರು ಮಾರ್ಗದರ್ಶೀ ಸೂತ್ರಗಳು ವೇದದಲ್ಲಿದೆ. ಶೋಡಷ ಸಂಸ್ಕಾರಗಳಿವೆಯಲ್ಲಾ ! ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂಸ್ಕಾರ ನೀಡುತ್ತಾ ಬನ್ನಿ, ನಿಮ್ಮ ಮಕ್ಕಳು  ಎಷ್ಟು ಚುರುಕಾಗಿ, ಗುಣವಂತರಾಗಿ, ಧೈರ್ಯವಂತರಾಗಿ, ಬುದ್ಧಿವಂತರಾಗಿ ಬೆಳೆಯುತ್ತಾರೆಂಬುದು ನಿಮಗೇ ಗೊತ್ತಾಗುತ್ತದೆ. ವಯಸ್ಸಿಗೆ ಬಂದಿರುವ  ಗಂಡು-ಹೆಣ್ಣುಗಳ ಸಾವಿರಾರು ಅಪ್ಪ-ಅಮ್ಮಂದಿರು   ಇಂದು  ಕಣ್ಣೀರಲ್ಲಿ ಕೈತೊಳೆಯುತ್ತಿರುವುದು ನಮ್ಮೆಲ್ಲರ ಕಣ್ಣು ತೆರಸಬೇಕು. ಮುಂದಿನ ದಿನಗಳಲ್ಲಿ  ಅಂತಾಸ್ಥಿತಿ ನಿಮಗೆ ಬರಬಾರದೆಂದರೆ ಈಗಿನಿಂದಲೇ ನಮ್ಮ ಋಷಿಮುನಿಗಳು ತಮ್ಮ ಸಾವಿರಾರು ವರ್ಷಗಳ ತಪ್ಪಸ್ಸಿನ ಫಲದಿಂದ, ಅನುಭವದ ಮೂಸೆಯಿಂದ ನಮಗೆ ಕೊಟ್ಟಿರುವ ಗ್ರಂಥಗಳನ್ನು ಓದುವ ,ಆಧ್ಯಾತ್ಮಿಕ ಉಪನ್ಯಾಸಗಳನ್ನು ಕೇಳುವ ಸ್ವಭಾವವನ್ನು ಬೆಳೆಸಿಕೊಳ್ಳಿ.ಅದು ಬಿಟ್ಟು  ಬೇರೆ ಮಾರ್ಗವೇ ಇಲ್ಲ.
ಇಂದಿನ ಈ ಸಿನೆಮಾಗಳು, ದಾರವಾಹಿಗಳ  ಸೆಳೆತಕ್ಕೆ ಸಿಲುಕಿ ಮುಂದಿನ ಭವಿಷ್ಯ ಹಾಳಾಗದಿರಲಿ.ಎಚ್ಚರ! ಎಚ್ಚರ!! ಎಚ್ಚರ!!!

Thursday, October 23, 2014

ಓಂ
ವೇದಭಾರತೀ, ಹಾಸನ

ಹುಬ್ಬಳ್ಳಿಯ ಆರ್ಶವಿದ್ಯಾಲಯದ 
ಪೂಜ್ಯ ಶ್ರೀ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ
 ದಿವ್ಯ ಸಾನ್ನಿಧ್ಯದಲ್ಲಿ

ಲೋಕ ಕಲ್ಯಾಣಾರ್ಥ
ಸಾಮೂಹಿಕ ಅಗ್ನಿಹೋತ್ರ
ಮತ್ತು
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು
ಸಂಗ್ರಹಿಸಿರುವ, ವೇದ ಮಂತ್ರಾಧಾರಿತ

ನೂರು ಹಿತನುಡಿಗಳು, ಭಾಗ-೨
 ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸ್ಥಳ:  ಶ್ರೀ ಕೇಶವ ದೇವಾಲಯ, ಹಾಸನ

ದಿನಾಂಕ: ೧೦.೧೧.೨೦೧೪ ಸೋಮವಾರ ಸಂಜೆ ೬.೦೦ ಕ್ಕೆ

ನೂರು ದಂಪತಿಗಳಿಗೆ ಪಾಲ್ಗೊಳ್ಳಲು ಅವಕಾಶ

ಈ ವಿಶೇಷ ಕಾರ್ಯಕ್ರಮದಲ್ಲಿ 
ನಮ್ಮೊಡನೆ
ಶ್ರೀ ಸು.ರಾಮಣ್ಣ
ಅಖಿಲಭಾರತ ಪ್ರಮುಖರು,ಕುಟುಂಬ ಪ್ರಭೋದನ್
ಇವರು ಉಪಸ್ಥಿತರಿದ್ದು 
ಹಿಂದೂ ಜೀವನ ಮೌಲ್ಯಗಳ ಬಗ್ಗೆ ಮಾರ್ಗದರ್ಶನ ಮಾಡುವರು

1.ದಂಪತಿ ಸಹಿತವಾಗಿ  ಪಾಲ್ಗೊಳ್ಳಬೇಕೆಂಬುದು ಅಪೇಕ್ಷೆ. ಅನಿವಾರ್ಯ ಸಂದರ್ಭದಲ್ಲಿ 
   ಪತಿ-ಪತ್ನಿಯರಲ್ಲಿ ಒಬ್ಬರು ಸಹ  ಪಾಲ್ಗೊಳ್ಳಬಹುದು
2.ಬ್ರಹ್ಮಚಾರಿಗಳೂ ಸಹ ಪಾಲ್ಗೊಳ್ಳಬಹುದು
3. ಅಗ್ನಿಹೋತ್ರಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ವೇದಭಾರತಿಯು ಮಾಡುವುದು. ಆದರೆ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳುವವರು ಒಂದು ಪಂಚಪಾತ್ರೆ-ಉದ್ಧರಣೆ [ಅಥವಾ ಒಂದು ಲೋಟ ಮತ್ತು ಚಮಚ] ಮತ್ತು ತುಪ್ಪ ಹಾಕಲು ಒಂದು ಬಟ್ಟಲು ಮತ್ತು ಚಮಚ  ತಂದಿರಬೇಕು.
4.ಅಗ್ನಿಹೋತ್ರವು ೬.೦೦ ಗಂಟೆಗೆ ಸರಿಯಾಗಿ ಓಂಕಾರದಿಂದ ಆರಂಭವಾಗುವುದರಿಂದ ಅರ್ಧ ಗಂಟೆ ಮುಂಚೆ ಕಾರ್ಯಕ್ರಮದ ಸ್ಥಳದಲ್ಲಿರಬೇಕು.
5.ಉಡುಪು: ಸ್ತ್ರೀಯರಿಗೆ ಸಾಂಪ್ರಾದಾಯಿಕ ಉಡುಗೆ. ಪುರುಷರಿಗೆ ಬಿಳಿ ಪಂಚೆ ಮತ್ತು ಶಲ್ಯ 
ಹತ್ತಿ ಬಟ್ಟೆ ಅಪೇಕ್ಷಣೀಯ.
6.ಇಡೀ ಕಾರ್ಯಕ್ರಮದಲ್ಲಿ ಮೊಬೈಲ್ ಸ್ವಿಚ್‌ಆಫ್ ಆಗಿರಬೇಕು.
7.ತುಂಬಾ ಪುಟ್ಟಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳಲು ದೊಡ್ದವರನ್ನು ಜೊತೆಗೆ ಕರೆ ತನ್ನಿ
8.ಅಗ್ನಿಹೋತ್ರದ ನಂತರ ಸಾಮೂಹಿಕ  ವೇದಭಜನೆ , ಉಪನ್ಯಾಸ ನಡೆಯಲಿದ್ದು ಉಪಹಾರವನ್ನು ಮುಗಿಸಿಕೊಂಡು ಮನೆಗೆ ತೆರಳಬಹುದು
9. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಂದಲೇ ಅಗ್ನಿಹೋತ್ರವನ್ನು ಮಾಡಿಸಲಾಗುವುದು.ಜೊತೆಯಲ್ಲಿ ವೇದಭಾರತಿಯ ಕಾರ್ಯಕರ್ತರಿದ್ದು ವಿದಿವಿಧಾನವನ್ನು ಸುಗಮಗೊಳಿಸಲು ಪೂರ್ಣ ನೆರವಾಗುವರು. 
10. ಇದೊಂದು ಅತ್ಯಂತ ರಳವಾದ ನಿತ್ಯವೂ ಎಲ್ಲರೂ ತಮ್ಮ ಮನೆಗಳಲ್ಲಿ ೨೦ ನಿಮಿಷಗಳಲ್ಲಿ  ಮಾಡಬಹುದಾದ  ಯಜ್ಞವಾಗಿದ್ದು, ಕಾರ್ಯಕ್ರಮದ ನಂತರವೂ ಹೊಯ್ಸಳನಗರದ ಈಶಾವಾಸ್ಯಮ್ ನಲ್ಲಿ  ಅಗ್ನಿಹೋತ್ರವನ್ನು ಕಲಿಸುವ ವ್ಯವಸ್ಥೆ ಇರುತ್ತದೆ. 
11. ಕಾರ್ಯಕ್ರಮ ಸ್ಥಳದಲ್ಲಿ ನೂರು ಹಿತನುಡಿಗಳು ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುವುದು.

    ನಿಮಗೆ ಗೊತ್ತಿರಲಿ
1. ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳ ನಗರ,ಹಾಸನ- ಈ ವಿಳಾಸದಲ್ಲಿ ಪ್ರತಿದಿನ ಸಂಜೆ 6.00 ರಿಂದ  7.00  ರವರಗೆ ನಡೆಯುವ ಸತ್ಸಂಗದಲ್ಲಿ, ಅಗ್ನಿಹೋತ್ರ, ವೇದಾಭ್ಯಾಸ, ವೇದಪರಿಚಯ ಉಪನ್ಯಾಸ, ವೇದಭಜನ್ -ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಪ್ರವೇಶವು ಉಚಿತವಾಗಿದ್ದು  ಎಲ್ಲರಿಗೂ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶವಿದೆ.
2. ಹಾಸನದ ಸ್ಥಳೀಯ ಪತ್ರಿಕೆಗಳಾದ ಜನಮಿತ್ರ ಮತ್ತು ಜನಹಿತ ಪತ್ರಿಕೆ ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರತೀ ವಾರವೂ ಪ್ರಕಟವಾಗುತ್ತಿರುವ  ವೇದಾಧಾರಿತ ಲೇಖನಗಳನ್ನು ಓದಿ.
3. ನಮ್ಮ ಮೇಲ್ ವಿಳಾಸ : vedasudhe@gmail.com

ಸಾಮೂಹಿಕ ಅಗ್ನಿಹೋತ್ರ


ಮೇಲಿನ ಚಿತ್ರದಲ್ಲಿ ಸಾಮೂಹಿಕವಾಗಿ ನಡೆಯುತ್ತಿರುವ ಅಗ್ನಿಹೋತ್ರವನ್ನು ಗಮನಿಸಬಹುದು. ಭಾರತೀಯ ಋಷಿಪರಂಪರೆಯಿಂದ ಮೂಡಿಬಂದ "ಅಗ್ನಿಹೋತ್ರ"ವು ಪಾಶ್ಚಿಮಾತ್ಯ ಜನರನ್ನು ಆಕರ್ಷಿಸಿದೆ. ಭಾರತೀಯರಾದ ನಮಗೆ  ನಮ್ಮ ಋಷಿಪರಂಪರೆಯ ಬೆಗ್ಗೆ ಅಸಡ್ದೆ ಸರಿಯೇ?

