Pages

Friday, February 25, 2011

ಸತ್ಯಕ್ಕಾಗಿ ಹುಡುಕಾಟವಿದೆ

ವೇದೋಕ್ತ ಜೀವನ ಪಥ ಆಧಾರಿತ ಶ್ರೀ ಕವಿನಾಗರಾಜರ ಬರಹವನ್ನು ಓದಿದ ಶ್ರೀ ಪ್ರಸನ್ನ, ಶ್ರೀ ವಿ.ಆರ್ ಭಟ್,ಶ್ರೀಸುಧಾಕರಶರ್ಮ-ಇವರುಗಳು ಒಂದು ಆರೋಗ್ಯಪೂರ್ಣ ಚರ್ಚೆಯನ್ನು ಆರಂಭಿಸಿ ವೇದಸುಧೆಗೆ ಶೋಭೆಯನ್ನು ತಂದುಕೊಟ್ಟಿರುತ್ತಾರೆ. ಎಲ್ಲರಿಗೂ ವೇದಸುಧೆಯ ಅಭಿನಂದನೆಗಳನ್ನು ತಿಳಿಸುತ್ತಾ ಯಾರೂ ಚರ್ಚೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ವಿಚಾರ ಮಂಥನದ ದೃಷ್ಟಿಯಿಂದ ಸ್ವೀಕರಿಸಬೇಕೆಂದು ವೇದಸುಧೆಯು ಬಯಸುತ್ತದೆ. ಒಟ್ಟಿನಲ್ಲಿ ಸಿಹಿಲೇಪಿತ ವಿಷವಿದ್ದರೆ ಅದನ್ನು ವರ್ಜಿಸುವುದರಿಂದ ಒಳ್ಳೆಯದಲ್ಲವೇ? ಇನ್ನೊಂದು ವಿಚಾರವನ್ನು ವೇದಸುಧೆಯ ಅಭಿಮಾನಿಗಳೆಲ್ಲರೂ ಗಮನಿಸುವುದು ಅನಿವಾರ್ಯ. ಹಿಂದು ಸಮಾಜದಲ್ಲಿ[ಸಧ್ಯಕ್ಕೆ ಬಹುಪಾಲು ವೇದಸುಧೆಯ ಅಭಿಮಾನಿಗಳು ಹಿಂದುಗಳಿರುವುದರಿಂದ, ಹಿಂದು ಪದದ ಪ್ರಯೋಗ, ಮುಂದೊಂದುದಿನ ಮಾನವಕುಲದಲ್ಲಿ ಎಂಬ ಮಾತು ಕೇಳಿಬರುವಂತಾಗಲೆಂಬುದು ಆಶಾಭಾವ] ನಡೆದುಬಂದಿರುವ ಹಲವಾರು ಆಚರಣೆಗಳನ್ನು ವಿಮರ್ಶೆಮಾಡದೆ ಕೇವಲ ನಂಬಿಕೆಯಿಂದ ಅನುಸರಿಸುತ್ತಾ ಬಂದಿರುವ ಪ್ರತಿಶತ ೯೮ ಭಾಗ ಜನರು ಇಂತಹ ಚರ್ಚೆಗೆ ಬರುವುದಿಲ್ಲ.ಆದ್ದರಿಂದ ಚರ್ಚೆಯಲ್ಲಿ ಪಾಲ್ಗೊಳ್ಳುವ ಹಂಬಲವಿರುವವರ ಹೃದಯದಲ್ಲಿ ಸತ್ಯಕ್ಕಾಗಿ ಹುಡುಕಾಟವಿದೆ ಎಂಬುದು ಸತ್ಯ. ಆದ್ದರಿಂದ ಮುಕ್ತ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಲಿ, ಎಂಬುದು ವೇದಸುಧೆಯ ಅಪೇಕ್ಷೆ.

No comments:

Post a Comment