Pages

Monday, March 28, 2011

ಸಾರ್ಥಕಪಡಿಸಿಕೊಳ್ಳೋಣ

ವೇದಸುಧೆಯ  ಅಭಿಮಾನಿಗಳೇ,
ಈಗಾಗಲೇ ಹಲವು ಭಾರಿ ವೇದಸುಧೆಯ ಉದ್ಧೇಶವನ್ನು ತಿಳಿಸಿದ್ದಾಗಿದೆ. ಬಹುಶ: ಇಂದಿನ ದಿನಗಳಲ್ಲಿ ಇದು ಒಂದು ವಿಶಿಷ್ಟ ಪ್ರಯೋಗ.  ಹಲವು ನೂರು ವರ್ಷಗಳಿಂದ ನಾವು ಅನುಸರಿಸಿಕೊಂಡುಬಂದಿರುವ ಪೂಜಾಪದ್ದತಿಗಳಬಗೆಗಾಗಲೀ ವ್ರತಕಥೆಗಳಬಗೆಗಾಗಲೀ, ಆಚಾರಪದ್ದತಿಗಳ ಬಗೆಗಾಗಲೀ ನಮಗೆ ಪ್ರಶ್ನೆಮಾಡಿಯೇ ಗೊತ್ತಿಲ್ಲ.ಅರ್ಥವನ್ನು ಹೇಳಿಕೊಟ್ಟವರಿಲ್ಲ.  ಗುರುವಿನ ಮೂಲ, ಋಷಿಯ ಮೂಲ, ನದಿಯಮೂಲವನ್ನು ಹುಡುಕಬಾರದೆಂಬ[ಕೆದಕಬಾರದೆಂಬ] ದೊಡ್ದವರೆನಿಸಿಕೊಂಡವರ ಮಾತನ್ನು ಇದುವರೆವಿಗೂ ಚಾಚೂತಪ್ಪದೆ ಪಾಲಿಸಿಕೊಂಡುಬಂದ ಪರಿಣಾಮವಾಗಿ ಎಲ್ಲಾ ಕ್ಷೇತ್ರದಲ್ಲೂ ಅನೀತಿ ತಾಂಡವವಾಡುತ್ತಿರುವುದನ್ನು ಯಾರೂ ಗಮನಿಸಬಹುದಾಗಿದೆಯಲ್ಲವೇ? ನಮ್ಮ ಸುದೈವಕ್ಕೆ ಸುಧಾಕರಶರ್ಮರಂತಹವರು ವೇದದ ಅರ್ಥವನ್ನು ತಿಳಿಸುತ್ತಾ ನಿಜವಾದ ಭಗವಂತನ ಅಸ್ತಿತ್ವವನ್ನು ವೇದದ ಆಧಾರದಲ್ಲಿ ಪ್ರತಿಪಾದಿಸುತ್ತಾ ನಮಗೆ ಒಂದು ಉತ್ತಮ ಮಾರ್ಗವನ್ನು ತೋರಿಸುತ್ತಿದ್ದಾರೆ. ನಮಗೆ ನಿಜವಾಗಿ ಅಡ್ಡಿಯಾಗುತ್ತಿರುವ ಆಚರಣೆಗಳಬಗೆಗೆ ಅಂತಹವರಿಂದ ತಿಳಿದುಕೊಳ್ಳಲು ಅವಕಾಶವಿದೆ. ಸಾರ್ಥಕಪಡಿಸಿಕೊಳ್ಳೋಣ.

No comments:

Post a Comment