Pages

Friday, November 18, 2011

ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ

ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ:
 ನಮ್ಮ ನೆಮ್ಮದಿಯ ಬದುಕಿಗೆ ಪೂರಕವಾಗುವ ಸದ್ವಿಚಾರಗಳನ್ನು ಬಲ್ಲವರ ಮಾತುಗಳಲ್ಲಿ ಆಡಿಯೋ ಮೂಲಕ ಅಥವಾ ಲೇಖನ ಮೂಲಕ ವೇದಸುಧೆಯಲ್ಲಿ ಪ್ರಕಟಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.ಸಾಮಾನ್ಯವಾಗಿ ಬರುವ ಸಂದೇಹಗಳಿಗೆ ಲೇಖಕರಿಂದ ಸಮಾಧಾನಕರ ಉತ್ತರ ಕೊಡಿಸುವ ಪ್ರಯತ್ನವನ್ನೂ ಸಹ ಮಾಡಲಾಗುತ್ತದೆ. ವೇದಸುಧೆಯು ಸ್ನೇಹಮಯ ವಾತವರಣದಲ್ಲಿ ಸಾಗಬೇಕೆಂಬುದೇ  ನಮ್ಮ  ಉದ್ಧೇಶ. ಆದರೆ ಒಮ್ಮೊಮ್ಮೆ ತಮಗೆ ಒಪ್ಪದ ವಿಚಾರಗಳನ್ನು ತೀಕ್ಷ್ಣವಾಗಿ ತಮ್ಮ ಹೆಸರನ್ನೂ ಪ್ರಕಟಿಸದೆ ಪ್ರತಿಕ್ರಿಯಿಸುವ ಉಧಾಹರಣೆಗಳು ಕಾಣಬರುತ್ತಿವೆ. ದಯಮಾಡಿ ಪ್ರತಿಕ್ರಿಯಿಸುವಾಗ ತಮ್ಮ ಹೆಸರು ಮತ್ತು ಈ ಮೇಲ್ ವಿಳಾಸ ಕೊಡುವುದರ ಜೊತೆಗೆ ಸಂದೇಹ ಸಮಾಧಾನಕ್ಕಾಗಿ ಮಾತ್ರ ಬರೆಯಬೇಕೆಂದು ಕೋರುವೆ.

-ಹರಿಹರಪುರ ಶ್ರೀಧರ್
ಸಂಪಾದಕ 

ಸಜ್ಜನರಾರು?

ಸಜ್ಜನರಾರು?  ಎಂಬ ಬಗ್ಗೆ ಬೆಂಗಳೂರಿನ ಚಿಂತಕ ಶ್ರೀ ಸೂರ್ಯ ಪ್ರಕಾಶ ಪಂಡಿತರ   ಮಾತುಗಳು ಇಲ್ಲಿವೆ.







ಕ್ತಾತ್ಮಾನಂದರೊಡನೆ -2

ಕೃತಾತ್ಮಾನಂದರೊಡನೆ ಪ್ರಶ್ನೋತ್ತರ

ಇನ್ನೂ "ಈಶಾವಾಸ್ಯಂ" ಗೃಹ ಪ್ರವೇಶವೇ ಆಗಿರಲಿಲ್ಲ.  ಹಾಸನದ ಶ್ರೀ ಶಂಕರ ಮಠದಲ್ಲಿ ಪೂಜ್ಯ ಕೃತಾತ್ಮಾನಂದರ ಪ್ರವಚನ ವಿತ್ತು. ಅದೇ ಸಂದರ್ಭದಲ್ಲಿ ಪೂಜ್ಯರು ನಮ್ಮ ಮನೆಗೆ ಪದಾರ್ಪಣೆ ಮಾಡಿ ಒಂದು ಸತ್ಸಂಗವನ್ನು ನಡೆಸಿಕೊಟ್ಟರು. ಭಕ್ತರು ಕೇಳಿದ ಪ್ರಶ್ನೆಗಳಿಗೆ ಪೂಜ್ಯ ಕೃತಾತ್ಮಾನಂದರ ಉತ್ತರ ಇಲ್ಲಿದೆ.



ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ 



ಅಧ್ಯಾತ್ಮ ಮತ್ತು ವಿಜ್ಞಾನದ ಬಗ್ಗೆ



ಪ್ರೇತಾತ್ಮ  ಮೈ ಮೇಲೆ ಬರುತ್ತದೆ, ಅಂತಾರಲ್ಲಾ?


ಸತ್ಸಂಗ ನಡೆಸಲು ಸ್ಥಳ ಹೇಗಿರಬೇಕು?



ಸಮತ್ವ

ಬೆಂಗಳೂರು ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರು ಬಲು ಸರಳ ಯತಿಗಳು. ಜೀವನ ಮೌಲ್ಯಗಳ ಬಗ್ಗೆ  ಬಲು ಸರಳವಾಗಿ ಸಾಮಾನ್ಯ ಜನರಿಗೂ ಮನವರಿಕೆಯಾಗುವಂತೆ ಮಾತನಾಡುತ್ತಾರೆ. "ಸಮತ್ವ" ದ ಬಗ್ಗೆ ಅವರ ಪ್ರವಚನ ಇಲ್ಲಿದೆ.