Pages

Saturday, August 7, 2010

ಅವಧೂತ-೪

ನನ್ನ ಮಿತ್ರ ಸೇತೂರಾಮ್ ಅರಸೀಕೆರೆಯ ಪತ್ರಕರ್ತ.ಈಗ್ಗೆ ಸುಮಾರು ಹತ್ತು ವರ್ಷದ ಹಿಂದಿನ ಮಾತಿರಬಹುದು. ಸೇತೂರಾಮ್ ಮದುವೆಯಾದನಂತರ ಅವರ ಪತ್ನಿಗೆ ಒಂದೆರಡು ಭಾರಿ ಅಬಾರ್ಶನ್ ಆಗಿ ಇನ್ನು ಮುಂದೆ ಮಕ್ಕಳು ಬದುಕುತ್ತವೆಯೇ! ಎಂಬ ಆತಂಕದಲ್ಲಿದ್ದಾಗಲೇ ಮತ್ತೊಮ್ಮೆ ಆಕೆ ಗರ್ಭಿಣಿ. ಸರಿ ವೈದ್ಯರ ಮೇಲ್ವಿಚಾರಣೆಯಲ್ಲಿ ದಿನಗಳು ಕಳೆದಿವೆ. ಸೇತೂರಾಮ್ ಗೆ ಒಮ್ಮೆ ಅವಧೂತರನ್ನು ನೋಡುವ ಸಂದರ್ಭ ಒದಗಿದೆ." ಸೇತೂ, ಬರುವ ಫೆಬ್ರವರಿ ೨೦ ರೊಳಗೆ ನಿನ್ನ ಪತ್ನಿ ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ.ಡಾ|| ಆಪರೇಶನ್ ಆಗಬೇಕೆನ್ನುತ್ತಾರೆ, ಆದರೆ ಆಪರೇಶನ್ ಏನೂ ಬೇಡ, ಹೆರಿಗೆ ಸುಲಭವಾಗಿ ಆಗುತ್ತೆ!!" - ಅವಧೂತರು ಸೇತೂರಾಮರಿಗೆ ದೃಢವಾಗಿ ಹೇಳಿದ್ದರು "ಅರೇ ಡಾಕ್ಟರ್ ಮಾರ್ಚ್ ೨೫ಕ್ಕೆ ಡೇಟ್ ಕೊಟ್ಟಿದ್ದಾರಲ್ಲಾ! ಸರಿ ದೇವರು ಮಾಡಿಸಿದಂತಾಗಲಿ!" ಸೇತೂ ಅವಧೂತರ ದರ್ಶನ ಪಡೆದು ಮನೆಗೆ ಮರಳಿದ್ದರು. ವೈದ್ಯರ ಪ್ರಕಾರ ಇನ್ನೂ ಐದು ತಿಂಗಳು ಕಾಲಾವಕಾಶವಿತ್ತು.ಪತ್ನಿಯನ್ನು ಬೆಂಗಳೂರಿನಲ್ಲಿ ತೌರುಮನೆಯಲ್ಲಿ ಬಿಟ್ಟು ಸೇತೂ ಅರಸೀಕೆರೆಯಲ್ಲಿಯೇ ಇದ್ದರು.ಪತ್ರಕರ್ತನಾಗಿ ಓಡಾಟದಿಂದ ಅವರಿಗೆ ದಿನಗಳುರಿಳಿದ್ದೇ ಅರಿವಿಲ್ಲ. ಅಂದು ಕಾರ್ಯನಿಮಿತ್ತ ಬಾಣಾವರದಲ್ಲಿದ್ದರು. ರಾತ್ರಿ ೧೨ ಗಂಟೆಗೆ ಇವರಿಗೆ ಫೋನ್ ಬರುತ್ತೆ. ಹೆರಿಗೆ ನೋವು ಶುರುವಾಗಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ-ಎಂಬ ಸುದ್ಧಿತಿಳಿದೊಡನೆ ಬೆಂಗಳೂರು ಬಸ್ ಹತ್ತುತ್ತಾರೆ. ಆಸ್ಪತ್ರೆ ತಲುಪಿದಾಗ ಪತ್ನಿಯನ್ನು ಆಪರೇಶನ್ ಗಾಗಿ ಸಿದ್ಧಗೊಳಿಸುತ್ತಿದ್ದಾರೆ! ಅವಧೂತರಿಂದ ಅಂದು ಪಡೆದಿದ್ದ ಭಸ್ಮವನ್ನು ಪತ್ನಿಯ ಹೊಟ್ಟೆಗೆ ಸವರಲು ತಿಳಿಸುತ್ತಾರೆ. ಸ್ವಲ್ಪ ಸಮಯದಲ್ಲೇ ಪತ್ನಿಗೆ ಸುಖವಾಗಿ ಹೆರಿಗೆ ಆಗುತ್ತೆ, ಆಪರೇಶನ್ ಇಲ್ಲದೆ!!ಅವಧೂತರು ಹೇಳಿದ್ದ ದಿನಕ್ಕೆ!!

1 comment: