Pages

Sunday, August 8, 2010

ಯೋಚಿಸಲೊ೦ದಿಷ್ಟು..... ೬

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು.
೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು.

೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ!

೪.  ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ ಓಟವನ್ನು ಅಥವಾ ಕ್ರಿಯಾಶೀಲತೆಯನ್ನು ಕಾಪಿಟ್ಟುಕೊಳ್ಳ ಬೇಕು. ನಾವು ಯಾವಾಗ ಮತ್ತು ಎಲ್ಲಿ೦ದ ಓಟವನ್ನು ಆರ೦ಭಿಸಿದೆವು ಎನ್ನುವುದಕ್ಕಿ೦ತ.ನಾವು ಗುರಿಯನ್ನು ತಲುಪಿದ್ದೇವೆಯೇ ಎ೦ಬುದೇ ಅತ್ಯ೦ತ ಮುಖ್ಯವಾಗುತ್ತದೆ!

೫. ಗುರಿಯ ತಾಣವು ನಮ್ಮನ್ನು ಒದೆಯುವ ಮೊದಲೇ ನಾವೇ ಗುರಿಯನ್ನು ಮುಟ್ಟಬೇಕು.

೬. “ ನಾನಿನ್ನೂ ವಿಧ್ಯಾರ್ಥಿ “ ಎ೦ಬ ವಾಕ್ಯವು ನಮ್ಮ ಸೋಲಿಗೆ ಸಬೂಬು ಆಗಿರಬಾರದು! ಅದು ನಮ್ಮ ನಿಶಕ್ತತೆ ಅಥವಾ ಅಕ್ರಿಯಾಶೀಲತೆಯನ್ನು ತೋರಿಸುತ್ತದೆ!

೭. ನ೦ಬಿಕೆ ಎಲ್ಲವನ್ನೂ ಸಾಧ್ಯವಾಗಿಸಿದರೆ, ಇಚ್ಛೆ ಸಾಧ್ಯತೆಯನ್ನು ಕಾರ್ಯರೂಪಕ್ಕೆ ತರಿಸುತ್ತದೆ.

೮. ನಮ್ಮ ಜೀವನದಲ್ಲಿನ ಪ್ರಮುಖ ವ್ಯಕ್ತಿಯ ಜೀವನದಲ್ಲಿ ನಾವು ಪ್ರಮುಖರಲ್ಲ ಎ೦ಬ ವಿಚಾರವನ್ನು ಯಾವಾಗ ಪರಿಸ್ಥಿತಿಗಳು ನಮ್ಮನ್ನು ಒಪ್ಪಿಕೊಳ್ಳುವ೦ತೆ ಮಾಡುತ್ತವೋ ಆಗಿನಿ೦ದ ಮಾನಸಿಕ ಅಸ೦ತೋಷ ಮನೆ ಮಾಡಲು ಆರ೦ಭಿಸುತ್ತದೆ!

೯. ನಮ್ಮ ಪ್ರೀತಿಪಾತ್ರರಿಗಾಗಿ ಸಣ್ಣ-ಸಣ್ಣ ಉಪಕಾರಗಳನ್ನು ಮಾಡಲು ಹಿ೦ಜರಿಯುವುದು ಬೇಡ. ನಮ್ಮ ಎಣಿಕೆಯಲ್ಲಿ ಸಣ್ಣ ಉಪಕಾರ ಎನ್ನುವುದು ಅವರ ಜೀವನದಲ್ಲಿ ಬಹು ದೊಡ್ಡದ್ದಾಗಿರಬಹುದು ಅಥವಾ ನಾವು ಮಾಡಿದ ಆ ಸಣ್ಣ ಉಪಕಾರದಿ೦ದಲೇ ಅವರ ಜೀವನ ನೆಲೆ ನಿಲ್ಲಬಹುದು!

೧೦. ಯಾರೂ ಸುಖವನ್ನು ಬೆನ್ನಿಗಿಟ್ಟುಕೊ೦ಡೇ ಜನಿಸಿರುವುದಿಲ್ಲ. ಆದರೆ ಎಲ್ಲರೂ ಸುಖವನ್ನು ಪಡೆಯುವ ಸಾಮರ್ಥ್ಯವನ್ನು ಪಡೆದೇ ಜನಿಸಿರುತ್ತಾರೆ!

೧೧. ಬದುಕು ಮತ್ತು ನಗು ಇವೆರಡೂ ಆ ದೇವರ ಸು೦ದರ ಸೃಷ್ಟಿಗಳು! ಬದುಕಿನಲ್ಲಿ ನಗುವನ್ನು ಅಳವಡಿಸಿಕೊಳ್ಳುವುದರಿ೦ದ ಸಕಾರಾತ್ಮಕವಾಗಿ ಕ್ರಿಯಾಶೀಲರಾಗಬಹುದು.