      ಹಾಸನದ ವೇದಭಾರತಿಯು ಕಳೆದ ಎರಡು ವರ್ಷದಿಂದ ನಮ್ಮ ಋಷಿ ಪರಂಪರೆಯಲ್ಲಿ ಕಾರ್ಯ ಚಟುವಟಿಕೆ ಆರಂಭಿಸಿ ನಿತ್ಯವೂ  ಸಂಜೆ 6.00 ರಿಂದ 7.00 ರ ವರಗೆ ಅಗ್ನಿಹೋತ್ರ ಮತ್ತು ವೇದಾಭ್ಯಾಸವನ್ನು  ನಿರಂತರವಾಗಿ ನಡೆಸಿಕೊಂಡು ಬಂದಿದೆ.
       ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರೇರಣೆಯಿಂದ ಆರಂಭವಾಗಿರುವ ವೇದಭಾರತಿಯ ಕಾರ್ಯಚಟುವಟಿಕೆಗಳನ್ನು
ಹಲವಾರು ಸಾದು ಸಂತರು  ನೋಡಿ ಮೆಚ್ಚಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ಆರ್ಶ ವಿದ್ಯಾಲಯದ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರು ವೇದಭಾರತಿಯ ಕಾರ್ಯಚಟುವಟಿಕೆಯನ್ನು     ತಮ್ಮದೇ ಕಾರ್ಯವೆಂಬಂತೆ ಗಮನಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
         ಶ್ರೀ ರಾಮಕೃಷ್ಣಾಶ್ರಮದ ಯತಿಗಳಾದ ಪೂಜ್ಯ ಬೋಧಸ್ವರೂಪಾನಂದರು, ಪೂಜ್ಯಯುಕ್ತೇಶ್ವರಾನಂದರು,  ಬರಮಸಾಗರದ ಪೂಜ್ಯ ಬ್ರಹ್ಮಾನಂದ ಭಿಕ್ಷು, ಬೆಂಗಳೂರಿನ ಮಾತಾಜಿ ವಿವೇಕಮಯೀ, ಚಿನ್ಮಯ ಮಿಷನ್ನಿನ ಆಚಾರ್ಯ ಸುಧರ್ಮಚೈತನ್ಯರು. . . .ಹೀಗೆ ಹತ್ತು ಹಲವು ಸ್ವಾಮೀಜಿಯವರು ವೇದಭಾರತಿಯ ಸತ್ಸಂಗಕ್ಕೆ ಬಂದು ಆಶೀರ್ವದಿಸಿದ್ದಾರೆ.
ಅಂತೆಯೇ ವೇದಭಾರತಿಯ ಸದಸ್ಯರೂ ಕೂಡ ಬೆಂಗಳೂರು, ಮೈಸೂರು, ಅರಸೀಕೆರೆ, ಹಂಪಾಪುರ, ಕೆರಳಾಪುರ ಮುಂತಾದ ಊರುಗಳಲ್ಲಿ ಅಗ್ನಿಹೋತ್ರವನ್ನು ನಡೆಸಿ  ವೇದದ ಅರಿವು ಮೂಡಿಸುವಲ್ಲಿ ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ.

       ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರ ಮೇಲ್ವಿಚಾರಣೆಯಲ್ಲಿ ವೇದಪಾಠವು  ನಡೆಯುತ್ತಿದೆ. ನಿತ್ಯವೂ ಸತ್ಸಂಗದಲ್ಲಿ   ಶ್ರೀಸುಧಾಕರಶರ್ಮ ಮುಂತಾದವರ ಹತ್ತಿಪ್ಪತ್ತು ನಿಮಿಷಗಳ ಉಪನ್ಯಾಸದ ಆಡಿಯೋ ಕೇಳಿಸಲಾಗುತ್ತಿದೆ. ಹಾಸನದ ದಿನಪತ್ರಿಕೆಗಳಲ್ಲಿ     ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ  ವೇದ ಕುರಿತಾದ ಲೇಖನಗಳನ್ನು ಸರಳ ಶೈಲಿಯಲ್ಲಿ ಪ್ರತೀ ವಾರವೂ   ಪ್ರಕಟಿಸಲಾಗುತ್ತಿದೆ.
       ವೇದಶಿಬಿರ, ಬಾಲಶಿಬಿರ, ವಾರ್ಷಿಕೋತ್ಸವ, ಶ್ರೀ ಶರ್ಮರೊಡನೆ ಮುಕ್ತ ಸಂವಾದ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು ಅವುಗಳಲ್ಲಿ ವೇದವಿದ್ವಾಂಸರ ಜೊತೆಗೆ RSS ನ ಪ್ರಮುಖರಾದ ಶ್ರೀ ಸು.ರಾಮಣ್ಣ, ಶ್ರೀ ಕಜಂಪಾಡಿಸುಬ್ರಮ್ಹಣ್ಯಭಟ್, ಶ್ರೀ ಪ್ರಭಾಕರಭಟ್ , ವೇದತರಂಗ ಮಾಸಿಕ ಪತ್ರಿಕೆಯ ಶ್ರೀ ಶ್ರುತಿಪ್ರಿಯ ಮೊದಲಾದವರು   ಪಾಲ್ಗೊಂಡು ಮಾರ್ಗದರ್ಶನ ಮಾಡಿದ್ದಾರೆ. ಪೂಜ್ಯ ಚಿದ್ರೂಪಾನಂದರ "ಗೀತಾಜ್ಞಾನಯಜ್ಞ:ವನ್ನೂ ಸಹ  ವೇದಭಾರತಿಯ ವತಿಯಿಂದ ನಡೆಸಲಾಗಿದೆ.

ಮುಂದಿನ ಕಾರ್ಯಕ್ರಮಗಳು:

1. ಇದೇ  ನವಂಬರ್ 10ರಂದು  ನೂರು ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರವು ಹಾಸನದಲ್ಲಿ  ನಡೆಯುತ್ತದೆ.

2. ಮುಂದಿನ ವರ್ಷ ಫೆಬ್ರವರಿ 10 ರಂದು ಹಾವೇರಿ ಸಮೀಪ ಮಗುಂದ ಆಶ್ರಮದಲ್ಲಿ ಸಾವಿರ ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮವು ವೇದಭಾರತಿಯ ಸಹಕಾರದೊಂದಿಗೆ ನಡೆಯಲಿದೆ. ಅದಕ್ಕಾಗಿ ಪೂಜ್ಯ ಚಿದ್ರೂಪಾನಂದರು ರಾಜ್ಯವ್ಯಾಪಿ ಪ್ರಚಾರವನ್ನು ಈಗಾಗಲೇ ಆರಂಭಿಸಿರುತ್ತಾರೆ. ನಮ್ಮೊಡನೆ  ವೇದಸುಧೆಯ ಅಭಿಮಾನಿಗಳೆಲ್ಲರೂ ಮಲಗಂದದ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬುದು ವೇದಭಾರತಿಯ ಅಪೇಕ್ಷೆ. ವಿವರವನ್ನು ಪ್ರಕಟಿಸಲಾಗುವುದು.ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳುವಿರಾ?
 ಶ್ರೀಸುಧಾಕರಶರ್ಮರ ಆರೋಗ್ಯವು ಸುಧಾರಿಸಲು ವೇದಭಾರತಿಯ ಮನವಿಗೆ ಹಲವರು ನೆರವು ನೀಡಿದ್ದಾರೆ.ಎಲ್ಲರಿಗೂ ಧನ್ಯವಾದಗಳು. ವೇದಜ್ಞಾನಪ್ರಸಾರದಲ್ಲಿ ಜೊತೆಜೊತೆಯಲ್ಲಿ ಸಾಗೋಣ  ಬನ್ನಿ.
ನಮಸ್ಕಾರಗಳು.
ಹರಿಹರಪುರಶ್ರೀಧರ್
ಸಂಪಾದಕ
ವೇದಸುಧೆ

ಆಚಾರ್ಯ ರಾಜೇಶ್

ವೇದತರಂಗದ ಸಂಪಾದಕರಾದ ಶ್ರೀ ಶೃತಿಪ್ರಿಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾಗ ಕೇರಳದ ಆಚಾರ್ಯ ಶ್ರೀ ರಾಜೇಶ್ ಅವರ ಬಗ್ಗೆ ತಿಳಿಸಿದರು. ಶ್ರೀ ರಾಜೇಶ್ ಇವರು "ಎಲ್ಲರಿಗಾಗಿ ವೇದ" ಉದ್ದೇಶದೊಡನೆ ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾರೆ. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರವನ್ನು ಒಪ್ಪುವವರು.ಆದರೆ ಆರ್ಯಸಮಾಜಿಯಲ್ಲ. ಒಂದು ಲಕ್ಷ ಜನರಿಗೆ ಸಾಮೂಹಿಕ ಅಗ್ನಿಹೋತ್ರವನ್ನು ನಡೆಸಿದ್ದಾರೆಂಬ ಮಾತು ಕೇಳಿ ಅಚ್ಚರಿಗೊಂಡೆ. ಅವರ ವೆಬ್ ಸೈಟ್ ಜಾಲಾಡಿದೆ. ಅದರ ವೀಡಿಯೋ ಅಥವಾ ಫೋಟೋ ಲಭ್ಯವಾಗಲಿಲ್ಲ. ಬಹುಷಃ ಒಂದು ಲಕ್ಷ ಜನವನ್ನು ಸೇರಿಸಿ ಅಗ್ನಿಹೋತ್ರ ಒಂದನ್ನು ಮಾಡಿರಬಹುದು. ಇರಲಿ.ಅವರದು ಅದ್ಭುತ ಕಾರ್ಯ. ಅವರ Facebook ಗೋಡೆಯಲ್ಲಿ ಹಲವಾರು ಕಾರ್ಯಕ್ರಮಗಳ ಚಿತ್ರಗಳನ್ನು ಕಾಣಬಹುದು. ವೇದಭಾರತಿಯ ಮಾದರಿಯಲ್ಲೇ ಅವರದು ಇನ್ನೂ ಬೃಹತ್ ಕಾರ್ಯಕ್ರಮಗಳು!

ಅವರ ಕಾರ್ಯಕ್ಷೇತ್ರ:

ozhikode, Kerala, India 673001




ಯಾರಿಗಾದರೂ ಆಸಕ್ತಿ ಇದೆಯೇ?

 ಮಿತ್ರರೇ,

     ಸ್ವಂತ ತಾಣ  ಒಂದು ಇರಲಿ, ಎಂದು vedasudhe.com ಆರಂಭಿಸಿದ್ದಾಯ್ತು. ಆದರೆ ನನಗೆ ಬ್ಲಾಗ್ ನಲ್ಲಿ ಬರೆಯುವಷ್ಟು ಸುಲಭವಾಗಿ ಸ್ವಂತ ತಾಣದಲ್ಲಿ ಬರೆಯಲು ಸಾಧ್ಯವಾಗುತ್ತಿಲ್ಲ. ಬ್ಲಾಗ್ ನಿರ್ವಹಿಸಲು ಸೋದರಿ ಪ್ರಿಯಾಭಟ್ ಸಹಕರಿಸುತ್ತಿದ್ದಾರೆ. vedasudhe.com ತಾಣವನ್ನು  ವೇದದ ಉದ್ಧೇಶಕ್ಕಾಗಿ ಯಾರಾದರೂ ಉಪಯೋಗಿಸಲು ಮುಂದೆ ಬಂದರೆ ಉಚಿತವಾಗಿ ಬಿಟ್ಟುಕೊಡಲು ಸಿದ್ಧ. ಕಾರಣ   ಅದನ್ನು effective ಆಗಿ ನನಗೆ ಬಳಸಲು ಸಾಧ್ಯವಾಗುತ್ತಿಲ್ಲ. ಯಾರಿಗಾದರೂ ಆಸಕ್ತಿ ಇದೆಯೇ? ಆಸಕ್ತರು ನನ್ನನ್ನು vedasudhe@gmail.com ಮೂಲಕ ಸಂಪರ್ಕಿಸಲು ಕೋರುವೆ