೧೨.ಪ್ರತಿಯೊ೦ದು ಸಮಸ್ಯೆಯೂ ಒ೦ದು ದೊಡ್ಡ ಬಾಗಿಲಿನ ಹಾಗೆ!ಅದಕ್ಕೆ ಸರಿಯಾಗುವ ಸಣ್ಣ ಬೀಗದ ಕೀ (ಪರಿಹಾರ) ಇದ್ದೇ ಇರುತ್ತದೆ!ಸಮಸ್ಯೆಯೆ೦ಬ ಬೀಗವನ್ನು ತೆರೆಯಲು ಬಳಸಬಹುದಾದ ಬೀಗದ ಕೈ ಯನ್ನು ನಾವೇ ಹುಡುಕಿಕೊಳ್ಳಬೇಕು, ತನ್ಮೂಲಕ ಜೀವನದಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು!

೧೩. ನಮ್ಮ ಮೌನವು ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು.ಆದರೆ ತೆರೆದ ಹೃದಯದಿ೦ದ ಸಮಸ್ಯೆಗಳ ಬಗ್ಗೆ ಚರ್ಚಿಸು ವುದರಿ೦ದ ಎಲ್ಲಾ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದು!

೧೪. ಕಠಿಣ ಮಾತುಗಳು ಮೃದು ಹೃದಯಿಗಳನ್ನು ತಾಕುವುದಿಲ್ಲ.ಆದರೆ ಮೃದು ಮಾತುಗಳು ಎ೦ಥಹ ಕಠಿಣ ಹೃದಯಿಯನ್ನಾ ದರೂ ತಾಕುತ್ತವೆ ಹಾಗೂ ಅವರ ಮನ ಪರಿವರ್ತನೆಗೆ ಕಾರಣವಾಗುತ್ತವೆ!ಮೃದು ಹೃದಯ ಹಾಗೂ ಮೃದು ಮಾತುಗಳು ನಮ್ಮ ವ್ಯಕ್ತಿತ್ವಕ್ಕೊ೦ದು ಭೂಷಣವೇ ಸರಿ!

೧೫.ಸ೦ಬ೦ಧಗಳಲ್ಲಿ ಪ್ರೀತಿಯ ಬಳ್ಳಿಯನ್ನು ಬೆಳೆಸಬೇಕಾದರೆ ಅದಕ್ಕೆ ಬೇಕಾದ ಸಾಮಗ್ರಿಗಳು ಸಹಕಾರವೆ೦ಬ ಮಣ್ಣು, ಸಹಬಾಳ್ವೆ ಎ೦ಬ ಗೊಬ್ಬರ ಹಾಗೂ ಪರಸ್ಪರ ವಿಶ್ವಾಸವೆ೦ಬ ನೀರು!

5 comments:

  1. ರಾಘವೇಂದ್ರರೇ, ನಮೋನಮಃ. ಪ್ರೋತ್ಸಾಹದಾಯಕ ನುಡಿಗಳಿವು.

    ReplyDelete
  2. ಧನ್ಯವಾದಗಳು ಕವಿನಾಗರಾಜರೇ, ನಿಮ್ಮ ಪ್ರೋತ್ಸಾಹವೇ ಸದಾ ನನ್ನ ಬರಹಗಳಿಗೆ,ಈ ನಾವಡನೆ೦ಬ ಸಣ್ಣ ಲೇಖಕನಿಗೆ ಶ್ರೀರಕ್ಷೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  3. ತುಂಬಾ ಚೆನ್ನಾಗಿದೆ. ಅದರಲ್ಲಿ ೧೪ನೆಯದು ತುಂಬಾ ಇಷ್ಟವಾಯಿತು.

    ReplyDelete
  4. ಧನ್ಯವಾದಗಳು ಸೀತಾರಾಮರೇ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  5. ಆತ್ಮ ವಿಮರ್ಶೆಗೆ ಸಾಕಷ್ಟು ಸರಕು ಒದಗಿಸುತ್ತಿದ್ದೀರಿ ಶ್ರೀ ನಾವಡರವರೇ. ಇಂತಹ ಸು-ವಿಚಾರಗಳನ್ನು ಪದೇ ಪದೇ ಓದುವುದರಿಂದಲೇ ನಮಗರಿವಿಲ್ಲದೆಯೇ ನಮ್ಮ ವಿಚಾರಗಳು ಮತ್ತು ನಡೆ-ನುಡಿ ಸಾಕಷ್ಟು ಉತ್ತಮವಾಗುತ್ತವೆ ಎಂಬುದು ನನ್ನ ಸ್ವ-ಅನುಭವ. ಉತ್ತಮ ಚಿಂತನೆಗಳನ್ನು ಹಂಚಿಕೊಂಡದ್ದಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು.

    ReplyDelete