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

Wednesday, October 22, 2014

ಮಡಿವಂತಿಕೆಯನ್ನು ಮೆಟ್ಟಿನಿಂತಿದ್ದ ಮಹಾನುಭಾವ ಮುಕುಂದೂರು ಸ್ವಾಮೀಜಿ




ಶಿಷ್ಯನೊಬ್ಬ  ಏದುಸಿರು ಬಿಡುತ್ತಾ  ಓಡೋಡಿ ಆಶ್ರಮಕ್ಕೆ ಬಂದು ಗಾಬರಿಯಲ್ಲಿ ಹೇಳುತ್ತಾನೆ  ಸ್ವಾಮೀ, ದೊಡ್ದಬೋರೇಗೌಡ ಸತ್ತೋಗ್ಬುಟ್ಟ.
ಸತ್ತೋಗ್ ಬಿಟ್ನಾ? ಎಲ್ಲಾರೋ ಉಂಟೇ?.. . . . .ಸ್ವಾಮಿಗಳು ಶಾಂತವಾಗಿಯೇ ಕೇಳುತ್ತಾರೆ.
 ನಾನೇ ನೋಡ್ದೇ ಸ್ವಾಮೀ,  ಹೆಣ ನೋಡಿ ಬಂದೇ ಹೇಳ್ತಾ  ಇರೋದು - ಸ್ವಾಮಿಗಳು ತನ್ನ ಮಾತನ್ನು ನಂಬುತ್ತಿಲ್ಲವೆಂದು ಭಾವಿಸಿ ಶಿಷ್ಯನು ವಿಷಯವನ್ನು ಖಚಿತ ಪಡಿಸಲು ಮತ್ತೆ ಮತ್ತೆ ಹೇಳುತ್ತಾನೆ.
ಸರಿ ಬುಡಪ್ಪಾ. ನೀನೇ ಕಂಡೆ ಅಂದ್ಮ್ಯಾಕೆ ಇನ್ನೇನೈತೆ ಎನ್ನುತ್ತಾ  ಸ್ವಾಮಿಗಳು  ಬೆಳೆಗೆರೆಕೃಷ್ಣಶಾಸ್ತ್ರಿಗಳತ್ತ ತಿರುಗಿ  ಸ್ವಾಮಿ ಸತ್ತೋಗೋದು ಎಲ್ಲಾರ ಉಂಟೆ! ಅದು ಬಂದೂ ಇಲ್ಲ. ಓಗೋದೂ ಇಲ್ಲ. ಅದು ಯಾವತ್ತಿಗೂ ಇರೋದು. ಇವನೇನೋ ನೋಡ್ದೇ ಅಂತಾ ಬೇರೆ ಏಳ್ತಾನೆ! ಎಂಗೋಪಾ, ನಾ ಕಾಣೆ. ಇವ್ನಂತೂ  ಸಾಯಕ್ಕಿಲ್ಲ. ಯೆಂಗಪ್ಪಾ ಬಾಳಿ ಬದ್ಕಿ ಸತ್ತು ಓಗೋದು?   ಎಂದು   ಗಟ್ಟಿಯಾಗಿ ನಗ್ತಾರೆ. ಶಿಷ್ಯ ತಬ್ಬಿಬ್ಬಾಗ್ತಾನೆ.
-ಇದು ಮುಕುಂದೂರು ಸ್ವಾಮಿಗಳ ಜೀವನದ ಒಂದು ಪುಟ್ಟ ಘಟನೆ. ಆತ್ಮಕ್ಕೆ ಸಾವಿಲ್ಲ ಎಂಬುದನ್ನು ಸ್ವಾಮಿಗಳು  ಸರಳವಾಗಿ ಗ್ರಾಮೀಣ ಭಾಷೆಯಲ್ಲಿ ಹೇಳಿದ ಪರಿ ಇದು.  ಅದು ಬಂದೂ ಇಲ್ಲ. ಓಗೋದೂ ಇಲ್ಲ. ಅದು ಯಾವತ್ತಿಗೂ ಇರೋದು ಅನ್ನೋ ಅವರ ಮಾತಿನಲ್ಲಿ ಗೀತೆಯ ಸಾರವೇ ಅಡಗಿದೆಯಲ್ಲಾ! ಸ್ವಾಮೀಜಿಯವರ ಈ ಮಾತನ್ನು ಭಗವದ್ಗೀತೆಯಲ್ಲಿ ನೋಡೋಣ.
ಭವದ್ಗೀತೆಯ ಎರಡನೇ ಅಧ್ಯಾಯದ ೨೦ನೇ ಶ್ಲೋಕದಲ್ಲಿ  ಶ್ರೀಕೃಷ್ಣನು ಹೇಳುತ್ತಾನೆ . . . . .

ನಜಾಯತೇ ಮ್ರಿಯತೇ ವಾ ಕದಾಚಿನ್ನಾಯಮ್

ಭೂತ್ವಾ ಭವಿತಾ ವಾ ನ ಭೂಯಃ |
ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ ||

ಭಾವಾರ್ಥ : ಆತ್ಮನು ಯಾವ ಕಾಲದಲ್ಲೂ ಹುಟ್ಟುವವನೂ ಅಲ್ಲ, ಸಾಯುವವನೂ ಅಲ್ಲ, ಹಾಗೂ ಹಿಂದೆ ಉತ್ಪನ್ನವಾಗಿ ಈಗ ಇರುವವನೂ ಅಲ್ಲ, ಏಕೆಂದರೆ ಆತ್ಮನು ಜನ್ಮರಹಿತನು, ನಿತ್ಯನೂ, ಸನಾತನನೂ ಮತ್ತು ಪುರಾತನವೂ ಆಗಿದ್ದು, ಶರೀರವು ನಾಶವಾದರೂ ಆತ್ಮನು ನಾಶವಾಗುವುದಿಲ್ಲ.

ಇಷ್ಟೆಲ್ಲವನ್ನೂ ಗ್ರಾಮೀಣಭಾಷೆಯಲ್ಲಿ  ಅದು ಬಂದೂ ಇಲ್ಲ. ಓಗೋದೂ ಇಲ್ಲ. ಅದು ಯಾವತ್ತಿಗೂ ಇರೋದು ಅಂತಾ ಹೇಳಿ ಬಿಟ್ಟರು.
೧೯೬೬ ರಲ್ಲಿ ದೇಹವನ್ನು ತ್ಯಜಿಸಿದ ಶ್ರೀ ಮುಕುಂದೂರು ಸ್ವಾಮಿಗಳು ೧೫೦ ವರ್ಷಕ್ಕೂ ಹೆಚ್ಚು ಕಾಲ ಬದುಕಿದ್ದ ಅವಧೂತರು. ಪಕ್ಕಾ ಗ್ರಾಮೀಣ  ಮನುಷ್ಯ. ಹೆಚ್ಚು ಓದಿದವರಲ್ಲ. ಆದರೆ ಸಾಧನೆ ಮಾಡಿ ಅಸಾಧ್ಯವಾದುದನ್ನು ಸಾಧಿಸಿಕೊಂಡಿದ್ದವರು. ಇತ್ತೀಚೆಗೆ ನಿಧನರಾದ ಶ್ರೀ ಬೆಳೆಗೆರೆಕೃಷ್ಣಶಾಸ್ತ್ರಿಗಳಿಗೆ ಕೆಲವು ವರ್ಷಗಳು ಈ ಅವಧೂತರ ಸಾನ್ನಿಧ್ಯದಲ್ಲಿ ಇರುವ ಅವಕಾಶವು ದೊರೆತಿತ್ತು. ಮುಕುಂದೂರು ಸ್ವಾಮೀಜಿಯವರ ಪ್ರತ್ಯಕ್ಷ ದರ್ಶಿಗಳಾಗಿದ್ದ  ಶ್ರೀ ಶಾಸ್ತ್ರಿಗಳಿಂದ ಕೇಳಿ ತಿಳಿದುಕೊಂಡ ಮತ್ತು ಅವರೇ ಬರೆದಿರುವ ಯೇಗದಾಗೆಲ್ಲಾ ಐತೆ  ಪುಸ್ತಕದಿಂದ ಆಯ್ದ ಕೆಲವು ಘಟನೆಗಳನ್ನು ಇಲ್ಲಿ ಸ್ಮರಣೆ ಮಾಡಿಕೊಳ್ಳುವೆ.
      ಸೃಷ್ಟಿ ರಹಸ್ಯ:
ಮುಕುಂದೂರು ಸ್ವಾಮಿಗಳು ಅಧ್ಯಾತ್ಮ ವಿಚಾರ ತಿಳಿಸುವ  ಶೈಲಿ    ಬಲು ಸರಳ. ಆದರೆ ಅದ್ಭುತ..........
ಹರಿಯುವ ಝರಿಯ ದಡದಲ್ಲಿ ಶಾಸ್ತ್ರಿಗಳೊಡನೆ ಕುಳಿತಿದ್ದಾರೆ.  ಝರಿಯಲ್ಲಿ ತೇಲಿಹೋಗಿ ಮಾಯವಾಗುವ ಕೆಲವು ಗುಳ್ಳೆಗಳನ್ನು ನೋಡುತ್ತಾ ಅವರ ಬಾಯಲ್ಲಿ ಬಂದ ಮಾತುಗಳನ್ನು ಕೇಳಿ..........

-"ಅಗೋ ನೋಡಪ್ಪಾ ತಮಾಶೆ! ಅದರಪಾಡಿಗೆ ನೀರು ಹರಿದು ಹೋಗ್ತಿದೆ, ಅದೆಲ್ಲಿಂದ ಬಂದ್ವು  ಈ ಗುಳ್ಳೆಗಳು! ಅದೆಷ್ಟೊಂದು ಗುಳ್ಳೆಗಳು ಬಂದ್ವು! ಅಗೋ ಅಲ್ಲಿ ನೋಡು, ಅಷ್ಟು ದೂರ ಹೋಗೋ ಹೊತ್ಗೆ  ಒಂದೂ ಇಲ್ಲಾ! ಇಲ್ ಹುಟ್ಟಿದ್ಯಾಕೇ? ಅಲ್ಲಿ ವರಗೆ ಹೋಗಿದ್ಯಾಕೇ?  ಒಂದೂ ಇಲ್ದಂಗ್  ಹೋಗಿದ್  ಎಲ್ಲಿಗೆ?
‘ಹುಟ್ಟಿದ್ ಯಾವ್ದು?, ಅಲ್ಲಿಗಂಟ ಹೋಗಿದ್ಯಾವ್ದು? ಆಮೇಲ್ ಇಲ್ವಾಗಿದ್ದು  ಯಾವ್ದು? ಎಲ್ಲಾ ನೀರೇ!! ಇಂಗೇ ಅಲ್ವೇ  ನಮ್ ಹುಟ್ಟು?  ಯಾಕೋ ಏನೋ ಹುಟ್ಟೋದು, ಅದರ ಸೆಳವಿನಾಗೇ ಅಷ್ಟು ದೂರ ಹೋಗೋದು, ಮತ್ ಅದರಾಗೇ ಕಾಣದಂಗಾಗೋದು. ಇದೇ ಅಲ್ವೇ ಕೌತುಕ? ಯಾವ್ದೂ ಇಷ್ಟೇ,  ಕೌತುಕ ಅಂದ್ರೆ ಕೌತುಕ,  ಇಲ್ಲಾ ಅಂದ್ರೆ ಏssನೂ ಇಲ್ಲ. ಸೃಷ್ಟಿ ರಹಸ್ಯವನ್ನು ನೀರಿನ ಮೇಲಿನ ಗುಳ್ಳೆಯ ಉಧಾಹರಣೆಯೊಂದಿಗೆ  ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟ  ಸ್ವಾಮಿಗಳ  ಈ ಶೈಲಿ  ಅದ್ಭುತ!!

ಹಿಂಗೇ ಬಿಡದಂಗೆ ಹಿಡ್ಕಂದ್ರೆ ಅವಾ ಬಿಡಂಗೇ ಇಲ್ಲಾ!!

ಸ್ವಾಮಿಗಳ ಆಶ್ರಮದ ಮುಂದೆ ನಿಂತು ದೂರಕ್ಕೆ ಕಣ್ಣು ಹಾಯಿಸಿದರೆ ಸಿದ್ಧರ ಬೆಟ್ಟ ಕಾಣುತ್ತೆ. ಆ ಬೆಟ್ಟವನ್ನು ಹತ್ತಲು ಕೃಷ್ಣಶಾಸ್ತ್ರಿಗಳೊಟ್ಟಿಗೆ ಒಮ್ಮೆ ಸ್ವಾಮೀಜಿ ಹೊರಟರು. ಆಶ್ರಮದಿಂದ ೭-೮ ಮೈಲಿ ನಡೆದು ಬೆಟ್ಟದ ಬುಡ ಸೇರಿದರು. ಸ್ವಾಮೀಜಿಗೆ ಬೆಟ್ಟಹತ್ತುವುದೆಂದರೆ ಬಲು ಸಲೀಸು. ಸ್ವಾಮೀಜಿಯಂತೂ ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ನಿರಾಯಾಸವಾಗಿ ಹತ್ತುತ್ತಾ ಹೊರಟರು, ಆದರೆ ಕೃಷ್ಣಶಾಸ್ತ್ರಿಗಳಿಗೆ ಆಯಾಸವಾಗ್ತಾ ಇದೆ, ಎಷ್ಟು ಪ್ರಯತ್ನ ಪಟ್ಟರೂ ಸ್ವಾಮೀಜಿ ಯವರೊಟ್ಟಿಗೆ ಹೆಜ್ಜೆ ಹಾಕಲು ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಒಂದು ಕಡೆಯಂತೂ ಎರಡು ಎತ್ತರವಾದ ಬಂಡೆಗಳ ನಡುವೆ ಆಳವಾದ ಕಂದಕ. ಸ್ವಾಮೀಜಿ ಸಲೀಸಾಗಿ ಜಿಗಿದೇ ಬಿಟ್ಟರು. ಆದರೆ ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಆಗ ಸ್ವಾಮೀಜಿಯು ತಾವು ತಲೆಗೆ ಸುತ್ತಿದ್ದ ರುಮಾಲು ಬಿಚ್ಚಿ ಹಗ್ಗದಂತೆ ಉದ್ದಮಾಡಿ ಅದರ ಒಂದು ತುದಿಯನ್ನು ಶಾಸ್ತ್ರಿಗಳತ್ತ ಎಸೆಯುತ್ತಾರೆ,  " ಈಗ ಹಗ್ಗ ಬಿಗಿಯಾಗಿ ಹಿಡ್ಕಾ ಇವ ನಿನ್ನ ಕರಕೊನ್ಡಾನು! " ಸ್ವಾಮೀಜಿ ನಗುತ್ತಾ ಹೇಳುತ್ತಾರೆ. ಶಾಸ್ತ್ರಿಗಳು ರುಮಾಲಿನ ಸಹಾಯದಿಂದ ಬಂಡೆಯ ಮೇಲೇರುತ್ತಾರೆ. ಸ್ವಾಮೀಜಿ ಮಾರ್ಮಿಕವಾಗಿ ಹೇಳುತ್ತಾರೆ" ನೋಡಪ್ಪಾ ಹಿಂಗೇ ಬಿಗಿಯಾಗಿ ಹಿಡ್ಕಂದ್ರೆ ಇವ ಕೈ ಬಿಡನ್ಗೇ ಇಲ್ಲಾ." ಭಗವಂತನನ್ನು ಕಾಣಲು ಎಷ್ಟು ದೃಢ ವಾದ ನಂಬಿಕೆ ಇರಬೇಕು , ಅನ್ನೋದನ್ನು ಸ್ವಾಮೀಜಿಯವರು ಚಿಕ್ಕ ಚಿಕ್ಕ ಘಟನೆಗಳಲ್ಲೂ ಮನಮುಟ್ಟುವಂತೆ ಹೇಳುತ್ತಿದ್ದ ಪರಿ ಇದು.

"ಎಲ್ಲಾ ರೂಪವು ತಾನಂತೆ ಶಿವ ಎಲ್ಲೆಲ್ಲಿಯೂ ಅವ ಇಹನಂತೆ"

 ಬೆಟ್ಟವನ್ನು ಹತ್ತಿ ಹತ್ತಿ ಶಾಸ್ತ್ರಿಗಳಿಗೆ ಹೊಟ್ಟೆಯಲ್ಲಿ ಹಸಿವು ಜಾಸ್ತಿಯಾಗಿ ಬಿಟ್ಟಿತು. ಆಯಾಸ ಹೆಚ್ಚಾಗಿ ಬಂಡೆಯ ಮೇಲೆ ಮಲಗಿಬಿಟ್ರು, ಸ್ವಾಮೀಜಿಯಾದರೋ ಪ್ರಕೃತಿಯನ್ನೆಲ್ಲಾ ಬಣ್ಣಿಸ್ತಾ ಇದಾರೆ,

-ಯಾರಿಗೆ ಬೇಕು ಸ್ವಾಮೀಜಿ? ನನಗಂತೂ ತುಂಬಾ ಹಸಿವಾಗಿದೆ.
-ಬೆಟ್ಟಕ್ ಬಂದು ಹಸಿವಾಗ್ತದೆ ಅಂದ್ರೆ ಇಕ್ಕೊರ್ ಯಾರು? ಯೇನಾದ್ರ ಬುತ್ತಿ ತರ್ಬೇಕಿತ್ತಪ್ಪಾ!

- ಇಷ್ಟು ತಡವಾಗುತ್ತೆ ಅಂತಾ ನನಗೆ ಗೊತ್ತಾಗ್ಲಿಲ್ಲವಲ್ಲಾ
-ಅಂಗಾದ್ರೆ ಯಾರಾನ ತಂದಾಕಿದ್ರೆ ತಿಂದ ಬುಡ್ತೀಯಾ? ಹಾಸ್ಯಮಾಡಿ ಸ್ವಾಮೀಜಿ ನಕ್ಕರು, ಶಾಸ್ತ್ರಿಗಳೂ ನಕ್ಕರು.

-ಅಗೋ ಅಲ್ಲಿ ಯಾರೋ ಬಂದಂಗಾತು ,ಅವರನ್ನ ಕೇಳಾಣ " ಸ್ವಾಮೀಜಿ ಮಾತು ಕೇಳಿ ಶಾಸ್ತ್ರಿ ತಿರುಗಿ ನೋಡ್ತಾರೆ , ಯಾರೂ ಇಲ್ಲಾ.
-ಅಗೋ ಅಲ್ಲಿ ನೋಡು , ಆಕಾಶದಲ್ಲಿ ಬಹು ಎತ್ತರದಲ್ಲಿ ಹಾರಾಡ್‌ತಿದ್ದ ಎರಡು ಹದ್ದುಗಳನ್ನು ಸ್ವಾಮೀಜಿ ತೋರಿಸಿ ಹೇಳ್ತಾರೆ, " ಎಲೆ ಅಪ್ಪಯ್ಯಗಳಾ ಈ ಹುಡುಗನಿಗೆ ಭಾರಿ ಹಸಿವಾಗೈತೆ, ವಸಿ ಎನಾದರ ಕೊಡ್ರಪ್ಪಾ!
ಸ್ವಾಮೀಜಿ ತಮಾಷೆ ಮಾಡ್ತಾರಲ್ಲಾ ಅಂತಾ ಶಾಸ್ತ್ರಿಗಳಿಗೆ ಬೇಸರವೇ ಆಗುತ್ತೆ,
ಅಷ್ಟರಲ್ಲಿ ಸ್ವಾಮೀಜಿ ಹೇಳ್ತಾರೆ" ಇಗಳಪ್ಪಾ, ಕೊಟ್ಟೆ ಬಿಟ್ರಲ್ಲಾ! ತಕೋ ತಿನ್ನು , ಬಾಳಾ ಹಸ್ದಿದ್ದೀಯಾ ,ಅಂತಾ ಕೈಲಿದ್ದ ಬಾಳೆಹಣ್ಣನ್ನು ಕೊಡ್ತಾರೆ.
-ತಿನ್ನು, ತಿನ್ನು, ಕೇಳಿದ್ರೆ ಇನ್ನೂ ಕೊಡ್ತಾರೆ,
ಶಾಸ್ತ್ರಿಗಳು ಹಣ್ಣನ್ನು ನೋಡ್ತಾರೆ; ಆಗತಾನೆ ಗುಡಾಣದಿಂದ   ತೆಗೆದಂತಿದೆ. ಒಂದಾದ ಮೇಲೊಂದರಂತೆ ಮೂರು ಹಣ್ಣನ್ನು ಕೊಟ್ಟಿದ್ದಲ್ಲದೆ , ಸ್ವಾಮೀಜಿಯವರೂ ಮೂರು ಬಾಳೆ ಹಣ್ಣನ್ನು ತಿನ್ನುತ್ತಾರೆ.
ಆಗ ಶಾಸ್ತ್ರಿಗಳು ಕೇಳ್ತಾರೆ" ಸ್ವಾಮೀಜಿ ಈ ಹಣ್ಣು ಎಲ್ಲಿಂದ ಬಂತು?

-ಆವಾಗ ಬರೋವಾಗ ಅಲ್ಲೊಬ್ಬ ಬಂದಾ ನೋಡು, ಅವಾಕೊಟ್ಟ.
-ಯಾರು ಸ್ವಾಮೀಜಿ ಅವನು? ನಾನು ನೋಡಲೇ ಇಲ್ಲವಲ್ಲಾ?
-ನೀನು ನೋಡ್ಲಿಲ್ಲಾ ಅಂದ್ರೆ ಅವನು ಬಂದೆ ಇಲ್ಲಾ ಅನ್ನು? ಅವನು ಇಲ್ವೆ ಇಲ್ಲಾ ಅನ್ನು?

ಶಾಸ್ತ್ರಿಗಳಿಗೆ ಎಲವೂ ವಿಸ್ಮಯವಾಗಿ ಕಾಣುತ್ತೆ.
ಸ್ವಾಮೀಜಿ ನಗ್ತಾ ಹಾಡ್ತಾರೆ" ಎಲ್ಲಾ ರೂಪವೂ ತಾನಂತೆ ಶಿವಾ, ಎಲ್ಲೆಲ್ಲಿಯೂ ಅವಾ ಇಹನಂತೆ, ಕಾಣಲಾರದವರಿಗೆ ಕಲ್ಲಂತೆ.....ಅವ ಇಲ್ಲಂತೆ...
ಹೀಗೆ ಅದೆಷ್ಟು ಘಟನೆಗಳೋ!

ನಿನ್ನ ಹೃದಯದಲ್ಲಿ ಅವನಿಗೆ ಜಾಗ ಕೊಡು

ಒಂದು ಹೂ ಬುಟ್ಟಿ ಹಿಡಿದು ಸ್ವಾಮಿಗಳು ಆಶ್ರಮದ ಹೊರಗೆ ಹೂ ಗಿಡಗಳ ಹತ್ತಿರ ಹೋಗುತ್ತಾರೆ.ಅವರು ಹೂ ಕೊಯ್ಯುವಾಗ ಹೂಗಿಡಗಳನ್ನು ಮಾತನಾಡಿಸುವ ಪರಿ ಅಚ್ಚರಿ ಮೂಡಿಸುತ್ತದೆ.
ಮೊದಲು ಎಲ್ಲಾ ಗಿಡಗಳಿಗೂ ನೀರುಣಿಸಿ ನಂತರ ಒಂದು ಗಿಡದ ಹತ್ತಿರ ಬರುತ್ತಾರೆ. ಅದು ಸೊರಗಿರುತ್ತದೆ.  ಯಾಕಮ್ಮಾ ಸೊರಗಿದೀಯಾ? ನಿನ್ನೆ ನೀರು ಕುಡಿದಿರಲಿಲ್ವಾ? ತಗೋ ನೀನೊಂದಿಷ್ಟು ಜಾಸ್ತಿ ಕುಡಿ ಎಂದು ಹೇಳುತ್ತಾ ಸಾಕಷ್ಟು ನೀರನ್ನು ಗಿಡಕ್ಕೆ ಹಾಕುತ್ತಾರೆ. ನಂತರ ಹೂ ಕೊಯ್ಯಲು ಆರಂಭಿಸುತ್ತಾರೆ. ಹೆಚ್ಚು ಹೂ ಬಿಟ್ಟಿರುವ ಗಿಡದ ಹತ್ತಿರ ಹೋಗಿ  ನೀ ಸಾವ್ಕಾರ್ತಿ ನಾಲ್ಕು ಹೂವು ಕೊಡವ್ವಾ! ಎಂದು ಹೇಳಿ ಗಿಡಕ್ಕೆ ನೋವಾಗದಂತೆ ಅಲ್ಲೊಂದು ಇಲ್ಲೊಂದು ಹೂವನ್ನು ಬಿಡಿಸಿಕೊಳ್ಳುತ್ತಾರೆ.

ಹೂವು ಕಡಿಮೆ ಇರುವ ಮತ್ತೊಂದು ಗಿಡವನ್ನು ನೋಡಿ  ಯಾಕವ್ವಾ, ನೀ ಬಡವಿ ಆಗಿದ್ದೀಯಾ? ಎಂತಾ ಬಡವರಾದರೂ   ಭಿಕ್ಷೆಗೆ ಬಂದವರಿಗೆ ನಾಸ್ತಿ ಅನ್ನಬಾರದು ಒಂದೇ ಒಂದು ಕೊಡು ಸಾಕು, ಎಂದು ಹೇಳುತ್ತಾ ಒಂದು ಹೂ ಬಿಡಿಸಿಕೊಳ್ಳುತ್ತಾರೆ. ಹೂಬುಟ್ಟಿ ಹಿಡಿದು ಆಶ್ರಮದ ಒಳಗೆ ಹೋಗುತ್ತಾರೆ.
ಶಿವಲಿಂಗದೆದುರು ನಿಂತು  ತಕ್ಕೋ ನಿಂದು ನಿಂಗೇ ಇರಲಿ ಎಂದು ಶಿವಲಿಂಗದ ಮೇಲೆ ಸುರಿಯುತ್ತಾ ಗಟ್ಟಿಯಾಗಿ ನಗುತ್ತಾ ಹೇಳುತ್ತಾರೆ ಅಯ್ಯೋ ಕತೆಯೇ ನೀನೇ ಕೊಟ್ಟಿದ್ದೂ   ಅಂದ್ರೂ ತಗೊಳ್ಳೋನ್  ಒಬ್ಬ ಬ್ಯಾರೇ ಅಂತಾಗುತ್ತೆ. ಮಾತಾಡಿದ್ರೆ ಬಂತು ನೋಡು  ನೀನು-ನಾನು, ಅದು-ಇದು, ಅಲ್ಲಿ-ಇಲ್ಲಿ, ಎಲ್ಲಾ ಸುಳ್ಳು. ಸುಳ್ಳು ಅಂದ್ರೆ ಮೈಲಿಗೆ ಸುಮ್ಕಿದ್ರೆ ಅದೇ ಮಡಿ. ಎಂಗಾನ ಮಾಡೂ ಅಂದ್ರೂ ಅಂಬೋನೇ ಬ್ಯಾರೇ ಅಂತಾಗುತ್ತೆ.. . . . . . . .
ಶಿವನ ಅಭಿಷೇಕಕ್ಕೆ ಮಡಿಉಟ್ಟು ಹೊಸಗಡಿಗೆಯಲ್ಲಿ ಳ್ಳದ  ನೀರು ತರ್ಬೇಕು ಅಂತಾರೆ, ಯಾವ ಮಡಿ, ಯಾವ ಮೈಲಿಗೆ, ಯಾವ ಹೊಸದು,ಯಾವ ಹಳೇದು,ಯಾವ್ದು ಹಳ್ಳದ ನೀರು, ಯಾವ್ದು  ಭಾವಿ ನೀರು,ಯಾವ್ದು ಕೆರೆ ನೀರು, ಎಲ್ಲಾ ಕಕುಲಾತಿ! ಯಡೆ ಇಡಬೇಕೂ ಅಂತಾರೆ, ಅವ್ನು ಎಂದು ಉಪವಾಸ ಇದ್ದ? ಯಡೆ ಅಂದ್ರೆ ಜಾಗ! ನಿನ್ನ ಹೃದಯದಲ್ಲಿ ಅವನಿಗೆ ಜಾಗ ಕೊಡು ಅಂತಾ ಅಲ್ವೇ ಅರ್ಥ?

ನಮ್ಮರಿವೇ ನಮಗೆ ಗುರು

ಕೃಷ್ಣಶಾಸ್ತ್ರಿಗಳು ಸ್ವಾಮೀಜಿಯವರನ್ನು ಕೇಳುತ್ತಾರೆ  ಸ್ವಾಮಿ, ಉಪದೇಶಕೊಟ್ರು,ಉಪದೇಶ ತಗೊಂಡೆ, ಅಂತಾರಲ್ಲಾ, ಹಾಗಂದ್ರೆ ಏನು?
ಸ್ವಾಮೀಜಿ ಹೇಳ್ತಾರೆ-  ದೇಶ ಅಂದ್ರೆ ಜಾಗ, ಉಪ ಅಂದ್ರೆ ಅತ್ರ  ಅಂತ. ಅಂದ್ರೆ ಅವನಿದ್ದಾನಲ್ಲಾ ಅವನ ಅತ್ರ ಇರೋದು ಅಂತಾ ಜೋರಾಗಿ ಸ್ವಾಮೀಜಿ ನಗುತ್ತಾ ಮಾತು ಮುಂದುವರೆಸುತ್ತಾರೆ  ನೋಡಪ್ಪಾ, ಅವನಿಂದಲೇ ಇದೆಲ್ಲಾ ಆದದ್ದು, ಅವನೇ ಇದನ್ನೆಲ್ಲಾ ಆಡಿಸ್ತಿರೋವಾಗ ಅವನ ಪಕ್ಕದಲ್ಲಿ ಅಂದ್ರೆ ಏನು? ಅವನ ಪಕ್ಕಕ್ಕೆ ಹೋಗಿ ಇರೋನು ಆ ಇನ್ನೊಬ್ಬ ಯಾರು? ಅದೆಲ್ಲಾ ಸಟೆ ಕಣೋ [ಅದೆಲ್ಲಾ ಸುಳ್ಳು] ನೀನು ಬ್ಯಾರೇ, ನಾನು ಬ್ಯಾರೇ,ಅವನು ಬ್ಯಾರೇ ಅನ್ನೋ ಹಂಕಾರ. ಅದು ಕೊಡೋದೂ ಅಲ್ಲ. ಉಪದೇಶ ತಗಂಬೋದೂ ಅಲ್ಲ. ಅದೆಲ್ಲಾ ಏನೇನೋ ಕೋತಿ ಚೇಷ್ಟೆ ತೋರಿಸ್ತಾರೆ. ನಾನು ಗುರು ಪುತ್ರ ಅಂತ ನಾಟ್ಕಾ ಆಡ್ತಾರೆ. ತನ್ನ ಅರಿವಿಗಿಂತ ಗುರು ಯಾರು? ಗುರುವಿನ ಉಪದೇಶ ಯಾವುದು? ನೆರೆಹೊರೆ ನೋಡಿ ಗುರ್ ಗುರ್ ಅಂಬೋದು ಬಿಟ್ರೆ ಅವನೇ ಗುರು.
ಅಬ್ಭಾ ಭಗವಂತನ ಸ್ವರೂಪವನ್ನು ಅದೆಷ್ಟು ಸರಳವಾಗಿ ಹೇಳಿದ್ರು! ಎಲ್ಲೆಲ್ಲೂ ಇರುವ ಭಗವಂತನ ಹತ್ತಿರ ಇರೋದು ಅಂದ್ರೆ ಭಗವಂತನನ್ನು ತನ್ನಲ್ಲಿ ಕಾಣೋದು ಎನ್ನೋ ವಿಚಾರವನ್ನು ಅತ್ಯಂತ ಸರಳವಾಗಿ ಸ್ವಾಮೀಜಿ ತನ್ನ ಭಕ್ತರಿಗೆಲ್ಲಾ ಅವಕಾಶ ಒದಗಿದಾಗಲೆಲ್ಲಾ ಹೇಳ್ತಾಇದ್ರು. ಶಂಕರರ ತತ್ ತ್ವಂ ಅಸಿ ಅಹಂ ಬ್ರಂಹಾಸ್ಮಿ - ಈ ವಿಚಾರಗಳನ್ನು ಅತ್ಯಂತ ಸgಳವಾಗಿ ತಮ್ಮದೇ ಆದ ಗ್ರಾಮೀಣ ಶೈಲಿಯಲ್ಲಿ ಜನರಿಗೆ ಹೇಳುತ್ತಿದ್ದ ಸ್ವಾಮೀಜಿಯವರದು ಅದ್ಭುತವಾದ ಶೈಲಿ.

ಕೆಟ್ಟದರಲ್ಲಿ ಒಳ್ಳೆಯದನ್ನು ಹುಡುಕು

ಆಶ್ರಮಕ್ಕೆ ಶಿಶ್ಯರೊಬ್ಬರು ತನ್ನ ಮಗುವನ್ನು ಕರೆದುಕೊಂಡುಬಂದಿದ್ದರು. ಆಶ್ರಮದ ಹೊರಗೆ ಸ್ವಾಮೀಜಿಯವರ ಜೊತೆ ಮಾತನಾಡುತ್ತಾ ನಿಂತಿದ್ದಾಗ ಹತ್ತಿರದಲ್ಲಿದ್ದ ಗುಲಾಬಿ ಗಿಡವನ್ನು ನೋಡಿ ಹೂವಿನಿಂದ ಆಕರ್ಶಿತವಾದ ಮಗು ಗಿಡದ  ಹತ್ತಿರ ಹೋಗುತ್ತದೆ. ಆಗ ತಾಯಿಯು  ಅಯ್ಯೋ ಅಯ್ಯೋ ಮುಳ್ಳು! ಮುಳ್ಳು! ಅಲ್ಲಿ ಹೋಗಬೇಡ. ಎಂದು ಮಗುವನ್ನು ಬಾಚಿ ಎತ್ತಿಕೊಳ್ಳುತ್ತಾಳೆ.ಆಗ ಸ್ವಾಮೀಜಿ ಹೇಳುತ್ತಾರೆ  ಹೂವಿನ ಗಿಡದಾಗೆ ಮುಳ್ಳು ಐತೆ ಅಂತಾ ಏಳಿಕೊಡ್ ಬ್ಯಾಡ. ಮುಳ್ಳಿನ ಗಿಡದಾಗೆ  ಹೂ ಐತೆ  ಅಂತಾ ಹೇಳಿಕೊಡು,ಎಂದು ನಗುತ್ತಾರೆ. ಒಳ್ಳೆಯದರಲ್ಲಿ ಕೆಟ್ಟದನ್ನು ಹುಡುಕುವುದಲ್ಲ, ಕೆಟ್ಟದರಲ್ಲಿ ಒಳ್ಳೆಯದನ್ನು ಹುಡುಕಬೇಕೆಂಬುವ ನೀತಿಯನ್ನು ಸ್ವಾಮೀಜಿಯು ಈ ಪಟ್ಟಘಟನೆಯಲ್ಲೂ ಹೇಳಿದ್ದರು.

ಆದೇವ್ರಿಗೇ  ಮೈಲಿಗೆ ಆಯ್ತು ಅಂದ್ಮ್ಯಾಲೆ  ಈ ಉಡುಗನ ಪವರ್ರೇ ಹೆಚ್ಚು!!

ಆಶ್ರಮದ ಸಮೀಪದ ಊರಲ್ಲೊಂದು ಶಿವಾಲಯ. ಹರಿಜನ ಹುಡುಗನೊಬ್ಬ ಶಿವಾಲಯದೊಳಗೆ ಹೋಗಿ ಬಂದನೆಂಬ ವದಂತಿಯಿಂದ ಊರಿನ ಜನರು ಅವನನ್ನು ಕತ್ತೆಮೇಲೆ ಕೂರಿಸಿ ಊರಿನಲ್ಲೆಲ್ಲಾ ಮೆರವಣಿಗೆ ಮಾಡಿ ದಂಡಹಾಕಿದರೆಂದೂ ,ದೇವರಿಗೆ ಮೈಲಿಗೆ ಆಗಿದೆ ಎಂದು ಶುದ್ಧ ಪುಣ್ಯಾಹ ಮಾಡಿ, ಲಕ್ಷ ಶಿವಜಪ,ರುದ್ರಾಭಿಷೇಕ ಎಲ್ಲಾ ಮಾಡಿ,ಅನ್ನ ಸಂತರ್ಪಣೆ ಮಾಡಿದರೆಂಬ ಸುದ್ಧಿಯನ್ನು ಶಿಶ್ಯನೊಬ್ಬ ಸ್ವಾಮೀಜಿಗೆ ತಿಳಿಸಿದ. ಆಗ ಸ್ವಾಮೀಜಿ ಹೇಳ್ತಾರೆ.. . . . .

ಓಹೋ ಅಂಗಾಯ್ತೇನು? ಅವನು ಹರಿಜನ ಅಂದಮ್ಯಾಲೆ ಹರನ ಗುಡಿಗೆ ಓಗ ಬಹುದಾ? ಹರಿಜನ ಈಸ್ವರನ ಗುಡಿಗೆ ಓದ ಮ್ಯಾಲೆ ಸಿವನಿಗೆ ಸೂತ್ಕ ಆಗೈತೆ ಬಿಡು. ಅಂತೂ ಆ ಉಡುಗನ್ನ ಕತ್ತೆ ಮ್ಯಾಲ್ ಕೂರ್ಸಿ ಮೆರವಣಿಗೆ ಮಾಡಿ ದೇವರನ್ನೆಲ್ಲಾ ತೊಳೆದು , ರುದ್ರಾಭಿಶೇಕ,ಅದೂ ಇದೂ ಮಾಡಿದ ಮ್ಯಾಲೆ ಸುದ್ದಾಯ್ತು ಬಿಡು -ಎಂದು ಜೋರಾಗಿ ನಕ್ಕು ಮಾತು ಮುಂದುವರೆಸುತ್ತಾರೆ  ನೋಡಪ್ಪಾ, ಆ ಹರಿಜನ ಉಡುಗ ಗುಡಿಯೊಳಗೋಗಿದ್ರಿಂದ ದೇವ್ರಿಗೆ ಮೈಲಿಗೆ ಆಯ್ತು ಅಂದ ಮ್ಯಾಕೆ ಆ ಇಂದುಳಿದೋನ್ ಪೌರು ಎಂತಾದ್ದಿರಬೇಕು! ದೇವರ ಪವರ್ ನಿಂದ ಈ ಉಡುಗ ಸುದ್ದ ಆಗಿ ಚೊಕ್ಕವಾಗಬೇಕಿತ್ತಪ್ಪಾ! ಆದ್ರೆ ಈ ಉಡುಗನ   ಪವರ್‌ನಿಂದ ಆದೇವ್ರಿಗೇ ಮೈಲಿಗೆ  ಆಯ್ತು ಅಂದ್ಮ್ಯಾಲೆ  ಈ ಉಡುಗನ ಪವರ್ರೇ ಜಾಸ್ತಿ ಆಯ್ತಪ್ಪಾ! .. . . . .ಹೀಗೆ ಹೇಳುತ್ತಾ ಜೋರಾಗಿ ನಗ್ತಾರೆ.

ಹುಟ್ಟಿದಾಗಿನಿಂದ ಎಲ್ಲರೂ ಉತ್ತಮರು, ಯಾರೂ ಅಧಮರಲ್ಲ ಎಂಬ ಋಗ್ವೇದದ ಮಂತ್ರದ ಕರೆಯನ್ನು ಜೀವನದಲ್ಲಿ ಸ್ವಾಮೀಜಿಯವರು ಅಳವಡಿಸಿಕೊಂಡಿದ್ದ ಪರಿಯನ್ನು ಮೇಲಿನ ಘಟನೆಯಿಂದ ಅರ್ಥಮಾಡಿಕೊಳ್ಳಬಹುದು. ಈ  ವೇದಮಂತ್ರವನ್ನು ಅರ್ಥಮಾಡಿಕೊಂಡರೆ ಸ್ವಾಮೀಜಿಯವರು ವೇದದ ಅರಿವನ್ನು ಹೇಗೆ ಮೈಗೂಡಿಸಿಕೊಂಡಿದ್ದರು! ಎಂಬುದು ನಮಗೆ ಅರ್ಥವಾಗುತ್ತೆ.

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋಮಧ್ಯಮಾಸೋ ಮಹಸಾ ವಿ ವಾವೃಧು: |
ಸುಜಾತಾಸೋ ಜನುಷಾ ಪೃಷ್ನಿಮಾತರೋ ದಿವೋ ಮರ್ಯಾ ಆ ನೋ ಅಚ್ಚಾ ಜಿಗಾತನ ||
[ಋಕ್ ೫.೫೯.೬]

ಮನುಷ್ಯರಲ್ಲಿ ಯಾರೂ ದೊಡ್ದವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ, ಮಧ್ಯಮರೂ ಅಲ್ಲ.ಹುಟ್ಟಿದಾಗಿನಿಂದ ಎಲ್ಲರೂ ಉತ್ತಮರು. ಭೂಮಿಯನ್ನು ಸೀಳಿ ಮೇಲೆ ಬಂದ ಇವರು  ಭೂತಾಯಿಯ ಮಕ್ಕಳು.ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು.

ವೇದಮಂತ್ರವನ್ನು ಕಲಿತು ಪಠಿಸಿದರೆ ಸಾಕೇ? ಸ್ವಾಮೀಜಿಯವರು ವೇದಾಧ್ಯಯನ ಮಾಡಿದ್ದರೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ವೇದದ ಆಶಯದಂತೆ ಅವರ ಜೀವನ ಸಾಗಿತ್ತು. ಅರಸೀಕೆರೆ ತಾಲ್ಲೂಕು ಅರಕೆರೆಗೆ ಸಮೀಪದಲ್ಲಿ ಮುಕುಂದೂರು ಸ್ವಾಮೀಜಿಯವರ ಆಶ್ರಮವಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಸುತ್ತಮುತ್ತ, ಅರಸೀಕೆರೆ ತಾಲ್ಲೂಕು ಬಾಣಾವರ ಸುತ್ತಮುತ್ತ, ತಿಪಟೂರು ಸುತ್ತಮುತ್ತ ಸ್ವಾಮೀಜಿಯವರನ್ನು ನೋಡಿರುವ ಕೆಲವು ಹಿರಿಯರು ಈಗಲೂ ಇದ್ದಾರೆ. ಹೊಳೇನರಸೀಪುರ ತಾಲ್ಲೂಕು ಮುಕುಂದೂರು ಬೆಟ್ಟದಲ್ಲಿ ಕೆಲವು ಕಾಲ ತಪಸ್ಸನ್ನು ಮಾಡಿದ್ದರಿಂದ ಅವರಿಗೆ ಮುಕುಂದೂರು ಸ್ವಾಮಿಗಳೆಂದು ಹೆಸರು ಬಂದಿದೆ.

ಇಂತಹ ಅವಧೂತರು ಬಹಳ ಅಪರೂಪ. ಜಾತಿ-ಮತ ಭೇದವಿಲ್ಲದೆ ಎಲ್ಲರಲ್ಲೂ ಭಗವಂತನನ್ನು ಕಾಣುತ್ತಿದ್ದ  ಮುಕುಂದೂರು ಸ್ವಾಮೀಜಿ ಮಡಿವಂತಿಕೆಯನ್ನು ಮೆಟ್ಟಿನಿಂತಿದ್ದ ಮಹಾನುಭಾವ.

- ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ

ಮೌಢ್ಯದಿಂದ ಜ್ಞಾನದ ಕಡೆ ಸಾಗೋಣ

ಅಸತೋಮ ಸದ್ಗಮಯ| ತಮಸೋಮ ಜ್ಯೋತಿರ್ಗಮಯ|
ಮೃತ್ಯೋರ್ಮಾ ಅಮೃತಂಗಮಯ|  ಓಂ ಶಾಂತಿಃ ಶಾಂತಿಃ ಶಾಂತಿಃ ||



Saturday, October 18, 2014

ವ್ರತ ಎಂತರೇನು? - ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಪ್ರವಚನ

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಅನಾರೋಗ್ಯ ಸ್ಥಿತಿಯಲ್ಲೂ ನಮ್ಮಂತವರು ಹೋದರೆ ಮಾತನಾಡಿಸದೇ ಸುಮ್ಮನಿರಲು ಅವರಿಂದ ಸಾಧ್ಯವಿಲ್ಲ. ಮೊನ್ನೆ ಶರ್ಮರನ್ನು  ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಹಾಸನದ ವೇದಭಾರತಿಯ ಚಟುವಟಿಕೆಗಳು, ವೇದದ ಬಗ್ಗೆ  ನನ್ನ ಪತ್ರಿಕಾ ಅಂಕಣಗಳು, ವೇದಭಾರತಿಯು ಸಹಕಾರದೊಡನೆ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿ ಮಲಗುಂದದಲ್ಲಿ  ಹಮ್ಮಿಕೊಂಡಿರುವ ಸಾವಿರ ದಂಪತಿಗಳ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮದ ಬಗ್ಗೆ ವಿವರ ತಿಳಿದುಕೊಂಡರು. ಹಲವಾರು ತಿಂಗಳುಗಳಿಂದ ಶರ್ಮರ ಮಾತನ್ನು ನಮ್ಮ ವೇದಸುಧೆಯ ಅಭಿಮಾನಿಗಳಿಗೆ ಕೇಳಿಸಲಾಗಿಲ್ಲವಲ್ಲಾ! ಎಂಬ ನೋವು ನನ್ನನ್ನು ಕಾಡಿತ್ತು. ಒಂದೈದು ನಿಮಿಷದ ಆಡಿಯೋ ಆದರೂ ರೆಕಾರ್ಡ್ ಮಾಡಿಕೊಳ್ಳಲು ನಿರ್ಧರಿಸಿದೆ. ಬರೋಬ್ಬರಿ ಇಪ್ಪತ್ತು ನಿಮಿಷಗಳ ಕಾಲ ಕ್ಷೀಣ ಧ್ವನಿಯಲ್ಲಿ  ವೇದದ ಗಟ್ಟಿ ವಿಚಾರ ತಿಳಿಸಿದರು. ರೆಕಾರ್ಡ್ ಮಾಡಿಕೊಂಡೆ. ಅದರ ಮಾರನೇ ದಿನವೇ ಆರೋಗ್ಯ ಬಿಗಡಾಯಿಸಿ ಮತ್ತೆ ದಿಢೀರನೆ ಒಂದು ದಿನ ವೈದ್ಯರ ಮೇಲ್ವಿಚಾರಣೆಯಲ್ಲಿರಬೇಕಾದ ಸ್ಥಿತಿ! ಭಗವಂತನು ಶರ್ಮರ ಆರೋಗ್ಯ ಸುಧಾರಿಸಬೇಕು.ಅವರಿಂದ ವೇದದ ಕೆಲಸ ಸಾಕಷ್ಟು ಆಗಬೇಕಿದೆ..ಅವರ ಈ ಆಡಿಯೋ ಕೇಳಿ.



- ನಿತ್ಯನಿರಂತರ ಆಚರಣೆ
- ವ್ರತಗಳು ಐದು
- ಅಹಿಂಸೆ : ಯಾರಿಗೂ ನೋವಾಗದಂತಹ ನಮ್ಮ ವರ್ತನೆ
- ಸತ್ಯ : ಇದ್ದದ್ದನ್ನು ಇದ್ದಹಾಗೆ ಅರ್ಥಮಾಡಿಕೊಂಡು ಅದರಂತೆ ನಡೆಯುವುದು
- ಅಸ್ತೇಯ : ಕದಿಯದಿರುವುದು
- ಬ್ರಹ್ಮಚರ್ಯ :  ಜ್ಞಾನ ಸಂಪಾದನೆ
- ಅಪರಿಗ್ರಹ : ಅನವಶ್ಯಕವಾಗಿ ಇನ್ನೊಬ್ಬರಿಂದ  ದಾನ ಸ್ವೀಕರಿಸದಿರುವುದು

Saturday, October 4, 2014

ಕೇರಳಾಪುರದಲ್ಲಿ ಹಾಸನ ವೇದಭಾರತಿಯ ಸದಸ್ಯರಿಂದ ಅಗ್ನಿಹೋತ್ರ ಮತ್ತು "ಎಲ್ಲರಿಗಾಗಿವೇದ" ಪರಿಚಯ ಕಾರ್ಯಕ್ರಮ

ಹಾಸನಜಿಲ್ಲೆಯ ಗಡಿಭಾಗದಲ್ಲಿರುವ ಕೇರಳಾಪುರದಲ್ಲಿನ ವೇದಾಭಿಮಾನಿಗಳ ಆಹ್ವಾನದ ಮೇಲೆ ಅಗ್ನಿಹೋತ್ರ ಮಾಡಲು ಹೋಗುವಾಗ ಮಾರ್ಗ ಮಧ್ಯೆ ಜಪ್ಯೇಶ್ವರ ದೇವಾಲಯಕ್ಕೆ [ಜಪದ ಕಟ್ಟೆ] ಗೆ ಹಾಸನ ವೇದಭಾರತಿಯ ಸದಸ್ಯರು ಭೇಟಿನೀಡಿದಾಗ




ಕೇರಳಾಪುರ ದೇವಾಲಯದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದ ದೃಶ್ಯಗಳು






ದೇವಾಲಯ ಭಕ್ತರಿಂದ ತುಂಬಿದ್ದು ಕಾರ್ಯಕ್ರಮವು ಅತ್ಯಂತ ಯಶಸ್ಸು ಪಡೆಯಿತು. ಚಿತ್ರೀಕರಣ ಮಾಡಲು ಬೆಳಕಿನ ಅಡ್ದಿಯಿಂದ ಚಿತ್ರಗಳು ಸುಂದರವಾಗಿ ಮೂಡಿಬಂದಿಲ್ಲ.

Friday, October 3, 2014

ಜೀವನವೇದ-12

ವೇದಸುಧೆಯ  ಆತ್ಮೀಯ ಅಭಿಮಾನಿಗಳೇ ,

                                                               ನಮಸ್ಕಾರಗಳು.

             ಇದು   ಜೀವನವೇದ ಸರಣಿಯ ಹನ್ನೆರಡನೆಯ ಕಂತು.   ಲೇಖನವನ್ನು ಓದುವ ಮುಂಚೆ ನನ್ನದೊಂದು ಮನವಿ.   ಬ್ಲಾಗ್ ನ ಮುಖ ಪುಟದಲ್ಲಿ ಸಂಪಾದಕರನ್ನು ಸಂಪರ್ಕಿಸಲು ಒಂದು ಕಾಂಟಾಕ್ಟ್ ಕಾಲಮ್ ಇದೆ.ಸಾಮಾನ್ಯವಾಗಿ ಓದುಗರು ಲೇಖನಗಳ ಬಗ್ಗೆ  ತಮ್ಮ  ಅಭಿಪ್ರಾಯವನ್ನೂ ಕೂಡ ಅಲ್ಲೇ ಬರೆಯುತ್ತಾರೆ. ಹಾಗೆ ಬರೆದಾಗ ಅದು ಸಂಪಾದಕರಿಗೆ ನೇರವಾಗಿ ಮೇಲ್ ತಲುಪುತ್ತದೆ. ಅದರಲ್ಲಿ  " ಈ ಲೇಖನ ತುಂಬಾ ಅರ್ಥಪೂರ್ಣವಾಗಿದೆ" ಎಂದು ಬರೆದರೆ  ಸಂಪಾದಕರಿಗೆ ಈ ಅಭಿಪ್ರಾಯವು ಯಾವ ಲೇಖನದ ಬಗ್ಗೆ ಎಂದು ತಿಳಿಯುವುದಿಲ್ಲ. ಆಯಾ ಲೇಖನಗಳ ಕೆಳಗೆ  ಇರುವ ಕಾಮೆಂಟ್ ಕಾಲಮ್ ನಲ್ಲಿ ಬರೆದಾಗ ಅದು ಬ್ಲಾಗ್ ನಲ್ಲಿ ಪ್ರಕಟವಾಗಿ ಎಲ್ಲರೂ ಅದನ್ನು ಓದಬಹುದಾಗಿರುತ್ತದೆ.ಅಲ್ಲದೆ ಬೇರೆ  ಓದುಗರೂ ಕೂ  ತಮ್ಮ ಅಭಿಪ್ರಾಯವನ್ನು ತಿಳಿಸಲು ಅದು ನೆರವಾಗುತ್ತದೆ. 

                   ಬ್ಲಾಗ್  ವಿಚಾರದಲ್ಲಿ      ಏನಾದರೂ ನೀವು  ಸಲಹೆ ಕೊಡುವುದಿದ್ದರೆ  ಮಾತ್ರ  ಪಕ್ಕದಲ್ಲಿ ಪ್ರತ್ಯೇಕವಾಗಿ ಇರುವ ಕಾಂಟ್ಯಾಕ್ಟ್ ಫಾರಮ್ ನಲ್ಲಿ ಬರೆಯುವುದು ಸೂಕ್ತ. ಇನ್ನು ಇಂದಿನ ಸರಣಿಯನ್ನು ಓದಲು ಆರಂಭಿಸಬಹುದು.
ನಮಸ್ತೆ

-ಹರಿಹರಪುರಶ್ರೀಧರ್
ಸಂಪಾದಕ
-----------------------------------------------------------------------------------------------------
ಸುಖೀ ರಾಜ್ಯಕ್ಕಾಗಿ ರಾಜ ಮತ್ತು ಪ್ರಜೆಯ ಕರ್ತವ್ಯವೇನು?

ರಾಜ್ಯಭಾರ ಮಾಡುವವರು ಹೇಗಿರಬೇಕೆಂಬುದನ್ನು ವೇದವು ಹಲವು ಮಂತ್ರಗಳಲ್ಲಿ ತಿಳಿಸಿದೆ. ರಾಜನ ಜೊತೆಜೊತೆಗೇ ಪ್ರಜೆಯ ಕರ್ತವ್ಯವೂ ಇದೆ, ಎಂಬುದನ್ನೂ ವೇದವು ಮನದಟ್ಟು ಮಾಡುತ್ತದೆ. ಈ ಬಗ್ಗೆ ಇಂದು ವಿಚಾರ ಮಾಡೋಣ.

ತ್ರೀಣೀ ರಾಜಾನಾ ವಿದಥೇ ಪುರೂಣಿ ಪರಿ ವಿಶ್ವಾನಿ ಭೂಷಥಃ ಸದಾಂಸಿ |
ಅಪಶ್ಯಮತ್ರ ಮನಸಾ ಜಗನ್ವಾನ್ ವ್ರತೇ ಗಂಧರ್ವಾ ಅಪಿ ವಾಯುಕೇಶಾನ್ ||
[ಋಕ್. ೩.೩೮.೬]

ಅನ್ವಯಾರ್ಥ :

ರಾಜಾನಾ = ರಾಜ ಮತ್ತು ಪ್ರಜೆಗಳೇ
ವೃತೇ = ಸತ್ಯವಾದ
ಗಂಧರ್ವಾನ್ = ಸುಶಿಕ್ಷಿತ ವಾಣಿಯನ್ನು
ವಾಯುಕೇಶಾನ್ = ವಾಯುವಿನಂತೆ ವೇಗ ಗತಿ ಹೊಂದಿರುವ ಉತ್ತಮ ಪುರುಷರನ್ನು
ಮನಸಾ = ವಿಜ್ಞಾನದೊಂದಿಗೆ
ಜಗನ್ವಾನ್ = ಪಡೆದುಕೊಂಡಿರುವ
ಅಪಶ್ಯಮ್ = ನಿನ್ನನ್ನು ನಾನು ನೋಡುವೆನು
ತ್ರೀಣಿ ಸದಾಂಸಿ = ಮೂರು ರೀತಿಯ ಸಭೆಗಳನ್ನು ನಿಶ್ಚಿತಗೊಳಿಸಿ
ವಿಧಥೇ = ಜ್ಞಾನಕಾರಕ ವ್ಯವಹಾರಗಳಲ್ಲಿ
ಪುರೂಣಿ = ಬಹಳಷ್ಟು
ವಿಶ್ವಾನಿ = ಸಮಗ್ರ ವ್ಯವಹಾರಗಳನ್ನು
ಪರಿಭೂಷಥ: = ಪರಿಪೂರ್ಣಗೊಳ್ಳುವಂತೆ ಮಾಡಿರಿ

ಭಾವಾರ್ಥ:
ಪ್ರಜೆಗಳೇ, ನೀವು ಉತ್ತಮ ಗುಣಕರ್ಮ ಸ್ವಭಾವದವರಾಗಿ ಯಥಾರ್ಥವನ್ನು ನುಡಿಯುವ ಪ್ರತಿನಿಧಿಗಳಿರುವಂತಹ  ರಾಜಸಭೆ, ವಿದ್ಯಾಸಭೆ ಮತ್ತು ಧರ್ಮಸಭೆ  ಎಂಬ ಮೂರು ರೀತಿಯ ಸಂಸತ್ತನ್ನು ರಚಿಸಿಕೊಂಡು ರಾಜ್ಯಕ್ಕೆ ಸಂಬಂಧಿಸಿದ ಸಮಗ್ರ ಕರ್ಮಗಳನ್ನು ಯೋಗ್ಯ ರೀತಿಯಲ್ಲಿ ಮಾಡುವವರಾಗಿರಿ. ಅದರಿಂದ ನಿಮಗೂ ಮತ್ತು ರಾಜ್ಯಕ್ಕೂ ಅತಿಶಯ ಸುಖವು ಲಭಿಸುತ್ತದೆ.
ಈ ವೇದ ಮಂತ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವೇನಿಲ್ಲ. ಅತ್ಯಂತ ಸರಳ ವಾಗಿದೆ.ವೇದವು ಎಲ್ಲಾ ಕಾಲಕ್ಕೂ ಪ್ರಸ್ತುತವೆಂಬುದನ್ನು ನಾವು ಈ ಮಂತ್ರದಿಂದ ಕಾಣಬಹುದಾಗಿದೆ. ಈ ಮಂತ್ರವು ಏನು ಕರೆ ಕೊಡುತ್ತದೆ?...
ಪ್ರಜೆಗಳೇ, ನೀವು ಉತ್ತಮ ಗುಣಕರ್ಮ ಸ್ವಭಾವದವರಾಗಿ   ಪ್ರಜಾಪ್ರಭುಗಳಾದ ನಮ್ಮ ಯೋಗ್ಯತೆ ಬಗ್ಗೆ ನಾವೀಗ ಯೋಚಿಸಬೇಕು.ಪ್ರಜೆಗಳು ಉತ್ತಮ ಗುಣ ಕರ್ಮ ಸ್ವಭಾವದವರಾದರೆ ಅವರಿಗೆ ತಕ್ಕನಾದ ಸರ್ಕಾರವನ್ನು ಚುನಾಯಿಸುತ್ತಾರೆ. ಆದರೆ ಈಗ ನಡೆದಿರುವುದೆಲ್ಲಾ ಪ್ರಜಾಪ್ರಭುತ್ವದ ನಗೆಪಾಟಲಲ್ಲವೇ? ನಿಜವಾಗಿ ಭಾರತದ ಒಬ್ಬ ಪ್ರಜೆ ತನ್ನ ಕರ್ತವ್ಯದ, ತನ್ನ ಸ್ವಭಾವ, ತನ್ನ ಗುಣದ  ಬಗ್ಗೆ ಯೋಚಿಸಿದ್ದಾನೆಯೇ? ಸಭ್ಯ ನಾಗರೀಕನೆನಿಸಿಕೊಂಡವರು ಬಹಳಷ್ಟು ಜನ ಚುನಾವಣೆ ಸಂದರ್ಭದಲ್ಲಿ  ಮತಕೇಂದ್ರಗಳಿಗೆ ಹೋಗದೆ ಟಿ.ವಿ. ಮುಂದೆ ಕುಳಿತು “ ದೇಶದ ರಾಜಕಾರಣವನ್ನು” ಮಾತನಾಡುವುದನ್ನು ನಾವು ನೋಡಿಲ್ಲವೇ? ದೇಶಕ್ಕೆ ಇಂತಹ ಸರ್ಕಾರ ಬರಬೇಕೆಂದು ಅಪೇಕ್ಷಿಸುವುದಕ್ಕೆ ಇಂತವರಿಗೆ ಯಾವ ನೈತಿಕ ಹಕ್ಕಿದೆ?
   ಚುನಾವಣೆಯ ದಿನ ೭೦% ಮತ ಚಲಾಯಿಸಿದರೆ ಅದು ಅತ್ಯಂತ ಹೆಚ್ಚಿನ ಮತದಾನ ಎಂದು ಹೇಳಬಹುದು. ಉಳಿದ ೩೦% ಜನರಲ್ಲಿ ವಿದ್ಯಾವಂತರೇ ಹೆಚ್ಚೆಂಬುದು ಸರಿಯಾಗಿ ಸರ್ವೇ ಮಾಡಿದರೆ ಗೊತ್ತಾಗುತ್ತದೆ. ಸಾಮಾನ್ಯವಾಗಿ ಕೂಲಿ ಕಾರ್ಮಿಕರು, ಅವಿದ್ಯಾವಂತರು, ಶ್ರಮಿಕರು ಪ್ರತಿಶತ ಹೆಚ್ಚು ಮತ ಚಲಾಯಿಸುತ್ತಾರೆ. ದುರ್ದೈವವೆಂದರೆ ಅವರಿಗೆ ದೇಶಕ್ಕೆ ಒಳ್ಳೆಯದು ಮಾಡುವವರಾರು? ದೇಶದ ಸಂಪತ್ತನ್ನು  ಲೂಟಿಹೊಡೆಯುವವರಾರು? ಎಂಬ ಅರಿವಿರುವುದಿಲ್ಲ. ಇಂತವರಲ್ಲಿ  ಸಾಮಾನ್ಯವಾಗಿ ಯಾವುದಾದರೂ ಪ್ರಲೋಭನೆಗೆ ಒಳಗಾಗಿ ಮತ ಚಲಾಯಿಸುವವರೇ ಹೆಚ್ಚು. ಮತದಾರರನ್ನು ಜಾಗೃತಿ ಮಾಡುವವರಾರು?
ಪ್ರಜ್ಞಾವಂತ ಮತದಾರರು ವೇದದ ಆದೇಶದಂತೆ ಯಥಾರ್ಥವನ್ನು ನುಡಿಯುವ ಪ್ರತಿನಿಧಿಗಳಿರುವಂತಹ ಸರ್ಕಾರವನ್ನು ಆರಿಸಿದರೆ ಆ ಸರ್ಕಾರದಲ್ಲಿ  ರಾಜಸಭೆ, ವಿದ್ಯಾಸಭೆ ಮತ್ತು ಧರ್ಮ ಸಭೆ  ಎಂಬ ಮೂರುಮುಖ್ಯ ಅಂಗಗಳಲ್ಲಿ ವೇದದ ಆಶಯ ಏನಿದೆಯೋ ಅದರಂತೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವಾಗಲಾರದೇ?


ರಾಜನಾದವನು ಹೇಗಿರಬೇಕೆಂಬುದನ್ನು ಮುಂದಿನ ಮಂತ್ರದಲ್ಲಿ ತಿಳಿಸಲಾಗಿದೆ.

ತದಿನ್ನ್ವಸ್ಯ  ವೃಷಭಸ್ಯ  ಧೇನೋ-ರಾ ನಾಮಭಿರ್ಮಮಿರೇ ಸಮ್ಯಕಂ  ಗೋಃ |
ಅನ್ಯದನ್ಯದಸುರ್ಯಂ ವಸಾನಾ ನಿ ಮಾಯಿನೋ ಮಮಿರೇ ರೂಪಮಸ್ಮಿನ್ ||   
[ಋಕ್. ೩.೩೮.೭]

ಅನ್ವಯಾರ್ಥ :

ಅಸ್ಯ ವೃಷಭಸ್ಯ = ಈ ಬಲಿಷ್ಟ ಮನುಷ್ಯನ
ಧೇನೋಃ= ನುಡಿಯ
ನಾಮಭಿಃ = ಹೆಸರುಗಳಿಂದ
ನು ಆ ಮಿಮಿರೇ = ಬೇಗ ಬೇಗನೇ ಅಳೆಯುವವರಾಗಿರಿ
ತತ್ = ಅದನ್ನು
ಸಮ್ಯಕ್ = ಸಂಯೋಜನಗೊಳಿಸುವುದರ ಮೂಲಕ ಉತ್ಪನ್ನವಾದ
ಗೋಃ = ಮಾತಿನಿಂದ
ಅನ್ಯದನ್ಯತ್ = ಪ್ರತ್ಯೇಕಪ್ರತ್ಯೇಕವಾಗಿರುವ
ಅಸುರ್ಯಂ = ಮೇಘದ ಸ್ವತ್ತನ್ನು
ವಸಾನಾಃ = ಮರೆಮಾಡುತ್ತಾ
ಮಾಯಿನಃ = ಬುದ್ಧಿವಂತರಿರುವ
ಅಸ್ಮಿನ್ = ಈ ರಾಜ್ಯದಲ್ಲಿ
ರೂಪಂ = ಸೌಂದರ್ಯವನ್ನು
ನೀ  ಮಮೀರೇ = ಉತ್ಪಾದಿಸುತ್ತಾರೆ.
ಇತ್ = ಅವರೇ ಶಾಸನ ಮಾಡಲು ಅರ್ಹರು

ಭಾವಾರ್ಥ : 
ಯಾವ ರಾಜನು ತನ್ನ ರಾಜ್ಯವನ್ನು ಮೃದುವಚನದಿಂದ ಪಾಲನೆ ಮಾಡುತ್ತಾನೋ ಅವನು ಮೋಡದಿಂದ ಮಳೆಗರೆಯುವ ರೀತಿಯಲ್ಲಿ ಬಹು ವಿಧವಾದ ಸಂಪತ್ತನ್ನು ಪಡೆಯುತ್ತಾನೆ.
 ಒಂದು ಉತ್ತಮ ಆಡಳಿತವನ್ನು ನೀಡಬೇಕೆಂದರೆ ರಾಜನು ಮೃದುವಚನದಿಂದ ಆಡಳಿತ ನಡೆಸಬೇಕೆಂಬುದು ವೇದದ ಆಶಯ. ಸರ್ಕಾರವನ್ನು ನಡೆಸುವ ಪಕ್ಷಗಳು ಮತ್ತು ಅದರ ನಾಯಕರುಗಳು ವೇದದ ಈ ಆದೇಶವನ್ನು ಗಮನಿಸಬೇಕು. ವೇದವು ಎಲ್ಲಾ ಕಾಲಕ್ಕೂ ಎಷ್ಟು ಪ್ರಸ್ತುತವೆಂಬುದನ್ನೂ ನಾವು ಎಲ್ಲಾ ಮಂತ್ರಗಳಲ್ಲೂ ಕಾಣಬಹುದಾಗಿದೆ. ಒಂದು ಮಾತು ನೆನಪಾಗುತ್ತದೆ “ ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ” ವಜ್ರದಷ್ಟು ಕಠೋರವಾಗಿರಬೇಕು ಆದರೆ ಸಂದರ್ಭವರಿತು ಹೂವಿನಂತೆ ಮೃದುವೂ ಆಗಬೇಕು. ಇದು ಒಬ್ಬ ಆಡಳಿತಗಾರನ ಲಕ್ಷಣ. ಯಾರ ಹತ್ತಿರ ಕಠೋರವಾಗಿರಬೇಕು,  ಯಾರ ಹತ್ತಿರ ಮೃದುವಾಗಿರಬೇಕೆಂಬ ವಿವೇಕ ರಾಜನಿಗಿರಬೇಕು. ಆದರೆ ದುರ್ದೈವವೆಂದರೆ ಸಧ್ಯದ ನಮ್ಮ ವ್ಯವಸ್ಥೆಯಲ್ಲಿ ಅದು ತದ್ವಿರುದ್ಧವಾಗಿದ್ದು ಉತ್ತಮ ಆಡಳಿತವನ್ನು ನಿರೀಕ್ಷಿಸುವುದಾದರೂ ಹೇಗೆ? ಮುಂದಿನ ಮಂತ್ರದಲ್ಲಿ ಸರ್ಕಾರದ ಕಾರ್ಯಾಂಗ ವ್ಯವಸ್ಥೆ ಹೇಗಿರಬೇಕೆಂಬುದನ್ನು ವಿವರಿಸಲಾಗಿದೆ

ಶುನಂ ಹುವೇಮ ಮಘವಾನಮಿಂದ್ರ-ಮಸ್ಮಿನ್ ಭರೇ ನೃತಮಂ  ವಾಜಸಾತೌ|
ಶೃಣ್ವಂತಮುಗ್ರಮೂತಯೇ ಸಮತ್ಸು ಘ್ನಂತಂ ವೃತ್ರಾಣಿ ಸಂಜಿತಂ ಧನಾನಾಮ್ ||
[ಋಕ್. ೩.೩೮.೧೦]

ಅನ್ವಯಾರ್ಥ :
ಊತಯೇ = ರಕ್ಷಣೆಗಾಗಿ
ಸಮತ್ಸು = ಸಂಗ್ರಾಮದಲ್ಲಿ
ಘ್ನಂತಂ = ನಾಶ ಮಾಡುವ
ಉಗ್ರಂ = ಕಠೋರ ಸ್ವಭಾವದ
ಧನಾನಾಂ = ದ್ರವ್ಯಗಳ
ಸಂಜಿತಂ = ಉತ್ತಮ ರೀತಿಯಲ್ಲಿ ಶತೃಗಳನ್ನು ಜಯಿಸುವಂತಹ
ವೃತ್ರಾಣಿ =ಸುವರ್ಣಾದಿ ಧನಗಳನ್ನು
ಶೃಣ್ವಂತಂ = ಆಲೈಸುವವನನ್ನು
ಅಸ್ಮಿನ್ = ಈ ವ್ಯವಹಾರದಲ್ಲಿ
ವಾಜಸಾತೌ = ಧನ ಅನ್ನಾದಿಗಳ ವಿಭಾಗ ಮಾಡುವವನು
ಭರೇ = ಸಂಗ್ರಾಮದಲ್ಲಿ
ನೃತಮಂ = ಶ್ರೇಷ್ಠನಾದ
ಮಘವಾನಂ = ಐಶ್ವರ್ಯ ಸಂಪನ್ನನಾದ
ಇಂದ್ರಂ = ಶತೃಗಳನ್ನು ನಾಶಮಾಡುವಂತಹ ರಾಜನನ್ನು
ಹುವೇಮ = ಕರೆಯೋಣ[ಅವನ ಸಹಕಾರದಿಂದ]
ಶುನಂ = ಸುಖವನ್ನೂ ಜಯವನ್ನೂ ಪಡೆಯೋಣ..

ಭಾವಾರ್ಥ:
ಯಾವ ರಾಜನು ಪ್ರಮುಖ ವ್ಯಕ್ತಿಗಳನ್ನೂ, ರಾಜ ವಿದ್ಯೆಯಲ್ಲಿ ಚತುರರನ್ನೂ, ಶೂರರಾದ ಸೈನಿಕರನ್ನೂ, ನ್ಯಾಯಾಧೀಶರನ್ನೂ, ವಾದಮಾಡುವ ವಕೀಲರನ್ನೂ, ಸೇವೆ ಮಾಡುವ ಸೇವಕರನ್ನೂ ಗೌರವ ಪೂರ್ವಕವಾಗಿ ರಾಜ್ಯಾಂಗದಲ್ಲಿ ನೇಮಿಸಿಕೊಳ್ಳುತ್ತಾನೋ, ಅವನು ಯಾವಾಗಲೂ ವಿಜಯಶೀಲನೂ, ಕೀರ್ತಿವಂತನೂ,ಐಶ್ವರ್ಯಸಂಪನ್ನನೂ ಆಗುತ್ತಾನೆ. ಇಂದಿನ ಸರ್ಕಾರದ ಮುಖ್ಯಸ್ಥರಿಗೂ ಕೂಡ ಈ ಮಂತ್ರದಲ್ಲಿ ಅದ್ಭುತವಾದ ಮಾರ್ಗದರ್ಶನವಿದೆ. ತನ್ನ ಆಡಳಿತಕ್ಕೆ ಯಾವ ಯಾವ ಹುದ್ಧೆಗೆ  ಎಂತಹ ವ್ಯಕ್ತಿಗಳನ್ನು ನೇಮಿಸಿಕೊಳ್ಳಬೇಕೆಂಬುದಕ್ಕೆ ಸೂಕ್ತ ಸಲಹೆ ಇಲ್ಲಿದೆ. ಒಂದು ರಾಜ್ಯದ ಆಡಳಿತ ನಡೆಸುವವನು ವೇದದ ಮಾರ್ಗದರ್ಶನವನ್ನು ಅನುಸರಿಸಿದ್ದೇ ಆದರೆ ಆ ರಾಜ್ಯದಲ್ಲಿ ಉತ್ತಮ ಆಡಳಿತವಿರುವುದರಲ್ಲಿ ಸಂಶಯವಿಲ್ಲ. ಉತ್ತಮ ಆಡಳಿತವಿದ್ದಾಗ ಸಹಜವಾಗಿ ಪ್ರಜೆಗಳು ನೆಮ್ಮದಿ ಯಿಂದಿದ್ದು ಸರ್ಕಾರವೂ ಕೂಡ ಸಂಪತ್ಭರಿತವಾಗಿರಲು ಸಾಧ್ಯ. ಯಾವಾಗ ಪ್ರಜೆಗಳ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಸೌಕರ್ಯಗಳನ್ನು ಸರ್ಕಾರವು ನೀಡುತ್ತದೆ, ಆಗ ಸಹಜವಾಗಿ ಪ್ರಜೆಗಳೂ ತೆರಿಗೆಯನ್ನು ಸಂತೋಷದಿಂದಲೇ ಪಾವತಿಸುತ್ತಾರೆ.ಆಗ ರಾಜ್ಯ/ಕೇಂದ್ರ ಸರ್ಕಾರವೂ ಸಂಪತ್ಭರಿತವಾಗಿದ್ದು ಅದರ ಕೀರ್ತಿಯು ಹೆಚ್ಚುತ್ತದೆ.
ಹೀಗೆ ರಾಜನಾದವನ ಮತ್ತು ಪ್ರಜೆಗಳ ಕರ್ತವ್ಯವನ್ನು ತಿಳಿಸುವ ಹಲವಾರು ಮಂತ್ರಗಳು ವೇದದಲ್ಲಿ ಲಭ್ಯ. ಇದನ್ನು ಅಧ್ಯಯನ ಮಾಡಿ ಸರ್ಕಾರದ ವ್ಯವಸ್ಥೆಗೆ ಲಾಭವನ್ನು ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಂತೂ ಇದೆ. ಆದರೆ ನಮ್ಮ ಸೆಕ್ಯೂಲರ್ ಆಡಳಿತದಲ್ಲಿ ವೇದದ ಕರೆಯನ್ನು ಆಲಿಸುವವರಾರು?